
ವಚನ ಸಾಹಿತ್ಯ ಅಧ್ಯಯನ ಮತ್ತು ಬಸವಾದಿ ಶರಣರ ಚಿಂತನೆಗಳನ್ನು ಪ್ರಸಾರ ಮಾಡುವಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.b.
ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ “ಟೀವೀ ಚಾನಲ್” ಪ್ರಾರಂಭ ಮಾಡುವುದು.
ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ “ಗ್ರಂಥಾಲಯ” ಸ್ಥಾಪನೆ
ವಚನ ಮಂದಾರ ವೇದಿಕೆಯಿಂದ “ಅಂತರಾಷ್ಟ್ರೀಯ ಮಟ್ಟದ ಆನ್ ಲೈನ್ ಸಭೆ” ಗಳನ್ನು ನಿರಂತರವಾಗಿ ಮಾಡುವುದು.
ವಚನ ಮಂದಾರ ವೇದಿಕೆಯಿಂದ ಸಭೆ ಸಮಾರಂಭಗಳನ್ನು ಏರ್ಪಡಿಸಿ ಬಸವಾದಿ ಶರಣರ ಚಿಂತನೆ ಮತ್ತು ವಚನ ಸಾಹಿತ್ಯ ಚಿಂತನೆಗಳನ್ನು ಮಾಡುವುದು.
ಮುಂದಿನ ದಿನಗಳಲ್ಲಿ ವಚನ ಸಾಹಿತ್ಯ ಅಧ್ಯಯನಕ್ಕೆ ವಿಶ್ವವಿದ್ಯಾಲಯವನ್ನು ಪ್ರಾರಂಭಿಸುವುದು. Ph. D. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಮ್ಯತೆ ಕೇಂದ್ರವನ್ನು (Flexibility Center) ಪ್ರಾರಂಭಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು.
"ವಚನ ಮಂದಾರ" ದ ಪದಾಧಿಕಾರಿಗಳು

ಡಾ. ವಿಜಯಕುಮಾರ ಕಮ್ಮಾರ,
ಅಧ್ಯಕ್ಷರು
ವೃತ್ತಿಯಿಂದ ಅಂತರಾಷ್ಟ್ರೀಯ ಮಾರುಕಟ್ಟೆ ನಿರ್ದೇಶಕರು. ಮಾರುಕಟ್ಟೆ ಅಭವೃದ್ಧಿ, ವ್ಯಾಪಾರ ಅಭಿವೃದ್ಧಿ,ಗ್ರಾಹಕ ಸಂಬಂಧಗಳ ಅಭಿವೃದ್ಧಿಯ ತಾಂತ್ರಿಕ ಔದ್ಯೋಗಿಕ ಕ್ಷೇತ್ರದಲ್ಲಿ ಸುಮಾರು 32 ವರ್ಷಗಳ ಅನುಭವ. ಪ್ರವೃತ್ತಿಯಿಂದ ವಚನ ಸಾಹಿತ್ಯ ಅಧ್ಯಯನ ಮತ್ತು ಪ್ರಸಾರ. “ವಚನ ಸಾಹಿತ್ಯ ಮತ್ತು ಶರಣ ಸಿದ್ಧಾಂತದಲ್ಲಿ ಆಧುನಿಕ ಚಿಂತನೆ” ವಿಷಯಗಳಲ್ಲಿ ಉಪನ್ಯಾಸ ಮಾಲಿಕೆಗಳಲ್ಲಿ ದೇಶ ವಿದೇಶಗಳ ಹಲವಾರು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಉಪನ್ಯಾಸ ನೀಡಿದ್ದಾರೆ

ಶ್ರೀ. ಶಂಭುಲಿಂಗಯ್ಯ ಹಿರೇಮಠ
ಉಪಾಧ್ತಕ್ಷರು (ಹಣಕಾಸು)
ಬೆಳಗಾವಿಯ ಪ್ರತಿಷ್ಠಿತ ಕೆ. ಎಲ್. ಇ ಇಂಜನೀಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿ ಸಿವಿಲ್ ಇಂಜನೀಯರಿಂಗ್ ಪದವೀಧರರಾಗಿರುವ ಶ್ರೀ ಶಂಭುಲಿಂಗಯ್ಯ ಹಿರೇಮಠ ಅವರು ಮೂಲತಃ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನವರು. ಪ್ರಸ್ತುತ ಬೆಂಗಳೂರಿನ ನಿವಾಸಿಯಾಗಿದ್ದಾರೆ. STUP Consulting Company ಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದ “ಪ್ರಥಮ್ ಇಂಟರನ್ಯಾಶನಲ್ ಸ್ಕೂಲ್” ಸ್ಥಾಪಿಸಿ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡುವಲ್ಲಿ ತಮ್ಮದೇ ಆದ ಯೋಗದಾನವನ್ನು ನೀಡುತ್ತಿದ್ದಾರೆ. ಪ್ರವೃತ್ತಿಯಿಂದ ವಚನ ಸಾಹಿತ್ಯ ಅಧ್ಯಯನ ಮತ್ತು ಪ್ರಸಾರ ಮಾಡುವಲ್ಲಿ ತೊಡಗಿಸಿಕೊಂಡಿದ್ದಾರೆ.

ಡಾ. ಸರ್ವಮಂಗಳ ಸಕ್ರಿ
ಉಪಾಧ್ತಕ್ಷರು (ಕಾರ್ಯನಿರ್ವಾಹಕ)
ಗುಲಬರ್ಗಾ ವಿಶ್ವವಿದ್ಯಾಲಯದಿಂದ M. A ಹಂಪಿ ವಿಶ್ವವಿದ್ಯಾಲಯದಿಂದ 2008 ರಲ್ಲಿ “ರಾಯಚೂರು ಜಿಲ್ಲೆಯ ತತ್ವಪದಕಾರರು ಮತ್ತು ಅವರ ಸಾಹಿತ್ಯ” ಕುರಿತು ಪ್ರಬಂಧ ಮಂಡಿಸಿ Ph. D ಪಡೆದಿದ್ದಾರೆ. ತತ್ವಪದ ಸಾಹಿತ್ಯ, ವಚನ ಸಾಹಿತ್ಯ, ಜನಪದ ಸಾಹಿತ್ಯ, ಶಿಷ್ಟ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ. ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸುಮಾರು 100 ಕ್ಕೂ ಹೆಚ್ಚು ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 2 ಪುಸ್ತಕಗಳು ಇತ್ತೀಚೆಗೆ ಬಿಡುಗಡೆ ಆಗಿವೆ. ನಡುಗನ್ನಡ ಸಾಹಿತ್ಯ, ಚಾಮರಸನ ಪ್ರಭುಲಿಂಗಲೀಲೆ ಸಂಶೋಧನಾ ಬರಹಗಳು, 10 ತತ್ವಪದಕಾರರ ಸಂಶೋಧನಾ ಲೇಖನಗಳು ಹಾಗೂ ವಚನ ಸಾಹಿತ್ಯದಲ್ಲಿ ಸಂಶೋಧನಾ ಲೇಖನಗಳು ಅತ್ಯಂತ ಗಮನ ಸೆಳೆದ ಲೇಖನಗಳು. ವಚನ ಸಾಹಿತ್ಯದ ಸಮಕಾಲೀನ ಪ್ರಬುದ್ಧ ಲೇಖಕರಲ್ಲಿ ಡಾ. ಸರ್ವಮಂಗಳ ಸಕ್ರಿ ಅವರು ಪ್ರಮುಖರು.

ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.
ಉಪಾಧ್ಯಕ್ಷರು (ಪುಸ್ತಕ ಪ್ರಕಟಣೆ)
ಹಾವೇರಿ ಜಿಲ್ಲೆಯ ಗುತ್ತಲದವರಾದ ಡಾ. ಪುಷ್ಪಾವತಿ ಶಲವಡಿಮಠ ಅವರು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಚಿಕ್ಕ ಬಾಸೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರು. ಒಟ್ಟು 27 ವರ್ಷ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ ಮುನ್ನಡೆದಿದ್ದಾರೆ. “ಕನ್ನಡ ಸಾಹಿತ್ಯದಲ್ಲಿ ಚಂದ್ರಹಾಸ” ವಿಷಯದಲ್ಲಿ ಸಂಶೋಧನಾ ಪ್ರಬಂಧವನ್ನು ಮಂಡಿಸಿ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ Ph. D ಪದವಿಯನ್ನು ಪಡೆದಿದ್ದಾರೆ. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪರೀಕ್ಷಾ ಮಂಡಳಿ ಹಾಗೂ ಪಠ್ಯಕ್ರಮ ಮಂಡಳಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಾರ್ಯಕ್ರಮಗಳಲ್ಲಿ ಒಟ್ಟು 50 ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವರ ಒಟ್ಟು 5 ಪುಸ್ತಕಗಳು ಇಲ್ಲಿಯವರೆಗೆ ಪ್ರಕಾಶನಗೊಂಡಿವೆ. 14 ಪುಸ್ತಕಗಳಿಗೆ ಸಂಪಾದಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 15 ಸಾಹಿತ್ಯ ಪ್ರಶಸ್ತಿಗಳು ಇವರ ಮುಡಿಗೇರಿವೆ. ಪ್ರಸ್ತುತ ಕಾಲಘಟ್ಟದ ಸೃಜನಶೀಲ ಸಾಹಿತ್ಯ, ವಚನ ಸಾಹಿತ್ಯ ಮತ್ತು ಶರಣ ಸಿದ್ಧಾಂತದ ಅತ್ಯಂತ ಪ್ರಬುದ್ಧ ಚಿಂತಕಿಯರು ಹಾಗೂ ಉಪನ್ಯಾಸಕರು.
