ವಚನ – ಸಾಂಸ್ಕೃತಿಕ ತಲ್ಲಣಗಳು | ಡಾ. ನಟರಾಜ ಬೂದಾಳು, ತುಮಕೂರು.

ಲೇಖನ ಕೃಪೆ: https://bayalu.co.in/ವಚನ-ಸಾಂಸ್ಕೃತಿಕ-ತಲ್ಲಣಗಳು/ ತುಮಕೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಈಗ ನಿವೃತ್ತರು. ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ‘ಮೂಲಮಧ್ಯಮಕಾರಿಕಾ’ವನ್ನು ಕನ್ನಡಕ್ಕೆ ಅನುವಾದಿಸಿದವರು. ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದು, ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಚನಗಳನ್ನು ಏಕೆ ಓದುತ್ತಿದ್ದೇವೆ ಮತ್ತು ಹೇಗೆ ಓದುತ್ತಿದ್ದೇವೆ? ಎನ್ನುವ ಪ್ರಶ್ನೆಯನ್ನು ಇದಿರಾಗದೆ ಗತ್ಯಂತರವಿಲ್ಲ. ವಚನಗಳನ್ನು…

0 Comments

ಬಸವಸಿದ್ಧಾಂತ ಮತ್ತು ಆಧುನಿಕ ರಿ-ಎಂಜಿನಿಯರಿಂಗ್ ತತ್ವಗಳು: ಒಂದು ತೌಲನಿಕ ವಿಶ್ಲೇಷಣೆ | ಪ್ರೊ. ಎಸ್.‌ ಜಿ. ಶಿವಶಂಕರ, ಬೆಂಗಳೂರು.

ಪೀಠಿಕೆ: ಬದಲಾವಣೆಯ ಅನಿವಾರ್ಯತೆ ಮತ್ತು ಎರಡು ಯುಗಗಳುಹನ್ನೆರಡನೇ ಶತಮಾನದ ಕಲ್ಯಾಣ ಕ್ರಾಂತಿಯ ಹರಿಕಾರ ಮಹಾತ್ಮ ಬಸವೇಶ್ವರರ ಸಾಮಾಜೋಧಾರ್ಮಿಕ ಕ್ರಾಂತಿಕಾರಕ ತತ್ವಗಳು ಮತ್ತು ಆಧುನಿಕ ಜಗತ್ತಿನ ನಿರ್ವಹಣಾ ತಜ್ಞರಾದ ಮೈಕೇಲ್ ಹ್ಯಾಮರ್ ಮತ್ತು ಜೇಮ್ಸ್ ಚಾಂಪಿ ಅವರ 'ಬಿಸಿನೆಸ್ ಪ್ರೊಸೆಸ್ ರಿ-ಎಂಜಿನಿಯರಿಂಗ್' (BPR) ಸಿದ್ಧಾಂತವನ್ನು ತೌಲನಿಕವಾಗಿ ವಿಶ್ಲೇಷಿಸುವ ಲೇಖನ. ಲೇಖನ:ವ್ಯವಸ್ಥೆಯೊಂದು ಜಡ್ಡುಗಟ್ಟಿದಾಗ, ಆಚರಣೆಗಳು ಕರಾಳ ಎನ್ನಿಸಿ, ಸಮಾಜದ ಕೆಳವರ್ಗದ ಜನರ ಶೋಷಣೆ ತಾರಕಕ್ಕೇರಿದಾಗ ಅವುಗಳನ್ನು ಮರುರೂಪಿಸುವ ಕ್ರಾಂತಿಕಾರಿ ನಾಯಕರು ಉದಯಿಸುತ್ತಾರೆ. ಇಂತಹ ಮಹತ್ತರ ಕ್ರಾಂತಿಕಾರಕ ಬದಲಾವಣೆಯನ್ನು ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಸ್ತರಗಳಲ್ಲಿ ತಂದವರು ಹನ್ನೆರಡನೇ ಶತಮಾನದ ಕ್ರಾಂತಿಕಾರಿ…

0 Comments

ವಚನಸಾಹಿತ್ಯದಲ್ಲಿ ಕೃಷಿ ವಿಜ್ಞಾನ | ಡಾ. ಮೌನೇಶ್ವರಿ ಕಮ್ಮಾರ, ಧಾರವಾಡ.

ಕರ್ನಾಟಕದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯಲ್ಲಿ ಬಸವಾದಿ ಶರಣರ ವಚನ ಸಾಹಿತ್ಯವು ವಿಶಿಷ್ಟ ಸ್ಥಾನವನ್ನು ಹೊಂದಿದೆ. ವಚನಗಳು ಕೇವಲ ಭಕ್ತಿಯ ಕಾವ್ಯಗಳಲ್ಲ; ಅವು ಸಮಾಜದ ಬದುಕು, ಶ್ರಮ, ಸಮಾನತೆ ಮತ್ತು ಪ್ರಕೃತಿಯೊಂದಿಗೆ ಮಾನವನ ಸಂಬಂಧವನ್ನು ಪ್ರತಿಬಿಂಬಿಸುವ ಜೀವಂತ ಸಾಹಿತ್ಯವಾಗಿವೆ. ಈ ಸಾಹಿತ್ಯದಲ್ಲಿ ಕೃಷಿಗೆ ವಿಶೇಷ ಮಹತ್ವ ನೀಡಲಾಗಿದೆ, ಏಕೆಂದರೆ ಕೃಷಿ ಮಾನವನ ಜೀವನಾಧಾರ ಮತ್ತು ಶ್ರಮದ ಪ್ರತೀಕವೆಂದು ಶರಣರು ಕಂಡಿದ್ದರು. ಶರಣರು “ಕಾಯಕವೇ ಕೈಲಾಸ” ಎಂಬ ತತ್ವದ ಮೂಲಕ ಪ್ರತಿಯೊಂದು ಶ್ರಮವನ್ನೂ ಪವಿತ್ರವೆಂದು ಸಾರಿದರು. ರೈತನ ಬೆವರು, ಹೊಲದ ಮಣ್ಣು, ಬಿತ್ತನೆಯ ಪರಿಶ್ರಮ ಮತ್ತು ಬೆಳೆಯ ಸಂತೋಷವನ್ನು…

0 Comments

ಡಾ. ಎಂ. ಎಂ. ಕಲಬುರ್ಗಿಯವರನ್ನೇ ಹೀಯಾಳಿಸುತ್ತಿರುವ ವಚನ ಸಾಹಿತ್ಯದ ಪ್ರಕಾಂಡ ಪಂಡಿತ ಸೋಮೇಶ ಕುಲಕರ್ಣಿ | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

https://youtu.be/PqBEOo1m7RA(ಸೋಮೇಶ ಕುಲಕರ್ಣಿ) ತನ್ನನ್ನು ತಾನು ವಚನ ಸಾಹಿತ್ಯದ ಜಗತ್ಪ್ರಸಿದ್ಧ ವಿದ್ವಾಂಸನೆಂದು TV Camera ಎದುರು ಕುಳಿತು ಬಿಂಬಿಸಿಕೊಳ್ಳುತ್ತಿರುವ ಸೋಮೇಶ ಕುಲರ್ಣಿ ಅವರು ಮಾತನಾಡಿರುವ YouTube Channel ನಲ್ಲಿ ಹರಿದಾಡುತ್ತಿರುವ ಸಂದರ್ಶನದ Video ವನ್ನು ಒಂದು ಸಾರಿ ಗಮನಿಸಿ ಇದರಲ್ಲಿ ಪ್ರತಿಪಾದಿತವಾಗಿರುವ ಸುಳ್ಳುಗಳ ಸರಮಾಲೆಗಳಿಗೆ ಸೋಮೇಶ ಕುಲಕರ್ಣಿ ಅವರ ಭಾಷೆಯಲ್ಲಿಯೇ ಉತ್ತರವನ್ನು ಕೊಡುವ ಸಣ್ಣ ಪ್ರಯತ್ನ. ಹಾಗೆಂದ ಮಾತ್ರಕ್ಕೆ ನಾನೇನು ಜಗತ್ಪ್ರಸಿದ್ಧ ವಚನ ಸಾಹಿತ್ಯ ವಿದ್ವಾಂಸನೂ ಅಲ್ಲಾ, ನೋಬೆಲ್‌ ಪ್ರಶಸ್ತಿ ಪಡೆದ ಸೃಜನಶೀಲ ಸಾಹಿತಿಯೂ ಅಲ್ಲ. ನನ್ನ ತಂದೆ ಲಿಂ. ಶ್ರೀ. ಈಶ್ವರ ಕಮ್ಮಾರ ಅವರು ನನಗೆ ಬಾಲ್ಯದಿಂದಲೂ…

0 Comments

ಪುರಾತನ ಕಲ್ಯಾಣದ ಚಿತ್ರಣ ಮತ್ತು ಅವನತಿಯತ್ತ ಶರಣರ ಸ್ಮಾರಕಗಳು | ಡಾ. ಸತೀಶ ಕೆ.ಇಟಗಿ, ಮುದ್ದೇಬಿಹಾಳ.

ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಶ್ರೀಮತ್ ಕಲ್ಯಾಣಪುರದ ಮಹಾತ್ಮ್ಯಎಂತೆಂದಡೆ: ವಿಸ್ತರಿಸಿ ಪೇಳುವೆನು;ಎಲ್ಲಾ ಶಿವಗಣಂಗಳು ಕೇಳಿ ಕೃತಾರ್ಥರಾಗಿರಯ್ಯಾ.ಹದಿನಾಲ್ಕು ಭುವನಕ್ಕೆ ಕಳಸವೆಂದೆನಿಸುವ ರುದ್ರಲೋಕವೆ ಮರ್ತ್ಯಕ್ಕಿಳಿತಂದು,ಕಲ್ಯಾಣವೆಂಬ ಪುರವಾಗಿ ಹುಟ್ಟಿತ್ತು ನೋಡಿರಯ್ಯಾ!ಅಲ್ಲಿ ಸತ್ಯರು ಸಾತ್ತ್ವಿಕರು ನಿತ್ಯರು ನಿಜೈಕ್ಯರು ಮಹಾಜ್ಞಾನಿಗಳುಪರಮಶಿವಯೋಗಿಗಳು ಶಿವಾನುಭಾವ ಸಂಪನ್ನರುಶಿವಲಿಂಗ ಪ್ರಾಣಿಗಳು, ಶಿವಪ್ರಸಾದಪಾದೋದಕಸಂಬಂಧಿಗಳುಶಿವಾಚಾರವೇದ್ಯರು ಶಿವಾಗಮ ಸಾಧ್ಯರುಶಿವಸಮಯಪಕ್ಷರುಗಳಲ್ಲದೆ, ಮತ್ತಾರು ಅಲ್ಲಿಲ್ಲ ನೋಡಿರಯ್ಯಾ.ಪಾಪಿಗಳು ಕೋಪಿಗಳು ಅಸತ್ಯರು ಅನಾಚಾರಗಳುಹೊಗಬಾರದು ಕಲ್ಯಾಣವ.ಮೀರಿ ಹೊಕ್ಕೆಹೆವೆಂಬವರಿಗೆ ಬಾಳ ಬಾಯಧಾರೆ ನೋಡಿರಯ್ಯಾ.ಆ ಕಲ್ಯಾಣ ಅಗಮ್ಯ ಅಗೋಚರ ನೋಡಿರಯ್ಯಾ.ಆ ಮಹಾಕಲ್ಯಾಣದ ವಿಸ್ತೀರ್ಣ ತಾನೆಂತೆಂದಡೆ:ಹನ್ನೆರಡು ಯೋಜನ ಪರಿಪ್ರಮಾಣದ ವಿಸ್ತ್ರೀರ್ಣ ಪಟ್ಟಣಕ್ಕೆಮುನ್ನೂರರವತ್ತು ಬಾಗಿಲವಾಡ.ಆ ಬಾಗಿಲಿಂಗೆ ನೂರ ಐವತ್ತೈದು ವಜ್ರದ ಹಾರೆಯ ಕದಂಗಳು.ಇನ್ನೂರ ಇಪ್ಪತ್ತೈದು ಕಲುಗೆಲಸದ ದ್ವಾರವಟ್ಟಕ್ಕೆನಾನೂರ…

0 Comments

ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ, ವಿಜಯಪುರ | ಡಾ. ವಿ. ಡಿ. ಐಹೊಳ್ಳಿ,ವಿಜಯಪುರ.

12 ನೇ ಶತಮಾನದ ವಚನಕಾರರು ತಾವು ಸೃಷ್ಟಿಸಿದ ನೂತನ ಆಯಾಮಗಳನ್ನು ಅನುಷ್ಠಾನಕ್ಕೆ ತಂದು, ನುಡಿದಂತೆ ನಡೆದು ಇಹಲೋಕದಲ್ಲಿಯೇ ಎಲ್ಲವೂ ಅಡಗಿದೆ ಎಂದು ತೋರಿಸಿಕೊಟ್ಟವರು. ಶರಣರು ಸ್ವರ್ಗ, ನರಕಗಳು ಬೇರಿಲ್ಲ ಕಾಣಿರೋ ಎಂದು ತಿಳಿಸಿಕೊಟ್ಟವರು. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಬದುಕಿನ ನೈಜ ಸತ್ಯವನ್ನು ಪ್ರಥಕ್ಕರಿಸಿದವರು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಅನುಭವ ಮಂಟಪದಲ್ಲಿ ಚರ್ಚೆಗೆ ಒಳಪಡಿಸಿದ ವಚನದ ತಾಡೋಲೆಗಳನ್ನು ಸಂಗ್ರಹಿಸಿ, ಪರಿಷ್ಕರಿಸಿದ ವಚನದ ಕಟ್ಟುಗಳನ್ನು ಕ್ರಾಂತಿಯ ನೆಪದಲ್ಲಿ ಅವುಗಳನ್ನು ನಾಶಗೊಳಿಸಿದರು. ಅವುಗಳಲ್ಲಿ ಅಳಿದುಳಿದಿದ್ದ ವಚನಗಳು ಮಠ-ಮಂದಿರಗಳಲ್ಲಿ, ಮನೆ-ಮನೆಗಳಲ್ಲಿ, ಶರಣರು ಹೊತ್ತೊಯ್ದು ಗವಿ-ಗಂವರಗಳಲ್ಲಿ ಜೋಕೆಯಾಗಿ ಇಟ್ಟಿರುವುದನ್ನು ಸಂಗ್ರಹಿಸಿ ಏಡೆಯೂರು…

0 Comments

ಧರ್ಮಚಿಂತಕ ಮತ್ತು ವಿಜ್ಞಾನಿ ಎಂದು ಬಿಂಬಿಸಿಕೊಳ್ಳುತ್ತಿರುವ ಚಂದ್ರಶೇಖರ ಎಚ್.‌ ಎನ್. | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಈತನ ಹೆಸರು ಚಂದ್ರಶೇಖರ ಎಚ್‌. ಎನ್‌. (AIವಿಜ್ಞಾನಿಗಳು) ಪಂಚಸೂತ್ರ ಅಕಾಡೆಮಿ, ಲಂಡನ್.‌ AIಅಂದರೆ Artificial Intelligence. ಇದನ್ನು ನಾವು ಆಡು ಭಾಷೆಯಲ್ಲಿ Garbage In Garbage Out (GIGO) ಅಂತೀವಿ. ಕಸ ಹಾಕಿದರೆ ಕಸ ಬರುತ್ತದೆ. ಅಂದರೆ ಇಲ್ಲಿ ಯಾವುದೇ ಸೃಜನಶೀಲತೆ ಇರುವುದಿಲ್ಲ. ನಾವು ಏನು Feedಮಾಡತೀವೋ ಅದು ಹೊರಗ ಬರುತ್ತದೆ ಅಷ್ಟೇ. ಉದಾಹರಣೆಗೆ ಒಂದು ವ್ಯಕ್ತಿಯ ಫೋಟೋ ಮಾಡಬೇಕಾದರೆ 4ನೇ ತರಗತಿಯ ಹುಡುಗ ಕೂಡ Voice Commandನೀಡಿದರೆ ಒಂದು ಫೋಟೋ ಅವನ Voice Commandಗೆ ತಕ್ಕ ಹಾಗೆ ಫೋಟೋ Readyಆಗುತ್ತದೆ. ಇದರಲ್ಲಿ ಯಾವ Rocket Scienceಮಣ್ಣಾಂಗಟ್ಟಿಯೂ…

1 Comment

ವಚನ ಪರಂಪರೆ | ಶ್ರೀಮತಿ. ಸುಶೀಲಾ ಸದಾಶಿವಯ್ಯ, ತುಮಕೂರು.

ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ಎಂಬ ಪ್ರಕಾರ ಹೆಚ್ಚು ರಚನೆಯಾಗಿ ಅಧಿಕೃತವಾಗಿ ಬೆಳಕಿಗೆ ಬಂದಿದ್ದು 12 ನೇ ಶತಮಾನದ ಶರಣ ಯುಗದಲ್ಲಿ. ಅದಕ್ಕೂ ಮೊದಲು ವಚನಗಳು ರಚನೆಯಾಗಿತ್ತು. ಜೇಡರ ದಾಸಿಮಯ್ಯ ಮೊದಲ ವಚನಕಾರರಾಗಿ ಕಂಡು ಬರುತ್ತಾರೆ. ಶರಣ ಯುಗದಲ್ಲಿ ರಚನೆಯಾದ ವಚನಗಳು ಸ್ವತಂತ್ರ ಭಾಷಾ ರಚನೆಯಿಂದ ಸರಳ, ಅಚ್ಚಗನ್ನಡ ಸೊಗಡಿನಿಂದ ಎಲ್ಲರ ಗಮನ ಸೆಳೆಯುವಂತೆ ಆಯಿತು. ಈ ಯುಗದಲ್ಲಿ ಒಂದು ಇಡೀ ಸಮೂಹವೇ ವಚನಗಳ ರಚನೆಯಲ್ಲಿ ಜಾತಿ, ವರ್ಗ, ವರ್ಣ, ಹೆಣ್ಣು, ಗಂಡು ಎಂಬ ಯಾವ ತಾರತಮ್ಯಕ್ಕೆ ಒಳಗಾಗದೆ ಸಾಮಾಜಿಕ ಕ್ರಾಂತಿಗೆ ವಚನವನ್ನು ಮಾಧ್ಯಮವಾಗಿಸಿಕೊಂಡು ಅಸಂಖ್ಯಾತ ವಚನಗಳನ್ನು…

0 Comments

ಮುಚ್ಚಿದ ಸ್ಥಾವರ; ತೆರೆದ ಜಂಗಮ | ಶ್ರೀ. ಎನ್. ಸಿ. ಶಿವಪ್ರಕಾಶ, ಮಸ್ಕತ್, ಒಮಾನ್.

ಆರಾಧನೆಯ ಮಾಡಿದಡೆ ಅಮೃತದ ಬೆಳಸು,ವಿರೋದ್ಥಿಸಿದಡೆ ವಿಷದ ಬೆಳಸು,ಇದು ಕಾರಣ, ಜಂಗಮಕ್ಕೆ ಅಂಜಲೇಬೇಕು.ಸ್ಥಾವರ ಜಂಗಮ ಒಂದೆಂದರಿದಡೆಕೂಡಲಸಂಗಮದೇವ ಶರಣಸನ್ನಿಹಿತ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-110/ವಚನ ಸಂಖ್ಯೆ-422) ನಾವು ನಾಲ್ಕೈದು ಜನ ಲಿಂಗವಂತರು ಪರವೂರಿನ ಪುರಾತನ ಶಿವಮಂದಿರದ ಶಿವಲಿಂಗದರ್ಶನಕೆಂದು ತೆರಳಿದ್ದೆವು. ದೇಗುಲ ಹೊಕ್ಕಾಗ ಗರ್ಭಗುಡಿ ಮುಚ್ಚಿತ್ತು. ಶಿವಲಿಂಗದರ್ಶನದ ಸಮಯ ಮೀರಿತ್ತು. ಮಸುಕಾದ ಮುಸುಕು ಹೊದಿಕೆ ಗರ್ಭಗುಡಿಯ ಗಾಜಿನ ಜೋಡಿ ಬಾಗಿಲುಗಳ ಮುಚ್ಚಿ ಶಿವಲಿಂಗವನು ಮರೆಸಿತ್ತು. ತಪ್ಪು ನಮ್ಮ ಗುಂಪಿನದೇ ಇತ್ತು. ಪರಶಿವನನು ಕಾಣಬೇಕೆಂದರೆ ಸಮಯದ ನಿಯಮವನು  ಅನುಸರಿಸಬೇಕಲ್ಲವೇ? ಹೊತ್ತು ಗೊತ್ತಿಲ್ಲದೆ ಬರುವ ಭಕ್ತರು ಭಕ್ತಿಯ ಮಾಡಲೆಳೆಸಿದರೆ  ಸ್ವೀಕರಿಸುವುದಕೆ ಗುಡಿಯ ಶಿವಲಿಂಗವೇನು ಕೊರಳಿಗೆ ಕಟ್ಟಿದ…

0 Comments

440 ಜಂಗಮರ ಶಿರಚ್ಛೇಧನಕ್ಕೆ ವೀರಶೈವ ಜೋಡಣೆ | ಮೈಸೂರಿನ ಹತ್ಯಾಕಾಂಡ ಸಾರುವ ನಂಜನಗೂಡಿನ ಶಿರೋಭಾವಿ | ಡಾ. ಸತೀಶ ಕೆ.  ಇಟಗಿ, ಮುದ್ದೇಬಿಹಾಳ.

ನಚ್ಚಿದೆನೆಂದಡೆ ಮಚ್ಚಿದೆನೆಂದಡೆ,ಸಲೆ ಮಾರುವೋದೆನೆಂದಡೆತನುವನಲ್ಲಾಡಿಸಿ ನೋಡುವೆ ನೀನು.ಮನವನಲ್ಲಾಡಿಸಿ ನೋಡುವೆ ನೀನು.ಧನವನಲ್ಲಾಡಿಸಿ ನೋಡುವೆ ನೀನು.ಇವಕ್ಕಂಜದಿದ್ದಡೆ ಭಕ್ತಿಕಂಪಿತ [ನೀನು] ಕೂಡಲಸಂಗಮದೇವಾ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-58/ವಚನ ಸಂಖ್ಯೆ-214) ಕ್ರಿ. ಶ. 1673 ರಲ್ಲಿ ಮೈಸೂರಿನ ಒಡೆಯರ ಸಂಸ್ಥಾನಕ್ಕೆ 14 ನೆ ಅಧಿಪತಿಯಾಗಿ ಸಿಂಹಾಸನವೇರಿದ ಚಿಕ್ಕದೇವರಾಜ ಒಡೆಯರ ಅವರು ತಮ್ಮ 28 ನೇ ವಯಸ್ಸಿನಿಂದ ರಾಜ್ಯಭಾರ ವಹಿಸಿಕೊಂಡಿದ್ದರು. ಬಾಲ್ಯ ಸ್ನೇಹಿತರಾಗಿದ್ದ ಯಳಂದೂರು ಮೂಲದ ವಿಶಾಲಾಕ್ಷ ಪಂಡಿತ ಮೂಲತಃ ಜೈನ ಮತಾವಲಂಬಿಯಾಗಿ, ಅಪ್ರತಿಮ ರಾಜನೀತಿಯ ಚಾಣಕ್ಯರಾಗಿದ್ದರು. ಇವರನ್ನು ತಮ್ಮ ಮಂತ್ರಿ (ಟ್ಯೂಟರ್) ಯನ್ನಾಗಿ ನೇಮಿಸಿಕೊಂಡ ಚಿಕ್ಕದೇವರಾಜ ಒಡೆಯರ ಅವರು ರಾಜ್ಯಭಾರದ ಮೊದಲ ವರ್ಷಗಳನ್ನು ಕೇವಲ…

0 Comments