ಶರಣೆ ಕಾಲಕಣ್ಣಿಯ ಕಾಮಮ್ಮ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಸಂಕ್ಷಿಪ್ತ ಪರಿಚಯ:ಲಿಂಗ ತಾರತಮ್ಯ ತೀವ್ರವಾಗಿದ್ದ ಕಾಲಘಟ್ಟದಲ್ಲಿ ಮಹಿಳೆಯಲ್ಲಿ ತಾನೂ ಒಂದು ಚೇತನ ಎಂಬ ಅರಿವನ್ನು ಹುಟ್ಟು ಹಾಕಿದ್ದು 12 ನೇ ಶತಮಾನದ ಕಾಲ. ಇದೊಂದು ಅರಿವಿನ ಸ್ಫೋಟ. ಇದೇ ನಿಜವಾದ ಸ್ತ್ರೀ ಸಮಾನತೆ ಮತ್ತು ಸ್ವಾತಂತ್ರ್ಯದ ದ್ಯೋತಕ. ಮಹಾಮಾನವತಾವಾದಿ ಬಸವಣ್ಣನವರು ಮಹಿಳಾ ಸ್ವಾತಂತ್ರ್ಯದ ಹರಿಕಾರರು. ಶರಣೆ ಕಾಲಕಣ್ಣಿಯ ಕಾಮಮ್ಮನವರು 12 ನೇ ಶತಮಾನದಲ್ಲಿ ಜೀವಿಸಿದ್ದ ಶರಣೆಯಾಗಿದ್ದಾರೆ. ಇವರು ದಲಿತ ಸಮುದಾಯದ ಮಹಿಳೆ. ಕೊರವ, ಕೊಂಚೆಕೊರವ ಸಮುದಾಯದಿಂದ ಬಂದವರು. ಅಂದು ಈ ಜನಾಂಗವನ್ನು ಪಶುಗಳಿಗಿಂತ ಕೀಳಾಗಿ ಕಾಣುತ್ತಿದ್ದರು. ದಲಿತ ಮಹಿಳೆಯರ ಸ್ಥಿತಿಯಂತೂ ಇನ್ನೂ ಶೋಚನೀಯವಾಗಿತ್ತು. ಇಂತಹ ಮಹಿಳೆಯರಿಗೆ ಅರಿವನ್ನು…

0 Comments

ಬಸವಣ್ಣನವರ ವಚನ ವಿಶ್ಲೇಷಣೆ; ಹಂಜರಬಲ್ಲಿತ್ತೆಂದು | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಹಂಜರ ಬಲ್ಲಿತ್ತೆಂದು ಅಂಜದೆ ಓದುವ ಗಿಳಿಯೆ,ಎಂದೆಂದೂ ಅಳಿಯೆನೆಂದುಗುಡಿಗಟ್ಟಿದೆಯಲ್ಲಾ, ನಿನ್ನ ಮನದಲ್ಲಿ.ಮಾಯಾಮಂಜರ ಕೊಲುವಡೆ ನಿನ್ನ ಹಂಜರ ಕಾವುದೆಕೂಡಲಸಂಗಮದೇವನಲ್ಲದೆ?(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-46/ವಚನ ಸಂಖ್ಯೆ-163) ವಚನ ಚಳುವಳಿಯ ತಾತ್ವಿಕ ಚೌಕಟ್ಟುಗಳು ರೂಪಕ ಮತ್ತು ಪ್ರತಿಮೆಗಳ ಮೇರು ಸಾದೃಶ್ಯವನ್ನು ಬಿಂಬಿಸುತ್ತವೆ. ಗಿಳಿ ಎಂಬ ತಾತ್ವಿಕ ಪರಿಕಲ್ಪನೆ ಜೀವಾತ್ಮದ ಶಕ್ತಿಯಾಗಿ ಜ್ಞಾನಾನುಸಂಧಾನ ಬಯಸುತ್ತದೆ. ಬಸವಣ್ಣನು ಪ್ರಭುವಿನಂತೆ ಬೆರಗನ್ನು ಮುಂದೆ ಮಾಡುವುದಿಲ್ಲ. ಭಕ್ತನಾಗಿಯೇ ಬೆರಗನ್ನು ಅವಲೋಕಿಸುತ್ತಾನೆ. ಮಾಯೆಗೆ ವಶವಾದ ಅಜ್ಞಾನಕ್ಕೆ ಎಚ್ಚರಿಕೆಯನ್ನು ಕೊಡುತ್ತಾ ಅಪ್ಪಿಕೊಳ್ಳುತ್ತಾ “ಹಂಜರ ಬಲ್ಲಿತ್ತೆಂದು ಅಂಜದೆ” ಎಂದು ಅರಿವು ಮತ್ತು ಮಾಯೆಯ ಮಧ್ಯದಲ್ಲಿ ಜೀವಾತ್ಮವೆಂಬ ಗಿಳಿಯು ವಾಸವಾಗಿದೆ. ಈ ದೇಹವು ನಿಸರ್ಗದ ಸಂವೇದನೆಗಳನ್ನು ಅಂತರ್ಗತವಾಗಿ…

0 Comments

ಲೋಕದ ಡೊಂಕ‌ ನೀವೇಕೆ ತಿದ್ದುವಿರಿ| ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಲೋಕದ ಡೊಂಕ‌ ನೀವೇಕೆ ತಿದ್ದುವಿರಿ?ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚಕೂಡಲಸಂಗಮದೇವ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-36/ವಚನ ಸಂಖ್ಯೆ-124) ೧೨ ನೇ  ಶತಮಾನದ ವಚನ ಸಾಹಿತ್ಯ ಅಂದು ವೈಜ್ಞಾನಿಕ ಮನೋಭಾವದ ವೈಚಾರಿಕತೆಯನ್ನು ಹುಟ್ಟು ಹಾಕಿದ ಕಾಲವದು. ಭಕ್ತಿ ಸಾಹಿತ್ಯದ ಜೊತೆಗೆ ಸಾಮಾಜಿಕ ಚಿಂತನೆಯನ್ನು ಹೇಳಿದ ಶರಣರು ಸಮಾಜವನ್ನು ತಮ್ಮ ಕುಟುಂಬವೆಂದು ಸ್ವೀಕರಿಸಿದ್ದರು. ಹೀಗಾಗಿ ಲೋಕದ ತುಡಿತ ಆಶಯಗಳನ್ನು ತಮ್ಮದಾಗಿಸಿಕೊಂಡರು. ಲೋಕವೆಂದಾಗ ಸಮಾಜ-ಜನರ ನಡುವಿನ ಸಂಬಂಧ  ಸಾಮಾಜಿಕ ಸಮಸ್ಯೆಗಳಾಗಿರುತ್ತವೆ. ಲೋಕದ ಜನರ ಮನಸ್ಥಿತಿ ಎತ್ತ ಸಾಗುತ್ತಿದೆ ಎಂಬ ಅವಲೋಕನ ಬಹಳ ಮುಖ್ಯವಾಗುತ್ತದೆ. ಲೋಕ ಕಲ್ಯಾಣದ…

0 Comments

ವಿಶ್ವಗುರು ಬಸವಣ್ಣನವರ ವಚನ ವಿಶ್ಲೇಷಣೆ | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಲೋಕದ ಡೊಂಕ‌ ನೀವೇಕೆ ತಿದ್ದುವಿರಿ?ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;ನಿಮ್ಮ ನಿಮ್ಮ ಮನವ ಸಂತೈಸಿ‌ ಕೊಳ್ಳಿ.ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚಕೂಡಲಸಂಗಮದೇವ.(ಸಮಗ್ರ ವಚನ ಸಂಪುಟ-ಒಂದು/2021/ಪುಟ. ಸಂ-36/ವಚನ. ಸಂ. 124) 12 ನೇ  ಶತಮಾನದ ವಚನ ಸಾಹಿತ್ಯ ಅಂದು ವೈಜ್ಞಾನಿಕ ಮನೋಭಾವದ ವೈಚಾರಿಕತೆಯನ್ನು ಹುಟ್ಟು ಹಾಕಿದ ಕಾಲವದು. ಭಕ್ತಿ ಸಾಹಿತ್ಯದ ಜೊತೆಗೆ ಸಾಮಾಜಿಕ ಚಿಂತನೆಯನ್ನು ಹೇಳಿದ ಶರಣರು ಸಮಾಜವನ್ನು ತಮ್ಮ ಕುಟುಂಬವೆಂದು ಸ್ವೀಕರಿಸಿದ್ದರು. ಹೀಗಾಗಿ ಲೋಕದ ತುಡಿತ ಆಶಯಗಳನ್ನು ತಮ್ಮದಾಗಿಸಿಕೊಂಡರು. ಲೋಕವೆಂದಾಗ ಸಮಾಜ ಮತ್ತು ಜನರ ನಡುವಿನ ಸಂಬಂಧ. ಸಾಮಾಜಿಕ ಲೋಕದ ಜನರ ಮನಸ್ಥಿತಿ ಎತ್ತ ಸಾಗುತ್ತಿದೆ ಎಂಬ ಅವಲೋಕನ ಬಹಳ ಮುಖ್ಯವಾಗುತ್ತದೆ.…

0 Comments

ಶರಣ ಮಾದಾರ ಧೂಳಯ್ಯನವರ ವಚನ ವಿಶ್ಲೇಷಣೆ | ಡಾ. ಶಿವಲೀಲಾ ಬಸವರಾಜ, ಕಾಳಗಿ.

12 ನೇ ಶತಮಾನದಲ್ಲಿ ಕಲ್ಯಾಣದಲ್ಲಿ ನೆಲೆಸಿದ್ದ 770 ಅಮರಗಣಂಗಳಲ್ಲಿ ಮಾದಾರ ಧೂಳಯ್ಯನವರು ಒಬ್ಬರಾಗಿದ್ದಾರೆ. ಇವರು ಕಲ್ಯಾಣಕ್ಕೆ ಬರುವ ಪೂರ್ವದಲ್ಲಿನ ಜೀವನದ ಸ್ಪಷ್ಟವಾದ ಮಾಹಿತಿ ದೊರೆತಿರುವುದಿಲ್ಲ. ಸುಪ್ರಸಿದ್ಧ ಕವಿಗಳಾದ ಹರಿಹರ, ಭೀಮಕವಿ, ಸಿದ್ಧನಂಜೇಶ, ಷಡಕ್ಷರದೇವ ಮುಂತಾದವರು. ಮಾದಾರ ಧೂಳಯ್ಯನವರು ಒಬ್ಬ ಮಹಾನ ಕಾಯಕ ಶರಣ ಜೀವಿ ಎಂಬುದನ್ನು ಉಲ್ಲೇಖಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಇವರ ಅಂಗೋದರದ ಮಹಾತ್ಮೆಯನ್ನು ಪ್ರಾಸಂಗಿಕವಾಗಿ ಒತ್ತಿ ಹೇಳಿದ್ದಾರೆ. ತ. ಸು. ಶಾಮರಾಯರ ಶಿವಶರಣರ ಕಥಾರತ್ನಕೋಶದಲ್ಲಿ ಮಾದಾರ ಧೂಳಯ್ಯನವರ ಜೀವನದ ಬಗ್ಗೆ ಪ್ರಸ್ತಾಪಿಸಿರುತ್ತಾರೆ. ಶರಣ ಧೂಳಯ್ಯನವರು ಪ್ರಾಂಜಲ ಮನಸ್ಸಿನ ಸತ್ಯ, ಶುದ್ಧ ಕಾಯಕಜೀವಿ. ಚಪ್ಪಲಿ ಹೊಲೆಯುವ ಕಾಯಕವನ್ನು…

0 Comments

ಕಾಯಕಯೋಗಿ ನುಲಿಯ ಚಂದಯ್ಯನವರ ವಚನ ವಿಶ್ಲೇಷಣೆ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ಅವಾವ ಕಾಯಕದಲ್ಲಿ ಬಂದಡೂ ಭಾವಶುದ್ಧವಾಗಿಗುರು-ಲಿಂಗ-ಜಂಗಮಕ್ಕೆ ಮಾಡುವುದೇ ಶಿವಪೂಜೆ.ಮಾಡುವ ಮಾಟವಿಲ್ಲದೆ ಮಾತಿಂಗೆ ಮಾತಾಡುವುದುಅದೇತರ ಪೂಜೆ?ಅದು ಚಂದೇಶ್ವರಲಿಂಗಕ್ಕೆ ಒಪ್ಪವಲ್ಲ,ಮಡಿವಾಳಯ್ಯಾ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-450/ವಚನ ಸಂಖ್ಯೆ-1285) “ಕಾಯಕವೇ ಶಿವಸಾಧನೆ, ದುಡಿಮೆಯೇ ದಾಸೋಹ” ಎಂಬ ತತ್ವವನ್ನು ತಮ್ಮ ಜೀವನ ಮತ್ತು ವಚನಗಳ ಮೂಲಕ ಬದುಕಿದ ಶ್ರೇಷ್ಠ ಶಿವಶರಣರು ನುಲಿಯ ಚಂದಯ್ಯನವರು. ನುಲಿಯ ಚಂದಯ್ಯ ಅವರು ಬಸವಣ್ಣನವರ ಹಿರಿಯ ಸಮಕಾಲೀನ ಶರಣರಲ್ಲಿ ಒಬ್ಬರು. ಕ್ರಿ. ಶ. 1107 ರ ಸುಮಾರಿಗೆ ಇಂದಿನ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಶಿವಣಗಿ ಗ್ರಾಮದಲ್ಲಿ ಜನಿಸಿದರು. ಅವರು ಹಗ್ಗ ಹೊಸೆಯುವ ಕಾಯಕದಲ್ಲಿ ತೊಡಗಿದ್ದ ಕೊರವ (ನುಲಿ) ಸಮುದಾಯಕ್ಕೆ…

0 Comments

ದಿಟ್ಟ ಗಣಾಚಾರಿ ಶರಣ ಅಂಬಿಗರ ಚೌಡಯ್ಯನವರ ವಚನ ವಿಶ್ಲೇಷಣೆ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ಗುರುವೆಂಬೆನೆ ಹಲಬರ ಮಗ,ಲಿಂಗವೆಂಬೆನೆ ಕಲುಕುಟಿಕನ ಮಗ,ಪ್ರಸಾದವೆಂಬೆನೆ ಒಕ್ಕಲಿಗನ ಮಗ,ಪಾದೋದಕವೆಂಬೆನೆ ದೇವೇಂದ್ರನ ಮಗ,ಈಸುವ ಹಿಡಿಯಲೂ ಇಲ್ಲ, ಬಿಡಲೂ ಇಲ್ಲ,ತನ್ನೊಳಗ ನೋಡೆಂದನಂಬಿಗ ಚೌಡಯ್ಯ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-55/ವಚನ ಸಂಖ್ಯೆ-137) ದೋಣಿಯಿಂದ ನದಿಯನ್ನು ದಾಟಿಸಿದ ದಿಟ್ಟ ಗಣಾಚಾರಿ ಶರಣ ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಅಜ್ಞಾನ ಮತ್ತು ಅಂಧಶ್ರದ್ಧೆಯ ಸಾಗರದಿಂದ ಜನರನ್ನು ದಾಟಿಸಲು ಪ್ರಯತ್ನಿಸಿದ ಮಹಾನ್ ಶಿವಶರಣರು. ಶರಣ ಅಂಬಿಗರ ಚೌಡಯ್ಯನವರು 12 ನೇ ಶತಮಾನದ ಪ್ರಮುಖ ಶಿವಶರಣರು ಹಾಗೂ ವಚನಕಾರರು. ಮೈಲಾರ ಶಾಸನದ ಪ್ರಕಾರ ಮತ್ತು ಶಿಶುನಾಳ ಶರೀಫರು ಬರೆದಂಥ “ಶಿವದೇವ ವಿಜಯಂ” ಎಂಬ ಗ್ರಂಥದಲ್ಲಿ ಉಲ್ಲೇಖವಾದಂತೆ…

0 Comments

ಶರಣ ಗುಪ್ತ ಮಂಚಣ್ಣನವರ ವಚನ ವಿಶ್ಲೇಷಣೆ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ಉಳಿಯ ಹಿಡಿಯಲ್ಲಿ ಕಲೆ ಮಾಡಿಸಿಕೊಂಡ ದೇವರಿಗೆಅಳಿವು ಉಳಿವಲ್ಲದೆ,ಉಳಿಗೆ ಹೊರಗಾದ ಅಳಿಯದವನನರಿಯಾ,ನಾರಾಯಣಪ್ರಿಯ ರಾಮನಾಥ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-119/ವಚನ ಸಂಖ್ಯೆ-298) ಶರಣ ಗುಪ್ತ ಮಂಚಣ್ಣನವರು 12 ನೇ ಶತಮಾನದ ಪ್ರಮುಖ ಶಿವಶರಣರು ಮತ್ತು ವಚನಕಾರರು. ಇವರು ಬಸವಣ್ಣನವರ ಚಿಂತನೆಗಳನ್ನು ಅನುಸರಿಸಿದರೂ ತಮ್ಮನ್ನು ಬಹಿರಂಗವಾಗಿ ಮುಂದಿರಿಸದೆ, ಸರಳ ಮತ್ತು ನೇರವಾದ ವಚನಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದರು. ಇವರು ಬಿಜ್ಜಳ ರಾಜನ ಕೋಶಾಗಾರದಲ್ಲಿ ಕರಣಿಕ (ಲೆಕ್ಕಿಗ) ಆಗಿ ಕೆಲಸ ಮಾಡುತ್ತಿದ್ದರು. ಇವರು “ನಾರಾಯಣಪ್ರಿಯ ರಾಮನಾಥ” ವಚನಾಂಕಿತದಿಂದ ಬರೆದ ಸುಮಾರು 100 ವಚನಗಳು ಇಲ್ಲಿಯವರೆಗೆ ಲಭ್ಯವಿವೆ. "ದೇವರ ಭಕ್ತಿ ಬಾಹ್ಯ ಆಡಂಬರದಲ್ಲಲ್ಲ;…

0 Comments

ಶಿವಶರಣ ಬಾಲಸಂಗಣ್ಣನವರ ವಚನ ನಿರ್ವಚನ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ಕಾಬುದು ಜೀವನಲ್ಲ, ಕಾಣಿಸಿಕೊಂಬುದು ಪರಮನಲ್ಲ.ಅಟ್ಟಿ ಮುಟ್ಟಿ ಹರಿದಾಡುವವು ಕರಣಂಗಳಲ್ಲ.ಸುಖವನನುಭವಿಸುವವು ಇಂದ್ರಿಯಂಗಳಲ್ಲ.ಇಂತೀ ಭೇದಂಗಳಲ್ಲಿ ಆರೆಂಬುದ ತಿಳಿದುಸಸಿ ವೃಕ್ಷಕ್ಕೆ ನೀರನೆರದಡೆ ಆ ನೀರ ಕುಡಿವುದುಬೇರೋ, ಮರನೋ? ಮೀರಿ ಬೆಳೆದ ಫಲವೋ?ಎಂಬುದನರಿದು ತಿಳಿದಲ್ಲಿ,ಅರಿದರುಹಿಸಿಕೊಂಬ ನಿರಿಗೆಯ ಬಲ್ಲ,ಆತ ಕಮಠೇಶ್ವರಲಿಂಗವನೊಡಗೂಡಿದ ಶರಣ.(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-109/ವಚನ ಸಂಖ್ಯೆ-245) ಶರಣ ಬಾಲಸಂಗಣ್ಣನವರು 12 ನೇ ಶತಮಾನದ ಒಬ್ಬ ಶರಣ ವಚನಕಾರ. ಇವರ ಬಗ್ಗೆ ಸಂಪೂರ್ಣ ಮತ್ತು ಖಚಿತವಾದ ಮಾಹಿತಿಗಳು ದೊರೆಯದಿದ್ದರೂ ಕೆಲವು ಪುರಾಣಗಳು, ಕಾವ್ಯಗಳು ಮತ್ತು ವಚನಗಳ ಆಧಾರದ ಮೇಲೆ ತಿಳಿದುಬರುವ ಸಂಗತಿಗಳೆಂದರೆ, ಬಾಲಸಂಗಣ್ಣನವರನ್ನು ಬಾಲಸಂಗಯ್ಯ ಎಂದೂ ಕರೆಯಲಾಗುತ್ತಿತ್ತು. ಕೆಲವು ಪ್ರಾಚೀನ ಗ್ರಂಥಗಳು ಇವರನ್ನು…

0 Comments

ಆತ್ಮಾನುಭೂತಿಯೇ ಅರಿವು, ಅನುಭಾವವೇ ಗುರು | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ಅಂಗದ ಮೇಲೆ ಲಿಂಗ,ಲಿಂಗದ ಮೇಲೆ ಅಂಗವಿದೇನೊ?ಮನದ ಮೇಲೆ ಅರಿವು,ಅರಿವಿನ ಮೇಲೆ ಕುರುಹು ಇದೇನೊ?ನೀನೆಂಬಲ್ಲಿ ನಾನು, ನಾನೆಂಬಲ್ಲಿ ನೀನು,“ನೀ” “ನಾ” ಎಂಬುದಕ್ಕೆ ತೆರಹಿಲ್ಲ ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-103/ವಚನ ಸಂಖ್ಯೆ-310) ಈ ವಚನದಲ್ಲಿ ವ್ಯೋಮಕಾಯ ಅಲ್ಲಮ ಪ್ರಭುಗಳು ದೇಹದ (ಅಂಗ) ಮೇಲೆ ಲಿಂಗವಿದೆಯೋ ಅಥವಾ ಲಿಂಗದ ಮೇಲೆ ದೇಹವಿದೆಯೋ ಎಂದು ಪ್ರಶ್ನಿಸುವ ಮೂಲಕ ಇವೆರಡನ್ನು ಬೇರ್ಪಡಿಸಿ ನೋಡುವುದು ಸರಿಯಲ್ಲ ಎಂಬ ಸಂದೇಶವನ್ನು ನೀಡುತ್ತಾರೆ. ಭಕ್ತನ ದೇಹ ಮತ್ತು ಅವನು ಆರಾಧಿಸುವ ಲಿಂಗ ಎರಡೂ ಒಂದೇ ಪರಮ ತತ್ತ್ವದ ಅಭಿವ್ಯಕ್ತಿಗಳಾಗಿವೆ. ಅದೇ ರೀತಿ, ಮನಸ್ಸಿನ ಮೇಲೆ ಅರಿವಿದೆಯೋ ಅಥವಾ…

0 Comments