ಶಿವಯೋಗಿ ಶ್ರೀ ಸಿದ್ದರಾಮೇಶ್ವರರ ವಚನಗಳ ಪ್ರಸ್ತುತತೆ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ವಚನ ಸಾಹಿತ್ಯ ಮತ್ತು ಬಸವ ತತ್ವ ಎನ್ನುವುದು ಒಂದು ಜೀವನ ಕ್ರಮ. ಕನ್ನಡದ ಮೇರುತನವನ್ನು ಬಿಂಬಿಸುವ ಅದರ ಪ್ರಭಾವ ಅಪಾರ. ಹೀಗಾಗಿ ಶರಣ ಸಂಸ್ಕೃತಿಯ ಬಯಲಲ್ಲಿ ಬಸವ ತತ್ವ ವಿಶಾಲವಾಗಿ ಬೆಳೆದಿದೆ. ತಾತ್ವಿಕವಾಗಿ ಸಾಮಾಜಿಕ ಮತ್ತು ಧಾರ್ಮಿಕವಾಗಿ ನಾವು ಪಡೆದುಕೊಂಡಿರುವ ಶರಣ ಧರ್ಮದ ಆಧ್ಯಾತ್ಮಿಕ ತತ್ವವು ಆರೋಗ್ಯಪೂರ್ಣ ಸಮಾಜವನ್ನು ನಮಗೆ ನೀಡಿದೆ. ಹೀಗಾಗಿ ಬಸವಾದಿ ಶರಣರ ಬೌದ್ಧಿಕ ಚಿಂತನೆಗಳ ಅನುಸಂಧಾನ ಮಾಡುವ. ಪುನರ್ ಮೌಲ್ಯೀಕರಣ ಮಾಡುವ ಅಗತ್ಯತೆ ಇಂದಿದೆ. ನಮ್ಮ ವರ್ತಮಾನ ಕಾಲದ ಒಳನೋಟ ಜನಪರವಾದ ಚಿಂತನೆಗಳು ತಾತ್ವಿಕವಾಗಿ ಹೇಗೆ ನೆಲೆಗೊಂಡಿವೆ ಎಂಬುದನ್ನು ಶ್ರೀ ಸಿದ್ದರಾಮೇಶ್ವರರ ವಚನಗಳಲ್ಲಿ…

0 Comments

ಕನ್ನಡ ಸಾಹಿತ್ಯ ಪರಿಷತ್ತಿಗಿಂತ ಮುಂಚೆ ಡ್ಯೆಪುಟಿ ಚೆನ್ನಬಸಪ್ಪನವರಿಂದ ಪ್ರವರ್ಧಮಾನಕ್ಕೆ ಬಂದ ಕನ್ನಡಿಗರ ಸಾಂಸ್ಕೃತಿಕ ಪ್ರಾತಿನಿಧಿಕ ಸಂಸ್ಥೆಧಾರವಾಡದ ಕನ್ನಡ ಗಂಡು ಮಕ್ಕಳ ತರಬೇತಿ ಶಾಲೆ | ಶ್ರೀ. ಮಹೇಶ ಚನ್ನಂಗಿ | ಚನ್ನಮ್ಮನ ಕಿತ್ತೂರು, ಬೆಳಗಾವಿ ಜಿಲ್ಲೆ.

05.05.1915 ರಂದು ಕರ್ನಾಟಕ ಸಾಹಿತ್ಯ ಪರಿಷತ್ತು ಬೆಂಗಳೂರಿನ ಶಂಕರಪುರ ಬಡಾವಣೆಯಲ್ಲಿ ಮೈಸೂರಿನ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಸ್ಥಾಪನೆಯಾಗಿರುವುದು ಜಗಜ್ಜಾಹೀರಾದ ಸಂಗತಿ. ಇದರ ಕೇಂದ್ರ ಕಚೇರಿ ಬೆಂಗಳೂರು ನಗರದ ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿದೆ 18 ವರ್ಷ ಮೇಲ್ಪಟ್ಟ ಓದು ಬರಹ ಬರುವರೆಲ್ಲರೂ ಇದರ ಸದಸ್ಯರಾಗಬಹುದು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಮೈಸೂರಿನ ನಾಲ್ವಡಿ ಕೃಷ್ಣರಾಜರ ಒಡೆಯರು ಎಷ್ಟೊಂದು ಹಣಕಾಸಿನ ಸಹಾಯವನ್ನು ನೀಡಿದ್ದಾರೆಯೋ ಅಷ್ಟೇ ಪ್ರಮಾಣದಲ್ಲಿ ಸಹಾಯವನ್ನು ಬೆಳಗಾವ ಜಿಲ್ಲೆಯ ಮಹಾದಾನಿ ರಾಜ ಲಖಮನಗೌಡ ಸರದೇಸಾಯಿ ಅವರು ನೀಡಿದ್ದಾರೆ. ಸಂಸ್ಥಾಪನೆಯ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಕನ್ನಡ…

0 Comments

ಡಾ. ಬಸವರಾಜ ಅನಗವಾಡಿಯವರು ನಿರ್ಮಿಸಿದ “ಬಸವ ಶರಣ ಕಲಾ ಸಂಗ್ರಹಾಲಯ” | ಕೂಡಲಸಂಗಮ, ಬಾಗಲಕೋಟೆ ಜಿಲ್ಲೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದ ಮುಖ್ಯರಸ್ತೆಯಲ್ಲಿ “ಬಸವ ಶರಣ ಕಲಾ ಸಂಗ್ರಹಾಲಯ” ಎಂಬ ನಾಮಫಲಕವನ್ನು ನೋಡಿ ಒಳಗೆ ಕಾಲಿರಿಸಿದರೆ. ಅಲ್ಲಿ ಎಡಗಡೆ ಗೋಡೆಗೆ ಹಬ್ಬಿದ ಬಸವಣ್ಣ, ಅವನ ಅನುಯಾಯಿಗಳ ಶಿಲ್ಪಗಳನ್ನು ಕಾಣಬಹುದು. ಸೌರಮಂಡಲಕ್ಕೆ ಸೂರ್ಯನು ಕೇಂದ್ರವಾಗಿರುವಂತೆ, ಇಲ್ಲಿ ಬಸವಣ್ಣ ಸೂರ್ಯನೋಪಾದಿಯಲ್ಲಿ ಭೂಮಿಯ ಮೇಲೆ ಕುಳಿತು ತನ್ನ ಅರಿವಿನ ಕಿರಣಗಳನ್ನು ಸೂಸುತ್ತಾ, ವಚನಗಳನ್ನು ಬರೆಯುವುದರಲ್ಲಿ ನಿರತರಾಗಿದ್ದಾರೆ. ಗೋಡೆಗಂಟಿದ ಚಿತ್ರ-ಶಿಲ್ಪಗಳ ಮೇಲೆಲ್ಲ ಅಗತ್ಯವಾದ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಮಂದವಾದ ಬೆಳಕು. ಅಲ್ಲಿನ ಬೆಳಕಿನ ವ್ಯವಸ್ಥೆ ಚಿತ್ರ-ಶಿಲ್ಪಗಳು ಮಾತ್ರ ಸ್ಪಷ್ಟವಾಗಿ ಕಾಣುವಂತೆ Design ಮಾಡಲಾಗಿದೆ. ಇದು ನಮ್ಮನ್ನು 12…

0 Comments

ಅಲೌಕಿಕತೆಯಲ್ಲಿ ಲೌಕಿಕತೆ / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಈ ಜಗತ್ತು ಮಿಥ್ಯ, ನಶ್ವರ, ಸಂಸಾರ ಅನ್ನೊದು ಒಂದು ಘೊರಾರಣ್ಯ ಎಂಬ ವಾದಗಳನ್ನು ಅಲ್ಲಗಳೆದು ಈ ಜಗತ್ತೇ ಒಂದು ಸಾಧನಾ ರಂಗ, ಸಂಸಾರ ಅನ್ನೊದು ಸಾಧನೆಗೆ ವೇದಿಕೆ ಅಂತ ನಂಬಿದೋರು 12 ನೇ ಶತಮಾನದ ಬಸವಾದಿ ಶಿವಶರಣರು. ಪ್ರಪಂಚದಲ್ಲಿದ್ದು ಸಂಸಾರದ ಸುಳಿಯಲ್ಲಿ ಸುತ್ತುತ್ತಲೇ ದಡ ಸೇರಬೇಕೆಂಬುದು ಶರಣರ ಅಭಿಪ್ರಾಯ ಮತ್ತು ಅದೇ ರೀತಿ ನಡೆದಿದ್ದಾರೆ ಕೂಡ. ಗೃಹಸ್ಥ ಜೀವನ ಬೇಡವೆಂದು ಅದಕ್ಕೆ ಬೆನ್ನು ತಿರುಗಿಸಿದ ಕೆಲವೇ ಶಿವಶರಣರಲ್ಲಿ ಸಿದ್ಧರಾಮರು, ಚೆನ್ನಬಸವಣ್ಣನವರು ಮತ್ತು ವೀರ ವಿರಾಗಿಣಿ ಮಹಾದೇವಿಯಕ್ಕ ಪ್ರಮುಖರಾಗಿದ್ದಾರೆ. ಆದರೆ ಇವರ‍್ಯಾರೂ ಸಂಸಾರ ಬಿಟ್ಟು ಸನ್ಯಾಸಿಗಳಾಗಿ ಗುಹಾಂತರ್ಗತರಾಗಿ ಉಳಿಯಲಿಲ್ಲ…

0 Comments

ನಿಜ ಜಂಗಮ ಷಣ್ಮುಖ ಶಿವಯೋಗಿ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.(ಶಿವರಾತ್ರಿಯಂದು ಷಣ್ಮುಖ ಶಿವಯೋಗಿಗಳ ಜಯಂತಿ ನಿಮಿತ್ತ ಈ ಲೇಖನ)

ಶರಣ ಭೂಮಿಯಾದ ಕಲಬುರ್ಗಿಯು ಹಲವಾರು ಶರಣರು ಸಂತರು, ಕವಿಗಳು, ಸಾಹಿತಿಗಳನ್ನು ನಾಡಿಗೆ ಅರ್ಪಿಸಿದ ಪುಣ್ಯ ಭೂಮಿಯಾಗಿದೆ. ಕಡಕೋಳ ಮಡಿವಾಳಪ್ಪ, ಶರಣಬಸಪ್ಪ, ಖೈನೂರಿನ ಕೃಷ್ಣಪ್ಪ, ಚನ್ನೂರಿನ ಜಲಾಲಸಾಬ್ ಹೀಗೇ ಇನ್ನೂ ಅನೇಕರು ಇಲ್ಲಿ ಆಗಿ ಹೋಗಿದ್ದಾರೆ. ಅಖಂಡೇಶ್ವರರ ಕೃಪಾಶೀರ್ವಾದದಿಂದ ಸಗರನಾಡಿನ ಜೇವರ್ಗಿಯಲ್ಲಿ 1639 ರಲ್ಲಿ ಶಿವರಾತ್ರಿಯ ದಿನದಂದು ಜನಿಸಿದ ಷಣ್ಮುಖ ಶಿವಯೋಗಿಗಳು ಬಸವೋತ್ತರ ಯುಗದ ಶರಣರಲ್ಲೇ ಅಗ್ರಪಂಕ್ತಿಯಲ್ಲಿ ನಿಲ್ಲುವರು. ಇವರ ತಾಯಿ ದೊಡ್ಡಮಾಂಬೆ ಹಾಗೂ ತಂದೆ ಮಲ್ಲಶೆಟ್ಟೆಪ್ಪ. ಇವರು ಎರಡು ವರ್ಷದವರಿದ್ದಾಗಿಂದಲೂ ಮಠದತ್ತಲೇ ಓದುತ್ತಿದ್ದು ಅಲ್ಲಿ ಅಖಂಡೇಶ್ವರರ ಸನ್ನಿಧಿಯಲ್ಲಿ ಅಪೂರ್ವವಾದ ಆನಂದವನ್ನು ಅನುಭವಿಸುತ್ತಿದ್ದರು. ಐದನೇ ವರ್ಷಕ್ಕೆ ಅಖಂಡೇಶ್ವರ ಗುರುಗಳ…

0 Comments

ವಚನ ಸಾಹಿತ್ಯದಲ್ಲಿ ಭಾಷೆ ಮತ್ತು ಭಾಷಾ ಸಂಸ್ಕೃತಿ / ಡಾ. ವಿಜಯಕುಮಾರ ಕಮ್ಮಾರ, ತುಮಕೂರು

.ಶಿರವ ಸೀರೆಯ ಕರವ ಕಂಗಳ ಶಿಶುವನಿಕ್ಕಿಯೆರದರು.ಭಾಷೆ ಬಳಸಿ ಹಂಗು ಹಳಸಿಹೋಯಿತ್ತು.ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗಜಂಗಮಕ್ಕೆಕೊಟ್ಟಿಹೆನೆಂಬ ಶಬ್ದ ಅಳಿದರು ಉಳಿಯಿತು.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-250/ವಚನ ಸಂಖ್ಯೆ-682) ಶರಣ ಚಂದಿಮರಸರ ಈ ವಚನ ಮೇಲ್ನೋಟಕ್ಕೆ ಸರಳವಾಗಿರುವಂತೆ ಕಂಡರೂ ವಿಶ್ಲೇಷಣೆ ಮಾಡುತ್ತಾ ಹೋದಂತೆ ಭಾಷೆ ಅಥವಾ ಮಾತು ಅಥವಾ ನುಡಿ ಎನ್ನುವ ಭಾಷಾ ಕ್ರಾಂತಿಯ ಗುಟ್ಟುಗಳನ್ನು ಮತ್ತು ತತ್ವಗಳನ್ನು ಅಡಗಿಸಿಕೊಂಡಂತೆ ಕಾಣುತ್ತದೆ. ಕೊಟ್ಟಿಹೆನೆಂಬ ಶಬ್ದ ಅಳಿದರೂ ಉಳಿಯಿತ್ತು ಎನ್ನುವುದರ ಮೂಲಕ ದಾಸೋಹ ತತ್ವದ ಪರಿಭಾಷೆಯನ್ನು ಅತ್ಯಂತ ಸಮರ್ಥವಾಗಿ ಬಿಂಬಿಸುತ್ತದೆ. ವಚನ ಸಾಹಿತ್ಯದ ಅಧ್ಯಯನ ಇಂದಿನ ಕಾಲಘಟ್ಟದ ಬಹಳಷ್ಟು ಉಪನ್ಯಾಸಕರನ್ನು, ವಿದ್ವಾಂಸರನ್ನು, ವಿದ್ಯಾರ್ಥಿಗಳನ್ನು…

1 Comment

ರವಿ ಹಂಜ್‌ ಎನ್ನುವ ಪಡಪೋಶಿಯ “ಬಸವರಾಜಕಾರಣ” ಎನ್ನುವ ಅಪಸವ್ಯ | ಭಾಗ-03: ಭಾರತೀಯ ತರ್ಕಶಾಸ್ತ್ರ.

ತರ್ಕಶಾಸ್ತ್ರ ಎನ್ನುವದು ಅನಂತ ವ್ಯಾಪ್ತಿಯ ಅಧ್ಯಯನದ ವಿಷಯ. ಇದೂವರೆಗೂ ಕಂಡು ಬರುವ ಅಧ್ಯಯನಗಳು ಮತ್ತು ಸಂಶೋಧನೆಗಳು ಇದರ ಅಗಾಧತೆಯನ್ನು ತಿಳಿಸುತ್ತವೆ. ಭಾರತೀಯ ತರ್ಕಶಾಸ್ತ್ರವಂತೂ ಘನ ವಿದ್ವಾಂಸರುಗಳ ಪ್ರತಿಯೊಂದು ತರ್ಕಶಾಸ್ತ್ರದ ಅಧ್ಯಯನ ಮತ್ತು ವಿದ್ವಾಂಸರುಗಳ ಅಗಾಧ Galaxy. ಇದೊಂದು ಮುಗಿಯಲಾರದ ಅಧ್ಯಯನದ ವಿಷಯ. ಪಾಪ, Google - Search – Select – Copy – Paste ಮಾಡಿ ಒಂದು ಲೇಖನವನ್ನು ಪ್ರಸ್ತುತ ಪಡಿಸುವುದೇ ತನ್ನನ್ನು ತಾನು ಅಖಂಡ ಬ್ರಹ್ಮಾಂಡ ಪಂಡಿತನೆಂದು ಬಿಂಬಿಸುವ ಪ್ರಯತ್ನವನ್ನು ಅಮೇರಿಕಾದ ಶಿಕಾಗೋದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಮತ್ತು ಆಂಧ್ರದಿಂದ ವಲಸೆ ಬಂದ ಆರಾಧ್ಯ…

0 Comments

ರವಿ ಹಂಜ್‌ ಎನ್ನುವ ಪಡಪೋಶಿಯ “ಬಸವರಾಜಕಾರಣ” ಎನ್ನುವ ಅಪಸವ್ಯ.ಭಾಗ-02: ಅರ್ಧಸತ್ಯ

. Every lie is two lies: The lie we tell others and The lie we tell ourselves to justify it.There is a story to justify this. A Woman walks into a butcher shop just before closing time and asks, do you still have chicken? The butcher opens his deep freezer, takes out his only chicken left and puts it on the weighing…

0 Comments

ರವಿ ಹಂಜ್‌ ಎನ್ನುವ ಪಡಪೋಶಿಯ “ಬಸವರಾಜಕಾರಣ” ಎನ್ನುವ ಅಪಸವ್ಯ. ಭಾಗ-01: ಮುನ್ನುಡಿ

ನಾನು ಕಾಶ್ಮೀರದ ಸನ್ಯಾಸಿನಿ ಲಲ್ಲೇಶ್ವರಿಯವರ ಕುರಿತು ಅಧ್ಯಯನ ಮಾಡುವಾಗ ಕಾಶ್ಮೀರದ ಆಗಮಿಕ ಶೈವರ ಕುರಿತು ಕೆಲವು ಮಾಹಿತಿಗಳು ಲಭಿಸಿದವು. ಅವರಲ್ಲಿ ಕೆಲವು ಆಗಮಿಕ ಶೈವರೆಂಬ ಬ್ರಾಹ್ಮಣರು ಮಧ್ಯಪ್ರದೇಶದ ಮೂಲಕ ಮೊದಲು ತಮಿಳುನಾಡಿಗೆ ವಲಸೆ ಬರುತ್ತಾರೆ. ತಮಿಳುನಾಡಿನ ಅರವತ್ತಮೂರು ಪುರಾತನರನ್ನು (ಅಂದರೆ ತ್ರಿಷಷ್ಟಿ ಪುರಾತನರನ್ನು) ಸ್ಥಳೀಯ ಶೈವ ಪಂಥವನ್ನು ಶುದ್ಧ ಶೈವಪಂಥವನ್ನಾಗಿ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ ಅಂದರೆ ಸಾರಾ ಸಗಟಾಗಿ ಆಪೋಷಣೆ ಮಾಡುತ್ತಾರೆ. ಅಲ್ಲಿನ ರಾಜರ ಆಡಳಿತದ ಚುಕ್ಕಾಣಿ ಬೇರೆಯವರ ಕೈ ವಶವಾದ ನಂತರ ಹೆದರಿಕೊಂಡು ಅಲ್ಲಿಂದ ಆಂಧ್ರಪ್ರದೇಶಕ್ಕೆ ಪಲಾಯನ ಮಾಡುತ್ತಾರೆ. ಆಂಧ್ರದಲ್ಲಿ “ಆರಾಧ್ಯ” ಎಂದು ತಮ್ಮನ್ನು ತಾವು…

1 Comment

ಡಾ. ವಿಜಯಲಕ್ಷ್ಮಿ ದೇಶಮಾನೆ ತಾಯಿಯ ಸೇವಾ ಭಾವಕ್ಕೆ ಒಲಿದ ಪದ್ಮಶ್ರೀ ಪ್ರಶಸ್ತಿ | ಶ್ರೀಮತಿ. ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ.

ಒಂದು ಖಾಸಗಿ ಟೀ. ವಿ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ “ತರಕಾರಿ ಮಾರೋದು ಇರಲಿ ಅಥವಾ ಸರ್ಜರಿ ಮಾಡೋದೇ ಇರಲಿ ಶ್ರದ್ಧೆ ಮತ್ತು ಕೆಲಸದ ಕುರಿತು ನಮಗಿರುವ ಪ್ರೀತಿ ಎಲ್ಲ ಗೌರವ ಹಾಗೂ ಖ್ಯಾತಿಯನ್ನು ತಂದು ಕೊಡುತ್ತದೆ” ಎಂದು ಹೇಳಿದವರು 2025 ರ ಪದ್ಮಶ್ರೀ ಪುರಸ್ಕೃತರಾದ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು. ಗುಲ್ಬರ್ಗದ ಕೊಳಗೇರಿಯಲ್ಲಿ ತರಕಾರಿ ಮಾರುತ್ತಿದ್ದ ಹೆಣ್ಣು ಮಗಳನ್ನು ಆಕೆಯ ಗಂಡನೇ ಆ ದಿನ ರಾತ್ರಿ ಆಕೆಯ ಕೊರಳಿನ ತಾಳಿಯನ್ನು ಕೊಡಲು ಕೇಳಿದ. ಇದ್ದುದು ಅದೊಂದೇ ಜೊತೆ ಚಿನ್ನದ ತಾಳಿ ಬೊಟ್ಟು. ಸಹಜವಾಗಿಯೇ ಸಂಪ್ರದಾಯಸ್ಥ ಮನಸ್ಥಿತಿಯ ಆ…

0 Comments