ಬಸವಣ್ಣನವರು ಪುನರ್ಜನ್ಮವನ್ನು ನಂಬಿದ್ದರೆ? | ಡಾ. ಬಸವರಾಜ ಸಬರದ, ಬೆಂಗಳೂರು.

ಬಸವಣ್ಣನವರು ಪುನರ್ಜನ್ಮವನ್ನು ನಂಬಿದ್ದರೆ? ಇದೊಂದು ಪ್ರಶ್ನೆ. ಆದರೆ ಇಂದು ಇದು ಪ್ರಶ್ನೆಯಾಗಿ ಉಳಿದಿಲ್ಲ. ಬಸವಣ್ಣನವರು ಪುನರ್ಜನ್ಮವನ್ನು ನಂಬಿರಲಿಲ್ಲವೆಂಬುದಕ್ಕೆ ಅನೇಕ ಆಕರಗಳು ಸಿಗುತ್ತವೆ. ಆದರೆ ಕೆಲವರು ಬಸವಣ್ಣನವರ ಪ್ರಕ್ಷಿಪ್ತ ವಚನಗಳನ್ನಿಟ್ಟುಕೊಂಡು ಬಸವಣ್ಣನವರು ಪುನರ್ಜನ್ಮವನ್ನು ನಂಬಿದ್ದರೆಂದು ಹೇಳಿದ್ದಾರೆ. ಬಸವ ತತ್ವದ ಕೇಂದ್ರವಾದ ಭಾಲ್ಕಿ ಹಿರೇಮಠ ಸಂಸ್ಥಾನ ತರುತ್ತಿರುವ "ಶಾಂತಿಕಿರಣ” ಮಾಸಿಕ ಪ್ರತಿಕೆಯಲ್ಲಿ (ಮೇ-2025) “ಬಸವಣ್ಣನವರ ವಚನಗಳಲ್ಲಿ ಜನ್ಮಾಂತರ ವಿಚಾರ" ಎಂಬ ಲೇಖನ ಪ್ರಕಟವಾಗಿದೆ. ಡಾ. ವಿ. ವಿ. ಹೆಬ್ಬಳ್ಳಿ ಎಂಬುವವರು ಈ ಲೇಖನವನ್ನು ಬರೆದಿದ್ದಾರೆ. ಇಂತಹ ಲೇಖನವನ್ನು ಪ್ರಕಟಿಸುವುದರ ಮೂಲಕ ಭಾಲ್ಕಿ ಹಿರೇಮಠ ಸಂಸ್ಥಾನ ಮತ್ತು ಆ ಪತ್ರಿಕೆಯ ಸಂಪಾದಕ…

0 Comments

ಕಲ್ಯಾಣ ಕರ್ನಾಟಕ ಪರಿಸರದ ಶರಣ ಸ್ಮಾರಕಗಳ ಐತಿಹಾಸಿಕ ಮಹತ್ವ | ಡಾ. ವೀರಶೆಟ್ಟಿ ಬಿ. ಗಾರಂಪಳ್ಳಿ, ಕಲಬುರಗಿ.

ಶರಣರ ಸಾಂಸ್ಕೃತಿಕ ಬದುಕು ಕರ್ನಾಟಕದ ಇತಿಹಾಸಕ್ಕೆ ಕಳಶಪ್ರಾಯ. ಅವರ ಈ ಸಾಂಸ್ಕೃತಿಕ ಬದುಕನ್ನು ಅವರು ನಲೆ ನಿಂತು ಹೋಗಿರುವ ಪ್ರದೇಶ ಹಾಗು ಆ ಪ್ರದೇಶದ ಪರಿಸರದಲ್ಲಿ ಅಭಿವ್ಯಕ್ತಿಗೊಂಡಿರುವ ವಿಚಾರಧಾರೆಗಳಲ್ಲಿ ಕಾಣಬಹುದು. ಶರಣರ ಸ್ಮಾರಕಗಳನ್ನು “ಲೋಕಾಂತ ಚಿಂತಕರ ಏಕಾಂತ ನೆಲೆಗಳೆನ್ನಬಹುದು”. ಮೃತ್ಯುಲೋಕವನ್ನೆ ಕರ್ತಾರನ ಕಮ್ಮಟವಾಗಿಸಿದ ಶರಣರ ಸ್ಮಾರಕಗಳು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹರಡಿಕೊಂಡಿವೆ. ಪರಂಪರಾಗತವಾಗಿ ಶರಣರು ಜನಿಸಿದ, ಕಾಯಕ ಮಾಡಿದ, ಧ್ಯಾನ ಮಾಡಿದ, ಐಕ್ಯ ಸ್ಥಳಗಳಾಗಿ, ಲಿಂಗದೀಕ್ಷೆ ನೀಡಿದ, ಧರ್ಮಪ್ರಚಾರ ಮಾಡಿದ, ಪ್ರವಚನ ಗೋಷ್ಠಿಗಳನ್ನು ನಡೆಸಿದ ಸ್ಥಳಗಳಾಗಿ ಅವುಗಳನ್ನು ಗುರುತಿಸಲಾಗಿದೆ. 12 ನೇ ಶತಮಾನದ ವಚನ ಚಳುವಳಿ ಕನ್ನಡ…

0 Comments

ವಚನ ಚಳುವಳಿ: ಸಾಂಸ್ಕೃತಿಕ ಮುಖಾಮುಖಿ | ಶ್ರೀಮತಿ. ಸುನೀತಾ ಮೂರಶಿಳ್ಳಿ, ಧಾರವಾಡ.

12 ನೇಯ ಶತಮಾನ ಎಂದರೆ ಇದು ಒಂದು ಅನ್ವೇಷಣೆಯ ಯುಗ. ಜಗತ್ತನ್ನು ಪಲ್ಲಟಗೊಳಿಸಿದ ಸಂಚಲನೆಯ ಯುಗವೂ ಹೌದು. ಆ ಕಾಲದ ಜಡಗೊಂಡ ಬದುಕನ್ನು ಉತ್ತಮಗೊಳಿಸಿ ಹೊಸ ಮೌಲ್ಯಗಳನ್ನು ರೂಪಿಸುವ ನಿಟ್ಟಿನಲ್ಲಿ ಬದುಕಿನ ಆದರ್ಶದ ರೀತಿಯೇ ಸಾಹಿತ್ಯವಾಗಿ ಹೊರಹೊಮ್ಮಿದ್ದು ಇತಿಹಾಸ. ಬದುಕಿನಿಂದ ಸಾಹಿತ್ಯ ಹಾಗೂ ಸಾಹಿತ್ಯದಿಂದ ಬದುಕು ಒಂದಕ್ಕೊಂದು ಜೀವದಾನ ಪಡೆಯುತ್ತಲೇ ಇಂದಿಗೂ ಜೀವಂತವಾಗಿರುವ ಅಪರೂಪದ ಜೀವನ ಮೌಲ್ಯ ಈ ವಚನಗಳು. ಆದ್ದರಿಂದ ಕನ್ನಡ ಸಾಹಿತ್ಯ ಪರಂಪರೆಯಲ್ಲಿ, ಐತಿಹಾಸಿಕ ಚರಿತ್ರೆಯಲ್ಲಿ ವಚನ ಯುಗವೆಂಬುದು ಒಂದು ಮುಖ್ಯ ಘಟ್ಟ. ಇದು ಪ್ರಾಮುಖ್ಯತೆ ಪಡೆಯಲು ಕಾರಣವೇನು? ಜಗತ್ತಿನ ಎಲ್ಲ ಚಳುವಳಿ-ಹೋರಾಟ ಸ್ವಾತಂತ್ರ‍್ಯಕ್ಕಾಗಿ,…

0 Comments

ಕರ್ನಾಟಕದ ಸಾಂಸ್ಕೃತಿಕ ನಾಯಕ: ಬಸವಣ್ಣನಿಂದ ಬದುಕಿತ್ತೀ ಲೋಕವೆಲ್ಲ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.

ಸರ್ಕಾರವು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಈ ನೆಲಕ್ಕೆ ಮತ್ತು ಈ ನಾಡಿಗೆ ಅರ್ಪಿಸಿದ ಒಂದು ಉತ್ಕೃಷ್ಟ ಗೌರವ ಆಗಿದೆ. ಪ್ರಸ್ತುತದಲ್ಲಿ ಇದು ಯಾವ ರೀತಿಯಾಗಿ ಔಚಿತ್ಯಪೂರ್ಣವಾಗಿದೆ ಎಂಬುದನ್ನು ಇಲ್ಲಿ ಚರ್ಚೆಗೆ ಎತ್ತಿಕೊಳ್ಳಲಾಗಿದೆ. ಮೊದಲಿಗೆ ಸಂಸ್ಕೃತಿಯ ಪರಿಭಾಷೆ ವ್ಯಾಖ್ಯಾನಿಸುವುದಾದರೆ; ಸಂಸ್ಕೃತಿ ಎಂದರೆ ಒಂದು ಸಮುದಾಯದ ಜೀವನ ವಿಧಾನ, ರೀತಿ-ನೀತಿ, ನಂಬಿಕೆ, ಆಚಾರ-ವಿಚಾರ, ಸಂಪ್ರದಾಯ, ಮೌಲ್ಯಗಳು, ನೈತಿಕತೆ ಇವೆಲ್ಲವುಗಳ ಒಟ್ಟಾರೆ ಮೊತ್ತ. ಡಿ. ವಿ. ಜಿ ಅವರ ಪ್ರಕಾರ ಪ್ರಕೃತಿ ಸಿದ್ಧವಾದ ಪದಾರ್ಥವನ್ನು ಮನುಷ್ಯ ವಿವೇಕದಿಂದ ಸೊಗಸುಗೊಳಿಸಿದರೆ ಅದು ಸಂಸ್ಕೃತಿ. ಸಂಸ್ಕೃತಿಯು ಬರೀ ಬಾಯಿ ಮಾತಿನ…

0 Comments

ಆಧುನಿಕ ವಚನಕಾರರ ಸಾಮಾಜಿಕ ಚಿಂತನೆಗಳು | ಪ್ರೊ. ರಾಜಶೇಖರ ಜಮದಂಡಿ, ಮೈಸೂರು.

ಸಾಮಾನ್ಯವಾಗಿ “ವಚನ” ಎಂಬುದಕ್ಕೆ ಮಾತು, ನುಡಿ, ಪ್ರತಿಜ್ಞೆ, ಭಾಷೆ, ಕೊಟ್ಟಮಾತು, ಉಪದೇಶ, ನುಡಿಗಟ್ಟು, ಸಲಹೆ ಎಂದೆಲ್ಲಾ ಕರೆಯಬಹುದು. ಆಗ 12 ನೇ ಶತಮಾನದ ಬಸವಾದಿ ಶರಣರ ವಚನಗಳು ನೆನಪಾಗುತ್ತವೆ. ಅವರು ಸಮಾಜವನ್ನು ತಿದ್ದುವುದಕ್ಕಾಗಿ ವಚನ ರಚನೆ ಮಾಡಿದರೇ ಹೊರತು ಸಾಹಿತ್ಯಕ್ಕಾಗಿ ಅಲ್ಲ. ಅವರ ವಚನಗಳು ದೇಶಕಾಲಾತೀತವಾಗಿರುವುದಲ್ಲದೆ ಈಚೆಗೆ ಭಾಷಾತೀತವಾಗಿ ದೇಶವಿದೇಶಗಳ ಭಾಷೆಗಳಲ್ಲಿ ಅನುವಾದವಾಗಿ ಎಲ್ಲರೂ ಓದುವಂತೆ ಅನುಕೂಲ ಕಲ್ಪಿಸಿರುವುದು ಸ್ತುತ್ಯಾರ್ಹ. ಇದರ ಜಾಡನ್ನು ಹಿಡಿದು 20 ನೇ ಶತಮಾನದಲ್ಲಿ ಆಧುನಿಕ ಕನ್ನಡ ವಿದ್ವಾಂಸರು ಪ್ರಸ್ತುತ ಸಮಾಜವನ್ನು ತಿದ್ದುವ ಪ್ರಯತ್ನದಲ್ಲಿ ತಮ್ಮದೇ ಆದ ವಿಚಾರಗಳನ್ನು ವಚನ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.…

1 Comment

ಬಸವಾದಿ ಶಿವಶರಣ-ಶರಣೆಯರ ವಚನಗಳಲ್ಲಿ ಸಖ್ಯಭಾವ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಹಲವಾರು ಚಿಂತನೆಗಳಿಗೆ ತೆರೆದುಕೊಳ್ಳುವ ವಚನ ಸಾಹಿತ್ಯ ಬಹು ಮೌಲ್ವಿಕವಾದ ವಿಷಯಗಳನ್ನು ತನ್ನೊಳಗೆ ಬಚ್ಚಿಟುಕೊಂಡಿದೆ. ಇಂತಹ ಅಮೂಲ್ಯವಾದ ವಚನ ಸಾಹಿತ್ಯದ ಗಂಟನ್ನು ಬಿಚ್ಚುತ್ತಾ ಹೋದಂತೆ ಒಂದೊಂದು ವಚನವೂ ಕೂಡಾ ಚಿಂತಕರ, ವಿಮರ್ಶಕರ, ಓದುಗರ ಬುದ್ಧಿಗೆ ಸವಾಲಾಗಿ ನಿಲ್ಲುತ್ತದೆ. “ವಚನ ಸಾಹಿತ್ಯದಲ್ಲಿ ಏನಿದೆ?” ಎಂಬ ಬಾಲಿಷ ಪ್ರಶ್ನೆಗಳಿಗೆ “ವಚನ ಸಾಹಿತ್ಯದಲ್ಲಿ ಏನಿಲ್ಲ?” ಎಂಬ ಪ್ರಶ್ನೆಯೇ ಉತ್ತರವಾಗಿದೆ. ಇಂತಹ ತಾರ್ಕಿಕವಾದ ಪ್ರಶ್ನೋತ್ತರಗಳ ಹಿನ್ನಲೆಯಲ್ಲಿ ಮತ್ತೊಮ್ಮೆ ಪ್ರಶ್ನಾತೀತವಾಗಿ ಕಾಡುವ ವಿಷಯ “ವಚನ ಸಾಹಿತ್ಯದಲ್ಲಿ ಸಖ್ಯಭಾವ” ಎಂಬುದು ಕೂಡ ಒಂದಾಗಿದೆ. ಭೂಮಿಯ ಮೇಲೆ ನಾವು ಮನುಷ್ಯರಾಗಿ ಹುಟ್ಟಿದ್ದೇವೆ ಎಂದ ಮೇಲೆ ಈ ಬದುಕನ್ನು ಸಮರ್ಥವಾಗಿ…

0 Comments

ಶಿವಯೋಗಿ ಶ್ರೀ ಸಿದ್ದರಾಮೇಶ್ವರರ ವಚನಗಳ ಪ್ರಸ್ತುತತೆ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ವಚನ ಸಾಹಿತ್ಯ ಮತ್ತು ಬಸವ ತತ್ವ ಎನ್ನುವುದು ಒಂದು ಜೀವನ ಕ್ರಮ. ಕನ್ನಡದ ಮೇರುತನವನ್ನು ಬಿಂಬಿಸುವ ಅದರ ಪ್ರಭಾವ ಅಪಾರ. ಹೀಗಾಗಿ ಶರಣ ಸಂಸ್ಕೃತಿಯ ಬಯಲಲ್ಲಿ ಬಸವ ತತ್ವ ವಿಶಾಲವಾಗಿ ಬೆಳೆದಿದೆ. ತಾತ್ವಿಕವಾಗಿ ಸಾಮಾಜಿಕ ಮತ್ತು ಧಾರ್ಮಿಕವಾಗಿ ನಾವು ಪಡೆದುಕೊಂಡಿರುವ ಶರಣ ಧರ್ಮದ ಆಧ್ಯಾತ್ಮಿಕ ತತ್ವವು ಆರೋಗ್ಯಪೂರ್ಣ ಸಮಾಜವನ್ನು ನಮಗೆ ನೀಡಿದೆ. ಹೀಗಾಗಿ ಬಸವಾದಿ ಶರಣರ ಬೌದ್ಧಿಕ ಚಿಂತನೆಗಳ ಅನುಸಂಧಾನ ಮಾಡುವ. ಪುನರ್ ಮೌಲ್ಯೀಕರಣ ಮಾಡುವ ಅಗತ್ಯತೆ ಇಂದಿದೆ. ನಮ್ಮ ವರ್ತಮಾನ ಕಾಲದ ಒಳನೋಟ ಜನಪರವಾದ ಚಿಂತನೆಗಳು ತಾತ್ವಿಕವಾಗಿ ಹೇಗೆ ನೆಲೆಗೊಂಡಿವೆ ಎಂಬುದನ್ನು ಶ್ರೀ ಸಿದ್ದರಾಮೇಶ್ವರರ ವಚನಗಳಲ್ಲಿ…

0 Comments

ಕನ್ನಡ ಸಾಹಿತ್ಯ ಪರಿಷತ್ತಿಗಿಂತ ಮುಂಚೆ ಡ್ಯೆಪುಟಿ ಚೆನ್ನಬಸಪ್ಪನವರಿಂದ ಪ್ರವರ್ಧಮಾನಕ್ಕೆ ಬಂದ ಕನ್ನಡಿಗರ ಸಾಂಸ್ಕೃತಿಕ ಪ್ರಾತಿನಿಧಿಕ ಸಂಸ್ಥೆಧಾರವಾಡದ ಕನ್ನಡ ಗಂಡು ಮಕ್ಕಳ ತರಬೇತಿ ಶಾಲೆ | ಶ್ರೀ. ಮಹೇಶ ಚನ್ನಂಗಿ | ಚನ್ನಮ್ಮನ ಕಿತ್ತೂರು, ಬೆಳಗಾವಿ ಜಿಲ್ಲೆ.

05.05.1915 ರಂದು ಕರ್ನಾಟಕ ಸಾಹಿತ್ಯ ಪರಿಷತ್ತು ಬೆಂಗಳೂರಿನ ಶಂಕರಪುರ ಬಡಾವಣೆಯಲ್ಲಿ ಮೈಸೂರಿನ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಸ್ಥಾಪನೆಯಾಗಿರುವುದು ಜಗಜ್ಜಾಹೀರಾದ ಸಂಗತಿ. ಇದರ ಕೇಂದ್ರ ಕಚೇರಿ ಬೆಂಗಳೂರು ನಗರದ ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿದೆ 18 ವರ್ಷ ಮೇಲ್ಪಟ್ಟ ಓದು ಬರಹ ಬರುವರೆಲ್ಲರೂ ಇದರ ಸದಸ್ಯರಾಗಬಹುದು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಮೈಸೂರಿನ ನಾಲ್ವಡಿ ಕೃಷ್ಣರಾಜರ ಒಡೆಯರು ಎಷ್ಟೊಂದು ಹಣಕಾಸಿನ ಸಹಾಯವನ್ನು ನೀಡಿದ್ದಾರೆಯೋ ಅಷ್ಟೇ ಪ್ರಮಾಣದಲ್ಲಿ ಸಹಾಯವನ್ನು ಬೆಳಗಾವ ಜಿಲ್ಲೆಯ ಮಹಾದಾನಿ ರಾಜ ಲಖಮನಗೌಡ ಸರದೇಸಾಯಿ ಅವರು ನೀಡಿದ್ದಾರೆ. ಸಂಸ್ಥಾಪನೆಯ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಕನ್ನಡ…

0 Comments

ಡಾ. ಬಸವರಾಜ ಅನಗವಾಡಿಯವರು ನಿರ್ಮಿಸಿದ “ಬಸವ ಶರಣ ಕಲಾ ಸಂಗ್ರಹಾಲಯ” | ಕೂಡಲಸಂಗಮ, ಬಾಗಲಕೋಟೆ ಜಿಲ್ಲೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದ ಮುಖ್ಯರಸ್ತೆಯಲ್ಲಿ “ಬಸವ ಶರಣ ಕಲಾ ಸಂಗ್ರಹಾಲಯ” ಎಂಬ ನಾಮಫಲಕವನ್ನು ನೋಡಿ ಒಳಗೆ ಕಾಲಿರಿಸಿದರೆ. ಅಲ್ಲಿ ಎಡಗಡೆ ಗೋಡೆಗೆ ಹಬ್ಬಿದ ಬಸವಣ್ಣ, ಅವನ ಅನುಯಾಯಿಗಳ ಶಿಲ್ಪಗಳನ್ನು ಕಾಣಬಹುದು. ಸೌರಮಂಡಲಕ್ಕೆ ಸೂರ್ಯನು ಕೇಂದ್ರವಾಗಿರುವಂತೆ, ಇಲ್ಲಿ ಬಸವಣ್ಣ ಸೂರ್ಯನೋಪಾದಿಯಲ್ಲಿ ಭೂಮಿಯ ಮೇಲೆ ಕುಳಿತು ತನ್ನ ಅರಿವಿನ ಕಿರಣಗಳನ್ನು ಸೂಸುತ್ತಾ, ವಚನಗಳನ್ನು ಬರೆಯುವುದರಲ್ಲಿ ನಿರತರಾಗಿದ್ದಾರೆ. ಗೋಡೆಗಂಟಿದ ಚಿತ್ರ-ಶಿಲ್ಪಗಳ ಮೇಲೆಲ್ಲ ಅಗತ್ಯವಾದ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಮಂದವಾದ ಬೆಳಕು. ಅಲ್ಲಿನ ಬೆಳಕಿನ ವ್ಯವಸ್ಥೆ ಚಿತ್ರ-ಶಿಲ್ಪಗಳು ಮಾತ್ರ ಸ್ಪಷ್ಟವಾಗಿ ಕಾಣುವಂತೆ Design ಮಾಡಲಾಗಿದೆ. ಇದು ನಮ್ಮನ್ನು 12…

0 Comments

ಅಲೌಕಿಕತೆಯಲ್ಲಿ ಲೌಕಿಕತೆ / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಈ ಜಗತ್ತು ಮಿಥ್ಯ, ನಶ್ವರ, ಸಂಸಾರ ಅನ್ನೊದು ಒಂದು ಘೊರಾರಣ್ಯ ಎಂಬ ವಾದಗಳನ್ನು ಅಲ್ಲಗಳೆದು ಈ ಜಗತ್ತೇ ಒಂದು ಸಾಧನಾ ರಂಗ, ಸಂಸಾರ ಅನ್ನೊದು ಸಾಧನೆಗೆ ವೇದಿಕೆ ಅಂತ ನಂಬಿದೋರು 12 ನೇ ಶತಮಾನದ ಬಸವಾದಿ ಶಿವಶರಣರು. ಪ್ರಪಂಚದಲ್ಲಿದ್ದು ಸಂಸಾರದ ಸುಳಿಯಲ್ಲಿ ಸುತ್ತುತ್ತಲೇ ದಡ ಸೇರಬೇಕೆಂಬುದು ಶರಣರ ಅಭಿಪ್ರಾಯ ಮತ್ತು ಅದೇ ರೀತಿ ನಡೆದಿದ್ದಾರೆ ಕೂಡ. ಗೃಹಸ್ಥ ಜೀವನ ಬೇಡವೆಂದು ಅದಕ್ಕೆ ಬೆನ್ನು ತಿರುಗಿಸಿದ ಕೆಲವೇ ಶಿವಶರಣರಲ್ಲಿ ಸಿದ್ಧರಾಮರು, ಚೆನ್ನಬಸವಣ್ಣನವರು ಮತ್ತು ವೀರ ವಿರಾಗಿಣಿ ಮಹಾದೇವಿಯಕ್ಕ ಪ್ರಮುಖರಾಗಿದ್ದಾರೆ. ಆದರೆ ಇವರ‍್ಯಾರೂ ಸಂಸಾರ ಬಿಟ್ಟು ಸನ್ಯಾಸಿಗಳಾಗಿ ಗುಹಾಂತರ್ಗತರಾಗಿ ಉಳಿಯಲಿಲ್ಲ…

0 Comments