ಶಿವಯೋಗಿ ಶ್ರೀ ಸಿದ್ದರಾಮೇಶ್ವರರ ವಚನಗಳ ಪ್ರಸ್ತುತತೆ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.
ವಚನ ಸಾಹಿತ್ಯ ಮತ್ತು ಬಸವ ತತ್ವ ಎನ್ನುವುದು ಒಂದು ಜೀವನ ಕ್ರಮ. ಕನ್ನಡದ ಮೇರುತನವನ್ನು ಬಿಂಬಿಸುವ ಅದರ ಪ್ರಭಾವ ಅಪಾರ. ಹೀಗಾಗಿ ಶರಣ ಸಂಸ್ಕೃತಿಯ ಬಯಲಲ್ಲಿ ಬಸವ ತತ್ವ ವಿಶಾಲವಾಗಿ ಬೆಳೆದಿದೆ. ತಾತ್ವಿಕವಾಗಿ ಸಾಮಾಜಿಕ ಮತ್ತು ಧಾರ್ಮಿಕವಾಗಿ ನಾವು ಪಡೆದುಕೊಂಡಿರುವ ಶರಣ ಧರ್ಮದ ಆಧ್ಯಾತ್ಮಿಕ ತತ್ವವು ಆರೋಗ್ಯಪೂರ್ಣ ಸಮಾಜವನ್ನು ನಮಗೆ ನೀಡಿದೆ. ಹೀಗಾಗಿ ಬಸವಾದಿ ಶರಣರ ಬೌದ್ಧಿಕ ಚಿಂತನೆಗಳ ಅನುಸಂಧಾನ ಮಾಡುವ. ಪುನರ್ ಮೌಲ್ಯೀಕರಣ ಮಾಡುವ ಅಗತ್ಯತೆ ಇಂದಿದೆ. ನಮ್ಮ ವರ್ತಮಾನ ಕಾಲದ ಒಳನೋಟ ಜನಪರವಾದ ಚಿಂತನೆಗಳು ತಾತ್ವಿಕವಾಗಿ ಹೇಗೆ ನೆಲೆಗೊಂಡಿವೆ ಎಂಬುದನ್ನು ಶ್ರೀ ಸಿದ್ದರಾಮೇಶ್ವರರ ವಚನಗಳಲ್ಲಿ…