ವಚನ ಸಾಹಿತ್ಯ-ಸಂಶೋಧನೆಯ ಸವಾಲುಗಳು | ಡಾ. ವೀರೇಶ ಬಡಿಗೇರ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

“No Source, No Research” ಎನ್ನುವಂತೆ ಸಂಶೋಧನೆಗೆ ಆಕರಗಳೇ ಪ್ರಮುಖ ಎಂದು ನಂಬಲಾಗಿದೆ. ಇದರಲ್ಲಿ ಎರಡು ಪ್ರಕಾರಗಳನ್ನು ಗುರುತಿಸಬಹುದು. ಬೌದ್ಧಿಕ ಆಕರಗಳು. ವಚನಗಳ ಅಂತಃಸಂಭಾವ್ಯತೆಗಳು. ವಚನಕಾರರಿಗೆ ಸಂಬಂಧಿಸಿದಂತೆ ಶಾಸನಗಳು, ಐತಿಹ್ಯಗಳು, ಸ್ಥಳ ಪುರಾಣಗಳು, ಸಂಪ್ರದಾಯಗಳು, ಇತಿಹಾಸದ ಆಕರಗಳು, ಜನಪದ ಹಾಗೂ ಶಿಷ್ಟ ಪುರಾಣಗಳು ಒಂದು ರೀತಿಯ ಆಕರಗಳಾದರೆ, ವಚನಗಳೇ ಕಟ್ಟಿಕೊಡುವ ಆಂತರಿಕ ಸಾಕ್ಷ್ಯಗಳು ಇನ್ನೊಂದು ರೀತಿಯ ಆಕರಗಳು. ಇದನ್ನೇ ಅಂತರ್‌ಸಂಭಾವ್ಯತೆ, ಅಂತರ್‌ಪಠ್ಯೀಕರಣ ಎಂದು ಕರೆಯಲಾಗುತ್ತದೆ. ಒಂದು ವಚನವೇ ಪಠ್ಯವಾಗುವ, ಆ ಪಠ್ಯದಲ್ಲಿಯೇ ಹಲವು ಪಠ್ಯಗಳಿರುವ ಹಲವು ಆಲೋಚನೆಗಳಿರುವ ಸಂಗತಿಯನ್ನು ಗಮನಿಸಬಹುದು. ಸಮಸ್ಯೆ ಒಂದು ಸಾಮಾನ್ಯವಾಗಿ ವಚನ ಸಂಸ್ಕೃತಿಯನ್ನು…

0 Comments