ಡಾ. ಎಂ. ಎಂ. ಕಲಬುರ್ಗಿಯವರ ಸಂಶೋಧನಾ ಕ್ರಮಕ್ಕೊಂದು ಮಾದರಿ | ಡಾ. ಬಸವರಾಜ ಸಾದರ, ಬೆಂಗಳೂರು.

‘ಸಂಶೋಧನೆ ಎನ್ನುವುದು ಅಲ್ಪವಿರಾಮ, ಅರ್ಧವಿರಾಮಗಳ ಮೂಲಕ ಪೂರ್ಣವಿರಾಮಕ್ಕೆ ಸಾಗುವ ಪ್ರಕ್ರಿಯೆಯಾಗಿದೆ’ ಎಂಬುದು ಡಾ. ಎಂ. ಎಂ. ಕಲಬುರ್ಗಿ ಅವರು ಸದಾ ಹೇಳುತ್ತಿದ್ದ ಅರ್ಥಪೂರ್ಣ ಮಾತು. ಇಂಥ ಸಂಶೋಧನೆಯ ‘ಮಾರ್ಗ’ ಕ್ಕೆ ಅವರು ಬಳಸಿಕೊಳ್ಳುತ್ತಿದ್ದ ಆಕರ, ಪರಿಕರ, ಸಾಕ್ಷಿ, ಆಧಾರ ಮತ್ತು ಪೂರಕ ಮಾಹಿತಿಗಳು ಒಂದೇ ಎರಡೇ! ಇಂಥದ್ದೆಲ್ಲ ಎಷ್ಟೇ ಇದ್ದರೂ ಮೊದಲು ಅದನ್ನೆಲ್ಲ ಗುಂಪುಗೂಡಿಸಿ, ಹಾಗೆ ಗುಂಪುಗೂಡಿಸಿದ್ದನ್ನೆಲ್ಲ ತೂರಿ, ಕೇರಿ, ಜರಡಿ ಹಿಡಿದು ಪರೀಕ್ಷಿಸಿ, ಸತ್ಯದ ಒರೆಗಲ್ಲಿಗೆ ಹಚ್ಚಿ, ಆಂತರಿಕ ಮತ್ತು ಬಾಹ್ಯ ವಿದ್ಯಮಾನಗಳೊಂದಿಗೆ ತಾಳೆ ಹಾಕಿ, ಒಟ್ಟಾರೆ ಅದರಲ್ಲಿರಬಹುದಾದ ವಾಸ್ತವವನ್ನು ಹೆಕ್ಕಿ ತೆಗೆದು ಒಂದು ಪೂರ್ಣವಿರಾಮದ…

0 Comments

ಶ್ರೀ. ವಿ. ಬಿ. ಚಿನಿವಾಲ ಎಂಬ ದೈತ್ಯ ಉದ್ಯಮಿ‌ / ಡಾ. ಸಿದ್ದು ಯಾಪಲಪರವಿ, ಕಾರಟಗಿ

ಕಾರಟಗಿಯ ಉದ್ಯಮದ ಹಾದಿ ಸಾವಿರಾರು ಕೋಟಿ ತಲುಪಲು ಪ್ರಮುಖ ಕಾರಣೀಕರ್ತರಾದ ಶ್ರೀ. ವೀರಭದ್ರಪ್ಪ ಚಿನಿವಾಲ ಸದಾ ಸ್ಮರಣೀಯರು. ಕಳೆದ ಲೇಖನದಲ್ಲಿ ಪ್ರಸ್ತಾಪಿಸಿದ ನಮ್ಮೂರಿನ ಪಂಚ ಪಾಂಡವರಲ್ಲಿ ಈ ವೀರಭದ್ರಪ್ಪ ಚಿನಿವಾಲ ಹಿರಿಯರು. ಜಗತ್ತಿನ ಪ್ರಸಿದ್ಧ ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ಅಧ್ಯಯನಕ್ಕೆ ಮಾದರಿಯಾಗುವ ವ್ಯಕ್ತಿತ್ವ ಇವರದು. ಕಲಿತದ್ದು ತುಂಬ ಕಡಿಮೆ. ಆದರೆ ಅಪಾರ ಸ್ಮರಣೆ ಶಕ್ತಿ ಮತ್ತು ವ್ಯವಹಾರ ಜ್ಞಾನ. ಪ್ರತಿಯೊಬ್ಬ ವ್ಯಕ್ತಿಯ ಬದುಕನ್ನು ನಾವು ಹಲವಾರು ಆಯಾಮಗಳಲ್ಲಿ ಅವಲೋಕಿಸಬಹುದು. ಮೊದಲನೆಯದು ವೈಯಕ್ತಿಕ, ಔದ್ಯೋಗಿಕ, ಸಾಮಾಜಿಕ ಹಾಗೂ ಸಾರ್ವಜನಿಕ. ವೈಯಕ್ತಿಕವಾಗಿ ನೋಡುವುದಾದರೆ ಇವರದು ಅತ್ಯಂತ ಸರಳ ಬದುಕು. ತಮ್ಮ…

0 Comments

ನಾಗರಹಳ್ಳಿಯ ನಾನಾಗೌಡ ಪಾಟೀಲ/ವಿಶ್ವಾರಾಧ್ಯ ಸತ್ಯಂಪೇಟೆ

ಸಿಂದಗಿ ತಾಲೂಕಿನ ನಾಗರಹಳ್ಳಿ ಗ್ರಾಮದ ಶ್ರೀ ನಾನಾಗೌಡ ಪಾಟೀಲರು ಕೃಷಿಕರು. ಕೃಷಿಯನ್ನು ಮಾಡುತ್ತಲೆ ಬದುಕಿನ ಕೃಷಿಯಲ್ಲಿ ಬಸವ ತತ್ವದ ಬೀಜ ಉತ್ತಿ ಫಲವ ಬಯಸುವವರು. ವಾರ ದಿನ ತಿಥಿ ಮಿತಿ ನೋಡದೆ ಪಂಚಕದ ದಿನವೆ ತಮ್ಮ ತೋಟದಲ್ಲಿ ಬಾವಿ ತೆಗೆಸಿ, ಅಪಾರ ಜಲರಾಶಿ ಹೊರ ಬಂದಾಗ ಇಡೀ ನಾಡವರೆ ಬೆಕ್ಕಸ ಬೆರಗಾದರು. ತಮ್ಮ ಹೊಲದಲ್ಲಿ ದ್ರಾಕ್ಷಿ ಕೃಷಿಯನ್ನು ಮಾಡಿ ನಾಡಿಗೆ ಸಿಹಿ ಉಣಿಸಿದವರು. ಇದೆ ರೀತಿಯಲ್ಲಿಯೆ ತಾವು ಅರಿತುಕೊಂಡ ಸತ್ಯ ಫಲವಾದ ಶರಣರ ವಚನ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಉತ್ಸಹ ಹೊಂದಿದ್ದಾರೆ. ನಾಡಿನ ಯಾವ ಭಾಗದಲ್ಲಿಯೆ…

0 Comments

ಡಾ. ಕಲ್ಯಾಣಮ್ಮ ಲಂಗೋಟಿ ಮತ್ತು ಪ್ರೋ. ಸಿದ್ಣಣ್ಣ ಲಂಗೋಟಿ ಶರಣ ದಂಪತಿಗಳು – “ಸಿದ್ಧ ಕಲ್ಯಾಣ ಪರಿಶುದ್ಧ ಕಲ್ಯಾಣ”.

ತುಂಬಿದ ಸಭೆಯಲ್ಲಿ ರಾಜ ತನ್ನ ಎಲ್ಲ ಮಂತ್ರಿಗಳನ್ನುದ್ದೇಶಿಸಿ, ನಮ್ಮ ರಾಜ್ಯದ ಸರ್ವಾಂಗೀಣ ಏಳಿಗೆಗೆ ಕಾರಣರಾದವನ್ನು ಗುರುತಿಸಿರಿ. ಅವರನ್ನು ನಾನು ಸನ್ಮಾನಿಸಬೇಕು ಎಂದು ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸುತ್ತಾನೆ. ಒಬ್ಬ ಮಂತ್ರಿ ನಮ್ಮ ರಾಜ್ಯದಲ್ಲಿರುವ ಇಂಜನೀಯರುಗಳಿಗೆ ಇದರ ಶ್ರೇಯಸ್ಸು ತಲುಪಬೇಕು. ಏಕೆಂದರೆ ಈ ಕೋಟೆ, ಅರಮನೆ, ರಸ್ತೆಗಳು, ಆಣೆಕಟ್ಟುಗಳು ಮತ್ತು ನೀರಾವರಿ ಯೋಜನೆಗಳನ್ನು ಮಾಡಿ ರಾಜ್ಯವನ್ನು ಸಮೃದ್ಧಗೊಳಿಸಿದ್ದಾರೆ. ಅಂಥ ಇಂಜನೀಯರುಗಳಲ್ಲಿ ಶ್ರೇಷ್ಠರಾದವರನ್ನು ಈಗಲೇ ಗುರುತಿಸಿ ಕರೆತನ್ನಿ ಎಂದು ರಾಜ ಆಜ್ಞೆ ಮಾಡುತ್ತಾನೆ. ಆದರೆ ಇನ್ನೊಬ್ಬ ಮಂತ್ರಿ ವೈದ್ಯರು ಈ ರಾಜ್ಯವನ್ನು ಸ್ವಸ್ಥವಾಗಿಡುವಲ್ಲಿ ಶ್ರಮ ವಹಿಸಿದ್ದಾರೆ ಎಂದಾಗ ಒಬ್ಬ ಶ್ರೇಷ್ಠ…

0 Comments

ಡಾ. ಶೀಲಾದೇವಿ ಮಳಿಮಠ-ಜ್ಞಾನದಿಂದ ಅನುಪಮ ಸುಜ್ಞಾನದೆಡೆಗೆ ಕೊಂಡೊಯ್ಯುವ ಚಿಂತಾಮಣಿ

ಅಖಂಡ ಮಂಡಲಾಕಾರಂ | ವ್ಯಾಪ್ತಂ ಯೇನ ಚರಾಚರಂ ||ತತ್ಪದಂ ದರ್ಶಿತಂ ಯೇನ | ತಸ್ಮೈ ಶ್ರೀ ಗುರವೇ ನಮಃ ‖ ಅಜ್ಞಾನ ತಿಮಿರಾಂಧಸ್ಯ | ಜ್ಞಾನಾಂಜನ ಶಲಾಕಯಾ ||ಚಕ್ಷುಃ ಉನ್ಮೀಲಿತಂ ಯೇನ | ತಸ್ಮೈ ಶ್ರೀಗುರವೇ ನಮಃ ‖ ಗುರು ಬ್ರಹ್ಮಾ ಗುರುರ್ವಿಷ್ಣುಃ | ಗುರು ದೇವೋ ಮಹೇಶ್ವರಃ ||ಗುರು ಸಾಕ್ಷಾತ್ ಪರಬ್ರಹ್ಮ | ತಸ್ಮೈ ಶ್ರೀಗುರವೇ ನಮಃ ‖ Primary objective of education is to make children fearless  - Swami Vivekananda “ಶಿಕ್ಷಣದ ಮೂಲಭೂತ ಉದ್ದೇಶ ಅಂದರೆ ವಿದ್ಯಾರ್ಥಿಗಳನ್ನು ಧೈರ್ಯವಂತರನ್ನಾಗಿ ಮಾಡುವುದು”.…

0 Comments

ಡಾ. ಸರ್ವಮಂಗಳಾ ಸಕ್ರಿ, ರಾಯಚೂರು

16 ನೇ ವರ್ಷಕ್ಕೆ ಮದುವೆಯಾಗಿ, ಇಬ್ಬರು ಮಕ್ಕಳ ತಾಯಿಯಾದ ನಂತರ ಪುನಃ ಓದುವ ಹಂಬಲದೊಂದಿಗೆ, ಎಲ್ಲರ ವಿರೋಧದ ನಡುವೆಯೂ PUC ಮಾಡಿ, ನಂತರ B.A. ಮತ್ತು M.A. ಮಾಡಿ, ತದನಂತರ ಸಂಶೋಧನೆ ಮಾಡಿ Ph D ಪದವಿಯನ್ನೂ ಸಹ ಪಡೆದು, ಕಾಲೇಜಿನಲ್ಲಿ ಉಪನ್ಯಾಸಕಿಯಾದ ಸಂಘರ್ಷಪೂರ್ಣ ಕಥೆ ಕೇಳಿದರೆ ಯಾವುದೋ ಅನಂತನಾಗ ಮತ್ತು ಲಕ್ಷ್ಮಿ ಅಭಿನಯಿಸಿದ ಕೌಟುಂಬಿಕ ಚಲನಚಿತ್ರದಂತೆ ಭಾಸವಾಗುತ್ತದಲ್ಲವೇ. ಇಲ್ಲ, ಇದು ನಿಜ ಜೀವನದ ಸಾಹಸಪೂರ್ಣ ಕಥೆಯ ನೈಜ ನಿರೂಪಣೆ. ಇಂದಿನ ಕಥೆಯ ನಾಯಕಿ ಹಾಗೂ ಇಂದಿನ ವಿಶೇಷ ಅತಿಥಿ ಸಾಹಸೀ ಸೃಜನಶೀಲ ಸಂಶೋಧನಾತ್ಮಕ ಬರಹಗಾರರಾದ ರಾಯಚೂರಿನ…

1 Comment

ಡಾ. ರಾಜೇಶ್ವರಿ ಶೀಲವಂತ

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಈ ಅನುಭಾವದ ಮಾತನ್ನೇ ಇನ್ನೂ ಸ್ವಲ್ಪ ಮುಂದೆ ತೆಗೆದುಕೊಂಡು ಹೋದರೆ ಇವತ್ತಿನ ನಮ್ಮ ವಿಶೇಷ ಅತಿಥಿಯ ಅದ್ಭುತ ಪರಿಚಯ ನಮಗಾಗುತ್ತದೆ. ಒಂದು M. Phil ಪ್ರಭಂಧ, ಒಂದು Ph.D ಪ್ರಭಂಧ, ಒಂದು ಪ್ರಸಾರಾಂಗ ಮಾಲಿಕೆಯ ಗ್ರಂಥ. Ph.D ಪಡೆದ ಬೀಳಗಿ ತಾಲ್ಲೂಕಿನ ಪ್ರಪ್ರಥಮ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಹೀಗೆ ಕಲಿಯುವುದರ ಜೊತೆಗೆ ವಿಶ್ವ ವಿದ್ಯಾಲಯವನ್ನೇ ತಮ್ಮೊಂದಿಗೆ ಸಮ್ಮಿಳಿತಗೊಳಿಸಿ ಸಂಶೋಧನೆಗೆ ಒಂದು ಮೌಲ್ವಿಕ ಅರ್ಥ ತಂದುಕೊಟ್ಟ ಇಂದಿನ ವಿಶೇಷ ಅತಿಥಿ ನಮ್ಮ “ಅಕ್ಕನ ಅರಿವು” ಬಳಗದ ಸದಸ್ಯೆ ಡಾ. ರಾಜೇಶ್ವರಿ. ವೀ.…

0 Comments

ಶ್ರೀಮತಿ ರಾಜಶ್ರೀ ಥಳಂಗೆ, ಸೊಲ್ಲಾಪುರ.

 ಹನ್ನೆರಡನೇ ಶತಮಾನದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಕರ್ಮಭೂಮಿ ಸೊನ್ನಲಿಗೆ. ಬಹಳ ಪ್ರಾಚೀನ ಇತಿಹಾಸವಿರುವ ಈ ನಗರ ಯಾದವರ ಆಳ್ವಿಕೆಯವರೆಗೂ ಸೊನ್ನಲಿಗೆ, ಸೊನ್ನಲಾಪುರ, ಸಂದಲಾಪುರ ಎಂಬ ಹೆಸರಿನಿಂದ ಗುರುತಿಸಲಾಗುತ್ತಿತ್ತು. ಹದಿಮೂರನೇ ಶತಮಾನದ ಅಂತ್ಯಭಾಗದಲ್ಲಿ ಸೊಲ್ಲಾಪುರ ಹೆಸರನ್ನು ಪಡೆಯಿತು ಎಂದು ಶಿಲಾ ಶಾಸನಗಳಿಂದ ತಿಳಿದು ಬರುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತಲೂ ಮುಂಚೆ, ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಸೊಲ್ಲಾಪುರದಲ್ಲಿ 06.04.1930 ರಲ್ಲಿ ನಗರಸಭೆಯ ಮೇಲೆ ಪ್ರಪ್ರಥಮ ಬಾರಿ ತ್ರಿವರ್ಣ ಧ್ವಜವನ್ನು ಹಾರಿಸಿದ ಕೀರ್ತಿ ಸೊಲ್ಲಾಪುರಕ್ಕೆ ಸಲ್ಲಬೇಕು. ತದನಂತರ ಧ್ವಜ ಹಾರಿಸಿದ ನಾಲ್ಕೂ ಜನರನ್ನು ನೇಣಿಗೇರಿದ್ದು ಇತಿಹಾಸ. ಅದಕ್ಕೆಂದೆ ಸೊಲ್ಲಾಪುರಕ್ಕೆ ಹುತಾತ್ಮ ನಗರವೆಂದೂ ಕರೆಯಲಾಗುತ್ತದೆ.…

2 Comments

ಡಾ. ವಿಲಾಸವತಿ ಖೂಬಾ,ಕಲಬುರ್ಗಿ.

ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ ಶ್ರೀ ಬಸಪ್ಪ ದಾನಪ್ಪ ಜತ್ತಿಯವರ ಹೆಸರು ಅಜರಾಮರ. ಬ್ರಿಟೀಷ್‌ ಕಾಲದ ಜಮಖಂಡಿ ರಾಜ್ಯದ ಮತ್ತು ಈಗಿನ ಬಾಗಲಕೋಟೆ ಜಿಲ್ಲೆಯ ಸಾವಳಗಿಯವರು ಶ್ರೀ ಬಸಪ್ಪ ದಾನಪ್ಪ ಜತ್ತಿಯವರು. ಭಾರತದ ೫ನೇ ಉಪರಾಷ್ಟ್ರಪತಿಯಾಗಿ, ಪ್ರಭಾರಿ ರಾಷ್ಟ್ರಪತಿಯಾಗಿ ಬೆಳೆದು ನಿಂತದ್ದು ಅಭೂತಪೂರ್ವ ಸಾಧನೆ. ಸರಳಾತಿ ಸರಳ ಮತ್ತು ಶಿಸ್ತಿನ ಸಾರ್ವಜನಿಕ ಜೀವನ ನಡೆಸಿದ ಶ್ರೀ ಜತ್ತಿಯವರು ಸಾಮಾಜಿಕ ಸಮಾನತೆ, ಮಹಿಳೆಯರ ಸಬಲೀಕರಣಕ್ಕೆ ಶ್ರಮವಹಿಸಿದ ಪ್ರಭುದ್ದ ಮತ್ತು ಮುತ್ಸದ್ದಿ ರಾಜಕಾರಣಿಗಳು. 12 ನೇ ಶತಮಾನದ ಬಸವಾದಿ ಶರಣರ ವಿಚಾರ ಧಾರೆಗಳಿಂದ ಪ್ರಭಾವಿತರಾಗಿದ್ದ ಶ್ರೀ ಜತ್ತಿಯವರು ಶರಣರ ಉನ್ನತ…

0 Comments