ಪರಮಪೂಜ್ಯ ಶ್ರೀ ಮ. ನಿ. ಪ್ರ ಡಾ. ಮಹಾಂತ ಶಿವಯೋಗಿಗಳ 7 ನೇ ಪುಣ್ಯ ಸ್ಮರಣೋತ್ಸವದ ಭಕ್ತಿಯ ನಮನಗಳು | ಶ್ರೀಮತಿ. ಅಮರವಾಣಿ ಐದನಾಳ, ಲಿಂಗಸುಗೂರು.
ಓಂ ಶ್ರೀ ಗುರುಬಸವ ಲಿಂಗಾಯ ನಮಃ ಬಸವಜ್ಯೋತಿ, ಮಹಾಂತ ಜೋಳಿಗೆಯ ಶಿವ ಶಿಲ್ಪಿ, ಶಿವಾನುಭವ ಚರವರ್ಯ ಎಂದೇ ಖ್ಯಾತರಾದ ಪೂಜ್ಯ ಶ್ರೀ ಶ್ರೀ ಶ್ರೀ ಮಹಾಂತಶಿವಯೋಗಿಗಳು ಈ ನಾಡು ಕಂಡ ಮಹಾನ್ ಚೇತನರು. ಮಾನವೀಯತೆಯ ಮಾತೃ ಹೃದಯಿಗಳು. ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನರ ಅಜ್ಞಾನ, ಮೂಡನಂಬಿಕೆಗಳನ್ನು ತೊಲಗಿಸಲು ಹಗಲಿರುಳು ಶ್ರಮಿಸಿದರು. ಮಹಾಂತ ಜೋಳಿಗೆಯನ್ನು ಹುಟ್ಟುಹಾಕಿ ಜನರಲ್ಲಿರತಕ್ಕಂತ ದುಶ್ಚಟ & ದುರ್ವ್ಯಸನಗಳನ್ನು ದೂರ ಮಾಡಿ ಸಾವಿರಾರು ಹೃದಯಗಳನ್ನು ಪರಿವರ್ತನೆ ಮಾಡಿ ಬದುಕಿಗೆ ಬೆಳಕು ತಂದರು. ಬಸವಣ್ಣ ಇವರ ಅಂಗವಾದ. ಮಡಿವಾಳ ಮಾಚಿದೇವರು ಇವರ ಮನಸ್ಸಾದರು.…