“ವಚನ ಸಾಹಿತ್ಯದಲ್ಲಿ ಆರೋಗ್ಯ ಚಿಂತನೆ” ಉಪನ್ಯಾಸಕರು : ಪರಮ ಪೂಜ್ಯ ಶ್ರೀ ಬಸವಾನಂದ ಸ್ವಾಮಿಗಳು, ಧಾರವಾಡ
https://youtu.be/ZMv4LOTfoc4
Your blog category
https://youtu.be/ZMv4LOTfoc4
ಅನುಭವ ಮಂಟಪ ಕುರಿತು ಡಾ. ಶಿವಾನಂದ ಜಾಮದಾರ ಅವರು, ಡಾ. ಬೆಲ್ದಾಳ ಶರಣರು, ಶ್ರೀ ರಂಜಾನ್ ದರ್ಗಾ ಅವರು, ಡಾ. ವಿಶ್ವಾರಾಧ್ಯ ಸತ್ಯಂಪೇಟೆ ಮುಂತಾದ ಅನೇಕ ವಚನ ಸಾಹಿತ್ಯದ ವಿದ್ವಾಂಸರುಗಳು ಸಾಕ್ಷೀ ಸಮೇತ ನಿರೂಪಿಸಿದ ಬಳಿಕವೂ ಈ ಥರಾ ಬರೆಯುವ ಅವಶ್ಯಕತೆ ಮತ್ತು ಇವರ ಉದ್ದೇಶವೇನು ಅಂತಾ ಅರ್ಥಾ ಆಗತಾ ಇಲ್ಲಾ. ಪ್ರಧಾನಿಗಳು ಹೊಸ ಸಂಸತ್ ಭವನಕ್ಕೆ ಅನುಭವ ಮಂಟಪವೇ ಮಾದರೀ ಅಂತ ಹೇಳಿದ್ದಕ್ಕೆ ಹೊಟ್ಟೆ ಉರೀನಾ ??? ಬಸವಣ್ಣ ಸಾಂಸ್ಕೃತಿಕ ನಾಯಕ ಅಂತಾ ಕರ್ನಾಟಕ ಸರ್ಕಾರ ಘೋಷಣೆ ಮಾಡಿದ್ದಕ್ಕೆ ಹೊಟ್ಟೆ ಉರೀನಾ ??? ಯಾಕೆ ಹೀಗೆ…
"ವಚನಸಾಹಿತ್ಯ ಮಂದಾರ ಫೌಂಡೇಶನ್" ದ ಗ್ರಂಥಾಲಯ ಸ್ಥಾಪನೆ ಪ್ರಯುಕ್ತ ನಾಡಿನ ಹಲವಾರು ವಚನ ಸಾಹಿತ್ಯ ಪ್ರೇಮಿಗಳು, ಸಾಹಿತಿಗಳು ಹಾಗೂ ವಿದ್ವಾಂಸರುಗಳು ತಮ್ಮಲ್ಲಿರುವ ವಚನ ಸಾಹಿತ್ಯ ಮತ್ತು ಜಾನಪದ ಸಾಹಿತ್ಯದ ಅತ್ಯಮೂಲ್ಯ ಗ್ರಂಥಗಳನ್ನು ದಾಸೋಹ ರೂಪದಲ್ಲಿ ಕಳುಹಿಸಿದ್ದಾರೆ. ಪ್ರಪ್ರಥಮವಾಗಿ ತಮ್ಮಲ್ಲಿರುವ ಅತ್ಯಮೂಲ್ಯ ಮತ್ತು ಅಪರೂಪದ ಪುಸ್ತಕಗಳನ್ನು ದಾಸೋಹ ಮಾಡಿದ ಧಾರವಾಡದ ಶ್ರೀ ನಟರಾಜ ಮೂರಶಿಳ್ಳಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಸುನಿತಾ ಮೂರಶಿಳ್ಳಿಯವರಿಗೆ ಕೃತಜ್ಞತೆಗಳು. ಇಂದಿನವರೆಗೆ ಸುಮಾರು 2,000 ಪುಸ್ತಕಗಳು ಬಂದಿವೆ. ಈಗ ವಚನಸಾಹಿತ್ಯ ಮಂದಾರ ಫೌಂಡೇಶನ್ ಗ್ರಂಥಾಲಯದಲ್ಲಿ 5,000 ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹ ಆಗಿದೆ. ಈ…
ಅನುಭವ ಮಂಟಪದ ನಿರ್ಮಾಣಕ್ಕೆ ಸಂಬಂಧಿಸಿದ ಶಿಫಾರಸು ಸಮಿತಿಯ ಮೊದಲ ಸಭೆಯ ಅಜೆಂಡಾದಲ್ಲಿ ಮೊದಲ ಪಾಯಿಂಟ್ "ಅನುಭವ ಮಂಟಪ ಕಾಲ್ಪನಿಕ" ಎಂದು ಸಮಿತಿಯ ಅಧ್ಯಕ್ಷರಾಗಿದ್ದ ಗೊ. ರು. ಚನ್ನಬಸಪ್ಪ ಅವರು ಬರೆದಿದ್ದರು. ನಾನು ಕೂಡಲೆ, ನೀಲಮ್ಮನವರ ವಚನವೊಂದರಲ್ಲಿ ಅನುಭವ ಮಂಟಪದ ಕುರಿತು ಹೇಳಿದ್ದನ್ನು ಹೇಳಿ ಆ ಪಾಯಿಂಟ್ ತೆಗೆಸಿದೆ. ಆ ವಚನ ಬಹಳ ದೀರ್ಘವಾಗಿದೆ. ಹಾಗಾಗಿ ಅದರ ಮೊದಲೆರಡು ಸಾಲುಗಳನ್ನು ಹಾಗೂ ಅನುಭವ ಮಂಟಪದ ಎರಡು ಸಾಲುಗಳನ್ನು ಇಲ್ಲಿ ಬರೆದಿದ್ದೇನೆ. ಆದಿಯಾಧಾರವಿಲ್ಲದಂದು, ಕಳೆಮೊಳೆದೋರದಂದು,ಕಾಮ ನಿಃಕಾಮವಿಲ್ಲದಂದು, ವೀರವಿತರಣವಿಲ್ಲದಂದು,… … … … … … … … … ……
ಎಳ್ಳು ಬೆಲ್ಲ ಬಿರೋಣ ಒಳ್ಳೆ ಮಾತಾಡೋಣಬೆಳಕು ಹೊಂಗಿರಣ ಪಸರಿಸಿದೆ ಮೂಡಣದಿಕತ್ತಲೆಯ ಮೋಡ ಕರಗಿದೆ ಪಡುವಣದಿತಂದಿದೆ ಸಂಕ್ರಾಂತಿಯ ಸಂಭ್ರಮ ಜಗದಿ ಸೂರ್ಯನು ಮಕರ ರಾಶಿ ಪ್ರವೇಶಿಸಿ ಉತ್ತರಾಭಿಮುಖವಾಗಿ ಪಯಣಿಸುವ ಮಕರ ಸಂಕ್ರಾಂತಿ ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ ಜನೇವರಿ 14 ರಂದು ಸಂಭವಿಸುತ್ತದೆ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವದಕ್ಕೆ ಸಂಕ್ರಾಂತಿ ಎನ್ನುವರು. ಉತ್ತರಾಯಣದ ಆರಂಭವಾದ್ದರಿಂದ ಮಕರ ಸಂಕ್ರಾಂತಿ ವಿಶೇಷ. ಜಗತ್ತಿನ ಅಂಧಕಾರ ಅಳಿದು ಬದುಕಿಗೆ ಬೆಳಕು ನೀಡುವ ಸೂರ್ಯನು ಜ್ಞಾನದ ಸಂಕೇತ. ಮಳೆ ಬೀಳಲು, ಬೆಳೆ ಬೆಳೆಯಲು, ಇಳೆ ಬೆಳಗಲು ಆತನೇ ಕಾರಣ. ಸೂರ್ಯದೇವನ ಅಪಾರ…
ಗಿರಿಯಲ್ಲಲ್ಲದೆ ಹುಲ್ಲುಮೊರಡಿಯಲ್ಲಾಡುವುದೆ ನವಿಲು?ಕೊಳಕ್ಕಲ್ಲದೆ ಕಿರುವಳ್ಳಕ್ಕೆಳಸುವುದೆ ಹಂಸೆ?ಮಾಮರ ತಳಿತಲ್ಲದೆ ಸರಗೈವುದೆ ಕೋಗಿಲೆ?ಪರಿಮಳವಿಲ್ಲದ ಪುಷ್ಪಕ್ಕೆಳಸುವುದೆ ಭ್ರಮರ?ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗಲ್ಲದೆಅನ್ಯಕ್ಕೆಳಸುವುದೆ ಎನ್ನ ಮನ?ಪೇಳಿರೆ, ಕೆಳದಿಯರಿರಾ?(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-67/ವಚನ ಸಂಖ್ಯೆ-189) ವೈರಾಗ್ಯನಿಧಿ ಅಕ್ಕಮಹಾದೇವಿಯವರು ವಚನಕಾರ್ತಿಯರ ಸಾಲಿನಲ್ಲಿ ಅಷ್ಟೆ ಅಲ್ಲದೆ ಒಟ್ಟಾರೆ ವಚನ ಸಾಹಿತ್ಯ ಪರಂಪರೆಯಲ್ಲೇ ಅತ್ಯಂತ ಶ್ರೇಷ್ಠ ವಚನಕಾರ್ತಿಯಾಗಿದ್ದಾರೆ. ಅದಕ್ಕೆಂದೇ ಅಕ್ಕಮಹಾದೇವಿಯರ ವಚನಗಳ ಶ್ರೇಷ್ಠತೆಯನ್ನು ಅವಿರಳಜ್ಞಾನಿ ವನ್ನಬಸವಣ್ಣನವರು ತಮ್ಮದೊಂದು ವಚನದಲ್ಲಿ ನಿರೂಪಿಸುವುದನ್ನು ನಾವು ನೆನಪಿಸಿಕೊಳ್ಳುವುದು. ಆದ್ಯರ ಅರವತ್ತು ವಚನಕ್ಕೆದಣ್ಣಾಯಕರ ಇಪ್ಪತ್ತು ವಚನ,ದಣ್ಣಾಯಕರ ಇಪ್ಪತ್ತು ವಚನಕ್ಕೆಪ್ರಭುದೇವರ ಹತ್ತುವಚನ,ಪ್ರಭುದೇವರ ಹತ್ತು ವಚನಕ್ಕೆಅಜಗಣ್ಣನ ಅಯ್ದು ವಚನ,ಅಜಗಣ್ಣನ ಅಯ್ದು ವಚನಕ್ಕೆಕೂಡಲಚೆನ್ನಸಂಗಮದೇವಾ,ಮಹಾದೇವಿಯಕ್ಕಗಳದೊಂದೆ ವಚನ ನಿರ್ವಚನ.(ಸಮಗ್ರ ವಚನ ಸಂಪುಟ:…
ಅವಳ ವಚನ ಬೆಲ್ಲದಂತೆ,ಹೃದಯದಲಿಪ್ಪುದು ನಂಜು ಕಂಡಯ್ಯಾ.ಕಂಗಳಲೊಬ್ಬನ ಕರೆವಳು,ಮನದಲೊಬ್ಬನ ನೆರೆವಳು.ಕೂಡಲಸಂಗಮದೇವ ಕೇಳಯ್ಯಾ,ಮಾನಿಸಗಳ್ಳಿಯ ನಂಬದಿರಯ್ಯಾ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-33/ವಚನ ಸಂಖ್ಯೆ-110)ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ:ನಂಜು: ವಿಷ,ಮಾನಿಸಗಳ್ಳಿ: ಕಳ್ಳಮನಸ್ಸಿನ ಜಾರೆ. ಬಸವಣ್ಣನವರ ಈ ವಚನದಲ್ಲಿ ವಿಶೇಷವಾಗಿ ಬಳಕೆಯಾದ ಶಬ್ದ “ಮಾನಿಸಗಳ್ಳಿ” ಎಂಬುದು. ಮನದಿಂದ ಮಾಡುವ ಕಳ್ಳತನದ ಪ್ರತೀಕ. ಮೋಸ, ವಂಚನೆ, ಕಪಟ, ಕಳ್ಳತನಗಳು ಲೌಕಿಕ ಜಗತ್ತಿನಲ್ಲಿ ಸರ್ವೇ ಸಾಮಾನ್ಯ. ವೈರಿಗಳೊಂದಿಗೆ ಮುಖಾಮುಖಿಯಾಗಿ ಹೋರಾಡಬಹುದು. ಅಲ್ಲಿ ಗೆಲುವಾದರೂ ಆಗಬಹುದು ಅಥವಾ ಸೋಲಾದರೂ ಆಗಬಹುದು. ಆದರೆ ನಯವಂಚಕರೊಂದಿಗೆ ನಡೆಸುವ ವ್ಯವಹಾರಗಳು ಅಪಾಯದ ಮಟ್ಟವನ್ನೂ ಮೀರಿ ನಮ್ಮನ್ನು ಒಯ್ಯುತ್ತವೆ. ಇಲ್ಲಿ ಪ್ರಾಣಹಾನಿಗಿಂತ…
ಅರ್ಥ ಸನ್ಯಾಸಿಯಾದಡೇನಯ್ಯಾ,ಆವಂಗದಿಂದ ಬಂದಡೂ ಕೊಳದಿರಬೇಕು.ರುಚಿ ಸನ್ಯಾಸಿಯಾದಡೇನಯ್ಯಾ,ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು.ಸ್ತ್ರೀ ಸನ್ಯಾಸಿಯಾದಡೇನಯ್ಯಾ,ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಟ್ಟಿಲ್ಲದಿರಬೇಕು.ದಿಗಂಬರಿಯಾದಡೇನಯ್ಯಾ,ಮನ ಬತ್ತಲೆಯಾಗಿರಬೇಕು.ಇಂತೀ ಚತುರ್ವಿಧದ ಹೊಲಬನರಿಯದೆ ವೃಥಾ ಕೆಟ್ಟರುಕಾಣಾ ಚನ್ನಮಲ್ಲಿಕಾರ್ಜುನಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-791 / ವಚನ ಸಂಖ್ಯೆ-45) ಈ ಒಂದೇ ಒಂದು ವಚನವನ್ನು ಅರ್ಥ ಮಾಡಿಕೊಂಡಿದ್ದರೆ “ವಚನ ದರ್ಶನ” ಎನ್ನುವ ಪುಸ್ತಕದ ಪ್ರಧಾನ ಸಂಪಾದಕ ಸದಾಶಿವಾನಂದ ಮತ್ತು ಸಂಪಾದಕರಾದ ಜನಮೇಜಯ ಉಮರ್ಜಿ, ನಿರಂಜನ ಪೂಜಾರ, ಚಂದ್ರಪ್ಪ ಬಾರಂಗಿ ಹಾಗೂ ಸಂತೋಷಕುಮಾರ ಅವರುಗಳು ಬೌದ್ಧಿಕ ದಿವಾಳಿಯಿಂದ ವಚನ ಸಾಹಿತ್ಯವನ್ನು ಹೀಯಾಳಿಸುವ ಮತ್ತು ವೈಷ್ಣವೀಕರಣದತ್ತ ತಿರುಚುವ ಪ್ರಯತ್ನವನ್ನು ಮಾಡುತ್ತಿರಲಿಲ್ಲ ಎನ್ನುವುದು ಸಾರಸ್ವತ…
ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಅಧ್ಯಯನಗಳ ಮೂಲಕ ಅಷ್ಟಾಗಿ ಬೆಳಕಿಗೆ ಬಾರದ ಶರಣರಲ್ಲಿ ಅರಿವಿನ ಮಾರಿತಂದೆಯವರೂ ಕೂಡ ಒಬ್ಬರು. “ಸದಾಶಿವಮೂರ್ತಿಲಿಂಗ” ಎಂಬ ಅಂಕಿತದಿಂದ ವಚನಗಳನ್ನು ಬರೆದುದಾಗಿ ವಿದ್ವಾಂಸರು ಗುರುತಿಸಿದ್ದಾರೆ. ಸಮಗ್ರ ವಚನ ಸಂಪುಟ-2021 / ಸಂಕೀರ್ಣ ವಚನ ಸಂಪುಟ-6 ರಲ್ಲಿ ಅರಿವಿನ ಮಾರಿತಂದೆಯವರು ಬರೆದ 309 ವಚನಗಳನ್ನು ಡಾ.ಎಂ. ಎಂ. ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಡಾ. ಕೆ ರವೀಂದ್ರನಾಥ ಅವರ ಸಂಪಾದಕತ್ವದಲ್ಲಿ ಸಂಪಾದಿಸಿದ್ದಾರೆ. ಆದರೆ “ಈ ಶರಣರ ಬದುಕಿನ ವಿವರಗಳು ಸಾಕಷ್ಟು ಸಿಗುವುದಿಲ್ಲ” ಎಂಬ ಮಾತನ್ನು ಅವರು ಸೇರಿಸಿದ್ದಾರೆ. ಶರಣರ ಹೆಸರಿನ ಹಿಂದೆ ಇರುವ “ಅರಿವಿನ” ಎಂಬ…
“ಶರಣಾರ್ಥಿಯೆಂಬ ಶ್ರವವ ಕಲಿತಡೆ ಆಳುತನಕೆ ದೆಸೆಯಪ್ಪ ನೋಡ” ಎಂದಿರುವರು. ದೇವರಿಗೆ ಮಾತ್ರ ಶರಣಾಗುವುದಲ್ಲ ದೇವರ ಸ್ವರೂಪಿಗಳಾದ ಶರಣರು ಒಬ್ಬರನ್ನೊಬ್ಬರು ಕಂಡಾಗ ಗೌರವ ಪ್ರೇಮದಿಂದ ಶರಣು ಶರಣಾರ್ಥಿ ಪದಗಳನ್ನು ಬಳಸಿದ್ದಾರೆ. ಶಿವ ಶಿವ ಎನ್ನುತ್ತಾ ಹರ ಹರ ಎನ್ನುತ್ತಾಶಿವನ್ಹಂತ ಬಸವಗ ನೆನೆಯುತ್ತ ಸತಿಪತಿತೆಗೆದಾರ ಚರ್ಮ ತೊಡೆಯದುಬಾಳೆಯ ಹಣ್ಣಿನಾ ಸಿಪ್ಪೆಯು ತೆಗೆದ್ಹಾಂಗಚರಮವು ಬಿಚ್ಚಿ ತೆಗೆದಾರ ಕಣ್ಣಾಗಹನಿಹರ ನೀರು ಬಂದಿಲ್ಲಕಣ್ಣೀರು ಹರಿದಿಲ್ಲ ಮಾರಿಯು ಕಿವಚಿಲ್ಲಸಂತಸದಿಂದ ಶಿವಶಿವ ಎನ್ನುತ್ತಾಶಿವರೂಪಿಗೆ ಪಾದುಕೆ ಹೊಲಿತಾರ ಬಾಳೆಯ ಹಣ್ಣಿನ ಹಾಗೆ ಹರಹರ ಶಿವಶಿವ ಎನ್ನುತ್ತಾ ಸತಿ-ಪತಿ ತಮ್ಮ ತೊಡೆಯ ಚರ್ಮ ಬಿಚ್ಚುತ್ತಾರೆ. ಮುಖದ ಮೇಲೆ ನೋವಿಲ್ಲ, ಕಣ್ಣಿನಲ್ಲಿ…
You cannot copy content of this page