ಅಕ್ಕಮಹಾದೇವಿ / ಡಾ. ನೀಲಾಂಬಿಕಾ ಪೊಲೀಸಪಾಟೀಲ, ಕಲಬುರಗಿ.
ಬಸವಾದಿ ಶರಣರು ಮಾಡಿದ ಅತ್ಯಂತ ಮಹತ್ವಪೂರ್ಣ ಕಾರ್ಯವೆಂದರೆ ಸಮಾನತೆ ತತ್ವ ಪಾಲಿಸಿದ್ದು. ದೂರದೃಷ್ಟಿಯುಳ್ಳ ಶರಣರ ಅಂದಿನ ಆ ತತ್ವವೇ ದೇಶ-ದೇಶಗಳ ಇಂದಿನ ಸಂವಿಧಾನಗಳಲ್ಲಿ, ವಿದ್ವಾಂಸರಲ್ಲಿ, ವೈಚಾರಿಕ, ಪ್ರಜ್ಞೆಯುಳ್ಳವರಲ್ಲಿ, ಕಟ್ಟಿಕೊಂಡಿದೆ. ಜಾತಿ, ಮತ, ಪಂಥ, ಲಿಂಗಗಳ ಮಧ್ಯೆ ಆಳವಾಗಿ ಬಿರುಕು ಬಿಟ್ಟ ಅಸಮಾನತೆಯನ್ನು ಶರಣರು ಕಾಂಕ್ರೇಟ್ ಹಾಕಿ ಆ ಬಿರುಕನ್ನು ಮುಚ್ಚಿಬಿಟ್ಟರು. ಅವರ ಆ ಸಮಾನತೆ ಮನುಕುಲದ ಇತಿಹಾಸವನ್ನು ಬದಲಾಯಿಸಿತು. ಅದರಲ್ಲಿ ಲಿಂಗ ಸಮಾನತೆ ಅತ್ಯಂತ ಮುಖ್ಯವಾಗಿದೆ. ಏಕೆಂದರೆ ಜಗತ್ತಿನಲ್ಲಿಯೇ ಅತೀ ಶೋಷಣೆಗೆ ಒಳಪಟ್ಟವಳು ಹೆಣ್ಣು. ಮೇಲ್ವರ್ಗದಿಂದ ಹಿಡಿದು ಕೆಳ ಜಾತಿಯ ಜನರಲ್ಲಿ ಸ್ತ್ರೀ ಶೋಷಣೆಗೆ ಒಳಗಾಗಿದ್ದಾಳೆ. ಅಜ್ಞಾನಿ…