Your blog category

“ಬಸವಣ್ಣ”-ಭಾಗ ೨/ ಡಾ. ನೀಲಾಂಬಿಕಾ ಪೊಲೀಸ ಪಾಟೀಲ

ಬಸವಣ್ಣನವರು ಪ್ರಧಾನಿಯಾಗಿ ಕೇವಲ ಭೋಗಿಯಾಗಿ ಕೂಡಲಿಲ್ಲ. ತ್ಯಾಗಿಯಾಗಿ, ಯೋಗಿಯಾಗಿ ಲಿಂಗಾಂಗಿಯಾಗಿ ಒಂದೆಡೆ ಸಮಾಜೋದ್ಧಾರ, ಇನ್ನೊಂದೆಡೆ ಆತ್ಮೋದ್ಧಾರಕ್ಕಾಗಿ ಕಂಕಣ ಬದ್ಧರಾದರು. ಲಿಂಗಾಂಗಿಯಾಗಿ ಲಿಂಗಾಯತ ಧರ್ಮಕಟ್ಟಿ, ಸಮಾನತೆ ಅದರ ಕುರುಹು ಮಾಡಿದರು. ನಮ್ಮವ ನಮ್ಮವರು ಎನ್ನುತಾ ಬಸವಣ್ಣಒಮ್ಮನದಿ ಎಲ್ಲರ ಅಪ್ಪಿಕೊಂಡು | ಅಳಿಸ್ಯಾರನಾನು ನಿನ್ನೆಂಬ ಬೇಧವ ಬಸವಣ್ಣನವರ ಮನಸ್ಸನ್ನು ಈ ಜಗತ್ತು ಬಹು ಬೇಗನೆ ಅರಿತುಕೊಂಡಿತು ಎನ್ನುತ್ತಾರೆ ಜನಪದರು. ಅವರದು ತಾಯಿ ಹೃದಯ, ಎಲ್ಲರನ್ನು ಕೈಮಾಡಿ ಕರೆಯಿತು ಅದು. ಅವರ ಅಯ್ಯಾ ಅಪ್ಪಾ ಎನ್ನುವ ಮನಸ್ಸಿಗೆ ನಾಟು ವಂತಹ ನುಡಿ ಮತ್ತುಗಳು ಎಲ್ಲ ಜಾತಿಯವರನ್ನು ಕಲ್ಯಾಣದತ್ತ ಕರೆದ್ಯೋಯದವು. ಸಾಗಿ ಬಂದಾರ…

0 Comments

“ಬಸವಣ್ಣ”/ ಡಾ. ನೀಲಾಂಬಿಕಾ ಪೊಲೀಸ ಪಾಟೀಲ

ಶರಣೆಂದೆ ಶಿವನಿಗೆ ಶರಣೆಂದೆಗುರುವಿಗೆಶರಣೆಂದೆಜಗದಗುರುವಿಗೆ | ಬಸವಗಶರಣೆಂದುಕೈಯ ಮುಗದೇನ. ಜನಪದ ಸಾಹಿತ್ಯದ ಜೀವ ಜೀವಾಳವಾಗಿದ್ದಾರೆ ಬಸವಣ್ಣನವರು. ಆ ಜನಪದರಿಗೆ ಅವರು ಎಲ್ಲವೂ ಆಗಿದ್ದಾರೆ. ದೇವರು, ಗುರು, ಮಾರ್ಗದರ್ಶಕ, ಅರಿವು ಕೊಟ್ಟವರು, ಕಾಯಕ ದಾಸೋಹ ಪರಿಕಲ್ಪನೆ ಅಷ್ಟೇ ಅಲ್ಲ ಸುಖಕ್ಕೂ ದುಃಖಕ್ಕೂ ಎಲ್ಲಕ್ಕೂ ಅವರಿಗೆ ಆಧಾರ ಬಸವಣ್ಣನವರು. ಬಸವ ಎಂಬ ನುಡಿ ಬಾಯಿಗೆ ಬಂದರಸೂಸಾಡ್ಯಾವ ಶಿವನುಡಿ ಮನದಾಗ | ಎಲೆ ಮನವೆಬಸವ ಎಂಬುದು ಬಿಡಬ್ಯಾಡ ಎಂದು ಹರಿದಾಡುವ ಮನಸ್ಸಿಗೆ ಬೇಡಿಕೊಳ್ಳುತ್ತಾ ಕಲ್ಲಿಗೆ ಮುಕ್ಹಾಕಿ ಎಲ್ಲ ದೇವರ ನೆನೆದೆಕಲ್ಯಾಣದ ಬಸವಗ ಮೊದಲಿಗೆ | ನೆನೆದರಕಲ್ಲೆಂಬುದು ನಮಗ ಹಗುರಾಗಿ ಎಂದು ಬಸವಣ್ಣನವರನ್ನು ನೆನೆಯುತ್ತಾರೆ.…

0 Comments

“ಜನಪದ ಸಾಹಿತ್ಯದಲ್ಲಿ ಕುಂಬಾರ ಗುಂಡಯ್ಯ”/ ಡಾ. ನೀಲಾಂಬಿಕಾ ಪೊಲೀಸ ಪಾಟೀಲ.

ಕುಂಬಾರ ಗುಂಡಯ್ಯ ತುಂಬಿ ತಿಗರಿಗ ಕೆಸರಶಂಭು ಹರನೆಂದು ತಿರುಗಿಸಲು | ಶಿವಕುಣಿದಹಂಬಲಿಸಿ ಜಂಗ ಕಟಗೊಂಡು12 ನೇಯ ಶತಮಾನದ ವಚನ ಚಳುವಳಿಯ ಸಂದರ್ಭದಲ್ಲಿ ಬಸವಾದಿ ಶಿವಶರಣರು ತೋರಿದ ಸಮಾನತೆ ತತ್ವ ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ ಒಕ್ಕಟ್ಟಿನಲ್ಲಿ ಬಲವಿದೆಯೆಂಬುದನ್ನು ತೋರಿಸಿಕೊಟ್ಟವರು ಬಸವಾದಿ ಪ್ರಮಥರು. ಮೇಲು-ಕೀಳು, ಹೆಣ್ಣು-ಗಂಡು, ಸ್ತ್ರೀ-ಪುರುಷ, ಬಡವ-ಬಲ್ಲಿದವೆಂಬ ಭೇದಗಳನ್ನೆಲ್ಲ ತೊಲಗಿಸಿ ಸಮಾನತೆ ತತ್ವದ ಅನುಭವ ಮಂಟಪದಲ್ಲಿ ಒಂದಾಗಿ ಕುಳಿತು ಎಲ್ಲರೂ ಅನುಭಾವಿಗಳಾಗಿ ಶರಣರೆನಿಸಿಕೊಂಡರು. ಅಂತಹ ಶರಣರತ್ನಗಳಲ್ಲಿ ಕುಂಬಾರ ಗುಂಡಯ್ಯ ಶರಣರು ಒಬ್ಬರು. ಕುಂಬಾರ ಗುಂಡಯ್ಯ ಮುಗ್ಧ ಶರಣರು, ಕಾಯಕ ಜೀವಿಗಳು, ದಾಸೋಹ ನಿಷ್ಠರಾಗಿದ್ದ ಈ ಶರಣರ ಶಿವಭಕ್ತಿ ಅಪಾರವಾದುದು.…

0 Comments

ಜನಪದ ಮತ್ತು ಲಿಂಗಾಯತ ಧರ್ಮ / ಡಾ. ನೀಲಾಂಬಿಕಾ ಪೊಲೀಸಪಾಟೀಲ

ಜನಪದ ಬೇರು ಉಳಿದಿದ್ದೆಲ್ಲ ನಾರು”‘ಧರ್ಮನೀತಿ ವಿಶ್ವಕೋಶ’ ದ (Encyclopedia of Religion & Ethics) ಸಂಪಾದಕರಾದ ಜೇಮ್ಸ್ ಹೆಸ್ಟಿಂಗ್‌ರ “ಇತಿಹಾಸವು ಒಂದು ರಾಜ್ಯದ ಅಥವಾ ರಾಷ್ಟ್ರೀಯ ಜೀವನದಲ್ಲಿ ದಾಖಲಾದರೆ, ಜನಪದ ಸಾಹಿತ್ಯವು ಪ್ರಾಗೈತಿಹಾಸಿಕ ಜೀವನದ ಪರಂಪರಾಗತ ಸಂಗತಿಯಾಗಿದೆ ಎನ್ನುತ್ತಾರೆ. ಮುಂದುವರಿದು ‘ಅವು ಕೇವಲ ಕಲ್ಪನಾತೀತವಲ್ಲ, ಜಾನಪದ ಕತೆಗಳು ಜನಾಂಗದ ಪುರಾಣಗಳು, ವಿಜ್ಞಾನ ಯುಗಕ್ಕೂ ಹಿಂದಿನ ವಿಜ್ಷಾನವು ಅದ್ಭುತಗಳ ಬಗ್ಗೆ ನೀಡಿದ ವಿವರಣೆಗಳೆ ಪುರಾಣಗಳು” ಎಂದು ಜನಪದ ಸಾಹಿತ್ಯದ ಮಹತ್ವ ತಿಳಿಸುತ್ತಾರೆ. ಒಂದು ಕಾಲದ ಘಟನೆಯನ್ನು ನಡೆದು ಹೋದ ಸಂಗತಿಯನ್ನು ತಿಳಿದುಕೊಳ್ಳಲು ಹೊರಟಾಗ ಇತಿಹಾಸ ಅನೇಕ ವಿಷಯಗಳು ಆಧಾರವಾಗುತ್ತವೆ.…

1 Comment

891ನೇಯ ಬಸವ ಜಯಂತಿ ಪ್ರಯುಕ್ತ ಗಣಕರಂಗ (ರಿ), ಧಾರವಾಡ ಆಯೋಜಿಸಿರುವ “ಬಸವಣ್ಣ: ಕರುನಾಡಿನ ಸಾಂಸ್ಕೃತಿಕ ನಾಯಕ”ಲೇಖನ ಸ್ಪರ್ಧೆ

891ನೇಯ ಬಸವ ಜಯಂತಿ ಪ್ರಯುಕ್ತ ಗಣಕರಂಗ (ರಿ), ಧಾರವಾಡ ಆಯೋಜಿಸಿರುವ "ಬಸವಣ್ಣ: ಕರುನಾಡಿನ ಸಾಂಸ್ಕೃತಿಕ ನಾಯಕ" ಲೇಖನ ಸ್ಪರ್ಧೆಯ ಕೊನೆಯ ದಿನಾಂಕ : 10-05-2024ರ ವರೆಗೆ ವಿಸ್ತರಿಸಲಾಗಿದೆ. ಗಮನಿಸಿರಿ:ಪ್ರಥಮ : ರೂ. 10,000/-ದ್ವಿತೀಯ : ರೂ. 5,000/-ತೃತೀಯ : ರೂ. 2,500/-ಮತ್ತು ಮೆಚ್ಚುಗೆ ಬಹುಮಾನಗಳು.ನಗದು ಬಹುಮಾನಗಳ ಪ್ರಾಯೋಜಕರು: ಶ್ರೀ. ಎಸ್‌ ಎಸ್‌ ಪಾಟೀಲ, ಮಾಜಿ ಸಹಕಾರಿ ಮತ್ತು ಅರಣ್ಯ ಸಚಿವರು, ಕರ್ನಾಟಕ ಸರ್ಕಾರ, ಕಲಕೇರಿ, ಮುಂಡರಗಿ ತಾಲೂಕ, ಗದಗ ಜಿಲ್ಲೆ. “ವಚನ ಮಂದಾರ” ವೇದಿಕೆ, ತುಮಕೂರು. ದಿವಂಗತ ಶ್ರೀ ಬಿ. ಕೆ. ಮೋಹನ ಸಿಂಗ್‌ ಸ್ಮರಣಾರ್ಥ ಶ್ರೀ…

0 Comments

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಪೋಸ್ಟರ್ ಬಿಡುಗಡೆ

ಮೈಸೂರು : ಬಸವಣ್ಣನವರು ಜನಸಾಮಾನ್ಯರ ಧ್ವನಿಯಾದುದರಿಂದ ವಿಶ್ವಗುರುವಾದರು ಎಂದು ನಿವೃತ ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಶಿವಮಾದಪ್ಪ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಮೈಸೂರಿನ ಬೋಗಾದಿಯ ಶಾರದಾನಗರ ರೈಲ್ವೆ ಬಡಾವಣೆಯ ಶರಣು ಕುಟೀರದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಬಸವಣ್ಣನವರ ತತ್ವವನ್ನು ಪಾಲನೆ ಮಾಡಿದ ಸಿದ್ಧಗಂಗೆಯ ಶ್ರೀ ಶಿವಕುಮಾರಸ್ವಾಮಿಗಳು ,ಬಸವಣ್ಣನವರ ನಾಟಕವನ್ನು ಒಂದು ಸಾವಿರಕ್ಕೂ ಹೆಚ್ಚು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರದರ್ಶನ ಮಾಡಿಸಿ ಜೊತೆಗೆ ಮಠದಲ್ಲಿ ಜಾತ್ಯಾತೀತವಾಗಿ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿ ೧೧೧ ವರ್ಷಗಳ ಸಾರ್ಥಕ…

1 Comment

ಸಿದ್ಧಗಂಗಾ ಎಂಬ ಹೆಸರೇ ಮಂತ್ರಪೂರ್ಣ, ಜ್ಞಾನಪ್ರಸಾರದ ಮಹಾವಿದ್ಯಾಲಯ / ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ

ಸಿದ್ಧಗಂಗೆ :ಸಿದ್ಧಗಂಗಾ ಎಂಬ ಹೆಸರೇ ಮಂತ್ರಪೂರ್ಣ. ಪರಿಶುದ್ಧಾತ್ಮರ ದಿವ್ಯ ತಪಸ್ಸು, ಶ್ರದ್ಧೆ ಮತ್ತು ನಿಷ್ಠೆಗಳ ಭದ್ರ ಬುನಾದಿಯ ಮೇಲೆ ನೆಲೆಗೊಂಡಿರುವಂತಹ ಒಂದು ಪವಿತ್ರ ಕ್ಷೇತ್ರ ಎಂದು ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ ಹೇಳಿದರು. ಶ್ರೀ ಸಿದ್ಧಗಂಗಾ ಮಠದಲ್ಲಿ ಶ್ರೀ ಶಿವಕುಮಾರಮಹಾಶಿವಯೋಗಿಗಳವರ ೧೧೭ನೇ ಜಯಂತಿ ನಿಮಿತ್ತ ಮಂಡ್ಯದ ಕಾಯಕಯೋಗಿ ಫೌಂಡೇಷನ್ ಮತ್ತು ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಹಯೋಗದೊಂದಿಗೆ ಶ್ರೀ ಶಿವಕುಮಾರಮಹಾಶಿವಯೋಗಿಗಳವರ ಬಗ್ಗೆ ಆಯೋಜಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಆಶಯ ಭಾಷಣ ಮಾಡಿ ಮಾತನಾಡಿ "ಸಿದ್ಧಗಂಗಾ ಎನ್ನುವ ಶಬ್ದವೇ ಪವಿತ್ರವಾದುದು ಈ ಪದವನ್ನು ಕೇಳಿದ ಕೂಡಲೇ…

0 Comments