ಆದಯ್ಯನವರ ವಚನಗಳಲ್ಲಿ ಭೃತ್ಯಾಚಾರ/ಶ್ರೀಮತಿ. ಸವಿತಾ ಮಾಟೂರ,ಇಳಕಲ್ಲ.

ರಾಷ್ಟಕವಿ ಜಿ.ಎಸ್. ಶಿವರುದ್ರಪ್ಪನವರ “ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೆ ಇರುವಾ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ” ಎಂಬ ಕವಿ ವಾಣಿಯಂತೆ ಕಲ್ಲು ಮಣ್ಣುಗಳ ಗುಡಿಯಲ್ಲಿಯೆ ಇನ್ನು ದೇವರನ್ನು ಹುಡುಕಿತ್ತಿದ್ದೆವೆ. “ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿ ಇದೆ ನಾಲಗೆಗೆ” ಶರಣರು ಸಾರಿದ ಅಂತರಂಗ ಶುದ್ಧಿಯಾದರೆ ನಿಜವಾದ ಅಮೃತದ ಸವಿಯನ್ನು ಸವಿಯಬಹುದು.

 ಶರಣರು ಜಗದೊಳಗೆ ಅನುಶೃತಗೊಂಡ ಅಘಟಿತ ಚರಿತರು. ವಚನದ ಅಮೃತದ ಸಾರವನ್ನು ನಮಗೆಲ್ಲ ಧಾರೆ ಎರೆದವರು. ಆ ವಚನಾಮೃತದ ಸಾಗರದಲ್ಲಿ ಮುಳುಗಿ ಮಿಂದಾಗಲೆ ನಮಗೆ ಅದರ ಆಳ ಅಗಲದ ಅನುಭವವಾಗುವದು.

ನಮ್ಮೊಳಗೆ ಇರುವ ಗುರು ಲಿಂಗ ಜಂಗಮ ತತತ್ವವನ್ನು ಅರಿಯದೆ ಅಲೆದಾಡುತ್ತಿದ್ದೆವೆ. ಅಂತರಂಗ ಬಹಿರಂಗ ಶುದ್ಧಿಗೆ ಬೇಕಾದ ಅರಿವು, ಆಚಾರ, ಅನುಭಾವಗಳನ್ನು ಮತ್ತು ಪ್ರಾಣವಾದ ಪಂಚಾಚಾರ, ದೇಹವಾದ ಅಷ್ಟಾವರಣ, ಆತ್ಮವಾದ ಷಟ್ಥ್ಸಲಗಳನ್ನು ಕೇವಲ ಓದಿ ಬರೆದರೆ ಸಾಲದು. ಅವುಗಳನ್ನು ಆಚರಣೆಯಲ್ಲಿ ತರಬೇಕು. ಅಂದಾಗಲೆ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಶರಣರಿಗೆ ನಮ್ಮ ಅಂತರಂಗದ ಆಧ್ಯಾತ್ಮಿಕ ಅಪೂರ್ವ ಶರಣು ಸಮರ್ಪಿಸಿದಂತೆ.

ಕೇವಲ ನಿಷ್ಟೆಯಿಂದ ಮಾಡುವ ಲಿಂಗಪೂಜೆಯಿಂದಲೆ ಕಾಲಕರ್ಮಗಳನ್ನು ಜಯಿಸುವುದಾದರೆ, ಇನ್ನು ಪಂಚಾಚಾರಗಳನ್ನು ಶ್ರದ್ಧೆಯಿಂದ ಆಚರಿಸಿದರೆ ನಮ್ಮ ಜೀವನ ಹೇಗಿರಬೇಡಾ.

ಪಂಚ ಆಚಾರಗಳಾದ

  ಇಂದು ನಾವು ಆದಯ್ಯನವರ ವಚನಗಳಲ್ಲಿ ಭೃತ್ಯಾಚಾರದ ಎಂಬ ವಿಷಯದ ಬಗ್ಗೆ ನೋಡೋಣ.

 ಆದಯ್ಯನವರು ಸೌರಾಷ್ಟ್ರದ ಸೋಮನಾಥ ಪುರದವರು. ವ್ಯಾಪಾರಕ್ಕಾಗಿ ಗದಗ ಜಿಲ್ಲೆಯ ಲಕ್ಷ್ಮೆಶ್ವರಕ್ಕೆ  ಬಂದರು. ಅಲ್ಲಿ ಜೈನ ಯುವತಿಯಾದ ಪದ್ಮಾವತಿಯೋಂದಿಗೆ ಪ್ರೇಮ ವಿವಾಹವಾದರು. ಪದ್ಮಾವತಿಯ ತಂದೆ ಇದನ್ನು ವಿರೋಧಿಸಿದಾಗ  ಅವರ ಸವಾಲನ್ನು ಸ್ವೀಕರಿಸಿ ಒಂದುವರೆ ತಿಂಗಳಿನಲ್ಲಿ ಸೌರಾಷ್ಟ್ರ ದಿಂದ ಸೋಮನಾಥ ನನ್ನು ತಂದು ಲಕ್ಷ್ಮೆಶ್ವರದ  ಬಸದಿಯಲ್ಲಿ  ಸ್ಥಾಪಿಸಿದ ನೆಂದು ಐತಿಹ್ಯವಿದೆ. ಆದಯ್ಯನವರ ಅಂಕಿತ ನಾಮ ಸೌರಾಷ್ಟ್ರ ಸೋಮೇಶ್ವರ. ಮತ್ತು ನಮಗೆ ದೊರೆತಿರುವ ವಚನಗಳ ಸಂಖ್ಯೆ 403.

ಎಂದು ಹೇಳಿದ್ದಾಳೆ.

ಅಂಗದ ಮೇಲೆ ಲಿಂಗವಿದ್ದವರನ್ನು ಸಂಗಯ್ಯನೆಂಬೆ” ಎನ್ನುವಂತೆ ಲಿಂಗ ಭಕ್ತರ ಸೇವೆ ಗೈವುದೆ ಭೃತ್ಯಾಚಾರ.

ಆದಯ್ಯನವರು ಶಿವತತ್ವವನ್ನರಿಯಲು ಮೂಲ ಜ್ಞಾನಶಕ್ತಿ. ಅಂತಹ ಜ್ಞಾನಶಕ್ತಿಯ ಚಿದ್ವಿಭೂತಿಯನ್ನು ಅಂತರಂಗದಲ್ಲಿ ಧರಿಸಿ, ಅದರ ಬೆಳಗಿನಲ್ಲಿ ಪರಶಿವನನ್ನೆ ಕಂಡವರು ಆದಯ್ಯನವರು.

ಶ್ರೀಗುರುವಿನ ಕರುಣದಿಂದ ಪವಿತ್ರಗಾತ್ರನಾದೆ.

ಅದೆಂತೆಂದಡೆ:

.ಅದೆಂತೆಂದೊಡೆ:
ಜ್ಞಾನಾಗ್ನಿಸ್ಸರ್ವಕರ್ಮಾಣಿ ಭಸ್ಮಸಾತ್ಕುರುತೇರ್ಜುನ
ಎಂದುದಾಗಿ,

ಶ್ರೀಗುರುವಿನ ಪದಕಮಲದಲ್ಲಿಆನು ಭೃಂಗನಾಗಿದ್ದೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ.

ಇಲ್ಲಿ ಆದಯ್ಯನವರು ತಮಗೆ ಹಿಂಗದ ಶಿವಲಿಂಗವನ್ನು ಕೊಟ್ಟ ಗುರುವಿನ ಮಹತ್ವವನ್ನು ಅನಾವರನಗೊಳಿಸಿದ್ದರೆ. ಗುರುವಿನ ಕರುಣದಿಂದ ನಾನು ಪವಿತ್ರನಾದೆ. ನನ್ನ ಪೂರ್ವದ ಕರ್ಮಗಳೆಲ್ಲ ಅಳಿಸಿ, ವಿಭೂತಿ ಧರಿಸಿ, ಎಂದೂ ಹಿಂಗದ ಇಷ್ಟಲಿಂಗವಕೊಟ್ಟು ಪ್ರಣವ ಪಂಚಾಕ್ಷರಿ( ನಮ: ಶಿವಾಯ) ಮಂತ್ರವನ್ನು ಕಲಿಸಿ ನನ್ನನ್ನೆ  ಮಂತ್ರಸ್ವರೂಪವನ್ನಾಗಿ ಮಾಡಿದ.  ಅಂದರೆ ಅಂಗಗುಣ ಅಳಿದು ಲಿಂಗಗುಣ ಅಳವಡಿಸಿ ಭವದ ಭ್ರಾಂತಿಯನ್ನು ಬಿಡಿಸಿ ಶಿವ ಜ್ಞಾನವ ನೀಡಿದ, ಗುರುವಿನ ಜ್ಞಾನಾಗ್ನಿಯಿಂದ ನನ್ನ ಸರ್ವ ಕರ್ಮಗಳು ಸುಟ್ಟು ಭಸ್ಮವಾದವು. ಇಂತಹ ಗುರುವಿನ ಪಾದಕಮಲದಲ್ಲಿ ನಾನು ದುಂಬಿಯಾಗಿ ಇರುವೆ ಎಂದು ಹೇಳಿದ್ದಾರೆ.

ಅಂಗದ ಮೇಲೆ ಲಿಂಗವಿದ್ದವರಿಗೆ ಅಮಂಗಳ ದಿನಗಳೆ ಇಲ್ಲ”  ಎನ್ನುವಂತೆ ಲಿಂಗ ಧರಿಸಿ ಎನ್ನ ತನು ನಿರ್ಮಲವಾಯಿತು. ಮನದಲ್ಲಿ ಗುರು ಲಿಂಗ ಜಂಗಮದ ಅರಿವು ಮೂಡಲು ನನ್ನ ಮನ ಶುದ್ಧವಾಯಿತ್ತು. “ಪ್ರಸಾದ ಕಾಯವಿದು ಕೆಡಿಸಲಾಗದು” ಎನ್ನುವಂತೆ ಪ್ರಸಾದ ಕಾಯದಿಂದ ಪ್ರಾಣ ನಿರ್ಮಲವಾಯಿತು. ಪಂಚೇಂದ್ರೀಯಗಳಲ್ಲಿ  ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ, ಶಿವಲಿಂಗ, ಮಹಾಲಿಂಗಗಳು ಜಾಗ್ರತಗೊಂಡಿದ್ದರಿಂದ ಎನ್ನ ಇಂದ್ರೀಯಗಳು ಶುದ್ಧವಾದವು. ಹೀಗೆ ಶರಣರ ಸಂಗದಲ್ಲಿ  ಅಂತರಂಗ ಬಹಿರಂಗ ಶುದ್ಧಗೊಳಿಸಿ ಅವರ ಅನುಭಾವದ ಪ್ರಸಾದದಿಂದ ನನ್ನ ಸರ್ವಾಂಗವೆಲ್ಲವು ಲಿಂಗಮಯವಾಯಿತು ಎಂದು ಆದಯ್ಯನವರು ಹೇಳಿದ್ದಾರೆ.

ಹೀಗೆ ಆದಯ್ಯನವರು ಶರಣರ ಸಂಗದಲ್ಲಿ ಅವರ ಭೃತ್ಯನಾಗಿ ಮುಕ್ತಿ ಕಂಡವರು. “ಗುರುವಿನ ಗುಲಾಮನಾಗುವ ತನಕ ದೊರೆಯದನ್ನ ಮುಕುತಿ” ಎಂಬ ದಾಸವಾಣಿಯಂತೆಮುಕ್ತಿ ಮಾರ್ಗಕ್ಕೆ  ಶರಣರ ಭ್ರುತ್ಯರಾಗಿರುವುದೆ ಸತ್ಯದ ದಾರಿ.

ಎಲ್ಲರಿಗೂ ಶರಣು ಶರಣಾರ್ಥಿಗಳು

ಶ್ರೀಮತಿ. ಸವಿತಾ ಮಾಟೂರ
ಇಳಕಲ್ಲ
ಫೋನ್ ನಂ:+91 78927 10782

Loading

Leave a Reply