ಮೂಢತ್ವದ ತಲೆಯನ್ನು ವಚನದ ಕತ್ತಿಯಿಂದ ಸ್ವಚ್ಛ ಮಾಡಿದ ಶರಣ ಹಡಪದ ಅಪ್ಪಣ್ಣ | ಶ್ರೀ. ಶರೀಫ ಚಿಗಳ್ಳಿ, ಹುಬ್ಬಳ್ಳಿ.

ಕ್ರಾಂತಿಕಾರಿ ಶರಣ ಹಡಪದ ಅಪ್ರಪಣ್ಣನವರ ಒಂದು ನೆನಪು ... ... ವಚನ ಚಳುವಳಿಯ ಹರಿಕಾರ, ಸಾಮಾಜಿಕ ಕ್ರಾಂತಿಯ ರೂವಾರಿ ಜಗಜ್ಯೋತಿ ಬಸವೇಶ್ವರರ ಆಪ್ತ ಕಾರ್ಯದರ್ಶಿಯಾದ ಹಡಪದ ಅಪ್ಪಣನವರು ಅತ್ಯುತ್ತಮ ವಚನಕಾರರಾಗಿದ್ದರು. 12 ನೇ ಶತಮಾನದಲ್ಲಿ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಖ್ಯಾತವಾಗಿದ್ದ ಅನುಭವ ಮಂಟಪದಲ್ಲಿ ಇವರು ಸಕ್ರೀಯ ಸದಸ್ಯರಾಗಿದ್ದರು. ಇವರು ಬಸವಣ್ಣನವರ ಬಾಲ್ಯದ ಒಡನಾಡಿಗಳಲ್ಲಿ ಒಬ್ಬರಾಗಿದ್ದರು. ಅಂದು ಹಡಪದ ಅವರ ಮುಖ ನೋಡಿದರೆ ಕೆಟ್ಟದಾಗುತ್ತದೆ ಎನ್ನುವ ಕಾಲದಲ್ಲಿ ಮೂಡ ನಂಬಿಕೆ ಹೊಡೆದೋಡಿಸಲು ಸ್ವತಃ ಬಸವಣ್ಣನವರು ಮಂತ್ರಿಯಾಗಿದ್ದಾಗ ನನ್ನನ್ನು ನೋಡಲು ಬರುವವರು ಮೊದಲು ಹಡಪದ ಅಪ್ಪಣ್ಣನವರ ಮುಖ ನೋಡಿ ಬನ್ನಿ…

0 Comments

ವಚನ – ಸಾಂಸ್ಕೃತಿಕ ತಲ್ಲಣಗಳು | ಡಾ. ನಟರಾಜ ಬೂದಾಳು, ತುಮಕೂರು.

ಲೇಖನ ಕೃಪೆ: https://bayalu.co.in/ವಚನ-ಸಾಂಸ್ಕೃತಿಕ-ತಲ್ಲಣಗಳು/ ತುಮಕೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಈಗ ನಿವೃತ್ತರು. ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ‘ಮೂಲಮಧ್ಯಮಕಾರಿಕಾ’ವನ್ನು ಕನ್ನಡಕ್ಕೆ ಅನುವಾದಿಸಿದವರು. ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದು, ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಚನಗಳನ್ನು ಏಕೆ ಓದುತ್ತಿದ್ದೇವೆ ಮತ್ತು ಹೇಗೆ ಓದುತ್ತಿದ್ದೇವೆ? ಎನ್ನುವ ಪ್ರಶ್ನೆಯನ್ನು ಇದಿರಾಗದೆ ಗತ್ಯಂತರವಿಲ್ಲ. ವಚನಗಳನ್ನು…

0 Comments

ಮರ್ತ್ಯಕ್ಕೆ ಗುರುವಾಗಿ ಬಂದ ಬಸವಣ್ಣನವರು | ಡಾ. ಸತೀಶ ಕೆ. ಇಟಗಿ,ಮುದ್ದೇಬಿಹಾಳ.

ನಮಃ ಶಿವಾಯ ಲಿಂಗವು,ಓಂ ನಮಃ ಶಿವಾಯ ಬಸವಣ್ಣನು.ನೀನೆ ಎನ್ನ ಮನಸ್ಥಲದಲ್ಲಿ ನಿಂದುಬೆಳಗಿ ತೋರಿದೆಯಾಗಿ,ಇದು ಕಾರಣ, ಕೂಡಲಚೆನ್ನಸಂಗಯ್ಯಆದಿಯಾಧಾರವಿಲ್ಲದಂದು“ಓಂ ನಮಃ ಶಿವಾಯ” ಎನುತಿರ್ದೆನು.(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-10/ವಚನ ಸಂಖ್ಯೆ-16) ಈ ವಚನದಲ್ಲಿ ಅವಿರಳಜ್ಞಾನಿ ಚನ್ನಬಸವಣ್ಣನವರು, “ನಮಃ ಶಿವಾಯ” ವೇ ಶಿವಲಿಂಗ ಮಂತ್ರದ ಸ್ವರೂಪ, ಬಸವಣ್ಣನವರೂ ಅದೇ “ಓಂ ನಮಃ ಶಿವಾಯ” ತತ್ವದ ಪ್ರತಿರೂಪ. ಮನಸ್ಸಿನೊಳಗಣ ಅಂಧಃಕಾರತ್ವ ಹಾಗೂ ಅಜ್ಞಾನವನ್ನು ಹೋಗಲಾಡಿಸಲು ಇದೇ ಮಂತ್ರ ನೆರವಾಗಿದ್ದು, ಜ್ಞಾನದ ಬೆಳಕನ್ನು ತೋರಿಸುತ್ತದೆ. ಅದಕ್ಕಾಗಿ ನಮಃ ಶಿವಾಯ ಮಂತ್ರದೊಂದಿಗೆ ಬಸವಣ್ಣನವರೂ ಸಹ, ಭಕ್ತನ ಮನದ ಮುಂದನ ಕತ್ತಲು ಹೋಗಲಾಡಿಸಲು ಎರಡೂ ಒಂದೇ ಆಗಿವೆ…

0 Comments

ಶರಣೆ ಕಾಲಕಣ್ಣಿಯ ಕಾಮಮ್ಮ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಸಂಕ್ಷಿಪ್ತ ಪರಿಚಯ:ಲಿಂಗ ತಾರತಮ್ಯ ತೀವ್ರವಾಗಿದ್ದ ಕಾಲಘಟ್ಟದಲ್ಲಿ ಮಹಿಳೆಯಲ್ಲಿ ತಾನೂ ಒಂದು ಚೇತನ ಎಂಬ ಅರಿವನ್ನು ಹುಟ್ಟು ಹಾಕಿದ್ದು 12 ನೇ ಶತಮಾನದ ಕಾಲ. ಇದೊಂದು ಅರಿವಿನ ಸ್ಫೋಟ. ಇದೇ ನಿಜವಾದ ಸ್ತ್ರೀ ಸಮಾನತೆ ಮತ್ತು ಸ್ವಾತಂತ್ರ್ಯದ ದ್ಯೋತಕ. ಮಹಾಮಾನವತಾವಾದಿ ಬಸವಣ್ಣನವರು ಮಹಿಳಾ ಸ್ವಾತಂತ್ರ್ಯದ ಹರಿಕಾರರು. ಶರಣೆ ಕಾಲಕಣ್ಣಿಯ ಕಾಮಮ್ಮನವರು 12 ನೇ ಶತಮಾನದಲ್ಲಿ ಜೀವಿಸಿದ್ದ ಶರಣೆಯಾಗಿದ್ದಾರೆ. ಇವರು ದಲಿತ ಸಮುದಾಯದ ಮಹಿಳೆ. ಕೊರವ, ಕೊಂಚೆಕೊರವ ಸಮುದಾಯದಿಂದ ಬಂದವರು. ಅಂದು ಈ ಜನಾಂಗವನ್ನು ಪಶುಗಳಿಗಿಂತ ಕೀಳಾಗಿ ಕಾಣುತ್ತಿದ್ದರು. ದಲಿತ ಮಹಿಳೆಯರ ಸ್ಥಿತಿಯಂತೂ ಇನ್ನೂ ಶೋಚನೀಯವಾಗಿತ್ತು. ಇಂತಹ ಮಹಿಳೆಯರಿಗೆ ಅರಿವನ್ನು…

0 Comments

ಬಸವಣ್ಣನವರ ವಚನ ವಿಶ್ಲೇಷಣೆ; ಹಂಜರಬಲ್ಲಿತ್ತೆಂದು | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಹಂಜರ ಬಲ್ಲಿತ್ತೆಂದು ಅಂಜದೆ ಓದುವ ಗಿಳಿಯೆ,ಎಂದೆಂದೂ ಅಳಿಯೆನೆಂದುಗುಡಿಗಟ್ಟಿದೆಯಲ್ಲಾ, ನಿನ್ನ ಮನದಲ್ಲಿ.ಮಾಯಾಮಂಜರ ಕೊಲುವಡೆ ನಿನ್ನ ಹಂಜರ ಕಾವುದೆಕೂಡಲಸಂಗಮದೇವನಲ್ಲದೆ?(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-46/ವಚನ ಸಂಖ್ಯೆ-163) ವಚನ ಚಳುವಳಿಯ ತಾತ್ವಿಕ ಚೌಕಟ್ಟುಗಳು ರೂಪಕ ಮತ್ತು ಪ್ರತಿಮೆಗಳ ಮೇರು ಸಾದೃಶ್ಯವನ್ನು ಬಿಂಬಿಸುತ್ತವೆ. ಗಿಳಿ ಎಂಬ ತಾತ್ವಿಕ ಪರಿಕಲ್ಪನೆ ಜೀವಾತ್ಮದ ಶಕ್ತಿಯಾಗಿ ಜ್ಞಾನಾನುಸಂಧಾನ ಬಯಸುತ್ತದೆ. ಬಸವಣ್ಣನು ಪ್ರಭುವಿನಂತೆ ಬೆರಗನ್ನು ಮುಂದೆ ಮಾಡುವುದಿಲ್ಲ. ಭಕ್ತನಾಗಿಯೇ ಬೆರಗನ್ನು ಅವಲೋಕಿಸುತ್ತಾನೆ. ಮಾಯೆಗೆ ವಶವಾದ ಅಜ್ಞಾನಕ್ಕೆ ಎಚ್ಚರಿಕೆಯನ್ನು ಕೊಡುತ್ತಾ ಅಪ್ಪಿಕೊಳ್ಳುತ್ತಾ “ಹಂಜರ ಬಲ್ಲಿತ್ತೆಂದು ಅಂಜದೆ” ಎಂದು ಅರಿವು ಮತ್ತು ಮಾಯೆಯ ಮಧ್ಯದಲ್ಲಿ ಜೀವಾತ್ಮವೆಂಬ ಗಿಳಿಯು ವಾಸವಾಗಿದೆ. ಈ ದೇಹವು ನಿಸರ್ಗದ ಸಂವೇದನೆಗಳನ್ನು ಅಂತರ್ಗತವಾಗಿ…

0 Comments

ಲೋಕದ ಡೊಂಕ‌ ನೀವೇಕೆ ತಿದ್ದುವಿರಿ| ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಲೋಕದ ಡೊಂಕ‌ ನೀವೇಕೆ ತಿದ್ದುವಿರಿ?ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚಕೂಡಲಸಂಗಮದೇವ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-36/ವಚನ ಸಂಖ್ಯೆ-124) ೧೨ ನೇ  ಶತಮಾನದ ವಚನ ಸಾಹಿತ್ಯ ಅಂದು ವೈಜ್ಞಾನಿಕ ಮನೋಭಾವದ ವೈಚಾರಿಕತೆಯನ್ನು ಹುಟ್ಟು ಹಾಕಿದ ಕಾಲವದು. ಭಕ್ತಿ ಸಾಹಿತ್ಯದ ಜೊತೆಗೆ ಸಾಮಾಜಿಕ ಚಿಂತನೆಯನ್ನು ಹೇಳಿದ ಶರಣರು ಸಮಾಜವನ್ನು ತಮ್ಮ ಕುಟುಂಬವೆಂದು ಸ್ವೀಕರಿಸಿದ್ದರು. ಹೀಗಾಗಿ ಲೋಕದ ತುಡಿತ ಆಶಯಗಳನ್ನು ತಮ್ಮದಾಗಿಸಿಕೊಂಡರು. ಲೋಕವೆಂದಾಗ ಸಮಾಜ-ಜನರ ನಡುವಿನ ಸಂಬಂಧ  ಸಾಮಾಜಿಕ ಸಮಸ್ಯೆಗಳಾಗಿರುತ್ತವೆ. ಲೋಕದ ಜನರ ಮನಸ್ಥಿತಿ ಎತ್ತ ಸಾಗುತ್ತಿದೆ ಎಂಬ ಅವಲೋಕನ ಬಹಳ ಮುಖ್ಯವಾಗುತ್ತದೆ. ಲೋಕ ಕಲ್ಯಾಣದ…

0 Comments

ಶರಣ ಉಳಿಯುಮೇಶ್ವರ ಚಿಕ್ಕಯ್ಯನವರು | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಸಂಕ್ಷಿಪ್ತ ಪರಿಚಯ:ಉಳಿಯುಮೇಶ್ವರ ಚಿಕ್ಕಯ್ಯ, ಉಳಿಯುಮೇಶ್ವರ ಚಿಕ್ಕಣ್ಣ ಎಂಬ ಹೆಸರುಗಳಿಂದ ಗುರುತಿಸಿಕೊಂಡ ಇವರು 12 ನೇ ಶತಮಾನದ ವಿಶ್ವಗುರು ಬಸವಣ್ಣನವರ ಸಮಕಾಲೀನ ಶರಣರಾಗಿದ್ದಾರೆ. ಇವರು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ “ದೇವರಗುಡಿ” ಎಂಬ ಗ್ರಾಮದವರು. ಇಲ್ಲಿ ದೊರೆತಿರುವ ಒಂದು ಶಾಸನದಲ್ಲಿ 5 ದತ್ತಿಗಳ ಮಾಹಿತಿ ಇದ್ದು ಅದರಲ್ಲಿ 3, 4, 5 ದತ್ತಿಗಳಲ್ಲಿ ಈ ಶರಣರ ಕುರಿತು ಉಲ್ಲೇಖವಿದೆ. 1202 ರ ಶಾಸನವು ಇವರ ಕುರಿತು ಉಲ್ಲೇಖಿಸಿದರೆ 1279 ನೇ ಇಸ್ವಿಯ ಕಲ್ಲೇದೇವರಪುರ ಶಾಸನದಲ್ಲಿ ಅನೇಕ ಶರಣರ ಹೆಸರುಗಳ ಮಧ್ಯದಲ್ಲಿ ಇವರ ಹೆಸರು ಇರುವುದು ಕಂಡುಬಂದಿದೆ. ಕಾಳಾಮುಖ ಆಚಾರ್ಯರೂ,…

1 Comment

ಬಸವಸಿದ್ಧಾಂತ ಮತ್ತು ಆಧುನಿಕ ರಿ-ಎಂಜಿನಿಯರಿಂಗ್ ತತ್ವಗಳು: ಒಂದು ತೌಲನಿಕ ವಿಶ್ಲೇಷಣೆ | ಪ್ರೊ. ಎಸ್.‌ ಜಿ. ಶಿವಶಂಕರ, ಬೆಂಗಳೂರು.

ಪೀಠಿಕೆ: ಬದಲಾವಣೆಯ ಅನಿವಾರ್ಯತೆ ಮತ್ತು ಎರಡು ಯುಗಗಳುಹನ್ನೆರಡನೇ ಶತಮಾನದ ಕಲ್ಯಾಣ ಕ್ರಾಂತಿಯ ಹರಿಕಾರ ಮಹಾತ್ಮ ಬಸವೇಶ್ವರರ ಸಾಮಾಜೋಧಾರ್ಮಿಕ ಕ್ರಾಂತಿಕಾರಕ ತತ್ವಗಳು ಮತ್ತು ಆಧುನಿಕ ಜಗತ್ತಿನ ನಿರ್ವಹಣಾ ತಜ್ಞರಾದ ಮೈಕೇಲ್ ಹ್ಯಾಮರ್ ಮತ್ತು ಜೇಮ್ಸ್ ಚಾಂಪಿ ಅವರ 'ಬಿಸಿನೆಸ್ ಪ್ರೊಸೆಸ್ ರಿ-ಎಂಜಿನಿಯರಿಂಗ್' (BPR) ಸಿದ್ಧಾಂತವನ್ನು ತೌಲನಿಕವಾಗಿ ವಿಶ್ಲೇಷಿಸುವ ಲೇಖನ. ಲೇಖನ:ವ್ಯವಸ್ಥೆಯೊಂದು ಜಡ್ಡುಗಟ್ಟಿದಾಗ, ಆಚರಣೆಗಳು ಕರಾಳ ಎನ್ನಿಸಿ, ಸಮಾಜದ ಕೆಳವರ್ಗದ ಜನರ ಶೋಷಣೆ ತಾರಕಕ್ಕೇರಿದಾಗ ಅವುಗಳನ್ನು ಮರುರೂಪಿಸುವ ಕ್ರಾಂತಿಕಾರಿ ನಾಯಕರು ಉದಯಿಸುತ್ತಾರೆ. ಇಂತಹ ಮಹತ್ತರ ಕ್ರಾಂತಿಕಾರಕ ಬದಲಾವಣೆಯನ್ನು ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಸ್ತರಗಳಲ್ಲಿ ತಂದವರು ಹನ್ನೆರಡನೇ ಶತಮಾನದ ಕ್ರಾಂತಿಕಾರಿ…

0 Comments

ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ಫ. ಗು ಹಳಕಟ್ಟಿ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಡಾ. ಫ. ಗು ಹಳಕಟ್ಟಿ ಅವರು ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ಎಂದೆ ಪ್ರಸಿದ್ಧಿ ಪಡೆದವರು. ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ವಚನ ಸಾಹಿತ್ಯವೆಂಬ ಅನರ್ಘ್ಯ ರತ್ನಗಳನ್ನ ಶೋಧಿಸಿ, ಅನ್ವೇಶಿಸಿ, ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಿದರು. ಈ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಮನೆ, ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ತಾಡೊಲೆಗಳನ್ನು ಹುಡುಕಿ ತಂದು ವಚನಗಳನ್ನ ಮುದ್ರಿಸಿದರು. ಕನ್ನಡದ ಕಣ್ವ ಶ್ರೀ. ಬಿ. ಎಂ. ಶ್ರೀಕಂಠಯ್ಯನವರಿಂದ “ವಚನ ಗುಮ್ಮಟ” ಎಂದು ಕರೆಸಿಕೊಂಡ ರಾವ್‌ ಬಹಾದ್ದೂರ್‌ ಡಾ. ಫ. ಗು ಹಳಕಟ್ಟೆಯವರು ಜನಿಸಿದ್ದು 1880 ರ ಜುಲೈ 2 ರಂದು,…

0 Comments

ನೀರಲಕೇರಿ ಬಸವಲಿಂಗ ಶಿವಯೋಗಿಗಳು | ಡಾ. ಕೆ ಶಶಿಕಾಂತ, ಲಿಂಗಸೂಗೂರು.

ಕನ್ನಡವು ಭಾರತೀಯ ಸಂಸ್ಕೃತಿಯ ಭವ್ಯ ಪರಂಪರೆಯ ಅನೇಕ ವಿಧಗಳಿಗೆ ಮಾತೃಭೂಮಿಯಾಗಿದೆ. ಕಲೆ, ವಿಜ್ಞಾನ, ಸಾಹಿತ್ಯ, ಸಂಗೀತ, ಆಧ್ಯಾತ್ಮ, ಧರ್ಮ, ಸಂಸ್ಕೃತಿಯೇ ಮೊದಲಾದವುಗಳಿಗೆ ತಾಯಿ ಬೇರು ಈ ಕನ್ನಡವೇ ಆಗಿದೆ. ಇಂಥ ವಿವಿಧ ಪರಂಪರೆಯಲ್ಲಿ ವಿಶ್ವಕ್ಕೆ ಶ್ರೇಷ್ಠ ಎನಿಸಿದೆ. 12 ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಆಗಿ ಹೋದ ಬಸವಾದಿ ಶರಣ ಶರಣೆಯರ  ಪ್ರಣೀತವಾದ ವಚನ ಸಾಹಿತ್ಯ ಮಿಗಿಲಾದುದಾಗಿದೆ. ಜಾಗತಿಕವಾದ ತತ್ವಜ್ಞಾನ ಮತ್ತು ಸಾಹಿತ್ಯ ಪರಂಪರೆಯಲ್ಲಿ ಈ 'ವಚನ' ಸಾಹಿತ್ಯವು ಬಹುಮುಖಿ ಕಾರಣವಾಗಿ ಕನ್ನಡದ ಅಸ್ಮಿತೆಯಾಗಿದೆ. 'ವಚನ' ಎಂದರೆ ಸಾಮಾನ್ಯ ಅರ್ಥದಲ್ಲಿ 'ಮಾತು', 'ಪ್ರಮಾಣ' ಎಂದರ್ಥ. ಆದರೆ ಇದನ್ನೊಂದು 'ಸಾಹಿತ್ಯ'…

0 Comments