ಆರೋಗ್ಯಕ್ಕೆ ವಚನಾಮೃತ / ಡಾ. ಸಿ. ಆರ್.‌ ಚಂದ್ರಶೇಖರ, ಬೆಂಗಳೂರು.

ಪ್ರಸಕ್ತ ಸಮಾಜದಲ್ಲಿ ನಮ್ಮ ಬದುಕು ಸಂಕೀರ್ಣ ಮತ್ತು ಸಂಕಷ್ಟಮಯವಾಗುತ್ತಿದೆ. ಭೋಗ ಭಾಗ್ಯಗಳ “ಕಂಸ್ಯೂಮರ್”‌ ಜಗತ್ತಿನಲ್ಲಿ ʼಹಣ-ವಸ್ತು-ರಂಜನೆʼಯಿಂದಲೆ ಸುಖ-ಸಂತೋಷವೆಂಬ ಸೂತ್ರ ನಮ್ಮನ್ನು ಬಂಧಿಸಿದೆ. Marks-Materials-Money ಈ ಮೂರೂ ʼಎಂʼಗಳೂ ಬಾಲ್ಯದಿಂದ ಮುಪ್ಪಿನವರೆಗೆ ನಮ್ಮನ್ನು ಕಾಡುತ್ತಿವೆ. ಶಾಲಾ-ಕಾಲೇಜು ವಿದ್ಯಾಭ್ಯಾಸದಲ್ಲಿ Marks (ಅಂಕಗಳು) ನಂತರ ಹಣ ಸಂಪಾದನೆ-ಬೇರೆಯವರಿಗಿಂತ ಹೆಚ್ಚಾಗಿ ನಮಗೇ ಸಿಗಬೇಕು. ಹಾಗೆಯೇ ಐಷಾರಾಮಿ ವಸ್ತುಗಳು (Materials) ಎಷ್ಟಿದ್ದರೂ ಸಾಲದು. ಮನೆಯೊಳಗಿನ ಸ್ನೇಹ ಸಂಬಂಧಗಳು ಮನೆಯ ಹೊರಗಿನ ಸ್ನೇಹ ಸಂಬಂಧಗಳು ಶಿಥಿಲವಾಗುತ್ತಿವೆ. ಯಾರಿಗೆ ಯಾರೋ ಎರವಿನ ಸಂಸಾರ. ನಾನು ಕಂಡ ಹಲವಾರು ಕುಟುಂಬಗಳಲ್ಲಿ ಗಂಡನಿಗೆ ಹೆಂಡತಿಯ ಆಸರೆ ಇಲ್ಲ. ಹೆಂಡತಿಗೆ ಗಂಡನ ಆಸರೆ ಇಲ್ಲ. ತಂದೆ ತಾಯಿಗಳಿಗೆ ಮಕ್ಕಳ ಆಸರೆ ಇಲ್ಲ. ವ್ಯಕ್ತಿ ಕೇಂದ್ರೀಕೃತ ವ್ಯವಸ್ಥೆಯಲ್ಲಿ ʼನಾನು ಕ್ಷೇಮʼ ಎಂಬುದಕ್ಕೆ ಮಾತ್ರ ಸೀಮಿತವಾಗಿದೆ. ʼನೀವು ಕ್ಷೇಮವೇʼ ಎಂದು ಕೇಳುವವರಿಲ್ಲದಂತಾಗಿದೆ. ಇಷ್ಟ ಬಂದಾಗ ಇತಿ ಮಿತಿಯಿಲ್ಲದ ಆಹಾರ ಸೇವನೆ. ಯಾವಾಗಲೋ ನಿದ್ರೆ, ಖುಷಿಗಾಗಿ ಯಾರೊಂದಿಗಾದರೂ ಮೈಥುನ, ನೀತಿ ನಿಯಮಗಳ ಉಲ್ಲಂಘನೆ. ಸದಾ ಅತೃಪ್ತಿ, ಅಸಮಾಧಾನ, ಆತಂಕ, ಬೇಸರ, ಸಿಟ್ಟು, ಮತ್ಸರ, ಚಿಂತೆ-ವ್ಯಥೆ, ಒತ್ತಡಗಳು ನಮ್ಮ ಮೈಮನಸ್ಸುಗಳನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ತತ್ಫಲವಾಗಿ ಶೇಕಡಾ 75 ರಷ್ಟು ಜನ ಒಂದಲ್ಲಾ ಒಂದು ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಧಿಕ ರಕ್ತದೊತ್ತಡವೋ, ಸಿಹಿಮೂತ್ರ ರೋಗವೋ, ಥೈರಾಯಿಡ್‌ ಸಮಸ್ಯೆಯೋ, ಖಿನ್ನತೆಯ ಆತಂಕವೋ, ಅಸಿಡಿಟಿ ಅಲ್ಸರೋ, ತಲೆನೋವೋ ಇರದ ವ್ಯಕ್ತಿಗಳು ಅಪರೂಪವಾಗುತ್ತಿದ್ದಾರೆ. ಅಲೋಪತಿ, ಆಯುರ್ವೇದ, ಹೋಮಿಯೋಪತಿ ಔಷಧಿಗಳನ್ನು ನುಂಗುತ್ತಿರುತ್ತಾರೆ. ಕಸರತ್ತು ಮಾಡುತ್ತಾರೆ. ವಾಕಿಂಗ್‌ ಜಾಗಿಂಗ್‌ ಮಾಡುತ್ತಾರೆ. ಯೋಗ-ಪ್ರಾಣಾಯಾಮ ಮಾಡುತ್ತಾರೆ. ದೇವಸ್ಥಾನ, ಮಸೀದಿ, ದರ್ಗಾ-ಚರ್ಚುಗಳಿಗೆ ಹೋಗಿ ಆರೋಗ್ಯಕ್ಕೆ ಪ್ರಾರ್ಥನೆ ಪೂಜೆ ಸಲ್ಲಿಸುತ್ತಾರೆ. ಆದರೂ ಆರೋಗ್ಯಭಾಗ್ಯ ಬಹು ಜನರಿಗೆ ಒಂದು ಮರೀಚಿಕೆಯಾಗಿಯೇ ಉಳಿದಿದೆ.

12 ನೇ ಶತಮಾನದ ವಚನಕಾರರು ಈ ಎಲ್ಲ ದ್ವಂದ್ವಗಳಿಗೆ ಮನಸ್ಸಿನ ನೋವು ನಿರಾಶೆ, ಹತಾಶೆಗಳಿಗೆ, ಸರಳ ಕನ್ನಡದಲ್ಲಿ ಪಾಮರರಿಗೂ ಅರ್ಥವಾಗುವ ಹಾಗೆ, ಮನಮುಟ್ಟುವ ಹಾಗೆ ತಿಳಿಯ ಹೇಳಿದ್ದಾರೆ. ನಮ್ಮ ಆಸೆ-ಆಕಾಂಕ್ಷೆಗಳು ನಿಲುವು ಧೋರಣೆಗಳು ಹೇಗಿರಬೇಕು? ದುಃಖವನ್ನು ಹೇಗೆ ಭರಿಸಬೇಕು? ಕೋಪವನ್ನು ಹೇಗೆ ನಿಗ್ರಹಿಸಬೇಕು? ಭಯವನ್ನು ಹೇಗೆ ತಪ್ಪಿಸಬೇಕು? ಎಂಬುದನ್ನು ವಿವರಿಸಿದ್ದಾರೆ.

ಬದುಕಲು ಹಣ ಬೇಕು ನಿಜ ಆದರೆ ಹಣ ಸಂಪಾದನೆಗೆ ಅಕ್ರಮ ಮಾರ್ಗಗಳನ್ನು ಅನುಸರಿಸಿದರೆ, ಇತರರ ಹೊಟ್ಟೆಯ ಮೇಲೆ ಹೊಡೆದರೆ ಹೇಗೆ?

ಎಂದಿದ್ದಾರೆ ಬಸವಣ್ಣನವರು.

ಹೆಚ್ಚು ಹಣ/ಆಸ್ತಿ ಮನುಷ್ಯನಿಗೆ ಮದ-ಅಹಂಕಾರವನ್ನು ತರುತ್ತವೆ. ಅವನಲ್ಲಿ ಮಾನವೀಯ ಗುಣಗಳು ಮರೆಯಾಗುತ್ತವೆ. ಬಡವರನ್ನು ದುರ್ಬಲರನ್ನು ನಿಕೃಷ್ಟವಾಗಿ ಕಾಣುತ್ತಾನೆ. ಪರಪೀಡನೆ ಮಾಡುತ್ತಾನೆ. ಅಂಥವರನ್ನೂ ಕೂಡ ಬಸವಣ್ನ

ಎಂದಿದ್ದಾರೆ.

ಹಣ-ಹೆಣ್ಣು-ಮಣ್ಣು ಈ ಮೂರು ಮನುಷ್ಯನ ಮನಸ್ಸನ್ನು ಕೆಡಿಸುತ್ತವೆ. ಅವನ ಕೈಯಲ್ಲಿ ಅನಾಚಾರವನ್ನು ಮಾಡಿಸುತ್ತಾನೆ. ಆದ್ದರಿಂದ

ಎಂದು ಹೇಳಿ ಎಚ್ಚರಿಸಿದ್ದಾರೆ.

ಇದೇ ಮಾತನ್ನು ಬಳ್ಳೇಶ ಮಲ್ಲಯ್ಯನೆಂಬ ವಚನಕಾರ ಹೀಗೆ ಹೇಳಿದ್ದಾನೆ.

ಭಯ-ಅಂಜಿಕೆ ಮನಸ್ಸನ್ನು ಅಲ್ಲೋಲ ಕಲ್ಲೋಲಗೊಳಿಸುತ್ತದೆ. ಅಪಾಯವಿದೆ ಎನ್ನುವ ಆಲೋಚನೆಯೇ ಭಯವನ್ನುಂಟು ಮಾಡುತ್ತದೆ. ನಿಜವಾದ ಅಪಾಯ ಎದುರಾದರಂತೂ ಭಯ ಮೇರೆ ಮೀರುತ್ತದೆ. ಭಯದಿಂದ ವ್ಯಕ್ತಿ ದುರ್ಬಲನಂತೆ ಓಡಿಹೋಗುತ್ತಾನೆ. ಅದನ್ನು ಕಂಡು ಶರಣೆ ಅಕ್ಕಮಹಾದೇವಿ ನಮಗೆ ಯಾವ ರೀತಿ ಸಾಂತ್ವ ಹೇಳುತ್ತಾಳೆ ಕೇಳಿ.

ಸಾವು ಕಂಡರೆ ಎಲ್ಲರಿಗೂ ಭಯ. ಅದು ಯಾವಾಗ ಹೇಗೆ ಬರುವಿದೋ ಎಂಬ ಹೆದರಿಕೆ. ಇನ್ನು ಆತ್ಮೀಯರು ಸತ್ತರೆ, ದುಃಖವನ್ನು ಸಹಿಸಲಾಗದು. ಸಾವು ದೀರ್ಘಕಾಲದ ನೋವನ್ನುಂಟು ಮಾಡುತ್ತದೆ. ವಚನಕಾರರು ಶರಣರಿಗೆ ಮರಣವೇ ಮಹಾನವಮಿ ಎಂದರು. ಸಾವು ಬಂದಾಗ ಒಪ್ಪಿಕೊಳ್ಳಿ ಎಂದರು.

ಅಕ್ಕಮಹಾದೇವಿಯೂ ಕೂಡ ಸಾವು ನಮ್ಮ ಬೆನ್ನ ಬಿಡದು ಎನ್ನುತ್ತಾಳೆ.

ನಾವು ಹೇಗೆ ಬದುಕಬೇಕು? ನಮಗೂ ಹಿತವಾಗಿ, ಪರರಿಗೂ ಹಿತವಾಗಿ ಬದುಕಿದರೆ ಎಷ್ಟು ಚಂದ. ಎಲ್ಲ ಧರ್ಮಗಳ ನೀತಿ ಬೋಧೆಯನ್ನು ಈ ವಚನದಲ್ಲಿ ಅಣ್ಣನವರು ಸೆರೆ ಹಿಡಿದಿದ್ದಾರೆ.

ಮಾತಿನ ಮಹತ್ವ:

ಮಾತು ನಮ್ಮನ್ನು ಬದುಕಿಸಬಲ್ಲುದು. ಮಾತು ನಮ್ಮನ್ನು ಕೊಲ್ಲಲೂಬಹುದು. ಒಳ್ಳೆಯ ಮಾತುಗಳು ನಮಗೆ ಸ್ನೇಹಿತರನ್ನು ತಂದುಕೊಟ್ಟರೆ, ಕೆಟ್ಟ ಮಾತುಗಳು ಶತೃಗಳ ದಂಡನ್ನೇ ಸೃಷ್ಟಿಸುತ್ತದೆ. ಜೊತೆಯಲ್ಲಿ ಅಪಾಯವನ್ನೂ ತರುತ್ತದೆ.

ವಚನಕಾರ ಶರಣ ಬಹುರೂಪಿ ಚೌಡಯ್ಯನವರು, ಅಕ್ಕಮಹಾದೇವಿಯವರ ಮಾತುಗಳನ್ನು ಪುನರುಚ್ಛರಿಸಿದ್ದಾರೆ

ಅಂಬಿಗರ ಚೌಡಯ್ಯ, ಅಂತ್ಯವಿಲ್ಲದ ನಮ್ಮ ಆಸೆಯ ಬಗ್ಗೆ ಸೊಗಸಾದ ವಚನವನ್ನು ರಚಿಸಿದ್ದಾನೆ.

ಅತಿ ಆಸೆಯಂತೆ ಅತಿ ಹೊಗಳಿಕೆಯೂ ಬೇಡ ಎನ್ನುತ್ತಾರೆ ಬಸವಣ್ಣನವರು

ಯಾವುದೇ ಕಷ್ಟ ನಷ್ಟ ನೋವು, ರೋಗ-ರುಜಿನ ಬರಲಿ, ಕೂಡಲಸಂಗಮದೇವನನ್ನು ನೆನೆಯಿರಿ, ಅವನ ಮೊರೆ ಹೋಗಿರಿ ಎನ್ನುತ್ತಾರೆ ಬಸವಣ್ಣನವರು.

ಹೀಗೆ ವಚನಗಳು ನಮ್ಮ ಮನಸ್ಸಿನ ನೆಮ್ಮದಿ ಸಮಾಧಾನಕ್ಕೆ ಆರೋಗ್ಯಕ್ಕೆ ದಾರಿ ತೋರುತ್ತವೆ. ಅರ್ಥ ಮಾಡಿಕೊಂಡು ಜೀವನ ಮಾಡಬೇಕು.

ಡಾ. ಸಿ. ಆರ್‌ ಚಂದ್ರಶೇಖರ
ಬೆಂಗಳೂರು.
ಫೋನ್ ನಂ:+91 98456 05615

Loading

This Post Has One Comment

  1. ಎಂ. ಎಸ್. ಪಾವಟೆ ಮು : ಸಿಡ್ನಿ, ಆಸ್ಟ್ರೇಲಿಯಾ

    ವಚನ ಸಾಹಿತ್ಯ ಬದಕುವ ಹಾರಿಸುವುದು. ಹಾಗೆ ಆ ದಾರಿಯಲ್ಲಿ ನಾವು ಸಾಗಬೇಕು. – ಎಂ. ಎಸ್. ಪಾವಟೆ , ಬಾಗಲಕೋಟೆ

Leave a Reply