
ಅನುಭವ ಮಂಟಪ ಕುರಿತು ಡಾ. ಶಿವಾನಂದ ಜಾಮದಾರ ಅವರು, ಡಾ. ಬೆಲ್ದಾಳ ಶರಣರು, ಶ್ರೀ ರಂಜಾನ್ ದರ್ಗಾ ಅವರು, ಡಾ. ವಿಶ್ವಾರಾಧ್ಯ ಸತ್ಯಂಪೇಟೆ ಮುಂತಾದ ಅನೇಕ ವಚನ ಸಾಹಿತ್ಯದ ವಿದ್ವಾಂಸರುಗಳು ಸಾಕ್ಷೀ ಸಮೇತ ನಿರೂಪಿಸಿದ ಬಳಿಕವೂ ಈ ಥರಾ ಬರೆಯುವ ಅವಶ್ಯಕತೆ ಮತ್ತು ಇವರ ಉದ್ದೇಶವೇನು ಅಂತಾ ಅರ್ಥಾ ಆಗತಾ ಇಲ್ಲಾ.
- ಪ್ರಧಾನಿಗಳು ಹೊಸ ಸಂಸತ್ ಭವನಕ್ಕೆ ಅನುಭವ ಮಂಟಪವೇ ಮಾದರೀ ಅಂತ ಹೇಳಿದ್ದಕ್ಕೆ ಹೊಟ್ಟೆ ಉರೀನಾ ???
- ಬಸವಣ್ಣ ಸಾಂಸ್ಕೃತಿಕ ನಾಯಕ ಅಂತಾ ಕರ್ನಾಟಕ ಸರ್ಕಾರ ಘೋಷಣೆ ಮಾಡಿದ್ದಕ್ಕೆ ಹೊಟ್ಟೆ ಉರೀನಾ ???
ಯಾಕೆ ಹೀಗೆ ಜನಿವಾರಧಾರಿ ವೈದಿಕರು ಬಸವಣ್ಣನವರಿಗೆ, ವಚನ ಸಾಹಿತ್ಯಕ್ಕೆ ಮತ್ತು ಶರಣ ಸಿದ್ಧಾಂತಕ್ಕೆ ಶನಿಗಳಂತೆ ಗಂಟು ಬಿದ್ದೀರೀ ಅರ್ಥಾ ಆಗತಿಲ್ಲಾ. ಬಸವಣ್ಣನವರಿಗೆ ಶತಾಯಗತಾಯ ಜನಿವಾರವನ್ನು ಹಾಕಬೇಕೆಂದು ಹಾತೊರೆಯುತ್ತಿದ್ದೀರಿ? ನೀವೂ ಕೂಡ ನಿಮ್ಮ ರೇಣುಕಾಚಾರ್ಯ, ಪಂಚಾಚಾರ್ಯ, ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಚಾರ್ಯ, ಬುದ್ಧ, ಮಹಾವೀರಂಥ ಅತ್ಯಂತ ಶ್ರೇಷ್ಠರನ್ನು ವೈಭವೀಕರಿಸಿ ಮುನ್ನೆಲೆಗೆ ತನ್ನಿ. ನಾವೂ ಕೂಡ ಹೆಮ್ಮೆ ಪಡುತ್ತೇವೆ.
ಈ ಸಂದರ್ಭ ನೆನಪ ಆದ ಕೂಡಲೇ ಮತ್ತೆ ಮತ್ತೆ ನನಗೆ ನೆನಪಾಗೋದು ಗಿರೀಶ ಕಾರ್ನಾಡ್ ಅವರ ಒಂದು ಮಾತು. ತುಂಬಾ ಜನಜನಿತವಾದ ಮಾತು. ಬಹಳ ಜನ ಹೇಳತಾರೆ. ನಾನಂತೂ ಅದನ್ನು ಮತ್ತೆ ಮತ್ತೆ ಹೇಳತೇನೆ. ಯಾಕಂದರೆ ಆ ಮಾತಿಗೆ ಸಾರ್ವಕಾಲಿಕ ಪ್ರಸ್ತುತತೆ ಇದೆ ಅನ್ನುವ ಅರ್ಥದಲ್ಲಿ. ಅವರು ತಮ್ಮ ತಲೆದಂಡ ನಾಟಕದ ಲೇಖಕರ ನುಡಿಯಲ್ಲಿ ಬರೀತಾರೆ.
ನೋಯುವ ಹಲ್ಲಿಗೆ ನಾಲಗೆ ಮತ್ತೆ ಮತ್ತೆ ಹೊರಳುವಂತೆ ಪ್ರತಿಯೊಬ್ಬ ಕನ್ನಡಿಗ ಮತ್ತೆ ಮತ್ತೆ 12 ನೇ ಶತಮಾನದ ಬೆರಗುಗೊಳಿಸುವ ಪ್ರತಿಭೆಗೆ, ಆ ಉತ್ಸಾಹಕ್ಕೆ, ಮೌಲಿಕ ಪ್ರಶ್ನೆಗಳನ್ನು ಕೇಳುವೆದೆಗಾರಿಕೆಗೆ, ಗೆಲುವಿಗೆ, ನೋವಿಗೆ ಮರಳುವದು ಮತ್ತು ಅದನ್ನು ಹೊಸ ಸಂದರ್ಭದಲ್ಲಿ ಅರ್ಥೈಸಲು ಯತ್ನಿಸುವುದು ಅನಿವಾರ್ಯ.
ಯಾವಾಗ್ಯಾವಾಗ ನಮ್ಮ ಮನಸ್ಸಿಗೆ ನೋವಾಗತದೆಯೋ, ಇಲ್ಲಿ ಹಲ್ಲನ್ನು ಪ್ರಾತಿನಿಧಿಕವಾಗಿ ಹೇಳತಾರೆ ಒಂದು ರೂಪಕದ ಅರ್ಥದಲ್ಲಿ. ಈ ಹಲ್ಲು ನೋವಾಗತಿದ್ದಂಗೆ ನಮಗೆ ಗೊತ್ತಿಲ್ಲದಂಗೆ ಅಪ್ರಜ್ಞಾಪೂರ್ವಕವಾಗಿ ನಮ್ಮ ನಾಲಿಗೆ ಹಲ್ಲಿನ ಹತ್ತಿರ ಹೋಗಿ ಅಪ್ಪ ನಾನಿದ್ದೀನಿ ನಿನ್ನ ಜೊತೆಗೆ ನಾನು ನಿನ್ನ ನೋವನ್ನು ಮಾಯಿಸತೇನೆ ಅಂತ ಹೇಳಿ ಅದರ ಹತ್ತಿರ ಹೋಗಿ ಒಂದಿಷ್ಟು ಸಾಂತ್ವನ ಹೇಳತದಲ್ಲಾ ಹಾಗೆ ವಚನ ಸಾಹಿತ್ಯ, ವಚನ ಕ್ರಾಂತಿ ಅನ್ನೋದು, ಶರಣರ ಮಾತುಗಳೆಲ್ಲವೂ ಯಾವ ಸಂದರ್ಭದಲ್ಲಿ ನಮ್ಮ ಮನಸ್ಸುಗಳಿಗೆ, ನಮ್ಮ ಸಮಾಜಕ್ಕೆ ನೋವಾಗತದೆ ಅಂಥ ಸಂದರ್ಭದಲ್ಲಿ ಆ ವಚನಗಳು ಒಂದು ರೀತಿಯ ಮುಲಾಮಿನ ರೀತಿಯಲ್ಲಿ ಕೆಲಸ ಮಾಡತಾವೆ. ಮಾರ್ಗ ತೋರಿಸತಾವೆ. ಮಾಯಿಸಲಿಕ್ಕೆ ಅಷ್ಟೇ ಅಲ್ಲಾ ಮುಂದಿನ ಮುಂಗಾಣಿಕೆಯನ್ನೂ ಕೊಡಲಿಕ್ಕೆ ಅನ್ನೋ ಅರ್ಥದಲ್ಲಿ ಈ ಮಾತನ್ನು ಗಮನಿಸಬೇಕು.
12 ನೇ ಶತಮಾನದಲ್ಲಿ ಬಸವಣ್ಣ ಮಾಡಿದ ಕ್ರಾಂತಿ ಇದೆಯಲ್ಲಾ ಅದಕ್ಕೆ ಸಾರ್ವಕಾಲಿಕ ಮಹತ್ವ ಇದೆ ಅನ್ನೋದನ್ನ ಈ ಹಿನ್ನೆಲೆಯಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕು. ಇಷ್ಟು ಅನಿವಾರ್ಯತೆ ಇದೆಯಲ್ಲಾ ಬಸವಣ್ಣನ ವಚನಗಳಲ್ಲಿ ಅಥವಾ ಬಸವಣ್ಣನವರ ಜೊತೆಗಿದ್ದಂಥಾ ಇತರ ವಚನಕಾರರ ಎಲ್ಲ ವಚನಗಳಿಗೂ ಸಾರ್ವಕಾಲಿಕ ಮಹತ್ವ ಇರೋದೇ ಆ ಹಿನ್ನೆಲೆಯಲ್ಲಿ. ನಮಗೆ ನೋವಾದಾಗ ಅಂಥಾ ವಚನಗಳು ನಮಗೆ ಆ ನೋವನ್ನು ಮಾಯಿಸುವಂಥ ಶಕ್ತಿ ಪಡೆದಿದಾವೆ.

ಇದು ನಿಮ್ಮವರೇ ಆದ ಡಾ. ಗಿರೀಶ ಕಾರ್ನಾಡ ಅವರು 12 ನೇ ಶತಮಾನವನ್ನು ಕುರಿತು ಹೇಳಿದ ಮಾತುಗಳು. ಈಗಲಾದರೂ ಅರ್ಥ ಮಾಡಿಕೊಳ್ಳಿ. ಅದು ಬಿಟ್ಟು ಬಸವ ತತ್ವ, ಶರಣ ಸಿದ್ಧಾಂತ ಮತ್ತು ವಚನ ಸಾಹಿತ್ಯವನ್ನು ಹೀಯಾಳಿಸುವ ತೀರ ತೀರ ತಳಸ್ಥರದ ಮಟ್ಟಕ್ಕೆ ಇಳಿದು ಭಾಷಣಗಳಲ್ಲಿ ಮಾತಾಡಿ ಪೇಪರನಲ್ಲಿ ಬರೆದು ಪುಸ್ತಕಗಳಲ್ಲಿ ಪ್ರಕಟಿಸಿ ನಿಮ್ಮ ಮರ್ಯಾದೆಯನ್ನು ನೀವೇ ಹರಾಜು ಹಾಕಿಕೊಳ್ಳತಾ ಇದೀರಿ. ನಿಮ್ಮ ಜಾಣತನವೇ ನಿಮಗೆ ಮುಳ್ಳಾಗಿರುವುದು ಈಗ ಜಗಜ್ಜಾಹೀರಾಗಿದೆ.
ಬಸವ ತತ್ವ, ವಚನ ಸಾಹಿತ್ಯ ಮತ್ತು ಶರಣ ಸಿದ್ಧಾಂತಕ್ಕೆ ಶನಿಯ ಹಾಗೆ ವಕ್ಕರಿಸಿರುವ ವೀರಶೈವರ ಕಥೆನೂ ಹೀಗೇನೆ ಆಗಿದೆ. ಮುಖಕ್ಕ ಮಸಿ ಬಳದರೂ ಮೇಕಪ್ ಮಾಡಕೊಂಡೇವಂತ ಜಿಗದಾಡಾಕತ್ಯಾರ. ಕೆಲ ಎಡಬಿಡಂಗಿ ಲಿಂಗಾಯತ ವಿರಕ್ತ ಸ್ವಾಮಿಗಳ ಕಥೀನೂ ಇದಕಿಂತ ಬೇರೆ ಇಲ್ಲಾ. ಎಷ್ಟ ಜಲ್ದಿ ಆಕ್ಕೇತಿ ಅಷ್ಟ ಜಲ್ದಿ ಬಸವ ತತ್ವಕ್ಕೆ ಹೊಳ್ಳಿ ಬರ್ರಿ. ಇಲ್ಲಾಂದರ ನಿಮ್ಮ ಮಠಗಳಿಗೆ, ನಿಮ್ಮ ದೇವಸ್ಥಾನಗಳಿಗೆ ಲಿಂಗಾಯತರು ಭಿಕ್ಷಾ ಹಾಕೂದ ನಿಲ್ಲಸತಾರ. ಇವತ್ತಲ್ಲಾ ನಾಳೆ ಹಾದಿ ಬೀದಿಗೆ ಬಂದು ಅಮ್ಮಾ ತಾಯೆ ಕವಳ ಅಂತ ಒದರೂದಂತೂ ಗ್ಯಾರಂಟಿ.
ಶ್ವಾನ ಬೊಗಳಿದರೆ ಆನೆಗೇನೂ ಆಗೋದಿಲ್ಲಾ ಅನ್ನೋದು ನಿಮ್ಮಂಥ ಬೆರಳೆಣಿಕೆ ಲೇಖಕರಿಂದ ಭಾಷಣಕಾರರಿಂದ ಇಡೀ ಜಗತ್ತಿಗೆಲ್ಲಾ ಗೊತ್ತಾಗಿದೆ. ಆದಷ್ಟು ಬೇಗ ಸುಧಾರಿಸಿಕೊಂಡು-ಎಚ್ಚತ್ತುಕೊಂಡು Main Stream ಗೆ ಬನ್ನಿ.
ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಇಂಗ್ಲೀಷ್ ಶಾಲೆಯ ಹತ್ತಿರ
ಸುಭಾಷ್ ನಗರ, ಕ್ಯಾತ್ಸಂದ್ರ
ತುಮಕೂರು – 572 104
ಮೋ. ನಂ: +91 9741 357 132.
ಈ-ಮೇಲ್: vijikammar@gmail.com
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in and admin@vachanamandara.in