ಡಾ. ಶೀಲಾದೇವಿ ಮಳಿಮಠ-ಜ್ಞಾನದಿಂದ ಅನುಪಮ ಸುಜ್ಞಾನದೆಡೆಗೆ ಕೊಂಡೊಯ್ಯುವ ಚಿಂತಾಮಣಿ

This image has an empty alt attribute; its file name is MALLIMATH-964x1024.jpg

Primary objective of education is to make children fearless
  – Swami Vivekananda

“ಶಿಕ್ಷಣದ ಮೂಲಭೂತ ಉದ್ದೇಶ ಅಂದರೆ ವಿದ್ಯಾರ್ಥಿಗಳನ್ನು ಧೈರ್ಯವಂತರನ್ನಾಗಿ ಮಾಡುವುದು”. ಸ್ವಾಮಿ ವಿವೇಕಾನಂದ ಅವರ ಸುಪ್ರಸಿದ್ಧ ಹೇಳಿಕೆಗೆ ಇಲ್ಲಿ ಮಹತ್ವ ಯಾಕೆ ಬಂತು ಅಂದರೆ ಡಾ. ಶೀಲಾದೇವಿ ಮಳಿಮಠ ಅವರು ತಮ್ಮ ಶಿಷ್ಯ ಬಳಗವನ್ನು ತಯಾರಿಸಿದ ರೀತಿ ಅದ್ಭುತ ಮತ್ತು ಅನುಪಮ. ಅವರ ಯಾರೇ ಶಿಷ್ಯರನ್ನು ಮಾತಾಡಿಸಿ ನೋಡಿ, ಅವರಲ್ಲಿರುವ ಪ್ರತಿಭೆಯ ಜೊತೆಗೆ ಶಿಸ್ತು ಮತ್ತು ಕನಸು ಕಂಗಳ ಹೊಳಪನ್ನು ಕಾಣಬಹುದು. ಅಕ್ಷರಶಃ Fearless in Knowledge ನ್ನು ಅವರ ಶಿಷ್ಯ ಬಳಗದಲ್ಲಿ ಕಾಣಬಹುದು. ಅವರ ಶಿಷ್ಯರ ಜೊತೆಗೆ ಇಡೀ ದಿನ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರ ಗ್ರಾಮದಲ್ಲಿ “ತೊಪ್ಪೆ ಗುರುಸ್ವಾಮಿಯವರು” ಎನ್ನುವ ಸಾಕ್ಷ್ಯ ಚಿತ್ರದ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಸರಿ ಸುಮಾರು 30 ಶಿಷ್ಯರೊಂದಿಗೆ ಅವರ ಒಡನಾಟ ಮತ್ತು ಪ್ರೋತ್ಸಾಹ ಕೊಡುವುದನ್ನು ಕಣ್ಣಾರೆ ಕಂಡಿದ್ದೇನೆ. ಪ್ರಬುದ್ಧ ಮತ್ತು ಅಸ್ಖಲಿತ ಭಾಷಣಕಾರರು, ನಿರಂತರ ಸಂಶೋಧನೆಯಲ್ಲಿ ತೊಡಗಿಸಿಕೊಂಡವರು ಮತ್ತು ದಣಿವರಿಯದ ಸಾಹಸಿ ಜೊತೆಗೆ ನಿರಂತರ ವಿದ್ಯಾರ್ಥಿಯಾಗಿರುವ ಡಾ. ಶೀಲಾದೇವಿಯವರ ಮಳಿಮಠ ಅವರ ಬಗ್ಗೆ ಪರಿಚಯ ಲೇಖನ ಬರೆಯುವುದು ಸೌಭಾಗ್ಯ ಮತ್ತು ಗೌರವದ ಸನ್ಮಾನ.     

ಇಡೀ ಪ್ರಪಂಚ ಅರಿವಿನ ಕತ್ತಲೆಯಲ್ಲಿದ್ದಾಗ ಅದ್ಭುತ ತತ್ವ ಸಿದ್ಧಾಂತಗಳನ್ನು ನಾಡಿಗೆ ನೀಡಿ ಬೆಳಕನ್ನಿತ್ತ ಶಿವನ ಪ್ರಕಾಶ ಅದು 12 ನೇ ಶತಮಾನ. ಜಗತ್ತಿನಲ್ಲಿ ಭಾಷೆ ಎನ್ನುವುದು ಸಂಜ್ಞೆಗಳ ರೂಪದಲ್ಲಿದ್ದ “Creole” ನ ಕಾಲಘಟ್ಟದಲ್ಲಿ ಕನ್ನಡದಲ್ಲಿ ಅತ್ಯಂತ ಸಮೃದ್ಧ ಮತ್ತು ವಿಪುಲವಾದ ಸಾಹಿತ್ಯ ನಿರ್ಮಾಣವಾಗಿದ್ದು 12 ನೇ ಶತಮಾನದಲ್ಲಿ. ಆ ಕಾಲಘಟ್ಟದಲ್ಲಿದ್ದ ಶರಣ ಸಂಸ್ಕೃತಿ, ಶರಣ ಪರಂಪರೆ, ಶರಣರ ಸಾಮಾಜಿಕ ಜನಜೀವನ ನೆನೆಸಿಕೊಂಡರೆ ಹೃದಯದಲ್ಲಿ ಒಂದು ತಂಗಾಳಿಯ ಸಿಂಚನ ಈಗಲೂ ಆಗುತ್ತದೆ. ಶ್ರೇಣೀಕೃತ ಸಮಾಜದಲ್ಲಿ ವಿವಿಧ ಸ್ಥರಗಳಲ್ಲಿದ್ದ ಶರಣರು ಅಂತರಂಗ ಮತ್ತು ಬಹಿರಂಗದ ಸದಾಚರಣೆಯಿಂದ ಜೀವನವನ್ನು ಬೆಳಗಿಸಿಕೊಂಡಿದ್ದರು. ಶರಣರ ಜೀವನವನ್ನು ಇಂದಿಗೂ ನೆನಪಿಸಿಕೊಳ್ಳುತ್ತೇವೆ ಏಕೆಂದರೆ ಅಂಥ ತತ್ವ ಸಿದ್ಧಾಂತಕ್ಕೆ ಶರಣರು ಯಾವಾಗಲೂ ಬದ್ಧರಾಗಿದ್ದರು.

ಇಂಥ ಶರಣ ಸಿದ್ಧಾಂತವನ್ನು ತಮ್ಮ ಇಡೀ ಬದುಕಿನುದ್ದಕ್ಕೂ ಮೈಗೂಡಿಸಿಕೊಂಡು ಜೀವನ ನಡೆಸಿದವರು ಶ್ರೀ ಸಿದ್ಧಲಿಂಗಸ್ವಾಮಿ ಪ್ರಭುಸ್ವಾಮಿ ಮಳಿಮಠ ಮತ್ತು ಶ್ರೀಮತಿ ಸುಮಂಗಲಾದೇವಿ ಮಳಿಮಠ ದಂಪತಿಗಳು. ಕರ್ತವ್ಯವನ್ನೇ ಕೈಲಾಸವೆಂದುಕೊಂಡಂಥ ಅತ್ಯಂತ ಶಿಸ್ತಿನ, ಖಡಕ್‌ ಪೋಲೀಸ್‌ ಅಧಿಕಾರಿಯಾಗಿದ್ದವರು ಶ್ರೀ. ಸಿದ್ಧಲಿಂಗಸ್ವಾಮಿ ಪ್ರಭುಸ್ವಾಮಿ ಮಳಿಮಠ ಅವರು. 12 ನೇ ಶತಮಾನದ ಬಸವಣ್ಣನವರ “ಮಹಾಮನೆ” ಯನ್ನು ನೆನಪಿಸುವಂತೆ ಬದುಕು ಸವೆಸಿದವರು ಮಳಿಮಠ ದಂಪತಿಗಳು. ಇಂಥ ಶರಣ ದಂಪತಿಗಳ 5 ನೇಯ ಮಗಳಾಗಿ 09.03.1963 ರಲ್ಲಿ ಬೆಳಗಾವಿಯಲ್ಲಿ ಜನಿಸಿದರು. ಬೆಳಗಾವಿ ಅಂದ ಕೂಡಲೇ ಥಟ್ಟನೇ ನೆನಪಾಗುವುದು ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ ಕಿತ್ತೂರಿನ ವೀರರಾಣಿ ಚನ್ನಮ್ಮ ತಾಯಿ ಮತ್ತು ವೀರಯೋಧ ಸಂಗೊಳ್ಳಿ ರಾಯಣ್ಣನವರು. ಇಂಥ ಗಂಡುಮೆಟ್ಟಿನ ನಾಡು ಕಿತ್ತೂರು ಕರ್ನಾಟಕದ ಕೆಚ್ಚು ಹಾಗೂ ಮನೆಯೇ ಮೊದಲ ಪಾಠಶಾಲೆ ಎನ್ನುವಂತೆ ತಂದೆಯವರ ಶಿಸ್ತು ಮತ್ತು ತಾಯಿಯವರ ಅಂತಃಕರಣವನನ್ನು ಮೈಗೂಡಿಸಿಕೊಂಡು ಡಾ. ಶೀಲಾದೇವಿ ಮಳಿಮಠ ಅವರು ತಮ್ಮ ಬಾಲ್ಯವನ್ನು ಕಳೆದಿದ್ದಾರೆ.

“ಕನ್ನಡದ ಆಸ್ತಿ ಮಾಸ್ತಿ” ಎಂದೇ ಪ್ರಖ್ಯಾತರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮತ್ತು ಸಣ್ಣಕಥೆಗಳ ಸರದಾರ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರ ಶೈಕ್ಷಣಿಕ ಸಾಧನೆ ಇಲ್ಲಿ ನೆನಪಾಗುತ್ತದೆ. ಅವರು ತಮ್ಮ ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿ ಯಾರಿಗೂ ಪ್ರಥಮ ಸ್ಥಾನವನ್ನು ಬಿಟ್ಟು ಕೊಟ್ಟಿರಲಿಲ್ಲ. ಹಾಗೆಯೇ ವಿದ್ಯಾರ್ಥಿ ದೆಸೆಯಿಂದಲೂ ಪ್ರತಿಭಾನ್ವಿತರಾದ ಡಾ. ಶೀಲಾದೇವಿ ಮಳಿಮಠ ಅವರೂ ಸಹ ತಮ್ಮ ಎಲ್ಲ ಶೈಕ್ಷಣಿಕ ವಿದ್ಯಾರ್ಹತೆಗಳನ್ನು Rank ಮೂಲಕವೇ ಗಳಿಸಿದ್ದನ್ನು ಕಾಣಬಹುದು.

70 ರ ದಶಕದಲ್ಲಿ ಆಗ 7 ನೇ ತರಗತಿಗೆ ಬೋರ್ಡ್‌ ಪರೀಕ್ಷೆ ಇರುತ್ತಿತ್ತು. ಮೈಸೂರಿನ Institute of Education, ನಝರಾಬಾದ್‌ ಶಾಲೆಯಿಂದ ಈ ಪರೀಕ್ಷೆ ಬರೆದಿದ್ದ ಡಾ. ಶೀಲಾದೇವಿ ಮಳಿಮಠ ಅವರು ಇಡೀ Board ಗೇನೆ ಮೊದಲನೇ Rank ಪಡೆದು ಪಾಸ ಆಗತಾರೆ. ಇವರ ಪ್ರತಿಭೆಯನ್ನು ಗುರುತಿಸಿದ ಮತ್ತೊಂದು ಮೈಲಿಗಲ್ಲು ಎಂದರೆ ಮಹಾರಾಣಿ ಕಲಾ ಕಾಲೇಜಿನಿಂದ ಬಿ ಏ ಪದವಿಯಲ್ಲಿ ಕನ್ನಡ ಐಚ್ಛಿಕ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಸರ್ಕಾರದಿಂದ Scholarship ಪಡೆದದ್ದು. ಬೆಂಗಳೂರು ವಿಶ್ವವಿದ್ಯಾಲಯದಿಂದ “ಭಾಷಾ ವಿಜ್ಞಾನ” ವನ್ನು ಆಯ್ದುಕೊಂಡು ಎಮ್.‌ ಏ ಪದವಿಯನ್ನು ದ್ವಿತೀಯ Rank ಗಳಿಸಿ ಪಾಸಾಗಿದ್ದಾರೆ. ಮುಂದೆ ಬೆಂಗಳೂರಿನ ವಿಜಯಾ ಟೀಚರ್ಸ್ ಕಾಲೇಜಿನಿಂದ ಬಿ. ಎಡ್‌ ಪದವಿಯನ್ನು ಚಿನ್ನದ ಪದಕದೊಂದಿಗೆ ಪ್ರಥಮ Rank ಗಳಿಸಿ ಪಾಸಾಗಿದ್ದಾರೆ. ಎಮ್‌. ಎಡ್ ಪದವಿಯನ್ನು ರಾಷ್ಟ್ರೀಯ ವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ Rank ಗಳಿಸಿ ಪಾಸಾಗಿದ್ದಾರೆ. ನವದೆಹಲಿಯ ಭಾರತೀಯ ವಿದ್ಯಾಪೀಠದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದಿದ್ದಾರೆ. 

Very Interesting Fact ಅಂತ ನನಗನಿಸಿದ್ದು ಇವರ Ph. D ಸಂಶೋಧನಾ ವಿಷಯ. ಆಧುನಿಕ ಕಾಲಘಟ್ಟದಲ್ಲಿ “ವಚನ ಮತ್ತು ಸಮೂಹ ಮಾಧ್ಯಮ” ಒಂದು Challenging Subject. ನಾನು ಒಬ್ಬ ವಚನ ಸಾಹಿತ್ಯದ ವಿದ್ಯಾರ್ಥಿಯಾಗಿ ಮತ್ತು 35 ವರ್ಷಗಳ ಜಾಗತಿಕ ಮಾರುಕಟ್ಟೆಯ ವ್ಯವಸ್ಥಾಪಕನಾಗಿ ಈ ವಿಷಯದ ಸಂಕೀರ್ಣತೆಯ ಬಗ್ಗೆ ನನಗೆ ಅರಿವಿದೆ. ಇಂಥ ಕಠಿಣಾತಿ ಕಠಿಣ ವಿಷಯದಲ್ಲಿ ಸಂಶೋಧನೆ ಮಾಡಿ ವಾರಣಾಸಿಯ “ಬನಾರಸ್‌ ಹಿಂದೂ ವಿಶ್ವ ವಿದ್ಯಾಲಯ” ದಿಂದ Ph. D ಪಡೆದಿದ್ದಾರೆ. ಮತ್ತೊಂದು ಅತ್ಯಂತ ವಿಶೇಷ ಅಂದರೆ ಬನಾರಸ್‌ ವಿಶ್ವವಿದ್ಯಾಲಯದಲ್ಲಿ ಡೀನ್‌ ಆಗಿದ್ದಂಥ, ಅತ್ಯಂತ ಕಟ್ಟುನಿಟ್ಟಿನ ಮತ್ತು ಶಿಸ್ತಿನ ಮೇಷ್ಟ್ರು ಅಂತ ಹೆಸರಾಗಿದ್ದಂಥ ಡಾ. ವಿ. ಶಿವಾನಂದ ವಿರಕ್ತಮಠ ಅವರು Ph. D ಪ್ರಬಂಧಕ್ಕೆ ಮಾರ್ಗದರ್ಶಕರು. ಡಾ. ಶಿವಾನಂದ ವಿರಕ್ತಮಠರವರು ಮಾರ್ಗದರ್ಶನದ ಜೊತೆಗೆ ವಿದ್ಯಾರ್ಥಿಗಳಿಗೆ ಶಿಸ್ತನ್ನು ಮತ್ತು ತಮ್ಮ ಜ್ಞಾನ ಸಂಪತ್ತನ್ನು ಧಾರೆಯೆರುವ ಗುಣವಿದ್ದಂಥವರು. ಅದಕ್ಕಾಗಿ ಡಾ. ಶೀಲಾದೇವಿ ಮಳಿಮಠ ಅವರ ಪ್ರಬಂಧ “ವಚನ ಮತ್ತು ಸಮೂಹ ಮಾಧ್ಯಮ” ವಿಶೇಷ ಮಹತ್ವವನ್ನು ಪಡೆಯುತ್ತದೆ. ಈಗಿನ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಆಕರ ಗ್ರಂಥ ಅಂತ ನನ್ನ ಅನಿಸಿಕೆ. ಪದವಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುವ ರಾಷ್ಟ್ರ ಮಟ್ಟದ ಅರ್ಹತಾ ಪರೀಕ್ಷೆಯಾದ UGC-NET ಕೂಡ ಪಾಸಾಗಿದ್ದಾರೆ.

1990 ರಿಂದೀಚೆಗೆ ಜಾಗತೀಕರಣ ಮತ್ತು ಉದಾರೀಕರಣದಿಂದ ಪ್ರಪಂಚದ ಎಲ್ಲ ಸ್ಥರಗಳಲ್ಲಿಯೂ ಅಮೂಲಾಗ್ರ ಬದಲಾವಣೆಯಾಗಿ ಅತ್ಯಂತ ಸ್ಫರ್ಧಾತ್ಮಕ ಜಗತ್ತು ನಿರ್ಮಾಣವಾಗಿದೆ. ಇದರ ಫಲವಾಗಿ

  • ISO-International Standards Organization Certification.
  • TS-Technical Specification Certification for Automotive Industries.
  • AS-Aerospace Specification Certification for Aerospace Industries.
  • TQM-Total Quality Management System for Quality management.

ಎನ್ನುವ ಅನೇಕ ಜಾಗತಿಕ ಮಟ್ಟದ ಗುಣ ನಿರ್ಧಾರದ ನಿಯಮಗಳು ಬಂದಿವೆ. ಇಂಥ ಜಾಗತಿಕ ಮಟ್ಟದ TQM-Total Quality Management System ನಲ್ಲಿ ತರಬೇತಿಯನ್ನು ಡಾ. ಶೀಲಾದೇವಿ ಮಳಿಮಠ ಅವರು ಪಡೆದಿದ್ದಾರೆ. ನಂತರ TQM ತರಬೇತುದಾರರಾಗಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಆಧುನಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು, ಉತ್ತಮ ಭೋಧನಾ ಹಾಗೂ ಕಲಿಕೆಯ ಆಧುನಿಕ ತಂತ್ರಜ್ಞಾನವನ್ನು, ಬಾಷಾ ಬಳಕೆಯನ್ನು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಂಡು ಯಶಸ್ವಿಯಾದವರು ಡಾ. ಶೀಲಾದೇವಿ ಮಳಿಮಠ ಅವರು.

1988 ರಿಂದ ಬೆಂಗಳೂರಿನ ಬಸವನಗುಡಿಯಲ್ಲಿರುವ ಬಿ. ಎಮ್.‌ ಎಸ್‌ ಮಹಿಳಾ ವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ 32 ವರ್ಷದಿಂದ ಸಾಹಿತ್ಯ, ಭಾ಼ಷಾಶಾಸ್ತ್ರ, ಜಾನಪದ, ಶಿಲಾಶಾಸ್ತ್ರಗಳನ್ನು ಪಾಠ ಮಾಡುವುದನ್ನು ಕನ್ನಡ ನಾಡು ನುಡಿಗೆ ಸಲ್ಲಿಸುತ್ತಿರುವ ಗೌರವಾದರ ಎಂದು ಭಾವಿಸಿ, ವಿದ್ಯಾರ್ಥಿಗಳನ್ನು ವ್ಯಕ್ತಿತ್ವ ವಿಕಾಸದೆಡೆಗೆ ಕರೆದೊಯ್ಯುತ್ತಿದ್ದಾರೆ.

ವಿವಿಧ ಸಂಘಟನೆಗಳನ್ನು ಸೇರಿಸಿಕೊಂಡು ಕೊರೋನಾ ಕಾಲದಲ್ಲಿ ಮುಂಚೂಣಿಗೆ ಬಂದ online ಕಾರ್ಯಕ್ರಮಗಳನ್ನು ರೂಪಿಸಿ, ಆಯೋಜಿಸಿ ದೇಶ-ವಿದೇಶಗಳಿಂದ ಹಲವಾರು ವಿದ್ವಾಂಸರುಗಳನ್ನು ಕರೆಸಿ ಪರಿಚಯಿಸಿದವರು ಡಾ. ಶೀಲಾದೇವಿ ಮಳಿಮಠ ಅವರು. ಈ ಅಭಿಯಾನದಲ್ಲಿ ನಾನೂ ಒಂದು ಉಪನ್ಯಾಸವನ್ನು ನೀಡಿದ್ದೇನೆ ಎನ್ನುವುದು ಗೌರವದ ವಿಷಯ. ಇಲ್ಲಿಯೂ ಕೂಡ ಅವರು ಹೆಚ್ಚಾಗಿ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಅವರಿಗೆ ಜ್ಞಾನಪ್ರಸಾದವನ್ನು ನೀಡಿದವರು. ಈ ಅಭಿಯಾನ ಇಂದಿಗೂ ಕೂಡ ಮುಂದುವರೆಯುತ್ತಿದೆ.

ಇನ್ನು ಸಂಶೋಧನಾ ವಿಷಯಕ್ಕೆ ಬಂದರೆ ಡಾ. ಶೀಲಾದೇವಿ ಮಳಿಮಠ ಅವರದು ದೈತ್ಯ ಪ್ರತಿಭೆ. ಅವರ Ph. D ಪ್ರಬಂಧವೇ ಇದಕ್ಕೆ ಸಾಕ್ಷಿ. ಇವರು ಮಾರ್ಗದರ್ಶನ ನೀಡಿರುವ ಹಲವಾರು ಸಂಶೋಧನಾ ಪ್ರಬಂಧಗಳಲ್ಲಿ ಈ ಶಕ್ತಿಯ ಅನಾವರಣವಾಗುತ್ತದೆ. ಅಮೇರಿಕಾದ ಮಾರ್ಕ್‌ ವಾನ್‌ ಡೊರೇನ್‌ ಅವರ ಹೇಳಿಕೆ ಇಲ್ಲಿ ಅತ್ಯಂತ ಪ್ರಸ್ತುತ ಎನಿಸುತ್ತದೆ.

ಸಂಶೋಧನಾ ವಿಷಯಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಶಿಸ್ತುಬದ್ಧವಾಗಿ ಪ್ರಸ್ತುತ ಪಡಿಸುವ ಗುರುಗಳಾಗಿದ್ದಾರೆ. ತಮ್ಮ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು ಗುರುತಿಸಿ ಮತ್ತು ಅವರಲ್ಲಿರುವ ಅರಿವನ್ನು ಅವರಿಗೆ ಮೂಡಿಸಿ ಅದಕ್ಕೆ ಬೇಕಾದ ಚೈತನ್ಯದ ಇಂಧನವನ್ನು ತುಂಬಿಸಿದ್ದಾರೆ ಎನ್ನಬಹುದು.

ತಂದೆ-ತಾಯಿಯವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಇಚ್ಛೆಯಿಂದ “ಸಿದ್ಧಮಂಗಳ ಸೇವಾ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಇದರ ಮೂಲಕ ತಂದೆ-ತಾಯಿಯವರ ಕಾಯಕ-ದಾಸೋಹದ ಬದುಕನ್ನು ಜೀವಂತವಾಗಿರಿಸುವ ಡಾ. ಶೀಲಾದೇವಿ ಮಳಿಮಠ ಅವರ ಪ್ರಯತ್ನ ಶ್ಲಾಘನೀಯ. ಈ ಸಂಸ್ಥೆಯ ಮೂಲಕ ವಿಚಾರ ಸಂಕಿರಣಗಳು, ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿ ಅದನ್ನು ಶೈಕ್ಷಣಿಕ ಸೇವಾಕೇಂದ್ರವಾಗಿ ಮುನ್ನಡೆಸುತ್ತಿದ್ದಾರೆ. ಈ ಕೇಂದ್ರದಲ್ಲಿ ಪ್ರಾಯೋಗಿಕ ಸಂಶೋಧನಾ ವಿಧಾನ (Empirical Research Method) ಪರಿಕಲ್ಪನಾತ್ಮಕ ಸಂಶೋಧನಾ ವಿಧಾನ (Conceptional Research Method) ಗಳನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡುತ್ತಿದ್ದಾರೆ.

ಡಾ. ಶೀಲಾದೇವಿ ಮಳಿಮಠ ಅವರು 1992 ರಿಂದ 1999 ವರೆಗೆ NSS ರಾಷ್ಟ್ರೀಯ ಸೇವಾ ಘಟಕದ ಯೋಜನಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಉಲ್ಲಾಳು ಮತ್ತು ತಲಘಟ್ಟಪುರ ಮುಂತಾದ ಹಲವಾರು ಗ್ರಾಮಗಳಲ್ಲಿ ಸೇವಾ ಶಿಬಿರಗಳು, ರಕ್ತದಾನ ಶಿಬಿರಗಳು, ಸ್ವಚ್ಛತಾ ಅಭಿಯಾನ, ವಯಸ್ಕರ ಶಿಕ್ಷಣ, ನೇತ್ರದಾನ, ಗ್ರಾಮಾಂತರ ಸಂಪರ್ಕ ಕಾರ್ಯಕ್ರಮ, ಪರಿಸರ ಪ್ರಜ್ಞೆ, ಸಾಂಸ್ಕೃತಿಕ ತರಬೇತಿ, ಏಡ್ಸ್‌ ಅರಿವು ಜಾಗೃತಿ ಮುಂತಾದ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಸಮಾಜ ಸೇವಾ ಕೈಂಕರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಭಾರತವು ಕಲೆಗಳ ತವರೂರು ಎನ್ನುವ ಪರಿಕಲ್ಪನೆಯನ್ನು ಹೊಂದಿರುವ ಡಾ. ಶೀಲಾದೇವಿ ಮಳಿಮಠ ಅವರು ಈ ಕಲೆಗಳನ್ನು ಪರಿಚಯಿಸುವದಕ್ಕಾಗಿ “ಲಾಸ್ಯ ಹವ್ಯಾಸಗಳ ಕೇಂದ್ರ” (Lasya Hobby Club) ಎನ್ನುವ ಸಂಸ್ಥೆಯನ್ನು ಕಟ್ಟಿದ್ದಾರೆ. ಈ ಸಂಸ್ಥೆಯ ಮೂಲಕ ಸುಮಾರು 116 ಕಲೆಗಳನ್ನು ವಿದ್ಯಾರ್ಥಿನಿಯರಿಗೆ ಪರಿಚಯಿಸಿದ್ದಾರೆ.

ಜಾನಪದಕ್ಕೂ ಕನ್ನಡ ಉಪನ್ಯಾಸಕರಿಗೂ ದೇಹ ಮತ್ತು ಆತ್ಮವನ್ನೂ ಮೀರಿದಂಥ ಒಂದು ಅವಿನಾಭಾವ ಸಂಬಂಧ. ಜಾನಪದ ಅಂದರೇನೆ ಭಾರತದ ಸಾಂಸ್ಕೃತಿಕ ಆಲದ ಮರದ ಬೇರಿದ್ದಂತೆ. ಈ ನಿಟ್ಟನಲ್ಲಿ ಡಾ. ಶೀಲಾದೇವಿ ಮಳಿಮಠ ಅವರು “ಬಿ. ಎಮ್.‌ ಎಸ್‌ ಜ್ಞಾನದ ತೇರು””ಎನ್ನುವ ಜಾನಪದದ ಅರಿವು ಮೂಡಿಸುವ ಪರಿಕಲ್ಪನೆಗೆ ನಾಂದಿ ಹಾಡಿದ್ದಾರೆ. ಜಾನಪದ ನೃತ್ಯ, ನಾಟಕ, ಕೋಲೆ ಬಸವ, ಯಕ್ಷಗಾನ, ತಾಳೆ ಮದ್ದಳೆ, ಹೊಂಬಾಳೆ ಅರಳಿಸುವುದರ ಮೂಲಕ ಜಾನಪದದ ಸೊಗಡನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.

ಯಕ್ಷಗಾನಕ್ಕೆ ತನ್ನದೇ ಆದ ದೊಡ್ಡ ಪರಂಪರೆಯಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರು ಯಕ್ಷಗಾನವನ್ನು ಪ್ರಪಂಚದಾದ್ಯಂತ ಬೆಳೆಸಲು ಶ್ರಮ ಪಟ್ಟಂಥವರು. ಇಂಥ ಜಗತ್‌ ಪ್ರಸಿದ್ಧ ಯಕ್ಷಗಾನ ಕಲೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ “ಯಕ್ಷ ವೇದಿಕೆ” ಎನ್ನುವ ಕಾರ್ಯಕ್ರಮ ರೂಪಿಸಿ ಮಹಿಳಾ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡಿದ್ದಾರೆ.

ಮಹಿಳಾ ಸಬಲೀಕರಣಕ್ಕಾಗಿ ಕಾರ್ಯಾಗಾರಗಳನ್ನೂ ಕೂಡಾ ಆಯೋಜಿಸಿದ್ದಾರೆ. ಜೊತೆಗೆ ಮಹಿಳೆಯಿಂದಲೇ ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸಿದ್ದಾರೆ. ಸ್ವತಃ ಭರತ ನಾಟ್ಯ ಪ್ರವೀಣೆಯಾಗಿರುವ ಡಾ. ಶೀಲಾದೇವಿ ಮಳಿಮಠ ಅವರು ಈ ಕಾರ್ಯಕ್ರಮಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಮತ್ತೊಂದು Very Interesting Point ಅಂದರೆ ಇವರಿಗೆ ಕರಾಟೆಯೂ ಬರುತ್ತದೆ. ಮಲೇಶಿಯಾದ ಯೂಕೋಯಾಮಾ ಕರಾಟೆ ಕೇಂದ್ರದಿಂದ ತರಬೇತಿಯನ್ನು ಪಡೆದಿದ್ದಾರೆ. ಅಂತರಾಷ್ಟ್ರೀಯ ಕರಾಟೆ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Academi of Marshal Arts ಸಂಸ್ಥೆಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಸಹ ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಅನಾಥಾಲಯಗಳಲ್ಲಿ ಮಕ್ಕಳಿಗೆ ಕರಾಟೆ ಕಲಿಸುತ್ತಿದ್ದಾರೆ. ಮತ್ತೊಂದು ಮಾನವೀಯ ಮೌಲ್ಯಗಳ ಅನಾವರಣ ಅಂದರೆ ಡಾ. ಶೀಲಾದೇವಿ ಮಳಿಮಠ ಅವರು ತಮ್ಮ ಎಲ್ಲಾ ಕುಟುಂಬದ ಸದಸ್ಯರುಗಳ ಹುಟ್ಟುಹಬ್ಬಗಳನ್ನು ಅಂಧರ, ಅನಾಥ ಮಕ್ಕಳ ಶಾಲೆಯಲ್ಲಿಯೇ ಆಚರಿಸುತ್ತಾರೆ. ನಮಗೆ ಇದು ಸ್ಪೂರ್ತಿದಾಯಕ ಸಂಗತಿ.

  • ಇವರ ಪ್ರತಿಭೆಯನ್ನು ಗುರುತಿಸಿ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮತ್ತು ತುಮಕೂರು ವಿಶ್ವವಿದ್ಯಾಲಯಗಳು ಇವರನ್ನು “ಸಂಶೋದನಾ ಮಾರ್ಗದರ್ಶಕ” ರನ್ನಾಗಿ ಮಾಡಿದ್ದಾರೆ.
  • ಇವರ ಮಾರ್ಗದರ್ಶನದಲ್ಲಿ ಶ್ರೀಮತಿ ಸೌಮ್ಯಶ್ರೀ. ಆರ್‌ ಅವರಿಗೆ “ತುಮಕೂರು ಜಿಲ್ಲೆಯ ವೀರಶೈವ ಮಠಗಳು-ಸೋಮನಕಟ್ಟೆಮಠ ವಿಶೇಷ ಅಧ್ಯಯನ” ಪ್ರಬಂಧಕ್ಕೆ 2018-19 ನೇ ಸಾಲಿನಲ್ಲಿ Ph. D ಪದವಿ ನೀಡಲಾಗಿದೆ.
  • 2004, 2019 ರಲ್ಲಿ ಒಂದೊಂದು ಮತ್ತು 2020 ರಲ್ಲಿ ಎರಡು Ph. D ಗಳಂತೆ ಒಟ್ಟು ನಾಲ್ಕು ಪದವಿಗಳನ್ನು ಇವರ ಮಾರ್ಗದರ್ಶನದಲ್ಲಿ ನೀಡಲಾಗಿದೆ.
  • 2018-19 ನೇ ಸಾಲಿನಲ್ಲಿ ಹಂಪಿಯ ವಿಶ್ವವಿದ್ಯಾಲಯದಿಂದ “ಶಾರದಾ ಅಂಬೇಡ್ಕರ್‌ ಮತ್ತು ದಲಿತ ಆತ್ಮ ಚರಿತ್ರೆಗಳು” ಮತ್ತು “ಕಿಮ್‌ಶುಖ ಶಿರಾ ತಾಲೂಕಿನ ಉತ್ಸವಗಳು ಸಾಂಸ್ಕೃತಿಕ ಅಧ್ಯಯನ” ವಿಷಯಗಳಲ್ಲಿ M. Phil ಪದವಿ ಪ್ರದಾನ ಮಾಡಲಾಗಿದೆ.
  • ಒಟ್ಟು 14 ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ M. Phil ಪದವಿ ಪಡೆದಿದ್ದಾರೆ.
  • ತುಮಕೂರು ವಿಶ್ವವಿದ್ಯಾಲಯದ 2019Ph. D ಪದವಿ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
  • ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ 2018-19 ರ ಪರೀಕ್ಷಾ ಮಂಡಳಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
  • NMKRV ಕಾಲೇಜು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಪರೀಕ್ಷಾ ಮಂಡಳಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
  • 2018 ರ ಶೈಕ್ಷಣಿಕ ಅವಧಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಥಮ ಹಾಗೂ ದ್ವಿತೀಯ ಸೆಮಿಸ್ಟರ್‌ B. Com ಪಠ್ಯಪುಸ್ತಕದ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.
  • 2019 ರ ಶೈಕ್ಷಣಿಕ ಅವಧಿಯಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಸ್ನಾತಕ ಅಧ್ಯಯನ ಮಂಡಳಿಯ ಸದಸ್ಯರಾಗಿ, ಐಚ್ಛಿಕ ಕನ್ನಡ ಪ್ರಥಮ ಸೆಮಿಸ್ಟರ್‌ ಪಠ್ಯಪುಸ್ತಕದ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
  • ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ತೃತೀಯ B. A ಐಚ್ಛಿಕ ಕನ್ನಡ ಐದನೇ ಸೆಮಿಸ್ಟರ್‌ ಪಠ್ಯಪುಸ್ತಕದ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
  • 2018-19 ಸಾಲಿನಲ್ಲಿ KAS, KPSC ಪರೀಕ್ಷಾ ಮಂಡಳಿಯ ತಜ್ಞ ಸಮಿತಿಯ (Expert Committee) ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
  •  ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಡಾ. ಶೀಲಾದೇವಿ ಮಳಿಮಠ ಅವರ 45 ಕ್ಕೂ ಹೆಚ್ಚಿನ ಸಂಶೋಧನಾ ಲೇಖನಗಳು ಪ್ರಕಟವಾಗಿವೆ.
  • ಬಿ. ಎಮ್.‌ ಶ್ರೀ ಪ್ರತಿಷ್ಠಾನದ ಸಂಶೋಧನೆ ಮತ್ತು ಅಧ್ಯಯನ ಪೀಠದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.
  • ಬಸವನಗುಡಿ ಬೆಂಗಳೂರಿನ ಉದಯಭಾನು ಕಲಾಸಂಘದ ವತಿಯಿಂದ ಏರ್ಪಡಿಸಲಾದ “Research Methodology Workshop” ನ್ನು ಮುನ್ನಡೆಸಿವರು ಡಾ. ಶೀಲಾದೇವಿ ಮಳಿಮಠ ಅವರು.
  • ಹತ್ತಕ್ಕೂ ಹೆಚ್ಚು FDP-Faculty Development Programme ಗಳನ್ನು ಆಯೋಜಿಸಿ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಿದ್ದಾರೆ.
  • Xaviour Institute of Management ಇವರು ಆಯೋಜಿಸಿದ್ದ 3 ದಿನಗಳ FDP-Faculty Development Programme ದಲ್ಲಿ ಭಾಗವಹಿಸಿ “ನಾಯಕತ್ವದ ಅಭಿವೃದ್ಧಿ” ಕುರಿತು ವಿಶೇಷ ತರಬೇತಿ ಪಡೆದಿರುತ್ತಾರೆ.
  • ದಿನಾಂಕ 17.12.2018 ರಲ್ಲಿ Nitte Meenakshi Institute of Technology ಯಲ್ಲಿ ನಡೆಸಲಾದ “Case Analysis” ಸಂಶೋಧನಾ ಕಮ್ಮಟದಲ್ಲಿ ತರಬೇತಿ ಪಡೆದಿರುತ್ತಾರೆ.
  • ದಿನಾಂಕ 13.09.2018 ರಂದು Goodwill Christian College, ಬೆಂಗಳೂರು ಇವರು ಆಯೋಜಿಸಿದ್ದ “ಭೋಧನಾ ಕಲಿಕೆಯಲ್ಲಿ ಗುಣಾತ್ಮಕ ಅಭಿವೃದ್ಧಿ” ಕುರಿತು ತರಬೇತಿ ಪಡೆದಿರುತ್ತಾರೆ.
  • ದಿನಾಂಕ 09.02.2019 ರಂದು ಶ್ರೀ ಭಗವಾನ್‌ ಮಹಾವೀರ ಜೈನ್‌ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ “ಸಂಶೋಧನಾ ವಿಮರ್ಶೆ” ಕಮ್ಮಟದಲ್ಲಿ ತರಬೇತಿ ಪಡೆದಿದ್ದಾರೆ.
  • B. Com “A” ವಿಭಾಗದ ವಿದ್ಯಾರ್ಥಿನಿಯರು “ಗಂಗಾಮಾಯಿ ಹಾಗೂ ದೇವರು” ಕವಿತೆಗಳನ್ನು ಪಿಪಿಟಿ ಮೂಲಕ ಕಲಿಕಾ ಕೌಶಲ್ಯ ಪ್ರಸ್ತುತ ಪಡಿಸಿವ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
  • “ಭಾಷೆ ಮತ್ತು ಮೆದುಳು” ತೃತೀಯ ಐಚ್ಛಿಕ ಕನ್ನಡ ವಿದ್ಯಾರ್ಥಿನಿಯರಿಗೆ ಶ್ರವ್ಯ-ದೃಶ್ಯ ಮಾಧ್ಯಮದ ಮೂಲಕ ಕಲಿಕೆಯನ್ನು ಗುಣಾತ್ಮಕವಾಗಿಸಲು ತರಬೇತಿ ನೀಡಿದ್ದಾರೆ.
  • ತೃತೀಯ B. A ಐಚ್ಛಿಕ ಕನ್ನಡ ವಿದ್ಯಾರ್ಥಿನಿಯರಿಗೆ “ಶಬ್ದ ಮಣಿ ದರ್ಪಣ ವ್ಯಾಕರಣ” ವಿಚಾರ ಮಂಡನೆಯ ಮೂಲಕ ಕಲಿಯನ್ನು ಗುಣಾತ್ಮಕವಾಗಿಸಲು ತರಬೇತಿ ನೀಡಿದ್ದಾರೆ.
  • “ಜಗದಗಲ ಮಂಟಪ” ಎನ್ನುವ ಸಂಶೋದನಾ ಲೇಖನಗಳ ಪುಸ್ತಕವನ್ನು ಸಂಪಾದಿಸಿ 10.03.2019 ರಲ್ಲಿ ಪ್ರಕಟ ಮಾಡಿದ್ದಾರೆ. ಇದರ ಪ್ರಕಾಶಕರು ಸುಭಾಷ ಪ್ರಕಾಶನ, ಅವೆನ್ಯೂ ರಸ್ತೆ, ಬೆಂಗಳೂರ. (Isbn-978-81-926169-8-8).
  • K. L. E Society S.K ಕಲಾ ಮಹಾವಿದ್ಯಾಲಯ ಮತ್ತು H. S. K ವಿಜ್ಞಾನ ಸಂಸ್ಥೆ ಹುಬ್ಬಳ್ಳಿಯಲ್ಲಿ ನಡೆದ “ಸ್ವಾತಂತ್ಯ ಸಂಗ್ರಾಮ ಮತ್ತು ಕನ್ನಡ ಸಾಹಿತ್ಯ” ಅಂತರಾಷ್ಟ್ರೀಯ ವಿಚಾರ ಸಂಕಿರಣದ ಪುಸ್ತಕದಲ್ಲಿ “ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳ ಪಾತ್ರ” ಎನ್ನುವ ಪ್ರಬಂಧ ಪ್ರಕಟಣೆಯಾಗಿದೆ. (Isbn978-93-83813-42-1),
  • ಅಂತರಾಷ್ಟ್ರೀಯ ಜನರಲ್‌ ಕನ್ನಡ ಸಂಶೋಧನೆ-ಭಾಗ-3, ಕ್ರಿಸ್ತು ಜಯಂತಿ ಕಾಲೇಜು, ಬೆಂಗಳೂರು “ಜಾನಪದ ಸಾಹಿತ್ಯ-ಸಂಸ್ಕೃತಿ ಚಿಂತನೆ” ಯಲ್ಲಿ “ಮಲೆ ಮಹದೇಶ್ವರ ಮತ್ತು ಮಂಟೇಸ್ವಾಮಿ ಕಾವ್ಯ-ಆಧ್ಯಾತ್ಮಿಕ ಜ್ಞಾನಮೀಮಾಂಸೆ” ಎನ್ನುವ ಪ್ರಬಂಧ ಪ್ರಕಟವಾಗಿದೆ. (ಪುಟ ಸಂಖ್ಯೆ: 234-238). (Isbn978-93-5335-126-7),
  • ಭಾರತಿ-ತಮಿಳು ಸಂಘ, ವೇಲೂರು ವತಿಯಿಂದ ನಡೆದ “ಭಾರತೀಯ ಬುಡಕಟ್ಟು ಮತ್ತು ಜಾನಪದ” ಅಂತರಾಷ್ಟ್ರೀಯ ವಿಚಾರ ಸಂಕಿರಣ-ಏಲಗಿರಿಯವರು ಪ್ರಕಟಿಸಿದ ಪುಸ್ತಕದಲ್ಲಿ “ದಕ್ಷಿಣ ಕರ್ನಾಟಕದ ಬುಡಕಟ್ಟುಗಳು ಮತ್ತು ವಿವಾಹ ಪದ್ಧತಿ” ಎನ್ನುವ ಲೇಖನ ಪ್ರಕಟವಾಗಿದೆ. (ಪುಟ ಸಂಖ್ಯೆ: 1057). (Isbn978-81-930-476-9-9),
  • ತುಮಕೂರು ವಿಶ್ವವಿದ್ಯಾಲಯ ವತಿಯಿಂದ ನಡೆದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಅಲಕ್ಷಿತ ಲೋಕದ ಸಂಕಥನ-ರಾಷ್ಟ್ರೀಯ ವಿಚಾರ ಸಂಕಿರಣದ ಪುಸ್ತಕದಲ್ಲಿ “ಶ್ರಮಿಕ ಲೋಕದ ಮೀಮಾಂಸೆ-ಮುಟ್ಟಬಾರದ ಕವಚ” ಲೇಖನ ಪ್ರಕಟವಾಗಿದೆ. (ಪುಟ ಸಂಖ್ಯೆ: 106). (Isbn978-93-82694-50-2),
  • ಜಾನಪದ ಸಾಹಿತ್ಯ ಮತ್ತು ವರ್ತಮಾನ-St. Claurence College, ಜಾಲಹಳ್ಳಿ ಬೆಂಗಳೂರು. ರಾಷ್ಟ್ರೀಯ ವಿಚಾರ ಸಂಕಿರಣದ ಪುಸ್ತಕದಲ್ಲಿ “ಜಾನಪದ ಗೀತೆಗಳು ಮತ್ತಿ ವಿಶ್ವಶಾಂತಿ-ನವಭಕ್ತಿಯ ನೆಲೆ” ಎನ್ನುವ ಲೇಖನ ಪ್ರಕಟವಾಗಿದೆ. (ಪುಟ ಸಂಖ್ಯೆ: 11). (Isbn978-81-939379-6-9),
  • ಜಾಗತಿಕ ಗ್ರಹಿಕೆಯಲ್ಲಿ ಪ್ರಾದೇಶಿಕ ಸಾಹಿತ್ಯ ಪುಸ್ತಕದಲ್ಲಿ “ಪ್ರಾದೇಶಿಕ ಭಾಷೆಯಾಗಿ ತರಗತಿಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ” ಲೇಖನ ಪ್ರಕಟವಾಗಿದೆ. (ಪುಟ ಸಂಖ್ಯೆ: 148). (Isbn978-93-87281-81-3),
  • ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಬಹುತ್ವ ಸಂಕಥನ ವಿಚಾರ ಸಂಕಿರಣದ ಪುಸ್ತಕದಲ್ಲಿ “ಅಜ್ಞಾತ ಶರಣೆಯ ವಚನ-ಪ್ರಗತಿಪರ ಸಂಸ್ಕೃತಿ ವಿನ್ಯಾಸ” ಲೇಖನ ಪ್ರಕಟವಾಗಿದೆ. (ಪುಟ ಸಂಖ್ಯೆ: 122). (Isbn978-93-86855-17-6),  
  • ಇವರ “ಅಂತರಂಗದಾ ಮೃದಂಗ” ಎನ್ನುವ ಕವನ ಸಂಕಲನವನ್ನು ಸುಂದರ ಪ್ರಕಾಶನ, ಹನುಮಂತನಗರ, ಬೆಂಗಳೂರ ಅವರು ಪ್ರಕಟಿಸಿದ್ದಾರೆ.
  • ದಿನಾಂಕ 16.03.2019 ರಂದು “Nagarjun College of Management Studies” ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಿದ್ದ “ವಚನ ಸಾಹಿತ್ಯ-ಬೃಹತ್‌ ಸಂಕಥನ” ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ “ವಚನಕಾರರು-ಬೃಹತ್‌ ಸಂಕಥನ” ಕುರಿತು ಉಪನ್ಯಾಸ ನೀಡಿದ್ದಾರೆ.
  • ದಿನಾಂಕ 13.11.2018 ರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರೆಸಿಡೆನ್ಸಿ ಕಾಲೇಜು, ಹೆಬ್ಬಾಳ ಇವರು ಆಯೋಜಿಸಿದ್ದ ಉತ್ಸವದಲ್ಲಿ “ಕನ್ನಡ ಭಾಷೆ ಹಾಗು ಸಂಸ್ಕೃತಿ” ಯನ್ನು ಕುರಿತು ಉಪನ್ಯಾಸವನ್ನು ನೀಡಿದ್ದಾರೆ.
  • ದಿನಾಂಕ 13.10.2017 ರಂದು ಬಸವ ಸಮೀತಿಯಲ್ಲಿ ಆಯೋಜಿಸಿದ್ದ ಅರಿವಿನ ಮನೆ ದತ್ತಿ ಉಪನ್ಯಾಸದಲ್ಲಿ “ಬಸವಣ್ಣನವರ ಸಾಮಾಜಿಕ ಚಿಂತನೆಗಳು” ಕುರಿತು ಉಪನ್ಯಾಸ ನೀಡಿದ್ದಾರೆ.
  • ದಿನಾಂಕ 29.09.2018 ರ ಶನಿವಾರದಂದು ಶ್ರೀ ಸಾಯಿ ಮಹಿಳಾ ಮಹಾ ವಿದ್ಯಾಲಯ, ರಾಜಾಜಿ ನಗರದಲ್ಲಿ “ಕನ್ನಡ ಸಾಹಿತ್ಯ-ಕನ್ನಡ ಬಳಕೆ” ಕುರಿತು ಉಪನ್ಯಾಸ ನೀಡಿದ್ದಾರೆ.
  • ದಿನಾಂಕ 18.04.2018 ರಂದು ದ್ರಾವೀಡ ವಿಶ್ವವಿದ್ಯಾಲಯ, ಕುಪ್ಪಂ ನಲ್ಲಿ ಬಸವ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ “ವಚನ ಮತ್ತು ಪ್ರಜಾಪ್ರಭುತ್ವ” ಕುರಿತು ಉಪನ್ಯಾಸ ನೀಡಿದ್ದಾರೆ.
  • ಶ್ರೀ ಧವಲಾ ಮಹಾವಿದ್ಯಾಲಯ, ಮೂಡಬಿದರೆಯ ಕನ್ನಡ ವಿಭಾಗವು ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ “ಯಕ್ಷಗಾನದಲ್ಲಿ ಹಾಸ್ಯ” ಕುರಿತು ಪ್ರಬಂಧ ಮಂಡಿಸಿದ್ದಾರೆ.
  • ದಿನಾಂಕ 05.10.2018 ರಲ್ಲಿ ಹಸನತ್‌ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾದ ವಿಶೇಷ ವಿಚಾರ ಸಂಕಿರಣದಲ್ಲಿ “ವಚನ ಮತ್ತು ಜನಪದ” ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸವನ್ನು ನೀಡಿದ್ದಾರೆ.
  • ದಿನಾಂಕ 17.10.2018 ರಲ್ಲಿ ಹಸನತ್‌ ಮಹಿಳಾ ವಿದ್ಯಾಲಯದಲ್ಲಿ “ತಂತ್ರಜ್ಞಾನ ಮತ್ತು ಕನ್ನಡ ಪಠ್ಯ” ಕುರಿತು ಅತಿಥಿ ಉಪನ್ಯಾಸವನ್ನು ನೀಡಿದ್ದಾರೆ.
  • ದಿನಾಂಕ 28.02.2018 ರಲ್ಲಿ ಸರ್ಕಾರಿ ಮಹಾ ವಿದ್ಯಾಲಯ ಕಲಬುರ್ಗಿಯಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ “ಕನ್ನಡ ಸಾಹಿತ್ಯ ರೂಪಗಳಲ್ಲಿ ಸ್ವಾತಂತ್ರ್ಯ ಚಳುವಳಿ” ವಿಷಯ ಕುರಿತು ಪ್ರಬಂಧ ಮಂಡನೆ ಮಾಡಿದ್ದಾರೆ.
  • ದಿನಾಂಕ 25.09.2018 ರಂದು ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ “ಹಳೆಗನ್ನಡ ಗದ್ಯ ಸಾಹಿತ್ಯ ವಡ್ಡಾರಾಧನೆ-ಸಾಂಸ್ಕೃತಿಕ ಮುಖಾಮುಖಿ” ವಿಷಯ ಕುರಿತು ಪ್ರಬಂಧ ಮಂಡನೆ ಮಾಡಿದ್ದಾರೆ.
  • ದಿನಾಂಕ 12.10.2018 ರಂದು A. S. C ಪದವಿ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ “ಹೊಸಗನ್ನಡ ಸಾಹಿತ್ಯದಲ್ಲಿ ನವಭಾರತ ನಿರ್ಮಾಣ” ವಿಷಯ ಕುರಿತು ಪ್ರಬಂಧ ಮಂಡನೆ ಮಾಡಿದ್ದಾರೆ.
  • ದಿನಾಂಕ 07.09.2018 ರಂದು ನ್ಯಾಶನಲ್ ಕಾಲೇಜು, ಜಯನಗರ ಇವರು ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ “ಬಂಡಾಯ ದಲಿತ ಸಾಹಿತ್ಯ ಚಳುವಳಿ ಮತ್ತು ರಾಷ್ಟ್ರೀಯತೆ” ಕುರಿತು ಪ್ರಬಂಧ ಮಂಡಿಸಿರುತ್ತಾರೆ.
  • ದಿನಾಂಕ 16.10.2018 ರಂದು New Horizon College, ಕಸ್ತೂರಿ ನಗರ ಇವರು ಆಯೋಜಿಸಿದ್ದ ಅಂತರಾಷ್ಟ್ರೀಯ ಸಮಾವೇಷದಲ್ಲಿ “ಕನ್ನಡ ಅನ್ನದ ಸಮಸ್ಯೆ” ಕುರಿತು ಪ್ರಬಂಧ ಮಂಡಿಸಿದ್ದಾರೆ.
  • ದಿನಾಂಕ 30.12.2018 ರಂದು ಏಲಗಿರಿ ಭಾರತಿ ಸಂಘ ಅಂತರಾಷ್ಟ್ರೀಯ ಅಧ್ಯಯನ ಸಂಸ್ಥೆಯವರು ನಡೆಸಿದ ವಿಚಾರ ಸಂಕಿರಣದಲ್ಲಿ “ಭಾರತೀಯ ಸಾಹಿತ್ಯದಲ್ಲಿ ಪರಿಸರ” ಕುರಿತು ಪ್ರಬಂಧ ಮಂಡಿಸಿದ್ದಾರೆ.
  • ದಿನಾಂಕ 03.09.2018 ರಲ್ಲಿ S.I.T ಪದವಿ ಕಾಲೇಜಿನಲ್ಲಿ ಆಯೋಜಿಸಲಾದ ಒಂದಿ ದಿನದ ಸಮಾವೇಷ “ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆ” ಯಲ್ಲಿ ಪಾಲ್ಗೊಂಡು ಪ್ರಬಂಧ ಮಂಡಿಸಿದ್ದಾರೆ.
  • ದಿನಾಂಕ 27.10.2018 ರ ಶನಿವಾರ ಕನ್ಯಾಕುಮಾರಿ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ “ಬೆಂಗಳೂರು ನಗರ ಜಿಲ್ಲಾ ಐದನೇ ವಚನ ಸಾಹಿತ್ಯ ಸಮ್ಮೇಳನದ ವಚನ ಚಿಂತನಾ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದಾರೆ.
  • ದಿನಾಂಕ 11.02.2018 ರಂದು ಸ್ವಾಮಿ ವಿವೇಕಾನಂದ ಆಂಗ್ಲ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ “ಬಾಂಧವ್ಯ-ಕವಿಗೋಷ್ಠಿ” ಯ ಅಧ್ಯಕ್ಷತೆಯನ್ನು ವಹಿಸಿದ್ದಾರೆ.
  • ದಿನಾಂಕ 12.10.2018 ರಂದು A. S. C ಪದವಿ ಕಾಲೇಜಿನಲ್ಲಿ ನಡೆದ ವಿಚಾರ ಸಮಾವೇಶದ ಚಿಂತನ ಗೋಷ್ಠಿಯಲ್ಲಿ ಅಧ್ಯಕ್ಷತೆಯನ್ನು ವಹಿಸಿರುತ್ತಾರೆ.
  • ದಿನಾಂಕ 30.12.2018 ರಂದು ನವ ಚೈತನ್ಯ ಉದಯ ಪ್ರತಿಷ್ಠಾನ, ರಾಮಚಂದ್ರಾಪುರ-ಬೆಂಗಳೂರು ಇವರು ಆಯೋಜಿಸಿದ್ದ “ಪ್ರಥಮ ಜಾನಪದ ಸಮಾವೇಷ” ದ ಚಿಂತನಾ ಗೋಷ್ಠಿಯಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದಾರೆ.
  • ದಿನಾಂಕ 02.12.2018 ರ ಭಾನುವಾರ ಉದಯಭಾನು ಕಲಾಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ “ಸಂಶೋಧನಾ ಲೇಖನ ಕಮ್ಮಟಸ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
  • ದಿನಾಂಕ 12.03.2019 ಹಾಗೂ 13.12.2019 ರಂದು ಸೇಂಟ್‌ ಜೋಸೆಫ್‌ ಕಾಲೇಜಿನಲ್ಲಿ ನಡೆದ ರಾಷ್ಟ್ರ ಮಟ್ಟದ ಎರಡು ದಿನದ “ಸಾಹಿತ್ಯದ ಓದು” ವಿಚಾರ ಸಂಕಿರಣದ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
  • Shri. Devaraj Institute of Management, ದೊಡ್ಡಬಳ್ಳಾಪುರ ಕಾಲೇಜಿನಲ್ಲಿ ವಿದ್ಯಾರ್ಥಿಗಳ ವಿಶೇಷ ಸಂವಾದ ಗೋಷ್ಠಿ “ವಚನ ಸಾಹಿತ್ಯ ಮತ್ತು ಸ್ತ್ರೀ ಸಬಲೀಕರಣʼ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಿದ್ದಾರೆ.
  • ಸರ್ಕಾರಿ ಪ್ರಥಮ ಸರ್ಜೆ ಕಾಲೇಜು, ಹೆಸರಘಟ್ಟ ಇವರು ಹಮ್ಮಿಕೊಂಡಿದ್ದ “ವಚನ ಸಾಹಿತ್ಯ-ವಿಶ್ವ ಸಂದೇಶ” ವಿಚಾರ ಸಂಕಿರಣಕ್ಕೆ ನಿರ್ದೇಶಕರಾಗಿ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ.
  • B. G. S Institute of Management Studies, ಚಿಕ್ಕಬಳ್ಳಾಪುರ ಇವರು ಆಯೋಜಿಸಿದ್ದ “ವಚನ ಸಾಹಿತ್ಯ-ಜಾಗತಿಕ ಅನಿಸಂಧಾನ” ವಿಚಾರ ಸಂಕಿರಣದ ನಿರ್ದೇಶಕಿಯಾಗಿ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ.
  • ದಿನಾಂಕ 20.11.2018 ರಂದು ನ್ಯಾಶನಲ್ ಕಾಲೇಜು, ಬಸವನಗುಡಿಯಲ್ಲಿ ಆಯೋಜಿಸಲಾದ ಅಂತರ ಕಾಲೇಜು ವಿದ್ಯಾರ್ಥಿ “ಸ್ವ-ರಚಿತ ಕವನ ವಾಚನ” ಸ್ಪರ್ಧೆಯ ವಿಶೇಷ ಆಹ್ವಾನಿತರಾಗಿ ತೀರ್ಪುಗಳನ್ನು ನೀಡಿರುತ್ತಾರೆ.
  • ದಿನಾಂಕ 26.03.2019 ರಲ್ಲಿ B.M.S ವಾಣಿಜ್ಯ ಹಾಗೂ ನಿರ್ವಹಣಾ ಕಾಲೇಜು ಮತ್ತು ಬಿ. ಎಮ್.‌ ಎಸ್‌ ಸಂಜೆ ಕಾಲೇಜು ಜಂಟಿಯಾಗಿ ಆಯೋಜಿಸಿದ್ದ ಸಂಸ್ಕೃತಿ ಉತ್ಸವದಲ್ಲಿ ಅಂತರ ಕಾಲೇಜು ಚರ್ಚಾ ಸ್ಪರ್ಧೆ ಹಾಗೂ ಆಶುಭಾಷಣ ಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಯ ನಿರ್ವಹಿದ್ದಾರೆ.
  • 22.04.2018 ರಂದು ವಿವಿಧ ಭಾರತಿ-ಆಕಾಶವಾಣಿ ಬೆಂಗಳೂರು ಇವರು ಆಯೋಜಿಸಿದ್ದ ಚಿಂತನಾ ಕಾರ್ಯಕ್ರಮದಲ್ಲಿ “ಕನ್ನಡದ ಬಗೆಗಿನ ಚಿಂತನೆಗಳು” ಎನ್ನುವ ಕಾರ್ಯಕ್ರಮ ಮೂರು ಕಂತುಗಳಲ್ಲಿ ಬಿತ್ತರವಾಗಿದೆ.

ಇವರ ಅಭೂತಪೂರ್ವ ಶೈಕ್ಷಣಿಕ ಸಂಸ್ಕೃತಿ ಮತ್ತು ಪರಂಪರೆಗೆ ಸಲ್ಲಿಸಿದ ಸೇವೆಯನ್ನು ಪರಿಗಳಿಸಿ ಇವರಿಗೆ ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನಮೂದಿಸಲಾಗಿದೆ.

  • 2009-2011 ರಲ್ಲಿ UGC-University Grant Commission ನಿಂದ Developing Creative Personality to B. Com Students through Kannada Text ಗೆ Minor Research Project Grant ನೀಡಿದೆ.
  • “ಅಲ್ಲಮ ಶೂನ್ಯ ಸಿರಿ” ಸಹಿತ ಹತ್ತಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಇವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ನೀಡಲಾಗಿದೆ.
  • ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನವರು 30.09.2018 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ 2018 ರ ಶೈಕ್ಷಣಿಕ ಹಾಗೂ ಸಂಶೋಧನಾತ್ಮಕ ವ್ಯಕ್ತಿತ್ವವನ್ನು ಗುರುತಿಸಿ “ಸಮಾಜ ಸೇವಾರತ್ನ” ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
  • 15.09.2019 ರಲ್ಲಿ ನಯನಾ ಸಭಾಂಗಣ ಬೆಂಗಳೂರಲ್ಲಿ “ಶ್ರೀ ಸಿದ್ಧಪ್ಪಾಜಿ ಸಮರ್ಥ ಸಂಶೋಧನಾ ಮಾರ್ಗದರ್ಶಿ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ.
  • 2021 ರಲ್ಲಿ Clip Alumni Association ಬೆಂಗಳೂರನವರು “Women Achievers Award” ನೀಡಿ ಗೌರವಿಸಿದ್ದಾರೆ.
  • 14.03.2021 ರಲ್ಲಿ ದಿ. ಹಿರಿಯ ನಟ ಬಿ. ಎನ್‌. ಎಲ್‌ ಬಾಲಕೃಷ್ಣ ರಂಗಮಂದಿರ ಬೆಂಗಳೂರಲ್ಲಿ “ಶ್ರೀ ಸಿದ್ಧಪ್ಪಾಜಿ ಜಾನಪದ ಸಾಹಿತ್ಯ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ.
  • 1998 ರಲ್ಲಿ ಕರ್ನಾಟಕ ಸರ್ಕಾರದಿಂದ ನೀಡಲಾಗುವ Best NSS Officer ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
  • 2003 ರಲ್ಲಿ UGC Academic Staff College ನಿಂದ ನೀಡಲಾಗುವ “ಅತ್ಯುತ್ತಮ ಶಿಕ್ಷಕಿ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
  • 2006 ರಲ್ಲಿ ರಾಜೀವ ಗಾಂಧಿ ಸದ್ಭಾವನಾ ರಾಜ್ಯ ಪ್ರಶಸ್ತಿ “ಉತ್ತಮ ಶಿಕ್ಷಕಿ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
  • ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನಾ ಪ್ರಬಂಧಕ್ಕೆ “ಅತ್ಯುತ್ತಮ ಸಂಶೋಧನಾ ಲೇಖಕಿ” ಪ್ರಶಸ್ತಿ ಲಭಿಸಿದೆ. 
  • ಎರಡು ಬಾರಿ ಇಂದಿರಾ ಗಾಂಧಿ ಪ್ರಿಯದರ್ಶಿನಿ “ಅತ್ಯುತ್ತಮ ಶಿಕ್ಷಕಿ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
  • ಮಾನವ ಸಂಪನ್ಮೂಲ ಇಲಾಖೆಯ “ಸದ್ಭಾವನಾ ರಾಷ್ಟ್ರ ಪ್ರಶಸ್ತಿ” ಇವರಿಗೆ ಸಂದಿದೆ.

ಆದರ್ಶ ಮೌಲ್ಯಗಳು ಮಸುಕಾಗುತ್ತಿರುವ ಆಧುನಿಕ ಕಾಲಘಟ್ಟದಲ್ಲಿ ಸ್ವಚ್ಛ ಸಮಾಜ ರೂಪಿಸುವಲ್ಲಿ ತಮ್ಮದೇ ಆದ ಕಾರ್ಯವಿಧಾನಗಳ ಮೂಲಕ ಸಮಾಜಮುಖಿ ಕಾರ್ಯಗಳಿಗೆ ಕಿವಿಯಾಗಿದ್ದಾರೆ, ಕಣ್ಣಾಗಿದ್ದಾರೆ, ಧ್ವನಿಯಾಗಿದ್ದಾರೆ ಡಾ. ಶೀಲಾದೇವಿ ಮಳಿಮಠ ಅವರು. ನಡೆ-ನುಡಿ, ಆಚಾರ-ವಿಚಾರ, ಸಂಸ್ಕೃತಿ-ಪರಂಪರೆಗಳ ತ್ರಿವೇಣಿ ಸಂಗಮವಾಗಿದ್ದಾರೆ. ಇವರ ವಿಶ್ರಾಂತ ಬದುಕು ಸುಖಮಯವಾಗಲಿ, ನಮ್ಮೆಲ್ಲರಿಗೆ ದಾರೀದೀಪವಾಗಲಿ ಅಂತ ಬಯಸುತ್ತಾ ಬಸವಣ್ಣನವರ ಈ ವಚನದ ಮೂಲಕ ಈ ಪರಿಚಯ ಲೇಖನಕ್ಕೆ ವಿರಾಮ ಹೇಳುತ್ತೇನೆ.

ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ಅಗ್ಘವಣಿ    : ಪವಿತ್ರ ಜಲ.
ತೊತ್ತುಗೆಲಸ : ಸಣ್ಣಸೇವೆ, ಕೆಲಸ.

ಸಂಗ್ರಹ ಮತ್ತು ಲೇಖನ:

ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಶಾಲೆಯ ಹತ್ತಿರ
ಕ್ಯಾತ್ಸಂದ್ರ, ತುಮಕೂರು – 572 104
ಮೋಬೈಲ್‌ ನಂ  : 9741 357 132
ಈ-ಮೇಲ್‌       : vijikammar@gmail.com

Loading

Leave a Reply