
ಅರ್ಥ ಸನ್ಯಾಸಿಯಾದಡೇನಯ್ಯಾ,
ಆವಂಗದಿಂದ ಬಂದಡೂ ಕೊಳದಿರಬೇಕು.
ರುಚಿ ಸನ್ಯಾಸಿಯಾದಡೇನಯ್ಯಾ,
ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು.
ಸ್ತ್ರೀ ಸನ್ಯಾಸಿಯಾದಡೇನಯ್ಯಾ,
ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಟ್ಟಿಲ್ಲದಿರಬೇಕು.
ದಿಗಂಬರಿಯಾದಡೇನಯ್ಯಾ,
ಮನ ಬತ್ತಲೆಯಾಗಿರಬೇಕು.
ಇಂತೀ ಚತುರ್ವಿಧದ ಹೊಲಬನರಿಯದೆ ವೃಥಾ ಕೆಟ್ಟರು
ಕಾಣಾ ಚನ್ನಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-791 / ವಚನ ಸಂಖ್ಯೆ-45)
ಈ ಒಂದೇ ಒಂದು ವಚನವನ್ನು ಅರ್ಥ ಮಾಡಿಕೊಂಡಿದ್ದರೆ “ವಚನ ದರ್ಶನ” ಎನ್ನುವ ಪುಸ್ತಕದ ಪ್ರಧಾನ ಸಂಪಾದಕ ಸದಾಶಿವಾನಂದ ಮತ್ತು ಸಂಪಾದಕರಾದ ಜನಮೇಜಯ ಉಮರ್ಜಿ, ನಿರಂಜನ ಪೂಜಾರ, ಚಂದ್ರಪ್ಪ ಬಾರಂಗಿ ಹಾಗೂ ಸಂತೋಷಕುಮಾರ ಅವರುಗಳು ಬೌದ್ಧಿಕ ದಿವಾಳಿಯಿಂದ ವಚನ ಸಾಹಿತ್ಯವನ್ನು ಹೀಯಾಳಿಸುವ ಮತ್ತು ವೈಷ್ಣವೀಕರಣದತ್ತ ತಿರುಚುವ ಪ್ರಯತ್ನವನ್ನು ಮಾಡುತ್ತಿರಲಿಲ್ಲ ಎನ್ನುವುದು ಸಾರಸ್ವತ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳು. ಪಾಪ ಕಪ್ಪ ಕಾಣಿಕೆಗಳ ಎಂಜಲು ಕಾಸಿಗಾಗಿ ತಮ್ಮನ್ನು ತಾವು ಮಾರಿಕೊಳ್ಳುತ್ತಿರಲಿಲ್ಲ ಎನ್ನುವುದೂ ಸಹ ಅಲ್ಲಲ್ಲಿ ಗುಸು ಗುಸು ಮಾತಾಡುವುದು ಕೇಳಿ ಬರುತ್ತಿದೆ. ಇದಕ್ಕೆ ಇವರೇ ಉತ್ತರ ಹೇಳಬೇಕು.
ಯಾವುದೇ ಸಂಪಾದಕೀಯವು ಮಾಹಿತಿಯನ್ನು ತಿಳಿಸಲು ಬಳಸಲಾಗುವ ಬರಹ, ಫೋಟೋಗ್ರಫಿ, ದೃಶ್ಯ, ಶ್ರವ್ಯ, ಹಾಗೂ ಚಲನಚಿತ್ರ ಮಾಧ್ಯಮಗಳನ್ನು ಆಯ್ಕೆಮಾಡಿ ಸಿದ್ಧಗೊಳಿಸುವ ಪ್ರಕ್ರಿಯೆ. ಸಂಪಾದಕೀಯ ಪ್ರಕ್ರಿಯೆಯು ದೋಷರಹಿತ, ಸಮಂಜಸ, ನಿಖರ ಹಾಗೂ ಪೂರ್ಣ ಕೃತಿಯನ್ನು ಸೃಷ್ಟಿಸುವ ಉದ್ದೇಶದಿಂದ ಮಾಡಲಾದ ತಿದ್ದುಪಡಿ, ಸಂಕ್ಷೇಪಣ, ವ್ಯವಸ್ಥೆಗೊಳಿಸುವಿಕೆ, ಮತ್ತು ಅನೇಕ ಇತರ ಮಾರ್ಪಾಡುಗಳನ್ನು ಒಳಗೊಳ್ಳಬಹುದು. ಇದು ಸಂಪಾದಕೀಯಕ್ಕೆ ಇರಬಹುದಾದ ವಿಶಾಲ ವೇದಿಕೆ.
ಪುಸ್ತಕದ ವಿಷಯ ರಾಜಕಾರಣವಾಗಿರಲಿ, ಆರ್ಥಿಕ ಪ್ರಶ್ನೆಯಾಗಿರಲಿ, ಸಾಮಾಜಿಕ ಸಮಸ್ಯೆಯಾಗಿರಲಿ, ಧಾರ್ಮಿಕತೆಯಾಗಿರಲಿ ಏನೇ ಆಗಿರಲಿ, ಸಂಪಾದಕೀಯ ಆ ಪುಸ್ತಕದ ನೀತಿ, ದೃಷ್ಟಿ, ಆದರ್ಶ ಏನೆಂಬುದನ್ನು ಸೂಚಿಸುತ್ತದೆ. ವಿಷಯ ಯಾವುದೇ ಆಗಿರಲಿ ಸಂಪಾದಕೀಯ ಓದಿದ ಕೂಡಲೇ ಪುಸ್ತಕದ ಅಭಿಪ್ರಾಯ ಇಂಥದೇ ಎಂಬುದು ಸ್ಪಷ್ಟವಾಗುತ್ತದೆ.
ಈ ಐದೂ ಜನ ಸಂಪಾದಕರು ವಚನ ಸಾಹಿತ್ಯವನ್ನು ತಮಗೆ ಬೇಕಾದ ಹಾಗೆ ತಮ್ಮ ಮೂಗಿನ ನೇರಕ್ಕೆ ಮತ್ತು ತಮ್ಮ ತಮ್ಮ ಜಾತಿಯ ಕಟ್ಟೆಯ ಮೇಲೇಯೇ ಕುಳಿತು ತಮ್ಮ ಜಾತಿಯ ವಿಚಾರಧಾರೆಗಳನ್ನು ವಚನ ಸಾಹಿತ್ಯದಲ್ಲಿ ತುರುಕುವ ಹುನ್ನಾರ ನಡೆಸಿದ್ದು ಈ ಸಂಪಾದಕೀಯದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎನ್ನುವುದು at the outset ಕಂಡು ಬರುತ್ತೆ. ಹಾಗಾಗಿ ಈ ಐವರೂ ಹಾಗೂ ಮುನ್ನುಡಿ ಬರೆದ ಮಲ್ಲೇಪುರಂ ಜಿ ವೆಂಕಟೇಶ ಮತ್ತು 20 ಲೇಖನಗಳನ್ನು ಬರೆದ 20 ಲೇಖಕರು ವಚನ ಸಾಹಿತ್ಯವನ್ನು ವೈದಿಕೀಕರಣ ಮತ್ತು ವೈಷ್ಣವೀಕರಣ ಮಾಡುವುದಕ್ಕೋಸ್ಕರ ವಚನ ಸಾಹಿತ್ಯಕ್ಕೆ ಗಂಟು ಬಿದ್ದ ಶನಿಗಳು ಎನ್ನುವ ಪರಿಭಾಷೆಯನ್ನು ಬಳಸುವುದರಲ್ಲಿ ತಪ್ಪೇನಿಲ್ಲ. ಸಂಘ ಪರಿವಾರ ಕೃಪಾ ಪೋಷಿತ ನಾಟಕ ಮಂಡಳಿ ಹಾಗೂ ಹಣೆಯಲ್ಲಿ ವಿಭೂತಿ ಧರಿಸುವುದನ್ನು ಬಿಟ್ಟು ಗಂಧ-ಕುಂಕುಮ ಶೋಭಿತರು So Called ಬೆರಳೆಣಿಕೆಯಷ್ಟಿರುವ ಲಿಂಗಾಯತ ಸ್ವಾಮಿಗಳು ಈ ಪುಸ್ತಕದ ಸಂಪಾದಕೀಯವನ್ನು ಪರಿಣಾಮಕಾರಿ ಸಾಧನವನ್ನಾಗಿ ಮಾಡಿಕೊಂಡು, ವೈದಿಕರು ಮತ್ತು ಆಂಧ್ರದಿಂದ ವಲೆಸೆ ಬಂದ ಆರಾಧ್ಯ ಶೈವ ಬ್ರಾಹ್ಮಣರಾದ ವೀರಶೈವರನ್ನು ತನ್ನ ಕಡೆಗೇ ಎಳೆದುಕೊಂಡು ತಮ್ಮ ಕೈ ಬಲಪಡಿಸಿಕೊಳ್ಳಲು ಯತ್ನಿಸಿದ್ದಾರೆ. ಇವರಿಗೆ ಶರಣ ಆದಯ್ಯನವರ ಒಂದು ವಚನ ಅತ್ಯಂತ ಸೂಕ್ತವಾಗಿದೆ.
ಪತಿವ್ರತೆಯಾದಡೆ ಅನ್ಯಪುರುಷರ ಸಂಗವೇತಕ್ಕೆ?
ಲಿಂಗಸಂಗಿಯಾದಡೆ ಅನ್ಯಸಂಗವೇತಕ್ಕೆ?
ಈ, ಕಂಡ ಕಂಡವರ ಹಿಂದೆ ಹರಿವ ಚಾಂಡಾಲಗಿತ್ತಿಯಂತೆ
ಒಬ್ಬರ ಕೈವಿಡಿದು, ಒಬ್ಬರಿಗೆ ಮಾತಕೊಟ್ಟು,
ಮತ್ತೊಬ್ಬರಿಗೆ ಸನ್ನೆಮಾಡುವ ಬೋಸರಗಿತ್ತಿಯಂತೆ
ಪ್ರಾಣಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಹರಿಸಿ ಹೊಡೆವಡಲೇತಕ್ಕೆ?
ಇದು ಕಾರಣ ಸೌರಾಷ್ಟ್ರ ಸೋಮೇಶ್ವರಾ,
ಇಂತಪ್ಪ ಪಾಪಿಗಳ ನುಡಿಸಿದಡೆ
ಅಘೋರನರಕ ತಪ್ಪದಯ್ಯಾ.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-365 / ವಚನ ಸಂಖ್ಯೆ-1004)
ಈ ಪುಸ್ತಕದ ಸಂಪಾದಕ ಮಂಡಳಿಯನ್ನು ಅತ್ಯಂತ ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಳ್ಳೋಣ. ಇವರ ಹಿನ್ನೆಲೆಯನ್ನು ಗಮನಿಸಿದಾಗ ಅಚ್ಚ ವೈದಿಕ ಪರಂಪರೆಯ DNA ಇವರ ರಕ್ತದಲ್ಲಿ ಹರೀತಾ ಇರೋದಕ್ಕೆ ಸಾಕ್ಷೀಭೂತವಾಗುತ್ತದೆ. ಇಂಥ ವೈದಿಕ ಹಿನ್ನೆಲೆಯುಳ್ಳವರು ವಚನ ಸಾಹಿತ್ಯವನ್ನು ಅತ್ಯಂತ ಆಳವಾಗಿ ಅಭ್ಯಾಸ ಮತ್ತು ಅಧ್ಯಯನ ಮಾಡೋದಕ್ಕೆ ಸಾಧ್ಯಾನೇ ಇಲ್ಲ ಮತ್ತು ವಚನ ಸಾಹಿತ್ಯಕ್ಕೆ ದ್ರೋಹ ಮಾಡೋದಕ್ಕೇನೆ ಈ ಪುಸ್ತಕ ರಚನೆಯ ಜವಾಬ್ದಾರಿಯನ್ನು ಹೊತ್ತುಕೊಂಡು ತಿರುಗತಾ ಇರೋದು ಎನ್ನುವ ಭಾವನೆ ಎಲ್ಲ ವಚನ ಸಾಹಿತ್ಯಾಸಕ್ತರ ಅಂಬೋಣ.

ಪ್ರಧಾನ ಸಂಪಾದಕ – ಸದಾಶಿವಾನಂದ:
ಈ ಸ್ವಾಮಿಯ (ವಚನ ಸಾಹಿತ್ಯವನ್ನು ಹಾಳುಗೆಡುವುದರಲ್ಲಿ ಅಗ್ರ ಪಾತ್ರವಹಿಸಿರುವ ಈತನಿಗೆ ಏಕ ವಚನದ ಪ್ರಯೋಗ ಸೂಕ್ತ) ಪೂರ್ವಾಶ್ರಮದ ವಿವರಗಳನ್ನು ಕಲೆ ಹಾಕುವಲ್ಲಿ ವಿಫಲನಾಗಿದ್ದೇನೆ ಎಂದು ಪ್ರಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ಎಲ್ಲೂ ಸಿಗದ ಇವನ ಪೂರ್ವಶ್ರಮದ ಕುರಿತು ವಚನ ದರ್ಶನ ಪುಸ್ತಕದ ಮಾರ್ಗದರ್ಶಕ ಮಂಡಳಿ ಬೆಳಕನ್ನು ಚೆಲ್ಲಿದರೆ ಮುಂದಿನ ಲೇಖನದಲ್ಲಿ ವಿವರಿಸುವ ಪ್ರಯತ್ನ ಮಾಡುವೆ. ಇರಲಿ. ವಚನ ದರ್ಶನ ಪುಸ್ತಕದಲ್ಲಿ ನಮೂದಿಸಿದಂತೆ ಈತ ಬಾಲ್ಯದಿಂದಲೂ ಆಧ್ಯಾತ್ಮದತ್ತ ಒಲವು ಹೊಂದಿದ್ದನಂತೆ. ನೋಡಿ ಎಂಥ ಅಸಂಬದ್ಧ ಮಾತು ಅಂದರೆ “ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಶ್ರೀಮದ್ ಭಗವದ್ಗೀತೆ, ಉಪನಿಷತ್ತು, ಪತಂಜಲಿ ಯೋಗಸೂತ್ರ ಕಲಿತಿದ್ದಾನೆ” ಎಂದು ಪುಸ್ತಕದಲ್ಲಿ ನಿರೂಪಣೆ ಮಾಡಿದ್ದಾರೆ. ಹಾಗಾದರೆ ಈತನ ಹಿನ್ನೆಲೆಯೇ ಮನುಸ್ಮೃತಿಯ ವೈದಿಕತೆಯ ಅಧ್ಯಯನ. ಇಂಥವನನ್ನು ಒಂದು ಲಿಂಗಾಯತ ಮಠಕ್ಕೆ ಪೀಠಾಧಿಪತಿಯನ್ನಾಗಿಸಿದರೆ ಅಗುವ ಎಡವಟ್ಟುಗಳು ಎಂಥ ಅನಾಹುತಗಳನ್ನು ಸೃಷ್ಟಿಸಬಹುದು ಎನ್ನುವುದು Million Dollar Question. ಇದರಲ್ಲಿ ವಚನ ಸಾಹಿತ್ಯಕ್ಕೆ Suit ಆಗುವಂತೆ “ವಚನ ಸಾಹಿತ್ಯದ ಆಳವಾದ ಅಧ್ಯಯನ ಮಾಡಿದ್ದಾರೆ” ಅಂತ ಸೇರಿಸಿ ತಿಪ್ಪೆ ಸಾರಿಸಿದ್ದಾರೆ. ಹಳ್ಳಿ ಹಳ್ಳಿಗೆ ಗಣಪತಿಯ ಪ್ರತಿಷ್ಠಾಪನೆಯ ಭಾರವನ್ನೂ ಕೂಡ ಹೆಗಲ ಮೇಲೆ ಹೊತ್ತಿದ್ದಾರಂತೆ. ಬಸವಾ ಬಸವಾ ಇಂಥ ವೈದಿಕ ಮನಸ್ಸಿರುವ ಈ ಸ್ವಾಮಿ ಪ್ರಧಾನ ಸಂಪಾದಕನಂತೆ. ಎಂಥ ಅನಾಹುತ, ಇದನ್ನು ಕಂಡೂ ಕಂಡೂ ನಮ್ಮ ವಿರಕ್ತ ಮಠದ ಕೆಲವು ಸ್ವಾಮಿಗಳು ಹಾಗೂ ಇತ್ತೀಚೆಗಿನ ವರದಿಯ ಪ್ರಕಾರ ಅಪ್ಪಟ ಲಿಂಗಾಯತ ಮತ್ತು ಪರಮ ಪೂಜ್ಯ ಲಿಂ. ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳು, ಸಿದ್ಧಗಂಗಾ ಮಠದ ಪರಮ ಭಕ್ತನಾದ ಸೋಮಣ್ಣ ಈ ಪುಸ್ತಕದ ಬಿಡುಗಡೆಗೆ ಹಾಜರಿದ್ದು ಹಾರೈಸುವುದು ವಚನ ಸಾಹಿತ್ಯದ ಆರಾಧಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ದಿನಾಂಕ 20.07.2018 ರಂದು ಗದುಗಿನ ಜಗದ್ಗುರು ಶ್ರೀ ಶಿವಾನಂದ ಬೃಹನ್ಮಠದ ಉತ್ತರಾಧಕಾರಿಯಾಗಿ ನಿಯುಕ್ತಿ ಹೊಂದಿದ. ಅಲ್ಲಿಂದ ಆ ಮಠಕ್ಕೆ ರಾಹು ಅಂಟಿಕೊಂಡ ಹಾಗೆ ಅಂಟಿಕೊಂಡು ಅಲ್ಲಿ ವೈದಿಕತೆಯನ್ನು ಆಳವಾಗಿ ಬೇರೂರಲು ಪ್ರಾರಂಭ ಮಾಡಿದಾ ಎನ್ನುವುದು ಆ ಮಠದ ಭಕ್ತರ ಅಂಬೋಣ. ಆ ನಂತರ ಇವನ ಅಧ್ವಾನಗಳನ್ನು ಕಂಡ ಹಿರಿಯ ಸ್ವಾಮೀಜಿಗಳು ಇವನನ್ನು ಮಠದಿಂದ ಹೊರ ಹಾಕುವ ಪ್ರಯತ್ನವನ್ನೂ ಮಾಡುತ್ತಿದ್ದಾರಂತೆ. ಆದರೆ ಯಾರ ಸಹಯೋಗ ಮತ್ತು ಸಹಕಾರದಿಂದ ಇನ್ನೂ ಮಠದಲ್ಲಿ ಮುಂದುವರೆಯುತ್ತಿದ್ದಾನೆ ಎನ್ನುವುದು Open Secret. ಆದರೆ ಬಹಳ ಬೇಗ ಈತನನ್ನು ಮಠದ ಸದ್ಭಕ್ತರು ಮಠದಿಂದ ಹೊರ ಹಾಕುವುದಂತೂ ಖಂಡಿತ.
ಸಂಪಾದಕ ನಂ. 01: ಜನಮೇಜಯ ಉಮರ್ಜಿ:
ದಿನಾಂಕ 26.01.1986 ರಲ್ಲಿ ಬಾಗಲಕೋಟೆಯಲ್ಲಿ ಜನಿಸಿದ ಈ ಜನಮೇಜಯ NTTF ನ Product ಮತ್ತು ಈತ ವಚನ ಸಾಹಿತ್ಯಕ್ಕೆ ಒಕ್ಕರಿಸಿಕೊಂಡಿದ್ದು ದುರಂತ ಎನ್ನುವುದು ಸಾಹಿತ್ಯ ಲೋಕದಲ್ಲಿ ಎದ್ದಿರುವ ಸುದ್ದಿ. ನಾವು ಕಂಡಂತೆ ನಮ್ಮ ಕಾಲಘಟ್ಟದಲ್ಲಿ ಯಾವುದೇ Engg & Medical Seat ಸಿಗದೇ ಇದ್ದಾಗ ಈ NTTF ಎನ್ನುವ Die Making Diploma ಗೆ Admission ಮಾಡಿಸುತ್ತಿದ್ದರು. ಇನ್ನು NTTF ಮಾಡಿರುವ ಈತ Software Engineer ಅಂತ ಹೇಳಿಕೋತಾನೆ. ಏನು ಕಥೇನೋ ಏನೋಪಾ ಒಂದಕ್ಕೂ Clarity ಇಲ್ಲಾ. ಈತ ವಚನ ಸಾಹಿತ್ಯ ಹೇಗೆ ಅಧ್ಯಯನ ಮಾಡಿದ್ದಾನೋ ಏನೋ, ಕನಿಷ್ಠ ಪಕ್ಷ ಪಂಚಾಚಾರ, ಷಟಸ್ಥಲ ಮತ್ತು ಅಷ್ಟಾವರಣದ ಬಗ್ಗೆ ತಿಳಿದುಕೊಂಡಿಲ್ಲ ಎನ್ನುವುದನ್ನು ಅವನ ಭಾಷಣಗಳಿಂದ ಮತ್ತು ಈ ಪುಸ್ತಕದಲ್ಲಿ ಉದ್ಘೋಷ ಮಾಡಿರುವ ಲೇಖನದಿಂದ ತಿಳಿದು ಬರುತ್ತದೆ. ಇನ್ನು ವಚನ ಸಾಹಿತ್ಯದ ಕುರಿತಾದ ಈ ಪುಸ್ತಕದ ಸಂಪಾದಕತ್ವವನ್ನು ಹೇಗೆ ನಿಭಾಯಿಸಿರಬಹುದು ಎನ್ನುವುದನ್ನು ನೆನೆಸಿಕೊಂಡರೇನೆ ಭಯವಾಗುತ್ತದೆ.
ಸಂಪಾದಕ ನಂ. 02: ನಿರಂಜನ ಪೂಜಾರ:
ಹಾವೇರಿ ಜಿಲ್ಲೆಯ ದೇವರಗುಡ್ಡದವನು ಅಂತಾ ಪುಸ್ತಕದಲ್ಲಿ ಹೇಳಿದ್ದಾರೆ. ನಿರ್ವಹಣಾ ಶಾಸ್ತ್ರದಲ್ಲಿ ಡಾಕ್ಟರೇಟ್ ಅಂತೆ. ಕೃಷಿಗೂ ಈ ಡಾಕ್ಟರೇಟ್ ಗೂ ಮತ್ತು ವಚನ ಸಾಹಿತ್ಯಕ್ಕೂ ಒಂದಕ್ಕೊಂದು ಸಂಬಂಧವಿಲ್ಲದ ಈತ ಯಾವ ಮೂಲೆಯಿಂದ ವಚನ ಸಾಹಿತ್ಯ ಓದ್ಯಾನೋ ಗೊತ್ತಿಲ್ಲ. ಈ ಪುಸ್ತಕದಲ್ಲಿ ಈತನ ಲೇಖನವೇ ಇಲ್ಲಾ. “ಮದುವೆ ಗಂಡಿಗೆ ಅದೇ ಇಲ್ಲ” ಅನ್ನೋ ಗಾದೆ ಮಾತಿನಂತೆ ಈ ಸಂಪಾದಕನ ವಚನ ಸಾಹಿತ್ಯದ ಜ್ಞಾನದ ಕುರಿತು ಈ ಪುಸ್ತಕದ ಎಲ್ಲ ರೂವಾರಿಗಳಿಗೂ ಮಾಹಿತಿ ಇಲ್ಲಾ ಅಂದಂಗಾತು.
ಸಂಪಾದಕ ನಂ. 03: ಸಂತೋಷ್ ಕುಮಾರ್:
ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗದಲ್ಲಿ ಸಾರ್ವಜನಿಕ ಆಡಳಿತ ಪ್ರಾಧ್ಯಾಪಕನಂತೆ. ರಾಜ್ಯಶಾಸ್ತ್ರದಲ್ಲಿ ಪದವೀಧರ ಮತ್ತು PhD ಅಂತೆ. ವಚನ ಸಾಹಿತ್ಯದ ಅಭ್ಯಾಸದ ಬಗ್ಗೆ ಏನೊಂದೂ ಮಾಹಿತಿ ಈತನ ಯಾವುದೇ Profile ನಲ್ಲಿ ಸಿಗತಾ ಇಲ್ಲಾ. ಬಸವಾ ಬಸವಾ ಇಂಥ ವಚನ ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲದವನು ಸಂಪಾದಕ ಮಂಡಳಿಯಲ್ಲಿ ವಿರಾಜಮಾನವಾಗಿದ್ದು ಈ ಪುಸ್ತಕದ ಬೌದ್ಧಿಕ ದಿವಾಳಿಗೆ ಕಾರಣವಾಗಿದೆ ಎನ್ನುವುದು ವಚನ ಸಾಹಿತ್ಯದ ಆರಾಧಕರಿಗೆ Immediate ಆಗಿ ಅರ್ಥವಾಗುತ್ತದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ವಿಷಯ ಮಂಡಣೆ ಮಾಡಿದ್ದಾನೆ ಅಂತಾ ಬರೆದಿದ್ದಾರೆ. ನನ್ನ 35 ರ್ಷಗಳ ವಚನ ಸಾಹಿತ್ಯದ ಅಧ್ಯಯನದಲ್ಲಿ ಈತನ ಹೆಸರು ನಾನು ಕೇಳತಾ ಇರೋದು ಇದೇ ಮೊದಲು. ನಿರಂಜನ ಪೂಜಾರ ಅವರಂತೆ ಇವನ ಲೇಖನವೂ ಕೂಡ ಈ ಪುಸ್ತಕದಲ್ಲಿ ಇಲ್ಲಾ. Matter is simple ಈತನಿಗೂ ವಚನ ಸಾಹಿತ್ಯಕ್ಕೂ ಏನೂ ಸಂಬಂಧವಿಲ್ಲಾ ಎನ್ನುವುದು ಪುಸ್ತಕದ ಎಲ್ಲರಿಗೂ ಗೊತ್ತಿದೆ ಅನ್ನೋದು ಅತ್ಯಂತ ಸ್ಪಷ್ಟ.
ಸಂಪಾದಕ ನಂ. 04: ಚಂದ್ರಪ್ಪ ಬಾರಂಗಿ:
ಈ ಐದು ಜನರ ಸಂಪಾದಕ ಮಂಡಳಿಯಲ್ಲಿ ಕನ್ನಡದಲ್ಲಿ ಅಷ್ಟೋ ಇಷ್ಟೋ ಕೃಷಿ ಮಾಡಿದವನು ಎಂದರೆ ಇವನೊಬ್ಬನೇ ಅಂತ ಅವನ Biodata ನೋಡಿದರೆ ಅರ್ಥವಾಗುತ್ತೆ. ಈತನ ಲೇಖನ ಈ ಪುಸ್ತಕದಲ್ಲಿದೆ. ಶುದ್ಧ ಕನ್ನಡದಲ್ಲಿ ವಚನ ಎನ್ನುವ ಶಬ್ದಕ್ಕೆ ಅರ್ಥ ಹೇಳದೇ ವಚನ ಎನ್ನುವ ಶಬ್ದಕ್ಕೆ ಸಂಸ್ಕೃತದ ಪಾರಿಭಾಷಿಕ ಅರ್ಥವನ್ನು ನೀಡುವ ಈ ಸಂಪಾದಕನ ಲೇಖನದ ವಿಶ್ಲೇಷಣೆಯನ್ನು ಮುಂದಿನ ಕಂತುಗಳಲ್ಲಿ ಮಾಡೋಣ.
ಇದಿಷ್ಟು ವಚನ ಸಾಹಿತ್ಯಕ್ಕೆ ಗಂಟು ಬಿದ್ದಿರುವ ಶನಿಗಳ ಸಂಕ್ಷಿಪ್ತ ಪರಿಚಯ. ಇನ್ನು ಸಂಪಾದಕೀಯದ ಪರಿಮಿತಿ, ಇತಿಮಿತಿ ಮತ್ತು ಅರ್ಥವನ್ನು ಹುಡುಕುವ ಪ್ರಯತ್ನ ಮಾಡೋಣ.
ಒಬ್ಬ ಸ್ಫುರದ್ರೂಪಿ ತರುಣ ತನ್ನ ಕೆಲಸವನ್ನು ಮುಗಿಸಿಕೊಂಡು ಸಂಜೆ ಬಸ್ಸಿನಲ್ಲಿ ಮನೆಗೆ ತೆರಳತಾ ಇದಾನೆ. ಒಂದು ನಿಲ್ದಾಣದಲ್ಲಿ ಗಾಢ ನೀಲಿ ಬಣ್ಣದ Phulka Dots ಇರುವ Mini Skirt ಧರಿಸಿರುವ ಅತ್ಯಂತ ಸುಂದರ ತರುಣಿಯೊಬ್ಬಳು ಹತ್ತಿ ಇವನ ಪಕ್ಕದಲ್ಲಿ ಕುಳಿತುಕೊಳ್ಳುತ್ತಾಳೆ. ಇವನಿಗೋ ಖುಶಿಯೋ ಖುಶಿ. ಅವಳನ್ನು ಮಣಕೈಯಿಂದ Just Touch ಮಾಡಬೇಕು ಮತ್ತು ಇನ್ನೇನು ಮಾತಾಡಿಸಿಬೇಕು ಅಷ್ಟರಲ್ಲಿ ಅವಳ ನಿಲ್ದಾಣ ಬಂದಿದ್ದರಿಂದ ಇಳಿದು ಹೊರಟು ಹೋಗುತ್ತಾಳೆ. ಇವಳನ್ನು ವೈದಿಕೀಕರಣ ಮತ್ತು ವೈಷ್ಣವೀಕರಣ ಎನ್ನುವ ಮಾಯೆಗೆ ಹೋಲಿಸಬಹುದು. ಈತನಿಗೆ ನಿರಾಶೆ. ಮುಂದೆ ದಾರಿಯಲ್ಲಿ ಡುಮ್ ಡುಮ್ ಮತ್ತು ಪಿಂ ಪಿಂ ಪೀ ಎಂದು ವಾಲಗಗಳನ್ನು ಢೋಲಕಗಳನ್ನು ಬಾರಿಸುತ್ತಾ ಅನೆಗಳ ಮೆರವಣಿಗೆ ಹೊರಟಿತ್ತು. ಆನೆ ನಡೆದದ್ದೇ ದಾರಿ ಎನ್ನುವ ಹಾಗೆ ಈ ಆನೆಯನ್ನು ವಚನ ಸಾಹಿತ್ಯಕ್ಕೆ ಹೋಲಿಸಬಹುದು. ಆನೆಗಳನ್ನು ನೋಡಿ ಈ ಸ್ಫುರದ್ರೂಪಿ ತರುಣನ ಮನಸ್ಸು ಅತ್ಯಂತ ಪ್ರಫುಲ್ಲಿತವಾಯಿತು. ಮನೆಗೆ ಬಂದು ಸ್ನಾನ ಮಾಡಿ ಜನಿವಾರವನ್ನು ಸರಿಪಡಿಸಿಕೊಂಡು ಪೂಜೆ ಮಾಡಿ, ಊಟ ಮಾಡಿ ನಿದ್ರೆಗೆ ಜಾರಿದ. ದಿನವಿಡೀ ಕೆಲಸ ಮಾಡಿದ ಆಯಾಸದಿಂದ ಗಾಢವಾದ ನಿದ್ದೆ ಬಂದಿತ್ತು. ಆ ಸುಂದರ ಹುಡುಗಿ ಮತ್ತು ಆನೆಗಳ ಮೆರವಣಿಗೆಯನ್ನು ಮನದಲ್ಲಿ ಮೆಲುಕು ಹಾಕಿಕೊಳ್ಳುತ್ತಾ ಮಲಗಿದ್ದಾ. ಕನಸಿನಲ್ಲಿ ಯಾರೋ ಬಾಗಿಲು ತಟ್ಟಿದ ಹಾಗೆ ಆಯಿತು. ಆ ಸುಂದರ ತರುಣಿಯೇ ಬಂದಿರುವ ಹಾಗೆ ಭಾಸವಾಗಿ ಖುಶಿಯಾದ. ಬಾಗಿಲು ತೆಗೆದು ನೋಡತಾನೆ ಅದೇ ಆನೆ ಗಾಢ ನೀಲಿ ಬಣ್ಣದ Phulka Dots ಇರುವ Mini Skirt ಧರಿಸಿ ಈತನ ಮುಂದೆ ನಿಂತಿದೆ. ಅಂದರೆ ಆನೆಯೆಂಬ ವಚನ ಸಾಹಿತ್ಯಕ್ಕೆ ಮಾಯೆಯೆಂಬ ಗಾಢ ನೀಲಿ ಬಣ್ಣದ Phulka Dots ಇರುವ Mini Skirt ತೊಡಿಸಿ ಮಜಾ ತೆಗೆದುಕೊಳ್ಳುವ ಹುನ್ನಾರ. ಥಟ್ಟನೆ ಎಚ್ಚರವಾಗಿ ಮನದಲ್ಲಿಯೇ ತನ್ನ ಮೂರ್ಖತನಕ್ಕೆ ಬೈದುಕೊಂಡು ಮತ್ತೆ ನಿದ್ರೆಗೆ ಜಾರಿದ. ಆದರೆ ಈ ಪುಸ್ತಕವನ್ನು ಹುಟ್ಟು ಹಾಕಿದ ಮೂರ್ಖರಿಗೆ ಈ ಆನೆ ಮತ್ತು ಮಾಯೆಯ ಅರ್ಥವಾಗತಾ ಇಲ್ಲಾ.
ಈ ಕಥೆ ಸೊಗಸಾಗಿ ಮತ್ತು ಚಂದವಾಗಿ ಈ ಪುಸ್ತಕದ 5 ಜನ ಸಂಪಾದಕ ಮಂಡಳಿ, ಮುನ್ನುಡಿ ಬರೆದ ಮಲ್ಲೇಪುರಂ ಜಿ ವೆಂಕಟೇಶ ಮತ್ತು 20 ಲೇಖನ ಬರೆದ ಲೇಖಕರಿಗೆ ಒಪ್ಪುತ್ತದೆ. ಆನೆಯೆಂಬ ಅದ್ಭುತವಾದ ವಚನ ಸಾಹಿತ್ಯವನ್ನು ತಮ್ಮದಾಗಿಸಿಕೊಳ್ಳಬೇಕು. ಹಾಗೆನೇ ಅತ್ಯಂತ ಸುಂದರವಾದ ನೀಲಿ ಬಣ್ಣದ Phulka Dots ಇರುವ Mini Skirt ಧರಿಸಿರುವ ತರುಣಿಯ ಮೇಲೆ ಮೋಹದ ಮಾಯೆ ಈ ಎಲ್ಲರಲ್ಲಿಯೂ ಕಾಣಬಹುದು. ಮೋಹಿನಿಯ ಮಾಯೆಗೊಳಗಾಗಿ ಸುಟ್ಟು ಭಸ್ಮವಾಗುವ ಭಸ್ಮಾಸುರನ ಹಾಗೆ ಸುಟ್ಟು ಹೋಗುವ ಕಾಲ ದೂರವಿಲ್ಲ ಎನ್ನುವುದು ನಾನು ಪರಿಭಾವಿಸುತ್ತೇನೆ. ವಚನ ಸಾಹಿತ್ಯ ಎನ್ನುವ ಅಗಾಧ ಮತ್ತು ಅದ್ಭುತ ಸಾಹಿತ್ಯವೆಂಬ ಆನೆಗೆ ನೀಲಿ ಬಣ್ಣದ Phulka Dots ದಂಥ ವೈದಿಕತ್ವ ಮತ್ತು ವೈಷ್ಣವತ್ವ ಎನ್ನುವ ಮಾಯೆಯ Mini Skirt ತೊಡಿಸಿ ಮಜಾ ಮಾಡುವ ಹುನ್ನಾರ ಮಾಡುತ್ತಿದ್ದಾರೆ. ಎಂಥ ಕೆಟ್ಟ ಮತ್ತು ಅಸಹ್ಯಕರ ವಿಚಾರ ಮತ್ತು ದುರಂತ ಅಲ್ಲವೇ? “ಕಾಮಾತುರಾಣಾಂ ನ ಲಜ್ಜಾ ನ ಭಯಂ” ಎನ್ನುವ ಹಾಗೆ ಯಾವುದೇ ನಾಚಿಕೆ ಮಾನ ಮರ್ಯಾದೆ ಇಲ್ಲದೇ ಎಂಜಲು ಕಾಸಿಗೆ ತಮ್ಮನ್ನೇ ಮಾರಿಕೊಂಡು ಈ ಪುಸ್ತಕವನ್ನು ಪ್ರಕಾಶನ ಮಾಡಿ ವಿಕೃತಿ ಮೆರೆದಿದ್ದಾರೆ ಎನ್ನುವುದು Classic Literature, Vachana Literature & Academic ವಲಯದಲ್ಲಿ ಎದ್ದಿರುವ ಬಿರುಗಾಳಿ.
ಘಟಂ ಭಿಂದ್ಯಾತ್ ಪಟಂ ಛಿಂದ್ಯಾತ್ ಕುರ್ಯಾದ್ವಾ ಗಾರ್ಧಭಸ್ವನಂ |
ಏನ ಕೇನ ಪ್ರಕಾರೇಣ ಪ್ರಸಿದ್ಧ ಪುರುಷೋಭವೇತ್ || ಸುಭಾಷಿತ ||
“ಗಡಿಗೆಯನ್ನಾದರೂ ಒಡೆಯಬೇಕು. ಬಟ್ಟೆಯನ್ನಾದರೂ ಹರಿಯಬೇಕು. ಕತ್ತೆಯಂತಾದರೂ ಕಿರುಚಬೇಕು. ಹೇಗಾದರೂ ಸರಿ ಪ್ರಸಿದ್ಧಿಗೆ ಬರಬೇಕು. ಇದೇ ಗುರಿಯಾಗಬೇಕು”. ಇದು ಈ ಪುಸ್ತಕ ಹುಟ್ಟು ಹಾಕಿದ ಎಲ್ಲರಿಗೂ ಅನ್ವಯಿಸುತ್ತದೆ. ಈ ವಿವಾದವನ್ನು ಹುಟ್ಟು ಹಾಕುವ ಮೂಲಕ ಖ್ಯಾತಿ ಗಳಿಸಲೆಂದೇ ಈ ಕೆಟ್ಟ ಕೆಲಸವನ್ನು ಮಾಡಿದ್ದಾರೆ ಎಂದು ಸಮಾಜದಲ್ಲಿ ಮಾತನಾಡುತ್ತಿದ್ದಾರೆ. ಇದಕ್ಕೆ ತಮ್ಮ ಉತ್ತರ ಏನೆಂದು ತಿಳಿಸುವ ಕೆಲಸ ಮಾಡಬೇಕೆಂದು ವಿನಂತಿ.
|| ಆನೋ ಭದ್ರಾಃ ಕೃತವೋ ಯಂತು ವಿಶ್ವತಃ || ಇಡೀ ವಚನ ಸಾಹಿತ್ಯದ ಕಳೆದ ಸುಮಾರು 200 ವರ್ಷಗಳ ಇತಿಹಾಸದಲ್ಲಿನ ಚಿಂತನ, ಮಂಥನ, ಭಾಷಣ, ಪುಸ್ತಕ ಹಾಗೂ ಲೇಖನಗಳನ್ನು ಗಮನಿಸಿದರೆ ಪ್ರಾರಂಭದಲ್ಲಿ ಎಲ್ಲವೂ ಒಂದಿಲ್ಲೊಂದು ವಚನವನ್ನು ಉಲ್ಲೇಖ ಮಾಡುವುದರ ಮೂಲಕವೇ ಪ್ರಾರಂಭವಾಗುತ್ತವೆ. ಆದರೆ ಈ ವಚನ ದರ್ಶನ ಪುಸ್ತಕದ ಸಂಪಾದಕೀಯ ಒಂದು ಸಂಸ್ಕೃತದ ಸಾಲಿನಿಂದ ಪ್ರಾರಂಭವಾಗುತ್ತದೆ. ಅಂದರೆ ಈ ಪುಸ್ತಕ ಬಸವಣ್ಣನವರನ್ನು ಪವಾಡ ಪುರುಷ ಮತ್ತು ರಾಮನ ಅವತಾರ ಅಥವಾ ಬ್ರಾಹ್ಮಣೀಕರಣ ಮಾಡಿ ತೋರಿಸುವ ಅತ್ಯಂತ ಕನಿಷ್ಠ ಮನಸ್ಥಿತಿಯ ವಿಚಾರ ಎನ್ನುವುದಂತೂ ಸ್ಪಷ್ಟ.
ಈ ಪುಸ್ತಕದಲ್ಲಿ ಪದೇ ಪದೇ ವೇದ, ಉಪನಿಷತ್ತು ಮತ್ತು ಪುರಾಣಗಳಂಥ ವೈದಿಕ ಶಬ್ದ ಪುಂಜಗಳನ್ನು ಬಳಸಿರುವುದನ್ನು ನೋಡಿದರೆ ನೊಣವೊಂದು ಸಿಂಬಳವನ್ನು ಹುಡುಕಿಕೊಂಡು ಹೋದಂಥ ಭಾವನೆ ಎಲ್ಲರಿಗೂ ಮೂಡುವುದಂತೂ ಖಂಡಿತ. ಕರ್ಮ ಸಿದ್ಧಾಂತವನ್ನೇ ಅಲ್ಲಗಳೆದಿರುವ ಬಸವಾದಿ ಶರಣರ ವಚನಗಳ ವಿಶ್ಲೇಷಣೆಯಲ್ಲಿ ಕರ್ಮ ಸಿದ್ಧಾಂತವನ್ನು ತುರುಕಿರುವುದು ಅಪಮಾನಕರ ಸಂಗತಿ.
ಇನ್ನು ಈ ಸಂಪಾದಕೀಯದ 5 ನೇ ಪ್ಯಾರಾದಲ್ಲಿ ವಿಜಯನಗರ ಕಾಲಘಟ್ಟದ ವಚನ ಸಂಕಲನವನ್ನು ಉಲ್ಲೇಖ ಮಾಡಿದ್ದಾರೆ. ಪ್ರೌಢದೇವರಾಯನ ಕಾಲಘಟ್ಟದಲ್ಲಿಯೇ ಈ ವೈದಿಕ ಪರಂಪರೆಯ ಸಂಸ್ಕೃತ ತುಣುಕುಗಳನ್ನು ಅತ್ಯಂತ ಜಾಣತನದಿಂದ ತುರುಕಿದ್ದು ಗೆದ್ದಲು ಹುಳುಗಳು ಕಟ್ಟಿದ್ದ ಹುತ್ತದಲ್ಲಿ ವಿಷಸರ್ಪ ಬಂದು ಅಕ್ರಮಿಸಿಕೊಂಡಂತಾಗಿದೆ. ಈ ಕುರಿತು ವಚನ ಸಾಹಿತ್ಯದ ವಿದ್ವಾಂಸರಾದ ಡಾ. ವೀರಣ್ಣ ರಾಜೂರ ಅವರ youtube link ಇಲ್ಲಿ ಲಗತ್ತಿಸಲಾಗಿದೆ. ಎಲ್ಲರೂ ಕೇಳಬಹುದು ಮತ್ತು ನೋಡಬಹುದು.
ಸ್ಥಾವರಗೊಂಡಂಥ ವ್ಯವಸ್ಥೆಯನ್ನು ಜಂಗಮಗೊಳಿಸಿದ ಬಸವಾದಿ ಶರಣರ ಸಾಮಾಜಿಕ ಪರಿಕಲ್ಪನೆಯನ್ನೇ ಬುಡಮೇಲು ಮಾಡಿ ಮತ್ತೇ ಸ್ಥಾವರಗೊಳಿಸುವದು ಈ ಪುಸ್ತಕದ ಮೂಲ ಉದ್ದೇಶ ಎನ್ನುವುದಂತೂ ಸ್ಫಟಿಕದಷ್ಟೇ Crystal Clear.
6 ನೇ ಪ್ಯಾರಾದಲ್ಲಿ ಬರೀತಾರೆ “ಆದರೆ ಇತ್ತೀಚಿನ ದಿನಗಳಲ್ಲಿ ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿರುವುದು ಚಿಂತಾಜನಕ ಸಂಗತಿ” ಬಸವಾ ಬಸವಾ ಜನಿವಾರಧಾರಿಗಳಾದ ವೈದಿಕರಿಗೆ ಮತ್ತು ಆರಾಧ್ಯ ಶೈವ ಬ್ರಾಹ್ಮಣರಿಗೆ ಕಳೆದ ಎರಡು ನೂರು ವರ್ಷಗಳಲ್ಲಿ ವಚನಗಳ ಬಗ್ಗೆ ಇಲ್ಲದ ಪ್ರೀತ ಹಾಗೂ ಚಿಂತೆ All of a sudden ಆಗಿ ಇದ್ದಕ್ಕಿದ್ದ ಹಾಗೆ ಜ್ಞಾನೋದಯವಾಗಿ ಈಗೇಕೆ ನಿಮಗೆ ಬಂತರೀಪಾ. ಯಪ್ಪಾ ಹೋಗಲಿ 1950 ರಿಂದ 90 ರ ದಶಕದಲ್ಲಿ ಹುಟ್ಟಿದ ನೀವು ಕೇವಲ ಒಂದು ವರ್ಷದಲ್ಲಿ ಇಷ್ಟೊಂದು ಚಿಂತೆ ಯಾಕ ಹಚಗೋಳಾಕತ್ತೀರಿ. ಹುಟ್ಟಿದಾಗಿಂದ ಯಾಕ ಮಾಡಲಿಲ್ಲಾ. ಇಂಥ ಅಪರಿಮಿತ ಮತ್ತು ಅಸಾದೃಶ್ಯ ಕೆಲಸ ಮಾಡೋದಕ್ಕೆ ನಿಮಗ ಕುಮ್ಮಕ್ಕು ಹಾಗೂ ಧನ ಸಹಾಯ ನೀಡತಾ ಇರೋದು ಯಾರು ಅನ್ನೋದನ್ನು ಸ್ಪಷ್ಟಪಡಿಸರಿ ಮಹನೀಯರೇ. ಒಂದು ಸರತಿ ಬಿಡುಗಡೆಯಾದ ಪುಸ್ತಕವನ್ನು ಕರ್ನಾಟಕದ 9 ಕಡೆ ಮತ್ತು ದೆಹಲಿ ಮತ್ತಿತರ ಹೊರ ರಾಜ್ಯಗಳಲ್ಲಿ ಪದೇ ಪದೇ ಬಿಡುಗಡೆಯಂಥ ಅಧ್ವಾನವನ್ನು ಮಾಡೋದಕ್ಕೆ ರೊಕ್ಕಾ ನಿಮಗ ಯಾರು ಕೊಡಾಕತ್ತಾರ ಹೇಳರಿಪಾ. ನಿಮ್ಮ ಬೆನ್ನ ಹಿಂದೆ ಇರೋ ಆ ತಾಕತ್ತು ಯಾವುದು ತಿಳಿಸಿ. ಮುಂದುವರೆದು “ಕೆಲವರು ವಚನಗಳ ತಿರುಳನ್ನು ತಮಗೆ ಬೇಕಾದಂತೆ ತಿರುಚಿ ವ್ಯಾಖ್ಯಾನಿಸುತ್ತಿರುವುದು ಅನಾರೋಗ್ಯಕರ” ಅಂತಾ ಬರೀತೀರಿ. ಯಾರು ಅವರು ತಿರುಚಿದವರು? ಅವರ ಹೆಸರು ಹೇಳಿ. ಹೀಗೆ ಗಾಳಿಯಲ್ಲಿ ಗುಂಡು ಹೊಡೆದರೆ ನಿಮ್ಮ ಯೋಗ್ಯತೆಯ ಬಗ್ಗೆ ಅನುಮಾನ ಮತ್ತು ಪ್ರಶ್ನೆ ಬರುತ್ತದೆ ಎನ್ನುವುದು ವಿಶ್ವವಿದ್ಯಾಲಯಗಳಂಥ Academic ಸಂಸ್ಥೆಗಳಲ್ಲಿ ಹರಿದಾಡುತ್ತಿರುವ ಸುದ್ದಿ. ನಿಜವಾಗಿಯೂ ವಚನಗಳನ್ನು ಈ ಪುಸ್ತಕದಲ್ಲಿ ವೈದಿಕೀಕರಣ ಮತ್ತು ವೈಷ್ಣವೀಕರಣವನ್ನು ತುರುಕುದರ ಮೂಲಕ ತಿರುಚುವ ಕೆಲಸವನ್ನು ಮಾಡುತ್ತಿರುವವರು ನೀವು. ಒಮ್ಮೆ ನಿಮ್ಮ ಅಂತರಂಗವನ್ನು ನೋಡಿಕೊಳ್ಳಿ. ಮುಖಪುಟದ ವಿನ್ಯಾಸವನ್ನು ನೋಡಿದರೇನೆ ನಿಮ್ಮಗಳ ಅಂತರಾತ್ಮ ಯಾವ ಕಡೆ ಇದೆ ಅನ್ನೋದು ಜಗತ್ತಿಗೆ ತಿಳಿದಿದೆ. ಇಲ್ಲ ಸಲ್ಲದ ಆರೋಪಗಳನ್ನು ಮಾಡುವುದರ ಮೂಲಕ ನಿಮ್ಮ ವೈಚಾರಿಕ ದಿವಾಳಿತನವನ್ನು ಜಗತ್ತಿಗೆ ಪ್ರದರ್ಶನ ಮಾಡುತ್ತಿದ್ದೀರಿ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಇನ್ನು 8 ನೇ ಪ್ಯಾರಾದಲ್ಲಿ “ಶಿವಶರಣರು ಋಷಿಮುನಿಗಳಂತೆ ತಪಸ್ವಿಗಳು ಮತ್ತು ಅನುಭಾವಿಗಳು” ಅಂತ ಬರೀತೀರಿ. Non-sense ನಿಮಗೆ ಏನಾದರೂ ಒಂದೇ ಒಂದು ಇಂಚು ಮಾನಾ ಮರ್ಯಾದೆ ಇದೆಯಾ. ತಪಸ್ವಿಗಳು ಅಂತ ಬರೀತೀರಿ. ಯಾವ ಕಾಲಘಟ್ಟವನ್ನು ಅಭ್ಯಾಸ ಮಾಡಿದ್ದೀರಿ ಸಂಪಾದಕರುಗಳೆ ನೀವೆಲ್ಲಾ? ಬಸವಾದಿ ಶರಣರೆಲ್ಲರೂ ಕಾಯಕ ಜೀವಿಗಳು. ನಿಮ್ಮಂತೆ ಷೋಢಶೋಪಚಾರ ಮತ್ತು ಷೋಢಶ ದಾನಗಳಿಂದ ಹೊಟ್ಟೆ ಹೊರೆದವರಲ್ಲ. ದುಡಿದೇ ಗಳಿಸಿ ತಿನ್ನುವ ಶ್ರಮಜೀವಿಗಳು ಅವರು. ಕಾಯಕ ಮಾಡುವುದರಲ್ಲೇ ಅವರ ದಿನಚರಿ ಮುಗಿದು ಹೋಗುತ್ತೆ. ಇನ್ನು ತಪಸ್ಸು ಮಾಡೋದಕ್ಕೆ ಟೈಮೆಲ್ಲಿ ಇತ್ತು. ನಿಮ್ಮಂತೆ ಹೊಟ್ಟೆ ಮೇಲೆ ಕೈವಾರಿಸಿಕೊಂಡು ಪುಗಸಟ್ಟೆ ತಿಂದವರಲ್ಲಾ. ಪುಗಸಟ್ಟೆ ತಿಂದದ್ದು ನಿಮಗೆ ಹೇಗೆ ಜೀರ್ಣವಾಗುತ್ತದೆ ಅನ್ನೋದೇ ಪ್ರಪಂಚದ ಅದ್ಭುತಗಳಲ್ಲೊಂದು. How dare you people to say ಶಿವಶರಣರು ತಪಸ್ವಿಗಳೆಂದು ಹೇಳಲು. ಆಯ್ದಕ್ಕಿ ಮಾರಯ್ಯನವರ ಈ ವಚನವನ್ನು ಅರ್ಥ ಮಾಡಿಕೊಂಡಿದ್ದರೆ ಈ ಸಂಪಾದಕೀಯದಲ್ಲಿ ಇಂಥ ಶಬ್ದಗಳನ್ನು ಬಳಸುತ್ತಿರಲಿಲ್ಲ.
ಕಾಯಕದಲ್ಲಿ ನಿರತನಾದಡೆ,
ಗುರುದರ್ಶನವಾದಡೂ ಮರೆಯಬೇಕು,
ಲಿಂಗಪೂಜೆಯಾದಡೂ ಮರೆಯಬೇಕು,
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು.
ಕಾಯಕವೆ ಕೈಲಾಸವಾದ ಕಾರಣ.
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-436 / ವಚನ ಸಂಖ್ಯೆ-1165)
ಕಾಯಕದ ಮೂಲಕ ಬದುಕು ಕಟ್ಟಿಕೊಂಡವರನ್ನು ತಪಸ್ವಿಗಳು ಅನ್ನೋದರ ಮೂಲಕ ನಿಮ್ಮ ಶೋಷಣೆ ಮಾಡುವ ವೈದಿಕತೆ ಮತ್ತು ವೈಷ್ಣವೀಕತೆಯನ್ನು ಬಸವಾದಿ ಶರಣರ ತಲೆಗೆ ಕಟ್ಟಿ ಮೋಜು ನೋಡುವ ನಿಮ್ಮ ತರಲೆ ಬುದ್ಧಿಯನ್ನು Sharp ಮಾಡಿಕೊಳ್ಳಿ ಮೊದಲು.
11 ನೇ ಪ್ಯಾರಾದಲ್ಲಿ “ವಚನ ಸಾಹಿತ್ಯದ ಭಕ್ತಿ, ಕಾಯಕ ಮತ್ತು ಅನುಭಾವಗಳೆಂಬ ಮೂರು ವಿಶಿಷ್ಟ ಪರಿಕಲ್ಪನೆಗಳು ಲಿಂಗಾಂಗ ಸಾಮರಸ್ಯಕ್ಕೆ ಮಾರ್ಗಗಳಾಗಿವೆ” ಅಂತ ಬರೀತೀರಿ. ಲಿಂಗಾಂಗ ಸಾಮರಸ್ಯದ ಕಲ್ಪನೆಯೇ ನಿಮಗಿಲ್ಲಾ ಎನ್ನುವುದು ನಿಮ್ಮ ಸಂಪಾದಕೀಯದ ಈ ಸಾಲಿನಿಂದ ತಿಳಿದು ಬರುತ್ತದೆ. ಈ ಸಾಲಿನಲ್ಲಿ ದಾಸೋಹ ಎನ್ನುವ ಪದವೇ Miss ಆಗಿದೆ. ಯಾಕಂದರೆ ಶರಣರ ಬದುಕಿನ ಪರಿಭಾಷೆಯೇ ನಿಮಗೆ ಅರ್ಥ ಆಗಿಲ್ಲಾ ಅಂದ ಮೇಲೆ ನಿಮಗೆ ಶರಣರ ಬದುಕಿನ ಸೂಕ್ಷ್ಮತೆಗಳು ಹೇಗೆ ತಿಳಿಯುತ್ತವೆ ಅನ್ನೋದು ವಚನ ಸಾಹಿತ್ಯವನ್ನು ಬಲ್ಲಂಥವರು ಕೊಡುವ ಸಮಝಾಯಿಸಿ. ಮೊದಲು ವಚನ ಸಾಹಿತ್ಯ, ಶರಣ ಸಿದ್ಧಾಂತ ಮತ್ತು ಬಸವ ತತ್ವಗಳನ್ನು ಇಂಚಿಂಚಾಗಿ ಅಧ್ಯಯನ ಮಾಡಿ ಈ ಪುಸ್ತಕ ಬರೆದಿದ್ದರೆ ಚಂದ ಇರತಿತ್ತು. ಅದು ಬಿಟ್ಟು ಬಸವಣ್ಣನವರನ್ನ ರಾಮನ ಅವತಾರ ಮಾಡತಾ ಇದೀರಿ. ಇದು ಅಕ್ಷಮ್ಯ ಅಪರಾಧ ಮತ್ತು ಬಸವಣ್ಣನವರಿಗೆ ಮಾಡಿದ ದ್ರೋಹ.
13 ನೇ ಪ್ಯಾರಾದ ಕೊನೆಯಲ್ಲಿ “ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳು ಭಕ್ತಿಯ ವಿವಿಧ ರೀತಿಯ ಸಂಹಿತೆಗಳಾಗಿವೆ. ವಿಶೇಷವಾಗಿ ಆಗಮ, ಭಾಗವತ, ಪುರಾಣಗಳು ಭಕ್ತಿಪಂಥಗಳ ಉಗಮ ಸ್ಥಾನವಾಗಿದೆ. ಅದೇ ರೀತಿ ವಚನಸಾಹಿತ್ಯವು ಶಿವಶರಣರ ಭಕ್ತಿಯ ಅಭಿವ್ಯಕ್ತ ರೂಪವಾಗಿವೆ” ಅಂತಾ ಬರೆದು ನಿಮ್ಮ ಮಾನವನ್ನು ನೀವೇ ಹಾರಾಜು ಹಾಕಿಕೊಂಡಿದ್ದೀರಿ. ಎನ ತಿಳಕೊಂಡೀರಿ ನೀವುಗಳೆಲ್ಲಾ? ವಚನ ಸಾಹಿತ್ಯ ರಾಮಾಯಣ, ಮಹಾಭಾರತ, ಆಗಮ, ಭಾಗವತ, ಪುರಾಣಗಳ ಅಭಿವ್ಯಕ್ತವೇ? Bloody non-sense. The thought process of yours itself is wrong. What do you think of Vachana Literature? ಚಾಮರಸನ ಪ್ರಭುಲಿಂಗಲೀಲೆಯನ್ನು ಓದಿದ್ದರೆ ಈ ಥರಾ ಬಸವಾದಿ ಶರಣರನ್ನು ಸಂಸ್ಕೃತ ಭೂಯಿಷ್ಠ ಪುರಾಣ ಪುಣ್ಯಕಥೆಗಳಿಗೆ ಹೋಲಿಸತಾ ಇರಲಿಲ್ಲ.
ನಡುಗನ್ನಡ ಕಾವ್ಯ ಪರಂಪರೆಯ ಅತ್ಯಂತ ಪ್ರಮುಖ ಕವಿ ಚಾಮರಸ. ಅವನು ಹನ್ನೆರಡನೆಯ ಶತಮಾನದ ಅನುಭಾವಿ ಶ್ರೇಷ್ಠ ವಚನಕಾರರಾದ ಅಲ್ಲಮಪ್ರಭುಗಳ ಜೀವನ ಮತ್ತು ಸಾಧನೆಗಳನ್ನು ಕೇಂದ್ರವಾಗಿಟ್ಟುಕೊಂಡು “ಪ್ರಭುಲಿಂಗಲೀಲೆ” ಯೆಂಬ ಮಹಾಕಾವ್ಯವನ್ನು ರಚಿಸಿದ್ದಾನೆ. ಚಾಮರಸನಿಗೆ ತಾನು ವರ್ಣರಂಜಿತ, ರಕ್ತರಂಜಿತ ಯುದ್ಧಗಳ ಕುರಿತಂತೆ ಮತ್ತು ತನು-ಮನ-ಧನಗಳ ದುರಾಸೆಯಿಂದ ಕೊರಗುತ್ತಾ ಜನನ-ಮರಣಗಳ ಜಂಜಾಟದಲ್ಲಿ ಸಿಲುಕಿದ ಬದುಕಿನ ಬಗ್ಗೆ ಕಾವ್ಯ ರಚನೆ ಮಾಡಿಲ್ಲಾ ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಂಡಂಥವನು.
ಆತನ ಪ್ರಭುಲಿಂಗಲೀಲೆಯಲ್ಲಿ ಉಲ್ಲೇಖವಾದಂಥ ಸಾಲುಗಳು ನಿಮ್ಮ ಮುಖಕ್ಕೆ ಹೊಡೆದಂತಿದೆ.
ಸತ್ತವರ ಕಥೆಯಲ್ಲ ಜನನದ |
ಕುತ್ತದಲಿ ಕುದಿಕುದಿದು ಕರ್ಮದ |
ಕತ್ತಲೆಗೆ ಸಿಲುಕುವರ ಸೀಮೆಯ ಹೊಲಬು ತಾನಲ್ಲ ||
ಹೊತ್ತು ಹೋಗದ ಪುಂಡರಾಲಿಪ |
ಮತ್ತಮತಿಗಳ ಗೋಷ್ಠಿಯಲ್ಲಿದು |
ಸತ್ಯಶರಣರು ತಿಳಿವುದೀ ಪ್ರಭುಲಿಂಗಲೀಲೆಯನು || 13 ||
(ಪ್ರಭುಲಿಂಗಲೀಲೆ-ಡಾ. ಬಿ. ವ್ಹಿ. ಮಲ್ಲಾಪೂರ / 2011 / ಕನ್ನಡ ಮತ್ತು ಸಂಸ್ಕೃತಿ ಇಲಾಖೆ / ಪುಟ ಸಂಖ್ಯೆ-5 / ವಚನ ಸಂಖ್ಯೆ-13)
ಬೇಕಿತ್ತಾ ನಿಮಗೆ ಈ ಥರಾ ಮುಖಕ್ಕೆ ಮಸಿ ಬಳಿಸಿಕೊಳ್ಳೋದು?

ಕೊನೆಯ ಪ್ಯಾರಾದಲ್ಲಿ ತುಮಕೂರಿನ ಸಿದ್ಧಗಂಗಾ ಶ್ರೀಮಠದ ಪರಮ ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಆಶೀರ್ವಾದದ ನುಡಿಗಳನ್ನು “ಶುಭಾಂಶಸನೆ” ಅಂತಾ ಸಂಸ್ಕೃತದಲ್ಲಿ ಬರೆದು ಅವರ ಹೆಸರನ್ನೂ ಕೆಡಿಸುವ ಕೆಲಸವನ್ನು ಮಾಡಬಾರದಿತ್ತು ನೀವು. ಅವರೇ ಹೇಳಿಕೆ ಕೊಟ್ಟು “ಬಹಳಷ್ಟು ಜನ ಇದ್ದಾಗ ಯಾರೋ ಬರೆದ ಲೇಖನಕ್ಕೆ ಸಹಿ ಮಾಡಿಸಿಕೊಂಡಿದ್ದಾರೆ” ಎಂದು ಹೇಳಿಕೆ ಬಿಡುಗಡೆ ಮಾಡುವ ಹಾಗೆ ಮಾಡಿದ್ದೀರಿ. ಇಂಥ ಅಪಸವ್ಯಗಳನ್ನು ಪುಸ್ತಕದಲ್ಲಿ ಸೇರಿಸಿ ಯಾವ ಮುಖ ಇಟ್ಟುಕೊಂಡು ಸಮಾಜದಲ್ಲಿ ಓಡಾಡತಾ ಇದೀರಿ ಅನ್ನೋದೆ ಪರಮಾಶ್ಚರ್ಯ. ಹೋಗಲಿ ಸಿದ್ಧಗಂಗೆಯ ಅನ್ನ ಉಪ್ಪನ್ನು ತಿಂದು ಬೆಳೆದು Academic ವಲಯದಲ್ಲಿ ಅತ್ಯಂತ ಸಂಪದ್ಭರಿತ ಸ್ಥಾನಗಳಲ್ಲಿ ವಿರಾಜಮಾನನಾಗಿದ್ದ ಮಲ್ಲೇಪುರಂ ಜಿ ವೆಂಕಟೇಶನಿಗಾದರೂ ಬುದ್ಧಿ ಬೇಡವೇ? ಒಮ್ಮೆಯಾದರೂ ಸ್ವಾಮೀಜಿಯವರನ್ನು ನಡೆಸಿಕೊಂಡ ರೀತಿಯ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾನೆಯೇ? No Chance, He will never open up his mouth.
ಹೋಗಲಿ ಸಿದ್ಧಗಂಗೆಯ ಕೃಪಾಕಟಾಕ್ಷದಿಂದ ತುಮಕೂರು ಲೋಕಸಭಾ ಕ್ಷೇತ್ರದ ಸಂಸದನಾಗಿ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿರುವ ಕೋತಿಯಂತೆ ಎಲ್ಲ ಪಕ್ಷಗಳಿಗೂ ಜಿಗಿದಾಡಿದ ಸೋಮಣ್ಣನ ತಲೆಯಲ್ಲಿ ಏನಿದೆ ಅಂತ ವಚನ ದರ್ಶನ ಪುಸ್ತಕವನ್ನು ದೆಹಲಿಯಲ್ಲಿ ಬಿಡುಗಡೆ ಮಾಡತಾ ಇದಾನೆ ಅನ್ನೋದು ತುಮಕೂರಿನ ಜನರ ಪ್ರಶ್ನೆ. ಸೋಮಣ್ಣ ಲಿಂಗಾಯತನಾಗಿ ಪರಮ ಪೂಜ್ಯ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪರಮ ಭಕ್ತನಾಗಿ ನಿನಗೆ ಕಿಂಚಿತ್ತಾದರೂ ಮಾನ ಮರ್ಯಾದೆ ಇದ್ದರೆ ಈ ಬಸವ ದ್ರೋಹದ ಕಾರ್ಯಕ್ರಮಕ್ಕೆ ಹೋಗಬಾರದು ಅಂತಾ ವಿನಂತಿಸಿಕೊಳ್ಳುತ್ತಿದ್ದಾರೆ. ಇದನ್ನು ಸೋಮಣ್ಣ ಅತ್ಯಂತ ಜಾವಾಬ್ದಾರಿಯಿಂದ ನಿಭಾಯಿಸಬೇಕಾಗುತ್ತದೆ. ಈ ಪುಸ್ತಕವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಈ ಪುಸ್ತಕದ ಎಲ್ಲ ರೂವಾರಿಗಳನ್ನೂ ಬಂಧಿಸಬೇಕೆಂದು ಈ ಮೂಲಕ ಒತ್ತಾಯ ಮಾಡುತ್ತೇನೆ.
ಕೊನೇಗೆ ಸಂಘಿಗಳು, ವೈದಿಕರು ಮತ್ತು ಆಂಧ್ರದಿಂದ ವಲಸೆ ಬಂದ ಆರಾಧ್ಯ ಶೈವ ಬ್ರಾಹಣರು ತಮ್ಮ ರಾಜಕೀಯ ಪ್ರಭಾವ, ತೋಳ್ಬಲ ಮತ್ತು ಧನಬಲವನ್ನು ತೋರಿಸಿ ಈ ಲೇಖನ ಬರೆದ ನನ್ನನ್ನು ಬಂಧಿಸಿದರೂ ಕೂಡ ಆಶ್ಚರ್ಯವೇನಿಲ್ಲಾ. ನೋಡೋಣ ಮುಂದಿನ ಕಂತುಗಳಲ್ಲಿ ಒಬ್ಬೊಬ್ಬರದಾಗಿ ಎಲ್ಲಾ 20 ಲೇಖನಗಳನ್ನು ವಿಮರ್ಶೆ ಮಾಡೋಣ. ಯಾವುದಕ್ಕೂ ಎಲ್ಲಾ 20 ಲೇಖಕರೂ ತಮ್ಮ ತಮ್ಮ Political Power, Money Power and Muscle Power ಗಳೆಂಬ ಕತ್ತಿ ಗುರಾಣಿಗಳನ್ನು Sharp ಮಾಡಿಕೊಂಡು ಕಾಯತಾ ಇರಿ. ಶೀಘ್ರದಲ್ಲೇ ಭೇಟಿಯಾಗೋಣ. Byee for now.
ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ,
“ಸವಿಚರಣ” ಸುಮತಿ ಇಂಗ್ಲೀಷ್ ಶಾಲೆಯ ಹತ್ತಿರ,
ಸುಭಾಷ್ ನಗರ, ಕ್ಯಾತ್ಸಂದ್ರ,
ತುಮಕೂರು – 572 104
ಮೋಬೈಲ್. ನಂ : +91 9741 357 132.
ಈ-ಮೇಲ್ : vijikammar@gmail.com