ರವಿ ಹಂಜ್‌ ಎನ್ನುವ ಪಡಪೋಶಿಯ “ಬಸವರಾಜಕಾರಣ” ಎನ್ನುವ ಅಪಸವ್ಯ. ಭಾಗ-01: ಮುನ್ನುಡಿ

ನಾನು ಕಾಶ್ಮೀರದ ಸನ್ಯಾಸಿನಿ ಲಲ್ಲೇಶ್ವರಿಯವರ ಕುರಿತು ಅಧ್ಯಯನ ಮಾಡುವಾಗ ಕಾಶ್ಮೀರದ ಆಗಮಿಕ ಶೈವರ ಕುರಿತು ಕೆಲವು ಮಾಹಿತಿಗಳು ಲಭಿಸಿದವು. ಅವರಲ್ಲಿ ಕೆಲವು ಆಗಮಿಕ ಶೈವರೆಂಬ ಬ್ರಾಹ್ಮಣರು ಮಧ್ಯಪ್ರದೇಶದ ಮೂಲಕ ಮೊದಲು ತಮಿಳುನಾಡಿಗೆ ವಲಸೆ ಬರುತ್ತಾರೆ. ತಮಿಳುನಾಡಿನ ಅರವತ್ತಮೂರು ಪುರಾತನರನ್ನು (ಅಂದರೆ ತ್ರಿಷಷ್ಟಿ ಪುರಾತನರನ್ನು) ಸ್ಥಳೀಯ ಶೈವ ಪಂಥವನ್ನು ಶುದ್ಧ ಶೈವಪಂಥವನ್ನಾಗಿ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ ಅಂದರೆ ಸಾರಾ ಸಗಟಾಗಿ ಆಪೋಷಣೆ ಮಾಡುತ್ತಾರೆ. ಅಲ್ಲಿನ ರಾಜರ ಆಡಳಿತದ ಚುಕ್ಕಾಣಿ ಬೇರೆಯವರ ಕೈ ವಶವಾದ ನಂತರ ಹೆದರಿಕೊಂಡು ಅಲ್ಲಿಂದ ಆಂಧ್ರಪ್ರದೇಶಕ್ಕೆ ಪಲಾಯನ ಮಾಡುತ್ತಾರೆ. ಆಂಧ್ರದಲ್ಲಿ “ಆರಾಧ್ಯ” ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಾರೆ. ಶತಾಯ ಗತಾಯ ವಾರಂಗಲ್ಲಿನ ಕಾಕತೀಯ ರಾಜರನ್ನು ಓಲೈಸಿ ಶೀಶೈಲ ಮಲ್ಲಿಕಾರ್ಜುನ ದೇವಾಲಯದಲ್ಲಿನ ಅರ್ಚಕರನ್ನು ಮೋಸದಿಂದ ಎತ್ತಂಗಡಿ ಮಾಡಿಸಿ ಶುದ್ಧಶೈವ ದೇವಾಲಯವನ್ನಾಗಿ Convert ಮಾಡತಾರೆ.

ಕಾಕತೀಯ ಅರಸರ ಆಡಳಿತವು ಕೊನೆಗೊಂಡಾಗ ಮತ್ತೆ ಬೆದರಿದ ಜಿಂಕೆಯಾದಂಥ ಈ ಆರಾಧ್ಯ ಶೈವ ಬ್ರಾಹ್ಮಣರು ಆಂಧ್ರದಿಂದ ಕರ್ನಾಟಕದ ಕಡೆ ತಮ್ಮ ಪಯಣವನ್ನು ಬೆಳೆಸುತ್ತಾರೆ. ತಮ್ಮ ಜುಟ್ಟು ಜನಿವಾರ ಝೋಪಡಿಯನ್ನು ಕಟ್ಟಿಕೊಂಡು ಕರ್ನಾಟಕಕ್ಕೆ ವಲಸೆ ಬಂದ ಇವರು ವಿಜಯನಗರದ ಅರಸರನ್ನು ಆಶ್ರಯಿಸಿ ಮತ್ತೊಂದು ಆಟವನ್ನು ಶುರು ಹಚ್ಚಿಕೊಳ್ಳುತ್ತಾರೆ. ಬಸವಧರ್ಮವನ್ನು ಶುದ್ಧಶೈವ ಸ್ವರೂಪದಲ್ಲಿ ವಿಕಾಸವಾಗಿದೆ ಎನ್ನುವ ಕಟ್ಟು ಕಥೆಯನ್ನು ಕಟ್ಟಿ ವೀರಶೈವೀಕರಣ ಮಾಡುವಲ್ಲಿ ತಮ್ಮೆಲ್ಲ ಶ್ರಮವನ್ನೂ ಅರ್ಪಿಸುತ್ತಾರೆ. ಲಿಂಗಾಯತರನ್ನು ದಾರಿ ತಪ್ಪಿಸಿ ವಿಜಯನಗರ ಕಾಲಘಟ್ಟದಲ್ಲಿ ವಚನ ಸಾಹಿತ್ಯದ ಪುನರುಜ್ಜಿವನ ಯುಗವೆಂದು ಬಿಂಬಿಸಲು ಪ್ರಾರಂಭ ಮಾಡುತ್ತಾರೆ. ಹಾಗಾಗಿ ವಿಜಯನಗರ ಅರಸರ ಕಾಲಘಟ್ಟವು ಲಿಂಗಾಯತವನ್ನು ವೀರಶೈವೀಕರಣ ಮಾಡುವ ಕಾಲಘಟ್ಟ. ಇಲ್ಲಿಂದ ಲಿಂಗಾಯತರನ್ನು ದಿಕ್ಕು ತಪ್ಪಿಸುವ ಪ್ರಹಸನ ಶುರುವಾಗುತ್ತದೆ.

ಮುಂದೆ ವಿಜಯನಗರದ ಮೇಲೆ ಮುಘಲ್‌ ಸುಲ್ತಾನರ ದಾಳಿಯಾದಾಗ ಹೆದರಿ ಮತ್ತೆ ಅಲ್ಲಿಂದ ಪಲಾಯನ ಮಾಡುತ್ತಾರೆ. ಹೀಗೆ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡುತ್ತಾ ಎಡತಾಕುತ್ತಾ ಇವರು ಬಂದು ನಿಂತದ್ದು ಶಿವಗಂಗೆ ಪ್ರದೇಶದ ಮಾಗಡಿ ತಾಲೂಕಿನ ಕಲ್ಯಾ ಗ್ರಾಮದಲ್ಲಿ. ಹನ್ನೆರಡನೆಯ ಶತಮಾನದ ಕೊನೆಯ ಭಾಗದಲ್ಲಿ ಬೆಂಗಳೂರು ಜಿಲ್ಲೆಯ ಮಾಗಡಿ ತಾಲ್ಲೂಕು ಕಲ್ಯಾ ಗ್ರಾಮದ ಬೆಟ್ಟದಲ್ಲಿ ವಾಸವಾಗಿದ್ದರು ಎನ್ನಲಾದ ಒಬ್ಬ ಶಿವಶರಣೆ ವೀರಶೈವಧರ್ಮದಲ್ಲಿ ಉಕ್ತವಾಗಿರುವ 63 ಶೀಲಗಳನ್ನು ಚಾಚೂ ತಪ್ಪದಂತೆ ಆಚರಿಸಿದುದರಿಂದ ಸರ್ವಶೀಲೆಯಾದಳು. ಕವಿ ಪಾಲ್ಕುರಿಕೆ ಸೋಮನಾಥ ಆಂಧ್ರದಿಂದ ಇಲ್ಲಿಗೆ ಬಂದು ಈಕೆಯ ಆಶೀರ್ವಾದಕ್ಕೆ ಪಾತ್ರನಾಗಿ ಈಕೆಯಿಂದ ಅನುಭವ ಬೋಧಿಕೆಯನ್ನು ಪಡೆದು ಕಲ್ಯಾದಲ್ಲಿಯೇ ಐಕ್ಯನಾದನೆಂದು ಪಾಲ್ಕುರಿಕೆ ಸೋಮೇಶ್ವರ ಪುರಾಣದಿಂದ ತಿಳಿದುಬರುತ್ತದೆ. ಈಕೆಯ ಸಮಾಧಿ ಮಾಗಡಿ ತಾಲ್ಲೂಕು ಗುಡೇಮಾರನಹಳ್ಳಿ ಹತ್ತಿರ ಎರಡು ಹಳ್ಳಗಳು ಕೂಡುವ ಸಂಗಮ ಸ್ಥಳದಲ್ಲಿದೆ. ಅದನ್ನು ಚನ್ನಮ್ಮನ ಮಂಟಪ ಎಂದು ಹೇಳುತ್ತಾರೆ. ಇಲ್ಲಿಯೇ ಪಾಲ್ಕುರಿಕೆ ಸೋಮೇಶ್ವರನು ಐಕ್ಯನಾದ ನಂತರ ಆತನ ಮಗನಾದ ಚತುರ್ಮುಖ ಬೊಮ್ಮರಸನಿಗೆ ಆಂಧ್ರದಲ್ಲಿ ಹೆಸರಾಗಿದ್ದಂತೆ “ಜಗದಾಚಾರ್ಯ” ಪಟ್ಟಕ್ಕೆ ಕೂರಿಸಲಾಯಿತು. ಇದರ ಪರಿಣಾಮವಾಗಿ ಆಂಧ್ರದಿಂದ ವಲಸೆ ಬಂದ ಶೈವರು ಕಲ್ಯಾ ಪ್ರದೇಶದ ಶುದ್ಧಶೈವರೊಡನೆ ಕೂಡಿಕೊಂಡು ಶಿವಗಂಗೆ ಬೆಟ್ಟದಲ್ಲಿ ಚತುರಾಚಾರ್ಯ ಪೀಠವನ್ನು ಸ್ಥಾಪಿಸಿದರು.

ಮೂಲತಃ ಶಿವಗಂಗೆಯು ನಾಥಕೇಂದ್ರ. ಅಲ್ಲಿರುವ ಗಂಗಾಧರೇಶ್ವರನು ಶಾಸನಗಳಲ್ಲಿ ಗಂಗನಾಥನೆಂದು ದಾಖಲಾಗಿದೆ. ಇವರು ನಾಲ್ಕು ಪೀಠಗಳನ್ನು ಸ್ಥಾಪಿಸಲು ಕಾರಣ, ಬಸವ ಚಳುವಳಿಯಿಂದಾಗಿ ಕಳೆದು ಕಂಗಾಲಾಗಿ ಹೋಗಿದ್ದ:

  1. ನಕುಲೀಶ (ಕಾಳಾಮುಖ).
  2. ಪಾಶುಪತ.
  3. ಕಾಪಾಲಿಕ.
  4. ಶುದ್ಧಶೈವ.

ಎಂಬ ನಾಲ್ಕು ಪಂಥಗಳನ್ನು ಮರುಸ್ಥಾಪಿಸುವ ಕಾರಣಕ್ಕಾಗಿ. ವೀರಶೈವರ ಸಂಸ್ಕೃತ ಮಾಧ್ಯಮದ ಸಿದ್ಧಾಂತ, ವೈಭವದ ವೇಷ-ಭೂಷಣಗಳಿಗೆ ಮರುಳಾಗಿ ಕರ್ನಾಟಕದ ಲಿಂಗಾಯತರೂ ಕೂಡ ತಮ್ಮ ಕನ್ನಡ ಮಾಧ್ಯಮದ ವಚನ ಸಿದ್ಧಾಂತವನ್ನು ಮರೆತು ಆಂಧ್ರ ಮೂಲದ ಈ ಸಂಸ್ಕೃತಭೂಯಿಷ್ಠ ಆಚಾರ್ಯರನ್ನು ತಮ್ಮ ಗುರುಗಳೆನ್ನುವ ಭ್ರಮೆಯನ್ನು ಬೆಳೆಸಿಕೊಂಡರು.

ಆಂಧ್ರದಿಂದ ಕರ್ನಾಟಕಕ್ಕೆ ಬಂದ ಈ ಆರಾಧ್ಯರು ಆಗಮಿಕ ಬ್ರಾಹ್ಮಣರೇ ಆಗಿದ್ದರಿಂದ, ಇವರಿಗೆ ಜನಿವಾರ ಧಾರಣೆ ಮತ್ತು ದಿನ ನಿತ್ಯ ದೇವಾಲಯಕ್ಕೆ ಹೋಗಿ ತಮ್ಮ ಇಷ್ಟದೈವವಾದ ಸ್ಥಾವರಲಿಂಗವನ್ನು ಪೂಜಿಸುವುದು ಕಡ್ಡಾಯವಾಗಿತ್ತು. ಮನೆಯಲ್ಲಿರುವಂಥ ವೃದ್ಧರಿಗಾಗಿ ಸ್ಥಾವರಲಿಂಗದ ಪ್ರತೀಕವಾದ ಸಣ್ಣ ಲಿಂಗವನ್ನು (ಲಿಂಗಗಳನ್ನು) ಮನೆಯ ದೇವರ ಕೋಣೆಯಲ್ಲಿ ಮೇಲೆ ಇಡುತ್ತಿದ್ದರು. ದೂರದ ಊರಿಗೆ ಪ್ರವಾಸಕ್ಕೆ ಹೋಗುವಾಗ ಪೂಜಿಸುವುದಕ್ಕಾಗಿ ತಲೆ, ತೋಳು, ಕೊರಳುಗಳಿಗೆ ಕಟ್ಟಿಕೊಂಡು ಹೋಗುತ್ತಿದ್ದರು. ಪ್ರವಾಸದಿಂದ ಮರಳಿ ಬಂದಾಗ ಸ್ಥಾವರಲಿಂಗವನ್ನು ತೆಗೆದು ದೇವರ ಕೋಣೆಯಲ್ಲಿ ಮತ್ತೆ ಇಡುತ್ತಿದ್ದರು.

ಅಂದರೆ ಇವರಿಗೆ ಜನಿವಾರ ಕಡ್ಡಾಯವಾಗಿತ್ತು ಆದರೆ ಸ್ಥಾವರಲಿಂಗವನ್ನು ಪ್ರತಿನಿಧಿಸುತ್ತಿದ್ದ ಕೊರಳ ಲಿಂಗವನ್ನು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಧರಿಸುತ್ತಿದ್ದರು. In the nut shell ಜನಿವಾರ ಕಡ್ಡಾಯವಾಗಿತ್ತು ಮತ್ತು ಕೊರಳ ಲಿಂಗ ಅನಿವಾರ್ಯವಾಗಿರಲಿಲ್ಲ. ಕರ್ನಾಟಕದ ಮೂಲ ಲಿಂಗಾಯತರಿಗೆ ಕೊರಳಲ್ಲಿ ಕಡ್ಡಾಯವಾಗಿದ್ದುದನ್ನು ಗಮನಿಸಿದ ಆಂಧ್ರದಿಂದ ಓಡಿಬಂದಿದ್ದ ಈ ಆರಾಧ್ಯ ಶೈವ ಬ್ರಾಹ್ಮಣರಿಗೆ ಕರ್ನಾಟಕದ ಇಷ್ಟಲಿಂಗಧಾರಿಗಳಾದ ಲಿಂಗಾಯತರೊಂದಿಗೆ ಬದುಕು ಸಾಗಿಸುವುದು ಅನಿವಾರ್ಯವಾಗಿತ್ತು. ಕ್ರಮೇಣ ಕಡ್ಡಾಯವಾಗಿದ್ದ ತಮ್ಮ ಜನಿವಾರವನ್ನು ಕಿತ್ತು ಹಾಕಿ ಕೊರಳ ಲಿಂಗವನ್ನು ಧರಿಸತೊಡಗಿದರು. ಹೀಗೆ ತಾತ್ವಿಕವಾಗಿ ಭಿನ್ನವಾಗಿದ್ದರೂ ಕೊರಳಲ್ಲಿ ಕಟ್ಟಿಕೊಂಡ ಲಿಂಗದ ಬಹಿರಂಗದ ಹೋಲಿಕೆಯನ್ನು ಗಮನಿಸಿದಾಗ ಇಬ್ಬರೂ ಒಂದೇ ಎಂಬ ಭ್ರಮೆ ಹೆಮ್ಮರವಾಗಿ ಬೆಳೆಯಿತು. ಹೀಗೆ ಜನಿವಾರ ಕಿತ್ತೊಗೆದು ಲಿಂಗಧಾರಿಗಳಾಗುತ್ತ ಬಂದ ಆಂಧ್ರದಿಂದ ವಲಸೆ ಬಂದ ಆರಾಧ್ಯ ಶೈವ ಬ್ರಾಹ್ಮಣರು ಕರ್ನಾಟಕದ ಲಿಂಗಾಯತರನ್ನು ದಿಕ್ಕು ತಪ್ಪಿಸಿದರು.


ಕಲ್ಯಾ-ಶಿವಗಂಗೆ ಮಾರ್ಗವಾಗಿ ಕರ್ನಾಟಕಕ್ಕೆ ನುಗ್ಗಿದ್ದ ಆಂಧ್ರದ ಆರಾಧ್ಯ ಶೈವ‌ ಬ್ರಾಹ್ಮಣರು ಕ್ರಮೇಣ ಈಗಿರುವ ಹಳೇ ಮೈಸೂರು ಪ್ರಾಂತ್ಯದಲ್ಲಿ ತಮ್ಮ ಛಾಪನ್ನು ಮೂಡಿಸಿದರು. ಈ ಕ್ಷೇತ್ರಗಳಲ್ಲಿ ಧಾರ್ಮಿಕ ಗ್ರಂಥಗಳನ್ನು ಪ್ರಕಟಿಸಲು ಪ್ರಾರಂಭ ಮಾಡುತ್ತಾರೆ. ವೀರಶೈವ ಹೆಸರನ್ನು ಮತ್ತು ಚತುರಾಚಾರ್ಯರೆನ್ನುವ ಗುರು ಪರಂಪರೆಯನ್ನು ಇಡೀ ಕರ್ನಾಟಕದಾದ್ಯಂತ ಬೆಳೆಸುವಲ್ಲಿ ಸಫಲರಾಗುತ್ತಾರೆ. ಇವರ ತಂತ್ರ ಕುತಂತ್ರಗಳಿಂದ ಒಟ್ಟಾರೆಯಾಗಿ ಕರ್ನಾಟಕದ ಜನತೆ ಆಂಧ್ರದಿಂದ ಓಡಿ ಬಂದ ಆರಾಧ್ಯ ಶೈವ ಬ್ರಾಹ್ಮಣರ ಆರಾಧಕರಾದರು. ತಮ್ಮವರೇ ಆದ ಶರಣರನ್ನು, ತಮ್ಮದೇ ಆದಂಥ ಶರಣ ಸಾಹಿತ್ಯ ಹಾಗೂ ವಚನ ಸಾಹಿತ್ಯವನ್ನು ಮತ್ತು ತಮ್ಮಲ್ಲಿಯೇ ಪ್ರಾರಂಭವಾಗಿದ್ದ ಶರಣ ಸಂಸ್ಕೃತಿಯನ್ನು ತಾವೇ ಅಲಕ್ಷ್ಯ ಮಾಡುತ್ತಾ ಹಾಳುಗೆಡುವುತ್ತಾ ವಿರೋಧಿಸತೊಡಗಿದರು. ಇಂಥ ಒಂದು ಅಧ್ವಾನವನ್ನು ಅತ್ಯಂತ ಸೂಕ್ಷ್ಮತೆಯಿಂದ ಮತ್ತು ನಾಜೂಕಿನಿಂದ
execute ಮಾಡಿದ ಆಂಧ್ರದಿಂದ ವಲಸೆ ಬಂದ ಆರಾಧ್ಯ ಶೈವ ಬ್ರಾಹ್ಮಣರು ಲಿಂಗಾಯತರನ್ನು ತುಳಿದು ತಮ್ಮ ಹೊಟ್ಟೆಪಾಡಿಗಾಗಿ ಒಂದು ಹೊತ್ತಿನ ಕೂಳಿಗಾಗಿ ಸುನಿಯೋಜಿತ ಪ್ರಕ್ರಿಯೆಯನ್ನು ಬೆಳೆಸುತ್ತಾರೆ. ಈ ಮೂಲಕ ಲಿಂಗಾಯತರನ್ನು ದಿಕ್ಕು ತಪ್ಪಿಸಿದರು. ಇದು ಈಗಲೂ ಮುಂದುವರಿದಿದೆ. ಆದರೆ ಲಿಂಗಾಯತರಿಗೆ ಗೊತ್ತಾಗುತ್ತಿಲ್ಲ. ಗೊತ್ತಾದರೂ ಖರ್ಚಿಗೆ ಮತ್ತು ಖುರ್ಚಿಗೆ ಎಲ್ಲಿ ಸಂಚಕಾರ ಬರುತ್ತದೆಯೋ ಎಂದು ನವರಂಧ್ರಗಳನ್ನೂ ಮುಚ್ಚಿಕೊಂಡು ಸುಮ್ಮನಿದ್ದಾರೆ.

ಇಷ್ಟು ಸುದೀರ್ಘ ಪೀಠಿಕೆಯನ್ನು ಬರೆಯವುದಕ್ಕೆ ಕಾರಣ ಈ “ಬಸವರಾಜಕಾರಣ” ಎನ್ನುವ ಪುಸ್ತಕಕ್ಕೆ ಮುನ್ನುಡಿ ಬರೆದವರು ಅಪ್ಪಟ ಆಂಧ್ರದಿಂದ ವಲಸೆ ಬಂದ ಜನಿವಾರಧಾರಿಗಳಾದ ಆರಾಧ್ಯ ಶೈವ ಬ್ರಾಹ್ಮಣ ಕುಲ ಸಂಜಾತೆ ಅರ್ಥಾತ್‌ ಜಂಗಮ ಕುಲದ ಡಾ. ಶೈಲಾಜಾ ಇಂ. ಹಿರೇಮಠ ಅವರು. ಜಂಗಮ ಅಂದರೆ ಸಹಜವಾಗಿ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವವರಲ್ಲ. ಇದಕ್ಕೆ ಉದಾಹರಣೆ ಎಂದರೆ ಪಂಚಪೀಠದವರ ಅಡ್ಡಪಲ್ಲಕ್ಕಿ ಉತ್ಸವ:

https://kannada.oneindia.com/news/karnataka/adda-pallaki-utsav-dc-gives-green-signal-077990.html

ಡಾ. ಶೈಲಾಜಾ ಇಂ. ಹಿರೇಮಠ ಅವರು ವೃತ್ತಿಯಿಂದ ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಪ್ರಾಧ್ಯಾಪಕರು ಹಾಗೂ ಪ್ರವೃತ್ತಿಯಿಂದ ಅತ್ಯಂತ ಪ್ರಬುದ್ಧ ಸಾಹಿತಿಗಳು ಮತ್ತು ವಚನ ಸಾಹಿತ್ಯ ಚಿಂತಕರು. ಕನ್ನಡ ವಿಶ್ವವಿದ್ಯಾಲಯದಲ್ಲಿ ಇವರು ಈ ಹಿಂದೆ Guide ಮಾಡಿದ ಹಾಗೂ ಹಾಲಿ Guide ಮಾಡಿಸಿಕೊಳ್ಳುತ್ತಿರುವ Ph. D ವಿದ್ಯಾರ್ಥಿಗಳನ್ನೊಮ್ಮೆ ಹಾಗೆ ಸುಮ್ಮನೆ ಮಾತನಾಡಿಸಿದರೆ ಇವರ ಕನ್ನಡ ಸಾಹಿತ್ಯದಲ್ಲಿನ ವಿದ್ವತ್ತು ಹಾಗೂ ಇವರು Academic ಆಗಿ ಎಷ್ಟು Strong ಇದಾರೆ ಅಥವಾ ಇವರ Academic Caliber ಎಷ್ಟಿದೆ ಎನ್ನುವುದರ ನೈಜ ಕಲ್ಪನೆ ಬರಬಹುದು. ಈ ಮಹತ್ವದ ಪೀಠಿಕೆ ಯಾಕೆಂದರೆ ಬಸವರಾಜಕಾರಣ ಪುಸ್ತಕಕ್ಕೆ ಮುನ್ನುಡಿ ಬರೆದವರು ಡಾ. ಶೈಲಜಾ. ಇಂ. ಹಿರೇಮಠ ಎನ್ನುವ ಈ ಕನ್ನಡ ಪ್ರಾಧ್ಯಾಪಕರು ಮತ್ತು ಪ್ರಬುದ್ಧ ಕನ್ನಡ ಸಾಹಿತಿಗಳು. ಮೊದಲಿಗೆ ಮುನ್ನುಡಿ ಎಂದರೇನು ಎಂದು ತಿಳಿದುಕೊಳ್ಳೋಣ.

ನುಡಿ, ಮಾತು ಅಥವಾ ಬರಹ ಎನ್ನುವದರ ಸಾಂಕೇತಿಕ ಶಬ್ದವೇ “ಮುನ್ನುಡಿ” ಎನ್ನುವ ಪದ. ಕೃತಿಯ ಲೇಖಕ ಅಥವಾ ಲೇಖಕಿಯಿಂದ ಬರೆಯಲಾದ ಪುಸ್ತಕ ಅಥವಾ ಇತರ ಸಾಹಿತ್ಯ ಕೃತಿಗೆ ಪೀಠಿಕೆಯಾಗಿ ಮುನ್ನುಡಿಯನ್ನು ಬರೆಯುವುದು ಒಂದು ಶಿಷ್ಟಾಚಾರ. ಮುನ್ನುಡಿಯು ಸಾಮಾನ್ಯವಾಗಿ ಪುಸ್ತಕವು ಹೇಗೆ ಅಸ್ತಿತ್ವಕ್ಕೆ ಬಂದಿತು ಅಥವಾ ಪುಸ್ತಕದ ವಿಚಾರವನ್ನು ಹೇಗೆ ಅಭಿವೃದ್ಧಿಗೊಳಿಸಲಾಯಿತು ಎಂಬುದರ ಹಿನ್ನೆಲೆಯನ್ನು ವರದಿ ಮಾಡುತ್ತದೆ. ಮೂಲ ಕಥೆ ಅಥವಾ ವಿಷಯಕ್ಕೆ ಅಗತ್ಯವಾದ ಮಾಹಿತಿಯನ್ನು ಮುನ್ನುಡಿಯಲ್ಲಿ ವಿವರಣಾತ್ಮಕ ಟಿಪ್ಪಣಿಗಳ ಮೂಲಕ ಅಥವಾ ಬಹುಶಃ ಪುಟಗಳಾಗಿ ವಿಂಗಡಿಸಲಾದ ಪೀಠಿಕೆಯಲ್ಲಿ ಬರೆಯಲಾಗುತ್ತದೆ. ಮುನ್ನುಡಿಯ ಪ್ರಮುಖ ಉದ್ದೇಶವೆಂದರೆ ಪುಸ್ತಕವೊಂದರ ಅಂತರಂಗವನ್ನು ಪ್ರವೇಶ ಮಾಡಿ, ಆ ಪುಸ್ತಕದಲ್ಲಿ ಅಡಗಿರುವ ಅರಿವನ್ನು ಅನಾವರಣಗೊಳಿಸುವ ಸದಾಶಯ.

ಕನ್ನಡ ಸಾಹಿತ್ಯದ ಇತಿಹಾಸವನ್ನು ನಾವು ಸ್ಥೂಲವಾಗಿ ಅಭ್ಯಾಸ ಮಾಡಿದರೆ ಸುಮಾರು 18 ನೇ ಶತಮಾನದ ನಂತರ, ಪ್ರಾಚೀನ ಕೃತಿಗಳ ಸಂಪಾದನೆ ಮತ್ತು ಸ್ವತಂತ್ರ ಕೃತಿ ರಚನೆಗಳ ಆರಂಭದ ಜತೆ ಮುನ್ನುಡಿ ಬರೆಯುವುದು ಪ್ರಾರಂಭವಾಗಿರಬಹುದು. ಕೃತಿಗಳ ಸಂಪಾದಕರು ಪ್ರಸ್ತಾವನೆಯ ರೂಪದಲ್ಲಿ ಪ್ರಾಚೀನ ಕೃತಿ ಅಥವಾ ಕೃತಿಕಾರರ ಬಗ್ಗೆ ಪರಿಚಯವನ್ನು ಬರೆಯಲು ಪ್ರಾರಂಭಿಸಿದರು. ಈ ಮುನ್ನುಡಿಗಳು ಮುಂದೆ ಕನ್ನಡ ಸಾಹಿತ್ಯದ ಚರಿತ್ರೆ ಮತ್ತು ಇತಿಹಾಸವನ್ನು ಕಟ್ಟಿಕೊಳ್ಳಲು ಅನುಕೂಲವಾಯಿತೆಂದೇ ಹೇಳಬಹುದು. ಇದು ಕನ್ನಡ ಸಾಹಿತ್ಯಾಸಕ್ತರಿಗೆ ಮತ್ತು ಸಂಶೋಧಕರಿಗೆ ಮಾರ್ಗದರ್ಶಿಗಳೂ ಆದವು. ಡಾ. ದೇ. ಜವರೇಗೌಡ ಅವರು ಇತರರಿಗೆ ಬರೆದ ಮುನ್ನುಡಿಗಳನ್ನು ಸಂಕಲಿಸಿ “ಮುನ್ನುಡಿ ಕನ್ನಡಿ” ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಈ ಪುಸ್ತಕದಲ್ಲಿ ಮುನ್ನುಡಿಗಳನ್ನು ಕುರಿತೇ ಮುನ್ನುಡಿ ಬರೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಡಾ. ಶೈಲಜಾ. ಇಂ. ಹಿರೇಮಠ ಅವರು ಅಕ್ಷರೀಕರಿಸಿದ ಮುನ್ನುಡಿಯಲ್ಲಿ ಯಾವ ಯಾವ ಅಂಶಗಳನ್ನು ಗುರುತಿಸಿದ್ದಾರೆ ಎನ್ನುವುದನ್ನು ಅಭ್ಯಾಸ ಮಾಡೋಣ. ಅಭ್ಯಾಸ ಅಂತ ಹೇಳುವುದರ ಉದ್ದೇಶ ಡಾ. ಶೈಲಜಾ. ಇಂ. ಹಿರೇಮಠ ಅವರು ಕನ್ನಡ ವಿಶ್ವವಿದ್ಯಾಲಯದ ಅತ್ಯಂತ ಹಿರಿಯ ಪ್ರಾಧ್ಯಾಪಕರು‌ ಹಾಗೂ ಬಹಳಷ್ಟು ವಿಧ್ಯಾರ್ಥಿಗಳಿಗೆ ಹಿರಿಯ ಸಂಶೋದನಾ ಮಾರ್ಗದರ್ಶಕರಾಗಿ ಶ್ರೇಷ್ಠ ಕೆಲಸವನ್ನು ಮಾಡಿದಂಥವರು ಮತ್ತು ಇಂದಿಗೂ ಮಾರ್ಗದರ್ಶಕರಾಗಿ ಕೆಲಸವನ್ನು ಮಾಡುತ್ತಿರುವವರು.

ಪ್ರಸ್ತುತ ಈ ಮುನ್ನುಡಿಯ‌ III ನೇ ಪೇಜಿನ 3 ನೇ ಪ್ಯಾರಾದಲ್ಲಿ ವಚನ ಸಾಹಿತ್ಯದ ಅಧ್ಯಯನವನ್ನು ತಮ್ಮ ಮೂಗಿನ ನೇರಕ್ಕೆ ಮೂರು ಮಾದರಿಗಳಲ್ಲಿ ವಿಂಗಡಿಸಿದ್ದಾರೆ. ಮೊದಲನೇಯ ಮಾದರಿಯಲ್ಲಿ

“ಜಾತಿಗಳನ್ನು ನಿರ್ದಿಷ್ಟಗೊಳಿಸಿಕೊಂಡು ವೀರಶೈವ ಇಲ್ಲವೇ ಲಿಂಗಾಯತ ಧರ್ಮವನ್ನು ಕಟ್ಟಿಕೊಳ್ಳುವ ಹಾಗೂ ಅದನ್ನು ನಿರೂಪಿಸುವ ಅಧ್ಯಯನ ಮಾದರಿಗಳು”

ಹೀಗೆ ಜಾತಿ ನಿರ್ದಿಷ್ಟವಾದ ಮಾದರಿಯ ಅಧ್ಯಯನವನ್ನು Float ಮಾಡಿ 12 ನೇ ಶತಮಾನದ ಚಳುವಳಿಯನ್ನು ಜಾತಿ ಸೂಚಕ ಚಳುವಳಿಯೆಂದು ಬಿಂಬಿಸುವ ಮತ್ತದೇ ವರ್ಣಾಶ್ರಮ ವ್ಯವಸ್ಥೆಯನ್ನು ವೈಭವೀಕರಿಸುವ ಪ್ರಯತ್ನವನ್ನು ಪ್ರಬುದ್ಧ ವಚನ ಸಾಹಿತ್ಯ ಚಿಂತಿಕಿಯರಾದ ಡಾ. ಶೈಲಜಾ. ಇಂ. ಹಿರೇಮಠ ಅವರು ಮಾಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುವ ಸಂಗತಿ.

ಮುನ್ನುಡಿಯು ಪುಸ್ತಕದ ಪ್ರವೇಶದ ಹಾಗೂ ಅದರ ಒಳನೋಟವನ್ನು ಬಿಂಬಿಸುವ ಕೆಲಸವನ್ನು ಮಾಡುತ್ತದೆ. ಹಾಗಾಗಿಯೇ ಈ ಪುಸ್ತಕ ವರ್ಣಾಶ್ರಮ ವ್ಯವಸ್ಥೆಯನ್ನು ವೈಭವೀಕರಿಸಿ ಲಿಂಗಾಯತರನ್ನು ದಿಕ್ಕು ತಪ್ಪಿಸುವ ಸಲುವಾಗಿ ಬರೆದದ್ದು ಎಂದು ಸ್ಥೂಲವಾಗಿ ಅರ್ಥ ಮಾಡಿಕೊಳ್ಳಬಹುದು. ಮುಂದೆ ಒಂದೊಂದೇ ಅಧ್ಯಾಯವನ್ನು ವಿಶ್ಲೇಷಣೆ ಮಾಡುವಾಗ ಮತ್ತೆ ಮತ್ತೆ 12 ನೇ ಶತಮಾನದ ಚಳುವಳಿಯ ಒಳನೋಟಗಳನ್ನು ಈ ಪುಸ್ತಕದ ಮಾತುಗಳಿಂದ ಅರ್ಥ ಮಾಡಿಕೊಳ್ಳೋಣ.

ಜಾತಿ ವ್ಯವಸ್ಥೆ ಅಥವಾ ವರ್ಣಾಶ್ರಮ ವ್ಯವಸ್ಥೆಯ ವಿರುದ್ಧ ಬಸವಣ್ಣನವರು ಹೋರಾಟ ಮಾಡಿದ್ದಂತೂ ನಿಜ. ಆದರೆ ಇಡೀ ಹೋರಾಟದ ವ್ಯವಸ್ಥೆಯನ್ನು ಜಾತಿ ಹೋರಾಟಕ್ಕೆ ಸಮೀಕರಿಸಿ ಅಧ್ಯಯನ ಮಾಡುವಂಥ ಕೀಳು ಮಟ್ಟದಲ್ಲಿ ಬಸವಣ್ಣನವರನ್ನು ನೋಡುವುದು ಎಷ್ಟು ಸರಿ ಎನ್ನುವದನ್ನು ನಾವು ಅರಿತುಕೊಳ್ಳಬೇಕು. ಇದು ಅತ್ಯಂತ ಸಣ್ಣತನದ ಸಾಹಿತ್ಯ ಅಧ್ಯಯನದ ಮಾದರಿ ಎನ್ನುವುದನ್ನು ಪ್ರಬುದ್ಧ ವಚನ ಸಾಹಿತ್ಯ ಚಿಂತಕಿಯರಾದ ಡಾ. ಶೈಲಜಾ. ಇಂ. ಹಿರೇಮಠ ಅವರು ಅರ್ಥ ಮಾಡಿಕೊಳ್ಳಬೇಕು ಎನ್ನುವುದು ಲಿಂಗಾಯತ ಸಮಾಜದ ಕಳಕಳಿಯ ಮನವಿ. ಒಂದು ದೃಷ್ಟಾಂತ ಅಥವಾ English ನಲ್ಲಿ ಹೇಳುವುದಾದರೆ Metaphor (ಯಾಕಂದರ ಈ ಪುಸ್ತಕದ ಲೇಖಕರು ಅನಿವಾಸಿ ಭಾರತೀಯರು. ಹಾಗಾಗಿ ಅವರಿಗೆ ಕನ್ನಡದ ಕೆಲವು ಶಬ್ದಗಳನ್ನು ಅರ್ಥ ಮಾಡಿಕೊಳ್ಳೋದು ಸ್ವಲ್ಪ ಕಷ್ಟ ಆಗಬಹುದು ಎನ್ನುವ ಕಾರಣಕ್ಕಾಗಿ) ಮೂಲಕ ಅರ್ಥೈಸುವ ಪ್ರಯತ್ನವನ್ನು ಮಾಡೋಣ.

ಬಸವಣ್ಣನವರ ಉಪನಯನದ ಪ್ರಸಂಗದಲ್ಲಿ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಿ ಅವರು ಒಂದು ಮಾತನ್ನು ಹೇಳುತ್ತಾರೆ. “ಜಾನ್ಮನಾ ಜಾಯತೇ ಶೂದ್ರಃ ಸಂಸ್ಕಾರಾತ್‌ ದ್ವಿಜಮುಚ್ಯತೆ” ಎನ್ನುತ್ತಾ ಹುಟ್ಟುವಾಗ ಎಲ್ಲರೂ ಶೂದ್ರರೇ ಆದರೆ ಸಂಸ್ಕಾರ ದೊರೆತಂತೆ ಬ್ರಾಹ್ಮಣರಾಗುತ್ತಾರೆ. ಬ್ರಾಹ್ಮಣ ಎಂದರೆ ಜಾತಿವಾಚಕವಲ್ಲ. ಸಂಸ್ಕಾರಯುತ ಮನುಷ್ಯ ಅಂತಾ. ಒಮ್ಮೆ ಆವತ್ತಿನ ಬ್ರಾಹ್ಮಣರು ದಾರಿಯಲ್ಲಿ ಹೀಗುತ್ತಿದ್ದ ಶೃೇಣೀಕೃತ ಸಮಾಜದ ತಳವರ್ಗದ ಕೆಲವರನ್ನು ಕರೆದು ಕೇಳತಾರೆ.

“ಏನ್‌ ಹಣೀಗೆ ಭಾರೀ ವಿಭೂತಿ ಹಚಗೊಂಡೀರಿ, ಕೊಳ್ಳಾಗ ಕಲ್ಲು ಬ್ಯಾರೆ ಕಟಗೊಂಡೀರಿ. ಏನು ಆ ದಿಕ್ಕು ತಪ್ಪಿದ ಬಸವಣ್ಣನ ಮಾತು ಕೇಳಿ ನೀವೇನ ದೊಡ್ಡ ಶರಣರಾಗೀರಲ್ಲಾ ಹಂಗಾದರ ನಿಮ್ಮ ಗೋತ್ರ ಯಾವುದು ಹೇಳರಿಪಾ”

ಅಂತಾ ಈ ಬ್ರಾಹ್ಮಣರು ಅವರನ್ನು ಹೀಯಾಳಿಸುತ್ತಾರೆ. ಅವರಿಗೇನು ಗೊತ್ತು ಪಾಪ. ಅವರು ಹೋಗಿ ಬಸವಣ್ಣನವರ ಮುಂದ “ಯಪ್ಪಾ ಈ ಬ್ರಾಹ್ಮಣರು ಗೋತ್ರ ಕೇಳಾಕತ್ತಾರ ಹಂಗಂದರ ಏನ್‌ ಯಪ್ಪಾ” ಅಂತಾ ಈ ಗೋತ್ರದ ವಿಷಯ ಪ್ರಸ್ತಾಪ ಮಾಡತಾರೆ. ಆಗ ಬಸವಣ್ಣನವರು ಒಂದ ಮಾತ ಹೇಳತಾರೆ:

ಗೋತ್ರನಾಮವ ಬೆಸಗೊಂಡಡೆ
ಮಾತು ನೂಕದೆ ಸುಮ್ಮನಿದ್ದಿರಿದೇನಯ್ಯಾ?
ತಲೆಯ ಕುತ್ತಿ ನೆಲನ ಬರೆವುತ್ತಿದ್ದಿರಿದೇನಯ್ಯಾ?
ಗೋತ್ರನಾಮ, ಮಾದಾರ ಚೆನ್ನಯ್ಯ,
ಡೋಹರ ಕಕ್ಕಯ್ಯನೆಂಬುದೇನು, ಕೂಡಲಸಂಗಯ್ಯಾ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-202/ವಚನ ಸಂಖ್ಯೆ-745)

ನೀವು ಅವರಿಗೆ ಉತ್ತರಾ ಕೊಡದ ವಾಪಸ್‌ ಯಾಕ ಬಂದರಿ ಅಂತ ಕೇಳತಾರೆ ಬಸವಣ್ಣನವರು. ಹೀಗೆ ಧಾರ್ಮಿಕವಾದ ಸ್ವಾತಂತ್ರ್ಯವನ್ನು ಕೊಟ್ಟವರು, ಮಾತನಾಡುವ ಹಕ್ಕನ್ನು ಕೊಟ್ಟವರು, ಸ್ತ್ರೀಯರಿಗೆ ಸಮಾನತೆಯನ್ನು ಕೊಟ್ಟವರು ಅಥವಾ ಇಡೀ ಸಮಾಜವನ್ನು ಎಚ್ಚರಿಸಿದವರು ಬಸವಣ್ಣನವರು. ಬಸವಣ್ಣನವರು ಮತ್ತು ಎಲ್ಲಾ ಬಸವಾದಿ ಶರಣು ಸಾರಾ ಸಗಟಾಗಿ ತಮ್ಮ ವಚನಗಳ ಮೂಲಕ ಜಾತೀಯತೆಯನ್ನು ತಿರಸ್ಕರಿಸಿ ಖಂದಿಸಿದ್ದಾರೆ. ಬಸವಪ್ರಣೀತ ಲಿಂಗಾಯತ ಧರ್ಮದಲ್ಲಿ ಜಾತೀಯತೆ ಇಲ್ಲಾ. ವೃತಿ ಅಥವಾ ಕಸುಗಳಿಗೆ ಮಾತ್ರ ಸ್ಥಾನವಿದೆ. ಅದಕ್ಕೇನೆ ಬಸವಣ್ಣನವರ ಒಂದು ವಚನ ಸಂವಾದಿಯಾಗಿ ನಿಲ್ಲಬಲ್ಲದು.

ದೇವಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ! ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ!
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ
ನಿಮ್ಮ ರಾಣಿವಾಸದಾಣೆ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-118/ವಚನ ಸಂಖ್ಯೆ-453)

ಇಂಥ ಉದಾತ್ತ ಚಿಂತನೆಯನ್ನು ಜಾತಿಗೆ ಸೀಮಿತಗೋಳಿಸಿ ಅದನ್ನು ಜಾತಿ ಚಳುವಳಿಯೆಂದು ಬಿಂಬಿಸುವ ಪ್ರಯತ್ನವನ್ನು ಡಾ. ಶೈಲಜಾ. ಇಂ. ಹಿರೇಮಠ ಅವರು ಈ ಮುನ್ನುಡಿಯಲ್ಲಿ ಮಾಡಿದ್ದಾರೆ. ಮುನ್ನುಡಿಯಲ್ಲಿನ ಈ ಅಂಶವನ್ನು ಲಿಂಗಾಯತರು ಗಂಭೀರವಾಗಿ ಯೋಚನೆ ಮಾಡಬೇಕಾಗಿದೆ.

ಪೇಜ ನಂ. IV ರಲ್ಲಿ ಡಾ. ಶೈಲಜಾ. ಇಂ. ಹಿರೇಮಠ ಅವರು ಬರೀತಾರೆ:

“ಬಸವಣ್ಣನನ್ನು ವೀರಶೈವಿಗನಾಗಿ ನೋಡಿದಾಗ ನಮಗೆ ಕಾಣುವುದು ಬೇರೆ; ಆತನನ್ನು ಅನುಭಾವಿಯಾಗಿ ನೋಡಿದಾಗ ಆತನ ಬಗ್ಗೆ ಭಿನ್ನ ಅರಿವಿನ ಬೆಳಕು ಕಾಣುತ್ತದಲ್ಲಾ ಅದು ಬೇರೆ!

ವಚನ ಸಾಹಿತ್ಯವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಳವಾಗಿ ಅಧ್ಯಯನ ಮಾಡಿರುವ ಡಾ. ಶೈಲಜಾ. ಇಂ. ಹಿರೇಮಠ ಅವರು ಒಂದು ವಿಷಯವನ್ನು ಸ್ಪಷ್ಪಡಿಸಬೇಕು. ಬಸವಣ್ಣ ಯಾವಾಗ ವೀರಶೈವನಾದ. ವೀರಶೈವ ಅಂದರೆ ದ್ವೈತ ಸಿದ್ಧಾಂತ ಮತ್ತು ಕೈಲಾಸದ ಪರಿಕಲ್ಪನೆಯನ್ನು ಒಪ್ಪುವಂಥವರು. ಆದರೆ ಬಸವಣ್ಣನವರು ಅದ್ವೈತ ಸಿದ್ಧಾಂತವನ್ನು ಅಪ್ಪಿಕೊಂಡು ಒಪ್ಪಿಕೊಂಡಂಥವರು. ಪ್ರತಿಯೊಂದು ವಿಚಾರವನ್ನೂ ವೈಜ್ಞಾನಿಕ ವಿಚಾರವಾದದ ಒರೆಗಲ್ಲಿಗೆ ಹಚ್ಚಿ ನೋಡುವಂಥವರು. ಗೊಡ್ಡು ಪುರಾಣ ಪುಣ್ಯ ಕಥೆಗಳನ್ನು ಎಂದಿಗೂ ಒಪ್ಪದಂತವರು. ಪಂಚಸೂತಕಗಳನ್ನು ನಿರಾಕರಿಸಿದಂಥವರು. ಪುರೋಹಿತಶಾಹಿಯನ್ನು ಧಿಕ್ಕರಿಸಿದವರು. ಅದಕ್ಕೆ ವ್ಯೋಮಮೂರ್ತಿ ಅಲ್ಲಮ ಪ್ರಭುಗಳ ಮತ್ತು ದಿಟ್ಟ ಗಣಾಚಾರಿ ಅಂಬಿಗರ ಚೌಡಯ್ಯನವರ ಈ ವಚನಗಳು ಸಾಕ್ಷಿಯಾಗಿ ನಿಲ್ಲಬಲ್ಲವು.    

ನಾ ದೇವನಲ್ಲದೆ ನೀ ದೇವನೆ?
ನೀ ದೇವನಾದಡೆ ಎನ್ನನೇಕೆ ಸಲಹೆ?
ಆರೈದು, ಒಂದು ಕುಡಿತೆ ಉದಕವನೆರೆವೆ,
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ.
ನಾ ದೇವ ಕಾಣಾ ಗುಹೇಶ್ವರಾ!
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-173/ವಚನ ಸಂಖ್ಯೆ-558)

ಅಜಾತನನೊಲಿಸದೊಡೆ ಅದೇತರ ಮಂತ್ರ.
ಅದೇತರ ಆಗಮ ಹೇಳಿರೋ,
ಆಚಾರ್ಯ ಕೊಟ್ಟ ಸಲಾಕಿ ಯಾತರಲ್ಲಿ ನಚ್ಚುವಿರಿ?
ಅದಾವ ಮುಖದಲ್ಲಿ, ಲಿಂಗ ಬಂದಿಪ್ಪುದು?
ರೂಪಿಲ್ಲದಾತ ನಿಮ್ಮ ಮಾತಿಂಗೆ ಬಂದಡೆ,
ಅದೇತರ ಮಾತೆಂದನಂಬಿಗ ಚೌಡಯ್ಯ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-11/ವಚನ ಸಂಖ್ಯೆ-22)

ಈ ಎರಡೂ ವಚನಗಳಿಂದ ಮತ್ತು ಇನ್ನೂ ಅನೇಕ ವಚನಗಳಲ್ಲಿ ಸ್ಥಾವರ ದೇವರನ್ನು ನಿರಾಕರಿಸಿದ ಮತ್ತು ದ್ವೈತ ಸಿದ್ಧಾಂತವನ್ನು ಅಲ್ಲಗಳೆದಿರುವ ತತ್ವವನ್ನು ಕಾಣಬಹುದು. ವೈದಿಕ‌ ವೀರಶೈವವೆನ್ನುವುದು ದ್ವೈತ ಸಿದ್ಧಾಂತವನ್ನು ಎತ್ತಿ ಹಿಡಿಯುವ ವೀರಭದ್ರನನ್ನು ವೈಭವೀಕರಿಸುವ ಒಂದು ವೃತ. ಅವೈದಿಕ ಧರ್ಮವಾದ ಲಿಂಗಾಯತವನ್ನು ಸ್ಥಾಪಿಸಿದವರು ಬಸವಣ್ಣನವರು. ಹಾಗಾಗಿ ಬಸವಣ್ಣನವರನ್ನು ವೀರಶೈವರು ಎಂದು ಹೇಳುವ ಪಂಚಾಚಾರ್ಯರ ನಯವಂಚಕತನವನ್ನು ಒಪ್ಪಲು ಸಾಧ್ಯವೇ ಇಲ್ಲಾ. ಹಾಗಾಗಿ ಡಾ. ಶೈಲಜಾ. ಇಂ. ಹಿರೇಮಠ ಅವರು ಬಸವಣ್ಣನವರನ್ನು ವೀರಶೈವರೆಂದು ಹೇಳಿದ್ದು ಆವಾಂತರ ಸೃಷ್ಟಿಸಲೆಂದೇ ಎನ್ನುವುದನ್ನು ಲಿಂಗಾಯತರಾದ ನಾವು ಗಮನಿಸಬೇಕು.

ವಚನ ಚಳುವಳಿಯಲ್ಲಿ ಜಾತಿ ಸಮೀಕರಣವನ್ನು ಬಲವಾಗಿ ಪ್ರತಿಪಾದಿಸುವ ನಿಟ್ಟಿನಲ್ಲಿ ಡಾ. ಶೈಲಜಾ. ಇಂ. ಹಿರೇಮಠ ಅವರು “ಜಾತಿ ಆಧಾರಿತ ಜನಗಣತಿಯಂಥ” ಮತ್ತೊಂದು ಜಾಣತನದ ಎಡವಟ್ಟನ್ನು ಪೇಜ್‌ ನಂ. V ರಲ್ಲಿ ಮಾಡಿದ್ದಾರೆ. ಪೇಜ್‌ ನಂ. V ರಲ್ಲಿ ಬರೀತಾರೆ:

“ಆದರೆ, ವಸಾಹತು ಆಡಳಿತ ಅವಧಿಯಲ್ಲಿ ಹುಟ್ಟಿಕೊಂಡ ಜಾತಿ ಆಧಾರಿತ ಜನಗಣತಿ ಒಂದು ಬಗೆಯಲ್ಲಿ ಜಾತಿಯನ್ನು ನಿರ್ದಿಷ್ಟಗೊಳಿಸಿ, ಅವುಗಳನ್ನಾಧರಿಸಿ ಶೃೇಣೀಕರಣವನ್ನು ಸೃಷ್ಟಿಸಿ; ಸಾಮಾಜಿಕ ಅಸಮಾನತೆಯನ್ನು ಹೆಚ್ಚಿಸಿತು”.

ಜನಗಣತಿಗಳು ಸೃಷ್ಟಿಸಿದ ಆವಾಂತರಗಳ ಬಗ್ಗೆ ಮಾಹಿತಿಯನ್ನು ಆಧರಿಸಿ ಹೇಳುವುದಾದರೆ ಲಿಂಗಾಯತರನ್ನು ದಾರಿ ತಪ್ಪಿಸಿದ್ದೇ ಹಳೆ ಮೈಸೂರು ಭಾಗದ ವೀರಶೈವರು. ಜನಗಣತಿಯ ಕುರಿತು ಮಾಹಿತಿಯನ್ನು ಹಂಚಿಕೊಳ್ಳುವುದರ ಮೂಲಕ ಡಾ. ಶೈಲಜಾ. ಇಂ. ಹಿರೇಮಠ ಅವರ ಉಲ್ಲೇಖಕ್ಕೆ ಉತ್ತರ ನೀಡುವ ಪ್ರಯತ್ನವನ್ನು ಮಾಡೋಣ.

5000 ವರ್ಷದ ಇತಿಹಾಸ ಇರುವ ಭಾರತ ದೇಶದಲ್ಲಿ ಜನಗಣತಿ ಆರಂಭವಾಗಿದ್ದು 1871 ರಲ್ಲಿ ಮೈಸೂರಿನಲ್ಲಿ. ಈ ಜನಗಣತಿಯಲ್ಲಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಿತ್ತು. 1881 ರಲ್ಲಿ ಲಿಂಗಾಯತರ ಕಡು ವಿರೋಧಿಯಾಗಿದ್ದ ದಿವಾನ್‌ ಸಿ ರಂಗಾಚಾರ್ಯರು ವಿಶೇಷವಾಗಿ ಮೈಸೂರಿನ ಶಾಸ್ತ್ರಿಗಳು ಮತ್ತು ವೇದಮೂರ್ತಿಗಳ ನೇತೃತ್ವದಲ್ಲಿ ನಡೆದ ಜನಗಣತಿಯಲ್ಲಿ ಲಿಂಗಾಯತರನ್ನು ಹಿಂದೂ ಧರ್ಮದ ಶೂದ್ರರ ಗುಂಪಿಗೆ ಸೇರಿಸಿಬಿಟ್ಟರು. ಅದರ ಉಲ್ಲೇಖ ಹೀಗಿದೆ.

Lingayat’s were classified as a separate religion up until the 1871 Mysuru census, and it was only in 1881 that Lingayat’s were classified as caste under Hindu Religion while Veerashaivas are not mentioned in it. There was no explanation given for this change.

Ref: https://www.the newsminute.com/article/we-were-separate-hindus-till-1871-lingayat-leader-hails-ktaka-govts-78207
Read on 8th May, 2019

12 ನೇ ಶತಮಾನದಿಂದ 19 ನೇ ಶತಮಾನದ ಮೊದಲ ಜನಗಣತಿಯವರೆಗೆ ಪ್ರತ್ಯೇಕ ಧಾರ್ಮಿಕ ಗುರುತನ್ನು ಹೊಂದಿದ್ದ ಲಿಂಗಾಯತರು ನಂತರದ ಜನಗಣತಿಗಳಲ್ಲಿ ವರ್ಣಾಶ್ರಮ ಆಧಾರಿತ ಶೂದ್ರ ಸ್ಥಾನಕ್ಕೆ ತಳ್ಳಲ್ಪಟ್ಟರು. ಈಗ ಹೇಳಿ ಡಾ. ಶೈಲಜಾ. ಇಂ. ಹಿರೇಮಠ ಅವರೇ ಲಿಂಗಾಯತರನ್ನು ಜಾತಿ-ಧರ್ಮದ ಆಧಾರದ ಮೇಲೆ ಒಡೆದು ಛಿದ್ರಗೊಳಿಸಿದ್ದು ಹಳೇ ಮೈಸೂರು ಭಾಗದ ವೀರಶೈವರೆಂಬ ಆಂಧ್ರದಿಂದ ವಲಸೆ ಬಂದ ಆರಾಧ್ಯ ಶೈವ ಬ್ರಾಹ್ಮಣರು. ಇದನ್ನು ಮರೆಮಾಚಿ:

“ಜನಗಣತಿಗಳು ಶೃೇಣೀಕರಣವನ್ನು ಸೃಷ್ಟಿಸಿ; ಸಾಮಾಜಿಕ ಅಸಮಾನತೆಯನ್ನು ಹೆಚ್ಚಿಸಿತು”

ಎಂದು ನೀವು ಯಾವ ಆಧಾರದ ಮೇಲೆ ಬರೆದಿದ್ದೀರಿ. ಜನಗಣತಿಯ ಬಗ್ಗೆ ನಿಮಗಿರುವ ಮಾಹಿತಿಯನ್ನು ಕುರಿತಂಥ ಯಾವ ಗ್ರಂಥಗಳನ್ನು ನೀವು Refer ಮಾಡಿದ್ದೀರಿ ಎಂದು ಸ್ಪಷ್ಟಪಡಿಸಿ. ಸುಮ್ಮನೆ ಇಲ್ಲ ಸಲ್ಲದ ವೈಭವೀಕರಿಸಿದ ಶಬ್ದ ಪ್ರಯೋಗಗಳು ನಿಮ್ಮಂಥ ಪ್ರಬುದ್ಧ ಸಾಹಿತಿಗಳಿಂದ ಹೊರ ಹೊಮ್ಮಬಾರದು ಎನ್ನುವುದು ಸಾಹಿತ್ಯದ ಅಂಗಳದಲ್ಲಿ ಹರಿದಾಡುತ್ತಿರುವ ಗುಸುಗುಸು.

ಮುಂದುವರೆದು submission ಮಾಡುವ ಹಾಗೆ ನೀವೇ ಬರೆದಿದ್ದೀರಿ:

“ಜಾತಿಗಳು ಹಾಗೂ ಧರ್ಮಗಳು ಸಾಮಾಜಿಕ ನೆಲೆಯಲ್ಲಿ ದಾಳವಾಗಿ ಪರಿವರ್ತನೆಗೊಂಡವು. ಇದಕ್ಕೆ ಭದ್ರವಾದ ಬುನಾದಿ ಸೃಷ್ಟಿಯಾಗಿದ್ದೇ ವಿಶ್ವವಿದ್ಯಾಲಯಗಳಲ್ಲಿ”

ಎನ್ನುವ ಆರೋಪವನ್ನೂ ಸಹ ಮಾಡುತ್ತಿದ್ದೀರಿ. ತಾವೇ ಒಬ್ಬ ವಿಶ್ವವಿದ್ಯಾಲಯದ ಗೌರವಾನ್ವಿತ ಪ್ರಾಧ್ಯಾಪಕರಾಗಿ, ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಹೀಗೆ ಹೇಳುವುದು ಎಷ್ಟು ಸರಿ ಎನ್ನುವುದನ್ನು ನೀವೆ ಯೋಚಿಸಿ. ಜಾತಿಗಣತಿಯಂತಹ Recorded Documents ಇರುವಾಗ ಇಂತಹ ಶಬ್ದ ಪ್ರಯೋಗವನ್ನು ಮಾಡಿ ವೀರಶೈವರನ್ನು ಹಿಮಾಲಯದೆತ್ತರಕ್ಕೆ ಬೆಳೆಸುವಂಥ ಪ್ರಕ್ರಿಯೆ ಯಾಕೆ ಮಾಡಿದ್ದೀರಿ ಎನ್ನುವುದು ಜಗತ್ತಿನ ಎಂಟನೇ ಅದ್ಭುತ. I really don’t know the viciousness of your statement.

ತಮ್ಮ ಮುನ್ನುಡಿಯ ಅಂತಿಮ ಪ್ಯಾರಾಗಳಲ್ಲಿ ಸಹಜವಾಗಿ ರವಿ ಹಂಜ್‌ ಅವರನ್ನು ಹೊಗಳಿ ಬರೆದಿದ್ದೀರಿ. ಅದಕ್ಕೆ ಯಾರ ಆಕ್ಷೇಪವೂ ಕೂಡ ಇಲ್ಲಾ. ನಾನು ಮುನ್ನುಡಿ ಬರೆದಿದ್ದರೂ ಕೂಡ ಈ ಹೊಗಳುಭಟ್ಟನ ಕೆಲಸವನ್ನೇ ಮಾಡುತ್ತಿದ್ದೆ. ಆದರೆ ಈ “ಬಸವರಾಜಕಾರಣ” ಎನ್ನುವ ಪುಸ್ತಕವನ್ನು ತಾತ್ವಿಕವಾಗಿ ಮತ್ತು ರಾಜಕೀಯ ದೃಷ್ಟಿಕೋಣದಿಂದ ಓದಿ ಮುನ್ನುಡಿ ಬರೆದಿದ್ದರೆ ಮುನ್ನುಡಿಗೊಂದು ಹೊಳಪು ಬರುತ್ತಿತ್ತು ಎನ್ನುವುದು ನನ್ನ ವೈಯಕ್ತಿಕ ಹಾಗೂ ಪ್ರಾಮಾಣಿಕ ಅಭಿಪ್ರಾಯ. ಈ ಲೇಖನಕ್ಕೆ ಡಾ. ಶೈಲಜಾ. ಇಂ. ಹಿರೇಮಠ ಅವರು ಏನೇ ಪ್ರತಿಕ್ರಿಯೆ, ವಿರೋಧ, ಅಭಿಪ್ರಾಯ, ಅನುಮೋದನೆ, ಕಾನೂನಾತ್ಮಕ ನಡೆಗಳನ್ನು ಮಾಡಿದರೂ ಸ್ವಾಗತ. ಆದರೆ ಎಲ್ಲವೂ ಕೂಡ ಸಾಹಿತ್ಯಿಕ ಮತ್ತು ವೈಚಾರಿಕ ನೆಲೆಗಟ್ಟಿನಲ್ಲಿದ್ದರೆ ಅದಕ್ಕೊಂದು ಶೋಭೆ ಬರಬಹುದು. The rest is left to you.

ಬಸವಣ್ಣನವರನ್ನು ರಾಜಕೀಯ ದಾಳವಾಗಿ ಬಳಸಿಕೊಂಡು ಹೆಸರು ಮಾಡಿಕೊಳ್ಳುವುದನ್ನು ನಾವು 12 ನೇ ಶತಮಾನದಿಂದಲೂ ಇತಿಹಾಸದ ಪುಟಗಳಿಂದ ನೋಡುತ್ತಾ ಬಂದಿದ್ದೇವೆ. 2022 ರಲ್ಲಿ ಬಿಡುಗಡೆಯಾದ ಈ ಪುಸ್ತಕ ಈಗ ನನಗೆ ಸಿಕ್ಕಿದೆ. ಹಾಗಾಗಿ ಮುಂದಿನ ಕೆಲವು ಕಂತುಗಳಲ್ಲಿ ಈ ಪುಸ್ತಕವನ್ನು ಪ್ರಾಮಾಣಿಕವಾಗಿ ಮತ್ತು ವೈಚಾರಿಕವಾಗಿ ವಿಮರ್ಶೆ ಮಾಡುವ ಪ್ರಯತ್ನ ಮಾಡುವೆ. ಆಗಲೇ ಬೆದರಿಕೆ ಕರೆಗಳು ಬರತಾ ಇದಾವೆ. ನೋಡೋಣ. ಈ ಪುಸ್ತಕದ ವಿಮರ್ಶೆ ಇನ್ಯಾವ ಆವಾಂತರಗಳನ್ನು ಸೃಷ್ಟಿಸಬಹುದು ಎನ್ನುವ ದೂರದೃಷ್ಟಿಯೂ ನನಗಿದೆ. ಬಸವಣ್ಣನವರನ್ನು ಮತ್ತು ಡಾ. ಎಮ್.‌ ಎಮ್.‌ ಕಲಬುರ್ಗಿಯವರನ್ನು ಆಪೋಷಣ ಮಾಡಿದವರಿಗೆ ನಾನು ಠುಸ್ಸಂತ ಊದಿದರೆ ಹಾರಿ ಹೋಗುವ ಹುಲ್ಲುಕಡ್ಡಿ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು.

ಬೆದರಿಕೆ ಕರೆಯ ಒಂದು ಸ್ಯಾಮಪಲ್‌ ಇಲ್ಲಿದೆ. ಇಂಥ ನೂರಾರು ಕೆರೆಗಳು ಆಗಲೇ ಬಂದಿವೆ. ಮುಂದೆಯೂ ಬರುತ್ತವೆ. ಇವನ ಭಾಷೆಯನ್ನು ಒಮ್ಮೆ ಗಮನಿಸಿ

ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ,
“ಸವಿಚರಣ” ಸುಮತಿ ಇಂಗ್ಲೀಷ್‌ ಶಾಲೆಯ ಹತ್ತಿರ,
ಸುಭಾಷ್‌ ನಗರ, ಕ್ಯಾತ್ಸಂದ್ರ,
ತುಮಕೂರು – 572 104.
ಮೋ. ನಂ: +91 9741 357 132.
ಈ-ಮೇಲ್‌: vijikammar@gmail.com

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

ಸಹಾಯಕ ಗ್ರಂಥಗಳು:

  • ಲಿಂಗಾಯತರು ಹಿಂದೂಗಳೇ?: ಸಂ. ಮೂಲ ಇಂಗ್ಲೀಷ-ಡಾ. ಎಸ್.‌ ಎಮ್.‌ ಜಾಮದಾರ, ಅನುವಾದ-ಡಾ. ಗೊ. ರು. ಚ.
  • ಲಿಂಗಾಯತ ಸ್ವತಂತ್ರ ಧರ್ಮ: ಡಾ. ಎಮ್.‌ ಎಮ್.‌ ಕಲಬುರ್ಗಿ.
  • ನಾನು ಕಲಬುರ್ಗಿ: ಡಾ. ರಾಜೇಂದ್ರ ಚೆನ್ನಿ, ಡಾ. ರಹಮತ್‌ ತರೀಕೆರೆ, ಡಾ. ಮೀನಾಕ್ಷಿ ಬಾಳಿ.
  • ವಚನ ಸಾಹಿತ್ಯ ಮತ್ತು ಆಧುನಿಕ ಕನ್ನಡ ಸಾಹಿತ್ಯ ಮುಖಾಮುಖಿ: ಸಂ. ಡಾ. ವೀರಣ್ಣ ರಾಜೂರ.
  • ಪರ್ಯಾಯ ಸಂಸ್ಕೃತಿ ವಚನ ಸಂಪುಟ: ಡಾ. ಸಿ. ವೀರಣ್ಣ.
  • ಸಂಸ್ಕೃತಿ ಕಥನ: ಸಂ. ಶ್ರೀ. ಅಗ್ರಹಾರ ಕೃಷ್ಣಮೂರ್ತಿ.
  • ಹೊಸಗನ್ನಡದ ಅರುಣೋದಯ: ಡಾ. ಶ್ರೀನಿವಾಸ ಹಾವನೂರ.
  • ಯುಗಯಾತ್ರೀ ಭಾರತೀಯ ಸಂಸ್ಕೃತಿ: ಸಂ. ಡಾ. ಹರಿದಾ ಭಟ್ಟಾಚಾರ್ಯ.
  • ವೇದಕ್ಕೆ ಒರೆಯ ಕಟ್ಟುವೆ: ಶ್ರೀ. ಸಿದ್ರಾಮಪ್ಪ ಮಾಟೀಲ್.
  • ಲಿಂಗಾಯತರು ಮತ್ತು ಜನಗಣತಿಗಳು ಸೃಷ್ಟಿಸಿದ ಆವಾಂತರಗಳು: ಡಾ. ಎಸ್.‌ ಎಮ್.‌ ಜಾಮದಾರ.
  • ಮೈಸೂರು ರಾಜ್ಯದ ಹಳೆ ಜನಗಣತಿಗಳು ಲಿಂಗಾಯತರು ಮತ್ತು ಚಾತುರ್ವರ್ಣ ನಂಬಿಕೆ: ಡಾ. ವಿಜಯಕುಮಾರ ಬೋರಟ್ಟಿ.

Loading

This Post Has One Comment

  1. Nijagunamurthy G.

    ದಾರಿ ತಪ್ಪುತ್ತಿರುವ ಲಿಂಗಾಯತರನ್ನು ಎಚ್ಚರಿಸುವ ಲೇಖನವಿದು. ಹುಂಜ ಕೂಗಿದ ಬಸವರಾಜಕಾರಣದ ಹಿಂದೆ ಲಿಂಗೀ ಬ್ರಾಹ್ಮಣ ವೀರಶೈವವನ್ನು ವೈಭವೀಕರಿಸುವ ಬಸವ ತತ್ವವನ್ನು ಬೇಕಾಬಿಟ್ಟಿ ವಿಶ್ಲೇಷಣೆ ಮಾಡಿದ / ಮಾಡುತ್ತಿರುವ ಹುನ್ನಾರ ಎದ್ದು ಕಾಣುತ್ತಿದೆ. ಈ ಹುಂಜದ ಕತ್ತನ್ನು ಹರಿತವಾದ ವಿಶ್ಲೇಷಣೆಯಿಂದ ಇರಿದು ಸದ್ದಡಗಿಸುವ ವಿಚಾರವಂತ ಹಾಗೂ ಪ್ರಜ್ಞಾವಂತರು ಯಾರೂ ಇಲ್ಲವೆ ಎ೦ಬ ಬೇಸರ ಆತಂಕ ಲಿಂಗಾಯತ ಸಮಾಜದಲ್ಲಿ ಇತ್ತು!

    ಸಧ್ಯ…! ಬಸವಕ್ರುಪೆಯಿಂದ ನೀವಾದರೂ ಸಹ ಲೇಖನಗಳ ಮೂಲಕ ಕಾಣಿಸಿಕೊಳ್ಳಲಾರಂಭಿಸಿರುವುದು ಲಿಂಗಾಯತರಲ್ಲಿ ಸಮಾಧಾನ, ಸಂತೋಷವನ್ನು ಉಂಟು ಮಾಡಿದೆ!. ಬಸವ ರಾಜಕಾರಣದ ಹಿಂದಿರುವ ಕುಟಿಲತೆಯನ್ನು ಬಯಲಿಗೆಳೆಯಲಾರಂಭಿಸುತ್ತಿರುವ ನಿಮ್ಮ ಸರಣಿ ಲೇಖನಮಾಲೆಗಾಗಿ ಲಿಂಗಾಯತರೆಲ್ಲರೂ ಕುತೂಹಲ ಮತ್ತು ಕಾತರದಿಂದ ನಿರೀಕ್ಷಿಸುತ್ತ್ತ ಲಕ್ಷಾಂತರ ಬಸವ ಮನಸ್ಸುಗಳೊಂದಿಗೆ ಹಂಚಿಕೊಳ್ಳಲು ಕಾಯುತ್ತಿದ್ದೇವೆ ! ಪ್ರಣಾಮಗಳೊಂದಿಗೆ….

    ನಿಜಗುಣ ಮೂರ್ತಿ ಕನಕಪುರ
    ಬೆಂಗಳೂರು

Leave a Reply