.

Every lie is two lies:
- The lie we tell others and
- The lie we tell ourselves to justify it.
There is a story to justify this.
A Woman walks into a butcher shop just before closing time and asks, do you still have chicken? The butcher opens his deep freezer, takes out his only chicken left and puts it on the weighing scale. It weighs 1.5 kg.
The woman looks at the chicken and at the scale and asked, do you have one that’s a bit bigger than this one? The butcher puts his only chicken back into the freezer, and then takes the same chicken out again.
But this time when he puts it on the scale, he craftily keeps his thumb on the scale pan. And the scale now shows 2 kg. That’s wonderful said the woman. I’ll take both of them, pack please!
In a situation like this, you realize at once that your integrity and reputation are firmly on the line. Your wisdom becomes foolishness, and your cunningness becomes stupidity. Until now the butcher has his head inside the big deep freezer, looking for the first chicken.
Remember, always tell the truth, and you will be free. No legacy is so rich as honesty. Honesty is more than not lying. It is truth telling, truth speaking, truth living, and truth loving. So, always be good, do good.
ಇದನ್ನೇ ನಾವು ರವಿ ಹಂಜ್ (ಬಹುಶಃ ಇವರ ಮನೆತನದ ಹೆಸರು ಹಂಜಿಮಠ ಇರಬಹುದು) ಎನ್ನುವ ಅಮೇರಿಕಾದ ಶಿಕಾಗೋದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಮತ್ತು ಆಂಧ್ರದಿಂದ ವಲಸೆ ಬಂದ ಆರಾಧ್ಯ ಶೈವ ಬ್ರಾಹ್ಮಣರಾದ ವೀರಶೈವ ಕುಲ ಸಂಜಾತ ವೈದಿಕ ಸಾಹಿತ್ಯದ ಮಹಾನ್ ಮೇಧಾವಿ ಅವರು ಬರೆದ “ಬಸವರಾಜಕಾರಣ” ಪುಸ್ತಕಕ್ಕೆ ಹೋಲಿಸಬಹುದು. ಈ ಇಡೀ ಪುಸ್ತಕದಲ್ಲಿ ಬಸವಣ್ಣನವರ ಕುರಿತು ಅಥವಾ 12 ನೇ ಶತಮಾನದ ವಚನ ಚಳುವಳಿ ಕುರಿತು ಹಸೀ ಹಸೀ ಸುಳ್ಳಿನ ಕಂತೆಯನ್ನು ಹೆಣೆಯಲಾಗಿದೆ. ಒಂದು ಸುಪ್ರಸಿದ್ಧ ಗಾದೆಯ ಮಾತಿನಂತೆ “Don’t judge the book by its cover” ಎನ್ನುವಂತೆ ನಾವು ಈ ಪುಸ್ತಕದ ಪ್ರತೀ ಶಬ್ದವನ್ನೂ ನಮ್ಮ ಓದಿನ ಹಾಗೂ ನಮ್ಮ ತಿಳುವಳಿಕೆಯ ಚೌಕಟ್ಟಿನೊಳಗೆ ಪರಾಮರ್ಶಿಸಿ ಸತ್ಯಾ ಸತ್ಯತೆಯನ್ನು ತಿಳಿಸುವ ಒಂದು ಸಣ್ಣ ಪ್ರಯತ್ನ ಮಾಡುತ್ತೇವೆ. So, let’s begin with ಅಧ್ಯಾಯ-01.
ಪ್ರಥಮ ಪುಟದಲ್ಲಿಯೇ “ಹಗೆದಿಬ್ಬೇಶ್ವರ” ಎನ್ನುವ ವಚನಾಂಕಿತದಿಂದ ಬರೆದ ಅಸಭ್ಯ ಪದಪುಂಜಗಳ ಸಂಕಲನವಿದೆ. ಹಗೆ ಎಂದರೆ ನಮ್ಮ ಪೂರ್ವಜರು ನೆಲದಲ್ಲಿ ತೆಗ್ಗು ತೆಗೆದು ಧಾನ್ಯಗಳನ್ನು ಸಂಗ್ರಹಿಸಲು ನಿರ್ಮಿಸುವ ಜಾಗ. ಅಂದರೆ ಆಳವಾದದ್ದು ಎನ್ನುವುದನ್ನು ಯಾವುದಕ್ಕೆ ಹೋಲಿಕೆಯಾಗುತ್ತದೆ ಎನ್ನುವುದು ಸ್ವಲ್ಪ ವಿಚಾರ ಮಾಡುವ ಸಂಗತಿ. ಇನ್ನು ದಿಬ್ಬ ಎಂದರೆ ಎತ್ತರದ ಸ್ಥಳ. ಇದು ಯಾವುದರ ಸಂಕೇತ ಎನ್ನುವುದು Open Secret. ಹಾಗಾಗಿ ಹಗೆದಿಬ್ಬೇಶ್ವರ ಎನ್ನುವ ವಚನಾಂಕಿತದ ಅರ್ಥ ಎಂಥವರಿಗೂ ಅಸಹ್ಯ ಹುಟ್ಟಿಸುವಂಥ ವಿಷಯ, ಅದನ್ನು ಬಿಡಿಸಿ ಹೇಳುವ ಅಗತ್ಯ ಇಲ್ಲ.
ಮೊದಲನೇಯ ಭಾಗವಾದ ಮುನ್ನುಡಿಯನ್ನು ಕುರಿತು ಬರೆಯುವಾಗ ಈ ಪುಸ್ತಕ ಜಾತೀಯತೆ ಮತ್ತು ಶ್ರೇಣೀಕೃತ ಸಮಾಜವನ್ನು ವೈಭವೀಕರಿಸುತ್ತದೆ ಎನ್ನುವುದನ್ನು ವಿವರಿಸಿದ್ದೆ. ಹಾಗಾಗಿ ಮೊದಲನೇಯ ಅಧ್ಯಾಯದಲ್ಲಿ ಇವರ ಸ್ನೇಹಿತ ಮೈಕಲ್ ಫೋರ್ಡ್ ಮತ್ತು ಸ್ನೇಹಿತೆ ಫೀಬಿಯವರನ್ನು ಕಪ್ಪು-ಬಿಳಿಯರೆಂಬ ಮೀಸಲು ಪ್ರಜ್ಞೆಯನ್ನು ಉಲ್ಲೇಖಿಸಿ ಪೇಜ್ ನಂಬರ 2 ರಲ್ಲಿ ಬರೆದಿದ್ದಾರೆ. ಇದರೊಂದಿಗೆ ಮೈಕಲ್ ಫೋರ್ಡ ಅವರ ಅದ್ಭುತ ಬುದ್ಧಿಮತ್ತೆಯನ್ನು ಉಲ್ಲೇಖಸಿದ್ದಾರೆ. ಇರಲಿ, ಅಮೇರಿಕಾದವರ ಬುದ್ಧಿಮತ್ತೆ ಅಸಾಧಾರಣವಾದದ್ದು ಎನ್ನುವುದನ್ನು ತಿಳಿಸಿಕೊಟ್ಟಿದ್ದಕ್ಕೆ ಒಂದು ಸಲಾಮ್ ಹೇಳಲೇಬೇಕು. Thank you, sir, for the wonderful note. ಅಮೇರಿಕಾದಲ್ಲಿ ಕಪ್ಪು-ಬಿಳಿಯರ ಸಮಸ್ಯೆ ಅಮೇರಿಕಾ ಹುಟ್ಟಿದಾಗಿನಿಂದ ಇರುವಂಥ ಗೋಜಲು. ಅದನ್ನು ಬಸವರಾಜಕಾರಣ ಎನ್ನುವ ಪುಸ್ತಕದಲ್ಲಿ ಉಲ್ಲೇಖಿಸುವ ಅಗತ್ಯ ನನಗಂತೂ ಕಾಣತಾ ಇಲ್ಲಾ. ಇದಕ್ಕೆ ಡಾ. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನೀಯರ್ ಅವರ ಮಾತುಗಳಿಂದ ಉತ್ತರ ಕೊಡುವ ಪ್ರಯತ್ನವನ್ನು ಮಾಡೋಣ.

ಡಾ. ಮಾರ್ಟಿನ್ ಲೂಥರ್ ಕಿಂಗ್ (ಜ್ಯೂನಿಯರ್) (15.01.1929 – 04.04.1968) ಅಮೇರಿಕಾ ಸಂಯುಕ್ತ ಸಂಸ್ಥಾನದ ಆಟ್ಲಾಂಟ ನಗರದಲ್ಲಿ ಜನಿಸಿದವರು. ಅವರು ವರ್ಣಭೇಧನೀತಿಯ ವಿರುಧ್ಧ ಹೋರಾಡಿದ ಪ್ರಮುಖ ಕಪ್ಪು ನಾಯಕರಲ್ಲೊಬ್ಬರು. ಇವರನ್ನು ಗೌರವಿಸಿದ ಪ್ರಶಸ್ತಿಗಳಲ್ಲಿ “ನೊಬೆಲ್ ಶಾಂತಿ ಪ್ರಶಸ್ತಿ” ಮತ್ತು “ಅಮೇರಿಕದ ಅಧ್ಯಕ್ಷರ ಸ್ವಾತಂತ್ರ್ಯ ಪದಕ” ಗಳು ಪ್ರಮುಖವಾದವು. ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾಗಿದ್ದ ಇವರ ಅಹಿಂಸಾತ್ಮಕ ಚಳುವಳಿ ಮತ್ತು ಸರಳ ನಡವಳಿಕೆಗಳು, ಇವರ ಚಳುವಳಿಯನ್ನು ಜಗತ್ತಿನಾದ್ಯಂತ ಜನಪ್ರಿಯಗೊಳಿಸಿದವು. 04.04.1968 ರಂದು ಇವರು ಹಂತಕನ ಗುಂಡಿಗೆ ಬಲಿಯಾಗಿ ಹುತಾತ್ಮರಾದರು.
ಡಾ. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರು ಬಾಲ್ಯದಿಂದಲೂ ಇಡೀ ಜಗತ್ತಿನ ಜನಾಂದೋಲನ ಸಾಹಿತ್ಯವನ್ನು ಸಮಗ್ರವಾಗಿ ಅಭ್ಯಾಸ ಮಾಡಿದವರು. ಆದರೆ ಅವರು ಅತ್ಯಂತ ಪ್ರಭಾವಿತರಾಗಿದ್ದು ಮಾಹಾತ್ಮಾ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟಕ್ಕೆ. ಡಾ. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರ ಪ್ರಸಿದ್ಧ ಹೇಳಿಕೆಗಳು ಅಥವಾ ಉಲೇಖಗಳಲ್ಲಿ ಒಂದನ್ನು ಬಸವಣ್ಣನವರ ವಚನದ ಮೂಲಕ ತಿಳಿದುಕೊಳ್ಳುವದರಿಂದ ಜಾಗತಿಕ ಮಟ್ಟದಲ್ಲಿ ಬಸವಣ್ಣನವರ ವಿಚಾರಧಾರೆಗಳು ಎಷ್ಟರ ಮಟ್ಟಿಗೆ ಹೋಲಿಕೆಯಾಗುತ್ತವೆ ಎನ್ನುವುದರ ಪರಿಕಲ್ಪನೆ ನಮಗಾಗಬಹುದು. ಡಾ. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರ ಈ ಹೇಳಿಕೆ ಬಸವರಾಜಕಾರಣದ ಪುಸ್ತಕದಲ್ಲಿನ ಅಧ್ಯಾಯ 1 ರಲ್ಲಿನ ವರ್ಣವ್ಯವಸ್ಥೆಯ ಉಲ್ಲೇಖವನ್ನೂ ಮೀರಿ ನಿಂತ ಹೇಳಿಕೆ.
I look to a day when people will not be judged by the color of their skin, but by the content of their character.
ಕಪ್ಪು ಬಣ್ಣದ ಜನ ಅಥವಾ ಕಪ್ಪು ಜನಾಂಗವನ್ನು ಸಮಾಜ ಅವರ ಉತ್ತಮ ನಡತೆ, ತ್ತಮ ಗುಣ ಲಕ್ಷಣಗಳು ಮತ್ತು ಉತ್ತಮ ಸ್ವಭಾವಗಳನ್ನು ಗುರುತಿಸುವ ದಿನಗಳನ್ನು ನಾನು ಆಶಾ ಭಾವನೆಯಿಂದ ಎದುರು ನೋಡುತ್ತಿದ್ದೇನೆ.
ಇದಕ್ಕೆ ಬಸವಣ್ಣನವರ ಈ ವಚನ ಅತ್ಯಂತ ಸೂಕ್ತ ಎಂದು ನನ್ನ ಅನಿಸಿಕೆ.
ಲಿಂಗವ ಪೂಜಿಸಿ ಫಲವೇನಯ್ಯಾ
ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ
ಲಿಂಗವ ಪೂಜಿಸಿ ಫಲವೇನಯ್ಯಾ
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರೆಸಿದಂತಾಗದನ್ನಕ್ಕ
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-265/ವಚನ ಸಂಖ್ಯೆ-930)
ಮಾಹಾತ್ಮಾ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟದ ವಿಚಾರಧಾರೆಗಳಿಗೆ ಮಾರು ಹೋಗಿದ್ದ ಡಾ. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರಿಗೆ ಬಸವಣ್ಣನವರ ವಚನ ಸಾಹಿತ್ಯ ಸಿಕ್ಕಿದ್ದರೆ ಇನ್ನೂ ಉತ್ತಮ ಹೋರಾಟವಾಗುತ್ತಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ ಎನ್ನುವುದಕ್ಕೆ ಮೇಲೆ ಉದಾಹರಿಸಿದ ವಚನಗಳೇ ಸಾಕ್ಷಿ. ಇದು ಜಾಗತಿಕ ನಾಯಕತ್ವದ ಒಂದು ತುಲನಾತ್ಮಕ ವಿಶ್ಲೇಷಣೆ. ಪ್ರಜೆಗಳ ಮೇಲೆ ಎಂಥಾ ಅದ್ಭುತ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ನಿದರ್ಶನ. ಆದರೆ ರವಿ ಹಂಜ್ ಎನ್ನುವ ಮೇಧಾವಿಯವರಿಗೆ ಬಸವಣ್ಣನವರ ವಚನಗಳು ಮತ್ತು ಅವರ ತತ್ವ ಸಿದ್ಧಾಂತಗಳು ವಿರೋಧಾಭಾಸವಾಗಿ ಕಾಣುತ್ತವೆ. ಇದಕ್ಕೆ ಅವರು ಪಡೆದುಕೊಂಡ ಸಂಸ್ಕಾರ, ಸಂಸ್ಕೃತಿ ಮತ್ತು ವಿದ್ಯಾಭ್ಯಾಸ ಕಾರಣವಾಗಿರಬಹುದು. ಅವರು ತಮ್ಮ Facebook ನ wall ನಲ್ಲಿ ಬರೆದ ಈ ಲೇಖನ ಅವರು ಪಡೆದುಕೊಂಡ ಸಂಸ್ಕಾರ, ಸಂಸ್ಕೃತಿ ಮತ್ತು ವಿದ್ಯಾಭ್ಯಾಸಕ್ಕೆ ಸಾಕ್ಷಿಯಾಗಬಹುದು. ಯಾಕಂದರೆ ಈ ಲೇಖನದಲ್ಲಿ ಬಳಸಿರುವ ಭಾಷೆ ಯಾವ ಮಟ್ಟದಲ್ಲಿದೆ ಎನ್ನವುದನ್ನು ಪ್ರಾಜ್ಞರು ಗಮನಿಸಬೇಕು.
https://www.facebook.com/share/p/1Bj9FzRzoX
ಇದೇ ಪೇಜ್ ನಂಬರ 2 ರ ಪ್ಯಾರಾ ಎರಡರಲ್ಲಿ ಭಾರತದ ಟಾಟಾ, ಇನ್ಫೋಸಿಸ್, ಮತ್ತಿತರ ಕಂಪನಿಗಳನ್ನು Non-Productive ಎನ್ನುವ ರೀತಿಯಲ್ಲಿ ಶಬ್ದ ಪ್ರಯೋಗ ಮಾಡಲಾಗಿದೆ. ಮೂರನೇಯ ಪ್ಯಾರಾದಲ್ಲಿ “ತಲೆಗುತ್ತಿಗೆ” ಎನ್ನುವ ಅಸಂವೈಧಾನಿಕ ಶಬ್ದ ಪ್ರಯೋಗವನ್ನು ಮಾಡಿ ಭಾರತೀಯ ತಂತ್ರಜ್ಞರನ್ನು ಕುರಿತು ಕೀಳು ಮಟ್ಟದ ಭಾಷಾ ಪ್ರಯೋಗದಿಂದ ಹೀಯಾಳಿಸಲಾಗಿದೆ. ಶ್ರೀಮಾನ್ ರವಿ ಹಂಜ್ ಅವರು ಒಬ್ಬ ಅನಿವಾಸಿ ಭಾರತೀಯರಾಗಿ ಹಾಗೂ ಸ್ವತಃ ಒಬ್ಬ ತಂತ್ರಜ್ಞರಾಗಿ ಅಮೇರಿಕಾದಂಥ ದೇಶದಲ್ಲಿ ಭಾರತೀಯ ತಂತ್ರಜ್ಞರ ಮಾನವನ್ನು ಹರಾಜು ಹಾಕುತ್ತಿರುವುದು ಎಷ್ಟು ಸರಿ ಎನ್ನುವುದನ್ನು Software Engineers ಗಳು ಕೇಳುತ್ತಿದ್ದಾರೆ.
ಮೂರನೇಯ ಪ್ಯಾರಾದಲ್ಲಿ ಭಾರತದ ಆಟೋಟ, ಲಲಿತಕಲೆ, ಭಾಷಾವಿಜ್ಞಾನ ಮುಂತಾದ ವಿಷಯಗಳಲ್ಲಿ ಪರಿಣಿತಿಯನ್ನು ಸಾಧಿಸಿಲ್ಲ ಎಂದು ಹೇಳುವುದರ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರನ್ನು ಅವಮಾನ ಮಾಡಿದ್ದು ಅಕ್ಷಮ್ಯ ಅಪರಾಧ. ಸ್ವಾತಂತ್ರ್ಯಾನಂತರ ಬಾರತವು ಸಾಧಿಸಿದ್ದು ಏನೂ ಇಲ್ಲ ಎನ್ನುವುದನ್ನು ಅಮೇರಿಕಾದಲ್ಲಿ ಕುಳಿತು ಬರೆಯುವುದನ್ನು ಪ್ರಶ್ನೆ ಮಾಡುತ್ತಿದ್ದಾರೆ ಕನ್ನಡಿಗರು. ಹೋಗಲಿ ನೀವು ಯಾವ ಆಟ-ಪಾಠಗಳಲ್ಲಿ ವಿಶ್ವದಾದ್ಯಂತ ಹೆಸರು ಮಾಡಿದ್ದೀರಿ. ಕೈಲಾಗದವ ಮೈ ಪರಚಿಗೊಂಡಾ ಅನ್ನುವ ಹಾಗಿದೆ ನಿಮ್ಮ ತರ್ಕ. ನಾಚಿಕೆ ಆಗಬೇಕು ನಿಮ್ಮ ಜನ್ಮಕ್ಕೆ. ಇಂಥ ದೇಶ ದ್ರೋಹದ ಭಾಷಾ ಪ್ರಯೋಗವನ್ನು ಕಂಡು ವಿದೇಶಿಗರು ಭಾರತೀಯರನ್ನು ಯಾವ ಕೀಳು ಮಟ್ಟದಲ್ಲಿ ನೋಡುತ್ತಾರೆ ಎನ್ನುವ ಕನಿಷ್ಠ ಜ್ಞಾನವಾದರೂ ನಿಮಗಿದೆಯೇ. ಇಂಥ ದುರಿತ ಆಲೋಚನೆಗಳು ಬರುವುದಾರೂ ಏಕೆ ಎನ್ನುವುದು Million Dollar Question.
ಇಷ್ಟೆಲ್ಲಾ ಭಾರತೀಯ ವಿಜ್ಞಾನ ತಂತ್ರಜ್ಞಾನ ಕುರಿತು ಅಪಸವ್ಯಗಳನ್ನು ನುಡಿಯುವ ಈ ಕಮಂಗಿ ಎಂದಾದರೂ ಭಾರತೀಯ ವಿಜ್ಞಾನ ತಂತ್ರಜ್ಞಾನ ಕುರಿತು ಚಿಂತನೆ ಮಾಡಿದ್ದಾನೆಯೆ? ಹೋಗಲಿ Space Satellite Launching Engine ನ Cryogenic Engine Development ಕುರಿತು ಈತನಿಗೆ ಮಾಹಿತಿ ಇದೆಯೇ? Forging Technology ಯಲ್ಲಿನ Thixo Forging Technology Development ಬಗ್ಗೆ ಜ್ಞಾನ ಇದೆಯೇ? ಊಹೂಂ, No Chance. ಈತನ Facebook Post ಗಳನ್ನು ಅವಲೋಕಿಸಿದರೆ ಸದಾ ಮಾನಿನಿ-ಮದಿರೆ-ಮಾಂಸದ ಗುಂಗಿನಲ್ಲಿಯೇ ಇರುವ ಈತನಿಗೆ ಈ ಬುದ್ಧಿ ಎಲ್ಲಿಂದ ಬಂದೀತು? ಆ ಹಗೆದಿಬ್ಬೇಶ್ವರನೇ ಹೇಳಬೇಕು.
ಇದಿಷ್ಟು ಆರಂಭ ಎನ್ನುವ ಅಧ್ಯಾಯದ ಅರ್ಧಸತ್ಯದ ಅನಾವರಣ.
ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಇಂಗ್ಲೀಷ್ ಶಾಲೆಯ ಹತ್ತಿರ
ಸುಭಾಷ್ ನಗರ, ಕ್ಯಾತ್ಸಂದ್ರ
ತುಮಕೂರು – 572 104
ಮೋ. ನಂ: +91 9741 357 132.
ಈ-ಮೇಲ್: vijikammar@gmail.com
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in
ಸಹಾಯಕ ಗ್ರಂಥಗಳು:
• Christianity Contrasted with Hindu Philosophy: James R Ballantyne.
• ಸಂಸ್ಕೃತಿ ಕಥನ: ಸಂ. ಶ್ರೀ. ಅಗ್ರಹಾರ ಕೃಷ್ಣಮೂರ್ತಿ.
• ಯುಗಯಾತ್ರೀ ಭಾರತೀಯ ಸಂಸ್ಕೃತಿ: ಸಂ. ಡಾ. ಹರಿದಾಸ ಭಟ್ಟಾಚಾರ್ಯ.
• ವಚನಗಳಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕತೆ: ಗೌ. ಸಂ. ಡಾ. ಕೆ. ಬಿ. ಗುಡಸಿ.
• ಪ್ರಾಚೀನ ಭಾರತದಲ್ಲಿ ಲೋಹ ತಂತ್ರಜ್ಞಾನ : ಕೆ. ನಾಗೇಶರಾವ್, ಟಿ. ಆರ್ ಅನಂತರಾಮು.
• The origins of iron-working in India: Rakesh Tewari.
• The Tao of Physics : Dr. Fritjof Capra.