
ಶರಣರ ವಚನಗಳು ವಿಜ್ಞಾನಿಗಳ ದ್ವಂದಗಳನ್ನು ನಿವಾರಿಸಬಹುದಾದ ಮಾರ್ಗದರ್ಶಕ ಸೂತ್ರಗಳು-6
ಅನಾದಿ ಮತ್ತು ಆದಿ – ಶಕ್ತಿಕ್ಷೇತ್ರಗಳು (Fields)
ಅಲ್ಲಮಪ್ರಭುದೇವರ ವಚನ
ಸತ್ಯವೂ ಇಲ್ಲ, ಅಸತ್ಯವೂ ಇಲ್ಲ, ಸಹಜವೂ ಇಲ್ಲ, ಅಸಹಜವೂ ಇಲ್ಲ, ನಾನೂ ಇಲ್ಲ, ನೀನೂ ಇಲ್ಲ. `ಇಲ್ಲ’ `ಇಲ್ಲ’ ಎಂಬುದು ತಾನಿಲ್ಲ ಗುಹೇಶ್ವರನೆಂಬುದು ತಾ ಬಯಲು!
ಕಡಕೋಳ ಮಡಿವಾಳಪ್ಪನವರ ವಚನಭಾಗ
- ಆ ಪರಶಿವನ ನಿಜಸ್ವರೂಪವೇ ಬ್ರಹ್ಮಾಂಡವಾಗಿ, ಪಿಂಡಾಂಡವಾಗಿ, ಕರಣಂಗಳಾಗಿ, ಕರ್ಮಂಗಳಾಗಿ,
ಸೃಷ್ಟಿ ಸ್ಥಿತಿ ಲಯಂಗಳಾಗಿ, ನೋವು ಸಾವುಗಳಾಗಿ,
ತಾನೇ ಇದ್ದದ್ದು, ಸರ್ವವು ತಾನೆಂಬುದು ತಾನೇ ಮರೆತು,
——-
ಆ ಬಯಲಿಗೆ ಸಾವು ಇಲ್ಲವು.
ತಾವು ಮಾಡಿದರೆ ಆಗುವುದೆ ? ತಾನೇ ಆಗಲರಿಯದು.
ಎಷ್ಟು ನಿಜ ತಿಳಿದರೇನೋ ? ಅಷ್ಟು ತಾವಾಗದೇ, ಭ್ರಷ್ಟರಾಗಿ ಹೋದರೋ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ. - ಆ ಪರಶಿವನ ನಿರ್ಬಯಲವೇ ಮಹಾಬಯಲು, ಚಿದ್ಬಯಲು, ಬಯಲು ಮೂರಾದರೂ ಒಂದೇ.
ಚಿನ್ನಾದ ಚಿದ್ಬಿಂದು ಚಿತ್ಕಳೆ, ನಾದ, ಬಿಂದು, ಕಳೆ ಆರಾದರೂ ಒಂದೇ.
ಆರು ಮೂರು ಒಂಬತ್ತಾದರೂ ಒಂದೇ.
ಒಂದು ಒಂಬತ್ತಾಗಿ, ಆ ನಿರ್ಬಯಲು ತಾನೆ ಹಲವಾಗಿತ್ತು.
ಈ ಹಲವಾದರೂ ನಿರ್ಬೈಲೊಂದೇ, ಒಂದೇ ಎಂದರೆ ಒಂದೂ ಇಲ್ಲಾ.
ನಿರ್ಬೈಲಿಗೆ ನಾಮ ಉಂಟೇ ? ರೂಪ ಉಂಟೇ ? ಕ್ರೀಯ ಉಂಟೇ ?
ನಿರ್ಬೈಲೇ ನಿರ್ಬೈಲೆಂಬುದು ಇದು ಎಲ್ಲಿ ಇದೇ ನಿರ್ಬೈಲು.
ಮತ್ತೆ ತಾ ನಿರ್ಬೈಲ ರೂಪಾದರೂ, ಆ ರೂಪ ತಾ ನಿರ್ಬೈಲಲ್ಲವೇ ?
ಇದ್ದದ್ದು ತಾನೇ ಇಲ್ಲದ್ದು ತಾನೇ, ಹ್ಯಾಂಗಾದರೂ ತಾನೇ ನಿರ್ಬೈಲು.
ಸುಳ್ಳು ಸುಳ್ಳೆಂದು ಸುಳ್ಳು ಜೊಳ್ಳಾದರೋ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
ಈ ವಚನಗಳು ಆಧ್ಯಾತ್ಮಿಕ ಅಥವಾ ಧಾರ್ಮಿಕ ವಿಚಾರಗಳನ್ನು ಮಾತ್ರ ಅಲ್ಲ ವೈಜ್ಞಾನಿಕ ತತ್ವಗಳ ವಿವರಣೆ ಕೊಡುತ್ತವೆ ಎನ್ನುವದನ್ನು ವಿಜ್ಞಾನಿಗಳು ಖಚಿತಪಡಿಸುವ ಹಂತದಲ್ಲಿದ್ದಾರೆ. ವಿಜ್ಞಾನಿಗಳು ಪ್ರಸ್ತುತಪಡಿಸಿದ “ಕ್ಷೇತ್ರ” (“Field”) ದ ವಿವರಗಳು ಈ ಮತನ್ನು ಧೃಡಪಡಿಸುತ್ತವೆ.
“ಕ್ಷೇತ್ರ” (“Field”)
ಪ್ರಥಮ ಹಂತದಲ್ಲಿ “field” “ಕ್ಷೇತ್ರ” ಎಂದರೇನು ಎಂದು ಅರಿಯುವ ಅವಶ್ಯಕತೆ ಇದೆ. “ಕ್ಷೇತ್ರ” ಎನ್ನುವ ಪದದ ಹಿಂದೆ ಅದು ಯಾವ “ಶಕ್ತಿ” ಗೆ ಸಂಬಂದಿಸಿದೆ ಎಂದಾಗ ಪೂರ್ಣ ಅರ್ಥ ಸಿಗುತ್ತದೆ. ವಚನಗಳಲ್ಲಿ “ಬಯಲು”, “ಭಾವ” ಅಥವಾ “ಮಾಯೆ” ಎನ್ನುವ ಪರ್ಯಾಯ ಪದ ಬಳಕೆಯಾಗಿರುವದು ಕಂಡುಬರುತ್ತದೆ.
ಜಕ್ಕಣಯ್ಯ ವಚನ:
- ಬಯಲೆ ಅಂಗವಾಗಿ, ನಿರ್ವಯಲೆ ಲಿಂಗವಾಗಿ, ಭಾವಕೆ ಸಂಬಂಧವಾಯಿತ್ತು ನೋಡಾ.
ಬಯಲಿಂದ ಅಂಗವಿಲ್ಲದೆ, ನಿರ್ವಯಲೆಂಬ ಲಿಂಗವು ನಿಶ್ಶಬ್ದವಾಗಿ,
ಭಾವಕ್ಕೆ ಬೆರಗಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
2. ಉರಿಯೊಳಗಣ ಪ್ರಕಾಶದಂತೆ, ಮೊಗ್ಗೆಯೊಳಗಣ ಪರಿಮಳದಂತೆ
ಕ್ಷೀರದೊಳಗಣ ಘೃತದಂತೆ, ಭಾವದೊಳಗಣ ನಿರ್ ಭಾವದಂತೆ
ಶಬ್ದದೊಳಗಣ ನಿಶ್ಶಬ್ದದಂತೆ ಝೇಂಕಾರ ನಿಜಲಿಂಗಪ್ರಭುವೆ ನಿಮ್ಮ ಶರಣನ ಅನಾದಿಯ ಅರಿವು.
ಪ್ರತಿ “ಶಕ್ತಿ” ಗೆ ತನ್ನದೇ ಆದ “ಕ್ಷೇತ್ರ” ಇರುತ್ತದೆ. ಉದಾಹರಣೆಗೆ “ಕಾಂತ ಶಕ್ತಿ” (magnetic force) ಗೆ “ಕಾಂತೀಯ ಕ್ಷೇತ್ರ” (magnetic field) ಇರುತ್ತದೆ.
ಕೆಳಗಿನ ಚಿತ್ರ “ಕಾಂತೀಯ ಕ್ಷೇತ್ರ” ದ ವಿವರ ಕೊಡುತ್ತದೆ

ಒಂದು ಕಾಂತ ಪಟ್ಟಿಯನ್ನು ಹಾಳೆಯ ಕೆಳಗಿಟ್ಟು ಹಾಳೆಯ ಮೇಲೆ ಕಬ್ಬಿಣದ ಪುಡಿ ಉದುರಿಸಿದಾಗ ಆ ಕಬ್ಬಿಣದ ಕಣಗಳು ಒಂದು ನಿರ್ಧಿಷ್ಟ ರೀತಿಯಲ್ಲಿ ಚಲಿಸಿ ವಕ್ರ ಗೆರೆಗಳಾಗಿ ರೂಪಗೊಂಡಿರುವದು ಕಾಣುತ್ತದೆ. ಅದು ಕ್ಷೇತ್ರದ ಇರುವನ್ನು ಮತ್ತು ಅದು ವರ್ತಿಸುವ ಪರಿಯನ್ನು ತಿಳಿಸುತ್ತದೆ.
ಕ್ರಿ ಶ 1687 ರಲ್ಲಿ ”ಕ್ಷೇತ್ರ” ದ ವಿವರ ಕೊಡದೇ ವಿಜ್ಞಾನಿ ನ್ಯೂಟನ್ “Principia Mathematica” ಎಂಬ ಪುಸ್ತಕದಲ್ಲಿ ಗುರುತ್ವ ಶಕ್ತಿಯ ಬಗ್ಗೆ ಅನೇಕ ವಿವರ ಒದಗಿಸಿದರು. ಅವರಂದು ಕೊಟ್ಟ ಗುರುತ್ವ ನಿಯಮಗಳು ಅಜರಾಮರವಾಗಿ ಉಳಿದಿವೆ.
ನ್ಯೂಟನ್ ಗುರುತ್ವಾಕರ್ಷಣ ನಿಯಮ (Newton’s universal law of gravitation):
ವಿಶ್ವದಲ್ಲಿನ ಪ್ರತಿಯೊಂದು ವಸ್ತುವಿನ ಕಣವು ಪ್ರತಿ ಕಣವನ್ನು ಕಣಗಳ ದ್ರವ್ಯರಾಶಿಯ ಉತ್ಪನ್ನಕ್ಕೆ ನೇರವಾಗಿ ಅನುಪಾತದಲ್ಲಿರುತ್ತದೆ ಮತ್ತು ಅವುಗಳ ನಡುವಿನ ಅಂತರದ ಚೌಕಕೆ ಅನುಗುಣವಾಗಿ ಪ್ರತೀ ಕಣವನ್ನು ಆಕರ್ಷಿಸುತ್ತದೆ. (FG = Gm 1 m 2 / r 2 )
ಅವರು ಸಾದರಪಡಿಸಿದ ತತ್ವ “action at a distance“
— its effects on faraway objects are instantaneous, no matter the distance. ಯಾವುದೇ ಸಂವಾಹವಿಲ್ಲದೇ ದ್ರವ್ಯದ ಮೇಲೆ ಗುರುತ್ವ ಶಕ್ತಿ ಅದು ಹೇಗೆ ಸಂಪರ್ಕ ಸಾಧಿಸುತ್ತದೆ?ಎನ್ನುವ ಪ್ರಶ್ನೆಗೆ ಉತ್ತರ ಕಂಡುಹಿಡಿಯುವ ಪ್ರಯತ್ನ ಶತಮಾನಗಳ ಕಾಲ ನಡೆಯಿತು.
1845 ರಲ್ಲಿ Michael Faraday “ಕಾಂತೀಯ ಕ್ಷೇತ್ರ” “Magnetic field” ಎಂಬ ಶಬ್ದ ಸಂಯೋಜಿಸಿ ಹೊಸ ವಿಷಯಕ್ಕೆ ನಾಂದಿ ಹಾಕಿದರು.
“action at a distance” ಎನ್ನುವದನ್ನು ನಿರಾಕರಿಸಿ ಅವಕಾಶವನ್ನು ಆವರಿಸಿರುವ ಶಕ್ತಿ ರೇಖೆಗಳ ವರ್ತನೆಯು ಇದಕ್ಕೆ ಕಾರಣ ಎನ್ನುವ ವಾದ ಮಂಡಿಸಿದನು. ವಿದ್ಯುತ್, ಕಾಂತ ಮತ್ತು ಗುರುತ್ವ ಶಕ್ತಿಗಳ ವಿವರಣೆ ಕ್ಷೇತ್ರ ಮತ್ತು ಕ್ಶೇತ್ರೀಯ ರೇಖೆಗಳಿಂದ ಸುಲಭ ಸಾಧ್ಯ ಎಂದು ನಿರೂಪಿಸಿದರು. “ಕ್ಶೇತ್ರ” ಇದು ಗಣಿತದ ವಿವರಣೆ ಅಷ್ಟೇ ಅಲ್ಲ ಅದು ಬೌತಿಕವಾದ ವಸ್ತು ಎಂದು ವಿವರಿಸಿದರು.
(He introduced fields as properties of space (even when it is devoid of matter) having physical effects.
He argued against “action at a distance”, and proposed that interactions between objects occur via space-filling “lines of force”. This description of fields remains to this day)
ಸರಳವಾಗಿ ಹೇಳುವದಾದರೆ ಕಣದ ಚೈತನ್ಯವಿರುವ ವೇಳೆ ಅವಕಾಶ ದಲ್ಲಿ ಇರುವ ಭಾಗವೇ ಕ್ಷೇತ್ರ. ಕ್ಷೇತ್ರದ ವೈಜ್ಞಾನಿಕ ವಿವರಣೆ
“A field is a physical quantity defined at every point in space and time. We have not seen nor heard nor felt quantum fields. Our knowledge of them is limited to mathematical equations which describe the fields and predict the results of experiments in the quantum world.”
ಶರಣರ ವಚನಗಳಲ್ಲಿ ಕ್ಷೇತ್ರದ ಬಗ್ಗೆ ವಿವರವಾದ ಉಲ್ಲೇಖಗಳಿವೆ. ಕ್ಶೇತ್ರ ಪದ ಬಳಕೆ ಮಾಡಿಲ್ಲವಾದರೂ ಅವರು ಆ ಪದದ ಅರ್ಥವನ್ನೇ ಕೊಟ್ಟಿದ್ದಾರೆ ಎನ್ನುವದು ಗೊತ್ತಾಗುತ್ತದೆ.
ಉದಾಹರಣೆಗೆ
ಗುಪ್ತ ಮಂಚಣ್ಣವರ ವಚನಭಾಗ:
ಮರುಳನ ಊಟದಂತೆ, ಮಯೂರನ ನಿದ್ರೆಯಂತೆ, ಮಾರ್ತಾಂಡನ ಕಿರಣದಂತೆ,
ಸ್ಪಟಿಕದ ಘಟದಂತೆ, ಕಟಕದಲ್ಲಿ ತೋರುವ ಅಸಿಯ ರಸೆಯಂತೆ,
ಹೊದ್ದಿಯೂ ಹೊದ್ದದಂತೆ, ಇದ್ದೂ ಇಲ್ಲದಂತೆ, ಕಂಡೂ ಕಾಣದಂತೆ ಕೇಳಿಯೂ ಕೇಳದಂತೆ,
ಇಪ್ಪ ಸುಳಿವ ಮೂರ್ತಿ ——–
ಈ ವಿವರಣೆ ವಿಜ್ಞಾನಿಗಳ ವಿವರಣೆಗಿಂತ ನಿಖರವಾಗಿದೆ.
ಅಲ್ಲಮಪ್ರಭು ಅವರ ವಚನಭಾಗ:
ಏನೂ ಏನೂ ಇಲ್ಲದ ಬಯಲೊಳಗೊಂದು ಬಗೆಗೊಳಗಾದ ಬಣ್ಣ ತಲೆದೋರಿತ್ತು.
ಆ ಬಣ್ಣವು ಆ ಬಯಲ ಶೃಂಗರಿಸಲು ಬಯಲು ಸ್ವರೂಪಗೊಂಡಿತ್ತು.-——
ಕ್ಷೇತ್ರದ ವ್ಯಾಪ್ತಿ:
In physics, a field is a physical quantity, represented by a number or tensor, that has a value for each point in space-time.
ಯವುದೇ ಶಕ್ತಿ ಕ್ಶೇತ್ರದ ವ್ಯಾಪ್ತಿ ಅನಂತ ವಿಶ್ವವನ್ನು ವ್ಯಾಪಿಸಿದೆ. ಈ ವಿವರವನ್ನು ಶರಣರ ವಚನಗಳಲ್ಲಿ ಕಾಣಬಹುದು.
ಅಕ್ಕಮಹಾದೇವಿಯವರ ವಚನಭಾಗ:
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ
ಅಗಮ್ಯ ಅಗೋಚರ ———
1905 ರಲ್ಲಿ ವಿಜ್ಞಾನಿ Albert Einstein ಅವರು ಬೆಳಕು photon ಎನ್ನುವ ಶಕ್ತಿ ಕಣಗಳಿಂದಾಗಿದೆ ಎನ್ನುವದನ್ನು ವಿವರಿಸಿದರು. ಇಲ್ಲಿರುವ ಅತೀ ಸಣ್ಣ ಸಣ್ಣ ಕಣಗಳ ಅಲ್ಪ ಗಾತ್ರದಷ್ಟಿರುವ ವಸ್ತುಗಳ ಅಧ್ಯಯನ ಮಾಡಲು ಹೊಸ ವಿಷಯ Quantum theory ಉದಯವಾಯಿತು.
ಕ್ರಿ ಶ 1927 Paul Dirac ಎಂಬ ವಿಜ್ಞಾನಿ QED (Quantum electrodynamics) ಎನ್ನುವ ಹೊಸ ವಿಷಯಕ್ಕೆ ನಾಂದಿ ಹಾಕಿದ.
ಈ ವಿಷಯದಲ್ಲಿ ಗಣಿತದ ತತ್ವಗಳನ್ನು ಉಪಯೋಗಿಸಿ ಬೆಳಕು ಮತ್ತು ಕಣಗಳೊಡನೆ ನಡೆಯುವ (Interaction) ಪರಸ್ಪರ ಕ್ರಿಯೆ ಗಳ ಅಧ್ಯಯನ ಮಾಡಿದ.
1918 ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ Max Planck ಅವರ ಸಂಶೋಧನೆಗಳು ಹೊಸ ದಾರಿ ತೋರಿಸಿದವು.
According to Planck’s quantum theory, Different atoms and molecules can emit or absorb energy in discrete quantities only. The smallest amount of energy that can be emitted or absorbed in the form of electromagnetic radiation is known as quantum.
ಈ ಎಲ್ಲ ವಿಚಾರಗಳಿಗೆ ಪೂರಕವಾಗಿ (QFT ) Quantum field theory ಅನೇಕ ಹೊಸ ವಿಚಾರಗಳ ಸಂಶೋಧಿಸಲು ಸಹಕಾರಿಯಾಯಿತು. ಕ್ವಾಂಟಮ್ ಮೆಕ್ಯಾನಿಕ್ಸ್ ಮತ್ತು ಸಾಪೇಕ್ಷ ಸಿದ್ಧಾಂತದ ತತ್ವಗಳನ್ನು ಒಳ್ಗೊಂಡಿರುವ ತತ್ವವೇ “ಕ್ಷೇತ್ರ ಸಿದ್ಧಾಂತ”.
1928 – 1930 ಅವಧಿಯಲ್ಲಿ ಖ್ಯಾತ ವಿಜ್ಞಾನಿಗಳಾದ Jordan, Eugene, Heisenberg ಮತ್ತು Enrico Fermi ಅವರ ಸಂಶೋಧನೆಗಳು ಕಣಗಳು ಕ್ಷೇತ್ರದ ಉನ್ಮಾದದಿಂದ ಉಂಟಾಗುತ್ತವೆ
“Material particles could also be seen as excited states of quantum fields” ಎನ್ನುವದನ್ನು ಧೃಡಪಡಿಸಿದರು.

ವಿಶ್ವ ರಚನೆಯ ಎಲ್ಲ ಮೂಲಭೂತ ವಸ್ತುಗಳು ವಿಶ್ವವನ್ನೆಲ್ಲ ಆವರಿಸಿರುವ “Quantum fields” ಗಳ ಉನ್ಮಾದಗಳಿಂದ ನಿರ್ಮಾಣವಾಗಿವೆ. ಈ ಮಾತನ್ನು ಅರ್ಥಮಾಡಿಕೊಳ್ಳುವದು ಮತ್ತು ನಂಬುವದು ತುಂಬಾ ಕಠಿಣ. ನಾವು ನೋಡುವ ಸಾಕಾರ ವಸ್ತು ನಾವಂದುಕೊಂಡಂತೆ ಸಾಕಾರ ವಸ್ತುವಲ್ಲ ಅದು “Quantum fields” ಗಳ ಡೊಂಬರಾಟ ಎನ್ನುವದನ್ನು ಅಲ್ಲಮಪ್ರಭು ತಮ್ಮ ವಚನದಲ್ಲಿ ವಿವರವಾಗಿ ವಿವರಿಸಿದ್ದಾರೆ
ಅಲ್ಲಮಪ್ರಭು ವಚನ:
ಬಯಲು ಬಯಲನೆ ಬಿತ್ತಿ
ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯ
ಬಯಲು ಜೀವನ ಬಯಲು ಭಾವನೆ
ಬಯಲು ಬಯಲಾಗಿ ಬಯಲಾಯಿತ್ತಯ್ಯ
ನಿಮ್ಮಯ ಪೂಜಿಸಿದವರು ಮುನ್ನವೇ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆನು ಗುಹೇಶ್ವರಾ

The fundamental building blocks, out of which all the material universe is made, are nebulous and abstract. They are fluid-like substances, the quantum fields, which are spread throughout the entire universe and ripple in strange and interesting ways. The ripples and waves of this fluid get tied into little bundles of energy by rules of quantum mechanics, and those bundles of energy are what we call particles.
Every particle your body — indeed, every particle in the Universe — is a tiny ripple of the underlying field, moulded into a particle by the machinery of quantum mechanics.
ಈ ವಿವರಣೆ ಕೆಳಗಿನ ವಚನಭಾಗಗಳನ್ನು ಅರ್ಥಮಾಡಿಕೊಳ್ಳಲು ಹಾದಿ ತೋರಿಸಬಹುದು ಎನಿಸುತ್ತಿದೆ.
ಅಲ್ಲಮಪ್ರಭುವಿನ ವಚನಭಾಗಗಳು:
- ಸತ್ಯವೂ ಇಲ್ಲ, ಅಸತ್ಯವೂ ಇಲ್ಲ, ಸಹಜವೂ ಇಲ್ಲ, ಅಸಹಜವೂ ಇಲ್ಲ, ನಾನೂ ಇಲ್ಲ, ನೀನೂ ಇಲ್ಲ. `ಇಲ್ಲ’ `ಇಲ್ಲ’ ಎಂಬುದು ತಾನಿಲ್ಲ ಗುಹೇಶ್ವರನೆಂಬುದು ತಾ ಬಯಲು!
- ನೋಡಿದಡೆ ಮೂರ್ತಿ ಹಿಡಿದಡೆ ಬಯಲು ! ಆ ಮೂರ್ತಿಯೊಳಗದೆ ಈರೇಳು ಲೋಕದ ಪ್ರಾಣಕಳೆ. ಆ ಕಳೆಯ ಬೆಳಗು ತಾನೆ ನಮ್ಮ ಗುಹೇಶ್ವರಲಿಂಗದಲ್ಲಿ ಲೀಲಾಮೂಲದ ಪ್ರಥಮ ಭಿತ್ತಿ.
- ಅಡಿಯಾಕಾಶವೆಂಬುದಿಲ್ಲ ಕೆಳಗೆ ನಿಲಲು, ಆಧಾರ ಮೊದಲಿಂಗಿಲ್ಲ ಕಡೆಗೆ ಸಾರುವೆನೆನಲು ಊಧ್ರ್ವವಿಲ್ಲ. ನಡುವೆ ನಾನಿದ್ದಿಹೆನೆಂದಡೆ, ತನ್ನೊಡಲೊಳಗೆ ಒಡೆದು ಮೂಡಿತ್ತು ತನ್ನಂತೆ ಬಯಲು !
- ತನ್ನಲ್ಲಿ ತನ್ನ ತೋರಿ ನನ್ನಲ್ಲಿ ನನ್ನ ತೋರಿದನಾಗಿ ನಾನು ನೀನೆಂಬುದಿಲ್ಲ ನೀನು ನಾನೆಂಬುದಿಲ್ಲ, ತಾನೆ ತಾನಾದುದು. ಬಯಲು ಬಯಲು ಕೂಡಿದ ಹಾಗೆ.
- ಏನೂ ಏನೂ ಇಲ್ಲದ ಬಯಲೊಳಗೊಂದು ಬಗೆಗೊಳಗಾದ ಬಣ್ಣ ತಲೆದೋರಿತ್ತು. ಆ ಬಣ್ಣವು ಆ ಬಯಲ ಶೃಂಗರಿಸಲು, ಬಯಲು ಸ್ವರೂಪಗೊಂಡಿತ್ತು.
ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನಭಾಗ:
ಆ ನಿರೂಪು ಸ್ವರೂಪವೆರಡೂ ಬಯಲು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
- ಒಳಗೆಂದೇನು? ಹೊರಗೆಂದೇನು? ಅರುಹೆಂದೇನು? ಮರಹೆಂದೇನು? ತಾನೆಂದೇನು? ಇದಿರೆಂದೇನು? ಬರಿಯ ಬಯಲುಭ್ರಮೆಗೊಳಗಾಯಿತ್ತಲ್ಲಾ ಈ ಲೋಕ. ಒಳಗು ತಾನೆ, ಹೊರಗು ತಾನೆ. ಅರುಹು ತಾನೆ, ಮರಹು ತಾನೆ. ತೆರಹಿಲ್ಲದ ಪರಿಪೂರ್ಣ ಪರಾಪರವು ತಾನೇ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
- ಒಳಗೆ ನೋಡಿದರೆ ಒಳಗೆ ಬಯಲು. ಹೊರಗೆ ನೋಡಿದರೆ ಹೊರಗೆ ಬಯಲು ನೋಡಾ. ನೆನೆದಿಹೆನೆಂದರೆ ಮನ ಬಯಲು, ನೆನೆಸಿಕೊಂಡೆನೆಂದರೆ ನೀನಿಲ್ಲವಾಗಿ ನಾನೂ ಬಯಲು, ನೀನೂ ಬಯಲು ನೋಡಾ. ಭಾವಿಸಿಕೊಂಬ ವಸ್ತುವಿಲ್ಲವಾಗಿ ಭಾವ ಬಯಲೆಂದೆನು ನೋಡಾ. ಮರಹು ನಷ್ಟವಾಯಿತ್ತಾಗಿ ಅರುಹು ಶೂನ್ಯವಾಯಿತ್ತು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ಗಂಟೆಯಾದಾಗ ಅಲ್ಲಿದ್ದ ವಾಯುವಿನಲ್ಲಿ ಕಂಪನವುಂಟಾಗಿ ದ್ವನಿತರಂಗಗಳುಂಟಾಗುವಂತೆ ಕ್ವಾಂಟಮ್ ಕ್ಷೇತ್ರಗಳಲ್ಲಿ ಕಂಪನವುಂಟಾಗಿ ಕಣಗಳು ಹುಟ್ಟುತ್ತವೆ.
ಉದಾಹರಣೆಗೆ electron field ಕಂಪಿಸಿದಾಗ electron ಉದಯವಾಗುತ್ತದೆ.
Electromagnetic ಕ್ಷೇತ್ರಕಂಪನದಿಂದ ಫೋಟಾನ್ (Photon) ದ ಉತ್ಪತ್ತಿಯಾಗುತ್ತದೆ.
ಇದೇ ರೀತಿ ವಿಶ್ವದಲ್ಲಿರುವ ಎಲ್ಲ ಕಣಗಳು ನಿರ್ಮಾಣವಾಗುತ್ತವೆ.
Each particle corresponds to the fundamental quantum fields of the Universe all excited in a particular way, with explicit couplings to the full suite of fields.
This determines their particle properties, like: mass, electric charge, color charge, weak hypercharge, lepton number, baryon number, lepton family number and spin.

ಈಗ ಇರುವ ಮುಖ್ಯ ಪ್ರಶ್ನೆ ವಿಶ್ವವನ್ನು ನಿರ್ಮಿಸುವ ಕ್ಷೇತ್ರಗಳೆಷ್ಟು?
ಶರಣರು ತಮ್ಮ ವಚನಗಳಲ್ಲಿ 25 ಕ್ಷೇತ್ರಗಳಿವೆ ಎನ್ನುವದನ್ನು ನಿಖರವಾಗಿ ವಿವರಿಸಿದ್ದಾರೆ.
ಈ ಪ್ರಶ್ನೆಗೆ ಉತ್ತರ ಕೊಡಲು ವಿಜ್ಞಾನಿಗಳು ಸತತ ಪ್ರಯತ್ನ ಮಾಡುತ್ತಿದ್ದಾರೆ. 24 ಮೂಲಭೂತ ಪ್ರಾಥಮಿಕ ಕಣಗಳ ಕ್ಷೇತ್ರಗಳ ಅಸ್ಥಿತ್ವವನ್ನು ವಿವರಿಸಿ ಇನ್ನೊಂದು ಶಕ್ತಿ ಮತ್ತು ಆ ಶಕ್ತಿಕ್ಷೇತ್ರ ಇರಬಹುದು ಎಂದು ಊಹಿಸಿ ಅದರ ಹುಡುಕಾಟದಲ್ಲಿದ್ದಾರೆ.
ವಿಶ್ವದ ಪ್ರತಿ ಬಿಂದುವಿನಲ್ಲಿ ಅಸ್ತಿತ್ವದಲ್ಲಿರುವ 24 ಕ್ಷೇತ್ರಗಳು (Quantum fields)

Quantum field theories describe nature in terms of fields. Each field has a complementary description as the set of particles of a particular type. A force between two particles can be described either as the action of a force field generated by one particle on the other, or in terms of the exchange of virtual force carrier particles between them.
The energy of a wave in a field (for example, electromagnetic waves in the electromagnetic field) is quantized, and the quantum excitations of the field can be interpreted as particles. The Standard Model contains the following particles, each of which is an excitation of a particular field:
- Gluons, excitations of the strong gauge field.
- Photons, W bosons, and Z bosons, excitations of the electroweak gauge fields.
- Higgs bosons, excitations of one component of the Higgs field, which gives mass to fundamental particles.
In addition, composite particles such as mesons, as well as quasiparticles, can be described as excitations of an effective field.
ಇದುವರೆಗೆ ವಿಜ್ಞಾನಿಗಳು ಸಾಧಿಸಿದ್ದು ವಿಶ್ವ ಆರು ಕ್ವಾರ್ಕ್ಸ್, 6 ಲೆಪ್ಟೊನ್, ಎಂಟು ಗ್ಲುಒನ್ , ಫೊಟೊನ್, W boson, Z boson ಮತ್ತು ಹಿಗ್ಸ ಬೋಸೊನ್ ಒಟ್ಟು 24 (fields)(6+3+3+8+2+1+1) ಕ್ಶೇತ್ರಗಳಾಡುವ ಮಾಯದಾಟ.
ಶರಣರು ತಮ್ಮ ವಚನಗಳಲ್ಲಿ ಇಪ್ಪತ್ತೈದು ತತ್ವಗಳಿಂದ ವಿಶ್ವ ರಚನೆಯಾಗಿದೆ ಎಂದು ಪ್ರಸ್ತುತಪಡಿಸಿದ್ದಾರೆ.
ಉದಾಹರಣೆಗೆ
ಶಿವಯೋಗಿ ಸಿದ್ಧರಾಮೇಶ್ವರ ಅವರ ವಚನಭಾಗ:
“ಇಂತೀ ಇಪ್ಪತ್ತೈದು ಭೂತಕಾರ್ಯ ಪಂಚೀಕೃತಗಳು”
ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನಭಾಗ:
ಪಂಚಮಹಾಭೂತಂಗಳು ಪಂಚಪಂಚೀಕೃತಯನೆಯ್ದಿ
ಪಂಚವಿಂಶತಿ ಅಂಗರೂಪಾದ ಕಾಯದ ಕೀಲನು ಸ್ವಾನುಭಾವದ ನಿಷ್ಠೆಯಿಂದರಿದು
ಈ ದೇಹ ಸ್ವರೂಪವು ತಾನಲ್ಲವೆಂದು ತನ್ನ ಸ್ವರೂಪು ಪರಂಜ್ಯೋತಿಸ್ವರೂಪೆಂದು ತಿಳಿದು,
ಆ ಜ್ಯೋತಿರ್ಮಯ ಲಿಂಗಕಳೆಯೊಳಗೆ ಅಂಗಕಳೆಯ ಸಂಬಂದ್ಥಿಸಿ,
ಅಂಗಲಿಂಗಸಂಬಂಧ, ಪ್ರಾಣಲಿಂಗಸಂಬಂಧ ಮಾಡುವ ಕ್ರಮವಿದಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ನೀಲಾಂಬಿಕಾದೇವಿಯವರ ವಚನಭಾಗ:
ಆ ಪಂಚವದನವೇ ಪಂಚೀಕೃತವನೆಯ್ದಿ, ಜಗದಾದಿ ಸೃಷ್ಟಿಯನನುಮಾಡುವುದಕ್ಕೆ ಕರ್ತನಾದ ನಮ್ಮ ಬಸವಯ್ಯನು. ಆ ಸೃಷ್ಟಿಯ ಮುಖವ ಕಂಡು ಸೃಜಿಸಲು ಪುಟ್ಟಿದರು ಪಂಚಶಕ್ತಿಯರು. ಆ ಪಂಚಶಕ್ತಿಯರಿಗೆ ಪಂಚಮೂರ್ತಿಯರ ಕೈಗೊಳಿಸಿದಾತ ನಮ್ಮ ಬಸವಯ್ಯನು. ಆ ಪಂಚಮೂರ್ತಿಗಳಿಂದುತ್ಪತ್ಯವಾದ ಲೋಕವ ನೋಡಲೆಂದು, ಕೈಲಾಸವನೆ ಕಲ್ಯಾಣವ ಮಾಡಿದಾತ ನಮ್ಮ ಬಸವಯ್ಯನು ಗಮನಿಸಬಹುದು.
ಈಗ ವಿಜ್ಞಾನಿಗಳು ಇನ್ನೂ ಒಂದು ಕ್ಷೇತ್ರ್ ವಿರಬಹುದು ಎಂದು ಊಹಿಸಿ ಆ ಕ್ಷೇತ್ರದ ಹುಡುಕಾಟ ನಡೆಸಿದ್ದಾರೆ. ಅವರ ಹುಡುಕಾಟಕ್ಕೆ ವಚನಗಳಲ್ಲಿಯ ವಿವರಣೆಗಳು ಮಾರ್ಗದರ್ಶನ ನೀಡಬಲ್ಲವು.
ಈ 24 (fields) ಕ್ಶೇತ್ರಗಳು ವಿಶ್ವವನ್ನೆಲ್ಲ ವ್ಯಾಪಿಸಿದ್ದು ವಿಶ್ವದ ಪ್ರತಿ ಬಿಂದುವಿನಲ್ಲಿ ಈ 24 (fields) ಕ್ಶೇತ್ರಗಳ ಅಸ್ತಿತ್ವವಿದೆ. ಹಾಗಾಗಿ ಈ ಎಲ್ಲ 24 (fields) ಕ್ಶೇತ್ರಗಳನ್ನು ಒಟ್ಟಾಗಿ ನೋಡಿದರೆ ಹೇಗೆ ಕಾಣಿಸಬಹುದು ಎನ್ನುವ ವಿಜ್ಞಾನಿಗಳ ಕಾಲ್ಪನಿಕ ಚಿತ್ರ ಇಲ್ಲಿದೆ.

ನಿಜವಾಗಿಯೂ ಇಲ್ಲಿರುವದು 24 (fields) ಕ್ಶೇತ್ರಗಳ ಸಮೂಹ ಅಂದರೆ ಬಯಲು ಆದರೆ ನಮಗೆ ಕಾಣುವದು ಸುಂದರವಾದ ನೋಟ. ಬಣ್ಣದ ಹೂಗಳು, ಜುಳು ಜುಳು ಹರಿಯುವ ನದಿ, ಹಸಿರು ಗಿಡಗಳು, ಹಾರುವ ಹಕ್ಕಿಗಳು ಮತ್ತು ಹಕ್ಕಿಗಳ ಕಲರವ, ಬೀಸುವ ತಂಗಾಳಿ……
ಶರಣರು (SPACE TIME ) ಅವಕಾಶದ ಪ್ರತಿ ಬಿಂದುವಿನಲ್ಲಿರುವ ಎಲ್ಲ 25 (fields) ಕ್ಶೇತ್ರಗಳ ಕಾರ್ಯಗಳನ್ನು ಮಾಯದಾಟ ಅಥವಾ ಬಯಲುಭ್ರಮೆ ಎಂದು ಕರೆದಿದ್ದಾರೆ.
ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನ:
ಒಳಗೆಂದೇನು? ಹೊರಗೆಂದೇನು? ಅರುಹೆಂದೇನು? ಮರಹೆಂದೇನು? ತಾನೆಂದೇನು? ಇದಿರೆಂದೇನು? ಬರಿಯ ಬಯಲುಭ್ರಮೆಗೊಳಗಾಯಿತ್ತಲ್ಲಾ ಈ ಲೋಕ. ಒಳಗು ತಾನೆ, ಹೊರಗು ತಾನೆ. ಅರುಹು ತಾನೆ, ಮರಹು ತಾನೆ. ತೆರಹಿಲ್ಲದ ಪರಿಪೂರ್ಣ ಪರಾಪರವು ತಾನೇ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ಅಲ್ಲಮಪ್ರಭುದೇವರ ವಚನ:
ಸತ್ಯವೂ ಇಲ್ಲ, ಅಸತ್ಯವೂ ಇಲ್ಲ, ಸಹಜವೂ ಇಲ್ಲ, ಅಸಹಜವೂ ಇಲ್ಲ, ನಾನೂ ಇಲ್ಲ, ನೀನೂ ಇಲ್ಲ. `ಇಲ್ಲ’ `ಇಲ್ಲ’ ಎಂಬುದು ತಾನಿಲ್ಲ ಗುಹೇಶ್ವರನೆಂಬುದು ತಾ ಬಯಲು!
ಶ್ರೀ ಗುರುಲಿಂಗಪ್ಪ ಸಜ್ಜನ,
ಬೆಂಗಳೂರು
ಮೋಬೈಲ್. ಸಂ. +91 7829674160.