ವಚನ ಸಾಹಿತ್ಯದಲ್ಲಿ ಸಂಘರ್ಷ ನಿರ್ವಹಣೆಯ ಜ್ಞಾನಶಿಸ್ತು / ಡಾ. ಶೀಲಾದೇವಿ ಮಳಿಮಠ.

Research Article Main Topic: ವಚನ ಸಾಹಿತ್ಯದಲ್ಲಿ ಸಂಘರ್ಷ ನಿರ್ವಹಣೆಯ ಜ್ಞಾನಶಿಸ್ತು

Specialization Topic: ವಿಶೇಷ ವಿಷಯ: “ಕಾಳವ್ವೆ ವಚನಗಳು – ಸಾಹಿತ್ಯ ಸಂವೇದನೆ ಮತ್ತು ಸಾಮಾಜಿಕ ವೇದನೆ – ಸಂಘರ್ಷ ನಿರ್ವಹಣೆಯ ಜ್ಞಾನಶಿಸ್ತು.

ಅರ್ಥಪ್ರಾಣಭಿಮಾನದ ಮೇಲೆ ಬಂದಡೂ ಬರಲಿ,
ವೃತಹೀನನ ನೆರೆಯಲಾಗದು.
ನೋಡಲು ನುಡಿಸಲು ಎಂತೂ ಆಗದು.
ಹರಹರಾ, ಪಾಪವಶದಿಂದ ನೋಡಿದಡೆ,
ರುದ್ರಜಪ ಮಾಹೇಶ್ವರಾರಾಧನೆಯ ಮಾಳ್ಪುದು.
ಇಂತಲ್ಲದವರ ಉರಿಲಿಂಗಪೆದ್ದಿಗಳರಸ‌ ನಕ್ಕು ಕಳೆವನವ್ವಾ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-868 / ವಚನ ಸಂಖ್ಯೆ-729)

ವೃತ ಹೋದಾಗಳೆ ಇಷ್ಟಲಿಂಗದ ಕಳೆ ನಷ್ಟವವ್ವಾ,
ಅವರು ಲಿಂಗವಿದ್ದೂ ಭವಿಗಳು.
ಅದು ಹೇಗೆಂದಡೆ ಪ್ರಾಣವಿಲ್ಲದ ದೇಹದಂತೆ.
ಉರಿಲಿಂಗಪೆದ್ದಿಗಳರಸ ಬಲ್ಲನೊಲ್ಲನವ್ವಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-869 / ವಚನ ಸಂಖ್ಯೆ-740)

ಪ್ರಬಂಧದ ಸಾರಲೇಖ (ABSTRACT):

ಭಾಗ್ಯವುಳ್ಳ ಪರುಷಂಗೆ ಕಾಮಧೇನು,
ಕಾಮಿಸಿದುದನೀವುದಯ್ಯಾ.
ನಿರ್ಭಾಗ್ಯ‌ ಪರುಷಂಗೆ ಕಾಮಧೇನು,
ತುಡುಗಣಿಯಾಗಿ ತೋರುವುದಯ್ಯಾ.
ಸತ್ಯಪುರುಷಂಗೆ ಕಲ್ಪವೃಕ್ಷ,
ಕಲ್ಪಸಿದುದನೀವುದಯ್ಯಾ.
ಅಸತ್ಯ ಪುಸುಷಂಗೆ ಕಲ್ಪವೃಕ್ಷ,
ಬೊಬ್ಬುಳಿಯಾಗಿ ತೋರುವುದಯ್ಯಾ.
ಧರ್ಮಪುರುಷಂಗೆ ಚಿಂತಾಮಣಿ,
ಚಿಂತಿಸಿದುದನೀವುದಯ್ಯಾ.
ಅಧರ್ಮಪುರುಷಂಗೆ ಚಿಂತಾಮಣಿ,
ಗಾಜಿನಮಣಿಯಾಗಿ ತೋರುವುದಯ್ಯಾ.
ಶ್ರೀಗುರು ಕಾರುಣ್ಯವುಳ್ಳ ಸದ್ಭಕ್ತಂಗೆ,
ಜಂಗಮಲಿಂಗವಾಗಿ ತೋರುವುದಯ್ಯಾ.
ಭಕ್ತನಲ್ಲದ ಪಾಪಿಷ್ಠಂಗೆ ಜಂಗಮಲಿಂಗ,
ಮಾನವನಾಗಿ ತೋರುವುದಯ್ಯಾ.
ಉರಿಲಿಂಗಪೆದ್ದಿಗಳರಸ ಒಲ್ಲನವ್ವಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-869 / ವಚನ ಸಂಖ್ಯೆ-738)

ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:

ತುಡುಗಣಿ  : ಮೋಸಗಾರ, ಕಳ್ಳತನದಿಂದ ತಿನ್ನುವ.
ಬೊಬ್ಬುಳಿ   : ಜಾಲಿಗಿಡ.

Conflict management is the process of limiting the negative aspects of the conflict while increasing the positive aspects of conflict. The aim of conflict management is to enhance learning and group outcomes including effectiveness or performance in organizational setting properly managed conflict can improve group outcomes.

In 12th century Vachana literature conflict management ways of managing, organizational conflict is as varied as its causes, origins and contexts themes and presentation. The purpose of conflict management whether undertaken by the parties in conflict or whether involving the intervention of an outside party is the affect the entire structure of a conflict situation so as to contain the destructive components in the conflicts process & help the parties possessing incompatible, goals to find some solution to their conflict, effective conflict management succeeds in minimizing disruption steaming from the existing of a conflict. Providing a solution that is satisfactory and acceptable we described efforts directed towards containing or limiting some aspects of behaviour as strategies of conflict settlement and efforts directed towards parties, attitudes, situations as well as behaviour as strategies of conflict resolution.

Vachanakaras are aware of these methods and techniques and know how to utilize them effectively. All Vachanakaras, however simple or complex, possess of range of mechanisms or procedures for managing conflict. These are built into the Vachana structure and development of conflict. Success or effectiveness of such procedures can be gauged by the extent to which they limit conflict behaviour and extent to which they help to achieve a satisfactory solution. It is the contention of this research paper that strategies of conflict avoidance conflict prevention or socialization of conflict will change or replace coercive behaviour, immediate outcome of any intervention.

Vachanakarthee Kalavve, through her vachanas, she describes the relationship between modalities of conflict management and conflict outcomes and give some directions for managing organizational and socialization conflict. There are many types of conflict management my research paper specialisation is organisation conflict in this conflict two methods are there:

  1. Intra-organizational Conflict Management,
  2. Inter-organizational Conflict Management

Research article deal with intra and inter organizational conflict management in Kallavve’s vachanas.

Key Words: Conflict management, intra, inter organizational conflict management vachana, Kallavve, sensitivity and socialization

Aims and objectives: research methodology, analysis, findings, conclusion.

Reference: Internet, Wikipedia, Vachana Samagra Samputa – 5

ಪೀಠಿಕೆ:

12 ನೇ ಶತಮಾನದ ಸಮಾಜ ಸ್ಥಿತ್ಯಂತರಕ್ಕೆ ಒಳಪಟ್ಟ ಸಮಾಜ. ಮತಪಂಥಗಳು, ಮತಾಂತರಗಳು ಜನರ ಮನಸ್ಸಿನಲ್ಲಿ ದಿಙ್ಮೂಢತೆಯನ್ನು ಮೂಡಿಸುವ ಕಾಲ, ವರ್ಣಾಶ್ರಮದ ಕಟ್ಟುಪಾಡುಗಳು, ರಾಜಕೀಯದಲ್ಲಿದ್ದ ಅಸ್ಥಿರತೆ‌ ಇಂತಹ ಸಂದಿಗ್ಧ ಸಂಕ್ರಮಣಾವಸ್ಥೆಯ ಮಾಣಸಿಕ ಸಂಘರ್ಷವನ್ನು ಧೃಢೀಕರಿಸುವಂತಹ ನಿರ್ವಹಣಾಗಾರರ ಅವಶ್ಯಕತೆ ಇತ್ತು. ಅಂದಿನ Negative Aspects ಗಳನ್ನು Positive Aspects ಗಳನ್ನು ಮೂಲ ಸಂಘರ್ಷಗಳನ್ನು ಹೋಗಲಾಡಿಸುವ Management ನ ಅನಿವಾರ್ಯತೆ ಇತ್ತು. Conflict Management ವ್ಯಾಖ್ಯಾನಿಸುವಂತೆ:

The aim of conflict management is to enhance learning and group outcomes including effectiveness or performance in organizational setting.

ಸಂಘರ್ಷ ನಿರ್ವಹಣೆಯಲ್ಲಿ ತಾನು ಕಲಿತ ಹಾಗೂ ತನ್ನಿಂದ ಕಲಿಕೆಯನ್ನು ಪ್ರಖರಗೊಳಿಸುತ್ತಾ, ಅಂದಿನ ಸಮಾಜದಲ್ಲಿ ಪರಿಣಾಮದಾಯಕ ಹಾಗೂ ಅಭಿವ್ಯಕ್ತಿಸುವ ಸಂಘಟನಾತ್ಮಕತೆಯು ರಚನೆಗೊಳ್ಳುವಂತೆ ಮಾಡುವ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಕಾಳವ್ವೆಯ ವಚನಗಳು ಸಾತ್ವಿಕ ಭಕ್ತಿ, ಜ್ಞಾನ, ಕರ್ಮ, ಜೀವನದ ಸಹಜತೆಗೆ ಆದ್ಯತೆ ಕೊಟ್ಟು Conflict Management ನ ಸ್ವರೂಪದಂತೆ Properly managed conflict can improve outcomes ಎನ್ನುವ ಪರಿಕಲ್ಪನೆಗೆ ತಮ್ಮನ್ನು ಇಡೀ ವ್ಯಕ್ತಿತ್ವದಲ್ಲಿ ಸಮಾವೇಶಗೊಳಿಸಿ ತಮ್ಮ ತಮ್ಮ ಅಂತರಂಗಗಳಿಂದಲೇ ಅಂದರೆ Intra Organizational Conflict Management ನಿಂದ ಸಮಾಜದಲ್ಲಿ ತೋರುವ ಕ್ರಿಯಾತ್ಮಕ ಅಭಿವ್ಯಕ್ತಿಯಲ್ಲಿ Inter Organizational Conflict Management ನ ವಿಧಾನದಿಂದ ಸಮಾಜ  ಕಣ್ತೆರೆಯುವಂತೆ ಮಾಡಿ ಸ್ವಾನುಭವದಿಂದ ಕೂಡಿದ ಜ್ಞಾನಾರ್ಜನೆಯೊಂದಿಗೆ, ಸಾಮಾಜಿಕ ಪ್ರಜ್ಞೆಯ ಆಳದೊಂದಿಗೆ ಸಂಘರ್ಷ ನಿರ್ವಹಣಾಗಾರರಾಗಿ Conflict Manager ಗಳಾಗಿ ಸಾಮಾಜಿಕ ಪ್ರಜ್ಞೆ, ಸಾಮೂಹಿಕ ಜಾಗೃತಿ, ವಚನಗಳ ವ್ಯಾಪಕ ರಚನೆ ಇವುಗಳ ಸಾಧನೆಗಳೊಂದಿಗೆ ಹದಗೆಟ್ಟ ಸಮಾಜವನ್ನು ಯೋಗ್ಯ ರೀತಿಯಲ್ಲಿ ನಡೆಯಿಸುವ ಮಾನವತೆಯನ್ನು ಎಚ್ಚರಗೊಳಿಸುವ ಪರಂಪರಾಗತ ಶುಷ್ಕ ಅರ್ಥಹೀನ ಸವಕಳಿಯ ನಡೆ-ನುಡಿಗಳನ್ನು ತಿದ್ದಿ ಸಜೀವಗೊಳಿಸುವ ಅಂಧಾನುಕರಣೆಯಲ್ಲಿ ಹರಿಯುತ್ತಿದ್ದ ಜನಮನಕ್ಕೆ ವ್ಯಕ್ತಿ ವಿಶಿಷ್ಠತೆಯ ಅರಿವು ಮೂಡಿ ಹಲವು ಸಂಘರ್ಷಗಳ ಸಮಾವೇಶಕ್ಕೆ Conflict Manager ಆಗಿ ಸಂಪ್ರದಾಯ ನಿಷ್ಠೆಯ ವಿರುದ್ಧ, ಸ್ವಾಯುತ್ತತೆಯ ವಿರುದ್ಧ ಪ್ರತಿಭಟಿಸುವ Effective Conflict Management ಗೆ ಭದ್ರ ಬುನಾದಿ ಹಾಕಿದವಳು ವಚನಕಾರ್ತಿ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ. (Intra & Inter Organizational Conflict Management).

ಅಧ್ಯಯನದ ಗುರಿ ಮತ್ತು ಉದ್ದೇಶಗಳು:

ಗುರಿ:

  1. ಕಾಳವ್ವೆಯ ವಚನಗಳು ಸಾಹಿತ್ಯ ಸಂವೇದನೆಯ ಮೂಲಕ ಸಂಘರ್ಷ ನಿರ್ವಹಣೆಗೆ ದಾರಿದೀಪವಾಗುವುದನ್ನು ಸಂಶೋಧಿಸುವುದು.
  2. ಸಾಹಿತ್ಯ ಸಂವೇದನೆ ಹಾಗೂ ಸಾಮಾಜಿಕ ವೇದನೆಯ ಸಂಘರ್ಷದಲ್ಲಿ ಕಾಳವ್ವೆಯ ವಚನಗಳು ಕೊಡುಗೆಯಾಗಿರುವುದನ್ನು ತೀರ್ಮಾನಿಸುವುದು.

ಉದ್ದೇಶ:

ಆಂತರ್ಯ, ಸಂಘರ್ಷ, ನಿರ್ವಹಣೆ ಸಮಾಜದ ಜಾಗೃತಿಗೆ ಹಾಗೂ ಅಂತರ್‌ ಸಂಘರ್ಷ ನಿರ್ವಹಣೆಯ ಪರಿಕಲ್ಪನೆಗಳು ಪರಿಣಾಮದಾಯಕ ಸಂಘರ್ಷ ನಿರ್ವಹಣೆಯಾಗಿ ಜಾಗತಿಕ ಮಹತ್ವ ಮಡೆದಿರುವುದನ್ನು ವಿಶ್ಲೇಷಿಸುವುದು.

  1. ಅಧ್ಯಯನದ ವೈಧಾನಿಕತೆ (Research Methodology)
  2. ವೀಶ್ಲೇಷಣಾತ್ಮಕ ವಿಧಾನ (Analytic Mathodology)

ಕಾಳವ್ವೆಯ ವಚನಗಳಲ್ಲಿ ಸಾಹಿತ್ಯ ಸಂವೇದನೆ ಹಾಗೂ ಸಾಮಾಜಿಕ ವೇದನೆಯ ಸಂಘರ್ಷಗಳಲ್ಲಿ ನಿರ್ವಾಹಕಳಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂಬ ಜಾಗತಿಕ ಮಹತ್ವದ ವಸ್ತು ವಿಷಯಕ್ಕೆ ವಿಶ್ಲೇಷಣಾತ್ಮಕ ವೈಧಾನಿಕತೆಯು ಅನ್ವಯವಾಗುವುದನ್ನು ಅರ್ಥೈಸಿಕೊಂಡು ವಿಶ್ಲೇಷಣಾತ್ಮಕ ಸಂಶೋಧನಾ ವಿಧಾನಗವನ್ನು ಅಳವಡಿಸಿಕೊಂಡಿರುತ್ತೇನೆ.

ಪಾರಿಭಾಷಿಕ ಪದಗಳು (Terminology):

  • Conflict Management: ಸಂಘರ್ಷ ನಿರ್ವಹಣೆ.
  • Intra Organizational Management: ತನ್ನೊಳಗಿನ ವಸ್ತು ಭಾವ ಪರಿಕಲ್ಪನೆ ನಿರ್ವಹಣೆ: ಆಂತರ್ಯ ಸಂಘಟನಾತ್ಮಕ ಸಂಘರ್ಷ ನಿರ್ವಹಣೆ.
  • Inter Organizational Management: ತನ್ನೊಳಗಿನ ಬಾಹ್ಯ ಆಯಾಮಗಳೊಂದಿಗೆ ನಿರ್ವಹಣೆ: ಸಮಾಜದ ಒಳಗುಂಪುಗಳೊಂದಿಗೆ ಸಂಗಟನಾತ್ಮಕ ಸಂಘರ್ಷ ನಿರ್ವಹಣೆ.
  • Effectiveness Conflict Management: ಪರಿಣಾಮದಾಯಕ ಸಂಘರ್ಷ ನಿರ್ವಹಣೆ: ಸಾಹಿತ್ಯ ಸಂವೇದನೆಯೊಂದಿಗೆ ಸಾಮಾಜಿಕ ವೇದನೆಗಳನ್ನು ಅರ್ಥೈಸಿಕೊಂಡು ಅದಕ್ಕೆ ತಕ್ಕ ಪರಿಹಾರೋಪಾಯಗಳನ್ನು ಒದಗಿಸುವುದು.

ಅಧ್ಯಯನದ ವಿಶ್ಲೇಷಣೆ – Analysis of the study:

ವಚನಕಾರ್ತಿ ಕಾಳವ್ವೆಯು 12 ನೇ ಶತಮಾನದ ಉರಿಲಿಂದ ಪೆದ್ದಿಗಳ ಪತ್ನಿ. ಅವಳ ಅಂಕಿತ ಉರಿಲಿಂಗ ಪೆದ್ದಿಗಳರಸ ಒಲ್ಲನವ್ವಾ. ಸಂಘರ್ಷ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿಕೊಂಡ ಮೊದಲ ಏಕೈಕ ದಲಿತ ವಚನಕಾರ್ತಿ. ಕೊರಳಿ ಮಠದ ಉರಿಲಿಂದೇವನ ಅನುಗ್ರಹದಿಂದ ಲಿಂಗದೀಕ್ಷೆ ಪಡೆದವರು. ಇಲ್ಲಿಯವರೆಗೆ ಅವರು ರಚಿಸಿದ 12 ವಚನಗಳು ದೊರೆತಿವೆ. ಆಕೆಯ ವಚನಗಳ ಸಂಘರ್ಷ ಭಾವ:

  1. ವೃತಾಚರಣೆಯ ಮಹತ್ವ.
  2. ಪ್ರಸಾದದ ಮಹಿಮೆ.
  3. ಭಕ್ತನ ಲಕ್ಷಣ.
  4. ಕಾಯಕ ನಿಷ್ಠೆ.
  5. ಮತಪಂಥಗಳ ಸಂಘರ್ಷ.
  6. ಆಂತರ್ಯ ಹಾಗೂ ಅಂತರ್‌ ಸಂಘರ್ಷಗಳ ಸಂವೇದನೆ ಮತ್ತು ವೇದನೆ.

ಮೇಲಿನ ಎಲ್ಲಾ ಸಂಘರ್ಷದ ಭಾವ ಆಂತರ್ಯದಿಂದ ಹೊರ ಹೊರಟ ವಸ್ತುಗಳು ಸಾಮಾಜಿಕವಾಗಿ ಅಂತರ್‌ ಸಂಘರ್ಷಗಳಾಗಿ ಕಡೆಯ ಹಂತದಲ್ಲಿ ಪರಿಣಾಮದಾಯಕ ಸಂಘರ್ಷಣ ಸಮಾಜಕ್ಕೆ ಎಚ್ಚರಿಕೆ ನೀಡಿ, ಬದಲಾಯಿಸ್ದು ಈಕೆಯ ವಚನಗಳ ಕೊಡುಗೆ.

ವೃತವೆಂಬುದು ನಾಯಕರತ್ನ;
ವೃತವೆಂಬುದು ಸುಪ್ಪಾಣಿಯ ಮುತ್ತು.
ವೃತವೆಂಬುದು ಜೀವನಕಳೆ.
ವೃತವೆಂಬುದು ಸುಯಿದಾನ.
ವೃತ ತಪ್ಪಲು, ಉರಿಲಿಂಗಪೆದ್ದಿಗಳರಸನೊಲ್ಲನವ್ವಾ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-869 / ವಚನ ಸಂಖ್ಯೆ-739)

ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:

ಸುಪ್ಪಾಣಿ    : ಆಯ್ದು ತೆಗೆದ ಮುತ್ತು, ಶ್ರೇಷ್ಠ ಮುತ್ತು.
ಸುಯಿದಾನ : ಎಚ್ಚರ, ತೃಪ್ತಿ, ಶುದ್ಧ ಆಹಾರ, ಶಾಂತಿ.

ಕಾಳವ್ವೆಯ ಈ ವಚನದಲ್ಲಿ ಆಂತರ್ಯದ ಸಂಘರ್ಷ ದ್ವಂದ್ವಕ್ಕೆಡೆಯಾಗಿ ಅಂತರ್‌ ನಿರ್ವಹಣೆಯಲ್ಲಿ ಜಾಗೃತವಾಗಿ ಪರಿಣಾಮ ನಿರ್ವಹಣೆ ಹೀಗೆ ಮೂಡಿ ಬಂದಿದೆ. ವೃತವೆಂದರೆ ನಿಯಮ, ನಡವಳಿಕೆ, ನಡತೆ ಆದರೆ ವೃತವೆಂದರೆ ಯಜ್ಞ ಎಂಬುದನ್ನು ಆಕೆ ಒಪ್ಪುವವಳಲ್ಲ. ಆಂತರ್ಯ ಸಂಘರ್ಷದಿಂದ ಹೊರಬಂದು ಅಂತರ್‌ ಸಂಘರ್ಷದಲ್ಲಿ ನೆಲೆ ನಿಂತು ಸಾಮಾಜಿಕತೆಯಲ್ಲಿ ಇದನ್ನು ಪರಿಣಾಮಗೊಳಿಸುತ್ತಾಳೆ. ತನ್ನ ಆಂತರ್ಯ ಸಂಘರ್ಷದಲ್ಲೊಂದಾದ ಆಧ್ಯಾತ್ಮಿಕ ಜೀವನದ ಪ್ರಗತಿಗೆ ಸಹಾಯಕವಾಗುವಂತೆ ಕೆಲಸವನ್ನು ತಪ್ಪದೇ ಮಾಡುತ್ತೇನೆಂಬ ಪ್ರತಿಜ್ಞೆ ಅರ್ಥಾತ್‌ ಆಚರಣೆಯ ನಿರ್ವಹಣೆ. ಇಂತಹ ಆಚರಣೆಯ ಮೂಲಕ ಮನಸ್ಸು ಅಥವಾ ಆತ್ಮ ಶುದ್ಧವಾಗುತ್ತಾ ಹೋಗುವುದನ್ನು ನಾಯಕರತ್ನ ಎಂದು ಪರಿಣಾಮ ನೀಡುತ್ತಾಳೆ. ಇಂತಹ ವೃತ ಕಾಮ, ಕ್ರೋಧಾದಿಗಳಿಲ್ಲದ ಶುದ್ಧ ಆತ್ಮವು ಪವಿತ್ರಾತ್ಮದ ವಾಸಕೆ ಯೋಗ್ಯವಾಗುವುದನ್ನು ಶ್ರೇಷ್ಠವಾದ ಮತ್ತು ಸುಪ್ಪಾಣಿಯ ಮತ್ತು ಅದುವೇ ಜೀವನ ಕಳೆ ಎನ್ನುತ್ತಾಳೆ. ವೃತದ ಮೂಲ ಸಂಘರ್ಷ ಇಂದ್ರಿಯ ನಿಗ್ರಹ ಆಧ್ಯಾತ್ಮಿಕ ಪ್ರಗತಿ. ಇವುಗಳ ನಿರ್ವಹಣೆಗಾಗಿ ಸುಯಿದಾನದ ಪರಿಣಾಮವನ್ನು ನೀಡುತ್ತಾಳೆ. ಸುಯಿದಾನವೆಂದರೆ ರಕ್ಷಣೆ, ಎಚ್ಚರಿಕೆ, ಅಂದರೆ ಬಂದುದ ಕೈಗೊಳ್ಳಬೇಕು. ಇತರರನ್ನು ವಂಚಿಸದಿರುವುದು ಅರಿಷಡ್ವರ್ಗದ ಅಷ್ಟಮದ ಕೊಲ್ಲುವುದು, ದುರ್ಗುಣಗಳ ನಿರ್ಮೂಲನೆ ಹೀಗೆ ಬಾಹ್ಯ ವ್ಯಾವಹಾರಿಕ ಆಚರಣೆಗಳ ಬಗ್ಗೆ ಎಚ್ಚರಿಕೆ ಉಳ್ಳವಳಾದ ಕಾಳವ್ವೆ ನೇರ ಹಾಗೂ ದಿಟ್ಟೆದೆಯಿಂದ ಸದ್ಗುಣಗಳನ್ನು ರಕ್ಷಿಸಿಕೊಳ್ಳಬಲ್ಲ ಸಂಘರ್ಷ ನಿರ್ವಹಣಾಗಾರಳಾಗಿ ಈ ವೃತ ಕಲ್ಪನೆಯನ್ನು ನೀಡುವುದರ ಮೂಲಕ ಸಮಾಜವನ್ನು ಬದಲಾಯಿಸುತ್ತಾಳೆ.

ಕೃತ್ಯಕಾಯಕವಿಲ್ಲದವರು ಭಕ್ತರಲ್ಲ;
ಸತ್ಯಶುದ್ಧವಿಲ್ಲದಿದು ಕಾಯಕವಲ್ಲ;
ಆಸೆಯೆಂಬುದು ಭವದ ಬೀಜ;
ನಿರಾಸೆಯೆಂಬುದು ನಿತ್ಯಮುಕ್ತಿ.
ಉರಿಲಿಂಗಪೆದ್ದಿಗಳರಸನಲ್ಲಿ ಅದರವಲ್ಲ ಕಾಣವ್ವಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-868 / ವಚನ ಸಂಖ್ಯೆ-734)

ಪರಮಾತ್ಮನನ್ನು ಶ್ರದ್ಧೆಯಿಂದ ಆರಾಧಿಸುವವನು ಪರಮ ಆತ್ಮ ದಾರಿ ಕಾಣಬೇಕಾದರೆ ಸತ್ಕ್ರಿಯಾಚರಣೆಗಳಿಂದ ಸಂಸಾರವನ್ನು ದಾಟಬೇಕು, ಸದಾಚಾರಗಳಿಂದ ಕೂಡಿರಬೇಕು. ಶ್ರದ್ಧಾಭಕ್ತಿ, ನಿಷ್ಠಾಭಕ್ತಿ, ಅವಧಾನ ಭಕ್ತಿ, ಅನುಭಾವ ಭಕ್ತಿ, ಆನಂದ ಭಕ್ತಿ, ಸಮರಸ ಭಕ್ತಿ, ಭಕ್ತನ ಈ 6 ಉಪಾಂಗಗಳ ಆಚರಣೆಯನ್ನು ಕಾಳವ್ವೆ ಕೃತ್ಯಕಾಯ ಸತ್ಯ ಶುದ್ಧಿ ಕಾಯಕ ಭವದ ಬೀಜ, ಸಂಸಾರದ ಜಯಕ್ಕೆ ಇರುವ ಆಸೆ ನಿರಾಸೆಗಳ ಸಂಗರ್ಷವನ್ನು ಮೀರಿ ಸ್ಥಿರ ವ್ಯಕ್ತಿತ್ವ ಪಡೆಯುವ ಪ್ರಕ್ರಿಯೆಯನ್ನು ವಿವರಿಸುತ್ತಾ, ನಿತ್ಯ ಮುಕ್ತಿಯನ್ನು ಪಡೆಯಲು ಸಂಘರ್ಷರಹಿತ ವೃತ ಮುಖ್ಯ ಎಂದು ಸಾಬೀತುಪಡಿಸುತ್ತಾಳೆ. ಈ ವೃತ ಆಚರಿಸಲು ಭಕ್ತತನ ಮುಖ್ಯ. ಭಕ್ತತನ ವ್ಯಕ್ತಿತ್ವ ಹೊಂದಲು ಭವದ ಬೀಜದಿಂದಾಗುವ ವೃಕ್ಷ ಮುಖ್ಯ ಎಂಬ ಸಂವೇದನೆಯೆಡೆಗೆ ಸಮಾಜವನ್ನು ನಿರ್ವಹಿಸುತ್ತಾ ಪರ್ಯಾಯಗಳನ್ನು ನೀಡುತ್ತಾಳೆ. 

ಕಾಳವ್ವೆಯ ವಚನಗಳಲ್ಲಿನ ನೇರ ನುಡಿ, ಸಾಮಾಜಿಕ ನೆಲೆಯಲ್ಲಿ ಹುಟ್ಟಿನಿಂದ ಬಂದ ಶ್ರೇಷ್ಠ ನೀಚ ಎಂದು ಗೆರೆಯೆಳೆದು ಪ್ರತ್ಯೇಕಿಸುವ ಪರಂಪರೆಯ ಅನ್ಯಾಯವನ್ನು ಸೂಕ್ಷ್ಮವಾಗಿ ಗಮನಿಸಿದವಳು.

ಕುರಿ ಕೋಳಿ ಕಿರಿಮೀನು ತಿಂಬವರಿಗೆಲ್ಲ
ಕುಲಜ ಕುಲಜರೆಂದೆಂಬರು
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ
ಮಾದಿಗ ಕೀಳುಜಾತಿಯೆಂಬರು.
ಅವರೆಂತ ಕೀಳುಜಾತಿಯಾದರು?
ಜಾತಿಗಳು ನೀವೇಕೆ ಕೀಳಾಗಿರೋ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ
ನಾಯಿನೆಕ್ಕಿ ಹೋಯಿತು,
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಗೆ ಶೋಭಿತವಾಯಿತು.
ಅದೆಂತೆಂದಡೆ:
ಸಿದ್ದಲಿಕೆಯಾಯಿತು, ಸಗ್ಗಳೆಯಾಯಿತು.
ಸಿದ್ದಲಿಕೆಯ ತುಪ್ಪವನು, ಸಗ್ಗಳೆಯ ನೀರನು
ಶುದ್ಧವೆಂದು ಕುಡಿವ ಬುದ್ಧಗೇಡಿ ವಿಪ್ರರಿಗೆ
ನಾಯಕನರಕ ತಪ್ಪದಯ್ಯಾ,
ಉರಿಲಿಂಗಪೆದ್ದಿಗಳರಸ ಒಲ್ಲನವ್ವಾ.
(ಸಮಗ್ರ ವಚನ ಸಂಪುಟ: ಒಂದು2016 / ಪುಟ ಸಂಖ್ಯೆ868 / ವಚನ ಸಂಖ್ಯೆ732)

ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:

ಪುಲ್ಲಿಗೆ     : ಹುಲ್ಲು.
ಸಿದ್ದಲಿಕೆ    : ಎಣ್ಣೆ/ತುಪ್ಪ ಮುಂತಾದವುಗಳನ್ನು ತುಂಬಿಡುವ ಚರ್ಮದ ಚೀಲ.
ಸಗ್ಗಳೆ      : ನೀರು ತುಂಬುವ ಚರ್ಮದ ಚೀಲ.

ಉತ್ತಮರು ಸಾಮಾಜಿಕ ನೆಲೆಗಳಲ್ಲಿ ಗೌರವಾದರಗಳಿಗೆ ಪಾತ್ರರಾದರೂ ಸಾಮಾಜಿಕವಾಗಿ ಮಾನ್ಯರಲ್ಲದ ಕೆಳವರ್ಗದವರಿಗಿಂತ ಅವರು ಹೇಗೆ ಶ್ರೇಷ್ಠರು ಎಂದು ಪ್ರಶ್ನಿಸುತ್ತಾಳೆ. ಸಿದ್ದಲಿಕೆ ತುಪ್ಪವನ್ನು ತುಂಬಿಡುವುದಕ್ಕೆ ಚರ್ಮದಿಂದ ಸಿದ್ಧಪಡಿಸಿದ ಚೀಲ. ಸಗ್ಗಳೆ ಶುದ್ಧವಾದ ನೀರನ್ನು ತುಂಬಿಡುವುದಕ್ಕೆ ಚರ್ಮದಿಂದ ಸಿದ್ಧಪಡಿಸಿದ ಚೀಲ. ಕಾಳವ್ವೆ ಅಂದಿನ ಸಮಾಜದ ವೇದನೆಯನ್ನು ಹೀಗೆ ವ್ಯಕ್ತಪಡಿಸುತ್ತಾ ಸಂಘರ್ಷಕ್ಕೆ ಮುಕ್ತಾಯ ಹೇಳುತ್ತಾಳೆ. ಕುರಿ, ಕೋಳಿ, ಕಿರಿಮೀನು ತಿನ್ನುವವರು ಕುಲಜರು ಸತ್ತ ಹಸುವಿನ ಮಾಂಸವನ್ನು ತಿನ್ನುವ ಮಾದಿಗರು ಕೀಳುಜಾತಿ, ಮಾಂಸ ತಿನ್ನುವ ಇಬ್ಬರೂ ಮನುಷ್ಯರೇ. ಆದರೆ ಅವರಲ್ಲಿ ಒಬ್ಬ ಕುಲಜ ಇನ್ನೊಬ್ಬ ಕೀಳುಜಾತಿ ಹೇಗಾದ? ಕುಲಜರೆನಿಸಿಕೊಂಡವರು ಕೀಳು ಜಾತಿಯವರು, ದನದ ಮಾಂಸ ತಿಂದು ಎಂಜಲಿಸಿದ ಆ ದನದ ಹಸಿಯ ಚರ್ಮವನ್ನು ಒಣಗಿಸಿ ಸಿದ್ದಲಿಕೆ, ಬುದ್ದಲಿಕೆ, ಸಗ್ಗಳೆಯನ್ನು ಮಾಡುವರು. ಉತ್ತಮರು ಅದನ್ನು ಎಣ್ಣೆ, ತುಪ್ಪ, ನೀರು ತುಂಬಿಡಲು ಬಳಸುವವರು. ಕೀಳುಜಾತಿಯವರು ತಿಂದು ಎಸೆದ ದನದ ಚರ್ಮದಿಂದ ಸಿದ್ಧಪಡಿಸಿದ ವಸ್ತುಗಳು ಉತ್ತಮರ ನಿತ್ಯ ಬಳಕೆಗೆ ಯೋಗ್ಯವಾದವು, ಶುದ್ಧವಾದವು. ಹೀಗಾಗಿ ಉತ್ತಮರು ಕೀಳುಜಾತಿಯವರಿಗಿಂತಹೇಗೆ ಮೇಲಾದರು? ಎನ್ನುವ ಪ್ರಶ್ನೆಗೆ ನಿರ್ವಾಹಕಳಾಗಿ ಉತ್ತರಿಸುತ್ತಾಳೆ. ಜಾತಿಯಲ್ಲಿ ಉತ್ತಮರಲ್ಲದವರ ಎಂಜಲನ್ನು ಶುದ್ಧವೆಂದು ವೈಭವೀಕರಿಸುತ್ತಾ ಅವರಿಗೆ ನಾಯಕನರಕ ತಪ್ಪದು ಎಂದು ಕಾಳವ್ವೆ ಪರಿಣಾಮದಾಯಕ ಸಂಘರ್ಷ ನಿರ್ವಹಣೆಗೆ ದ್ಯೋತಕಳಾಗಿದ್ದಾಳೆ.

ಭಕ್ತನಾದವನಿಗೆ ತನ್ನ ದೈಹಿಕ ಶ್ರಮದ‌ ಫಲವಷ್ಟೇ ಅನುಭೋಗ ಯೋಗ್ಯವಾದುದು. ಅನ್ಯರ ದುಡಿಮೆಯ ಫಲದ ಅನುಭೋಗಿಯಾಗಬಾರದು ಎಂಬುದು ಕಾಳವ್ವೆಯ ವಚನಗಳ ಸಂಘರ್ಷಣಾಭಾವ. ಅನ್ಯರಲ್ಲಿ ಬಂಧುಗಳಲ್ಲಿ ಪ್ರಸಾದ ಸ್ವೀಕರಿಸುವುದು ತಪ್ಪು ಎಂಬರ್ಥವಲ್ಲ. ಇಷ್ಟು ಸ್ವತಂತ್ರ ಮನೋಭಾವದ ಸ್ವಾಭಿಮಾಣದ ನಿರ್ವಹಣಾಕಾರರು ತೀರಾ ವಿರಳ. ಸಂಘರ್ಷಗಳನ್ನು ವಾಸ್ತವವಾದಿ ನೆಲೆಗಟ್ಟಿನಲ್ಲಿ ಮುಖಾಮುಖಿಗೊಳಿಸುತ್ತಲೇ ಸಂಘರ್ಷ ನಿರ್ವಹಣೆಯನ್ನು ಸುಸೂತ್ರವಾಗಿ ಮುಗಿಸುತ್ತಾಳೆ.

ಬದುಕಿನಲ್ಲಿ ಗುಣಾತ್ಮಕ ಫಲಗಳು ಅವರವರ ಸತ್ಯ, ಧರ್ಮ, ವೃತ, ಆಚರಣೆಗಳು ಫಲಾಫಲಗಳನ್ನು ನೀಡುತ್ತವೆ ಎಂದು ಪರಿಣಾಮದಾಯಕ ಮೌಲ್ಯ ಒದಗಿಸಿದ ಕಾಳವ್ವೆ ಈ ವಚನದ ಮೂಲಕ ಮಾನವೀಯತೆಯನ್ನು ಸ್ಪಷ್ಟಪಡಿಸುತ್ತಾಳೆ.

ಭಾಗ್ಯವುಳ್ಳ ಪರುಷಂಗೆ ಕಾಮಧೇನು,
ಕಾಮಿಸಿದುದನೀವುದಯ್ಯಾ.
ನಿರ್ಭಾಗ್ಯ‌ ಪರುಷಂಗೆ ಕಾಮಧೇನು,
ತುಡುಗಣಿಯಾಗಿ ತೋರುವುದಯ್ಯಾ.
ಸತ್ಯಪುರುಷಂಗೆ ಕಲ್ಪವೃಕ್ಷ,
ಕಲ್ಪಸಿದುದನೀವುದಯ್ಯಾ.
ಅಸತ್ಯ ಪುಸುಷಂಗೆ ಕಲ್ಪವೃಕ್ಷ,
ಬೊಬ್ಬುಳಿಯಾಗಿ ತೋರುವುದಯ್ಯಾ.
ಧರ್ಮಪುರುಷಂಗೆ ಚಿಂತಾಮಣಿ,
ಚಿಂತಿಸಿದುದನೀವುದಯ್ಯಾ.
ಅಧರ್ಮಪುರುಷಂಗೆ ಚಿಂತಾಮಣಿ,
ಗಾಜಿನಮಣಿಯಾಗಿ ತೋರುವುದಯ್ಯಾ.
ಶ್ರೀಗುರು ಕಾರುಣ್ಯವುಳ್ಳ ಸದ್ಭಕ್ತಂಗೆ,
ಜಂಗಮಲಿಂಗವಾಗಿ ತೋರುವುದಯ್ಯಾ.
ಭಕ್ತನಲ್ಲದ ಪಾಪಿಷ್ಠಂಗೆ ಜಂಗಮಲಿಂಗ,
ಮಾನವನಾಗಿ ತೋರುವುದಯ್ಯಾ.
ಉರಿಲಿಂಗಪೆದ್ದಿಗಳರಸ ಒಲ್ಲನವ್ವಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-869 / ವಚನ ಸಂಖ್ಯೆ-738)

ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:

ತುಡುಗಣಿ  : ಮೋಸಗಾರ, ಕಳ್ಳತನದಿಂದ ತಿನ್ನುವ.
ಬೊಬ್ಬುಳಿ   : ಜಾಲಿಗಿಡ.

ತೀರ್ಮಾನಗಳು (Findings):

  1. ಸಂಘರ್ಷ ನಿರ್ವಹಣೆಯ ತಳಹದಿಯಲ್ಲಿ ಸಾಹಿತ್ಯ, ಸಂವೇದನೆ ಹಾಗೂ ಸಾಮಾಜಿಕ ವೇದನೆಯ ಧ್ವನಿಯಾಗಿ ಕಾಳವ್ವೆಯ ವಚನಗಳು ಪರಿಣಾಮದಾಯಕ ಸಂಘರ್ಷ ನಿರ್ವಹಣೆಗೆ ಕೊಡುಗೆ ನೀಡಿವೆ.
  2. ಸಂಘರ್ಷ ನಿರ್ವಹಣೆಯ ವಿಧಗಳಾದ ಆಂತರ್ಯ ಸಂಘಟನಾತ್ಮಕ ಸಂಘರ್ಷನಿರ್ವಹಣೆ ಮತ್ತು ಅಂತರ್‌ ಸಂಘಟನಾತ್ಮಕ ಸಂಘರ್ಷ ನಿರ್ವಹಣೆಗೆ ಕಾಳವ್ವೆಯ ವಚನಗಳು ರಚನಾತ್ಮಕ ಸ್ವರೂಪವನ್ನು ಪಡೆದಿವೆ.
  3. ಒಬ್ಬ ಸಾಮಾನ್ಯ ಹೆಣ್ಣು ಮಗಳು ಸ್ಥಾಪಿತ ವ್ಯವಸ್ಥೆಯ ಎದುರು ದಿಟ್ಟತನದಿಂದ ಆಂತರ್ಯ ಮತ್ತು ಅಂತರ್‌ ಸಂಘಟನಾತ್ಮಕ ವ್ಯಕ್ತಿತ್ವದೊಂದಿಗೆ ಸಮಾಜದ ಸಂಘರ್ಷಗಳಿಗೆ ಉತ್ತರ ನೀಡುತ್ತಾ, ಸಮಾಜವನ್ನು ಬದಲಾಯಿಸಿದ ಧ್ವನಿ ಗುರುತಿಸಲಾಗಿದೆ.
  4. ವೃತ ನಿಷ್ಠೆಯ ಮೂಲಕ ಸಾಮಾಜಿಕರಲ್ಲಿ ಹಬ್ಬಿದ ಮೌಢ್ಯ ವಿದ್ರೋಹಕಾರಕ ಮನೋವೃತ್ತಿ, ಸ್ವಾರ್ಥಪರತೆ, ಶುಷ್ಕ ಅರ್ಥಹೀನ ನಡೆ-ನುಡಿಗಳನ್ನು ತಿದ್ದಿ ವ್ಯಕ್ತಿ ವಿಶಿಷ್ಠತೆಯ ಕಡೆಗೆ ಸಂಘರ್ಷ ನಿರ್ವಹಣೆ ಆಂತರ್ಯ ಸಂಘಟನಾತ್ಮಕತೆ ಅಂತರ್‌ ಸಂಘಟನಾತ್ಮಕತೆ ಹಾಗೂ ಪರಿಣಾಮದಾಯಕ ಸಂಘರ್ಷ ನಿರ್ವಹಣಾಗಾರಳಾಗಿದ್ದಳೆಂದು ತೀರ್ಮಾನಿಸಲಾಗಿದೆ.

ಸಮಾರೋಪ (Conclusion):

ಸಮಾಜ ಸುಧಾರಣೆಯ ಕಾರ್ಯವನ್ನು ಕೈಗೊಳ್ಳುವವನು ಆದರ್ಶವನ್ನು ಜನರಲ್ಲಿ ಬಿತ್ತುವುದಕ್ಕಿಂತ ಹೆಚ್ಚಾಗಿ ತನ್ನ ಆಂತರ್ಯದಲ್ಲಾದ ಸಂಘರ್ಷಗಳನ್ನು ಕಂಡುಕೊಂಡು ತಾನು ಹೇಳುವುದನ್ನು ಮೊದಲು ತಾನು ಆಚರಿಸಿಕೊಂಡು ಆನಂತರ ತಾನು ನಿಂತ ಸಮಾಜಕ್ಕೆ ಪರ್ಯಾಯ ಪ್ರತಿಫಲನವನ್ನು ಮುಟ್ಟಿಸುವವನು ನಿಜವಾದ ಅರ್ಥದಲ್ಲಿ Conflict Manager ಆಗುತ್ತಾನೆಂಬುದು ವಚನಗಳಲ್ಲಿ ಸ್ಪಷ್ಟವಾಗಿ ಮೂಡಿಬಂದಿದೆ. ಸೋಗಿನ ತತ್ವಗಳಾಗಲಿ, ಉಪದೇಶಗಳಾಗಲಿ ಸಮಾಜವನ್ನು ಸುಧಾರಿಸುವುದಿಲ್ಲ. ಆತ್ಮವಿಮರ್ಶೆ, ಆತ್ಮೋದ್ಧಾರವಲ್ಲದೆ ಸಾಮಾಜಿಕ ಕಳಕಳಿಯ ನಿರ್ವಹಣೆ ಕೂಡ ವ್ಯಕ್ತಿ ವಿಶಿಷ್ಠತೆಯ ಮಾರ್ಗವಾಗುತ್ತದೆ ಎಂಬುದನ್ನು ವಚನಕಾರ್ತಿ ಕಾಳವ್ವೆ ಪರಿಣಾಮದಾಯಕ ಸಂಘರ್ಷ ನಿರ್ವಹಣೆಯ ಜಾಗತಿಕ ಕೊಡುಗೆ ನೀಡಿದ್ದಾಳೆ.

ಗ್ರಂಥಋಣ (Bibiliography):

  1. ಡಾ. ವೀರಣ್ಣ ರಾಜೂರ ಶಿವಶರಣೆಯರ ವಚನ ಸಂಪುಟ-5 ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2001.
  2. ಡಾ. ಎನ್‌, ಮಹದೇವಪ್ಪ ವಚನ ಪರಿಭಾಷಾ ಕೋಷ, ಸಮಗ್ರ ವಚನ ಸಂಪುಟ-15, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2001.
  3. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟ 3, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, 1976.
  4. ಅಂತರ್ಜಾಲ ಮಾಹಿತಿ, ವಿಕಿಪೀಡಿಯಾದ ಮಾಹಿತಿ ಕೋಶ.

    Dr.Sheeladevi S. Malimath
    Principal

    Basaveshwara College of Commerce, Arts & Science
    2nd Block Rajajinagar, Bengaluru-560010.
    Mobile : 94826 18445
    E-mail: sheelasm60@gmail.com

    Watch this article at:https://youtu.be/u9tvW5kghdI

Loading

Leave a Reply