ವಚನ ಸಾಹಿತ್ಯ ಹಾಗೂ ಪರಿಸರ ಪ್ರಜ್ಞೆ ಮತ್ತು UN’s Sustainable Goals of Environment

ನಾನು ಮೆಟ್ಟುವ ಭೂಮಿಯ ಭಕ್ತನ ಮಾಡಿದಲ್ಲದೆ ಮೆಟ್ಟೆನಯ್ಯಾ.
ನಾ ನೋಡುತಿಹ ಆಕಾಶದ ಚಂದ್ರ ಸೂರ್ಯರ
ಭಕ್ತನ ಮಾಡಿದಲ್ಲದೆ ನಾ ನೋಡೆನಯ್ಯಾ.
[ನಾನು ಬಳಸುವ] ಜಲವ ಭಕ್ತನ ಮಾಡಿದಲ್ಲದೆ ನಾನು ಬಳಸೆನಯ್ಯಾ.
ನಾನು ಕೊಂಬ ಹದಿನೆಂಟು ಧಾನ್ಯವ ಭಕ್ತನ ಮಾಡಿದಲ್ಲದೆ
ಕೊಳ್ಳೆನು ಕೂಡಲಚನ್ನಸಂಗಾ ನಿಮ್ಮಾಣೆ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-305 / ವಚನ ಸಂಖ್ಯೆ-89)

ಈ ಭೂಮಿ ರಚನೆಯಾಗಿದ್ದು “Big Bang Theory” ಯಿಂದ ಅಂತ ಭೌಗೋಳಿಕ ಮತ್ತು ಖಗೋಳ ಭೌತಶಾಸ್ತ್ರಜ್ಞದ ಎಲ್ಲ ವಿಜ್ಞಾನಿಗಳೂ ಖಚಿತವಾಗಿ ನಿರ್ಧಾರ ಮಾಡಿದ್ದಾರೆ. ಹಲವಾರು ವಿಜ್ಞಾನಿಗಳು ತಮ್ಮ ಪುಸ್ತಕಗಳಲ್ಲಿ ಈ ವಿಷಯವನ್ನು ಮಂಡಿಸಿದ್ದಾರೆ.

 Stephen Hawking : The Big Bang and Black Holes.
 Joao Steiner : The Origin of the Universe.
 Steven Ball : The Big Bang Theory.
 Jean-Pierre Luminet : Theory and Observations.
 Simon Singh : The Big Bang.

ಇನ್ನೂ ಸಹಸ್ರಾರು ಪುಸ್ತಕಗಳಲ್ಲಿ ವಿಜ್ಞಾನಿಗಳು ಈ ವಿಜ್ಞಾವನ್ನು ಪುಷ್ಠೀಕರಿಸಿದ್ದಾರೆ. ಮಹಾಸ್ಫೋಟ ಆದಾಗ ಈ ಭೂಮಿಯಲ್ಲಿ ಹಳ್ಳ, ಕೊಳ್ಳ, ನದಿಗಳು, ಸಮುದ್ರ ಮುಂತಾದ ಚರಾಚರ ವಸ್ತುಗಳ ರಚನೆಯಾದವು. ಇದರ ಜೊತೆ ಜೊತೆಗೆ ಮನುಷ್ಯನ ಒಳ ಭೇದ ಭಾವಗಳು ಹುಟ್ಟಿದವು. ಗಂಡು-ಹೆಣ್ಣು, ಬಡವ-ಶ್ರೀಮಂತ, ರಾಜ-ಪ್ರಜೆ, ಆ ಭಾಷೆ-ಈ ಭಾಷೆ, ಆ ದೇಶ – ಈ ದೇಶ ಇಂಥಾ ಪರಸ್ಪರ ವಿರೋಧಾಭಾಸಗಳು ಹುಟ್ಟಿಕೊಂಡವು.

ಇದೇ “Big Bang Theory” ಎನ್ನುವ ತತ್ವ ಸಿದ್ಧಾಂತವನ್ನು ವ್ಯೋಮಮೂರ್ತಿ ಅಲ್ಲಮ ಪ್ರಭುಗಳು ತಮ್ಮ ಒಂದು ವಚನದಲ್ಲಿ ಪ್ರತಿಪಾದನೆ ಮಾಡುತ್ತಾರೆ.

ಅಯ್ಯಾ ತತ್ತ್ವ ವಿತತ್ತ್ವಗಳಿಲ್ಲದಂದು, ಪ್ರಕೃತಿ ಪುರುಷರಿಲ್ಲದಂದು,
ಜೀವ_ಪರಮರೆಂಬ ಭಾವ ತಲೆದೋರದಂದು, ಏನೂ ಏನೂ ಇಲ್ಲದಂದು
ಬಯಲು ಬಲಿದು ಒಂದು ಬಿಂದುವಾಯಿತ್ತು ನೋಡಾ.
ಆ ಬಿಂದು ಅಕ್ಷರತ್ರಯದ ಗದ್ದುಗೆಯಲ್ಲಿ ಕುಳ್ಳಿರಲು
ಓಂಕಾರ ಉತ್ಪತ್ತಿಯಾಯಿತ್ತು.
ಆ [ಓಂಕಾರದ] ನಾದದಲ್ಲಿ ಮೂರ್ತಿಗೊಂಡನೊಬ್ಬ ಶರಣ.
ಆ ಶರಣನಿಂದಾಯಿತ್ತು ಪ್ರಕೃತಿ, ಆ ಪ್ರಕೃತಿಯಿಂದಾಯಿತ್ತು ಲೋಕ.
ಈ ಲೋಕ ಲೌಕಿಕವನತಿಗಳೆದು ನಿಜದಲ್ಲಿ ನಿವಾಸಿಯಾಗಿಪ್ಪ,
ಗುಹೇಶ್ವರನ ಶರಣ ಚೆನ್ನಬಸವಣ್ಣನ ಘನವನು
ಬಸವಣ್ಣನ ಕೃಪೆಯಿಂದಲರಿದು ನಮೋ ನಮೋ ಎನುತಿರ್ದೆನು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-202 / ವಚನ ಸಂಖ್ಯೆ-782)

Big Bang Theory ಭೂಮಿ ಹೇಗೆ ಅಸ್ತಿತ್ವಕ್ಕೆ ಬಂದಿತು ಏಂದು ತಿಳಿಸುವ Scientific ಸಿದ್ಧಾಂತವಾಗಿದೆ. ಈ ಸಿದ್ಧಾಂತವನ್ನೇ ಅಲ್ಲಮ ಪ್ರಭುಗಳ ಈ ವಚನ ನಿರೂಪವನ್ನು ನೀಡುತ್ತದೆ, ಇದು ಬೇರೆ ಯಾವುದೂ ಇಲ್ಲದಿದ್ದಾಗ ಪ್ರತಿಧ್ವನಿಸುವ ಅಬ್ಬರದಿಂದ ಪ್ರಾರಂಭವಾಯಿತು ಎಂದು “ಏನೂ ಏನೂ ಇಲ್ಲದಂದು ಬಯಲು ಬಲಿದು ಒಂದು ಬಿಂದುವಾಯಿತ್ತು ನೋಡಾ” ಎಂದು ಅಲ್ಲಮ ಪ್ರಭುಗಳು ವಿವರಣೆ ನೀಡುತ್ತಾರೆ. ಭೂಮಿಯನ್ನು ರೂಪಿಸಲು ಬಳಸಲಾದ Compacting of Matter and Energy ರೂಪದಲ್ಲಿ ನಿರ್ವಾತದಲ್ಲಿ ಅಸ್ತಿತ್ವದಲ್ಲಿತ್ತು. ಇಡೀ ಬ್ರಹ್ಮಾಂಡವು ಪರಮಾಣುವಿನ ಗಾತ್ರದ ಸಣ್ಣ ಜಾಗದಲ್ಲಿ ಕೇಂದ್ರೀಕೃತವಾಗಿತ್ತು.

ಆರಂಭದಲ್ಲಿ ಜಾಗವೂ ಇರಲಿಲ್ಲ, ಸಮಯವೂ ಇರಲಿಲ್ಲ. ಆದಾಗ್ಯೂ, Big Bang Theory ಆ ಸಣ್ಣ ಪ್ರದೇಶದೊಳಗೆ ವಸ್ತು, ಶಕ್ತಿ, ಸಮಯ ಮತ್ತು ಸ್ಥಳವನ್ನು ರಚಿಸುವುದರೊಂದಿಗೆ ಘಟಕಗಳ ವಿಸ್ತರಣೆಗೆ ಕಾರಣವಾಯಿತು. ಈ ಶಕ್ತಿಯು ಗ್ರಹಗಳ ರಚನೆ ಮತ್ತು ನಕ್ಷತ್ರಗಳನ್ನು ರೂಪಿಸಲು ಒಟ್ಟಿಗೆ ಸೇರಿತು. Big Bang Theory ಸಿದ್ಧಾಂತದ ಪ್ರಕಾರ ಅನಿಲಗಳ ಬೃಹತ್ ಮೋಡಗಳು ರಚನೆಯಾದವು.

Astro-Physists ಗಳು ಕೇಂದ್ರೀಕೃತ ಶಕ್ತಿಯ (Centrallized Energy) ಒಂದು ಸಣ್ಣ ಬಿಂದುವು ದೊಡ್ಡ ಸ್ಫೋಟದಲ್ಲಿ ಹೊರಹೊಮ್ಮುತ್ತದೆ, ಇದು Big Bang Theory ಎಂದು ಕರೆಯಲ್ಪಡುವ ಪ್ರತಿಧ್ವನಿಸುವ ಶಬ್ದವನ್ನು ಉಂಟುಮಾಡುತ್ತದೆ. ಪರಿಣಾಮವಾಗಿ ಸೃಷ್ಟಿಯಾದ ವಸ್ತುವು ಎಲ್ಲಾ ದಿಕ್ಕುಗಳಲ್ಲಿಯೂ ಹೊರಹೊಮ್ಮಿತು, ಅದರ ಹಿನ್ನೆಲೆಯಲ್ಲಿ ನಕ್ಷತ್ರಗಳು, ಗೆಲಕ್ಸಿಗಳು ಮತ್ತು ಗ್ರಹಗಳನ್ನು ರೂಪಿಸುತ್ತದೆ. ಕ್ಷೀರಪಥ ಅಥವಾ ನಮ್ಮ ನಕ್ಷತ್ರಪುಂಜವು ಬಾಹ್ಯಾಕಾಶದಲ್ಲಿ ಒಂದೇ ಅಲ್ಲ. Big Bang Theory ಇಂದು ವಿಶ್ವದಲ್ಲಿ ಶತಕೋಟಿ ಗೆಲಕ್ಸಿಗಳಿವೆ ಎಂದು ಹೇಳುತ್ತದೆ. ಇಂಥ ಅತ್ಯಂತ Scientific ಆದ ತತ್ವ ಸಿದ್ಧಾಂತವನ್ನು ಸಮರ್ಥವಾಗಿ ಅಲ್ಲಮ ಪ್ರಭುಗಳು ಈ ವಚನದಲ್ಲಿ ನಿರೂಪಣೆ ಮಾಡುತ್ತಾರೆ.

ಹೀಗೆ ವಸ್ತು ಮತ್ತು ಚೈತನ್ಯಗಳು ಸೃಷ್ಟಿಯ ಅತ್ಯಮೂಲ್ಯ ಚೈತನ್ಯ ಸ್ವರೂಪವೆನ್ನುವುದನ್ನು ಅಲ್ಲಮ ಪ್ರಭುಗಳು ಪ್ರತಿಪಾದನೆ ಮಾಡುತ್ತಾ ನಮ್ಮನ್ನು ವೈಜ್ಞಾನಿಕ ಚಿಂತನೆಗೆ ಹಚ್ಚುತ್ತಾರೆ. ಒಂದರಿಂದ ಇನ್ನೊಂದು ಚೈತನ್ಯ ಪಡೆದುಕೊಳ್ಳುವುದೇ ಸೃಷ್ಠಿಯ ಶ್ರೇಷ್ಠ ಚಿಂತನಾ ಕ್ರಮ. ಬಸವಣ್ಣನವರು ಈ ಚೈತನ್ಯಶೀಲತೆಯನ್ನು ತಮ್ಮ ವಚನದಲ್ಲಿ ನಿರೂಪಣೆ ಮಾತಾರೆ.

ಅದುರಿತು ಪಾದಾಘಾತದಿಂದ ಧರೆ,
ಬಿದಿರಿದವು ಮುಕುಟ ತಾಗಿ ತಾರಕೆಗಳು,
ಉದುರಿದವು ಕೈ ತಾಗಿ ಲೋಕಂಗಳೆಲ್ಲಾ!
‘ಮಹೀಪಾದಾಘಾತಾದ್‌ ವ್ರಜತಿ ಸಹಸಾ ಸಂಶಯಪದಮ್‌
ಪದಮ್‌ ವಿಷ್ಣೋರ್ಭ್ರಾಮ್ಯದ್‌ ಭುಜಪರಿಘರುಘ್ಣಗ್ರಹಗಣಮ್‌
ಮಹುರ್ಧ್ಯೌರ್ದೌಸ್ಥ್ಯಂ ಯಾತ್ಯನಿಭೃತಜಟಾತಾಡಿತತಟಾ
ಜಗದ್ರಕ್ಷಾಯೈ ತ್ವಂ ನಟಸಿ ನನು ಮಾಮೈವ ವಿಭುತಾʼ
ನಮ್ಮ ಕೂಡಲಸಂಗಮದೇವನಿಂದು ನಾಂಟ್ಯವನಾಡೆ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-50 / ವಚನ ಸಂಖ್ಯೆ-539)


ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ಬಿದಿರು : ಬಾಗು, ವಿನಯಿಯಾಗು.

ಈ ವಚನ ಶಿವತಾಂಡವ ಅಥವಾ ನಟರಾಜನ ನೃತ್ಯದ ಅದ್ಭುತ ದೃಶ್ಯ ರೂಪಕ (Metaphor). ಇದನ್ನು ಒಂದರೊಳಗೊಂದು ಕರಗಿ ಹೋಗುವ Union of Mixture Patterns ಎನ್ನುವ ಸಿದ್ಧಾಂತದೊಂದಿಗೆ ಪ್ರಪಂಚದಾದ್ಯಂತ ಪ್ರಸಿದ್ದಿಗೊಳಿಸಿದವನು ಫ್ರಿಝಫ್‌ ಕಾಪ್ರಾ (Fritjof Capra / Austrian Born American) ಎನ್ನುವ ಭೌತಶಾಸ್ತ್ರ ವಿಜ್ಞಾನಿ. ಈ ವಿಜ್ಞಾನಿ Quantam Physics ನ Theory of Relativity ಗೆ ಶಿವ ತಾಂಡವದ ಮೂಲಕ ವಿವರಣೆ ನೀಡತಾನೆ. (Berkley Lab, Caliphornia-Bombardiar).

• ಫ್ರಿಝಪ್ ಕಾಪ್ರಾ ತನ್ನ ಪುಸ್ತಕ The Tao of Physics ದಲ್ಲಿ ಬರೀತಾನೆ.

As the Cosmic Dancer, Shiva is the god of creation and destruction who sustains through his dance the endless rhythm of universe. (Page No. 90).
 The particle inter-actions give rise to stable structures which build up the material world, which again is not static, but oscillate in rhythmic movements. (Page No. 225).
 This dance involves an enormous variety of patterns. The study of subatomic particles and their interactions thus reveals a great deal of order. (Page No. 225).

Physicist used phrases like “Dance of Creation and Destruction” and “Energy Dance”. The idea of rhythm and dance naturally come into mind when one tries to imagine the flow of energy going through the patterns that make up the particle world.

Modern physics has shown us that movement and rhythm are essential properties of matter; that all matter, whether here on earth or in our outer space, is involved in a continual cosmic dance. (Page No. 241).

ಇದನ್ನೇ ಬಸವಣ್ಣನವರು “ಅದುರಿತು ಪಾದಾಘಾತದಿಂದ ಧರೆ” ಅಂದರೆ Cosmic Dance. “ಬಿದಿರಿದವು ಕೈ ತಾಗಿ ಲೋಕಂಗಳೆಲ್ಲಾ” ಅಂದರೆ continual cosmic dance ಮೂಲಕ ಲೋಹಗಳ ಪರಿವರ್ತನಾ ಕ್ರಿಯೆ. “ಉದುರಿದವು ಕೈ ತಾಗಿ ಲೋಕಂಗಳೆಲ್ಲಾ ನಮ್ಮ ಕೂಡಲಸಂಗಮದೇವನಿಂದು ನಾಂಟ್ಯವನಾಡೆ” ಎನ್ನುವಲ್ಲಿ movement and rhythm are essential properties of matter ಎನ್ನುವ ಕ್ರಿಯೆ. ಹೀಗೆ ಈ ಶಿವತಾಂಡವ ದೃಶ್ಯರೂಪಕ ಪುರಾತನ ಪುಣ್ಯಕಥೆಗಳು, ಧಾರ್ಮಿಕ ನಂಬಿಕೆಗಳು ಹಾಗೂ ಆಧುನಿಕ ವೈಜ್ಞಾನಿಕ ಚಿಂತನೆಗಳನ್ನು ಏಕೀಕರಣಗೊಳಿಸುತ್ತವೆ.

ಹೀಗೆ ಅಸ್ತಿತ್ವಕ್ಕೆ ಬಂದ ಸೌರಮಂಡಲದಲ್ಲಿ Lively, Dynamic and Vibrant ಗ್ರಹ ಅಂದರೆ ನಮ್ಮ ಭೂಮಿ. ನಾವು ಈ ಜೀವಂತವಿರುವ ಗ್ರಹದಲ್ಲಿ ಬದುಕಿದ್ದೇವೆ ಎನ್ನುವುದು ನಮ್ಮ ಸೌಭಾಗ್ಯ. ಸೃಷ್ಟಿಯ ಅನಂತ ಸಾಕ್ಷಾತ್ಕಾರಗಳಿಗೆ, ಅನಂತ ಅಪಾರ ಜೀವಕೋಟಿಗೆ ಜೀವ ಕೊಟ್ಟಂಥ ಗ್ರಹ ಈ ಭೂಮಿ. ಅದರಲ್ಲಿ ಮನುಷ್ಯ ಒಂದು ಸಣ್ಣ ಜೀವಿ. ಆದರೆ ನಾವೇ ಶ್ರೇಷ್ಠರು ಅಂತ ತಿಳಕೊಂಡಿದ್ದೇವೆ. ಈ ಪ್ರಕೃತಿಯ ಮುಂದೆ ನಾವೇನೇನೂ ಅಲ್ಲ ಅನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಜೀವನ ಶೈಲಿಗೂ ಪ್ರಕೃತಿಗೂ ಬಹಳ ನೇರಾ ನೇರ ಸಂಬಂಧ ಇದೆ. ಚಿಙ್ಮಯಜ್ಞಾನಿ ಚನ್ನಬಸವಣ್ಣನವರು ತಮ್ಮ ಒಂದು ವಚನದಲ್ಲಿ ಪ್ರಕೃತಿಯ ಜೊತೆಗಿನ ಸಂಬಂಧವನ್ನು ತಿಳಿಸುತ್ತಾರೆ.

ಭೂಮಿ ನಷ್ಟವಾದರೆ ಜಲಕ್ಕಿಂಬಿಲ್ಲ, ಜಲ ನಷ್ಟವಾದರೆ ಇಂದ್ರಿಯಕ್ಕಿಂಬಿಲ್ಲ,
ಇಂದ್ರಿಯ ನಷ್ಟವಾದರೆ ಜಂಗಮಕ್ಕಿಂಬಿಲ್ಲ, ಜಂಗಮ ನಷ್ಟವಾದರೆ ಲಿಂಗಕ್ಕಿಂಬಿಲ್ಲ.
ಇದು ಕಾರಣ, ಕರಣಾದಿಗಳಂ ಬಿಡದೆ ಆನು ವ್ರತಿಯೆಂಬವರ ತೋರಯ್ಯಾ
ಕೂಡಲಚೆನ್ನಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-308 / ವಚನ ಸಂಖ್ಯೆ-129)

ಭೂಮಿಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಈ ವಚನದ ಮೂಲಕ ಚಿಙ್ಮಯಜ್ಞಾನಿ ಚನ್ನಬಸವಣ್ಣವರು ತೀಳಿಸಿದ್ದಾರೆ. ಭೂಮಿ ನಷ್ಟವಾದರೆ ನೀರಿಗೆ ಆಶ್ರಯವಿಲ್ಲ. ನೀರಿಲ್ಲದಿದ್ದರೆ ಬದುಕುವುದಾದೃೂ ಹೇಗೆ ಎನ್ನುವ ಪ್ರಶ್ನೆಯನ್ನು ಇಂದು ನಮಗೆ ನಾವೇ ಹಾಕಿಕೊಳ್ಳಬೇಕಾದ ಅವಶ್ಯಕತೆಯಿದೆ.

ಇಂಥ ಪ್ರಕೃತಿ, ಪರಿಸರ ಅಥವಾ ಪರಿಸರ ವ್ಯವಸ್ಥೆಯನ್ನು ಅನೇಕ ರೀತಿಯಲ್ಲಿ ವ್ಯಾಖ್ಯಾನಿಸಬಹುದು. ನೈಸರ್ಗಿಕವಾದ ಅಜೈವಿಕ ವಸ್ತುಗಳಾದ ಬೆಟ್ಟ-ಗುಡ್ಡ ಮತ್ತು ಮಣ್ಣನಿಂದ ಕೂಡಿದ ಪ್ರದೇಶ. ಇವುಗಳ ಜೊತೆಗೆ ಜೈವಿಕ ಸಸ್ಯಗಳು, ಪಶು-ಪಕ್ಷಿಗಳು ಕೂಡ ಒಟ್ಟಾಗಿ ಬದುಕುತ್ತವೆ. ಅಜೈವಿಕ ಮತ್ತು ಜೈವಿಕ ಅಂಶಗಳೆಲ್ಲವೂ ಸೇರಿ ಪರಸ್ಪರ ಪೂರಕವಾಗಿ ಅಸಂಖ್ಯಾತ ಆಹಾರ ಸರಪಳಿಯನ್ನು ರೂಪಗೊಂಡಿವೆ. ಇದನ್ನು ಯೂಜೀನ್‌ ಪ್ಲೆಸೆಂಟ್ಸ್ ಓಡಮ್‌ ಎನ್ನುವ ಪ್ರಖ್ಯಾತ ಪರಿಸರ ವಿಜ್ಞಾನಿ ತನ್ನ ಒಂದು ಪುಸ್ತಕ “Fundamentals of Ecology” ಯಲ್ಲಿ ಹೇಳಿದ್ದನ್ನು ನಾವು ಇಲ್ಲಿ ಉಲ್ಲೇಖಿಸಬಹುದು.

ಪರಿಸರ ವ್ಯವಸ್ಥೆ ಎಂಬ ಪದವು ಪರಿಸರವೊಂದರ ಸಂಯೋಜಿತ ಭೌತಿಕ ಮತ್ತು ಜೈವಿಕ ಘಟಕಗಳಿಗೆ ಅನ್ವಯಿಸುತ್ತದೆ. ಒಂದು ಪರಿಸರ ವ್ಯವಸ್ಥೆಯು ಸಾಮಾನ್ಯವಾಗಿ ನೈಸರ್ಗಿಕ ಪರಿಸರದೊಳಗಿನ ಒಂದು ಪ್ರದೇಶವಾಗಿದ್ದು, ಬಂಡೆಗಳು ಮತ್ತು ಮಣ್ಣಿನಂಥ ಪರಿಸರದ ಭೌತಿಕ (ಅಜೀವಕ) ಅಂಶಗಳು, ಸಸ್ಯಗಳು ಮತ್ತು ಪ್ರಾಣಿಗಳಂಥ ಸ್ವತಂತ್ರ (ಜೈವಿಕ) ಜೀವಿಗಳೊಂದಿಗೆ ಅದೇ ಸ್ವಾಭಾವಿಕ ನೆಲೆಯೊಳಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ. ಪರಿಸರ ವ್ಯವಸ್ಥೆಗಳು ಶಾಶ್ವತವಾಗಿರಬಹುದು ಅಥವಾ ತಾತ್ಕಾಲಿಕವಾಗಿರಬಹುದು. ಪರಿಸರ ವ್ಯವಸ್ಥೆಗಳು ಸಾಮಾನ್ಯವಾಗಿ ಒಂದು ಅಸಂಖ್ಯಾತ ಆಹಾರ ಜಾಲಗಳನ್ನು ರೂಪಿಸುತ್ತವೆ.

ನಮ್ಮ ಬುದ್ಧಿವಂತಿಕೆಯೇ ಪ್ರಕೃತಿಯ ವಿನಾಶಕ್ಕೆ ಕಾರಣ ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಪ್ರಕೃತಿ ನಮ್ಮ ಆಸೆಯನ್ನು ಈಡೇರಿಸಬಲ್ಲುದು. ಆದರೆ ನಮ್ಮ ದುರಾಸೆಯನ್ನಲ್ಲ ಎನ್ನುವುದು ಪರಮ ಸತ್ಯ. ನಮ್ಮೆಲ್ಲರ ಆಧುನೀಕರಣ, ಉದಾರೀಕರಣ, ಯಾಂತ್ರೀಕರಣ ಮತ್ತು ತಾಂತ್ರೀಕರಣ ಮನಃಸ್ಥಿತಿಗೆ ಪ್ರಕೃತಿ ತುತ್ತಾಗತಾ ಇರೋದು ದುರಂತ. ಈ ನಮ್ಮ ವಿಕೃತಿ ಪ್ರಕೃತಿಯನ್ನು ಸರ್ವನಾಶ ಮಾಡತಾ ಇರೋದು ಅತ್ಯಂತ ದುರಂತದ ಪರಮಾವಧಿ.

ಭೂಮಿ ಮತ್ತು ಪರಿಸರವನ್ನು ಸಂರಕ್ಷಿಸುವ ಉದ್ದೇಶದಿಂದ 1972 ರಲ್ಲಿ ವಿಶ್ವಸಂಸ್ಥೆಯವರು ಜೂನ್‌ 5 ನ್ನು “ಅಂತರಾಷ್ಟ್ರೀಯ ವಿಶ್ವ ಪರಿಸರ ಸಂರಕ್ಷಣಾ ದಿನ” ವನ್ನಾಗಿ ಘೋಷಣೆ ಮಾಡಿದ್ದಾರೆ. ಭೂಮಿಯ ಫಲವತ್ತತೆಯ ಪುನರುಜ್ಜೀವನ ಮತ್ತು ಪುನರುತ್ಥಾನದ ಉದ್ದೇಶದಿಂದ ಸುಸ್ಥಿರ ಅಭಿವೃದ್ಧಿಯ ಗುರಿ – 15 (Sustainable Development Goal – 15) ಅಡಿಯಲ್ಲಿ ಭೂಮಿಯ ಮೇಲೆ ಬದುಕು (Life on Land) ಎನ್ನುವ ವಿಭಿನ್ನ ವಿಷಯದ ಮೇಲೆ ಗುರಿಯನ್ನು ನಿಗದಿ ಮಾಡಿದೆ. ಈ ಪರಿಸರ ವಿನಾಶವನ್ನು ತಡೆಗಟ್ಟುವುದಕ್ಕೆ ಅತ್ಯಂತ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. The 2030 Agenda for Sustainable Development’s 17 Sustainable Development Goals (SDGs) ಎನ್ನುವ ಕಾರ್ಯಕ್ರಮ ರೂಪಿಸಿದ್ದಾರೆ. ಈ 17 ಗುರಿಗಳಲ್ಲಿ 13 ಮತ್ತು 15 ನೇ ಗುರಿಗಳು ಪರಿಸರಕ್ಕೆ ಸಂಬಂಧಪಟ್ಟಂಥವು.

Goal 13. Take urgent action to combat climate change and its impacts:
• Target 13.1: Strengthen resilience and adaptive capacity to climate-related hazards and natural disasters in all countries.
• Target 13.2: Integrate climate change measures into national policies, strategies and planning.
• Target 13.3: Improve education, awareness-raising and human and institutional capacity on climate change mitigation, adaptation, impact reduction and early warning.
• Target 13.a: Implement the commitment undertaken by developed-country parties to the United Nations Framework Convention on Climate Change to a goal of mobilizing jointly $100 billion annually by 2020 from all sources to address the needs of developing countries in the context of meaningful mitigation actions and transparency on implementation and fully operationalize the Green Climate Fund through its capitalization as soon as possible.
• Target 13.b: Promote mechanisms for raising capacity for effective climate change-related planning and management in least developed countries and small island developing States, including focusing on women, youth and local and marginalized communities

ವಿಶ್ವಸಂಸ್ಥೆಯು Global Warming ಬಗ್ಗೆ ಎಚ್ಚರಿಸುತ್ತಾ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಎಲ್ಲಾ ದೇಶಗಳನ್ನು ಒತ್ತಾಯಿಸಿದ್ದಾರೆ. ತಮ್ಮ ತಮ್ಮ ದೇಶಗಳಲ್ಲಿ ಇದಕ್ಕಾಗಿ ಕಾನೂನು ಮತ್ತು ವೈಜ್ಞಾನಿಕವಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪ್ರಮುಖವಾಗಿ ಶೈಕ್ಷಣಿಕವಾಗಿ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸುವ ಪಠ್ಯಗಳನ್ನು ಅಳವಡಿಸುವುದರ ಮೂಲಕ ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವನ್ನು ಮೂಡಿಸಬೇಕು.

ಹಾಗಾಗಿ ಧರೆ ಹತ್ತಿ ಉರಿಯದೆ ಇದ್ದೀತೆ? ಎಂಬ ಬಸವಣ್ಣನವರ ವಚನವನ್ನು ನಾವಿಂದು ನೆನೆಯಲೇಬೇಕಾದ ಸಂದರ್ಭ ಒದಗಿ ಬಂದಿದೆ.

ಒಲೆ ಹೊತ್ತಿ ಉರಿದೆಡೆ ನಿಲಬಹುದಲ್ಲದೆ
ಧರೆ ಹೊತ್ತಿ ಉರಿದೆಡೆ ನಿಲಲುಬಾರದು.
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,
ನಾರಿ ತನ್ನ ಮನೆಯಲ್ಲಿ ಕಳುವಡೆ,
ತಾಯ ಮೊಲೆವಾಲು ನಂಜಾಗಿ ಕೊಲುವೆಡೆ,
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ!
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-13 / ವಚನ ಸಂಖ್ಯೆ-26)


ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ಕೆಯ್ಯ : ಹೊಲ, ಭೂಮಿ.

ಬಸವಾದಿ ಶರಣರು ಸಸ್ಯಶಾಸ್ತ್ರ, ಮನೋವಿಜ್ಞಾನ, ಸಮಾಜ ಶಾಸ್ತ್ರ, ಅರ್ಥಶಾಸ್ತ್ರ, ಪರಿಸರ ವಿಜ್ಞಾನ ಹೀಗೆ ಮಾನವನ ಬದುಕಿನ ಸುತ್ತ ಹೆಣೆದಿರುವ ಎಲ್ಲ ಶಾಸ್ತ್ರಗಳನ್ನೂ ಕೂಡ ತಮ್ಮ ವಚನಗಳಲ್ಲಿ ಕ್ರೋಢೀಕರಿಸಿದ್ದಾರೆ. ಇದರ ಜೊತೆಗೆ ಆಧ್ಯಾತ್ಮಿಕ ಚಿಂತನ ಮತ್ತು ನೈತಿಕ ಚಿಂತನದ ಪಾಠಗಳನ್ನೂ ಕೂಡ ಮೇಳೈಸಿ ವಚನಗಳನ್ನು ರಚನೆ ಮಾಡಿದ್ದಾರೆ. ನನ್ನ ಅನಿಸಿಕೆಯೆಂದರೆ ಶರಣರ ಬದುಕಿನ ಚಿತ್ರಣವನ್ನು ಹಾಗೂ ಅವರ ವಚನಗಳನ್ನು ಅಭ್ಯಾಸ ಮಾಡುವುದು ಒಂದು ವೈಜ್ಞಾನಿಕ ಚಿಂತನೆಯನ್ನು ಅಭ್ಯಾಸ ಮಾಡಿದಂತೆ. ಶರಣ ಅರಿವಿನ ಮಾರಿತಂದೆಯವರ ಈ ವಚನ ಇದನ್ನು ಪುಷ್ಟೀಕರಿಸುತ್ತದೆ.

ಕಾಯವಿದ್ದು ಕಾಬುದು ವಿಜ್ಞಾನ, ಜೀವವಿದ್ದು ಕಾಬುದು ಸುಜ್ಞಾನ,
ಎರಡಳಿದು ತೋರಿಕೆಯಲ್ಲಿ ಕಾಬುದು ಪರಂಜ್ಯೋತಿಜ್ಞಾನ,
ಇಂತೀ ಮೂರು ಮುಖವ ಏಕವ ಮಾಡಿ
ಬೇರೊಂದು ಕಾಬುದು ಪರಮಪ್ರಕಾಶಜ್ಞಾನ.
ಇಂತೀ ಅಂತರ ಪಟಂತರದಲ್ಲಿ ನಿಂದು ನೋಡುವ
ಸಂದೇಹವ ಹರಿದ ಸಂದಿನಲ್ಲಿ
ಕುಂದದ ಬೆಳಗು ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-982 / ವಚನ ಸಂಖ್ಯೆ-373)

ಎಲ್ಲದಕ್ಕೂ Physical & Scientific Evidence ಕೇಳುವ ವಿಜ್ಞಾನವನ್ನು “ಕಾಯವಿದ್ದು ಕಾಬುದು ವಿಜ್ಞಾನ” ಸಾಲಿನ ಮೂಲಕ ಶರಣ ಅರಿವಿನ ಮಾರಿತಂದೆಯವರು ಇಲ್ಲಿ ನಿರೂಪಣೆ ಮಾಡತಾರೆ. ಕಾಯ ಎಂದರೆ ಇಲ್ಲಿ ಕಣ್ಣಿಗೆ ಕಾಣುವ ವಸ್ತು, Physical evidence. “ಜೀವವಿದ್ದೂ ಕಾಬುದು ಸುಜ್ಞಾನ” ಎನ್ನುವ ಸಾಲುಗಳಲ್ಲಿ ಅದ್ಭುತವಾದ ಅಂತರಂಗದ ಅರಿವಿನ ತತ್ವವನ್ನು ಹೇಳತಾರೆ ಶರಣ ಅರಿವಿನ ಮಾರಿತಂದೆಯವರು. ಜೀವ ಮತ್ತು ಸುಜ್ಞಾನ ಎನ್ನುವ ಎರಡು ಶಬ್ದಗಳನ್ನು ಉಲ್ಲೇಖ ಮಾಡುವುದರ ಮೂಲಕ ಅಂತರಂಗದ ಅರಿವಿನ ಬೆಳಕನ್ನು ಕಾಣಬೇಕೆನ್ನುವ ಸದಾಶಯವನ್ನು ಶರಣ ಅರಿವಿನ ಮಾರಿತಂದೆಯವರು ಇಲ್ಲಿ ತಿಳಿಸಿದ್ದಾರೆ.

ಅನೇಕ ಪ್ರಕೃತಿ ವಿಕೋಪಗಳಾದ ಭೂಕಂಪ, ಸುನಾಮಿ ಮತ್ತು ಚಂಡಮಾರುತಗಳಂಥ ದುರಂತಗಳಿಂದ ಇಂದು ಭೂಮಿಯೇ ಹೊತ್ತಿಕೊಂಡು ಉರಿದಂತಾಗಿರುವ ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಕೃತಿ ಉಳಿಯುವುದು ಸಾಧ್ಯವೇ ಎನ್ನುವ ಪ್ರಶ್ನೆಯನ್ನು ನಾವು ಕೇಳಬೇಕಾಗಿದೆ. ನಮ್ಮ ಮುಂದಿನ ಪೀಳಿಗೆಗ ಅನೈತಿಕ ದಾರಿಗಳಿಂದ ಆಸ್ತಿ-ಅಂತಸ್ತನ್ನು ಕೂಡಿಡುವ ಮಾನಸಿಕ ವಿಕೃತಿಗೆ ನಾವೆಲ್ಲರೂ ಒಳಗಾಗಿದ್ದೇವೆ. ಹಾಗಾಗಿ ಬಸವಣ್ಣನವರು ತಮ್ಮ ಪ್ರಸ್ತುತ ವಚನದಲ್ಲಿ ಹೇಳಿರುವಂತೆ ತಾಯಿಯ ಮೊಲೆ ಹಾಲೇ ನಂಜಾಗುವಂತೆ, ನಮ್ಮ ಮುಂದಿನ ಪೀಳಿಗೆಗ ಕಲುಷಿತ ಪರಿಸರ, ವಾತಾವರಣವನ್ನು ಸೃಷ್ಟಿಸುವುದರ ಮೂಲಕ ಅವರ ಭವಿಷ್ಯಕ್ಕೆ ನಾವೇ ಮಾರಕವೂ ಆಗುತ್ತಿದ್ದೇವೆ.

ವಿಶ್ವದ ಶೇ. 17 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಜಗತ್ತಿನ ಭೂಪ್ರದೇಶದಲ್ಲಿ ಶೇ. 2.4 ರಷ್ಟು ಭಾರತ ಹೊಂದಿದೆ. ಆದರೆ Rapid Industrialization ಅಂದರೆ ತ್ವರಿತಗತಿಯ ಕೈಗಾರೀಕರಣದಿಂದ ವ್ಯವಸಾಯಕ್ಕೆ ಬೇಕಾಗುವ ಭೂಮಿಯನ್ನು ಕಳೆದುಕೊಳ್ಳುತ್ತಿದ್ದೇವೆ. ದೇಶದ ಆರ್ಥಿಕ ವ್ಯವಸ್ಥೆಗೆ ಭೂಮಿಯ ಅಗತ್ಯತೆ ಇದೆ. ಆದರೆ ಫಲವತ್ತಾದ ಭೂಮಿಯನ್ನು ಬಳಸುವುದು ಮುಂದಿನ ದಿನಮಾನಗಳಲ್ಲಿ ಅಪಾಯಕಾರಿಯಾಗಿದೆ. ಇದಲ್ಲದೇ ಶೇ 50 ಕ್ಕೂ ಹೆಚ್ಚು ವ್ಯವಸಾಯದ ಭೂಮಿ ಒಣ ಬೇಸಾಯ ಅಂದರೆ ಮಳೆಯಾಶ್ರಿತವಾಗಿದೆ. ಹೀಗೆಯೇ ನಾವು ಭೂಮಿಯನ್ನು ಕಳೆದುಕೊಂಡರೆ 2040 ರ ಹೊತ್ತಿಗೆ ಆಹಾರ ಉತ್ಪಾದನೆ ಶೇ 12 ಕ್ಕಿಂತಲೂ ಕಡಿಮೆಯಾಗಿ ಅನ್ನ-ಆಹಾರಕ್ಕಾಗಿ ಹಪ ಹಪಿಸುವಂತಾಗುವ ಅಪಾಯವಿದೆ. ಇದಕ್ಕೆ ಪ್ರಮುಖ ಕಾರಣಗಳನ್ನು ಪಟ್ಟಿ ಮಾಡುವುದಾದರೆ:

 ಅವೈಜ್ಞಾನಿಕ ಕೃಷಿ ಪದ್ಧತಿ.
 ಸಾವಯವ ಕೃಷಿ ಪದ್ದತಿಯನ್ನು ಬಿಟ್ಟು ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆ.
 ಕೈಗಾರಿಕೆಗಳಿಂದ‌ ಸಂಸ್ಕರಣೆ ಮಾಡದೆ ಹರಿದು ಬರುವ ತ್ಯಾಜ್ಯ.
 ಅತೀಯಾಗಿ ಬಳಸಿ ಪರಿಸರಕ್ಕೆ ಬಿಡುವ ಪ್ಲಾಸ್ಟಿಕ್‌ ತ್ಯಾಜ್ಯಗಳು.
 ವೈದ್ಯಕೀಯ ತ್ಯಾಜ್ಯಗಳನ್ನು ಪರಿಸರದಲ್ಲಿ ಬೀಸಾಡುವುದು.

ಇವೆಲ್ಲವುಗಳಿಂದ ವ್ಯವಸಾಯ ಉಪಯುಕ್ತ ಭೂಮಿಯ ವಿನಾಶದತ್ತ ತ್ವರಿತಗತಿಯಲ್ಲಿ ಸಾಗುತ್ತಿದೆ. ಇವೆಲ್ಲದರ ನಡುವೆ ವಿಶ್ವಸಂಸ್ಥೆಯು ಈ ಹಸಿರು ಪ್ರಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕೆಲವು ನಿರ್ಧಾರಗಳನ್ನು ಪ್ರಕಟಿಸಿದೆ. Goal No. 15 ರಲ್ಲಿ ಈ ಗುರಿಗಳನ್ನು ನಿಗದಿ ಮಾಡಿ ಎಲ್ಲ ದೇಶಗಳೂ ಈ ಗುರಿಗಳನ್ನು ತಲುಪುವಂತೆ ನಿರ್ದೇಶನ ನೀಡಿದೆ.

Goal 15. Protect, restore and promote sustainable use of terrestrial ecosystems, sustainably manage forests, combat desertification, and halt and reverse land degradation and halt biodiversity loss.
• Target 15.1: By 2030, ensure the conservation, restoration and sustainable use of terrestrial and inland freshwater ecosystems and their services, in particular forests, wetlands, mountains and drylands, in line with obligations under international agreements
• Target 15.2: By 2030, promote the implementation of sustainable management of all types of forests, halt deforestation, restore degraded forests and substantially increase afforestation and reforestation globally
• Target 15.3: By 2030, combat desertification, restore degraded land and soil, including land affected by desertification, drought and floods, and strive to achieve a land degradationneutral world
• Target 15.4: By 2030, ensure the conservation of mountain ecosystems, including their biodiversity, in order to enhance their capacity to provide benefits that are essential for sustainable development
• Target 15.5: Take urgent and significant action to reduce the degradation of natural habitats, halt the loss of biodiversity and, by 2030, protect and prevent the extinction of threatened species
• Target 15.6: Promote fair and equitable sharing of the benefits arising from the utilization of genetic resources and promote appropriate access to such resources, as internationally agreed
• Target 15.7: Take urgent action to end poaching and trafficking of protected species of flora and fauna and address both demand and supply of illegal wildlife products
• Target 15.8: By 2030, introduce measures to prevent the introduction and significantly reduce the impact of invasive alien species on land and water ecosystems and control or eradicate the priority species
• Target 15.9: By 2030, integrate ecosystem and biodiversity values into national and local planning, development processes, poverty reduction strategies and accounts
• Target 15.a: Mobilize and significantly increase financial resources from all sources to conserve and sustainably use biodiversity and ecosystems
• Target 15.b: Mobilize significant resources from all sources and at all levels to finance sustainable forest management and provide adequate incentives to developing countries to advance such management, including for conservation and reforestation
• Target 15.c: Enhance global support for efforts to combat poaching and trafficking of protected species, including by increasing the capacity of local communities to pursue sustainable livelihood opportunities

ಇಂದಿನ ಕಾಲಘಟ್ಟದಲ್ಲಿ ಮಾನವೀಯತೆ ಸಂಪೂರ್ಣವಾಗಿ ಮರೆಯಾಗಿ ಅದರ ಜಾಗವನ್ನು Consumerism ನ್ನು ಆಕ್ರಮಣ ಮಾಡಿದೆ. ಇದಕ್ಕಾಗಿಯೇ ಬಸವಣ್ಣನವರು “ಸಕಲಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲಸಂಗನ ಶರಣರೆ ಕುಲಜರು” ಎನ್ನುತ್ತಾ ಜೀವ ರಾಶಿಸಂಕುಲದ ಸಸ್ಯಗಳನ್ನು ಕುರಿತು ಈ ವಚನದಲ್ಲಿ ಎಚ್ಚರಿಸಿದ್ದಾರೆ.

ಮರ ಗಿಡು ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು
ಪ್ರಾಣವ ಕೊಂದುಂಡು, ಶರೀರವ ಹೊರೆವ ದೋಷಕ್ಕೆ
ಇನ್ನಾವುದು ವಿದ್ಥಿಯಯ್ಯಾ?
ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ
ಜೀವಜಾಲದಲ್ಲಿದೆ ಚರಾಚರವೆಲ್ಲ. ಅದು ಕಾರಣ,
ಕೂಡಲಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು
ನಿರ್ದೋಷಿಗಳಾಗಿ ಬದುಕಿದರು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-119 / ವಚನ ಸಂಖ್ಯೆ-1304)

ಆಚಾರ್ಯ ಸರ್‌ ಜಗದೀಶಚಂದ್ರ ಬೋಸ್‌ ಅವರು ಒಬ್ಬ ಬಹುಮುಖ ಪ್ರತಿಭೆಯ ಭೌತಶಾಸ್ತ್ರ ಹಾಗೂ ಜೀವಶಾಸ್ತ್ರ ವಿಜ್ಞಾನಿಗಳು. ಅನೇಕ ವಿಜ್ಞಾನದ ವಿಭಾಗಗಳಲ್ಲಿ ಸಂಶೋಧನೆ ಮಾಡಿದ್ದ ಸರ್‌ ಜಗದೀಶಚಂದ್ರ ಬೋಸ್‌ ಅವರ ಕಾಲಘಟ್ಟದ ಶ್ರೇಷ್ಠ ವಿಜ್ಞಾನಿಗಳಾಗಿದ್ದರು. ಸಸ್ಯಗಳಿಗೂ ಕೂಡ ಪ್ರಾಣಿ-ಪಕ್ಷಿಗಳಂತೆ ಜೀವ ಇದೆ ಮತ್ತು ಸಸ್ಯಗಳು ಹೊರಗಿನಿಂದಾಗುವ ಪ್ರಭಾವಗಳಿಗೆ ಸ್ಪಂದಿಸುತ್ತವೆ ಎಂಬುದನ್ನು ಸಂಶೋಧನೆಗಳ ಮೂಲಕ ಸಾಬೀತು ಪಡಿಸಿದ್ದರು.

ಪ್ರಾಣಿ ಮತ್ತು ಸಸ್ಯಗಳ ಮಧ್ಯ ಇರುವ ಜೈವಿಕ ಚಟುವಟಿಕೆಗಳಲ್ಲಿರುವ ವೈವಿಧ್ಯತೆ ಮತ್ತು ಅಸಮಾನತೆ ನಮಗೆ ತಿಳಿದಿರುವ ಸಂಗತಿ. ಪಶು-ಪಕ್ಷಿಗಳು ತಮ್ಮ ಚಲನವಲನಗಳಿಂದ ಪ್ರತಿಕ್ರಿಯೆ ತೋರಿಸುವುದು ಅವುಗಳಲ್ಲಿರುವ ನರಮಂಡಲಗಳಲ್ಲಿ ಕಂಡು ಬರುವ ವಿದ್ಯುತ್ ಸ್ಪಂದನೆಯಿಂದ ಉಂಟಾಗುವ ಪರಿವರ್ತಿನೆ ಕಾರಣ. ಸಸ್ಯಸಂಕುಲದಲ್ಲಿಯೂ ಕೂಡ ಇಂಥದ್ದೇ ಪ್ರತಿಕ್ರಿಯೆ ನೀಡುವ ವ್ಯವಸ್ಥೆ ಇದೆ ಎನ್ನುವುದನ್ನು ಸರ್‌ ಜಗದೀಶಚಂದ್ರ ಬೋಸರು ನೂರಾರು ಪ್ರಯೋಗಗಳನ್ನು ಮಾಡಿದರು. ಪ್ರಾಣಿಗಳಿಗೆ ಮಾತ್ರ ಇರಬಹುದೆಂದು ತಿಳಿದಿರುವ ವಿಶೇಷ ಪ್ರತಿಕ್ರಿಯೆಗಳೆಲ್ಲ ಸಸ್ಯಗಳಿಗೂ ಇವೆಯೆಂದು ಅವರು ಪ್ರಪ್ರಥಮ ಬಾರಿಗೆ ಸಂಶೋಧನೆ ಮಾಡಿ ನಿರೂಪಿಸಿದರು.
.
20 ನೇ ಶತಮಾನದ ಅತ್ಯಂತ ಗಮನ ಸೆಳೆಯುವ ಈ ವೈಜ್ಞಾನಿಕ ಸಂಶೋಧನೆಯ ಸಂಗತಿಯನ್ನು ಬಸವಣ್ಣನವರು ತಮ್ಮ ವಚನದಲ್ಲಿ “ಮರ ಗಿಡು ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು ಪ್ರಾಣವ ಕೊಂದುಂಡು” ಎನ್ನುತ್ತಾ ಮರ-ಗಿಡಗಳಿಗೆ ಮತ್ತು ಇಡೀ ಸಸ್ಯ ಸಂಕುಲಕ್ಕೆ ಜೀವವಿದೆ ಎನ್ನುವುದನ್ನು ಸ್ಪಷ್ಟವಾಗಿ ನಿರೂಪಣೆ ಮಾಡಿದ್ದು ಹೆಮ್ಮೆಯ ಸಂಗತಿ. ಇಂಥ ಅತ್ಯಂತ ಸೂಕ್ಷ್ಮ ಮತ್ತು ವೈಜ್ಞಾನಕ ತತ್ಯಗಳನ್ನೂ ಕೂಡ ಆಧ್ಯಾತ್ಮಿಕವಾಗಿ ಸಮೀಕರಿಸಿರುವುದು ಬಸವಾದಿ ಶರಣರ ಮನೋವೈಜ್ಞಾನಿಕ ಚಿಂತನೆಗೆ ಸಾಕ್ಷೀಭೂತವಾಗಿದೆ.

ಇದನ್ನು ಶರಣ ಚಂದಿಮರಸನವರೂ ಕೂಡ ಸಕಲ ಜೀವ ರಾಶಿಗಳ ಲೇಸನ್ನೇ ಬಯಸು ಅಂತಾ ಈ ವಚನದಲ್ಲಿ ಎಚ್ಚರಿಸಿದ್ದಾರೆ.

ವಸುಧೆಯೊಳಗುಬ್ಬಸವಾದ ಪ್ರಾಣಿಗಳನೆಲ್ಲ
ವಶಕ್ಕೆ ತಂದು ಕಾವ ಗೋವ
ಹೇಮ ಹೇಮಿಗಳೆಲ್ಲರು ನಾಮ ಡಾವಣಿಗಳಾದರು;
ವಿಧಿಗೆ ಬಲಿಯನು ತೆತ್ತಾಡುತಿರ್ಪರು
ಸಿಮ್ಮಲಿಗೆಯ ಚೆನ್ನಾರಾಮನೆಂಬ ಲಿಂಗದ
ಸೀಮೆಯೊಳಗೆಲ್ಲರು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1270 / ವಚನ ಸಂಖ್ಯೆ-671)


ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ಡಾವಣಿ : ಅತಿಯಾಗಿ ಆಪೇಕ್ಷಿಸು, ಸಂಭ್ರಮಿಸು, ತೀವ್ರತೆ.

ಈ ಸೃಷ್ಟಿಯ ವೈವಿಧ್ಯತೆಯ ಅದ್ಭುತ ಸಂಗತಿಗಳನ್ನು ವೈರಾಗ್ಯನಿಧಿ ಅಕ್ಕಮಹಾದೇವಿಯವರು ತಮ್ಮ ಒಂದು ವಚನದಲ್ಲಿ ಹೇಳತಾರೆ.

ಈಳೆ ನಿಂಬೆ ಮಾವು ಮಾದಲಕೆ ಹುಳಿನೀರನೆರೆದವರಾರಯ್ಯಾ?
ಕಬ್ಬು ಬಾಳೆ ಹಲಸು ನಾರಿವಾಳಕ್ಕೆ ಸಿಹಿನೀರನೆರೆದವರಾರಯ್ಯಾ?
ಕಳವೆ ರಾಜಾನ್ನ ಶಾಲ್ಯನ್ನಕ್ಕೆ ಓಗರದ ಉದಕವನೆರೆದವರಾರಯ್ಯಾ?
ಮರುಗ ಮಲ್ಲಿಗೆ ಪಚ್ಚೆ ಮುಡಿವಾಳಕ್ಕೆ ಪರಿಮಳದುದಕವನೆರೆದವರಾರಯ್ಯಾ?
ಇಂತೀ ಜಲವು ಒಂದೆ, ನೆಲನು ಒಂದೆ, ಆಕಾಶವು ಒಂದೆ.
ಜಲವು ಹಲವು ದ್ರವ್ಯಂಗಳ ಕೂಡಿ ತನ್ನ ಪರಿ ಬೇರಾಗಿಹ ಹಾಗೆ,
ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯನು
ಹಲವು ಜಗಂಗಳ ಕೂಡಿಕೊಂಡಿರ್ದಡೇನು? ತನ್ನ ಪರಿ ಬೇರೆ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-795 / ವಚನ ಸಂಖ್ಯೆ-75)


ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ಕಳವೆ : ಭತ್ತ
ಓಗರ : ಅನ್ನ, ಅಡಿಗೆ, ಆಹಾರ, ಬೋನ

ವಿಶ್ವದಲ್ಲಿರುವ ಸಮಸ್ತವೂ ಒಂದೇ ಒಂದು ವಸ್ತುವಿನಿಂದಾಗಿದೆ ಎನ್ನುವ ಬಸವಾದಿ ಶರಣರ “ನಾದಬಿಂದು ಕಳಾತೀತ” ಎನ್ನುವ ನಿರೂಪಣೆಯಂತೆ ಇಲ್ಲಿ ವೈರಾಗ್ಯನಿಧಿ ಅಕ್ಕಮಹಾದೇವಿಯವರು ತಿಳಿಸುತ್ತಾರೆ. ಅಕ್ಕಮಹಾದೇವಿಯವರು “ಇಂತೀ ಜಲವು ಒಂದೆ, ನೆಲನು ಒಂದೆ, ಆಕಾಶವೂ ಒಂದೆ” ಎನ್ನುವ ವಚನಭಾಗದಲ್ಲಿ ಈ ಸೃಷ್ಟಿಯ ರಹಸ್ಯವನ್ನು ಸ್ಪಷ್ಟಪಡಿಸಿದ್ದಾರೆ.

ಕೇವಲ ಕೈಗಾರಿಕೆಗಳು, ಕಾರ್ಖಾನೆಗಳು ಹಾಗೂ ವಾಹನಗಳು ಉಗುಳುವ ಹೊಗೆಯಿಂದ ಆಗುವ ಪ್ರಕೃತಿಯ ವಿನಾಶ ಆಗುವುದಲ್ಲ. ಆಧುನಿಕತೆಯ ಭರದಲ್ಲಿ ಇತ್ತೀಚಿನ ವರ್ಷಗಳಲ್ಲಿ ವ್ಯವಸಾಯಿಕ ಜಮೀನನ್ನು ಮಾರಾಟ ಮಾಡಿ ಎಲ್ಲಿ ನೋಡಿದಲ್ಲಿ ಗೃಹ ನಿರ್ಮಾಣ, ಅಪಾರ್ಟಮೆಂಟ್ ಕಟ್ಟುವುದರ ಮೂಲಕ ಬೆಳೆ ಬೆಳೆಯುವುದಕ್ಕೂ ಭೂಮಿ ಉಳಿಯುತ್ತಿಲ್ಲ. ಇನ್ನೂ ದುರಂತ ಅಂದರೆ ಹಣ ಮಾಡುವ ಒಂದೇ ಒಂದು ದುರಾಸೆಯಿಂದ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ ರೈತ ದಿನ ನಿತ್ಯ ಬೇಕಾಗುವ ಜೋಳ, ಗೋಧಿ, ತರಕಾರಿ ಬೆಳೆಗಳನ್ನು ಕಡೆಗಣಿಸಿದ್ದು ಮಾರಕವಾಗಿದೆ. ಇದು ಕೂಡ ಪ್ರಕೃತಿ ವಿಕೋಪಕ್ಕೆ ಮೂಲ ಕಾರಣ ಅಂತಾನೇ ಹೇಳಬಹುದು.

ಕೇವಲ ಹಣ ಗಳಿಸುವ ಉದ್ದೇಶದಿಂದ ಈ ಪ್ರಕೃತಿ ಸಂಬಂಧಗಳನ್ನು ತಿರಸ್ಕರಿಸಿ ಮಾಡುವ ವಾಣಿಜ್ಯೀಕರಣದ ಬದುಕಿನಲ್ಲಿ ನಾವು ಸ್ಪಂದನೆ ಕಳೆದುಕೊಳ್ಳುತ್ತಿದ್ದೇವೆ. ಈ ಮೂಲಕ ನಮ್ಮತನ, ನಮ್ಮ ಸಂಸ್ಕೃತಿ-ಸಂಸ್ಕಾರಗಳನ್ನು ಮರೆಯುತ್ತಿದ್ದೇವೆ. ನಮ್ಮ ರೈತರು ವ್ಯವಸಾಯದ ಭೂಮಿಯನ್ನು ಉಳಿಸಿಕೊಳ್ಳಬೇಕಾಗಿದೆ. ಬಹಳ ಪ್ರಮುಖವಾಗಿ ಶ್ರದ್ಧೆ-ನಿಷ್ಠೆ ನಮ್ಮಲ್ಲಿರಬೇಕು. ಈ ಕೈಗಾರಿಕೀಕರಣ, ಅಣುಸಂಸ್ಕೃತೀಕರಣ ಮತ್ತು ರಾಸಾಯಿನೀಕೀಕರಣದಿಂದ ನಮ್ಮ ಆಹಾರ ಕಲುಷಿತಗೊಂಡಿದೆ. ಇತ್ತಿಚೆಗಂತೂ ಹಣ್ಣುಗಳನ್ನು ಸಂಸ್ಕರಣೆ ಅಥವಾ ಅತ್ಯಂತ ಬೇಗ ಹಣ್ಣು ಮಾಡುವುದಕ್ಕೆ ಜೀವ ತೆಗೆಯುವ ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಅದಕ್ಕೆ ಅಲ್ಲಮ ಪ್ರಭುಗಳ ಒಂದು ವಚನ ಸಂವಾದಿಯಾಗಿ ನಿಲ್ಲುತ್ತದೆ.

ಒತ್ತಿ ಹಣ್ಣ ಮಾಡಿದಡೆ ಅದೆತ್ತಣ ರುಚಿಯಪ್ಪುದೊ?
ಕಾಮಿಸಿ ಕಲ್ಪಿಸಿ ಭಾವಿಸಿದಡೆ ಅದೆ ಭಂಗ.
ಭಾವಿಸುವ ಭಾವನೆಗಿಂದ ಸಾವು [ದೆ] ಲೇಸು ಕಾಣಾ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-188 / ವಚನ ಸಂಖ್ಯೆ-646)

ಕಾಯಿಯು ತಾನಾಗಿಯೇ ಪ್ರಕೃತಿದತ್ತವಾಗಿ ಹಣ್ಣಾಗಬೇಕು. ಆಗ ಅದರ ರುಚಿ ಅತ್ಯಂತ ಮಧುರವಾಗಿರುತ್ತದೆ. ಆದರೆ ನಮ್ಮ ಅವಸರಕ್ಕಾಗಿ, ನಮ್ಮ ಧಾವಂತಕ್ಕಾಗಿ ಮತ್ತು ಬೇಗ ಬೇಗ ಹಣ ಮಾಡುವ ದುರುದ್ದೇಶದಿಂದ ಒತ್ತಿ ಒತ್ತಿ ಮತ್ತು ರಾಸಾಯನಿಕಗಳನ್ನು ಬಳಸಿ ಕೃತಕವಾಗಿ ಹಣ್ಣು ಮಾಡಿದರೆ ಅದರ ರುಚಿ ಹೊರಟು ಹೋಗುತ್ತದೆ. ಅದನ್ನು ತಿಂದು ಆರೋಗ್ಯ ಹಾಳು ಮಾಡಿಕೊಳ್ಳೋದಕ್ಕಿಂತ ತಿನ್ನದಿರುವುದೇ ಉತ್ತಮ. ಇಂಥ ಅವಜ್ಞೆಗಳನ್ನು 12 ನೇ ಶತಮಾನದಲ್ಲಿಯೂ ಕೂಡ ಶರಣರು ಎಚ್ಚರಿಸಿದ್ದರು ಎನ್ನುವುದನ್ನು ನಾವು ಗಮನಿಸಬೇಕು.

ಇಂತಹ ದಯಾಪರತೆ ಚಿಂತನೆಯನ್ನು ದಯೆಗೆ ಅರಸನಾದ ಅಯ್ಯ ಶರಣ ದಸರಯ್ಯನವರು ತಮ್ಮ ಒಂದು ವಚನದಲ್ಲಿ ನಿರೂಪಣೆ ಮಾಡಿದ್ದಾರೆ.

ಸರ್ವಮಯ ನಿನ್ನ ಬಿಂದುವಾದಲ್ಲಿ
ಆವುದನಹುದೆಂಬೆ, ಆವುದನಲ್ಲಾಯೆಂಬೆ?
ಸರ್ವಚೇತನ ನಿನ್ನ ತಂತ್ರಗಳಿಂದ ಆಡುವವಾಗಿ
ಇನ್ನಾವುದ ಕಾಯುವೆ, ಇನ್ನಾವುದ ಕೊಲುವೆ?
ತರುಲತೆ ಸ್ಥಾವರ ಜೀವಂಗಳೆಲ್ಲಾ
ನಿನ್ನ ಕಾರುಣ್ಯದಿಂದೊಗೆದವು.
ಆರ ಹರಿದು ಇನ್ನಾರಿಗೆ ಅರ್ಪಿಸುವೆ?
ತೊಟ್ಟು ಬಿಡುವನ್ನಕ್ಕ ನೀ ತೊಟ್ಟುಬಿಟ್ಟ ಮತ್ತೆ
ನೀ ಬಿಟ್ಟರೆಂದು ಎತ್ತಿ ಪೂಜಿಸುತಿರ್ದೆ ದಸರೇಶ್ವರನೆಂದು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1306 / ವಚನ ಸಂಖ್ಯೆ-1062)

ಸಕಲ ಜೀವಿಗಳಲ್ಲಿಯೂ ಕೂಡ ಜೀವಾಮೃತ ಸ್ಫುರಿಸುತ್ತದೆ ಎನ್ನುವುದನ್ನು ಶರಣ ದಸರಯ್ಯನವರು ಹೇಳುತ್ತಾ “ಇನ್ನಾವುದ ಕಾಯುವೆ, ಇನ್ನಾವುದ ಕೊಲುವೆ?” ಎಂದು ಸಸ್ಯಗಳನ್ನು ಗಿಡ ಮರಗಳನ್ನು ಕೊಲ್ಲುವುದು ಎಷ್ಟು ಸಮಂಕಜಸ ಎನ್ನುವುದನ್ನು ಪ್ರಶ್ನೆ ಮಾಡತಾರೆ. ಮುಂದುವರೆದು “ತರುಲತೆ ಸ್ಥಾವರ ಜೀವಂಗಳೆಲ್ಲಾ ನಿನ್ನ ಕಾರುಣ್ಯದಿಂದೊಗೆದವು” ಎನ್ನುವಲ್ಲಿ ಅವುಗಳಿಗೂ ಜೀವ ಇದೆ ಅವುಗಳನ್ನು ಕೊಲ್ಲುವುದು ತಪ್ಪು ಎಂದು ಎಚ್ಚರಿಸಿದ್ದಾರೆ.

ಇನ್ನು ಜೀವ ವೈವಿಧ್ಯತೆ ಎಂದರೆ ಭೂಮಿಯ ಮೇಲಿನ ಎಲ್ಲಾ ಜೀವಿಗಳ ಮೊತ್ತವಾಗಿದೆ. ಮಣ್ಣಿನಲ್ಲಿರುವ ಚಿಕ್ಕ ಬ್ಯಾಕ್ಟೀರಿಯಾದಿಂದ ಸಮುದ್ರದಲ್ಲಿನ ದೊಡ್ಡ ತಿಮಿಂಗಿಲದವರೆಗೆ ಪ್ರತಿಯೊಂದು ವೈಯಕ್ತಿಕ ಜೀವನವು ಭೂಮಿಯ ಜೀವವೈವಿಧ್ಯತೆಯ ಒಂದು ಅಂಶವಾಗಿದೆ. ನಿರ್ದಿಷ್ಟ ಪರಿಸರ ವ್ಯವಸ್ಥೆ ಅಥವಾ ಬಯೊಮ್‌ನೊಳಗೆ ಅಥವಾ ಇಡೀ ಭೂಮಿಯಲ್ಲಿರುವ ಕೋಟ್ಯಾನು ಕೋಟಿ ಜೀವಸಂಕುಲಗಳ ಹುಟ್ಟು ಸಾವುಗಳ ವ್ಯವಸ್ಥೆ. ಸಂಶೋಧನೆಯ ಮೂಲಗಳ ಅಧ್ಯಯನದ ಪ್ರಕಾರ ಸರಿ ಸುಮಾರು 3.5 ಶತಕೋಟಿ ವರ್ಷಗಳ ವಿಕಸನದ ಫಲವಾಗಿ ಇಂದು ಭೂಮಿಯಲ್ಲಿ ಕಂಡುಬರುವ ಜೀವವೈವಿಧ್ಯದಲ್ಲಿ ದಶಲಕ್ಷಗಳಷ್ಟು ವಿವಿಧ ಜೈವಿಕ ಪ್ರಭೇಧಗಳಿವೆ. ಈ ಪರಿಸರ ಅಥವಾ Eco-System ಜೀವವೈವಿಧ್ಯತೆಯು ಈ ಜೀವರೂಪಗಳು ಮತ್ತು ಅವುಗಳ ಆವಾಸಸ್ಥಾನಗಳ ನಡುವಿನ ಸಂಬಂಧವಾಗಿದೆ. ಈ ಸಂಗತಿಯನ್ನು ಬಸವಣ್ಣನವರ ಎರಡು ವಚನಗಳಲ್ಲಿ ನಿರೂಪಣೆ ಮಾಡುತ್ತಾರೆ.

ಜಾಗತೀಕರಣದ ಪರಿಣಾಮಗಳು ಎಂದಿಗಿಂತಲೂ ತ್ವರಿತವಾಗಿ ಇಂದು ಅತ್ಯಮೂಲ್ಯ ಪರಿಸರ ಮತ್ತು ಮೂಲ ಸಂಸ್ಕೃತಿಯ ಮೇಲೆ ಧಾಳಿ ಮಾಡುತ್ತಿವೆ. ಗ್ರಾಮೀಣ ಪರಿಸರ, ವ್ಯವಸಾಯಿಕ ಭೂಮಿ, ಸಾಹಿತ್ಯ, ಸಂಸ್ಕೃತಿ, ಕಲೆಗಳಂತಹ ಸೃಜನಶೀಲತೆಗೆ ಧಕ್ಕೆ ಉಂಟಾಗಿದೆ. ಈ ಸಂದಿಗ್ಧ ಕಾಲಘಟ್ಟದಲ್ಲಿ ವಿಸ್ಮೃತಿಗೆ ಒಳಗಾಗುತ್ತಿರುವ ಸಮುದಾಯಕ್ಕೆ ಸ್ಥಳೀಯ ಜ್ಞಾನ ಸಂಪತ್ತಿನ ಮಹತ್ವವನ್ನು ಮನವರಿಕೆ ಮಾಡಿಕೊಡಲು ವಚನ ಸಾಹಿತ್ಯ ಮತ್ತು ಜಾನಪದವೇ ಮೂಲ ಆಕರವಾಗಿದೆ. ಈ ದಿಸೆಯಲ್ಲಿ ಸಮಗ್ರ ವಚನ ಸಾಹಿತ್ಯ ಮತ್ತು ಕನ್ನಡ ಜನಪದ ಸಾಹಿತ್ಯವು ಅತ್ಯಂತ ಮಹತ್ವದ ಸ್ಥಾನ ಪಡೆಯುತ್ತಿದೆ. ಈ ನಿಟ್ಟಿನಲ್ಲಿ ಬಸವಣ್ಣನವರ ಈ ಎರಡು ವಚನಗಳು ನಮ್ಮ ಕಣ್ಣನ್ನು ತೆರೆಸುತ್ತದೆ.

ಶ್ರೀ ಕಾಡಸಿದ್ಧೇಶ್ವರರು ಸಿದ್ಧ ಸಂಪ್ರದಾಯದ 17 ನೇ ಶತಮಾನದಲ್ಲಿದ್ದಂಥ ಶರಣರು. ಇವರು ಬರೆದ “ವೀರಶೈವ ಷಟ್‌ಸ್ಥಲ” ಒಂದು ಮೇರು ಕೃತಿ. ದಿಟ್ಟ ಗಣಾಚಾರಿ ಅಂಬಿಗರ ಚೌಡಯ್ಯನವರ ವಚನಗಳಂತೆ ಕಾಡಸಿದ್ಧೇಶ್ವರರ ವಚನಗಳೂ ಕೂಡ ಕಟೋಕ್ತಿಯಿಂದ ಕೂಡಿರುವಂಥವು. ಭೂಮಿಯ ಮಣ್ಣಿನ ಅನೇಕ ಪ್ರಕಾರಗಳನ್ನು ತಮ್ಮ ಈ ವಚನದಲ್ಲಿ ಊಲ್ಲೇಖ ಮಾಡುವುದರ ಮೂಲಕ ಪರಿಸರದ ಅಂಗವಾದ ಮಣ್ಣಿನ ಗುಣಲಕ್ಷಣಗಳನ್ನು ನಿರೂಪಣೆ ಮಾಡುತ್ತಾರೆ.

ಕರ್ಲಭೂಮಿಯ ಹರಳ ಅಶ್ವಪತಿ ಕಿರಣದಿಂದ ದಹಿಸಿ,
ನೀರಭೂಮಿಯ ಹರಳ ಯರಳಪತಿ ಕಾಯಿಂದ ದಹಿಸಿ,
ಬೆಟ್ಟದ ಭೂಮಿಯ ಹರಳ ಟೆಗರಪತಿ ಕಾಂತಿಯಿಂದ ದಹಿಸಿ,
ಉಳಿದ ಭೂಮಿಯ ಹರಳ ದಗಡಲೋಹದ ಕಿಡಿಗಳಿಂದ ದಹಿಸಿ,
ಸುಣ್ಣವ ಮಾಡಿ ಮೂರು ಮುಖದಪ್ಪಿಗೆ ಕೊಟ್ಟು
ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
(ಸಮಗ್ರ ವಚನ ಸಂಪುಟ: ಎರಡು-2016 / ಪುಟ ಸಂಖ್ಯೆ-102 / ವಚನ ಸಂಖ್ಯೆ-376)


ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ಕರ್ಲಭೂಮಿ : ಕಲ್ಲುಭೂಮಿ, ಫಲವತ್ತತೆ ಇರದ ಭೂಮಿ.
ಅಶ್ವಪತಿ : ಸೂರ್ಯ.
ನೀರಭೂಮಿ : ಜವುಳು ಭೂಮಿ, ಕ್ಷಾರಯುಕ್ತ ಭೂಮಿ.
ಯರಳ : ಒಣಬೀಜ.
ಟೆಗರ : ಒಣಕಟ್ಟಿಗೆ.
ದಗಡ : ಬೆಂಕಿಯನ್ನು ಹುಟ್ಟಿಸುವ ಕಲ್ಲು.
ದಹಿಸಿ : ಉರಿಯುವಂತೆ ಮಾಡು, ಸುಡು.
ಮುಖದಪ್ಪಿಗೆ : ಮುಖಕ್ಕೆ ಹಚ್ಚು.

ಹರಳು ಎನ್ನುವ ಶಬ್ದ ಪ್ರಯೋಗ ಮಾಡತಾರೆ ಕಾಡಸಿದ್ಧೇಶ್ವರರು. ಹರಳು ಅಂದರೆ ನಾವು ಈಗ ಕಂಡುಕೊಂಡ ಅದಿರು. ಕಲ್ಲುಭೂಮಿ, ಜವುಳು ಭೂಮಿ ಮುಂತಾದ ವಿವಿಧ ರೀತಿಯ ಭೂಮಿ ಗುಣವನ್ನು ಇಲ್ಲಿ ಉಲ್ಲೇಖ ಮಾಡುತ್ತಾರೆ. ಇದರಿಂದ ವಿವಿಧ ರೀತಿಯ ಲೋಹವನ್ನು ಉತ್ಪಾದನೆ ಮಾಡಬಹುದು. ಇಲ್ಲಿ ಕೊನೆಗೆ ಉಳಿಯುವುದೇ ಸುಣ್ಣವೆನ್ನುವ ಲವಣ.

1968 ರಲ್ಲಿ ಇರಾನ್ ದೇಶದವರಾದ ಮುಸ್ಲಿಂ ತತ್ವಜ್ಞಾನಿ ಸೈಯ್ಯದ್ ಹುಸೈನ್ ನಸ್ರ್ ಅವರು The Encounter of Man and Nature, The Spiritual Crisis of Modern Man ಪುಸ್ತಕದಲ್ಲಿ ಪರಿಸರವನ್ನು ಕುರಿತು ಬರಹಗಳನ್ನು ಪ್ರಕಟಿಸಿದರು. ರೇಚಲ್ ಕಾರ್ಸನ್ ಹಾಗೂ ಇತಿಹಾಸಕಾರ ಲಿನ್ ವೈಟ್ ಮತ್ತಿತರ ಅನೇಕ ಪರಿಸರ ವಿಜ್ಞಾನಿಗಳಂತೆ ಸೈಯ್ಯದ್‌ ಹುಸೈನ್ ನಸ್ರ್ ಅವರೂ ಕೂಡ ಪ್ರಪಂಚದ ಮೇಲೆ ದುಷ್ಟ ಪರಿಣಾಮ ಬೀರಲಿರುವ ಪರಿಸರ ಬಿಕ್ಕಟ್ಟನ್ನು ಗುರುತಿಸಿದ್ದರು. ಅದರ ನಂತರ ಹತ್ತು ವರ್ಷಗಳ ಕಾಲ ಧರ್ಮ ವಿಜ್ಞಾನ, ಪರಿಸರ ಎಂಬೀ ವಿಷಯಗಳ ಬಗ್ಗೆ ಅಂದಾಜು 50 ರಷ್ಟು ಕೃತಿಗಳನ್ನು ಬರೆದಿದ್ದಾರೆ.

ಸೈಯ್ಯದ್ ಹುಸೈನ್ ನಸ್ರ್ ಅವರು ಬರೀತಾರೆ;
Man should accept and follow the nature of things and not seek to disturb nature by artificial means. Perfect action is to act without acting, without self-interest and attachment, or, in other words, according to nature which acts freely and without greed, lust or other ulterior (Hidden) motives. When we turn to the Hindu tradition, there also we find an elaborate metaphysical doctrine concerning nature along with the development of many sciences in the bosom of Hinduism. (Page No. 88)

ಮಾನವನು ತನ್ನ ಸ್ವಯಂ ಹಿತಾಸಕ್ತಿಯನ್ನು ಬದಿಗಿಟ್ಟು ಪ್ರಕೃತಿಯ ಜೊತೆಗೆ ಸಹಜೀವನ ಮಾಡಬೇಕೇ ಹೊರತು ಪ್ರಕೃತಿಯನ್ನು ವಿನಾಶಗೊಳಿಸಬಾರದು. ಭಾರತೀಯರಲ್ಲಿ ಪರಿಸರ ಮತ್ತು ಪ್ರಕೃತಿಯನ್ನು ಆರಾಧಿಸುವ ಒಂದು ದೊಡ್ಡ ಪರಂಪರೆಯು ಅನಾದಿ ಕಾಲದಿಂದಲೂ ಬೆಳದು ಬಂದಿದೆ.

ಪ್ರಕೃತಿಯೊಂದಿಗೆ ತಮ್ಮನ್ನು ತಾವು ಗುರುತಿಸಿಕೊಂಡು ಪ್ರಕೃತಿಯ ಜೊತೆಗೆ ಸಹಬಾಳ್ವೆ ನಡೆಸಿದವರು ಬಸವಾದಿ ಶರಣರು. ಈ ತತ್ವವನ್ನು ಅತ್ಯಂತ ಸಮರ್ಥವಾಗಿ ಪ್ರತಿಪಾದಿಸಿದವರು ವೈರಾಗ್ಯನಿಧಿ ಅಕ್ಕಮಹಾದೇವಿಯವರು. ಅವರ ಒಂದು ವಚನ ಪ್ರಕೃತಿ ಪ್ರೇಮವನ್ನು ತಿಳಿಸಿಕೊಡಿತ್ತದೆ.

ವನವೆಲ್ಲಾ ನೀನೆ, ವನದೊಳಗಣ ದೇವತರುವೆಲ್ಲಾ ನೀನೆ,
ತರುವಿನೊಳಗಾಡುವ ಖಗಮೃಗವೆಲ್ಲಾ ನೀನೆ.
ಚೆನ್ನಮಲ್ಲಿಕಾರ್ಜುನಾ, ಸರ್ವಭರಿತನಾಗಿ
ಎನಗೇಕೆ ಮುಖದೋರೆ?
(ಸಮಗ್ರ ವಚನ ಸಂಪುಟ: ಎರಡು-2016 / ಪುಟ ಸಂಖ್ಯೆ-823 / ವಚನ ಸಂಖ್ಯೆ-361)

ಸಸ್ಯಗಳನ್ನು ದೇವತರು ಅಂತ ವರ್ಣಿಸತಾರೆ ಅಕ್ಕಮಹಾದೇವಿಯವರು. ಚನ್ನಮಲ್ಲಿಕಾರ್ಜುನನೇ ಇವೆಲ್ಲಾ ಜೀವರಾಶಿಗಳು ಎನ್ನುತ್ತಾ ಪ್ರಕೃತಿಯಲ್ಲಿ ಕಂಡು ಬರುವ ಜೈವಿಕ ಮತ್ತು ಅಜೈವಿಕ ವಸ್ತುಗಳಲ್ಲಿ ಆರಾಧ್ಯ ದೈವ ಚನ್ನಮಲ್ಲಕಾರ್ಜುನನ್ನು ಕಂಡವರು ಅಕ್ಕಮಹಾದೇವಿಯವರು.

ಈ ತತ್ವ ಸಿದ್ಧಾಂತವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಕಲಬುರ್ಗಿಯ ಡಾ. ಕಲ್ಯಾಣರಾವ್‌ ಪಾಟೀಲ ಅವರು ಇತ್ತೀಚೆಗೆ ಬಸವ ಸಮೀತಿಯಲ್ಲಿ ನೀಡಿದ ಅದ್ಭುತ ಉಪನ್ಯಾಸದಲ್ಲಿ ಪರಿಸರದ ಕುರಿತಂತೆ ಅಲ್ಲಮಪ್ರಭುಗಳ ಹಲವಾರು ವಚನಗಳನ್ನು ಉಲ್ಲೇಖ ಮಾಡಿದ್ದಾರೆ. ಅದರಲ್ಲಿನ ಒಂದು ವಚನವನ್ನು ಇಲ್ಲಿ ಹೇಳುವ ಸದಾವಕಾಶ ಸಿಕ್ಕಿದೆ. ಅಲ್ಲಮ ಪ್ರಭುಗಳ ವಚನ ಹೀಗಿದೆ.

ಪೃಥ್ವಿಯನತಿಗಳೆದ ಸ್ಥಾವರಂಗಳಿಲ್ಲ;
ಅಪ್ಪುವನತಿಗಳೆದ ತೀರ್ಥಯಾತ್ರೆಗಳಿಲ್ಲ.
ಅಗ್ನಿಯನತಿಗಳೆದ ಹೋಮ ಸಮಾಧಿಗಳಿಲ್ಲ.
ವಾಯುವನತಿಗಳೆದ ನೇಮನಿತ್ಯಂಗಳಿಲ್ಲ.
ಆಕಾಶವನತಿಗಳೆದ ಧ್ಯಾನ ಮೌನಂಗಳಿಲ್ಲ.
ಗುಹೇಶ್ವರನೆಂದರಿದವಂಗೆ ಇನ್ನಾವಂಗವೂ ಇಲ್ಲ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-168 / ವಚನ ಸಂಖ್ಯೆ-389)

ಪ್ರತ್ಯೇಕ ಮಾನವ ದೇಹವಾಗಲಿ ಅಥವಾ ಪರಿಸರದಂಥ ದೊಡ್ಡದಾದ ವಿಶ್ವ ದೇಹವಾಗಲಿ, ಮೂಲಭೂತವಾಗಿ, ಅವು ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಪಂಚಭೂತಗಳಿಂದ ಮಾಡಲ್ಪಟ್ಟಿದೆ. ಹಾಗಾಗಿ ನಮ್ಮಲ್ಲಿ ಎಲ್ಲವೂ ಇಲ್ಲಿಯೇ ಇದೆ ಅಥವಾ ನಮ್ಮಲ್ಲಿಯೇ ಇದೆ. ಅದನ್ನು ಕೆಡಿಸಬಾರದು ಮತ್ತು ಹಾಳು ಮಾಡಬಾರದು ಎನ್ನುವದನ್ನು ಅರಿಯುವ ಮನಸ್ಸು ನಮ್ಮದಾಗಬೇಕು. ಇದನ್ನು ಅರಿಯದೇ ಹೋದದ್ದಕ್ಕೆ ಎಲ್ಲವೂ ಅಯೋಮಯ ಪರಿಸ್ಥಿತಿ ಎದುರಾದಂತಿದೆ. ಇದನ್ನು ಅರಿತುಕೊಂಡು ಪರಿಸರವನ್ನು ಹಾಗೂ ಪ್ರಕೃತಿಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಹೆಗಲ ಮೇಲಿದೆ.

ಪರಿಸರ ರಕ್ಷಣೆ ಕುರಿತಾಗಿ ಸರ್ಕಾರೇತರ ಸಂಸ್ಥೆಗಳು ಅಭೂತಪೂರ್ವ ಕಾರ್ಯಗಳನ್ನು ಮಾಡುತ್ತಿವೆ. ಆದರೆ ಕಾಲಕಾಲಕ್ಕೆ ಬಂದ ನಮ್ಮ ಸರ್ಕಾರಗಳು ಇಂಥ ಯಾವುದೇ ಪ್ರಯತ್ನಗಳನ್ನು ಮಾಡದಿರುವುದರ ದುರಾದೃಷ್ಟ. ಆಫ್ರಿಕಾ ಖಂಡದ ಒಂದು ಸಣ್ಣ ದೇಶ ರುವಾಂಡಾ. ಅಲ್ಲಿನ ಪರಿಸರ ಪ್ರಜ್ಞೆ ಮತ್ತು ಗೋರಿಲ್ಲಾಗಳ ಸಂರಕ್ಷಣೆಯಲ್ಲಿ ರುವಾಂಡಾ ಕೈಗೊಂಡ ಕಾರ್ಯಕ್ರಮ ಅತ್ಯಂತ ಶ್ಲಾಘನೀಯ. ವಿಸ್ತೀರ್ಣದಲ್ಲಿ ಕರ್ನಾಟಕದ ಅರ್ಧದಷ್ಟಿರುವ ರುವಾಂಡಾ ದೇಶದ ವಿರುಂಗಾ ಗುಡ್ಡಗಾಡಿನಲ್ಲಿ ವಾಸಿಸುವ “Mountain Gorilla” ಗಳು ವಿನಾಶದ ಅಂಚಿಗೆ ಬಂದು ನಿಂತಿದ್ದವು. ಅಲ್ಲಿನ ಸರ್ಕಾರವೇ ಗೋರಿಲ್ಲಾಗಳ ಸಂರಕ್ಷಣೆಯ ಜೊತೆಗೆ ಪ್ರಾಣಿ ಸಂಕುಲ ಮತ್ತು ಪರಿಸರವನ್ನು ಮಾಡುತ್ತಿದೆ ಎನ್ನುವುದು ಹೆಮ್ಮೆಯ ಸಂಗತಿ. ಇದನ್ನು ತಮ್ಮ ದೇಶದ ಬಂಡವಾಳವಾಗಿಸಿಕೊಂಡು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡಿದ್ದು ವಿಶೇಷತೆ.

ಅಮೇರಿಕಾ ಸಂಜಾತೆ ಪರಿಸರ ತಜ್ಞೆ ಡಯಾನ್‌ ಫಾಸ್ಸಿ ಎನ್ನುವ ಮಹಿಳೆ ಈ ನಿಟ್ಟಿನಲ್ಲಿ ತಮ್ಮ ಇಡೀ ಬದುಕನ್ನು ಮುಡುಪಾಗಿರಿಸಿ ಅಮರಳಾಗಿದ್ದಾಳೆ.

ಹೀಗೆ ಹಲವಾರು ವಚನಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡತಾ ಹೇಳತಾ ಹೋಗಬಹುದು. ಆ ವಚನಗಳಿಗೆ ಕೊನೇನೇ ಇಲ್ಲಾ. ಈ ವಚನಗಳನ್ನು ಓದೋದು, ಅರಿಯೋದು, ಅರ್ಥೈಸೋದು ಅಷ್ಟಕ್ಕೆ ಸಾಲದು. ಕೊನೇಯ ಪಕ್ಷ ವೈಚಾರಿಕ ಹಾಗೂ ವೈಜ್ಞಾನಿಕ ಹಿನ್ನೆಲೆಯೊಳಗೆ ಅರ್ಥೈಸಿಕೊಂಡು ನಮ್ಮ ಬದುಕಿನಲ್ಲಿ ಸಾಧ್ಯವಾದಷ್ಟು ನಾವು ಅಳವಡಿಸಿಕೊಳ್ಳಬೇಕು. ವ್ಯೋಮಕಾಯ ಅಲ್ಲಮ ಪ್ರಭುಗಳ ಈ ವಚನ ನನ್ನನ್ನು ಬಹಳಷ್ಟು ಕಾಡಿದಂಥ ವಚನ. ಹಿಡಿದುಕೊಳ್ಳುವ ಕೈಯಲ್ಲಿ ಕತ್ತಲೆ, ನೋಡುವ ಕಣ್ಣಿನಲ್ಲಿ ಕತ್ತಲೆ, ಮನದಲ್ಲಿ ನೆನೆಯುವಲ್ಲಿ ಕತ್ತಲೆ ಹೀಗೆ ಎಲ್ಲ ಕಡೆಯೂ ಕತ್ತಲೆಯನ್ನು ತುಂಬಿಕೊಂಡು ಇವತ್ತಿನ ಪರಿಸರ ಪ್ರಜ್ಞೆಯನ್ನು ಹೇಗೆ ನಾವು ಕತ್ತಲೆಗೆ ತಳ್ಳಿದ್ದೇವೆ ಎನ್ನುವುದಕ್ಕೆ ಉದಾಹರಣೆಯಾಗಿದೆ ಅಂತ ನನ್ನ ಅನಿಸಿಕೆ. ಈ ವಚನದೊಂದಿಗೆ ನನ್ನ ಉಪನ್ಯಾಸಕ್ಕೆ ವಿರಾಮ ಹೇಳುತ್ತೇನೆ.

ಹಿಡಿವ ಕೈಯ ಮೇಲೆ ಕತ್ತಲೆಯಯ್ಯಾ,
ನೋಡುವ ಕಂಗಳ ಮೇಲೆ ಕತ್ತಲೆಯಯ್ಯಾ,
ನೆರೆವ ಮನದ ಮೇಲೆ ಕತ್ತಲೆಯಯ್ಯಾ,
ಕತ್ತಲೆ ಎಂಬುದು ಇತ್ತಲೆಯಯ್ಯಾ,
ಗುಹೇಶ್ವರನೆಂಬುದು ಅತ್ತಲೆಯಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-256 / ವಚನ ಸಂಖ್ಯೆ-219)

ಶರಣು ಶರಣಾರ್ಥಿಗಳು.

ಸಂಗ್ರಹ ಮತ್ತು ಲೇಖನ:
ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಶಾಲೆಯ ಹತ್ತಿರ
ಕ್ಯಾತ್ಸಂದ್ರ, ತುಮಕೂರು – 572 104
ಮೋಬೈಲ್‌ ನಂ : 9741 357 132
ಈ-ಮೇಲ್‌ : vijikammar@gmail.com

ಸಹಾಯಕ ಗ್ರಂಥಗಳು :
ವಚನಗಳಲ್ಲಿ ಪರಿಸರ ಕಾಳಜಿ : ಡಾ. ಗುರುರಾಜ ಪೋಶೆಟ್ಟಿಹಳ್ಳಿ.
ಬಸವಯುಗದ ವಚನ ಮಹಾಸಂಪುಟಗಳು (1&2) : ಡಾ. ಎಮ್.‌ ಎಮ್.‌ ಕಲಬುರ್ಗಿ.
ವಚನಗಳಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕತೆ : ಗೌ. ಸಂ. ಡಾ. ಕೆ. ಬಿ. ಗುಡಸಿ.
ವಚನಗಳಲ್ಲಿ ವಿಜ್ಞಾನ : ಡಾ. ವೀರಣ್ಣ ರಾಜೂರ, ಶ್ರೀ ಬಸವರಾಜ ಹೂಗಾರ.
ವಚನಾರ್ಥ ಚಿಂತನ : ಡಾ. ಸಿದ್ಧರಾಮ ಸ್ವಾಮಿಗಳು.
ಪರಿಸರ ಪ್ರಜ್ಞೆ : ಶ್ರೀ ರಾಜಕುಮಾರ ಕುಲಕರ್ಣಿ.
ಶರಣರು ಮತ್ತು ಪರಿಸರ : ಡಾ. ಬಸವರಾಜ ಬಲ್ಲೂರ.
Man, and Nature : Seyyed Hossein Nasr.
Ecological Economics : Elsevier Blog.
The Tao of Physics : Fritzap Capra.

Loading

This Post Has One Comment

  1. mshashidhar

    Wonderful article it requires lot of patience and concentration to grasp and understand every sentence,,,Thanq you so much

Leave a Reply