
ಭಕ್ತಿ ಸಾಹಿತ್ಯದಲ್ಲಿ ಭಜನೆಗೆ ತನ್ನದೇ ಆದ ಆಧ್ಯಾತ್ಮಿಕ ಸಂಸ್ಕೃತಿಯ ವರ್ತುಲ ವಿದೆ.ಭಜನೆ ಜನಪದರ ಒಡಲಿನಿಂದ ಹುಟ್ಟಿ ಭಕ್ತಿಯ ಮೂಲಕ ಗುರುತಿಸಿ ಕೊಳ್ಲುವ ಕ್ರಿಯೆಯಾಗಿದೆ.ದಣಿದ ಮನಗಳಿಗೆ ಶಾಂತತೆಯನ್ನು ಏಕಾಗ್ರತೆ ಯನ್ನು ಕೊಡುವುದೆ ಭಜನೆಯಾಗಿದೆ.ಜನಪದರಲ್ಲಿ ಭಜನೆಯಾದರೆ ಶಿಷ್ಟರಲ್ಲಿ ಆತ್ಮ ನಿವೇದನೆ ಎಂಬ ಅರ್ಥ ಬರುತ್ತದೆ.
ಭಜ್ ಎಂದರೆ ಸೇವೆ.ನಿ ಎಂದರೆ ಹೊಂದು ಸೇವಿಸು ಭಗವಂತನನ್ನು ಹೊಂದುವ ಭಕ್ತಿಯಾಗುತ್ತದೆ.ಭಜನೆ(ಕನ್ನಡ) ಭಜನ್(ಮರಾಠಿ) ಭಜನ್(ಹಿಂದಿ) ಈ ಪದದ ಅರ್ಥ ದೇವರ ನಾಮವನ್ನು ಸ್ತುತಿಸುವುದು .ಪೂಜಿಸು.ಆರಾಧಿಸು ಪ್ರಾರ್ಥನೆ ಎಂಬುದಾಗಿದೆ.ನಾದದ ಮೂಲಕ ದೇವರನ್ನು ಸಂತೃಪ್ತಿ ಗೊಳಿಸಿ ಬರುವ ಸಂಕಷ್ಟ ಗಳನ್ನು ಬಯಲು ಮಾಡಿಕೊಡುವುದಾಗಿದೆ.
ನಮ್ಮ ಮೌಖಿಕ ಪರಂಪರೆಯಲ್ಲಿ ಭಜನೆಗೆ ಪ್ರಥಮ ಸ್ಥಾನ ವಿದೆ.ಹನ್ನೆರಡನೆಯ ಶತಮಾನದ ಭಕ್ತಿಯ ಆಂದೊಲನ ವಚನಕಾರರಿಂದ ಪ್ರಾರಂಬವಾದದ್ದು.ಜಾತಿ ಮತ ಪಂಥಗಳನ್ನು ದಾಟಿ ಮಾನವರು ಸಮಾನರೆಂದು ಸಾರಿದ್ದು ಇದೆ ಕಾಲದಲ್ಲಿ ಭಕ್ತಿಯ ಕ್ರಾಂತಿಯೆಂದರೆ ಸಾಮಾಜಿಕ ಕ್ರಾಂತಿಯಾಗಿದೆ.ಈ ಆಂದೊಲನದಿಂದ ಮಹಿಳೆಯರಿಗೆ ಹೆಚ್ಚಿನ ಬಲ ಬಂದಿತು.ವಚನಕಾರರು ಸಾಮಾನ್ಯ ಜನರ ಮೂಲಕ ಅನುಭವ ಮಂಟಪ ಕಟ್ಟಿ ಭಕ್ತಿ ಜ್ಞಾನದ ಮೂಲಕ ಸಮಾಜವನ್ನು ಕಟ್ಟಿದರು..ಶೋಷಿತ ಸ್ಥ್ರೀ ಸಮುದಾಯದ ಪರವಾಗಿ ಭಜನೆ ಮೂಲಕ ಸಂಕೀರ್ತನದಿಂದ ಸಮಾಜಕ್ಕೆ ಹತ್ತಿರವಾದರು.
ಭಜನೆಗಳಲ್ಲಿ ಸ್ವರವಚನಗಳು ವಚನಗಳು ದಾಸರಹಾಡುಗಳು ಕೈವಲ್ಯ ಪದಗಳು ತತ್ವಪದಗಳೂ ಬಳಕೆಯಾಗುತ್ತವೆ.ವಚನ ಚಳುವಳಿಯ ನಂತರ ಮಠ ಮಾನ್ಯಗಳಲ್ಲಿ ಭಜನೆ ಪ್ರಾರಂಬವಾದವು.ವಚನಗಳು ಇಂದಿಗೂ ಹೆಚ್ಚಾಗಿ ಪ್ರಾರ್ಥನಾ ಪದಗಳಾಗಿವೆ.ಸ್ವರದ ಆಲಾಪನೆಗಾಗಿ ವಚನಗಳು ಚಾಲ್ತಿಯಲ್ಲಿವೆ.ಭಜನೆಗಳಲ್ಲಿ ಮುಖ್ಯವಾಗಿ ಸಂಸಾರ ಹೇಯತೆ ಮುಕ್ತಿಯ ಹಂಬಲ ಹೆಚ್ಚಾಗಿ ಕಾಣಸಿಗುತ್ತವೆ.ಭಜನೆಯಿಂದ ಮುಕ್ತಿ ಸಾದ್ಯ.
ಶಿವನಾಮವನು ನುಡಿಯದ ಬಾಯಿ ಹಚ್ಚಲ ಕುಣಿಯಂತೆ.ಗುರು ನಾಮವ ನುಡಿಯದ ಮನುಜ ಹಾಳು ದೇಗುಲದಂತೆ….ವಿಷಯ ದ ಗುಣಗಳು ಅಳಿಯದ ಜ್ಞಾನಿ ಉದರ ಕಳನಂತೆ ..ಮೋಸದಲಿ ಜಪ ತಪ ಮಾಡುವುದು ಗಾರುಡಿಗರಾಟದಂತೆ
ಢಾಂಬಿಕ ಭಕ್ತರು ಶಿವನಾಮವನ್ನು ಸ್ಮರಿಸದೆ ಇರುವವರು.ಗುರುವನ್ನು ನೆನಪಿಸದವನು ಎಂಬ ಎಚ್ಚರಿಕೆ ಇದೆ.
ಡಾ. ಸರ್ವಮಂಗಳ ಸಕ್ರಿ,
ರಾಯಚೂರು.
ಫೋನ್ ನಂ:+91 94499 46839