“ಬಸವಣ್ಣ”-ಭಾಗ ೨/ ಡಾ. ನೀಲಾಂಬಿಕಾ ಪೊಲೀಸ ಪಾಟೀಲ

ಬಸವಣ್ಣನವರು ಪ್ರಧಾನಿಯಾಗಿ ಕೇವಲ ಭೋಗಿಯಾಗಿ ಕೂಡಲಿಲ್ಲ. ತ್ಯಾಗಿಯಾಗಿ, ಯೋಗಿಯಾಗಿ ಲಿಂಗಾಂಗಿಯಾಗಿ ಒಂದೆಡೆ ಸಮಾಜೋದ್ಧಾರ, ಇನ್ನೊಂದೆಡೆ ಆತ್ಮೋದ್ಧಾರಕ್ಕಾಗಿ ಕಂಕಣ ಬದ್ಧರಾದರು. ಲಿಂಗಾಂಗಿಯಾಗಿ ಲಿಂಗಾಯತ ಧರ್ಮಕಟ್ಟಿ, ಸಮಾನತೆ ಅದರ ಕುರುಹು ಮಾಡಿದರು.

ನಮ್ಮವ ನಮ್ಮವರು ಎನ್ನುತಾ ಬಸವಣ್ಣ
ಒಮ್ಮನದಿ ಎಲ್ಲರ ಅಪ್ಪಿಕೊಂಡು | ಅಳಿಸ್ಯಾರ
ನಾನು ನಿನ್ನೆಂಬ ಬೇಧವ

ಬಸವಣ್ಣನವರ ಮನಸ್ಸನ್ನು ಈ ಜಗತ್ತು ಬಹು ಬೇಗನೆ ಅರಿತುಕೊಂಡಿತು ಎನ್ನುತ್ತಾರೆ ಜನಪದರು. ಅವರದು ತಾಯಿ ಹೃದಯ, ಎಲ್ಲರನ್ನು ಕೈಮಾಡಿ ಕರೆಯಿತು ಅದು. ಅವರ ಅಯ್ಯಾ ಅಪ್ಪಾ ಎನ್ನುವ ಮನಸ್ಸಿಗೆ ನಾಟು ವಂತಹ ನುಡಿ ಮತ್ತುಗಳು ಎಲ್ಲ ಜಾತಿಯವರನ್ನು ಕಲ್ಯಾಣದತ್ತ ಕರೆದ್ಯೋಯದವು.

ಬಸವನ್ಣನವರು ಅನುಭವಮಂಟಪ ಕಟ್ಟಿದ್ದು ಅದರ ಕಾರ್ಯ ವೈಖರಿಗಳನ್ನು ಜನಪದ ಸಾಹಿತ್ಯ ಕಟ್ಟಿಗೆ ಕಟ್ಟುವಂತೆ ಚಿತ್ರಿಸುತ್ತದೆ.

ಇದರ ನೆಲೆ ಅಂದು ಕಲ್ಯಾಣದಲ್ಲಿ ಎಲ್ಲಿಇತ್ತು ಎನ್ನುವದನ್ನು ಅವರು ಗುರುತಿಸುತ್ತಾರೆ.

ಇಂತಹ ಅನುಭವ ಮಂಟಪ ಶೂನ್ಯ ಸಿಂಹಾಸನಾಧಿಪತಿಗಳು ಅಲ್ಲಮ ಪ್ರಭುದೇವರು ಎಂಬುದರ ನೆನಪು ಮಾಡುತ್ತಾರೆ.
ಇದರ ಮುಖಾಂತರ ಸಮಾನತೆತತ್ವ ಮೊದಲು ಬಿತ್ತಿದರು ಅವರು ಎನ್ನುವರು. ಯಾವ ಸ್ತ್ರೀಗೆ ಪರು. ಪಕ್ಷಿ ಪ್ರಾಣಿಗಳಿಗಿಂತಲೂ ಕೀಳಾಗಿ ಕಂಡಿದ್ದರೂ. ಅಜ್ಞಾನಿ ಎಂದುಕರೆದು ಅವಳ ಸ್ವತಂತ್ರ್ಯಾಪಹರಣ ಮಾಡಿದ್ದರೂ ಆ ಸ್ತ್ರೀಗೆ ಮರುಜನ್ಮ ಕೊಟ್ಟವರೇ ಬಸವಣ್ಣನವರೆಂಬುದನ್ನು ಒತ್ತಿಒತ್ತಿ ಹೇಳುತ್ತಾರೆ ಜನಪದರು.

ಹೆಣ್ಣಿಗೆ ಲಿಂಗ ಕಟ್ಟಿಧಾರ್ಮಿಕ ಸ್ವಾತಂತ್ರö್ಯ ಕಾಯಕ ಕಲಿಸಿ ಆರ್ಥಿಕ ಸ್ವಾತಂತ್ರö್ಯ, ದಾಸೋಹ ಕಲಿಸಿ ಸಾಮಾಜಿಕ ಸ್ವಾತಂತ್ರö್ಯ ಬರೆಯಲು ಒದಲು ಕಲಿಸಿ ಅರಿವಿನ ಸ್ವಾತಂತ್ರö್ಯ ಕಲಿಸಿ ಯುಗ ಯುಗಕ್ಕೆ ಅವರು ಗುರುವಾದರು ಎನ್ನುತ್ತಾರೆ.

ಸಮನತೆಯ ಇನ್ನೊಂದು ಮುಖ ಎಲ್ಲ ಜಾತಿಯವರನ್ನು ಒಂದುಗೂಡಿಸಿ ಅವರ ವ್ಯಕ್ತಿತ್ವವನ್ನು ಮೇಲಕ್ಕೆತ್ತಿದ್ದು. ತಾನು ಕಟ್ಟಿದ ಹೊಸ ಲಿಂಗಾಯತ ಧರ್ಮಕ್ಕೆ ಜಾತಿ/ಮತ/ಪಂಥ/ ಲಿಂಗಗಳಿಂದ ದೂರವಿರಿಸಿದ್ದು.

ಎಲ್ಲಾ ಜಾತಿಯವರು ಬಸವಣ್ಣನವರ ಸಾಗರದಂತಹ ಒಡಲೊಳಗೆ ಸೇರಿಕೊಂಡರು. ಬಡತನ, ಕೀಳರಿಮೆ, ಅಜ್ಞಾನವನ್ನೆಲ್ಲ ಬದಿಗೊತ್ತಿದ್ದರು. ನಾವು ಮನುಷ್ಯರು, ನಮಗೂ ವ್ಯಕ್ತಿತ್ವವಿದೆ ಅವಕಾಶ ಸಿಕ್ಕರೆ ನಾವು ಕೂಡಾಎಂತಹ ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟರು ಕಲ್ಯಾಣದ ಶರಣರು.

ಎಂದು ಉದ್ಗಾರ ತೆಗೆಯುತ್ತಾರೆ.

ಬಸವಾದಿ ಪ್ರಮಥರು ಕಾಯಕ ಯೋಗಿಗಳು. ಕಾಯಕ ಮಾಡುತ್ತಾ ಅಂತರಂಗ ಬಹಿರಂಗದಲ್ಲಿಯೂ ಕಾಯವನ್ನು ಗಟ್ಟಿಗೊಳಿಸಿಕೊಂಡವರು. ಕಾಯಕ ಕಲಿಸ್ಯಾರ ನಾಯಕ ಬಸವಣ್ಣ ಎನ್ನುತಾ ಪ್ರತಿಯೊಂದು ಕಾಯಕಕ್ಕೂ ಬೆಲೆ ತಂದು ಕೊಟ್ಟು ಅದಕ್ಕೆ ಎಂತಹ ಶಕ್ತಿ ಎಂಬುದನ್ನು ಕಾಯಕದ ಮುಖಾಂತರ ಸಾಧಿಸಿ ತೋರಿದವರು ಬಸವಣ್ಣನವರು.

ಮಾನವನಾಗಿ ಹುಟ್ಟಿ ಮರತ್ಯಕ್ಕೆ ಬಂದದ್ದೆ ಕಾಯಕ ಮಾಡಲು ಹಸಿವು ಹಂಗಿಸಿಕೊಳ್ಳಲು ದುಡಿದುಣ್ಣಲೇ ಬೇಕು. ಕುಳಿತು ಉಣ್ಣುವದು ಸಲ್ಲದು ಎಂಬಾಶೆಯುಳ್ಳ ಬಸವಣ್ಣನವರು ಕಾಯಕದ ಹಾದಿ ತೋರುತ್ತಾರೆ. ಅವರ ಮಾತಿಗೆ ಶರಣರು ಒಲ್ಲ ಅನ್ನದೆ ಕಾಯಕದೊಳಗೆ ಕೈಲಾಸ ಕಂಡರು.

ಯಾರೇ ಬರಲಿ ಅವರು ಮೂರು ದಿನದೊಳಗೆ ತಮಗೆ ಸರಿಹೊಂದುವಂತಹ ಕಾಯಕ ಆರಿಸಿಕೊಂಡು ಅದರೊಳಗೆ ಒಂದಾಗಲೇಬೇಕು ಮೂರು ದಿನ ಮಾತ್ರ ಅವರಿಗೆ ಮಹಾಮನೆಯಿಂದ ಪ್ರಸಾದವಾಗುತ್ತಿತ್ತು. ನಾಲ್ಕನೇ ದಿನ ತಮ್ಮ ಕಾಯಕದಿಂದ ತಾವೇ ಪ್ರಸಾದದ ವ್ಯವಸ್ಥೆ ಮಾಡಿಕೊಳ್ಳಬೇಕೆಂಬುದು ಬಸವಣ್ಣನವರ ತತ್ವ. ಜನಪದರು.

ಕಾಯಕದಿಂದ ಬಂದುದನ್ನು ದಾಸೋಹವಾಗಲೇಬೇಕು. ಶಿವನಿಂದ ಬಂದದ್ದು ಶಿವನಿಗೆ ಸಲ್ಲಬೇಕು. ಕೂಡದೆ ಮುಚ್ಚಿಟ್ಟು ಉಂಡರೆ ಬದುಕಿಗೆ ಕೇಡಾಗುವದು ಎಂಬ ಮಾತುಗಳಿಂದ ಎಚ್ಚರಿಸುತ್ತಾರೆ. ಹೀಗಾಗಿ ಎಲ್ಲ ಶರಣರು ಕಾಯಕಧಾರಿಗಳಾಗಿ ದಾಸೋಹ ಭಂಡಾರಿಗಳಾಗರುವದು ಆ ಶರಣರ ವೈಶಿಷ್ಟö್ಯವಾಗಿದೆ.

ಅರಿವಿನ ಕುರುಹಾದ ಇಷ್ಟಲಿಂಗ ಬಸವಣ್ಣನವರ ಉದರದಿಂದ ಬಂದದು ಎಂಬುದು ಅವರ ವಾದ.

ಅರಿವಿನ ಕುರುಹು ಇಷ್ಟಲಿಂಗ. ಇದರ ಪ್ರತಿಫಲ ಎಲ್ಲರಿಗೂ ಸಿಗುವಂತೆ ಮಾಡಿದ್ದರಲ್ಲದೆ ಎಲ್ಲಾ ಶರಣರು ಎದೆಯ ಮೇಲೆ ಇಷ್ಟಲಿಂಗ ಕಟ್ಟಿಕೊಂಡು ಅಂಗಲಿಂಗ ಸಮರಸಗೊಳಿಸಿಕೊಂಡವರು. ಅಂತೆಯೇ ಅವರನ್ನು ಜನಪದರು ಧರೆಯ ಮೇಲಿನ ದೇವರು ಎಂದು ಕರೆಯುತ್ತಾರೆ.

ಎನ್ನುವ ಮಹತ್ವದ ತ್ರಿಪದಿಗಳು ಬಸವನ್ಣನವರು ಕಲ್ಯಾಣ ಬಿಟ್ಟು ವಿಷಯವನ್ನು ತಿಳಿಸುವವು ಬಿಜ್ಜಳನನ್ನು ಖೂಳ ಎಂದು ಸಂಭೋದಿಸುತ್ತಾರೆ. ಖೂಳನಲ್ಲದೆ ಇನ್ನೇನು? ತನ್ನ ಆಸನಕ್ಕಾಗಿ ‘ವಿಶ್ವದೈವ’ ವಾಗಿರುವ ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳದಷ್ಟು ದುಷ್ಟನಾದ. ಇಲ್ಲದ ಆರೋಪ ಮಾಡುತ್ತಾ ಕಲ್ಯಾಣ ತೊರೆಯಲು ತಿಳಿಸಿದ. ಬಸವಣ್ಣ ನೇರವಾಗಿ ಕಪ್ಪಡಿ ಸಂಗಮಕ್ಕೆ ಹೋದರು ಎನ್ನುತ್ತಾರೆ

ತಾ ಕಟ್ಟಿದ ಕಲ್ಯಾಣ, ಕಾಯಕ ಜೀವಿಗಳ ಕಲ್ಯಾಣ, ದಾಸೋಹ ನಿಧಿಗಳ ಕಲ್ಯಾಣ, ಯೋಗದ ತ್ಯಾಗದ ಕಲ್ಯಾಣಪುರಕ್ಕೆ ಬಾಗಿ ನಮಸ್ಕರಿಸುತ್ತಾರೆ. ಆ ಮಣ್ಣನ್ನು ಹಣೆಗೆ ಹಚ್ಚಿಕೊಳ್ಳತ್ತಾರೆ.

ಅವರ ಈ ಮಾತು ತಿಳಿಯಲಿಲ್ಲ ಶರಣರಿಗೆ. ಒಬ್ಬರನ್ನೋಬ್ಬರು ಮುಖ ನೋಡುತ್ತಾರೆ. ‘ವಿವರಿಸಿ ಹೇಳಪ್ಪ ನಿನ ಮಾತಿನರ್ಥ’ ಎಂದಾಗ ಅಪ್ಪ ಬಸವಣ್ಣ ಮುಂದೆ ಬಂದು ಅವರೆಲ್ಲರನ್ನು ಅಪ್ಪಿಕೊಂಡು ನಡೆದ ವಿಷಯ ತಿಳಿಸುತ್ತಾರೆ. ಆಗ ಶರಣರದು: ಜನಪದರು ಕಣ್ಣಿಗೆ ಕಟ್ಟುವಂತೆ ಚಿತ್ತಿಸುತ್ತಾರೆ.

ಎನ್ನುತ್ತಾ ಶರಣರು ದುಃಖದಿಂದ ರೋಧಿಸಲು ಪ್ರಾರಂಭಿಸುತ್ತಾರೆ. ಈ ದೇಹಕ್ಕೆ ಬೆಲೆ ಬಂದದ್ದೆ ನಿನ್ನಿಂದ. ಮಾನವ ಜನ್ಮದ ಅರಿವು ಕೊಟ್ಟ ಗುರುವೇ ನೀನು ಗುರು ಇಲ್ಲದ ಊರು, ಕಲ್ಯಾಣವಾದರೇನು? ಕೈಲಾಸವಾದರೇನು ಎನ್ನುತ್ತ ಶರಣರು

ಎನ್ನುತಾ ದು:ಖಪಡುವ ಶರಣರನ್ನು ಸಂತೈಸುವದೇ ಬಸವಣ್ಣನವರಿಗೆ ದೊಡ್ಡ ಸಮಸ್ಯೆಯಾಗುತ್ತದೆ. ಒಂದೆಡೆ ತನ್ನ ಕುಟುಂಬ, ಇನ್ನೊಂದೆಡೆ ವಿಶ್ವ ಕುಂಟುಂಬ. ಈ ಎರಡನ್ನು ಸಂತೈಸುತ್ತಾ ಮುಂದೆ ಅವರು ಮಾಡುವ ಕಾರ್ಯಗಳನ್ನು ಸೂಚಿಸುತ್ತಾ ಬಸವಣ್ಣ ತನ್ನ ಪ್ರಾಣ ಸ್ವರೂಪ ಕಲ್ಯಾಣ ತೊರೆಯುತ್ತಾರೆ. ಗಿಡ, ಮರ, ಬಳ್ಳಿ, ಪಶು, ಪಕ್ಷಿ, ಪ್ರಾಣಿ ಬಸವಣ್ಣನವರಿಗೆ ಬಾಗುತ್ತವೆ ಎನ್ನುತ್ತಾರೆ.

ಆದರೆ ಒಂದೇ ಮಾತಿನ ಮಹಾತ್ಮರು ಬಸವಣ್ಣ. ಅರಸ ಬಿಜ್ಜಳನ ಮಾತಿಗೆ ಎರಡಾಡಲಿಲ್ಲ ನೇರವಾಗಿ ಹಡಪದ ಅಪ್ಪಣ್ಣನವರೊಂದಿಗೆ ಸಂಗಮಕ್ಕೆ ಹೋಗುತ್ತಾರೆ. ಅಲ್ಲಿಯೇ ಲಿಂಗೈಕ್ಯರಾಗುತ್ತಾರೆ.

ಬಸವಣ್ಣ ಲಿಂಗೈಕ್ಯರಾಗಿಲ್ಲ ಜನಪದರಿಗೆ.

ಎಂಬ ಆತ್ಮ ವಿಶ್ವಾಸ ಅವರಿಗಿದೆ ಅವರು ಕಟ್ಟಿದ ಲಿಂಗ ಅದು ಅವರ ಪ್ರತಿರೂಪವಾಗಿದೆ. ಅದನ್ನು ಪೂಜಿಸಿಯೇ ಪೂಜ್ಯರಾದವರು ಬಸವಣ್ಣ. ಅಂತೆಯೇ ಅವರು ಕಟ್ಟಿದ ಲಿಂಗ ನಮ್ಮ ಎದೆಯ ಮೇಲಿದೆ. ಅವರು ನಮ್ಮ ಆತ್ಮದಲ್ಲಿದ್ದಾರೆ. ಅವರು ಮೆಚ್ಚುವಂತೆ ಬಾಳುತ್ತೇವೆ ಎನ್ನುತ್ತಾರೆ.

ಡಾ. ನೀಲಾಂಬಿಕಾ ಪೊಲೀಸಪಾಟೀಲ,
“ಗುರು ಶರಣ ನಿಲಯ”
ಮನೆ ನಂ. 1495/101 ಮತ್ತು 102/310,
ಗೋದುತಾಯಿ ನಗರ,
ನ್ಯೂ ಜೇವರ್ಗಿ ರಸ್ತೆ,
ಕಲಬುರಗಿ – 585 102.
ಮೋಬೈಲ್ ನಂ. 94821 47084.

Loading

Leave a Reply