ರವಿ ಹಂಜ್‌ ಎನ್ನುವ ಪಡಪೋಶಿಯ “ಬಸವರಾಜಕಾರಣ” ಎನ್ನುವ ಅಪಸವ್ಯ | ಭಾಗ-03: ಭಾರತೀಯ ತರ್ಕಶಾಸ್ತ್ರ.

ತರ್ಕಶಾಸ್ತ್ರ ಎನ್ನುವದು ಅನಂತ ವ್ಯಾಪ್ತಿಯ ಅಧ್ಯಯನದ ವಿಷಯ. ಇದೂವರೆಗೂ ಕಂಡು ಬರುವ ಅಧ್ಯಯನಗಳು ಮತ್ತು ಸಂಶೋಧನೆಗಳು ಇದರ ಅಗಾಧತೆಯನ್ನು ತಿಳಿಸುತ್ತವೆ. ಭಾರತೀಯ ತರ್ಕಶಾಸ್ತ್ರವಂತೂ ಘನ ವಿದ್ವಾಂಸರುಗಳ ಪ್ರತಿಯೊಂದು ತರ್ಕಶಾಸ್ತ್ರದ ಅಧ್ಯಯನ ಮತ್ತು ವಿದ್ವಾಂಸರುಗಳ ಅಗಾಧ Galaxy. ಇದೊಂದು ಮುಗಿಯಲಾರದ ಅಧ್ಯಯನದ ವಿಷಯ.

ಪಾಪ, Google – Search – Select – Copy – Paste ಮಾಡಿ ಒಂದು ಲೇಖನವನ್ನು ಪ್ರಸ್ತುತ ಪಡಿಸುವುದೇ ತನ್ನನ್ನು ತಾನು ಅಖಂಡ ಬ್ರಹ್ಮಾಂಡ ಪಂಡಿತನೆಂದು ಬಿಂಬಿಸುವ ಪ್ರಯತ್ನವನ್ನು ಅಮೇರಿಕಾದ ಶಿಕಾಗೋದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಮತ್ತು ಆಂಧ್ರದಿಂದ ವಲಸೆ ಬಂದ ಆರಾಧ್ಯ ಶೈವ ಬ್ರಾಹ್ಮಣರಾದ ವೀರಶೈವ ಕುಲ ಸಂಜಾತ ವೈದಿಕ ಸಾಹಿತ್ಯದ ಮಹಾನ್‌ ಮೇಧಾವಿ ರವಿ ಹಂಜ್‌ (ಬಹುಶಃ ಇವರ ಮನೆತನದ ಹೆಸರು ಹಂಜಿಮಠ ಇರಬಹುದು) ಅವರು ಮಾಡಿದ್ದಾರೆ. ಅವರು ಬರೆದ “ಬಸವರಾಜಕಾರಣ” ಪುಸ್ತಕದಲ್ಲಿನ “ಭಾರತೀಯ ತರ್ಕಶಾಸ್ತ್ರ” ದ ಅಧ್ಯಾಯದ ವಿಮರ್ಶೆಯನ್ನು ಈ ಲೇಖನದಲ್ಲಿ ಮಾಡೋಣ. So, let us start the topic “ಭಾರತೀಯ ತರ್ಕಶಾಸ್ತ್ರ”.

ಮೊದಲಿಗೆ ತರ್ಕಶಾಸ್ತ್ರ ಎಂದರೇನು? ಭಾರತೀಯ ವಿದ್ವಾಂಸರುಗಳ ಸಂಕ್ಷಿಪ್ತ ಪರಿಚಯ ಮತ್ತು ಅದರ ವಿವಿಧ ಆಯಾಮಗಳನ್ನು ಪರಿಚಯ ಮಾಡಿಕೊಂಡು ಮುಂದೆ ಹೋಗೋಣ.

ಪ್ರಾಮಾಣಿಕವಾಗಿ ಹಾಗೂ ಸರಿಯಾದ ದಿಕ್ಕಿನಲ್ಲಿ ಸೂಜಿ ಮೊನೆಯಂತೆ ಸೆಳೆಯುವಂತೆ ಆಲೋಚಿಸುವ ಅಥವಾ ಚಿಂತನೆಯನ್ನು ಮಂಡಿಸುವುದಕ್ಕೆ “ತರ್ಕಶಾಸ್ತ್ರ” ಎಂದು ಸ್ಥೂಲವಾಗಿ Definition ಅನ್ನು ಕೊಡಬಹುದು.

ಇದೇ ಅಂತಿಮವಲ್ಲ. ಇನ್ನೂ ಹಲವಾರು ಆಯಾಮಗಳು ಇರಬಹುದು. ಪಾಶ್ಚಿಮಾತ್ಯ ತತ್ವಶಾಸ್ತ್ರಜ್ಞರು (Western Philosophers), ಪಾಶ್ಚಿಮಾತ್ಯ ತರ್ಕಶಾಸ್ತ್ರಜ್ಞರು (Western Logicians) ಗಳು ತಮ್ಮ ಪುಸ್ತಕಗಳಲ್ಲಿ ಜ್ಞಾನವನ್ನು ಕುರಿತಾದಂಥ “ಸಮಸ್ಯೆಗಳ” ಕುರಿತು ಚರ್ಚೆಯನ್ನು ಮಾಡಿದ್ದು ಕಂಡು ಬರುವುದಿಲ್ಲ. ಆದರೆ ಭಾರತೀಯ ವಿದ್ವಾಂಸರು ಅತ್ಯಂತ ಸೂಕ್ಷ್ಮವಾಗಿ ಜ್ಞಾನವನ್ನು ಕುರಿತಾದಂಥ ಸಮಸ್ಯೆಗಳ ಚರ್ಚೆಯನ್ನು ಮಾಡುತ್ತಾರೆ ಮತ್ತು ಸಮಸ್ಯೆಗಳಿಗೆ ಉತ್ತರವನ್ನೂ ನೀಡುವಷ್ಟು ಅಗಾಧ ಮೇಧಾವಿಗಳಾಗಿದ್ದರು. ಇದು ಭಾರತೀಯರ ತರ್ಕಶಾಸ್ತ್ರದ ಸಂಪ್ರದಾಯ ಮತ್ತು ಸಂಸ್ಕೃತಿ. ಇಂಥ ಭಾರತೀಯ ತರ್ಕಶಾಸ್ತ್ರವನ್ನು Reference ಗೆ ಬಳಸಿಕೊಳ್ಳದೇ ಕೇವಲ ಪಾಶ್ಚಿಮಾತ್ಯ ತರ್ಕಶಾಸ್ತ್ರ ವಿದ್ವಾಂಸರುಗಳ ತರ್ಕಗಳನ್ನು‌ ಬಳಸಿಕೊಂಡು ಭಾರತೀಯ ವಿದ್ವಾಂಸರುಗಳ ತರ್ಕಗಳನ್ನು ಹೀಯಾಳಿಸುವ ಮಟ್ಟದಲ್ಲಿ ಈ ಲೇಖಕ ಬರೆದಿದ್ದಾನೆ. ಹಾಗಾಗಿ ಮಿಸ್ಟರ್‌ ರವಿ ಹಂಜ್‌ ಅವರಿಗೆ ತರ್ಕಶಾಸ್ತ್ರದ ಕೆಲವು ಅಂಶಗಳನ್ನು ಮನವರಿಕೆ ಮಾಡುವ ಪ್ರಯತ್ನ ಮಾಡುತ್ತೇನೆ.

ನನ್ನ ಅಧ್ಯಯನದ ಇತಿಮಿತಿಯಲ್ಲಿ ಸ್ಥೂಲವಾಗಿ ತರ್ಕಶಾಸ್ತ್ರವನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿ ನೋಡೋಣ:
  1. ಪ್ರಾಚೀನ ಪಾಶ್ಚಾತ್ಯ ತರ್ಕಶಾಸ್ತ್ರ.
  2. ಪ್ರಾಚೀನ ಭಾರತೀಯ ತರ್ಕಶಾಸ್ತ್ರ.
  3. ಸ್ಕೊಲಾಸ್ಟಿಕ್ ತರ್ಕಶಾಸ್ತ್ರ.
  4. ಆಧುನಿಕ ತರ್ಕಶಾಸ್ತ್ರ.
  1. ಪ್ರಾಚೀನ ಪಾಶ್ಚಾತ್ಯ ತರ್ಕಶಾಸ್ತ್ರ:

ಪ್ರಾಚೀನ ಇತಿಹಾಸವನ್ನು ಕೆದಕುತ್ತಾ ಹೋದಂತೆ ಪೇಟೋನಂಥ ವಿದ್ವಾಂಸರುಗಳಿದ್ದರೂ ಕೂಡ ಅರಿಸ್ಟಾಟಲ್‌ ಅವರ ತರ್ಕಶಾಸ್ತ್ರ ಪ್ರಮುಖವಾಗಿ ಕಂಡುಬರುತ್ತದೆ.

ಅರಿಸ್ಟಾಟಲ್‍ನ ತರ್ಕಶಾಸ್ತ್ರದಲ್ಲಿನ ಅಂಶಗಳು TV ಧಾರಾವಾಹಿಯಂತೆ ಬಿಡಿ ಬಿಡಿಯಾಗಿ ದಾಖಲಿಸಿದಂತಿದೆ. ಸಮಗ್ರ ಗ್ರಂಥ ಸಂಪಾದನೆ ನಮಗೆ ಸಿಗುವುದಿಲ್ಲ. ಆದರೆ ಭಾರತೀಯ ತತ್ವಶಾಸ್ತ್ರದ ಅಧ್ಯಯನ, ವಿಮರ್ಶೆ, ಚರ್ಚೆಗಳು ಮತ್ತು ತರ್ಕಶಾಸ್ತ್ರಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳು ನಮಗೆ ಸಮಗ್ರವಾಗಿ ಸಂಪಾದನೆಯಾಗಿ ಗ್ರಂಥ ರೂಪದಲ್ಲಿ Available ಇವೆ. ಹಾಗಾಗಿ ಎಲ್ಲ ಸಿದ್ಧಾಂತಗಳನ್ನೂ ಕ್ರೋಢೀಕರಣ ಮಾಡಿ ಅಭ್ಯಾಸ, ಅಧ್ಯಯನ ಮತ್ತು ಸಂಶೋಧನೆ ಮಾಡಲು ಅವಕಾಶವಿದೆ.

ಆ ಕಾಲಘಟ್ಟದ ಮಾನವ ಸಂಕುಲದ ಸ್ಥಿತಿಗತಿ, ಸಮಾಜದಲ್ಲಿದ್ದ ಮಾನವ ಸಂಬಂಧಗಳು ಮತ್ತು ಭಾವನೆಗಳನ್ನು ಅರಿಸ್ಟಾಟಲ್ ಹಲವಾರು ಕಡೆಗಳಲ್ಲಿ ವಿವರಿಸುತ್ತಾ ಹೋಗತಾನೆ. ಹೀಗೆ ಹೇಳುವ ಭರದಲ್ಲಿ ಶಬ್ದ ಮತ್ತು ವಸ್ತುವಿನ ಸಂಬಂಧ ಕಳೆದು ಹೋಗಿದೆ ಎನ್ನುವುದು ನನ್ನ ಅನುಮಾನ ಮತ್ತು ಅನೇಕ ವಿದ್ವಾಂಸರುಗಳ ಅನುಮಾನವೂ ಕೂಡ. ಇದು ರವಿ ಹಂಜ್‌ ಸಾಹೇಬರಿಗೆ ಅರ್ಥ ಆಗಿಲ್ಲಾ ಎನ್ನುವುದಕ್ಕೆ ಅವರು ಬರೆದ ಒಂದು ಸಾಲನ್ನು ಗಮನಿಸೋಣ:

“ವ್ಯವಸ್ಥಿತವಾದ ತರ್ಕಶಾಸ್ತ್ರದ ವಿನ್ಯಾಸ ಮತ್ತು ಸಿದ್ಧಾಂತಗಳನ್ನು ರೂಪಿಸಿದ್ದ ನ್ಯಾಯಶಾಲೆಯ ತರ್ಕಸಿದ್ಧಾಂತವನ್ನು ಮುಂದೆ ಭಾರತಾದ್ಯಂತವಿದ್ದ ಇತರೆಲ್ಲಾ ಆಸ್ತಿಕ ಮತ್ತು ನಾಸ್ತಿಕ ತರ್ಕಶಾಲೆಗಳು ಅಳವಡಿಸಿಕೊಂಡವು. ಪಾಶ್ಚಿಮಾತ್ಯದಲ್ಲಿ ಹೇಗೆ ಎಲ್ಲಾ ತರ್ಕಶಾಲೆಗಳು ಅರಿಸ್ಟಾಟಲ್‌ ರೂಪಿಸಿದ ಅರಿಸ್ಟಾಟಲೆನಿಯನ್‌ ತರ್ಕಸಿದ್ಧಾಂತವನ್ನು ಅಳವಡಿಸಿಕೊಂಡವೋ ಅದೇ ರೀತಿ ನ್ಯಾಯ ಶಾಲೆಯ ತರ್ಕವನ್ನು ಭಾರತದೆಲ್ಲೆಡೆಯ ತರ್ಕಶಾಲೆಗಳು ಅಳವಡಿಸಿಕೊಂಡವು ಎಂದು ಇತಿಹಾಸಜ್ಞರು ಅಭಿಪ್ರಾಯ ಪಟ್ಟಿದ್ದಾರೆ”.

ನಾನು ಮೊದಲೇ ಹೇಳಿದ ಹಾಗೆ ಪಾಶ್ಚಿಮಾತ್ಯ ತರ್ಕಶಾಸ್ತ್ರಜ್ಞರು ತಮ್ಮ ಪುಸ್ತಕಗಳಲ್ಲಿ ಜ್ಞಾನವನ್ನು ಕುರಿತಾದಂಥ ಸಮಸ್ಯೆಗಳ ಕುರಿತು ಚರ್ಚೆಯನ್ನು ಮಾಡಿದ್ದು ಕಂಡು ಬರುವುದಿಲ್ಲ. ಅರಿಸ್ಟಾಟಲನ ಮೂಲ ಸಿದ್ಧಾಂತಗಳಲ್ಲಿ ತುಂಬ ಅನಿಶ್ಚಿತತೆಯಿದೆ. ರವಿ ಹಂಜ್‌ ಅವರು ಈ ಅನಿಶ್ಚಿತತೆಗಳು ಯಾವುವು ಅಂತ ಪ್ರಶ್ನಿಸಬಹದು. ಅದನ್ನೆಲ್ಲಾ ಸ್ವಂತ ಅಧ್ಯಯನದ ಬಲದಿಂದ ಅರಿತುಕೊಳ್ಳಬೇಕು ಹಂಜ್‌ ಸಾಹೇಬರೆ. ಹಾಗಾಗಿ ರವಿ ಹಂಜ್‌ ಅವರು ಹೇಳುವುದನ್ನು ಅರ್ಥ ಮಾಡಿಕೊಂಡರೆ “ಭಾರತೀಯ ವಿದ್ವಾಂಸರು ಅತ್ಯಂತ ಸೂಕ್ಷ್ಮವಾಗಿ ಜ್ಞಾನವನ್ನು ಕುರಿತಾದಂಥ ಸಮಸ್ಯೆಗಳ ಚರ್ಚೆಯನ್ನು ಮಾಡುತ್ತಾರೆ ಮತ್ತು ಸಮಸ್ಯೆಗಳಿಗೆ ಉತ್ತರವನ್ನೂ ನೀಡುವಷ್ಟು ಅಗಾಧ ಮೇಧಾವಿಗಳಾಗಿದ್ದರು” ಎನ್ನುವುದು ಹಸಿ ಸುಳ್ಳು ಎಂದು ಸಾಬೀತಾಗುತ್ತದೆ. ಹಾಗಾಗಿ ರವಿ ಹಂಜ್‌ ಅವರು ಇಂತಹ ಅತಾರ್ಕಿಕ ಸಾಲುಗಳನ್ನು ಉಚ್ಛರಿಸಿರುವುದು ಹಾಸ್ಯಾಸ್ಪದ. ಪಾಪ ಅವರ ಮೇಧಾವಿತನಕ್ಕೆ ಅಥವಾ Google – Search – Select – Copy – Paste ಮಾಡಿರುವುದನ್ನೇ ಶ್ಯಾಣ್ಯಾತನಕ್ಕೆ ಎನೆನ್ನಬೇಕು ಎನ್ನುವುದನ್ನು ಪ್ರಾಜ್ಞರು ಅಥವಾ ತರ್ಕಶಾಸ್ತ್ರದ ವಿದ್ವಾಂಸರುಗಳು ತಿಳಿಸಬೇಕು.

  • ಪ್ರಾಚೀನ ಭಾರತೀಯ ತರ್ಕಶಾಸ್ತ್ರ:

ರವಿ ಹಂಜ್‌ ಸಾಹೇಬರು ಸಾರಾ ಸಗಟಾಗಿ ಈ ಭಾಗವನ್ನು ಈ ಕೆಳಗಿನ Website ನಿಂದ ಭಟ್ಟಿ ಇಳಿಸಿದ್ದಾರೆ.

https://kn.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ತರ್ಕಶಾಸ್ತ್ರದ_ಇತಿಹಾಸ

ಈ ಪ್ಯಾರಾದಲ್ಲಿ ಉಲ್ಲೇಖಿಸಲಾದ ವಸುಬಂಧ, ದಿಜ್ಞಾನ, ಚತುಷ್ಕೋಟಿ ಎನ್ನುವ ಪದಗಳು ಈ “ಬಸವರಾಜಕಾರಣ” ಎನ್ನುವ ಪುಸ್ತಕಕ್ಕೆ Relevant ಅಥವಾ ಹೊಂದಿಕೆಯಾಗುತ್ತವೆಯೇ ಅಥವಾ ಕೇವಲ ಜ್ಞಾನ ಪ್ರದರ್ಶನಕ್ಕೆ Google – Search – Select – Copy – Paste ಮಾಡಿರುವುದೇ ಎಂದು ತಿಳಿಯಲು Rocket Science ಬೇಕಾಗಿಲ್ಲ. “ನನ್ನನ್ನೇನು ಆಡೋ ಹುಡುಗಾ ಅಂತಾ ತಿಳಕೊಂಡಿದ್ದೀಯಾ” ಅಂತಾ ರೋಫ್‌ ಹಾಕೋ ಈತನ ಬುದ್ಧಿ ಆಡೋ ಹುಡುಗಂದೇ ಅನ್ನೋದು ಸ್ಫಟಿಕದಷ್ಟೇ ಸ್ಪಷ್ಟ. Yes Mr. Ravi Hanj better understand that, you are still not matured enough to talk about Philosophy specifically, Indian Philosophy.

ಪಾಣಿನಿ ಸಂಸ್ಕೃತದ ಪ್ರಖ್ಯಾತ ವೈಯಾಕರಣಿ. ವ್ಯಾಕರಣಕ್ಕೆ ಮೂಲಾಧಾರವಾದ ಸೂತ್ರಗಳನ್ನು ಕುರಿತ ಇವನ ಗ್ರಂಥದ ಹೆಸರು “ಅಷ್ಟಾಧ್ಯಾಯಿ”. ಇವನು ಶಿವಭಕ್ತನಾದ ಕಾರಣ ಸೂತ್ರಗಳನ್ನು ಭವ, ರುದ್ರ, ಶರ್ವ ಮುಂತಾದ ಈಶ್ವರನ ಹೆಸರುಗಳಲ್ಲಿ ಕರೆದಿದ್ದಾನೆ. ಈ ವಿಷಯ ತಮಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಹೋಗಲಿ ವೈಯಾಕರಣಿ, ನವಾಚಾರ ಎಂದರೇನು ಎನ್ನುವುದರ ಅರಿವು ಇದೆಯೇ? No chance. Please visit your Facebook Profile again and again, you can only talk about Meat, Wine and Woman. From your Book “ಬಸವರಾಜಕಾರಣ” we felt you never evinced any ability to understand Indian Philosophy.   

ಭಾರತೀಯ ತತ್ವಶಾಸ್ತ್ರದ ಕುರಿತು ಅನಿವಾಸಿ ಭಾರತೀಯರಾಗಿರುವುದರಿಂದ ಇದನ್ನೇ English ನಲ್ಲಿ ತಿಳಿಸುವ ಪ್ರಯತ್ನ ಮಾಡುತ್ತೇನೆ. ಯಾಕಂದರ ಈ ಪುಸ್ತಕದ ಲೇಖಕರು ಅನಿವಾಸಿ ಭಾರತೀಯರು. ಹಾಗಾಗಿ ಅವರಿಗೆ ಕನ್ನಡದ ಕೆಲವು ಶಬ್ದಗಳನ್ನು ಅರ್ಥ ಮಾಡಿಕೊಳ್ಳೋದು ಸ್ವಲ್ಪ ಕಷ್ಟ ಆಗಬಹುದು ಎನ್ನುವ ಕಾರಣಕ್ಕಾಗಿ.

Let us understand the Philosophy. Not necessarily but, we can make 3 branches in Philosophy. The details of these branches is not the subject od discussion here. So, I am only giving the names.

  1. Metaphysics (The study of Ultimate Nature of Authenticity)
  2. Epistemology (The study of Nature of Acquaintance and Trust)
  3. Axiology (The study of Morals and Integrity)

These three branches of philosophy are closely connected with each other, because they all deal with the fundamental aspects of human existence. I used to start with this topic during my training sessions to the IAS/APS aspirants. The person who want to become an IAS/IPS officer has to understand the ethics, integrity as a responsible officer.

ಈ ಅಧ್ಯಾಯದಲ್ಲಿ ಪದೇ ಪದೇ ನ್ಯಾಯಶಾಲೆ, ಪಾಶುಪತ, ಜೈನ, ಬುದ್ಧ ತರ್ಕಶಾಲೆಯ ಪದಪುಂಜಗಳನ್ನು ಉಲ್ಲೇಖ ಮಾಡಲಾಗಿದೆಯೇ ಹೊರತು ಅವು Promote ಮಾಡುವ “ಹಿಂದೂ ಆಸ್ತಿಕ ಹಿನ್ನೆಲೆಯ ಶಾಸ್ತ್ರ” ಎನ್ನುವ ಶಬ್ದ ಪ್ರಯೋಗದಿಂದ ಹೀಯಾಳಿಸುವ ಮತ್ತು Negative Approach ಮಾಡುವ ಕೀಳು ಮಟ್ಟಕ್ಕೆ ಇಳಿದಿದ್ದೀರಿ. ಇದು ಭಾರತೀಯ ತರ್ಕಶಾಸ್ತ್ರದ ವಿದ್ವಾಂಸರಿಗೆ ಮಾಡಿದ ದ್ರೋಹ ಮತ್ತು ಅನ್ಯಾಯ.

ನ್ಯಾಯ ಸಿದ್ಧಾಂತ “ಜ್ಞಾನವು ಪ್ರಮುಖವಾಗಿ ಮೋಕ್ಷ” ವನ್ನು ಕುರಿತು ಬೆಳಕನ್ನು ಚಲ್ಲುತ್ತದೆ. ಇನ್ನೂ ಮುಂದುವರೆದು ಹೇಳುವುದಾದರೆ ನ್ಯಾಯಶಾಸ್ತ್ರವೆಂಬುದು ಒಂದು ದರ್ಶನಶಾಸ್ತ್ರ. ದರ್ಶನಗಳೆಲ್ಲವೂ ಮೋಕ್ಷದೆಡೆಗೆ ಮುಖಮಾಡಿ ನಿಲ್ಲುವುದರಿಂದ ನ್ಯಾಯಶಾಸ್ತ್ರವು ಮೋಕ್ಷಶಾಸ್ತ್ರ. ಇದನ್ನೇ ರವಿ ಹಂಜ್‌ ಎನ್ನುವ ಪ್ರಕಾಂಡ ಪಂಡಿತರು ತಾರ್ಕಿಕ ವಿಕಾಸವಾದ ಎನ್ನುವ ಅರ್ಥಹೀನ ಸಿದ್ಧಾಂತವನ್ನು Float ಮಾಡಿ “ಬಸವರಾಜಕಾರಣ” ಎನ್ನುವ ಪುಸ್ತಕದಲ್ಲಿ ತುರುಕಿ ಬಸವಾದಿ ಶರಣರಿಗೆ ಜನಿವಾರ ತೊಡಿಸುವ ಹುನ್ನರಾವನ್ನು ಎಲ್ಲ ವೈದಿಕರ ಕೃಪಾಶೀರ್ವಾದದಿಂದ ಮಾಡುತ್ತಿರುವುದನ್ನು ನಾವು ಕಾಣಬಹುದು. ಮೋಕ್ಷ ಸಿದ್ಧಾಂತವನ್ನು ಬಸವಾದಿ ಶರಣರು ಯಾವುದೇ Form ನಲ್ಲಿ ಒಪ್ಪಿಕೊಂಡಿಲ್ಲಾ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ವಚನ ಸಾಹಿತ್ಯ ಸಮ್ಮೇಳನದಲ್ಲಿ ಪೇಜಾವರದ ಸ್ವಾಮಿಗಳು “ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಷು ಕದಾಚನ” ಎನ್ನುವ ಭಗವದ್ಗೀತೆಯ ಸಾಲುಗಳನ್ನು “ಕಾಯಕವೇ ಕೈಲಾಸ” ಕ್ಕೆ ಹೋಲಿಸಿ ಅಪಹಾಸ್ಯಕ್ಕೆ ಈಡಾದುದನ್ನು ಇಡೀ ಕನ್ನಡನಾಡು ಕಂಡಿದೆ. ಅದರ ಸಂಪೂರ್ಣ Link ಇಲ್ಲಿದೆ. ರವಿ ಹಂಜ್‌ ಸಾಹೇಬರು ನೋಡಬಹುದು.

https://www.facebook.com/share/p/1XEP7y5wa6

ತತ್ವಶಾಸ್ತ್ರದ ಕೆಲಸ ಅವೈಜ್ಞಾನಿಕ ವಸ್ತುತಃ ಸಿದ್ಧಾಂತವನ್ನು ಕುರಿತು ಮಾತನಾಡುವುದಲ್ಲ. ಬದಲಾಗಿ ಸಮಸ್ಯೆಗಳ ಕುರಿತು ಮಾತನಾಡುವುದು ಮತ್ತು ಅವುಗಳಿಗೆ ಉತ್ತರವನ್ನು ಹುಡುಕುವುದ. ಇದ್ಯಾವುದನ್ನೂ ಕೂಡ ರವಿ ಹಂಜ್‌ ರವವರು ಈ ಪುಸ್ತಕದಲ್ಲಿ ಮಾಡದೇ ಕೇವಲ ವೀರಶೈವ ಸಿದ್ಧಾಂತಗಳಿಗೆ Suit ಆಗುವ ಚಿಂತನೆಗಳನ್ನು ಮಂಡಿಸಿ ಸೋತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಭಾರತದಲ್ಲಿ ಲಿಂಗಾಯತರು ಮತ್ತು ವೀರಶೈವರ ನಡುವೆ ಉದ್ದೇಶಪೂರ್ವಕವಾಗಿ ಕಂದಕವನ್ನು ಸೃಷ್ಟಿ ಮಾಡಿದ್ದು ಬ್ರಾಹ್ಮಣರು ಮತ್ತು ಸ್ಥೂಲವಾಗಿ ಹೇಳುವುದಾದರೆ ವೈದಿಕ ಪರಂಪರೆಯವರು. ಇಲ್ಲ ಸಲ್ಲದ ಮೌಢ್ಯಗಳನ್ನು ಹರಿಬಿಟ್ಟು ಷೋಢಷ ದಾನಗಳನ್ನು ನಿರೂಪಣೆ ಮಾಡಿ ತಳವರ್ಗದ ಜನರನ್ನು ಶೋಷಣೆ ಮಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಮಾಡಿದ ಹುನ್ನಾರ. ಇದನ್ನೇ ರವಿ ಹಂಜ್‌ ಎನ್ನುವ ಎಡಬಿಡಂಗಿ ವೀರಶೈವರನ್ನು ಸಮರ್ಥಿಸಿಕೊಳ್ಳುವದಕ್ಕೆ ತರ್ಕಶಾಸ್ತ್ರದ ಸಹಾಯ ಪಡೆಯುತ್ತಿರವುದು.    

ಇನ್ನು ಜೈನ ತರ್ಕಶಾಸ್ತ್ರವನ್ನು ಕೆಣಕಿರುವ ರವಿ ಹಂಜ್‌ ಅವರು ಮಂಡಿಸಿರುವ ವಾದ ಹೀಗಿದೆ:

ಜೈನ ತರ್ಕವು ತರ್ಕದಿಂದ ಪಡೆದುಕೊಂಡ ಜ್ಞಾನವು ನಂಬಿಕಸ್ಥ ಜ್ಞಾನವಾಗಿರಬೇಕು ಮತ್ತು ಅದು ತರ್ಕದಿಂದಲೇ ಉತ್ಪತ್ತಿಯಾದ ಜ್ಞಾನವಾಗಿರಬೇಕು ಎನ್ನುತ್ತದೆ. ಇದನ್ನು ಪಡೆದುಕೊಳ್ಳುವ ಪ್ರತಿಯೊಂದು ಹಂತವೂ ತಾರ್ಕಿಕವಾಗಿರಲೇಬೇಕುಸಹ. ಇದನ್ನು ಜೈನರು ಅನೇಕಾಂತವಾದ ಮತ್ತು ಸಾಧ್ಯವಾದಗಳಲ್ಲಿ ಹೆಚ್ಚಾಗಿ ಕಂಡುಕೊಳ್ಳಬಹುದು. ಒಟ್ಟಾರೆ ರಚನಾತ್ಮಕವೋ. ವಿನಾಶಾತ್ಮಕವೋ ಅಥವಾ ದಿವ್ಯಾತ್ಮಕವೋ ಅದು ತಾರ್ಕಿಕವಾಗಿ ಅಂತಿಮವಾಗಿರಬೇಕು ಮತ್ತು ಸಾಪೇಕ್ಷ ಸಿದ್ಧಾಂತಕ್ಕೆ ಬದ್ಧವಾಗಿರಬೇಕು ಎನ್ನುತ್ತದೆ.

ಬಸವಾ ಬಸವಾ ಇಡೀ ಸಾಲುಗಳನ್ನು ಗಮನಿಸಿದರೆ ಸಣ್ಣ ಮಕ್ಕಳು ಕುಂಟಾಬಿಲ್ಲೇ ಆಡುವಾಗ ಅಲ್ಲೊಂದು ಇಲ್ಲೋಂದು ಕಲ್ಲು ಎಸೆದು ಇದು ನನ್ನದೇ ಈ ಕಲ್ಲು ಎನ್ನುವ ಹಾಗಿದೆ. ಪ್ರತ್ಯಕ್ಷ ಮಾತ್ರ ಪ್ರಮಾಣವೆಂದು ಒಪ್ಪುವ ಚಾರುವಾಕರು “ದೇವರು ಕಾಣುವುದಿಲ್ಲ” ಎನ್ನುವ ತೀರ್ಮಾನವನ್ನು ಹೇಳುತ್ತಾರೆ. ಹಾಗೆಯೇ ಅನುಮಾನ (Inference) ವನ್ನೂ ಒಪ್ಪುವ ಜೈನ ತರ್ಕಶಾಸ್ತ್ರವು “ದೇವರು ಅನುಮಾನದಿಂದಲೂ ದೊರೆಯುವುದಿಲ್ಲ” ಎಂದು ಪ್ರತಿಪಾದಿಸುತ್ತದೆ. ಎಲ್ಲಿಯ   ಅನೇಕಾಂತವಾದ ಎಲ್ಲಿಯ ಸಾಧ್ಯವಾದ, ಎಲ್ಲಿಯ ವಿನಾಶಾತ್ಮಕವೋ ಎಲ್ಲಿಯ ದಿವ್ಯಾತ್ಮಕ. ಏನೆಂದು ಉಪಮಿಸಬೇಕು ಈ ತರ್ಕವನ್ನು ಅಂತಾ ಗೊತ್ತಾಗತಾ ಇಲ್ಲ ಬಸವಾ. ತರ್ಕದಿಂದ ಪಡೆದುಕೊಂಡ ಜ್ಞಾನವು ನಂಬಿಕಸ್ಥ ಜ್ಞಾನವಾಗಿರಬೇಕು ಮತ್ತು ಅದು ತರ್ಕದಿಂದಲೇ ಉತ್ಪತ್ತಿಯಾದ ಜ್ಞಾನವಾಗಿರಬೇಕು ಎನ್ನುವ ಹೇಳಿಕೆಯಲ್ಲಿ ನಂಬಿಕಸ್ಥ ಜ್ಞಾನ ಮತ್ತು ಉತ್ಪತ್ತಿ ಜ್ಞಾನ ಈ ಎರಡೂ ಶಬ್ದಗಳು Diagonally Opposite ಶಬ್ದಗಳು. ಇದನ್ನು ಹೇಗೆ ಅರಗಿಸಿಕೊಳ್ಳಬೇಕೆನ್ನುವುದು ಅರ್ಥ ಆಗತಾ ಇಲ್ಲಾ. Non-sense, ಈ ನಾನು ಮೊದಲೇ ತಿಳಿಸಿದ ಹಾಗೆ ಕೇವಲ ಜ್ಞಾನ ಪ್ರದರ್ಶನಕ್ಕೆ Google – Search – Select – Copy – Paste ಮಾಡಿರುವುದೇ ಒಂದು ಸಾಹಸದ ಕೆಲಸ. ಮುಂದೆ ಬೌದ್ಧ ತರ್ಕಶಾಸ್ತ್ರದ ಕುರಿತು ಹೇಳಿದ ಕೆಲವು ಶಬ್ದಗಳಿಗೆ ಅರ್ಥವನ್ನೂ ಹೇಳದೇ ಮೊಟಕುಗೊಳಿಸಿ “ಇದಿಷ್ಟು ಭಾರತೀಯ ತತ್ವಶಾಸ್ತ್ರದ ಒಂದು ಸಂಕ್ಷಿಪ್ತ ಪರಿಚಯ” ಅಂತಾ ತಿಪ್ಪೆ ಸಾರಿಸಿ ಕೈ ಬಿಟ್ಟಿದ್ದಾನೆ.

ವೈಜ್ಞಾನಿಕವಾಗಿ ತರ್ಕಶಾಸ್ತ್ರವನ್ನು ಅಧ್ಯಯನ ಮಾಡಿರುವ ರವಿ ಹಂಜ್‌ ಅವರು ಹಲವಾರು ಪಾಶ್ಚಿಮಾತ್ಯ ವಿದ್ವಾಂಸರ ಪುಸ್ತಕಗಳನ್ನು Quote ಮಾಡತಾರೆ. ಆದರೆ ಯಾವ ಪುಸ್ತಕದಲ್ಲಿನ ಸಾಲುಗಳನ್ನು Refer ಮಾಡಿದ್ದೇನೆ ಎನ್ನುವುದುನ್ನು ಮರೆತಿದ್ದಾರೆ. ಉದಾಹರಣೆಗೆ Henry Thomus Colebrooke ಅವರ ಪುಸ್ತಕ ಅಂತಾರೆ. ಆದರೆ Quote ಮಾಡಿದ್ದು James Ballantyne ಅವರ ಪುಸ್ತಕ Hindu Philosophy ಯಿಂದ. ಇಂಥ ಸೂಕ್ಷ್ಮ ವಿಚಾರಗಳು ಈ ಪುಸ್ತಕದಲ್ಲಿ ಬಹಳಷ್ಟು ಇದಾವೆ.  

     

ಇವರು ಉಲ್ಲೇಖ ಮಾಡಿರುವ ವಿದ್ವಾಂಸರುಗಳಾದ Max Muller, George Booley, Augustus Morgan, Charles Babbage, Mary Booley ಇವರು ಯಾರೂ ಭಾರತೀಯ ತತ್ವಶಾಸ್ತ್ರವನ್ನು ಸ್ಥೂಲವಾಗಿ ಅಧ್ಯಯನ ಮಾಡಿದವರೇ ಅಲ್ಲಾ ಹಾಗೂ ಇವರು ಮೂಲತಃ ತತ್ವಶಾಸ್ತ್ರ ಬಿಟ್ಟು ಗಣೀತಶಾಸ್ತ್ರ, ಅರ್ಥಶಾಸ್ತ್ರ ಮುಂತಾದ ಇತರೆ ವಿಷಯಗಳಲ್ಲಿ ಪರಿಣಿತಿಯನ್ನು ಪಡೆದವರು. I don’t know with what viciousness Mr. Ravi Hanj quoted these names. ಏನ್ ಬೇಕಾದರೂ Quote ಮಾಡಬಹುದು. ಆದರೆ ಅದಕ್ಕೊಂದು ತಾರ್ಕಿಕ ಸಮರ್ಥನೆ ಬೇಕಾಗುತ್ತದೆ. ಅದನ್ನು ಸಮರ್ಥನೆ ಮಾಡಿಕೊಳ್ಳುವುದರ ಸಲುವಾಗಿ ಬ್ಯೂಲಿಯನ್, ಆಲ್ಜಿಬ್ರಾ, ಬೈನರಿ ಥೇರಿ, ಸಾಪೇಕ್ಷ ಸಿದ್ಧಾಂತ ಮುಂತಾದವುಗಳು ಸಂಸ್ಕೃತ ಮತ್ತು ಗ್ರೀಕ್‌ ಭಾಷಾ ಬುನಾದಿಯ ತರ್ಕಶಾಸ್ತ್ರಗಳೇ ಸ್ವತಂತ್ರವಾದಗಳು ಎನ್ನುವ ಕಟ್ಟು ಕಥೆಯನ್ನು ಹೆಣೆದು ನಮ್ಮನ್ನು ಮೂರ್ಖರನ್ನಾಗಿಸುವ ಹುನ್ನಾರವನ್ನು ಲೇಖಕರು ಮಾಡಿದ್ದಾರೆ.

ಇದರ ಜೊತೆಗೆ ಇಂದಿನ ಕಾಲಘಟ್ಟದಲ್ಲಿ ಯಾವುದೇ ಅವಿಷ್ಕಾರಗಳು ಹೊರಬರುತ್ತಿಲ್ಲ ಎಂದು ಭಾರತೀಯರನ್ನು ಹೀಯಾಳಿಸುವದು ಖಂಡನೀಯ. ಒಬ್ಬ ಅನಿವಾಸಿ ಭಾರತೀಯನಾಗಿ ಅಮೇರಿಕಾದಂಥ ರಾಷ್ಟ್ರದಲ್ಲಿ ಕುಳಿತು ತನ್ನ ದೇಶದ ವಿರುದ್ಧವೇ ಬೌದ್ಧಿಕವಾಗಿ ಕೆಂಡ ಕಾರುತ್ತಿರುವುದು ಯಾವ ಉದ್ದೇಶಕ್ಕಾಗಿ ಎನ್ನುವುದು Crystal Clear. He is executing the agenda of ವೈದಿಕ ಪರಂಪರೆ.

ನನ್ನನ್ನೂ ಹಿಡಿದು ಪ್ರತಿಯೊಬ್ಬನಿಗೂ ತನ್ನ ಧರ್ಮ ಮತ್ತು ಜಾತಿಯಲ್ಲಿ ವಿಶೇಷ ಅಭಿಮಾನವಿರುತ್ತದೆ. ಅವರವರ ಸಂಪ್ರದಾಯದಲ್ಲಿ ನಂಬಿಕೆ ಇರುತ್ತದೆ. ತನ್ನ ಧರ್ಮ ಮತ್ತು ಜಾತಿಯನ್ನು ಬಿಟ್ಟು ಉಳಿದೆಲ್ಲವೂ ಅಸಂಬದ್ಧ ಎನಿಸುತ್ತದೆ. ಆದರೆ ಯಾವ ಧರ್ಮ ಮತ್ತು ಜಾತಿಯನ್ನೂ ನಿಂದಿಸದೇ ಮಾಡುವ ವಿಚಾರಗಳು, ಚರ್ಚೆಗಳು ಸ್ವಾಗತಾರ್ಹ. ಆದರೆ ರವಿ ಹಂಜ್‌ ಎನ್ನುವ ಅನಿವಾಸಿ ಭಾರತೀಯ ಬಸವಾದಿ ಶರಣರನ್ನು ಹಳಿಯುತ್ತಾ ತನ್ನದೇ ಜಾತಿಯಾದ ಆಂಧ್ರದಿಂದ ವಲಸೆ ಬಂದ ಆರಾಧ್ಯ ಶೈವ ಜುಟ್ಟು ಜನಿವಾರಧಾರಿಗಳನ್ನು ವೈಭವೀಕರಿಸುತ್ತಿರುವುದು ಎಷ್ಟು ಸರಿ ಎನ್ನುವುದು ಸಾಹಿತ್ಯಿಕ ವಲಯದಲ್ಲಿ ಹರಿದಾಡುತ್ತಿರುವ ಚರ್ಚೆ.  

ಇದಿಷ್ಟು ಭಾರತೀಯ ತರ್ಕಶಾಸ್ತ್ರವೆನ್ನುವ ಎನ್ನುವ ಅಧ್ಯಾಯದ ಪೂರ್ಣ ಅಸತ್ಯದ ಅನಾವರಣ.

ಸಂಗ್ರಹ ಮತ್ತು ಲೇಖನ:

ಡಾ. ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಇಂಗ್ಲೀಷ್‌ ಶಾಲೆಯ ಹತ್ತಿರ
ಸುಭಾಷ್‌ ನಗರ, ಕ್ಯಾತ್ಸಂದ್ರ
ತುಮಕೂರು – 572 104
ಮೋ. ನಂ: +91 9741 357 132.
ಈ-ಮೇಲ್‌: vijikammar@gmail.com

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

ಸಹಾಯಕ ಗ್ರಂಥಗಳು:

  • ಆಧುನಿಕ ತರ್ಕಶಾಸ್ತ್ರ ಪರಿಚಯ: ಡಾ. ಕೆ. ಬಿ. ರಾಮಕೃಷ್ಣರಾವ್.‌
  • ಮಾಧವಾಚಾರ್ಯ ಪ್ರಣೀತ ಸರ್ವದರ್ಶನ ಸಂಗ್ರಹ: ಇಮ್ಮಡಿ ಶಿವಬಸವಸ್ವಾಮಿಗಳು.
  • ಲಿಂಗಾಯತ ಸ್ವತಂತ್ರಧರ್ಮ: ಡಾ. ಎಮ್.‌ ಎಮ್.‌ ಕಲಬುರ್ಗಿ.
  • ಸಂಸ್ಕೃತಿ ಕಥನ: ಸಂ. ಶ್ರೀ. ಅಗ್ರಹಾರ ಕೃಷ್ಣಮೂರ್ತಿ.
  • ಯುಗಯಾತ್ರೀ ಭಾರತೀಯ ಸಂಸ್ಕೃತಿ: ಸಂ. ಡಾ. ಹರಿದಾಸ ಭಟ್ಟಾಚಾರ್ಯ.
  • Saivism and the Phallic World: B Bhattacharya.
  • The Nyayapraves’s: Anand Shankar B Dhruva.

Loading

Leave a Reply