ಚುಟುಕು ಸಾಹಿತ್ಯ, ಲ್ಯಾಕೋನಿಕ್‌ ಮಾಧ್ಯಮ ಮತ್ತು ವಚನಗಳು

ಪ್ರಥಮ ಶೂನ್ಯ ಸಿಂಹಾಸನ ಪೀಠಾಧಿಪತಿ ಅಲ್ಲಮ ಪ್ರಭುದೇವರು ಕನ್ನಡ ಸಾಹಿತ್ಯಕ್ಕೆ ಸುಮಾರು 2000 ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಹಾಗಾಗಿ ಇದು ಅತ್ಯಂತ ಶ್ರೀಮಂತ ಸಾಹಿತ್ಯ ಪರಂಪರೆ ಮತ್ತು ಸಂಸ್ಕೃತಿ ಇರುವ ಸಾಹಿತ್ಯ. ಕನ್ನಡ ಸಾಹಿತ್ಯ ಎನ್ನುವ ನದಿಯು ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡದ ಜೊತೆಗೆ ನವೋದಯ ಕನ್ನಡ ಎನ್ನುವ ವಿವಿಧ ಉಪನದಿಗಳನ್ನು ತನ್ನ ತೆಕ್ಕೆಯಲ್ಲಿ ತೆಗೆದುಕೊಳ್ಳುತ್ತಾ ಹರಿಯುತ್ತಾ ವಿಶಾಲವಾಗಿ ಸಾಗುತ್ತಾ ಸಮುದ್ರವನ್ನು ಸೇರುತ್ತದೆ. ಇತ್ತೀಚಿನ ನವೋದಯ ಸಾಹಿತ್ಯದ ಕಾಲಘಟ್ಟದಲ್ಲಿ ಹನಿಗವನಗಳು, ಹಾಯ್ಕುಗಳು, ರುಬಾಯಿ, ಮುಕ್ತಕಗಳು, ಇನಿಗವನಗಳು, ಶಾಯರಿಗಳು, ಟಂಕಾಗಳು ಮತ್ತಿತರೇ ಸಾಹಿತ್ಯ ಪ್ರಾಕಾರಗಳ ಜೊತೆಗೆ ಚುಟುಕು…

0 Comments

ಅಂತರಗದ ಆತ್ಮಗುಣಕ್ಕುಂಟೆ ಅಂಗವೈಕಲ್ಯ? / ಡಾ. ಬಸವರಾಜ ಸಾದರ, ಬೆಂಗಳೂರು.

ನಾಡಿನ ಶ್ರೇಷ್ಠ ಸಂಶೋಧಕ ಡಾ. ಎಂ. ಎಂ. ಕಲಬುರ್ಗಿ ಅವರು ಒಂದು ವಿಚಾರ ಸಂಕಿರಣದಲ್ಲಿ, “ವಚನಕಾರರ ಚಿಂತನೆಗಳ ಸಾರ್ವಕಾಲಿಕ ಪ್ರಸ್ತುತತೆ” ಎಂಬ ವಿಷಯ ಕುರಿತು ಮಾತನಾಡಿ, ತಮ್ಮ ಮಾತುಗಳ ಕೊನೆಯಲ್ಲಿ ‘ವರ್ತಮಾನದ ಜಗತ್ತಿನ ನಮ್ಮ ಎಲ್ಲ ಸಮಸ್ಯೆಗಳಿಗೂ ವಚನ ಸಾಹಿತ್ಯದಲ್ಲಿ ಪರಿಹಾರವಿದೆ’ ಎಂದು ಹೇಳಿ ಇನ್ನೇನು ವಿರಮಿಸಲು ಹೊರಟಿದ್ದರು. ಅಷ್ಟರಲ್ಲೇ ಸಭಿಕರಲ್ಲಿ ಒಬ್ಬರು ಎದ್ದು ನಿಂತು, ‘ಸರ್ ಒಂದು ಪ್ರಶ್ನೆ ಕೇಳಬುಹುದೆ?’ ಎಂದಾಗ, ‘ಹಾಂ, ಕೇಳಿ, ಕೇಳಿ’ ಎಂದಿದ್ದರು ಅವರು. ಸರ್, ನೀವು ಹೇಳಿದಂತೆ, ವಚನ ಸಾಹಿತ್ಯದಲ್ಲಿ ಜಗತ್ತಿನ ಏನೆಲ್ಲ ಸಮಸ್ಯೆಗಳಿಗೆ ಪರಿಹಾರವಿರಬಹುದು. ಆದರೆ ನಮ್ಮಂಥ ಅಂಗವಿಕಲರ…

4 Comments

ಅಷ್ಟಾವರಣಗಳಲ್ಲಿ ಪ್ರಸಾದ‌ / ಶ್ರೀಮತಿ. ಅನುಪಮ ಪಾಟೀಲ, ಹುಬ್ಬಳ್ಳಿ.

ಅಷ್ಟಾವರಣಗಳು ಅಂಗವಾದರೆ, ಪಂಚಾಚಾರಗಳು ಪ್ರಾಣ, ಷಟ್ ಸ್ಥಲಗಳು ಆತ್ಮ. ಇವು ಮೂರೂ ಶರಣ ಧರ್ಮದ ಬೆನ್ನೆಲಬುಗಳು. ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಗಳನ್ನು ಅಂತರಂಗದ ಅರಿವಿನ ಪ್ರಜ್ಞೆಗಳು ಎಂದು ಭಾವಿಸಲಾಗಿದೆ. ಅಷ್ಟಾವರಣಗಳು ಮಾಯೆಯ ಬಾಹ್ಯ ಗೊಂದಲಗಳು ಮತ್ತು ಪ್ರಭಾವಗಳಿಂದ ಭಕ್ತನನ್ನು ರಕ್ಷಿಸುವ ಗುರಾಣಿಗಳು ಅಥವಾ ಹೊದಿಕೆಗಳಾಗಿ ಕಾರ್ಯ ನಿರ್ವಹಿಸುವ 8 ಸದ್ಗುಣಗಳು. ಗುರು, ಲಿಂಗ, ಜಂಗಮ, ಭಸ್ಮ, ರುದ್ರಾಕ್ಷ, ಮಂತ್ರ, ಪ್ರಸಾದ, ಪಾದೊದಕ ಇವು ಅಷ್ಟಾವರಣಗಳು. ಮೊದಲ ಮೂರು ಪೂಜ್ಯವಾದವುಗಳು, ನಂತರದ ಮೂರು ಪೂಜಾ ಸಾಧನಗಳು, ಕೊನೆಯ ಎರಡು ಪೂಜಾ ಪರಿಣಾಮಗಳು. ಬಸವಣ್ಣನವರಿಗಿಂತಲೂ ಹಿಂದೆಯೂ ನಮ್ಮ ನಾಡಿನಲ್ಲಿ ಗುರು ಲಿಂಗ…

0 Comments

ಒಕ್ಕಲಿಗ ಮುದ್ದಣ್ಣನವರ “ದೊಡ್ಡವೆರಡು ಕಂಬದ ಮಧ್ಯದಲ್ಲಿ”ವಚನ ವಿಶ್ಲೇಷಣೆ

ದೊಡ್ಡವೆರಡು ಕಂಬದ ಮಧ್ಯದಲ್ಲಿ ಚಿಕ್ಕವೆರಡು ಕಂಬ,ಇಂತೀ ನಾಲ್ಕರ ಮಧ್ಯದ ಮನೆಗೆಅಸ್ಥಿಯ ಗಳು, ನರದ ಕಟ್ಟು, ಮಜ್ಜೆಯ ಸಾರ,ಮಾಂಸದ ಗೋಡೆ, ಚರ್ಮದ ಹೊದಿಕೆ,ಶ್ರೋಣಿತದ ಸಾರದ, ಕುಂಭದಿಂದಿಪ್ಪುದೊಂದುಚಿತ್ರದ ಮನೆ ನೋಡಯ್ಯ.ಆ ಮನೆಗೊಂಬತ್ತು ಬಾಗಿಲು,ಇಡಾ ಪಿಂಗಳವೆಂಬ ಗಾಳಿಯ ಬಾದಳ,ಮೃದು ಕಠಿಣವೆಂಬೆರಡು ಅಗುಳಿಯ ಭೇದ ನೋಡಾ,ಇತ್ತಲೆಯ ಮೇಲಿಪ್ಪ ಸುಷುಮ್ನಾನಾಳವ ಮುಟ್ಟಿ,ದಿವಾರಾತ್ರಿಯೆಂಬ ಅರುಹು ಮರೆಹಿನಉಭಯವ ಕದಕಿತ್ತು ನೋಡಯ್ಯಾ.ಮನೆ ನಷ್ಟವಾಗಿ ಹೋದಡೆಯೂಮನೆಯೊಡೆಯ ಮರಳಿ ಮತ್ತೊಂದು ಮನೆಗೆಬಪ್ಪುದು ತಪ್ಪದು ನೋಡಯ್ಯಾ.ಇಂತಪ್ಪ ಮನೆಗೆನ್ನ ಮರಳಿ ಬಾರದಂತೆ ಮಾಡಯ್ಯಾ,ಕಾಮಭೀಮ ಜೀವಧನದೊಡೆಯ ನಿಮ್ಮ ಧರ್ಮ ನಿಮ್ಮ ಧರ್ಮ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1167 / ವಚನ ಸಂಖ್ಯೆ-1731) ಈ…

4 Comments