ಅನುಪಮ ವರಕವಿ ಡಾ. ದ. ರಾ. ಬೇಂದ್ರೆಯವರ ಬದುಕು ಬರಹ | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.
ಆಕಾಶವಾಣಿಯ ಒಂದು ಸಂದರ್ಶನದಲ್ಲಿ ನಿರೂಪಕರು ಅಜ್ಜಾರ “ನಿಮ್ಮ ಮಾತೃಭಾಷೆ ಮರಾಠಿಯಾದರೂ ಕನ್ನಡದಲ್ಲಿ ಉತ್ಕೃಷ್ಠವಾಗಿ ಬರಿತೀರಿ ಹೆಂಗ” ಅಂತ ಒಂದು ಪ್ರಶ್ನೆಯನ್ನು ಕೇಳತಾರ. ಅದಕ್ಕ ಬೇಂದ್ರೆ ಅಜ್ಜಾರು ಕೊಟ್ಟ ಅನುಪಮ ಉತ್ತರ ಕೇಳಿ ನಿರೂಪರು ಒಂದು ಕ್ಷಣ ಮೂಕವಿಸ್ಮಿತರಾದರು. “ಕನ್ನಡದಾಗ ಚುಲೋತ್ನಂಗ ಬರೀತೇನಂದರ ಅದಕ ಕಾರಣ ಬರಿಯಾಕ ಕನ್ನಡಾನ ಅಷ್ಟು ಚುಲೋ ಐತಿ, ಅದಕ ಆ ಸಾಹಿತ್ಯ ಅಷ್ಟು ಉತ್ಕೃಷ್ಠ ಆಕ್ಕೇತಿ” ಇಂಥ ಅದ್ಭುತ ಕಾವ್ಯ ಗಾರುಡಿಗ ಮತ್ತು ಕನ್ನಡಿಗರ ಮನೆ ಮಾತಾಗಿರುವ ಡಾ. ದ. ರಾ. ಬೇಂದ್ರೆಯವರ ಜನ್ಮದಿನ ಜನೇವರಿ 31. ಇದರ ಪ್ರಯುಕ್ತ ಈ ಲೇಖನ.…