ಅನುಪಮ ವರಕವಿ ಡಾ. ದ. ರಾ. ಬೇಂದ್ರೆಯವರ ಬದುಕು ಬರಹ | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಆಕಾಶವಾಣಿಯ ಒಂದು ಸಂದರ್ಶನದಲ್ಲಿ ನಿರೂಪಕರು ಅಜ್ಜಾರ “ನಿಮ್ಮ ಮಾತೃಭಾಷೆ ಮರಾಠಿಯಾದರೂ ಕನ್ನಡದಲ್ಲಿ ಉತ್ಕೃಷ್ಠವಾಗಿ ಬರಿತೀರಿ ಹೆಂಗ” ಅಂತ ಒಂದು ಪ್ರಶ್ನೆಯನ್ನು ಕೇಳತಾರ. ಅದಕ್ಕ ಬೇಂದ್ರೆ ಅಜ್ಜಾರು ಕೊಟ್ಟ ಅನುಪಮ ಉತ್ತರ ಕೇಳಿ ನಿರೂಪರು ಒಂದು ಕ್ಷಣ ಮೂಕವಿಸ್ಮಿತರಾದರು. “ಕನ್ನಡದಾಗ ಚುಲೋತ್ನಂಗ ಬರೀತೇನಂದರ ಅದಕ ಕಾರಣ ಬರಿಯಾಕ ಕನ್ನಡಾನ ಅಷ್ಟು ಚುಲೋ ಐತಿ, ಅದಕ ಆ ಸಾಹಿತ್ಯ ಅಷ್ಟು ಉತ್ಕೃಷ್ಠ ಆಕ್ಕೇತಿ” ಇಂಥ ಅದ್ಭುತ ಕಾವ್ಯ ಗಾರುಡಿಗ ಮತ್ತು ಕನ್ನಡಿಗರ ಮನೆ ಮಾತಾಗಿರುವ ಡಾ. ದ. ರಾ. ಬೇಂದ್ರೆಯವರ ಜನ್ಮದಿನ ಜನೇವರಿ 31. ಇದರ ಪ್ರಯುಕ್ತ ಈ ಲೇಖನ.…

0 Comments

ನಾ ಬರಿ ಭ್ರೂಣವಲ್ಲ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತುತಾ ಮಾಡಿದ ಹೆಣ್ಣು ತನ್ನ ತೊಡಯನೇರಿತ್ತುತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತುತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತುಅದು ಕಾರಣ, ಹೆಣ್ಣು ಹೆಣ್ಣಲ್ಲ ಹೆಣ್ಣು ರಾಕ್ಷಸಿಯಲ್ಲ;ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ!(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-188/ವಚನ ಸಂಖ್ಯೆ-608) 12 ನೇ ಶತಮಾನದಲ್ಲಿಯೇ ಶಿವಯೋಗಿ ಸಿದ್ಧರಾಮೇಶ್ವರರು ಮಹಿಳಾ ಶಕ್ತಿಯನ್ನು ಗುರುತಿಸಿ ಗೌರವಿಸಿದ ನಿಜ ಶರಣರು. ಹೆಣ್ಣು ಈ ಸೃಷ್ಠಿಯ ಒಂದು ಭಾಗ. ಮಾನವರು ಎಂಬ ಜನಾಂಗದಲ್ಲಿ ಪುರುಷ ಮತ್ತು ಮಹಿಳೆ ಇಬ್ಬರೂ ಸಮಾನರು. ಪುರುಷನ ಕೊಡುಗೆಯಷ್ಟೇ ಮಹಿಳೆಯ ಕೊಡುಗೆಯೂ ಕೂಡ ಮನುಕುಲದ ಬೆಳವಣಿಗೆಗೆ ಶ್ರೇಷ್ಠವಾಗಿದೆ.…

0 Comments

ಮಕರ ಸಂಕ್ರಾಂತಿಯ ಸಂಸ್ಕೃತಿ ಮತ್ತು ವೈಜ್ಞಾನಿಕತೆ / ಶ್ರೀಮತಿ. ಶಾರದಾ ಕೌದಿ, ದಾರವಾಡ.

ಎಳ್ಳು ಬೆಲ್ಲ‌ ಬಿರೋಣ ಒಳ್ಳೆ ಮಾತಾಡೋಣಬೆಳಕು ಹೊಂಗಿರಣ ಪಸರಿಸಿದೆ ಮೂಡಣದಿಕತ್ತಲೆಯ ಮೋಡ ಕರಗಿದೆ ಪಡುವಣದಿತಂದಿದೆ ಸಂಕ್ರಾಂತಿಯ ಸಂಭ್ರಮ ಜಗದಿ ಸೂರ್ಯನು ಮಕರ ರಾಶಿ ಪ್ರವೇಶಿಸಿ ಉತ್ತರಾಭಿಮುಖವಾಗಿ ಪಯಣಿಸುವ ಮಕರ ಸಂಕ್ರಾಂತಿ ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ ಜನೇವರಿ 14 ರಂದು ಸಂಭವಿಸುತ್ತದೆ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವದಕ್ಕೆ ಸಂಕ್ರಾಂತಿ ಎನ್ನುವರು. ಉತ್ತರಾಯಣದ ಆರಂಭವಾದ್ದರಿಂದ ಮಕರ ಸಂಕ್ರಾಂತಿ ವಿಶೇಷ. ಜಗತ್ತಿನ ಅಂಧಕಾರ ಅಳಿದು ಬದುಕಿಗೆ ಬೆಳಕು ನೀಡುವ ಸೂರ್ಯನು ಜ್ಞಾನದ ಸಂಕೇತ. ಮಳೆ ಬೀಳಲು, ಬೆಳೆ ಬೆಳೆಯಲು, ಇಳೆ ಬೆಳಗಲು ಆತನೇ ಕಾರಣ. ಸೂರ್ಯದೇವನ ಅಪಾರ…

0 Comments

ಹೊರಗಲ್ಲ; ಇಲ್ಲೇ ಇದೆ ಎಲ್ಲ! / (ವಿಕಾಸವಾದದ ಮೂಲ ಅರ್ಥವನ್ನು ಧ್ವನಿಸುವ ವಚನ) / ಡಾ. ಬಸವರಾಜ ಸಾದರ

ಬೀಜವೊಡೆದು ಮೊಳೆಯಂಕುರಿಸುವಾಗ ಎಲೆ ಎಲ್ಲಿದ್ದಿತ್ತು?ಎಲೆ ಸುಳಿಬಿಟ್ಟು ಕಮಲುವಾಗ ಶಾಖೆಯೆಲ್ಲಿದ್ದಿತ್ತು?ಶಾಖೆ ಒಡೆದು ಕುಸುಮ ತೋರುವಾಗ ಫಲವೆಲ್ಲಿದ್ದಿತ್ತು?ಫಲ ಬಲಿದು ರಸ ತುಂಬುವಾಗ ಸವಿಯೆಲ್ಲಿದ್ದಿತ್ತು?ಸವಿಯ ಸವಿದು ಪರಿಣತೆಗೊಂಬಾಗ ಅದೇತರೊದಗು?ಇಷ್ಟರಿ ನೀತಿಯನರಿ, ಆತುರವೈರಿ ಮಾರೇಶ್ವರಾ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-433/ವಚನ ಸಂಖ್ಯೆ-1233)ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.ಪರಿಣತೆ: ಅಂತಿಮ ಪರಿಣಾಮ, ಪಲಿತಾಂಶ. ನಾವಿರುವ ಈ ಸೃಷ್ಟಿ ನಿತ್ಯ ಪರಿವರ್ತನಶೀಲವಾದದ್ದು. ಪರಿವರ್ತನೆ ಜಗದ ಹಾಗೂ ವಿಜ್ಞಾನದ ಒಂದು ಮುಖ್ಯ ನಿಯಮ. ವಿಕಾಸವಾದದ ಮೂಲ ಚಹರೆಯೇ ಪರಿವರ್ತನೆ. ಇಂಥ ಪರಿವರ್ತನಾ ಪ್ರಕ್ರಿಯೆಯ ವೇಗವು ವಸ್ತು ಮತ್ತು ಜೀವಿಗಳ ಸ್ವರೂಪಗಳನ್ನು ಆಧರಿಸಿ ನಿಗದಿತವಾಗಿರುತ್ತದೆ. ಬದಲಾವಣೆ ಮತ್ತು…

0 Comments

ಹೇಗಿದ್ದಿರಬಹುದು ಬಸವ ತೊರೆದ ಬಳಿಕ ಕಲ್ಯಾಣ? / ಶ್ರೀ. ಎನ್. ಸಿ. ಶಿವಪ್ರಕಾಶ್, ಮಸ್ಕತ್, ಒಮಾನ್.

ಹೇಗಿದ್ದಿರಬಹುದು ಬಸವ ತೊರೆದ ಬಳಿಕ ಕಲ್ಯಾಣ? ಲಿಂಗವಿಲ್ಲದ ಅಂಗದಂತೆ?ಜಂಗಮವಿಲ್ಲದ ಲಿಂಗದಂತೆ?ರಾಜನಿಲ್ಲದ ರಾಜ್ಯದಂತೆ?ಕರ್ಪೂರದರಿವು ಉರಿದ ಮಹಾ ಮಂಗಳಾರತಿಯಂತೆ? ಹೇಗಿದ್ದಿರಬಹುದು ಬಸವ ತೊರೆದ ಬಳಿಕ ಕಲ್ಯಾಣ? ಕಟ್ಟುತ್ತಿರಬಹುದಲ್ಲಿ ಸಂಜೆಯಅನುಭವ ಮಂಟಪ ಹೊನ್ನಕಲಶವಿಲ್ಲದೆನಡೆಯುತ್ತಿರಬಹುದಲ್ಲಿ ಮಹಾಮನೆದಾಸೋಹ ನಿಜಭಿತ್ತಿಯಿಲ್ಲದೆ ಹೇಗಿದ್ದಿರಬಹುದು ಬಸವ ತೊರೆದ ಬಳಿಕ ಕಲ್ಯಾಣ? ಕಲ್ಯಾಣಕೆ ಆತ್ಮಕಳೆಯ ತಂದವನು ಬಸವಚಾಲುಕ್ಯ ಕಲ್ಯಾಣವ ಕೈಲಾಸವಾಗಿಸಿದವನು ಬಸವಭವಿಯೆಂಬ ಮರಳುಗಾಡಿನಲಿ ಭಕ್ತಿಸುಧೆಯ ಹರಿಸಿದವನು ಬಸವಸಮಸಮಾಜದ ಕನಸ ಸಮುದಾಯದ ಸೆರಗಿಗೆ ಕಟ್ಟಿದವನು ಬಸವ ಹೇಗಿದ್ದಿರಬಹುದು ಬಸವ ತೊರೆದ ಬಳಿಕ ಕಲ್ಯಾಣ? ಬಯಲಿತ್ತು, ಆಲಯವಿತ್ತು ಕಲ್ಯಾಣನಗರಿಯೊಳುಬಯಲು ಆಲಯಗಳ ಭ್ರಮೆಯ ಕಳೆದವನುಆಲಯದೊಳೂ ಇಲ್ಲ, ಬಯಲಲೂ ಇಲ್ಲಬಿಜ್ಜಳನ ಮನ ಮುಂದಣ ಆಸೆ ನುಂಗಿತ್ತೇ…

0 Comments

ಹೊರಗಲ್ಲ; ಒಳಗೇ ಇದೆ ಎಲ್ಲ! (ವಿಕಾಸವಾದದ ಅರ್ಥವನ್ನು ಧ್ವನಿಸುವ ವಚನ) / ಡಾ. ಬಸವರಾಜ ಸಾದರ, ಬೆಂಗಳೂರು.

ನಾವಿರುವ ಈ ಸೃಷ್ಟಿ ನಿತ್ಯ ಪರಿವರ್ತನಶೀಲವಾದದ್ದು. ಪರಿವರ್ತನೆ ಜಗದ ಹಾಗೂ ವಿಜ್ಞಾನದ ಒಂದು ಮುಖ್ಯ ನಿಯಮ. ವಿಕಾಸವಾದದ ಮೂಲ ಚಹರೆಯೇ ಪರಿವರ್ತನೆ. ಇಂಥ ಪರಿವರ್ತನಾ ಪ್ರಕ್ರಿಯೆಯ ವೇಗವು ವಸ್ತು ಮತ್ತು ಜೀವಿಗಳ ಸ್ವರೂಪಗಳನ್ನು ಆಧರಿಸಿ ನಿಗದಿತವಾಗಿರುತ್ತದೆ. ಬದಲಾವಣೆ ಮತ್ತು ಬೆಳವಣಿಗೆ ಎರಡೂ ಅದರ ಅಭಿನ್ನ ಅಂಗಗಳಾಗಿದ್ದು, ಅವೆರಡೂ ಪರಸ್ಪರ ಪೂರಕ ಮತ್ತು ಪ್ರೇರಕ ಗತಿಯಲ್ಲಿಯೇ ನಡೆದಿರುತ್ತವೆ. ಈ ಕಾರಣಕ್ಕಾಗಿ ಅದರ ವೇಗ ಒಂದು ನಿಗದಿತ ನಿಯಂತ್ರಣಾ ಕ್ರಮದಲ್ಲಿರುತ್ತದೆ. ಬದಲಾಗುವುದರ ಮೂಲಕವೇ ಗತಿಶೀಲತೆಯನ್ನು ಸಾಧಿಸುವ ಕಾರಣಕ್ಕೆ ಅದು ತಕ್ಷಣ ನಮ್ಮ ಕಣ್ಣಿಗೆ ಗೋಚರವಾಗುವುದಿಲ್ಲ. ಒಂದು ವಸ್ತು ಅಥವಾ ಜೀವಿಯ…

0 Comments

ಸ್ತ್ರೀ ಸಮಾನತೆ-ವೈಜ್ಞಾನಿಕ ಪ್ರಯೋಗದ ಪ್ರಾತ್ಯಕ್ಷಿಕೆ / ಡಾ. ಬಸವರಾಜ ಸಾದರ, ಬೆಂಗಳೂರು.

ಸಾಮಾಜಿಕ ಅಸಮಾನತೆಯ ಮಾತು ಬಂದಾಗ ನಮ್ಮ ವ್ಯವಸ್ಥೆ ಸಾಮಾನ್ಯವಾಗಿ ಹೆಚ್ಚು ಮಾತನಾಡುವುದು ವರ್ಗ ಮತ್ತು ವರ್ಣ ಅಸಮಾನತೆಗಳ ಬಗ್ಗೆ ಮಾತ್ರ. ಇವುಗಳನ್ನೂ ಒಳಗೊಂಡ ಹಾಗೆ, ಪುರುಷಪ್ರಧಾನ ವ್ಯವಸ್ಥೆಯ ಕ್ರೌರ್ಯ ಮತ್ತು ಶೋಷಣೆಗೆ ಸಿಕ್ಕು ನಿರಂತರ ನಲುಗುತ್ತ ಬಂದ ಮಹಿಳೆಯರ ವಿಷಯಕವಾದ ಅಸಮಾನತೆಯ ಬಗ್ಗೆ ಅದು ಅಷ್ಟಾಗಿ ತಲೆಕೆಡಿಸಿಕೊಳ್ಳುವುದೇ ಇಲ್ಲ. ಇದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಅತ್ಯಂತ ಹೀನ ನಡೆ. “ಮನು” ಕುಲದ ಆರಂಭದಿಂದ ನಡೆದೇ ಇರುವ ಮಹಿಳಾ ಅಸಮಾನತೆಯಾಚರಣೆಯು ಕಾಲ ಕಾಲಕ್ಕೆ ವಿವಿಧ ರೂಪಗಳನ್ನು ತಾಳುತ್ತ ಬಂದಿದೆಯಷ್ಟೇ ಅಲ್ಲ, ಈಗಂತೂ ಕ್ರೌರ್ಯದ ಪರಮಾವಧಿಯನ್ನೇ ಪಡೆದು, ಅವಳ…

3 Comments

ಶರಣ ಸಂಸ್ಕೃತಿಯ ಆರ್ಥಿಕ ಮೌಲ್ಯಗಳು / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಆನೆ ಕುದುರೆ ಭಂಡಾರವಿರ್ದಡೇನೊ?ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ.ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ.ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ?ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1523 / ವಚನ ಸಂಖ್ಯೆ-1504) ವಚನ ಸಾಹಿತ್ಯದ ಅಧ್ಯಯನ ಇಂದಿನ ಪೀಳಿಗೆಯ ಬಹಳಷ್ಟು ವಿದ್ವಾಂಸರುಗಳನ್ನು, ವಿದ್ಯಾರ್ಥಿಗಳನ್ನು ಹಾಗೂ ಲೇಖಕರನ್ನು ಆಕರ್ಷಿಸಿದ್ದು ಒಂದು ಉತ್ತಮ ಬೆಳವಣಿಗೆ. ಬಾಲ್ಯದಿಂದಲೂ ಅಂದರೆ ಸುಮಾರು ನಾನು 12 ವರ್ಷದವನಾಗಿದ್ದಾಗಿನಿಂದ ವಚನ ಸಾಹಿತ್ಯದ ಕಡೆಗಿನ ಒಲವು ಮೂಡಿಸಿದ್ದು…

2 Comments

ಭಾಗ-02: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಸಂಸ್ಕೃತೀಕರಣದ ಮುನ್ನುಡಿ.

ಸತ್ತವರ ಕಥೆಯಲ್ಲ ಜನನದ |ಕುತ್ತದಲಿ ಕುದಿಕುದಿದು ಕರ್ಮದ |ಕತ್ತಲೆಗೆ ಸಿಲುಕುವರ ಸೀಮೆಯ ಹೊಲಬು ತಾನಲ್ಲ ||ಹೊತ್ತು ಹೋಗದ ಪುಂಡರಾಲಿಪ |ಮತ್ತಮತಿಗಳ ಗೋಷ್ಠಿಯಲ್ಲಿದು |ಸತ್ಯಶರಣರು ತಿಳಿವುದೀ ಪ್ರಭುಲಿಂಗಲೀಲೆಯನು || 13 ||(ಪ್ರಭುಲಿಂಗಲೀಲೆ-ಡಾ. ಬಿ. ವ್ಹಿ. ಮಲ್ಲಾಪೂರ / 2011 / ಕನ್ನಡ ಮತ್ತು ಸಂಸ್ಕೃತಿ ಇಲಾಖೆ / ಪುಟ ಸಂಖ್ಯೆ-5 / ವಚನ ಸಂಖ್ಯೆ-13) https://youtu.be/Jrfi820ao1A ಬಸವಣ್ಣ ಹೇಳಿದ್ದು ವೇದಗಳ ಸಾರವನ್ನೇ ಎನ್ನುವಂಥ ಎಡಬಿಡಂಗಿ ಹೇಳಿಕೆಯ youtube link ನಿಮಗಾಗಿ. ಕುಂಕುಮಧಾರಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಮಹಾನ್ ವಿದ್ವಾಂಸರಾಗಿ, ಉಪನ್ಯಾಸಕರಾಗಿ, ಬರಹಗಾರರಾಗಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ-ಬೆಂಗಳೂರು…

3 Comments

ಭಾಗ-01: ಮುಖಪುಟ – ವಚನ ದರ್ಶನ ಎನ್ನುವ ಅಪಸವ್ಯ ಹಾಗೂ ಅಧ್ವಾನ

ಆಸನ ಬಂಧನರು ಸುಮ್ಮನಿರರು.ಭಸ್ಮವ ಹೂಸಿ ಸ್ವರವ ಹಿಡಿದವರು ಸಾಯದಿಪ್ಪರೆ?ಸತ್ಯವನೆ ಮರೆದು, ಅಸತ್ಯವನೆ ಹಿಡಿದು,ಸತ್ತುಹೋದರು ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-156 / ವಚನ ಸಂಖ್ಯೆ-224) ಸಂಘ ಪರಿವಾರ ಕೃಪಾ ಪೋಷಿತ ನಾಟಕ ಮಂಡಳಿ ಮತ್ತು ಹಣೆಯಲ್ಲಿ ವಿಭೂತಿ ಬಿಟ್ಟು ಕುಂಕುಮ ಶೋಭಿತರು So Called ಲಿಂಗಾಯತ ಸ್ವಾಮಿಗಳು ಲಿಂಗಾಯತ ಧರ್ಮದ ವಿರುದ್ಧವಾಗಿ ಬಸವ ದ್ರೋಹಿ ಕೆಲಸ ಮಾಡುತ್ತಿರುವುದು ಜನ ಜನಿತವಾದ ವಿಷಯ. ಈ ವಿಷಯ ಯಾಕೆ ಬಂತು ಅಂದರೆ ಕಳೆದೆರಡು ತಿಂಗಳಿಂದ “ವಚನ ದರ್ಶನ” ಎನ್ನುವ ಪುಸ್ತಕವನ್ನು ನೂರಾರು ಕಡೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿಡುಗಡೆ…

1 Comment