ನಿಜ ಜಂಗಮ ಷಣ್ಮುಖ ಶಿವಯೋಗಿ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.(ಶಿವರಾತ್ರಿಯಂದು ಷಣ್ಮುಖ ಶಿವಯೋಗಿಗಳ ಜಯಂತಿ ನಿಮಿತ್ತ ಈ ಲೇಖನ)
ಶರಣ ಭೂಮಿಯಾದ ಕಲಬುರ್ಗಿಯು ಹಲವಾರು ಶರಣರು ಸಂತರು, ಕವಿಗಳು, ಸಾಹಿತಿಗಳನ್ನು ನಾಡಿಗೆ ಅರ್ಪಿಸಿದ ಪುಣ್ಯ ಭೂಮಿಯಾಗಿದೆ. ಕಡಕೋಳ ಮಡಿವಾಳಪ್ಪ, ಶರಣಬಸಪ್ಪ, ಖೈನೂರಿನ ಕೃಷ್ಣಪ್ಪ, ಚನ್ನೂರಿನ ಜಲಾಲಸಾಬ್ ಹೀಗೇ ಇನ್ನೂ ಅನೇಕರು ಇಲ್ಲಿ ಆಗಿ ಹೋಗಿದ್ದಾರೆ. ಅಖಂಡೇಶ್ವರರ ಕೃಪಾಶೀರ್ವಾದದಿಂದ ಸಗರನಾಡಿನ ಜೇವರ್ಗಿಯಲ್ಲಿ 1639 ರಲ್ಲಿ ಶಿವರಾತ್ರಿಯ ದಿನದಂದು ಜನಿಸಿದ ಷಣ್ಮುಖ ಶಿವಯೋಗಿಗಳು ಬಸವೋತ್ತರ ಯುಗದ ಶರಣರಲ್ಲೇ ಅಗ್ರಪಂಕ್ತಿಯಲ್ಲಿ ನಿಲ್ಲುವರು. ಇವರ ತಾಯಿ ದೊಡ್ಡಮಾಂಬೆ ಹಾಗೂ ತಂದೆ ಮಲ್ಲಶೆಟ್ಟೆಪ್ಪ. ಇವರು ಎರಡು ವರ್ಷದವರಿದ್ದಾಗಿಂದಲೂ ಮಠದತ್ತಲೇ ಓದುತ್ತಿದ್ದು ಅಲ್ಲಿ ಅಖಂಡೇಶ್ವರರ ಸನ್ನಿಧಿಯಲ್ಲಿ ಅಪೂರ್ವವಾದ ಆನಂದವನ್ನು ಅನುಭವಿಸುತ್ತಿದ್ದರು. ಐದನೇ ವರ್ಷಕ್ಕೆ ಅಖಂಡೇಶ್ವರ ಗುರುಗಳ…





Total views : 51410