ಭಾಗ-02: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಸಂಸ್ಕೃತೀಕರಣದ ಮುನ್ನುಡಿ.
ಸತ್ತವರ ಕಥೆಯಲ್ಲ ಜನನದ |ಕುತ್ತದಲಿ ಕುದಿಕುದಿದು ಕರ್ಮದ |ಕತ್ತಲೆಗೆ ಸಿಲುಕುವರ ಸೀಮೆಯ ಹೊಲಬು ತಾನಲ್ಲ ||ಹೊತ್ತು ಹೋಗದ ಪುಂಡರಾಲಿಪ |ಮತ್ತಮತಿಗಳ ಗೋಷ್ಠಿಯಲ್ಲಿದು |ಸತ್ಯಶರಣರು ತಿಳಿವುದೀ ಪ್ರಭುಲಿಂಗಲೀಲೆಯನು || 13 ||(ಪ್ರಭುಲಿಂಗಲೀಲೆ-ಡಾ. ಬಿ. ವ್ಹಿ. ಮಲ್ಲಾಪೂರ / 2011 / ಕನ್ನಡ ಮತ್ತು ಸಂಸ್ಕೃತಿ ಇಲಾಖೆ / ಪುಟ ಸಂಖ್ಯೆ-5 / ವಚನ ಸಂಖ್ಯೆ-13) https://youtu.be/Jrfi820ao1A ಬಸವಣ್ಣ ಹೇಳಿದ್ದು ವೇದಗಳ ಸಾರವನ್ನೇ ಎನ್ನುವಂಥ ಎಡಬಿಡಂಗಿ ಹೇಳಿಕೆಯ youtube link ನಿಮಗಾಗಿ. ಕುಂಕುಮಧಾರಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಮಹಾನ್ ವಿದ್ವಾಂಸರಾಗಿ, ಉಪನ್ಯಾಸಕರಾಗಿ, ಬರಹಗಾರರಾಗಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ-ಬೆಂಗಳೂರು…