ಭಾಗ-01: ಮುಖಪುಟ – ವಚನ ದರ್ಶನ ಎನ್ನುವ ಅಪಸವ್ಯ ಹಾಗೂ ಅಧ್ವಾನ

ಆಸನ ಬಂಧನರು ಸುಮ್ಮನಿರರು.ಭಸ್ಮವ ಹೂಸಿ ಸ್ವರವ ಹಿಡಿದವರು ಸಾಯದಿಪ್ಪರೆ?ಸತ್ಯವನೆ ಮರೆದು, ಅಸತ್ಯವನೆ ಹಿಡಿದು,ಸತ್ತುಹೋದರು ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-156 / ವಚನ ಸಂಖ್ಯೆ-224) ಸಂಘ ಪರಿವಾರ ಕೃಪಾ ಪೋಷಿತ ನಾಟಕ ಮಂಡಳಿ ಮತ್ತು ಹಣೆಯಲ್ಲಿ ವಿಭೂತಿ ಬಿಟ್ಟು ಕುಂಕುಮ ಶೋಭಿತರು So Called ಲಿಂಗಾಯತ ಸ್ವಾಮಿಗಳು ಲಿಂಗಾಯತ ಧರ್ಮದ ವಿರುದ್ಧವಾಗಿ ಬಸವ ದ್ರೋಹಿ ಕೆಲಸ ಮಾಡುತ್ತಿರುವುದು ಜನ ಜನಿತವಾದ ವಿಷಯ. ಈ ವಿಷಯ ಯಾಕೆ ಬಂತು ಅಂದರೆ ಕಳೆದೆರಡು ತಿಂಗಳಿಂದ “ವಚನ ದರ್ಶನ” ಎನ್ನುವ ಪುಸ್ತಕವನ್ನು ನೂರಾರು ಕಡೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿಡುಗಡೆ…

1 Comment

ವಚನ ಸಾಹಿತ್ಯದಲ್ಲಿ ಲಾಭ ಅಥವಾ ಪ್ರತಿಫಲದ ಪರಿಕಲ್ಪನೆ / ಡಾ. ಗಣಪತಿ ಬಿ ಸಿನ್ನೂರ, ಕಲಬುರಗಿ.

ನಾವು ಆಧುನಿಕ ಅರ್ಥಶಾಸ್ತ್ರ ಹಾಗು ವ್ಯವಹಾರ ಅಧ್ಯಯನ ಮಾಡುವಾಗ ಲಾಭ ಅಥವಾ ಪ್ರತಿಫಲದ ಪರಿಕಲ್ಪನೆಯನ್ನು ಆಧುನಿಕ ಪಾಶ್ಚಿಮಾತ್ಯ ಅರ್ಥಶಾಸ್ತ್ರಜ್ಞರು ರೂಪಿಸಿದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಮಾತ್ರ ಅಧ್ಯಯನ ಮಾಡುತ್ತೇವೆ. ಬಹುತೇಕ ಆರ್ಥಿಕ ಚಿಂತಕರು ಮತ್ತು ಬರಹಗಾರರು ಆಧುನಿಕ ಪಾಶ್ಚಿಮಾತ್ಯ ಅರ್ಥಶಾಸ್ತ್ರಜ್ಞರ ಪರಿಕಲ್ಪನೆಯನ್ನು ಮಾತ್ರ ವಿವರಿಸುತ್ತಾರೆ. ಹಾಗಾದರೆ ಲಾಭ ಅಥವಾ ಪ್ರತಿಫಲದ ಪರಿಕಲ್ಪನೆ ಅವರಿಗಿಂತ ಮುಂಚೆ ಇರಲಿಲ್ಲವೇ? ಇದ್ದರೆ ಅದನ್ನು ನೀಡಿದವರು ಯಾರು? ಅದರ ಸ್ವರೂಪ ಎಂಥದ್ದು? ಹೀಗೆ ಅನೇಕ ಪ್ರಶ್ನಗಳು ಹುಟ್ಟಿಕೊಳ್ಳುತ್ತವೆ. ನಾನೊಂದು ದಿನ ಅಲ್ಲಮ ಪ್ರಭುಗಳ “ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿರ್ದಡೆ, ಆ ಬೆವಸಾಯದ ಘೋರವೇತಕ್ಕಯ್ಯಾ?”…

0 Comments

ವಚನ ಸಾಹಿತ್ಯ ಹಾಗೂ ಪರಿಸರ ಪ್ರಜ್ಞೆ ಮತ್ತು UN’s Sustainable Goals of Environment

ನಾನು ಮೆಟ್ಟುವ ಭೂಮಿಯ ಭಕ್ತನ ಮಾಡಿದಲ್ಲದೆ ಮೆಟ್ಟೆನಯ್ಯಾ.ನಾ ನೋಡುತಿಹ ಆಕಾಶದ ಚಂದ್ರ ಸೂರ್ಯರಭಕ್ತನ ಮಾಡಿದಲ್ಲದೆ ನಾ ನೋಡೆನಯ್ಯಾ.[ನಾನು ಬಳಸುವ] ಜಲವ ಭಕ್ತನ ಮಾಡಿದಲ್ಲದೆ ನಾನು ಬಳಸೆನಯ್ಯಾ.ನಾನು ಕೊಂಬ ಹದಿನೆಂಟು ಧಾನ್ಯವ ಭಕ್ತನ ಮಾಡಿದಲ್ಲದೆಕೊಳ್ಳೆನು ಕೂಡಲಚನ್ನಸಂಗಾ ನಿಮ್ಮಾಣೆ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-305 / ವಚನ ಸಂಖ್ಯೆ-89) ಈ ಭೂಮಿ ರಚನೆಯಾಗಿದ್ದು “Big Bang Theory” ಯಿಂದ ಅಂತ ಭೌಗೋಳಿಕ ಮತ್ತು ಖಗೋಳ ಭೌತಶಾಸ್ತ್ರಜ್ಞದ ಎಲ್ಲ ವಿಜ್ಞಾನಿಗಳೂ ಖಚಿತವಾಗಿ ನಿರ್ಧಾರ ಮಾಡಿದ್ದಾರೆ. ಹಲವಾರು ವಿಜ್ಞಾನಿಗಳು ತಮ್ಮ ಪುಸ್ತಕಗಳಲ್ಲಿ ಈ ವಿಷಯವನ್ನು ಮಂಡಿಸಿದ್ದಾರೆ.  Stephen Hawking…

1 Comment

“ಅರಿವೇ ಗುರು – ಮನೋವೈಜ್ಞಾನಿಕ ಚಿಂತನೆ”

ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯಾ,ಒರೆಗೆ ಬಣ್ಣಕ್ಕೆ ತಂದೆನ್ನ ಪುಟವನಿಕ್ಕಿ ನೋಡಯ್ಯಾ,ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ,ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ ಸಲಹುಕೂಡಲಸಂಗಮದೇವಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-29 / ವಚನ ಸಂಖ್ಯೆ-251) ನನಗೆ ಬಸವ ತತ್ವ ಮತ್ತು ವಚನ ಸಾಹಿತ್ಯದ ಶಿವನ ಪ್ರಕಾಶವನ್ನು ತೋರಿಸಿದ್ದ ಶ್ರೀ ಗದಗ ತೋಂಟದಾರ್ಯ ಮಠದ ಲಿಂ. ಡಾ. ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮತ್ತು ನನ್ನ ಎಲ್ಲ ವಿದೇಶ ಪ್ರವಾಸಗಳಿಗೂ ಬೆನ್ನು ತಟ್ಟಿ ಆಶೀರ್ವದಿಸಿದ್ದ ಸಿದ್ಧಗಂಗೆಯ ಸಿದ್ಧಪುರುಷ ಲಿಂ. ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ…

0 Comments

“ಗಂಗೆಗೆ ಕಟ್ಟಿಲ್ಲ ಲಿಂಗಕ್ಕೆ ಮುಟ್ಟಿಲ್ಲ” / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 12 ನೇ ಶತಮಾನ ಒಂದು ಪರ್ವ ಕಾಲ. ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ಧಾರ್ಮಿಕ ಪ್ರವೃತ್ತಿಗಳ ಕಾಲಘಟ್ಟ. ಧಾರ್ಮಿಕ ಇತಿಹಾಸದಲ್ಲಿ ಬಸವಣ್ಣನವರ ಸ್ಥಾನ ವಿಶಿಷ್ಟವಾದದ್ದು. ಜಾತಿ ಸೂತಕಗಳ ಶಾಪಕ್ಕೆ ನರಳುತ್ತಿರುವ ದೇಶದಲ್ಲಿ 900 ವರ್ಷಗಳ ಹಿಂದೆಯೇ ಜಾತಿ ಸೂತಕಗಳ ನಿರ್ಮೂಲನೆ ಮಾಡಿದ ಮಹಾ ಮಾನವತಾವಾದಿ. ಅಂದು ವರ್ಗ ತಾರತಮ್ಯ, ಅಸಮಾನತೆ, ಲಿಂಗ, ಜಾತಿ ಭೇದ ಪಿಡುಗುಗಳ ವಿರುದ್ಧ ಹೋರಾಡಿದ ಶರಣರು, ವೈದಿಕ ಮತ್ತು ಜೈನ ಧರ್ಮಗಳ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಶರಣರು ಮಾತನಾಡುತ್ತಿರಲಿಲ್ಲ ಅವರ ನಡೆಯೇ ಮಾತಾಗಿತ್ತು. ಕೇವಲ ತತ್ವ ಸಿದ್ಧಾಂತಗಳಿಂದ ಬದಲಾವಣೆ ಅಸಾಧ್ಯವೆಂದು…

0 Comments

“ಶರಣ ಸಂಸ್ಕೃತಿಯ ಆರ್ಥಿಕ ಮೌಲ್ಯಗಳು”

ಆನೆ ಕುದುರೆ ಭಂಡಾರವಿರ್ದಡೇನೊ?ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ.ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ.ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ?ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1523 / ವಚನ ಸಂಖ್ಯೆ-1504) ವಚನ ಸಾಹಿತ್ಯದ ಅಧ್ಯಯನ ಇಂದಿನ ಪೀಳಿಗೆಯ ಬಹಳಷ್ಟು ವಿದ್ವಾಂಸರುಗಳನ್ನು, ವಿದ್ಯಾರ್ಥಿಗಳನ್ನು ಹಾಗೂ ಲೇಖಕರನ್ನು ಆಕರ್ಷಿಸಿದ್ದು ಒಂದು ಉತ್ತಮ ಬೆಳವಣಿಗೆ. ಬಾಲ್ಯದಿಂದಲೂ ಅಂದರೆ ಸುಮಾರು ನಾನು 12 ವರ್ಷದವನಾಗಿದ್ದಾಗಿನಿಂದ ವಚನ ಸಾಹಿತ್ಯದ ಕಡೆಗಿನ ಒಲವು ಮೂಡಿಸಿದ್ದು…

0 Comments

ವಚನಗಳಲ್ಲಿ ಯೋಗ – ಶಿವಯೋಗ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ವಚನಗಳು ಕನ್ನಡ ಸಾಹಿತ್ಯಕ್ಕೆ ಒಲಿದು ಬಂದ ವರ. 12 ನೇ ಶತಮಾನದ ವರ್ತಮಾನದ ತಲ್ಲಣಗಳಿಗೆ ನಾಂದಿಯಾದ ವಚನಗಳು ನಡೆ-ನುಡಿ ಸಾಮರಸ್ಯದಿಂದಾಗಿ ೨೧ನೇ ಶತಮಾನದಲ್ಲೂ ಪ್ರಸ್ತುತವಾಗುತ್ತವೆ, ಮೊಗೆ ಮೊಗೆದಷ್ಟು ನವ ನವೀನ ವಿಚಾರಗಳಿಗೆ ಅವಾಸ್ಥಾನವಾದ ವಚನಗಳು ತಮ್ಮ ಒಡಲಲ್ಲಿ ಹೊಸ ಅಚ್ಚರಿಗಳನ್ನು ಮುಚ್ಚಿಟ್ಟುಕೊಂಡಿವೆ. ಈ ಕಾರಣದಿಂದ ವಚನಗಳನ್ನು ಓದಿದಷ್ಟು ಹೊಸ ಹೊಳಹುಗಳು ವಚನ ಅಭ್ಯಾಸಗಳಿಗೆ, ಸಂಶೋಧಕರಿಗೆ ಒದಗುತ್ತಲೇ ಇವೆ. ಕಾಲ ದೂರ ಸರಿದಂತೆ ಜೀವನ ಶೈಲಿಯಲ್ಲಿ, ಮನುಷ್ಯರ, ಆಲೋಚನೆಗಳಲ್ಲಿ, ಅನುಸರಿಸುವ ಮೌಲ್ಯಗಳಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುತ್ತಿದ್ದೇವೆ. ಬದಲಾದ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ವಚನಗಳು ನೀಡುವ ಬೆಳಕು ಮಾತ್ರ ಕ್ಷೀಣವಾಗಿಲ್ಲ. ಸಾರ್ವಕಾಲಿಕ…

0 Comments

ವಚನ ಸಾಹಿತ್ಯದಲ್ಲಿ ಸಂಘರ್ಷ ನಿರ್ವಹಣೆಯ ಜ್ಞಾನಶಿಸ್ತು / ಡಾ. ಶೀಲಾದೇವಿ ಮಳಿಮಠ.

Research Article Main Topic: ವಚನ ಸಾಹಿತ್ಯದಲ್ಲಿ ಸಂಘರ್ಷ ನಿರ್ವಹಣೆಯ ಜ್ಞಾನಶಿಸ್ತು Specialization Topic: ವಿಶೇಷ ವಿಷಯ: “ಕಾಳವ್ವೆ ವಚನಗಳು – ಸಾಹಿತ್ಯ ಸಂವೇದನೆ ಮತ್ತು ಸಾಮಾಜಿಕ ವೇದನೆ – ಸಂಘರ್ಷ ನಿರ್ವಹಣೆಯ ಜ್ಞಾನಶಿಸ್ತು. ಅರ್ಥಪ್ರಾಣಭಿಮಾನದ ಮೇಲೆ ಬಂದಡೂ ಬರಲಿ,ವೃತಹೀನನ ನೆರೆಯಲಾಗದು.ನೋಡಲು ನುಡಿಸಲು ಎಂತೂ ಆಗದು.ಹರಹರಾ, ಪಾಪವಶದಿಂದ ನೋಡಿದಡೆ,ರುದ್ರಜಪ ಮಾಹೇಶ್ವರಾರಾಧನೆಯ ಮಾಳ್ಪುದು.ಇಂತಲ್ಲದವರ ಉರಿಲಿಂಗಪೆದ್ದಿಗಳರಸ‌ ನಕ್ಕು ಕಳೆವನವ್ವಾ(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-868 / ವಚನ ಸಂಖ್ಯೆ-729) ವೃತ ಹೋದಾಗಳೆ ಇಷ್ಟಲಿಂಗದ ಕಳೆ ನಷ್ಟವವ್ವಾ,ಅವರು ಲಿಂಗವಿದ್ದೂ ಭವಿಗಳು.ಅದು ಹೇಗೆಂದಡೆ ಪ್ರಾಣವಿಲ್ಲದ ದೇಹದಂತೆ.ಉರಿಲಿಂಗಪೆದ್ದಿಗಳರಸ ಬಲ್ಲನೊಲ್ಲನವ್ವಾ.(ಸಮಗ್ರ ವಚನ ಸಂಪುಟ:…

0 Comments

Fiscal Policy: ವಚನಕಾರರು ಕಂಡಂತೆ ವಿತ್ತೀಯ ಕಾರ್ಯನೀತಿ ಒಂದು ಅನುಪಮ ಸಮಕಾಲೀನ ಚಿತ್ರಣ

ಅಮರಾವತಿಯ | ಪಟ್ಟಣದೊಳಗೆ ||ದೇವೇಂದ್ರನಾಳುವ | ನಂದನವನವಯ್ಯಾ ||ಅತ್ತ ಸಾರಲೆ ಕಾಮಯ್ಯ | ಮೋಹವೇ ನಿನಗೆ? ||ಲೋಕಾದಿಲೋಕವೆಲ್ಲವ | ಮರುಳು ಮಾಡಿದೆ ||ಕಾಮಾ | ಗುಹೇಶ್ವರಲಿಂಗವನರಿಯೊ ||(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-149 / ವಚನ ಸಂಖ್ಯೆ-131) ದೇವೇಂದ್ರನ ರಾಜಧಾನಿ ಅಮರಾವತಿಯು ಅಮರರಾದ ದೇವಾನು-ದೇವತೆಗಳ ವಾಸಸ್ಥಾನ ಎನ್ನುವುದು ದ್ವೈತ ತತ್ವವನ್ನು ನಂಬುವ ಜನಗಳ ಕಲ್ಪನೆ. ಅದು ಫಲಭರಿತ ಹಣ್ಣುಗಳು, ಸುಗಂಧ ಸುವಾಸನೆ ಬೀರುವ ಹೂವುಗಳು ಮತ್ತು ಸೇವಕಿಯರು ಮುಂತಾದವುಗಳಿಂದ ಕೂಡಿ ಪಂಚೇಂದ್ರಿಯಗಳಿಗೆ ಆನಂದದ ಅನುಭವವನ್ನು ನೀಡುವ ಲೋಕ. ಕಾಮನೇ, ಮೋಹದಿಂದೊಡಗೂಡಿದ ಲೋಕದ ಜನರನ್ನು ಕಾಡುವ…

0 Comments

ಪಾರ್ಲಿಮೆಂಟ್‌, ಮ್ಯಾಗ್ನಾ ಕಾರ್ಟಾ ಮತ್ತು ಬಸವೇಶ್ವರ/ಶ್ರೀ.ವಿಜಯಕುಮಾರ ಕಮ್ಮಾರ

ಮ್ಯಾಗ್ನಾ ಕಾರ್ಟಾದ ಉಳಿದಿರುವ ನಾಲ್ಕು ದಾಖಲೆಗಳಲ್ಲಿ ಒಂದರ ಚಿತ್ರ.(ಸಾಂದರ್ಭಿಕ ಚಿತ್ರ: ಅಂತರ್ಜಾಲ ಕೃಪೆ) ಸ್ವತಂತ್ರ ಭಾರತದ ಇತಿಹಾಸದಲ್ಲಿ ಸಂಸತ್‌ ಭವನ ಒಂದು ಐತಿಹಾಸಿಕ ಕಟ್ಟಡ ಮತ್ತು ಈ ದೇಶದ ಶಕ್ತಿಕೇಂದ್ರ. ಪ್ರಸಿದ್ಧ ಬ್ರಿಟೀಷ್‌ ವಾಸ್ತುಶಿಲ್ಪಿಗಳಾದ ಸರ್‌ ಎಡ್ವಿನ್‌ ಲುಟೆಯನ್ಸ್‌ ಮತ್ತು ಸರ್‌ ಹರ್ಬರ್ಟ್‌ ಬೇಕರ್‌ ಅವರ ವಿನ್ಯಾಸದಲ್ಲಿ ರೂಪುಗೊಂಡ ಕಟ್ಟಡ. ದಿನಾಂಕ 12.02.1921 ರಲ್ಲಿ ಶಂಕುಸ್ಥಾಪನೆಯಾಗಿ ಇದರ ನಿರ್ಮಾಣಕ್ಕೆ ಸುಮಾರು ಆರು ವರ್ಷಗಳ ಕಾಲ ತೆಗೆದುಕೊಂಡಿತು. ಅಂದಿನ ಲೆಕ್ಕದಲ್ಲಿ 83 ಲಕ್ಷ ರೂಪಾಯಿಗಳಲ್ಲಿ ನಿರ್ಮಾಣವಾದ ಈ ಕಟ್ಟಡವನ್ನು ಗವರ್ನರ್‌ ಜನರಲ್‌ ಆಗಿದ್ದಂಥ ಲಾರ್ಡ್‌ ಐರ್ವಿನ್‌ ದಿನಾಂಕ 18.01.1927…

1 Comment