ಉಭಯ ಭ್ರಷ್ಟ ಲಜ್ಜೆಗೇಡಿಗಳಿಗೊಂದು ಹೆಸರು ಕೊಡಿ./ಡಾ. ಬಸವರಾಜ ಸಾದರ, ಬೆಂಗಳೂರು.

     ಕಣ್ಣು ನೋಡಲು, ಕಿವಿ ಕೇಳಲು, ಮೂಗು ವಾಸಿಸಲು, ಬಾಯಿ ರುಚಿ ನೋಡಲು ಮತ್ತು ಚರ್ಮ ಸ್ಪರ್ಶಿಸಲು-ಹೀಗೆ ಮನುಷ್ಯನ ಪಂಚೇಂದ್ರಿಯಗಳು, ತಮಗೆ ಅವಕಾಶವಿರುವ ಮಾರ್ಗಗಳ ಮೂಲಕ ತಮ್ಮ ಆಸೆ-ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಸದಾ ಪಹಪಿಸುತ್ತಿರುತ್ತವೆ ಮತ್ತು ಹವಣಿಸುತ್ತಿರುತ್ತವೆ. ಮನಸ್ಸೆಂಬ ಮಹಾನಿಯಂತ್ರಕಶಕ್ತಿಯು ಪಂಚೇಂದ್ರಿಯಗಳ ಮೂಲಕವೇ ತನ್ನ ಸಕಾರಾತ್ಮಕ ಮತ್ತು ನಕಾರಾತ್ಮಕ, ಎರಡೂ ಬಗೆಯ ಅಪೇಕ್ಷೆಗಳನ್ನು ಈಡೇರಿಸಿಕೊಳ್ಳುತ್ತದೆ. ಮನುಷ್ಯನ ಭಾವಕೋಶದೊಂದಿಗೆ ಬಿಡಿಸಿಕೊಳ್ಳಲಾರದಂತೆ ಬೆಸೆದುಕೊಂಡಿರುವ ಈ ಮನಸ್ಸು ಮತ್ತು ಪಂಚೇಂದ್ರಿಯಗಳ ಬೇಡಿಕೆಗಳನ್ನು ನಿರಾಕರಿಸುವುದು ಅಷ್ಟೇನೂ ಸುಲಭದ ಕೆಲಸವಲ್ಲ. ಈ ಕಾರಣಕ್ಕಾಗಿಯೇ ಮನುಷ್ಯ ಅವುಗಳ ಬೇಡಿಕೆಗಳನ್ನು ಈಡೇರಿಸಲು ಒಳ್ಳೆಯ ಕೆಲಸಗಳಂತೆಯೇ ಕೆಟ್ಟ ಕೆಲಸಗಳನ್ನೂ ಮಾಡುತ್ತಾನೆ.…

1 Comment

ವಚನಗಳು ಮತ್ತು ವ್ಯಕ್ತಿತ್ವ ವಿಕಸನ / ಸಿದ್ದು ಯಾಪಲಪರವಿ, ಕಾರಟಗಿ, ಕೊಪ್ಪಳ ಜಿಲ್ಲೆ.

ಮನುಷ್ಯನ ಮನಸ್ಸಿನ ಮೇಲೆ ಸಾವಿರಾರು ವರ್ಷಗಳಿಂದ ಅಧ್ಯಯನ ಸಾಗಿಯೇ ಇದೆ. ಆದರೆ ಇನ್ನೂ ನೆಲೆ ನಿಂತಿಲ್ಲ, ನಿಲ್ಲುವುದೂ ಇಲ್ಲ. ಆರು ಸಾವಿರ ವರ್ಷಗಳ ಹಿಂದೆ ಬೋಧಿಸಲಾದ ಕೃಷ್ಣನ ಭಗವದ್ಗೀತಾ, ಬುದ್ಧನ ವಿಪಸನ, ಆಯುರ್ವೇದ ಶಾಸ್ತ್ರದ ಕಾಯ ಚಿಕಿತ್ಸಾ ಮತ್ತು ಬಸವಾದಿ ಶರಣರ ವಚನಗಳು ಆಲೋಚನಾ ಕ್ರಮವನ್ನು ಮುಂದುವರೆಸಿಕೊಂಡು ಸಾಗಿವೆ. ಆಧುನಿಕ ಮನೋವಿಜ್ಞಾನ ವಿದೇಶಗಳಲ್ಲಿ ತನ್ನ ಮನೋ ಸಂಶೋಧನೆಯನ್ನು ಮಾಡುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಶರಣರು ಅನುಭವ ಮಂಟಪದ ಮೂಲಕ ಬದುಕಿನ ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ಮನೋವೈಜ್ಞಾನಿಕ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಚರ್ಚೆ ಮಾಡಿ,…

0 Comments

ಆರೋಗ್ಯಕ್ಕೆ ವಚನಾಮೃತ / ಡಾ. ಸಿ. ಆರ್.‌ ಚಂದ್ರಶೇಖರ, ಬೆಂಗಳೂರು.

ಪ್ರಸಕ್ತ ಸಮಾಜದಲ್ಲಿ ನಮ್ಮ ಬದುಕು ಸಂಕೀರ್ಣ ಮತ್ತು ಸಂಕಷ್ಟಮಯವಾಗುತ್ತಿದೆ. ಭೋಗ ಭಾಗ್ಯಗಳ “ಕಂಸ್ಯೂಮರ್”‌ ಜಗತ್ತಿನಲ್ಲಿ ʼಹಣ-ವಸ್ತು-ರಂಜನೆʼಯಿಂದಲೆ ಸುಖ-ಸಂತೋಷವೆಂಬ ಸೂತ್ರ ನಮ್ಮನ್ನು ಬಂಧಿಸಿದೆ. Marks-Materials-Money ಈ ಮೂರೂ ʼಎಂʼಗಳೂ ಬಾಲ್ಯದಿಂದ ಮುಪ್ಪಿನವರೆಗೆ ನಮ್ಮನ್ನು ಕಾಡುತ್ತಿವೆ. ಶಾಲಾ-ಕಾಲೇಜು ವಿದ್ಯಾಭ್ಯಾಸದಲ್ಲಿ Marks (ಅಂಕಗಳು) ನಂತರ ಹಣ ಸಂಪಾದನೆ-ಬೇರೆಯವರಿಗಿಂತ ಹೆಚ್ಚಾಗಿ ನಮಗೇ ಸಿಗಬೇಕು. ಹಾಗೆಯೇ ಐಷಾರಾಮಿ ವಸ್ತುಗಳು (Materials) ಎಷ್ಟಿದ್ದರೂ ಸಾಲದು. ಮನೆಯೊಳಗಿನ ಸ್ನೇಹ ಸಂಬಂಧಗಳು ಮನೆಯ ಹೊರಗಿನ ಸ್ನೇಹ ಸಂಬಂಧಗಳು ಶಿಥಿಲವಾಗುತ್ತಿವೆ. ಯಾರಿಗೆ ಯಾರೋ ಎರವಿನ ಸಂಸಾರ. ನಾನು ಕಂಡ ಹಲವಾರು ಕುಟುಂಬಗಳಲ್ಲಿ ಗಂಡನಿಗೆ ಹೆಂಡತಿಯ ಆಸರೆ ಇಲ್ಲ. ಹೆಂಡತಿಗೆ ಗಂಡನ…

1 Comment

ಗಾಂಧೀ ಗಿಡ / ಶ್ರೀ. ಬಸವರಾಜ ಚಿನಗುಡಿ, ಚನ್ನಮ್ಮನ ಕಿತ್ತೂರ, ಬೆಳಗಾವಿ ಜಿಲ್ಲೆ.

ಚನ್ನಮ್ಮನ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಗಾಂಧೀ ಮಡ್ಡಿಯಲ್ಲಿ ಬೃಹಾದಾಕಾರದಲ್ಲಿ ಬೆಳೆದು ನಿಂತ ಗಾಂಧೀ ಗಿಡ (ಆಲದ ಮರ). ದಾರವಾಡ ಮತ್ತು ಬೆಳಗಾವಿ ನಗರಗಳ ಮಧ್ಯ ಮಲೆನಾಡಿನ ಅಂಚಿನಲ್ಲಿ ಪೂಣೆ-ಬೆಂಗಳೂರು ರಾಷ್ಟೀಯ ಹೆದ್ದಾರಿ-4 ರಿಂದ ಸುಮಾರು 7 ಕಿ.ಮೀ ದೂರದಲ್ಲಿ ತಿಗಡೊಳ್ಳಿ ಎಂಬ ಗ್ರಾಮ ಇದೆ. ಈ ಗ್ರಾಮ ಸ್ವಾತಂತ್ರ್ಯ ಪೂರ್ವದಿಂದಲೂ ಮಹೋನ್ನತ ಇತಿಹಾಸ ಹೊಂದಿದೆ. ಸ್ವಾತಂತ್ರ ಹೋರಾಟ, ಆರ್ಥಿಕವಾಗಿ, ಸಾಹಿತ್ಯಿಕವಾಗಿ, ರಾಜಕೀಯವಾಗಿ ವೈಭವದಿಂದ ಮೆರೆದ ಗ್ರಾಮ. ತಿಗಡೊಳ್ಳಿ ಗ್ರಾಮವು ಸ್ವಾತಂತ್ರ ಹೋರಾಟದಲ್ಲಿ ತನ್ನದೆ ಆದ ಛಾಪು ಮೂಡಿಸಿ 1942 ರ ಚಲೇಜಾವ್ ಚಳುವಳಿಯ ಕಾಲದಲ್ಲಿ ಮಹತ್ವದ…

0 Comments

ವಚನ ಸಾಹಿತ್ಯದಲ್ಲಿ ಆರೋಗ್ಯ / ಡಾ ಸುರೇಶ ಸಗರದ, ರಾಯಚೂರು.

ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಅನಾರೋಗ್ಯದ ಸಮಯದಲ್ಲಿ ಮಾತ್ರ ನಾವು ಆರೋಗ್ಯದ ಕುರಿತು ಚಿಂತಿಸುತ್ತೇವೆ. ಅನಾರೋಗ್ಯದಿಂದ ಗುಣಮುಖರಾಗುತ್ತಿದ್ದಂತೆ ಮತ್ತೇ ಆ ಕುರಿತು ಚಿಂತಿಸುವುದಿಲ್ಲ. ಇತ್ತೀಚಿನ ಜೀವನಶೈಲಿ, ಅನೇಕ ಅಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ, ಕ್ಯಾನ್ಸರ್ ನಿಂದ ಬಳಲುವವರ ಸಂಖ್ಯೆ ಅನೇಕ ಪಟ್ಟು ಹೆಚ್ಚಾಗುತ್ತಿದೆ. ಇದು ಮಧ್ಯ ವಯಸ್ಸಿನವರಲ್ಲಿ ಮತ್ತು ಯುವಕರಲ್ಲಿಯೂ ಹೆಚ್ಚಾಗುತ್ತಿರುವುದು ಕಳವಳಕಾರಿ ವಿಷಯ. ಈ ಆತಂಕಕಾರಿ ಬೆಳವಣಿಗೆಯನ್ನು ತಡೆಗಟ್ಟಲು ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ಜೊತೆ ಜಾಗೃತಿ ಮೂಡಿಸಲು,…

0 Comments

ಚುಟುಕು ಸಾಹಿತ್ಯ, ಲ್ಯಾಕೋನಿಕ್‌ ಮಾಧ್ಯಮ ಮತ್ತು ವಚನಗಳು

ಪ್ರಥಮ ಶೂನ್ಯ ಸಿಂಹಾಸನ ಪೀಠಾಧಿಪತಿ ಅಲ್ಲಮ ಪ್ರಭುದೇವರು ಕನ್ನಡ ಸಾಹಿತ್ಯಕ್ಕೆ ಸುಮಾರು 2000 ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಹಾಗಾಗಿ ಇದು ಅತ್ಯಂತ ಶ್ರೀಮಂತ ಸಾಹಿತ್ಯ ಪರಂಪರೆ ಮತ್ತು ಸಂಸ್ಕೃತಿ ಇರುವ ಸಾಹಿತ್ಯ. ಕನ್ನಡ ಸಾಹಿತ್ಯ ಎನ್ನುವ ನದಿಯು ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡದ ಜೊತೆಗೆ ನವೋದಯ ಕನ್ನಡ ಎನ್ನುವ ವಿವಿಧ ಉಪನದಿಗಳನ್ನು ತನ್ನ ತೆಕ್ಕೆಯಲ್ಲಿ ತೆಗೆದುಕೊಳ್ಳುತ್ತಾ ಹರಿಯುತ್ತಾ ವಿಶಾಲವಾಗಿ ಸಾಗುತ್ತಾ ಸಮುದ್ರವನ್ನು ಸೇರುತ್ತದೆ. ಇತ್ತೀಚಿನ ನವೋದಯ ಸಾಹಿತ್ಯದ ಕಾಲಘಟ್ಟದಲ್ಲಿ ಹನಿಗವನಗಳು, ಹಾಯ್ಕುಗಳು, ರುಬಾಯಿ, ಮುಕ್ತಕಗಳು, ಇನಿಗವನಗಳು, ಶಾಯರಿಗಳು, ಟಂಕಾಗಳು ಮತ್ತಿತರೇ ಸಾಹಿತ್ಯ ಪ್ರಾಕಾರಗಳ ಜೊತೆಗೆ ಚುಟುಕು…

0 Comments