ಅನುಪಮ ಅಹಿಂಸಾವಾದಿ ಶರಣ ಬಳ್ಳೇಶ ಮಲ್ಲಯ್ಯನವರು

ಆವ ಪ್ರಾಣಿಗೆಯೂ ನೋವ ಮಾಡಬೇಡ.ಪರನಾರಿಯರ ಸಂಗ ಬೇಡ.ಪರಧನಕ್ಕಳುಪಬೇಡ, ಪರದೈವಕ್ಕೆರಗಬೇಡ.ಈ ಚತುರ್ವಿಧ ತವಕವ ಮಾಡುವಾಗಪರರು ಕಂಡಾರು, ಕಾಣರು ಎಂದೆನಬೇಡ.ಬಳ್ಳೇಶ್ವರಲಿಂಗಕ್ಕಾರು ಮರೆಮಾಡಬಾರದಾಗಿಅಘೋರನರಕದಲ್ಲಿಕ್ಕುವ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1376 / ವಚನ ಸಂಖ್ಯೆ-193) ವಚನ ಸಾಹಿತ್ಯದ ಅಧ್ಯಯನ ಇಂದಿನ ಪೀಳಿಗೆಯ ಬಹಳಷ್ಟು ವಿದ್ವಾಂಸರುಗಳನ್ನು, ವಿದ್ಯಾರ್ಥಿಗಳನ್ನು ಹಾಗೂ ಲೇಖಕರನ್ನು ಆಕರ್ಷಿಸಿದ್ದು ಒಂದು ಉತ್ತಮ ಬೆಳವಣಿಗೆ. ಬಾಲ್ಯದಿಂದಲೂ ಅಂದರೆ ಸುಮಾರು ನಾನು 12 ವರ್ಷದವನಾಗಿದ್ದಾಗಿನಿಂದ ವಚನ ಸಾಹಿತ್ಯದ ಕಡೆಗಿನ ಒಲವು ಮೂಡಿಸಿದ್ದು ಅಥವಾ ಗೀಳನ್ನು ಹಚ್ಚಿದ್ದು ನಮ್ಮ ತಂದೆ ಲಿಂ. ಶ್ರೀ ಈಶ್ವರ ಕಮ್ಮಾರ ಅವರು. ಇವತ್ತು ಅವರ ಪಾದ ಕಮಲಗಳನ್ನು…

0 Comments

ವಿಶ್ವದ ಬೆರಗು ಅಲ್ಲಮ/ಸುನಿತಾ ಮೂರಶಿಳ್ಳಿ

ಹನ್ನೆರಡನೇ ಶತಮಾನದ ಶರಣ ಕ್ರಾಂತಿಗೆ ಅಧಿಕೃತ ಸ್ವರೂಪದ ಮುದ್ರೆಯನೊತ್ತಿದವರು ಅಲ್ಲಮರು. ಆ ಕ್ರಾಂತಿಯ ರೂವಾರಿ ಬಸವಣ್ಣನವರಾದರೆ ಅದರ ಜೀವಾಳ ಅಲ್ಲಮರು. ವಿಶ್ವದ ಬೆಳಕು ಬಸವಣ್ಣನವರಾದರೆ ವಿಶ್ವದ ಬೆರಗು ಅಲ್ಲಮ. ಜ್ಞಾನದ ಮೇರು ಶಿಖರ ವ್ಯೋಮಕಾಯ ಅಲ್ಲಮರ ಮಹತಿ ನಿಸ್ಸೀಮವಾದರೂ ಅರಿಕೆಗೆ ಸಿಕ್ಕಿದ್ದು ತೃಣಮಾತ್ರ. ಇವರ ವ್ಯಕ್ತಿಗತ ಬದುಕು ಕಾವ್ಯ ಪುರಾಣಗಳಲ್ಲಿ ಒಂದೊಂದು ರೀತಿಯಾಗಿ ಚಿತ್ರಿತವಾಗಿದೆ. ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಚಿಕ್ಕ ಹಳ್ಳಿ ಬಳ್ಳಿಗಾವಿ. ಅವರು ಬಾಲ್ಯದಿಂದಲೇ ಮದ್ದಳೆ ಪ್ರವೀಣರಾಗಿದ್ದರು ಎಂಬುದು ವಿದಿತ ಆದರೆ ಅವರು ಕಾಮಲತೆಯೆಂಬ ರಾಜಕುವರಿಯನ್ನು ಪ್ರೀತಿಸಿ ಮದುವೆ ಆಗಿದ್ದರು .…

0 Comments

ವಚನಗಳು ಮತ್ತು ಭಜನೆ/ಡಾ. ಸರ್ವಮಂಗಳ ಸಕ್ರಿ

ಭಕ್ತಿ ಸಾಹಿತ್ಯದಲ್ಲಿ ಭಜನೆಗೆ ತನ್ನದೇ ಆದ ಆಧ್ಯಾತ್ಮಿಕ ಸಂಸ್ಕೃತಿಯ ವರ್ತುಲ ವಿದೆ.ಭಜನೆ ಜನಪದರ ಒಡಲಿನಿಂದ ಹುಟ್ಟಿ ಭಕ್ತಿಯ ಮೂಲಕ ಗುರುತಿಸಿ ಕೊಳ್ಲುವ ಕ್ರಿಯೆಯಾಗಿದೆ.ದಣಿದ ಮನಗಳಿಗೆ ಶಾಂತತೆಯನ್ನು ಏಕಾಗ್ರತೆ ಯನ್ನು ಕೊಡುವುದೆ ಭಜನೆಯಾಗಿದೆ.ಜನಪದರಲ್ಲಿ ಭಜನೆಯಾದರೆ ಶಿಷ್ಟರಲ್ಲಿ ಆತ್ಮ ನಿವೇದನೆ ಎಂಬ ಅರ್ಥ ಬರುತ್ತದೆ. ಭಜ್ ಎಂದರೆ ಸೇವೆ.ನಿ ಎಂದರೆ ಹೊಂದು ಸೇವಿಸು ಭಗವಂತನನ್ನು ಹೊಂದುವ ಭಕ್ತಿಯಾಗುತ್ತದೆ.ಭಜನೆ(ಕನ್ನಡ) ಭಜನ್(ಮರಾಠಿ) ಭಜನ್(ಹಿಂದಿ) ಈ ಪದದ ಅರ್ಥ ದೇವರ ನಾಮವನ್ನು ಸ್ತುತಿಸುವುದು .ಪೂಜಿಸು.ಆರಾಧಿಸು ಪ್ರಾರ್ಥನೆ ಎಂಬುದಾಗಿದೆ.ನಾದದ ಮೂಲಕ ದೇವರನ್ನು ಸಂತೃಪ್ತಿ ಗೊಳಿಸಿ ಬರುವ ಸಂಕಷ್ಟ ಗಳನ್ನು ಬಯಲು ಮಾಡಿಕೊಡುವುದಾಗಿದೆ. ನಮ್ಮ ಮೌಖಿಕ ಪರಂಪರೆಯಲ್ಲಿ…

0 Comments

ಆಧ್ಯಾತ್ಮ ನಿಷ್ಠೆಯಿಂದ ಅಂತರಂಗದ ಚೈತನ್ಯವನ್ನರಳಿಸಿದ  ಶರಣ ಶಂಕರ ದಾಸಿಮಯ್ಯನವರು

ವಚನಾಂಕಿತ : ನಿಜಗುರು ಶಂಕರದೇವ.ಜನ್ಮಸ್ಥಳ : ಸ್ಕಂದಶಿಲೆ (ಕಂದಗಲ್ಲು), ಹುನಗುಂದ ತಾ., ಬಾಗಲಕೋಟೆ ಜಿಲ್ಲೆ.ಕಾಯಕ : ಬಟ್ಟೆಗಳಿಗೆ ಬಣ್ಣ ಹಾಕುವ ನೇಕಾರ (ಬಣಗಾರ).ಐಕ್ಯಸ್ಥಳ : ಸ್ಕಂದಶಿಲೆ (ಕಂದಗಲ್ಲು), ಹುನಗುಂದ ತಾ., ಬಾಗಲಕೋಟೆ ಜಿಲ್ಲೆ. ಶರಣರ ನೆನೆದಾರ | ಸರಗೀಯ ಇಟ್ಟಾಂಗ ||ಅರಳು ಮಲ್ಲಿಗೆ | ಮುಡಿದ್ಹಾಂಗ ||ಕಲ್ಯಾಣ ಶರಣರ | ನೆನೆಯೋ ನನ ಮನವೇ ||ನಮ್ಮ ಜನಪದರು ಎಷ್ಟು ಸೊಗಸಾಗಿ ಶರಣರನ್ನು ನೆನಪಿಸಿಕೊಂಡು ಹಾಡಿದ್ದಾರೆ. ಮುಗ್ಧ ಜನಪದರಿಗೆ ಶರಣರನ್ನು ಕುರಿತು ಹಾಡುವುದೆಂದರೆ ಎಲ್ಲಿಲ್ಲದ ಪ್ರೀತಿ. ಅನುಭಾವದ ಹಿನ್ನೆಲೆಯಲ್ಲಿ ಮುಗ್ಧ ಶರಣರ ಕುರಿತು ರಚಿಸಿದ ಹಾಡು ಯಾವುದೇ ವಿಚಾರದಲ್ಲಿ…

0 Comments

ನಿಷ್ಠೂರತೆಯನ್ನೆ ನಿಷ್ಟೆಯಾಗಿಸಿಕೊಂಡಿದ್ದ ಅಂಬಿಗರ ಚೌಡಯ್ಯ / ಶ್ರೀ ಶಿವಣ್ಣ ಇಜೇರಿ, ಶಹಾಪುರ.

ಅಂಬಿಗರ ಚೌಡಯ್ಯ ಬಸವಣ್ಣನವರ ವಿಚಾರವನ್ನು ಆಚರಣೆಯಲ್ಲಿ ನಿಷ್ಠೂರತೆಯನ್ನು ಮೈಗೂಡಿಸಿಕೊಂಡು ಯಾರದೇ ಮುತವರ್ಜಿ ವಹಿಸದೆ ಶರಣರ ವಚನ ಸಾಹಿತ್ಯವನ್ನು ಆಕಾಶದೆತ್ತರಕ್ಕೆ ಮುಟ್ಟಿಸಿದ ಅಪರೂಪದ ಶರಣ, ನಿರ್ಭೀತ, ನಿಷ್ಠುರ, ನಿರ್ದಾಕ್ಷಿಣ್ಯ, ಕಟೂಕ್ತಿ ಇವರ ಮನೋಭಾವ. ಶ್ರೇಷ್ಠ ಅನುಭಾವಿ. ಅನ್ಯಾಯ, ಜಾತೀಯತೆ, ಅಧಾರ್ಮಿಕ ಆಚರಣೆಗಳನ್ನು ಕಟುವಾಗಿ ಟೀಕಿಸಿರುವರು. ಅಂಬಿಗರ ಚೌಡಯ್ಯನವರು ದೇವರ ಸ್ವರೂಪವೇನು ಎನ್ನುವದನ್ನು ಅವರ ವಚನದಲ್ಲಿ ಹೀಗೆ ಹೇಳುತ್ತಾರೆ. ಅಸುರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ,ಬ್ರಹ್ಮಕಪಾಲವಿಲ್ಲ, ಭಸ್ಮಭೂಷನಲ್ಲ,ವೃಷಭವಾಹನನಲ್ಲ, ಋಷಿಗಳೊಡನಿದ್ದಾತನಲ್ಲ,ಎಸಗುವ ಸಂಸಾರದ ಕುರುಹಿಲ್ಲದಾತಂಗೆಹೆಸರಾವುದಿಲ್ಲವೆ೦ದನ೦ಬಿಗರ ಚೌಡಯ್ಯ (ಸ. ವ. ಸಂ-1 / ವ. ಸಂ-46) ಈ ವಚನದಲ್ಲಿ ಪೌರಾಣಿಕ ಶಿವನ ಚಿತ್ರಣವನ್ನು ಕೊಡುವುದರ ಜೊತೆಗೆ…

0 Comments

ಹಾದಾಡುವ ಹೊಸ್ತಲಲ್ಲಿ ಹೊಯ್ದಾಡದ ದೀಪ “ಶರಣೆ ನೀಲಾಂಬಿಕೆ” / ಡಾ. ಪುಷ್ಪಾವತಿ ಶಲವಡಿಮಠ.

ನೀಲಾಂಬರದಲ್ಲಿ ನೀಲಾಂಜನದಂತೆ ತೊಳಗಿ ಬೆಳಗಿದವಳು ನೀಲಾಂಬಿಕೆ. ತನ್ನ ಘನ ವ್ಯಕ್ತಿತ್ವದಿಂದ ಅರಿವಿನ ದೀಪವಾಗಿ ಬೆಳಗಿದವಳು ನೀಲಾಂಬಿಕೆ. ಸದುವಿನಯದಲಿ ಸಮತೆಯ_ಮಮತೆಯ ತೋರುದೀಪದಂತೆ ಬಾಳಿ ಬೆಳಗಿದವಳಿವಳು. ಪೃಥ್ವಿಗೆ ಅಗ್ಗಳದ ಚಲುವೆಯಾಗಿ, ವೈಚಾರಿಕ ನಿಲುವಿನ ಜಗಜ್ಯೋತಿ ವಿಶ್ವಗುರು ಬಸವಣ್ಣನವರ ಅಂತರಂಗದ ಪ್ರೇಮದ ಸತಿಯಾದವಳು ಇವಳು. ಬಸವಣ್ಣನವರ ವಿಚಾರಪತ್ನಿ ಎಂದು ಕರೆಯಿಸಿಕೊಂಡಾಕೆ ನೀಲಾಂಬಿಕೆ. ಕರ್ನಾಟಕದಲ್ಲಿ 12 ನೇ ಶತಮಾನ ಒಂದು ತೇಜೋಮಯವಾದ ಕಾಲಘಟ್ಟ. ಮಹಾ ಮಾನವತಾವಾದಿ ಬಸವಣ್ಣನವರು ಉದಯಿಸಿದ ಕಾಲವದು. ಅವರ ಪ್ರಖರ ವಿಚಾರಗಳು ಅನುಷ್ಠಾನಕ್ಕೆ ಬಂದ ಕಾಲವದು. ಸಮಸಮಾಜ ಕಟ್ಟಲು ಬಯಸಿದ ಬಸವಣ್ಣನವರು ಜನರ ಮನದಲ್ಲಿ ವಿಶಾಲವಾದ ಭಾವನೆಗಳನ್ನು ಬಿತ್ತಬೇಕಿತ್ತು. ಅದಕ್ಕಿಂತ…

0 Comments

ಬಸವಾದಿ ಶರಣರ ಆಧ್ಯಾತ್ಮ ಸಾಧನೆ ಮತ್ತು ಸಿದ್ಧಿ / ಡಾ. ಪಂಚಾಕ್ಷರಿ ಹಳೆಬೀಡು, ಬೆಂಗಳೂರು.

ಜಗತ್ತಿನಲ್ಲಿ ಹಲವಾರು ಧರ್ಮಗಳು ಅಸ್ತಿತ್ವದಲ್ಲಿವೆ. ಪ್ರತಿಯೊಂದು ಧರ್ಮದ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು ಭಿನ್ನವಾಗಿವೆ. ನಮ್ಮ ಸುತ್ತಲಿನ ಎಲ್ಲಾ ಧರ್ಮಗಳೂ ಕೂಡ ದೇವರು ಮತ್ತು ಜೀವಾತ್ಮನ ಕುರಿತಾಗಿ ಭಿನ್ನ ನಿಲುವುಗಳನ್ನು ಹೊಂದಿರುವುದನ್ನು ನಾವು ಕಾಣುತ್ತೇವೆ. ಕೆಲವು ಧರ್ಮಗಳು ದೇವರ ಅಸ್ತಿತ್ವವನ್ನು ಸ್ಥಿರೀಕರಿಸಿದರೆ ಮತ್ತೆ ಕೆಲವು ಧರ್ಮಗಳು ದೇವರ ಅಸ್ಥಿತ್ವವನ್ನು ನಿರಾಕರಿಸುತ್ತವೆ.ಅವುಗಳಿಗೆ ಕ್ರಮವಾಗಿ ಸೇಶ್ವರವಾದಿ ಮತ್ತು ನಿರೀಶ್ವರವಾದಿ ಧರ್ಮಗಳೆಂದು ಹೇಳುವರು. ಕೆಲವು ಧರ್ಮಗಳು ಪುನರ್ಜನ್ಮ ಸಿದ್ಧಾಂತವನ್ನು ಒಪ್ಪಿದರೆ ಮತ್ತೆ ಕೆಲವು ಧರ್ಮಗಳು ಅದನ್ನು ನಿರಾಕರಿಸುತ್ತವೆ, ಕೆಲವು ಧರ್ಮಗಳು ಸ್ವರ್ಗ-ನರಕಗಳನ್ನು ಅಲ್ಲಗಳೆದರೆ ಮತ್ತೆ ಕೆಲವು ಅದನ್ನು ಒಪ್ಪುತ್ತವೆ. ಈ ಹಿನ್ನೆಲೆಯಲ್ಲಿ…

0 Comments

ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲಾ / ಡಾ. ಎಮ್.‌ ಎ. ಜ್ಯೋತಿ ಶಂಕರ, ಮೈಸೂರು.

ಕನ್ನಡ ಸಾಹಿತ್ಯ ಲೋಕದಲ್ಲಿ 12 ನೇಯ ಶತಮಾನ, ಆ ಸಂದರ್ಭದಲ್ಲಿ ಬಂದಂತಹ ವಚನ ಸಾಹಿತ್ಯ, ಇತಿಹಾಸದಲ್ಲಿ ಒಂದು ಅಪೂರ್ವವಾದ ದಾಖಲೆಯನ್ನು ನಿರ್ಮಿಸಿತು. ಅದು ಸಾಹಿತ್ಯದ ರೀತಿಯನ್ನು, ಭಾಷೆಯನ್ನು, ಛಂದಸ್ಸನ್ನು ಮಾತ್ರ ಗಮನಿಸಲಿಲ್ಲ, ಬದಲಿಗೆ ಸಮಾಜವನ್ನೇ ಹೊಸ ದಿಕ್ಕಿನೆಡೆಗೆ ನೋಡುವಂತೆ ಮಾಡಿತು. ಆ ಹೊಸ ದಿಕ್ಕು ತನ್ನ ದಿಕ್ಸೂಚಿಯನ್ನು ರಚಿಸಿದ್ದು, ಸತ್ಯದ ಶುದ್ಧ ಬದುಕಿಗಾಗಿ ಎನ್ನುವಂತಹದು ಅಚ್ಚರಿಯನ್ನು ಮೂಡಿಸಿದರೂ, ಅದು ಇಂದಿನ ಜೀವನಕ್ಕೂ ಸರಿ ಹೊಂದಬಲ್ಲ ತಾತ್ವಿಕ ಮಾತೃಕೆಯನ್ನು ರಚಿಸಿದೆ ಎನ್ನುವುದು ಸದಾ ಸಂಸ್ಮರಣೀಯವಾದ ಸಂಗತಿಯಾಗಿದೆ. ಅನೇಕ ಶರಣರು ಬಸವಣ್ಣನವರ ನೇತೃತ್ವದಲ್ಲಿ, ನವ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸಿದರು.…

0 Comments

ಬಸವಣ್ಣನವರ ವಚನಗಳಲ್ಲಿ ಸಾಂಸ್ಕೃತಿಕ ನೆಲೆಗಳು /   ಡಾ. ಲಕ್ಷ್ಮೀಕಾಂತ ಪಂಚಾಳ

ಕನ್ನಡ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ನೀಡಿದ ಮಹತ್ವದ ಕೊಡುಗೆ ವಚನ ಸಾಹಿತ್ಯ. ಅಟ್ಟದೆತ್ತರದಂತಿದ್ದ ಸಾಹಿತ್ಯವನ್ನು ಜನಸಾಮಾನ್ಯರ ಮಟ್ಟಕ್ಕಿಳಿಸಿದ ಕೀರ್ತಿ ವಚನಕಾರರದ್ದಾಗಿದೆ. ಜಾತ್ಯತೀತ, ವರ್ಗಾತೀತ, ಲಿಂಗಾತೀತ, ರೂಪಾತೀತ, ಛಂದೋತೀತವಾಗಿ ವಚನಕಾರರು ತಾವು ಕಂಡುಂಡ ಅನುಭವವನ್ನು ಗದ್ಯವು ಅಲ್ಲದ, ಪದ್ಯವು ಅಲ್ಲದ, ಆದರೆ ಹೃದ್ಯವೇದ್ಯವಾಗುವ ವಿಶಿಷ್ಟ ರೀತಿಯ ವಚನದ ರಚನೆ ಮಾಡಿದರು. ಸಾರ್ವಕಾಲಿಕ ಮಾನವೀಯ ಮೌಲ್ಯಗಳಾದ ಸತ್ಯ, ಅಹಿಂಸೆ, ದಯೆ, ಕರುಣೆ, ಅನುಕಂಪ, ಸಮಾನತೆ, ಸಹಕಾರ, ಜಾತ್ಯತೀತ, ಕಾಯಕ, ದಾಸೋಹ ಮೊದಲಾದವು ಹನ್ನೆರಡನೆ ಶತಮಾನದಿಂದ ಇಂದಿನವರೆಗೂ ನವನೀತದಂತೆ ಹೊಳಪು ಪಡೆದು ಸಮಕಾಲೀನತೆ ಪಡೆದುಕೊಂಡಿವೆ. ಇಂತಹ ವಚನ ಸಾಹಿತ್ಯದ ಮೇರು ಪ್ರಮಥ…

0 Comments

ಲಿಂಗಭೇದ ಅಳಿಸಿ ಸಮಾನತೆ ಸಾರಿದ ಶರಣರು/ಡಾ. ರಾಜೇಶ್ವರಿ. ವೀ. ಶೀಲವಂತ.

ಜಗತ್ತಿನಲ್ಲಿ ಸ್ತ್ರೀ ಸ್ವಾತಂತ್ರ್ಯವನ್ನು ಮೊಟ್ಟಮೊದಲು ಪ್ರತಿಪಾದಿಸಿದ ಧರ್ಮ ಶರಣಧರ್ಮ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಹಿಳೆಗೆ ಆರ್ಥಿಕ, ಧಾರ್ಮಿಕ, ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ನೀಡಿ ಅವರನ್ನು ಮೊದಲು ಗೌರವಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಸ್ತ್ರೀಯು ಸಮಾಜದಲ್ಲಿ ಪುರುಷನಿಗೆ ಸಮಾನವೆಂದು ತಿಳಿದುಕೊಂಡು ಸ್ತ್ರೀ ಸಮಾನತೆಯನ್ನು ತಮ್ಮ ಚಳುವಳಿಯ ಮುಖ್ಯ ಉದ್ದೇಶಗಳಲ್ಲಿ ಒಂದನ್ನಾಗಿಸಿಕೊಂಡು ಆಕೆಗೆ ಸಮಾನ ಸ್ಥಾನಮಾನ, ಸವಲತ್ತುಗಳನ್ನು ಕಲ್ಪಿಸಿಕೊಟ್ಟವರು ಶರಣರು. ಜೊತೆಗೆ ಆಕೆ ಅತ್ಯಂತ ಸೊಗಸಾಗಿ, ಗಂಭೀರವಾಗಿ ವಚನಗಳನ್ನು ರಚನೆ ಮಾಡುವ ಮಟ್ಟಿಗೆ ಬೆಳೆಯಿಸಿ ವಚನಕಾರ್ತಿಯರ ಸಮೂಹವನ್ನು ಸೃಷ್ಟಿಸಿದವರು ಶರಣರು. ತಮಗೆ ಸರಿಸಮನಾದ ಸ್ಥಾನವನ್ನು ಕಲ್ಪಿಸಿ ಆಲೋಚಿಸುವಲ್ಲಿ,ಅನುಭವಗಳನ್ನು ಅಭಿವ್ಯಕ್ತಿಸುವಲ್ಲಿ ಅನುಭವದೆತ್ತರಕ್ಕೆ ಎರುವದನ್ನು…

0 Comments