ಅನುಪಮ ಅಹಿಂಸಾವಾದಿ ಶರಣ ಬಳ್ಳೇಶ ಮಲ್ಲಯ್ಯನವರು
ಆವ ಪ್ರಾಣಿಗೆಯೂ ನೋವ ಮಾಡಬೇಡ.ಪರನಾರಿಯರ ಸಂಗ ಬೇಡ.ಪರಧನಕ್ಕಳುಪಬೇಡ, ಪರದೈವಕ್ಕೆರಗಬೇಡ.ಈ ಚತುರ್ವಿಧ ತವಕವ ಮಾಡುವಾಗಪರರು ಕಂಡಾರು, ಕಾಣರು ಎಂದೆನಬೇಡ.ಬಳ್ಳೇಶ್ವರಲಿಂಗಕ್ಕಾರು ಮರೆಮಾಡಬಾರದಾಗಿಅಘೋರನರಕದಲ್ಲಿಕ್ಕುವ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1376 / ವಚನ ಸಂಖ್ಯೆ-193) ವಚನ ಸಾಹಿತ್ಯದ ಅಧ್ಯಯನ ಇಂದಿನ ಪೀಳಿಗೆಯ ಬಹಳಷ್ಟು ವಿದ್ವಾಂಸರುಗಳನ್ನು, ವಿದ್ಯಾರ್ಥಿಗಳನ್ನು ಹಾಗೂ ಲೇಖಕರನ್ನು ಆಕರ್ಷಿಸಿದ್ದು ಒಂದು ಉತ್ತಮ ಬೆಳವಣಿಗೆ. ಬಾಲ್ಯದಿಂದಲೂ ಅಂದರೆ ಸುಮಾರು ನಾನು 12 ವರ್ಷದವನಾಗಿದ್ದಾಗಿನಿಂದ ವಚನ ಸಾಹಿತ್ಯದ ಕಡೆಗಿನ ಒಲವು ಮೂಡಿಸಿದ್ದು ಅಥವಾ ಗೀಳನ್ನು ಹಚ್ಚಿದ್ದು ನಮ್ಮ ತಂದೆ ಲಿಂ. ಶ್ರೀ ಈಶ್ವರ ಕಮ್ಮಾರ ಅವರು. ಇವತ್ತು ಅವರ ಪಾದ ಕಮಲಗಳನ್ನು…