ಶರಣ ಬಹುರೂಪಿ ಚೌಡಯ್ಯನವರ ವಚನ ನಿರ್ವಚನ | ಡಾ. ಶೈಲಜಾ ಬಾಗೇವಾಡಿ, ಕಲಬುರಗಿ.

ವಚನ:ಲಿಂಗನಿಷ್ಠೆಯಿಲ್ಲದವರಂಗಳವ ಮೆಟ್ಟಲಾಗದು.ಜಂಗಮಪ್ರೇಮವಿಲ್ಲದವರೊಡನೆ ಮಾತನಾಡಲಾಗದು.ಪ್ರಸಾದವ ಪಡೆಯದವರ ಸಮಪಙ್ಞ್ತಯಲ್ಲಿ ಕುಳಿತುಪ್ರಸಾದ ಭೋಗವ ಮಾಡಲಾಗದು.ಇಂತೀ ಲಿಂಗ ಜಂಗಮ ಪ್ರಸಾದ ವಿಶ್ವಾಸವಿಲ್ಲದವರಿಗೆ ನರಕ ತಪ್ಪದು.ಅಂಥವರ ಸಂಗವ ಸತ್ಯಸಜ್ಜನರು ಮಾಡಲಾಗದು.ಅದೇನು ಕಾರಣವೆಂದಡೆ;ಪ್ರಾಣಲಿಂಗ ಶಿಲಾಭೇದಂ ಚರಲಿಂಗಂತು ಯೋ ನರಃ |ಪ್ರಸಾದಂ ದ್ರವ್ಯ ಭಾವೇನ ರೌರವ ನರಕಂ ವ್ರಜೇತ್ ||ಎಂದುದಾಗಿ, ಇಂತೀ ಲಿಂಗ ಜಂಗಮ ಪ್ರಸಾದ ಸದ್ಭಾವನಂಬುಗೆಯ ಭಕ್ತಿ ಬೆಸುಗೆಯಿಲ್ಲದವರಎನಗೆ ತೋರದಿರಯ್ಯ ರೇಕಣ್ಣಪ್ರಿಯ ನಾಗಿನಾಥಾ.(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-77/ವಚನ ಸಂಖ್ಯೆ-175) ಶರಣ ಬಹುರೂಪಿ ಚೌಡಯ್ಯನವರು ಅಂದಿನ ಕಲ್ಯಾಣದ ಅನುಭವ ಮಂಟಪದ ಅನುಭಾವಿಗಳು. ಇವರು ಮೂಲತಃ ಆಂಧ್ರಪ್ರದೇಶದ ರೇಕಳಿಕೆ ಗ್ರಾಮದ ಬ್ರಾಹ್ಮಣ ದಂಪತಿಗಳಾದ ಜನವಶ್ಯ ಮತ್ತು ಧರ್ಮವತಿ…

0 Comments

ಪುರಾತನ ಕಲ್ಯಾಣದ ಚಿತ್ರಣ ಮತ್ತು ಅವನತಿಯತ್ತ ಶರಣರ ಸ್ಮಾರಕಗಳು | ಡಾ. ಸತೀಶ ಕೆ.ಇಟಗಿ, ಮುದ್ದೇಬಿಹಾಳ.

ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಶ್ರೀಮತ್ ಕಲ್ಯಾಣಪುರದ ಮಹಾತ್ಮ್ಯಎಂತೆಂದಡೆ: ವಿಸ್ತರಿಸಿ ಪೇಳುವೆನು;ಎಲ್ಲಾ ಶಿವಗಣಂಗಳು ಕೇಳಿ ಕೃತಾರ್ಥರಾಗಿರಯ್ಯಾ.ಹದಿನಾಲ್ಕು ಭುವನಕ್ಕೆ ಕಳಸವೆಂದೆನಿಸುವ ರುದ್ರಲೋಕವೆ ಮರ್ತ್ಯಕ್ಕಿಳಿತಂದು,ಕಲ್ಯಾಣವೆಂಬ ಪುರವಾಗಿ ಹುಟ್ಟಿತ್ತು ನೋಡಿರಯ್ಯಾ!ಅಲ್ಲಿ ಸತ್ಯರು ಸಾತ್ತ್ವಿಕರು ನಿತ್ಯರು ನಿಜೈಕ್ಯರು ಮಹಾಜ್ಞಾನಿಗಳುಪರಮಶಿವಯೋಗಿಗಳು ಶಿವಾನುಭಾವ ಸಂಪನ್ನರುಶಿವಲಿಂಗ ಪ್ರಾಣಿಗಳು, ಶಿವಪ್ರಸಾದಪಾದೋದಕಸಂಬಂಧಿಗಳುಶಿವಾಚಾರವೇದ್ಯರು ಶಿವಾಗಮ ಸಾಧ್ಯರುಶಿವಸಮಯಪಕ್ಷರುಗಳಲ್ಲದೆ, ಮತ್ತಾರು ಅಲ್ಲಿಲ್ಲ ನೋಡಿರಯ್ಯಾ.ಪಾಪಿಗಳು ಕೋಪಿಗಳು ಅಸತ್ಯರು ಅನಾಚಾರಗಳುಹೊಗಬಾರದು ಕಲ್ಯಾಣವ.ಮೀರಿ ಹೊಕ್ಕೆಹೆವೆಂಬವರಿಗೆ ಬಾಳ ಬಾಯಧಾರೆ ನೋಡಿರಯ್ಯಾ.ಆ ಕಲ್ಯಾಣ ಅಗಮ್ಯ ಅಗೋಚರ ನೋಡಿರಯ್ಯಾ.ಆ ಮಹಾಕಲ್ಯಾಣದ ವಿಸ್ತೀರ್ಣ ತಾನೆಂತೆಂದಡೆ:ಹನ್ನೆರಡು ಯೋಜನ ಪರಿಪ್ರಮಾಣದ ವಿಸ್ತ್ರೀರ್ಣ ಪಟ್ಟಣಕ್ಕೆಮುನ್ನೂರರವತ್ತು ಬಾಗಿಲವಾಡ.ಆ ಬಾಗಿಲಿಂಗೆ ನೂರ ಐವತ್ತೈದು ವಜ್ರದ ಹಾರೆಯ ಕದಂಗಳು.ಇನ್ನೂರ ಇಪ್ಪತ್ತೈದು ಕಲುಗೆಲಸದ ದ್ವಾರವಟ್ಟಕ್ಕೆನಾನೂರ…

0 Comments

ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ, ವಿಜಯಪುರ | ಡಾ. ವಿ. ಡಿ. ಐಹೊಳ್ಳಿ,ವಿಜಯಪುರ.

12 ನೇ ಶತಮಾನದ ವಚನಕಾರರು ತಾವು ಸೃಷ್ಟಿಸಿದ ನೂತನ ಆಯಾಮಗಳನ್ನು ಅನುಷ್ಠಾನಕ್ಕೆ ತಂದು, ನುಡಿದಂತೆ ನಡೆದು ಇಹಲೋಕದಲ್ಲಿಯೇ ಎಲ್ಲವೂ ಅಡಗಿದೆ ಎಂದು ತೋರಿಸಿಕೊಟ್ಟವರು. ಶರಣರು ಸ್ವರ್ಗ, ನರಕಗಳು ಬೇರಿಲ್ಲ ಕಾಣಿರೋ ಎಂದು ತಿಳಿಸಿಕೊಟ್ಟವರು. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಬದುಕಿನ ನೈಜ ಸತ್ಯವನ್ನು ಪ್ರಥಕ್ಕರಿಸಿದವರು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಅನುಭವ ಮಂಟಪದಲ್ಲಿ ಚರ್ಚೆಗೆ ಒಳಪಡಿಸಿದ ವಚನದ ತಾಡೋಲೆಗಳನ್ನು ಸಂಗ್ರಹಿಸಿ, ಪರಿಷ್ಕರಿಸಿದ ವಚನದ ಕಟ್ಟುಗಳನ್ನು ಕ್ರಾಂತಿಯ ನೆಪದಲ್ಲಿ ಅವುಗಳನ್ನು ನಾಶಗೊಳಿಸಿದರು. ಅವುಗಳಲ್ಲಿ ಅಳಿದುಳಿದಿದ್ದ ವಚನಗಳು ಮಠ-ಮಂದಿರಗಳಲ್ಲಿ, ಮನೆ-ಮನೆಗಳಲ್ಲಿ, ಶರಣರು ಹೊತ್ತೊಯ್ದು ಗವಿ-ಗಂವರಗಳಲ್ಲಿ ಜೋಕೆಯಾಗಿ ಇಟ್ಟಿರುವುದನ್ನು ಸಂಗ್ರಹಿಸಿ ಏಡೆಯೂರು…

0 Comments

ಶರಣ ಶಂಕರ ದಾಸಿಮಯ್ಯನವರು | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

12 ನೇ ಶತಮಾನದಲ್ಲಿ ಬಾಳಿ ಬದುಕಿದ ಒಬ್ಬೊಬ್ಬ ಶರಣರ ಚರಿತ್ರೆ ಅಮೋಘವಾದುದಾಗಿದೆ. ಕಾಯಕಯೋಗಿಗಳಾದ ಅವರು ಕಾಯಕದಿಂದಲೇ ಜೀವನ್ಮುಕ್ತಿಹೊಂದಿದವರು. ಕಾಯಕಯೋಗದಿಂದ ಶಿವಯೋಗ ಸಾಧಿಸಿದ ಮಹಾತ್ಮರವರು. “ಕಾಯಕ” ಮತ್ತು “ಲಿಂಗಪೂಜೆ” ಇವರ ಬಾಹ್ಯ ಮತ್ತು ಅಂತರಂಗದ ಪರಂಜ್ಯೋತಿಗಳಾಗಿದ್ದವು. ಕಾಯಕದಿಂದ ದೊರೆತ “ಅನುಭಾವ” ಲಿಂಗಪೂಜೆಯಿಂದ ದೊರೆತ “ಅನುಭಾವ” ದಿಂದ ಶರಣರು ಅನಿರ್ವಚನೀಯವಾದ ಪರಮಾನಂದ ಅನುಭವಿಸಿದವರು. ಅಂತಹ ಶಿವಶರಣರಲ್ಲಿ “ಶರಣ ಶಂಕರ ದಾಸಿಮಯ್ಯ” ನವರು ಒಬ್ಬರು. ನದಿಗಳೆಲ್ಲವೂ ಹರಿದು ಸಮುದ್ರವನ್ನು ಸೇರುವಂತೆ ಎಲ್ಲ ಶರಣರು ಬಸವಣ್ಣನೆಂಬ ಸಾಗರವನ್ನೇ ಕೂಡಿದರು. ಬಸವಣ್ಣನೆಂಬ ಚುಂಬಕ ಶಕ್ತಿ ಉತ್ತರ-ದಕ್ಷಿಣ ಧ್ರವಗಳನ್ನೆಲ್ಲ ತನ್ನತ್ತ ಸೆಳೆದುಕೊಂಡಿದ್ದು 12 ನೇ ಶತಮಾನದ…

0 Comments

ಶರಣ ಕಂಬಳಿ ನಾಗಿದೇವರ ವೈಚಾರಿಕ ಸ್ವಾತಂತ್ರ‍್ಯ | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ವಚನ ಸಾಹಿತ್ಯದ ಉತ್ಕೃಷ್ಟತೆ ಪ್ರಾರಂಭವಾದದ್ದು 12 ನೇ ಶತಮಾನದ ಧಾರ್ಮಿಕ ಮತ್ತು ಸಾಂಸ್ಕೃತಿಕ ರಾಜಕೀಯ ಜೀವನಗಳಲ್ಲಿ ಬದಲಾವಣೆ ತರುವ ಉದ್ದೇಶವದು. ವಚನಗಳ ಸ್ಪಷ್ಟ ಬರವಣಿಗೆ ಅನನ್ಯ ಪದ ಪ್ರಯೋಗಗಳ ಪುನರ್ಸೃಷ್ಟಿ ಅಂದಿನ ವೈಚಾರಿಕ ನೆಲೆಯಲ್ಲಿ ತನ್ನ ಅಸ್ತಿತ್ವವನ್ನು ತೋರಿಸಿಕೊಂಡದ್ದು ಇದೇ ಕಾಲದಲ್ಲಿ. ವರ್ಗ ಮತ್ತು ವರ್ಣಗಳಲ್ಲಿ ಆತ್ಮವಿಶ್ವಾಸ ಮೂಡಿಸಿ ಸ್ವಾಭಿಮಾನದ ಬದುಕನ್ನು ನೀಡಿತ್ತು. ಬಸವಣ್ಣನವರ ಮುಂದಾಳತ್ವದಲ್ಲಿ ಕೈಗೊಂಡ ವ್ಯಕ್ತಿ ಕಲ್ಯಾಣ, ಸಮಾಜ ಕಲ್ಯಾಣ, ತತ್ವ ಕಲ್ಯಾಣದ ಚಳುವಳಿಯನ್ನು ಹುಟ್ಟು ಹಾಕಿತು. ವ್ಯಕ್ತಿ ಕಲ್ಯಾಣವು ಸ್ತ್ರೀಯರಿಗೆ ದುರ್ಬಲರಿಗೆ ಹಿಂದುಳಿದ ವರ್ಗಗಳಿಗೆ ಬೆಂಬಲ ನೀಡುವುದು. ಸಮುದಾಯದ ಜನರ ಯೋಗಕ್ಷೇಮವನ್ನು ನೀಡಿ…

0 Comments

ಊಳಿಡುತ್ತಿರುವ ವೀರಶೈವರ ಶನಿ ಸಂತಾನ ರವಿ ಹಂಜ್‌ ಎನ್ನುವ ತಿರಬೋಕಿ ಬೀದಿ ಶ್ವಾನ |Dr. Vijayakumar Kammar, Tumkur.

ಬಸವಣ್ಣನವರ ಸಾಮಾಜಿಕ ಕ್ರಾಂತಿಯಿಂದ ಸಮ ಸಮಾಜ ನಿರ್ಮಾಣವಾಗಿ ದೇವಾಲಯಗಳಿಗೆ ಪ್ರಜೆಗಳು ಹೋಗುವುದನ್ನು ನಿಲ್ಲಿಸುತ್ತಾರೆ. ವೈದಿಕರಿಗೆ ಈ ಸಾಮಾಜಿಕ ಸಮಾನತೆಯ ಚಳುವಳಿಯಿಂದ ತಮ್ಮ ಆದಾಯವು ನಿಂತು ಹೋಗಿ ಅವರ ಜೀವನ ನಡೆಸುವುದು ಕಷ್ಟವಾದಂಥ ಸಂದರ್ಭದಲ್ಲಿ ಬಸವಾದಿ ಶರಣರನ್ನು ಕಗ್ಗೊಲೆ ಮಾಡುವಂಥ ಹೀನ ಕೃತ್ಯಕ್ಕೂ ಇಳಿದಂಥಾ ಇತಿಹಾಸ ನಮಗೆ ವಚನಗಳ ಮೂಲಕ ವೇದ್ಯವಾಗುತ್ತದೆ. ಶರಣ ತುರಗಾಹಿ ರಾಮಣ್ಣನವರ ಈ ವಚನ ಇದನ್ನು ಪುಷ್ಟೀಕರಿಸುತ್ತದೆ. ಬಂದಿತ್ತು ದಿನ ಬಸವಣ್ಣ ಕಲ್ಲಿಗೆಚನ್ನಬಸವಣ್ಣ ಉಳುವೆಯಲ್ಲಿಗೆಪ್ರಭು ಅಕ್ಕ ಕದಳಿದ್ವಾರಕ್ಕೆಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷ್ಯಕ್ಕೆನಾ ತುರುವಿನ ಬೆಂಬಳಿಯಲ್ಲಿ ಹೋದ ಮರೆಯಲ್ಲಿಅಡಗಿಹರೆಲ್ಲರು ಅಡಗಿದುದ ಕೇಳಿ ನಾಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿಯೆ ಉಡುಗುವೆನು.(ಸಮಗ್ರ…

1 Comment

ಅಮರಗೊಂಡದಲ್ಲಿ ಬಸವ ಪುರಾಣ ಆಲಿಸಿ ಸದ್ಗತಿ ಹೊಂದಿದ ಗುಬ್ಬಿಗಳು | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ಶ್ರವಣ ಎಂದರೆ ಆಲಿಸುವಿಕೆ. ಕೇವಲ ಕೇಳುವುದಲ್ಲ, ಅರಿತು ಅಳವಡಿಸಿಕೊಳ್ಳುವುದು. ಶರಣರ ವಚನಗಳಲ್ಲಿ ಶ್ರವಣವು ಶಿವತತ್ವದ ಅರಿವು, ಗುರು ಉಪದೇಶ ಮತ್ತು ಭಕ್ತಿ ಮಾರ್ಗದ ಮೂಲವೆಂದು ಬಣ್ಣಿಸಲಾಗಿದೆ. ವಿಶ್ವಗುರು ಬಸವಣ್ಣನವರ ಪ್ರಕಾರ ಭಕ್ತರು ಪರಮಾತ್ಮನ ಗುಣಗಾನವನ್ನು ಭಕ್ತಿಯಿಂದ ಆಲಿಸಿ ಮನನ ಮಾಡುವುದಾಗಿದೆ. ಅದಕ್ಕೆಂದು ಬಸವಣ್ಣನವರು ಶರಣರ ಉಪದೇಶ ಕೇಳುವುದು, ಅವರ ಸಂಗ ಮಾಡುವುದೇ ನಿಜವಾದ ಭಕ್ತಿ ಎಂದಿದ್ದಾರೆ. ಆಸೆಯೆಂಬ ಪಾಶದಲ್ಲಿ ಭವಬಂಧನನಾಗಿರ್ದೆನಯ್ಯಾ,ಸಕೃತು ನಿಮ್ಮ ನೆನೆಯಲು ಎನಗೆ ತೆರಹಿಲ್ಲಯ್ಯಾ!ಕರುಣಾಕರ, ಅಭಯಕರ, ವರದ, ನೀ ಕರುಣಿಸಯ್ಯಾ.ಸಂಸಾರಬಂಧನವನು ಮಾಣಿಸಿ, ಎನಗೆ ಕೃಪೆಯ ಮಾಡಿ,ನಿಮ್ಮ ಶ್ರೀಪಾದಪದ್ಮದಲ್ಲಿ ಭ್ರಮರನಾಗಿರಿಸು,ಭಕ್ತಜನಮನೋವಲ್ಲಭ ಕೂಡಲಸಂಗಮದೇವಾ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-22/ವಚನ…

0 Comments

ಬಸವ ಜಯಂತಿ ಆರಂಭ ಮತ್ತು ಹರ್ಡೇಕರ ಮಂಜಪ್ಪನವರ ಸಾಧನೆಗಳ ಅವಲೋಕನ| ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ

ಇವನಾರವ, ಇವನಾರವ,ಇವನಾರವನೆಂದೆನಿಸದಿರಯ್ಯಾ.ಇವ ನಮ್ಮವ, ಇವ ನಮ್ಮವ,ಇವ ನಮ್ಮವನೆಂದೆನಿಸಯ್ಯಾ.ಕೂಡಲಸಂಗಮದೇವಾನಿಮ್ಮ ಮನೆಯ ಮಗನೆಂದೆನಿಸಯ್ಯಾ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-20/ವಚನ ಸಂಖ್ಯೆ-62) ಈ ವಚನವು 'ನಾನು' ಎಂಬ ಅಹಂಕಾರವನ್ನು ತ್ಯಜಿಸುವ ಮಹತ್ವವನ್ನು ಹೇಳುತ್ತದೆ. "ಇವನು, ಇವನು" ಎಂದು ಬೇರೆತನವನ್ನು ನೋಡುವುದು ಅಜ್ಞಾನ. "ಇವನೇ ನಾನು" ಎಂದು ಏಕತ್ವವನ್ನು ಅರಿತಾಗ ಅಹಂಕಾರ ಕಳೆಯುತ್ತದೆ. ಕೊನೆಯಲ್ಲಿ ನಾನು-ನೀನು ಎಂಬ ಭೇದವೇ ಇಲ್ಲ, ಎಲ್ಲವೂ ಒಂದೇ ಎಂಬ ಜ್ಞಾನಕ್ಕೆ ಬರಬೇಕು ಎಂದು ಈ ವಚನದ ಸಾರವಾಗಿರುತ್ತದೆ. ರಾಷ್ಟ್ರಕವಿ ಕುವೆಂಪು ಅವರು ಹರ್ಡೇಕರ ಮಂಜಪ್ಪನವರಿಗೆ "ಕರ್ನಾಟದ ಮಹಾತ್ಮ" ಎಂದು ಬಿರುದು ಕೊಟ್ಟಿದ್ದರು, ನಂತರ ಅವರಿಗೆ ಕರ್ನಾಟಕದ ಗಾಂಧಿ…

0 Comments

ಗುರು ಅನಿಮಿಷ ಯೋಗಿ | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ಅನಿಮಿಷ ಎಂದರೆ ಕಣ್ಣು ಮಿಟುಕಿಸದವನು ಅಥವಾ ಅರೆನಿಮಿಷವೂ ಕಣ್ಣು ಮುಚ್ಚದವನು (ದೇವರು/ದೇವತೆ) ಎಂದರ್ಥ. ಇದು “ಅ” (ಇಲ್ಲ) ಮತ್ತು “ನಿಮಿಷ” (ಕಣ್ಣು ಮಿಟುಕಿಸುವುದು) ಎಂಬ ಪದಗಳಿಂದ ಬಂದಿದೆ. ಪ್ರಮುಖ ಅರ್ಥಗಳು ಮತ್ತು ಸಂದರ್ಭಗಳು: ದೇವತೆಗಳು: ಕಣ್ಣು ಮಿಟುಕಿಸದ ಕಾರಣ ದೇವತೆಗಳನ್ನು ಅನಿಮಿಷರೆಂದು ಕರೆಯಲಾಗುತ್ತದೆ. ಅರ್ಥ: ಅರೆನಿಮಿಷವೂ ಕಣ್ಣು ಮಿಟುಕಿಸದ, ದೃಷ್ಟಿ ಸ್ಥಿರವಾಗಿರುವ ಸ್ಥಿತಿ. ಅನಿಮಿಷ ಯೋಗಿ: ಅಲ್ಲಮಪ್ರಭುದೇವರಿಗೆ ದೀಕ್ಷೆ ನೀಡಿದ ಗುರುಗಳನ್ನು “ಅನಿಮಿಷ ಯೋಗಿ” ಎಂದು ತಿಳಿದು ಬರುತ್ತದೆ. ಈ ಪದವನ್ನು ಸಾಮಾನ್ಯವಾಗಿ ಜಾಗರೂಕತೆ, ದೈವಿಕತೆ ಅಥವಾ ದೀರ್ಘಕಾಲದ ತೀವ್ರವಾದ ದೃಷ್ಟಿಯನ್ನು ಸೂಚಿಸಲು ಬಳಸಲಾಗುತ್ತದೆ. ಸಿಂಗಿರಾಜನ "ಬಸವರಾಜ…

0 Comments

ವಚನಕಾರರ ದೃಷ್ಟಿಯಲ್ಲಿ ಆತ್ಮ ಸೌಂದರ್ಯ | ಡಾ. ಎಂ. ಮಕ್ತುಂಬಿ, ಭಾಲ್ಕಿ.

ಅಧ್ಯಾತ್ಮ ಸಾಧಕರಾಗಿದ್ದ ವಚನಕಾರರಿಗೆ ಆತ್ಮಸಾಕ್ಷಾತ್ಕಾರವು ಉಳಿದ ಸಾಧನೆಗಳಂತೆ ಮಹತ್ವದ್ದಾಗಿತ್ತು. ಅವರು ಪುರವನ್ನು ಗೆದ್ದಂತೆ; ಪರವನ್ನು ಗೆದ್ದವರು. ಮನೆಯನ್ನು ಗೆದ್ದಂತೆ ಮಾರೂ ಗೆದ್ದವರು; ಆತ್ಮ ಸಾಕ್ಷಾತ್ಕಾರ ಮಾಡಿಕೊಂಡವರಿಗೆ ಎಲ್ಲವೂ ಶಿವಮಯವಾಗಿಯೇ ಕಾಣುತ್ತದೆ; ಸಮಾನವಾಗಯೇ ಕಾಣುತ್ತದೆ. ಈ ದರ್ಶನದ ಹಿನ್ನೆಲೆಯಲ್ಲಿಯೇ ವಚನಕಾರರು ಎಲ್ಲ ತಾರತಮ್ಯಗಳನ್ನು ಮೀರಿ ನಿಂತರು‌. ತಾವು ಬದುಕಿದ್ದ ಯುಗಮಾನವನ್ನು ಎಲ್ಲ ಭೇದಗಳಿಂದ ಬಿಡುಗಡೆ ಮಾಡುವ ಚಳಿವಳಿಯೊಂದನ್ನು ರೂಪಿಸಿದರು‌. ಅದು ಆತ್ಮಸಾಕ್ಷಾತ್ಕಾರದ ಸಾಧನೆಯಾಗಿದ್ದಂತೆ; ಸಮಾಜದಲ್ಲಿದ್ದ ಪರಮಾತ್ಮನ ಶ್ರೇಯ ಸಾಧನೆಯ ಚಳುವಳಿಯೂ ಆಗಿದ್ದಿತು. ಅವರು ಆತ್ಮದ ಆಧಾರದ ಮೇಲೆ ಸಮಾನತೆಯನ್ನು ಸ್ಥಾಪಿಸಲು ಬಯಸಿದರು. ಎಲ್ಲ ಮನುಷ್ಯರಲ್ಲಿಯೂ ಆತ್ಮವಿದೆ. ಅದು ಒಂದೇ…

0 Comments