ವೀಣಾ ಬನ್ನಂಜೆಯವರೆ ಶರಣರು ವೇದ, ಶಾಸ್ತ್ರಗಳನ್ನು ತಿರಸ್ಕರಿಸಲಿಲ್ಲವೆ? / ಡಾ. ಬಸವರಾಜ ಕಡ್ಡಿ, ಜಮಖಂಡಿ.

ಇತ್ತೀಚೆಗೆ ಸಾಮಾಜಿಕ ಜಾಲತಾಣ ಯೂ-ಟ್ಯೂಬ್ ಚಾನಲ್‌ವೊಂದರಲ್ಲಿ “ಶ್ರೀಮದ್ಬಗವದ್ಗೀತೆ ಮತ್ತು ವಚನ” ಎಂಬ ವಿಷಯ ಕುರಿತು ವೀಣಾ ಬನ್ನಂಜೆ ಅವರು ಮಾತನಾಡುವಾಗ ಅಲ್ಲಮಪ್ರಭುದೇವರ ವಚನವೊಂದನ್ನು ವಿಶ್ಲೇಷಿಸಿದ ರೀತಿ ವ್ಯತಿರಿಕ್ತವಾಗಿದೆ. ಅಲ್ಲಮರ ವಚನ: ವೇದವೆಂಬುದು ಓದಿನ ಮಾತು;ಶಾಸ್ತ್ರವೆಂಬುದು ಸಂತೆಯ ಸುದ್ದಿ.ಪುರಾಣವೆಂಬುದು ಪುಂಡರ ಗೋಷ್ಠಿ.ಆಗಮವೆಂಬುದು ಅನೃತದ ನುಡಿ.ತರ್ಕವೆಂಬುದು ತಗರ ಹೋರಟೆ.ಭಕ್ತಿಯೆಂಬುದು ತೋರಿ ಉಂಬ ಲಾಭ.ಗುಹೇಶ್ವರನೆಂಬುದು ಮೀರಿದ ಘನವು(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-147/ವಚನ ಸಂಖ್ಯೆ-465) ಈ ವಚನ ಕುರಿತು ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಶ್ರೀಗಳು (ಅಲ್ಲಮಪ್ರಭುದೇವರ ವಚನ ನಿರ್ವಚನ ಸಂಪುಟ-2 ವಚನ ಸಂಖ್ಯೆ 464) ವಿಶ್ಲೇಷಿಸಿದ ರೀತಿ ಈ…

0 Comments

ಅಕ್ಕನ ಆಧ್ಯಾತ್ಮಿಕ ಆದರ್ಶ | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಭಾರತೀಯ ಭಕ್ತಿ ಸಾಹಿತ್ಯದ ಪರಂಪರೆಯಲ್ಲಿ ವಚನ ಸಾಹಿತ್ಯಕ್ಕೆ ತನ್ನದೇ ಆದ ಹೆಗ್ಗಳಿಕೆ ಇದೆ. ಚಂಪೂ ಸಾಹಿತ್ಯದ ನಂತರ ಸಾಮಾನ್ಯರಿಗೂ ಅರ್ಥವಾಗುವ ದೇಸೀ ಭಾಷೆಯಲ್ಲಿ ಸಮಾಜದ ಹತ್ತಿರಕ್ಕೆ ತಂದವರೆಂದರೆ ವಚನಕಾರರು. ಶರಣರ ನೇರ, ಸರಳ, ಭಕ್ತಿ ನಿಷ್ಠೆ ಈ ಎಲ್ಲಾ ಮೌಲ್ಯ ಆದರ್ಶಗಳು ವಚನ ಸಾಹಿತ್ಯದಲ್ಲಿ ಮಾತ್ರ ಕಾಣಲು ಸಾದ್ಯ. ಈ ಕಾಲ ಕ್ರಾಂತಿಯುಗವೂ ಹೌದು. ಭಕ್ತಿ ಚಳುವಳಿಯ ಕಾಲವೂ ಹೌದು. ಅಂದು ಭಾರತೀಯ ಚರಿತ್ರೆಯಲ್ಲಿ ನಿರಂತರವಾಗಿ ಮಹಿಳಾ ಶೋಷಣೆಗೆ ಒಳಗಾದ ಸಂದರ್ಭದಲ್ಲಿ ಅಕ್ಕ ಮಹಾದೇವಿ ಸ್ಥ್ರೀ ಶಕ್ತಿ ಪ್ರತೀಕವಾಗಿ ಪುರುಷ ಪ್ರಧಾನ ವ್ಯವಸ್ತೆಯನ್ನು ಕೆಡವಿ ಹೊಸ ಮುನ್ನುಡಿಗೆ…

0 Comments

ವಚನ ದರ್ಶನ: ದುರುದ್ದೇಶ ಬಿಂಬಿಸುವ ಪುಸ್ತಕ | ಡಾ. ಶಿವಾನಂದ ಜಾಮದಾರ, ಬೆಂಗಳೂರು.

“ವಚನ ದರ್ಶನ” ಎಂಬ ಹೆಸರಿನ ಗ್ರಂಥವು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪಟಾಲಂನಿಂದ ಕಳೆದ ವರ್ಷದ ಜುಲೈ ತಿಂಗಳಿಂದ ಡಿಸೆಂಬರ್‌ವರೆಗೆ ಕರ್ನಾಟಕದ ಒಂಬತ್ತು ಸ್ಥಳಗಳಲ್ಲಿ ಮತ್ತು ದೆಹಲಿಯಲ್ಲಿ ಅಪಾರ ಖರ್ಚಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ಆ ಎಲ್ಲ ಸ್ಥಳಗಳಲ್ಲಿ ಸಂಘ ಪರಿವಾರದ ವಕ್ತಾರರು ಅತ್ಯಂತ ಪ್ರಚೋದನಕಾರಿ ಭಾಷಣಗಳನ್ನು ಮಾಡಿದರು. ಈ ಪುಸ್ತಕವು ಸಂಘ ಪರಿವಾರದ ದುರುದ್ದೇಶ ಮತ್ತು ದುರುಳತನವನ್ನು ಬಿಂಬಿಸುತ್ತದೆ. ಈ ಕೃತಿಯ ಕುರಿತಾಗಿ ಕೆಲವು ಮುಖ್ಯ ಅಂಶಗಳನ್ನು ಗಮನಿಸಬೇಕಿದೆ. ಮೊದಲನೆಯದು, “ವಚನ ದರ್ಶನ” ದ ಗೌರವ ಸಂಪಾದಕರಾಗಿರುವ ಸದಾಶಿವಾನಂದ ಸ್ವಾಮಿಗಳ ಯಾವುದೇ ಲೇಖನ, ಪ್ರಸ್ತಾವನೆ ಅಥವಾ ಮುನ್ನುಡಿ ಕೃತಿಯಲ್ಲಿ…

0 Comments

ಪಂಚಭೂತಗಳಲ್ಲಿ ಬಸವನೆಂಬ ದೇವರು | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಅಲ್ಲಮ ಪ್ರಭುವಿನ ವಚನ ವ್ಯಾಖ್ಯಾನಗಳು ಶರಣ ಧರ್ಮದ ಮೀಮಾಂಸೆಯ ತಿರುಳೆಂದರೂ ಸರಿ. ಪ್ರಭು ಪುರಾಣ ಕಲ್ಪಿತ ವಿಧಿ ವಿಧಾನಗಳನ್ನು ಸ್ವಾರಸ್ಯಕರವಾಗಿ ವೈಚಾರಿಕವಾಗಿ ಹೇಳುತ್ತಾನೆ. ಶಾಂತಿ ಹೋಮ ಹವನ ಪೂಜೆಗಳು ತನಗೆ ಬೇಡವಾದ ವಿಚಾರಗಳ ಬಗ್ಗೆ ಎಚ್ಚರಿಸುತ್ತಾನೆ. ಅಲ್ಲಮನ ವಚನ ಭಾಷೆಗೆ ಪುರಾಣ ಕಲ್ಪಿತ ವಸ್ತುವನ್ನು ಮೀರುವ ಗುಣವಿದೆ. ಜಲ ಎನ್ನುವ ವಿಶಿಷ್ಟ ತಾತ್ವಿಕ ಪ್ರತಿಮೆಯನ್ನು ಲೌಕಿಕ ಪಾದಗಳಿಗೆ ಹೋಲಿಸಿ ಹೇಳಿದ್ದು ಬೆಡಗಿನ ಭಾಷೆಯ ಅನುಭಾವಿಗೆ ಮಾತ್ರ ಸಾಧ್ಯವಾಗುತ್ತದೆ. ಅಂದೊಮ್ಮೆ ಧರೆಯ ಮೇಲೆ ಉದಕವಿಲ್ಲದಂದುಕೆಳಯಿಂಕೆ ಪಾದವ ನೀಡಿದೆಯಲ್ಲಾ ಬಸವಣ್ಣ.ಧರೆಯ ತಾಗಿದ ಪಾದವ ಧಿಗಿಲನೆ ಎತ್ತಲುಭುಗಿಲೆನೆ ಉದಕವೆದ್ದು ನಿಮ್ಮ ಉರಸ್ಥಲಕೆ…

0 Comments

ಲಿಂಗಾಯತರ ಶಿವ ಅಂದರೆ ಯಾರು?  | ಡಾ. ವಿಜಯಕುಮಾರ ಕಮ್ಮಾರ, ತುಮಕೂರು

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,ಪಾತಾಳದಿಂದ ಅತ್ತತ್ತ ನಿಮ್ಮ ಶ್ರೀಚರಣ,ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮುಕುಟ,ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ.ಕೂಡಲಸಂಗಮದೇವಯ್ಯಾ,ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-202/ವಚನ ಸಂಖ್ಯೆ-744) ಲಿಂಗವನರಿಯದೆ ಏನನರಿತರೂ ಫಲವಿಲ್ಲ ಎನ್ನುವುದನ್ನು ಅರಿವಿನ ಮಾರಿತಂದೆಯವರು ತಮ್ಮ ಈ ವಚನದಲ್ಲಿ ನಿರೂಪಣೆ ಮಾಡುತ್ತಾರೆ. ಇಷ್ಟಲಿಂಗ ಪ್ರಾಣಲಿಂಗವೆಂದುಬೇರೊಂದು ಕಟ್ಟಳೆಯ ಮಾಡಬಹುದೇ ಅಯ್ಯಾ?ಬೀಜವೊಡೆದು ಮೊಳೆ ತಲೆದೋರುವಂತೆ,ಬೀಜಕ್ಕೂ ಅಂಕುರಕ್ಕೂ ಭಿನ್ನವುಂಟೆ ಅಯ್ಯಾ?ಇಷ್ಟದ ಕುರುಹಿನಲ್ಲಿ ಚಿತ್ತ ನಿಂದು ಮಿಕ್ಕ ಗುಣಂಗಳ ನರಿಯಬೇಕು.ಇದೇ ನಿಶ್ಚಯ, ಸದಾಶಿವಮೂರ್ತಿಲಿಂಗವು ತಾನಾಗಿ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-152/ವಚನ ಸಂಖ್ಯೆ-397) ಬಸವಾದಿ ಶಿವಶರಣರ  ಆರಾಧ್ಯದೈವ ಇಷ್ಟಲಿಂಗ. ಇದು ಅರಿವಿನ…

0 Comments