ತೆಲುಗು ಸಾಹಿತ್ಯದಲ್ಲಿ ಬಸವಣ್ಣ: ಡಾ. ಜಾಜಿ ದೇವೇಂದ್ರಪ್ಪ, ಗಂಗಾವತಿ.
https://youtu.be/L_6L9uc9RSM
https://youtu.be/L_6L9uc9RSM
ನಾನು ಕಾಶ್ಮೀರದ ಸನ್ಯಾಸಿನಿ ಲಲ್ಲೇಶ್ವರಿಯವರ ಕುರಿತು ಅಧ್ಯಯನ ಮಾಡುವಾಗ ಕಾಶ್ಮೀರದ ಆಗಮಿಕ ಶೈವರ ಕುರಿತು ಕೆಲವು ಮಾಹಿತಿಗಳು ಲಭಿಸಿದವು. ಅವರಲ್ಲಿ ಕೆಲವು ಆಗಮಿಕ ಶೈವರೆಂಬ ಬ್ರಾಹ್ಮಣರು ಮಧ್ಯಪ್ರದೇಶದ ಮೂಲಕ ಮೊದಲು ತಮಿಳುನಾಡಿಗೆ ವಲಸೆ ಬರುತ್ತಾರೆ. ತಮಿಳುನಾಡಿನ ಅರವತ್ತಮೂರು ಪುರಾತನರನ್ನು (ಅಂದರೆ ತ್ರಿಷಷ್ಟಿ ಪುರಾತನರನ್ನು) ಸ್ಥಳೀಯ ಶೈವ ಪಂಥವನ್ನು ಶುದ್ಧ ಶೈವಪಂಥವನ್ನಾಗಿ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ ಅಂದರೆ ಸಾರಾ ಸಗಟಾಗಿ ಆಪೋಷಣೆ ಮಾಡುತ್ತಾರೆ. ಅಲ್ಲಿನ ರಾಜರ ಆಡಳಿತದ ಚುಕ್ಕಾಣಿ ಬೇರೆಯವರ ಕೈ ವಶವಾದ ನಂತರ ಹೆದರಿಕೊಂಡು ಅಲ್ಲಿಂದ ಆಂಧ್ರಪ್ರದೇಶಕ್ಕೆ ಪಲಾಯನ ಮಾಡುತ್ತಾರೆ. ಆಂಧ್ರದಲ್ಲಿ “ಆರಾಧ್ಯ” ಎಂದು ತಮ್ಮನ್ನು ತಾವು…
ಒಂದು ಖಾಸಗಿ ಟೀ. ವಿ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ “ತರಕಾರಿ ಮಾರೋದು ಇರಲಿ ಅಥವಾ ಸರ್ಜರಿ ಮಾಡೋದೇ ಇರಲಿ ಶ್ರದ್ಧೆ ಮತ್ತು ಕೆಲಸದ ಕುರಿತು ನಮಗಿರುವ ಪ್ರೀತಿ ಎಲ್ಲ ಗೌರವ ಹಾಗೂ ಖ್ಯಾತಿಯನ್ನು ತಂದು ಕೊಡುತ್ತದೆ” ಎಂದು ಹೇಳಿದವರು 2025 ರ ಪದ್ಮಶ್ರೀ ಪುರಸ್ಕೃತರಾದ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು. ಗುಲ್ಬರ್ಗದ ಕೊಳಗೇರಿಯಲ್ಲಿ ತರಕಾರಿ ಮಾರುತ್ತಿದ್ದ ಹೆಣ್ಣು ಮಗಳನ್ನು ಆಕೆಯ ಗಂಡನೇ ಆ ದಿನ ರಾತ್ರಿ ಆಕೆಯ ಕೊರಳಿನ ತಾಳಿಯನ್ನು ಕೊಡಲು ಕೇಳಿದ. ಇದ್ದುದು ಅದೊಂದೇ ಜೊತೆ ಚಿನ್ನದ ತಾಳಿ ಬೊಟ್ಟು. ಸಹಜವಾಗಿಯೇ ಸಂಪ್ರದಾಯಸ್ಥ ಮನಸ್ಥಿತಿಯ ಆ…
ಇದು ಹಾಲುಮತ ಕುಲಗುರು, ಶಾಂತ ಸಿಂಹಾಸನಾರೂಢ ಶ್ರೀ ರೇವಣಸಿದ್ದೇಶ್ವರ ಮಹಾಸಂಸ್ಥಾನ ಮಠ, ಸರವೂರು ಶಾಖಾ, ಅಣತಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ, ಇದಕ್ಕೆ ಸಂಬಂಧಿಸಿದ ತಾಮ್ರಪಟ್ಟಿಕೆ. ಚರಿತ್ರೆಯಲ್ಲಿ ಸುಳ್ಳನ್ನು ಕೂಡಾ ರಾಜಠಸ್ಸೆಯೊಂದಿಗೆ ನಿಜವೆಂದೇ ನಂಬಿಸುವ ಯಡವಟ್ಟುಗಳು ಕೂಡಾ ನಡೆದಿವೆ ಎಂಬುದಕ್ಕೆ ಈ ತಾಮ್ರಬಿಲ್ಲೆಯೇ ಸಾಕ್ಷಿಯಾಗಿದೆ. ಕುರುಬರ ಕುಲಗುರು ಶ್ರೀ. ರೇವಣಸಿಸಿದ್ಧೇಶ್ವರರನ್ನು ಹೈಜಾಕ್ ಮಾಡಿಕೊಂಡು ಶ್ರೀ ರೇಣುಕಾಚಾರ್ಯ ಎಂದು ಅಯೋನಿಜ ಕಾಲ್ಪನಿಕ ವ್ಯಕ್ತಿಯನ್ನು ಸೃಷ್ಟಿಸಿ ಪುರಾಣವನ್ನೇ ಹೊಸೆಯಲಾಗಿದೆ. ದಕ್ಷಿಣ ಕರ್ನಾಟಕದ ಕುರುಬರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಗಳನ್ನು ವೀರಶೈವರ ಪಂಚಾಚಾರ್ಯರಿಗೆ ಪರಭಾರೆ ಮಾಡಿದ ಧರ್ಮಪೀಠದ ಸತ್ಯವನ್ನು ಈ ತಾಮ್ರಬಿಲ್ಲೆಯು…
ಧಾರ್ಮಿಕ ಮತ್ತು ವೈಚಾರಿಕ ನಿರ್ಣಯಗಳ ಒಟ್ಟು ಮೊತ್ತ ಮಹೇಶ್ವರಸ್ಥಲದಲ್ಲಿದೆ. ನಿಷ್ಠೆಯಿಂದ ಕೂಡಿದ ಭಕ್ತಿ. ಧರ್ಮದ ಕೊಡುಗೆ ಸುಬುದ್ದಿಯ ಮೂಲಕ ವೀರ ವ್ರತಾಚರಣೆಯನ್ನು ಗುರು-ಲಿಂಗಕ್ಕೆ ಅರ್ಪಿಸುವ ಉಪಾಸನೆಯನ್ನು ಮಹೇಶ್ವರಸ್ಥಲದಲ್ಲಿ ಮಾಡಬೇಕಾಗುತ್ತದೆ. ಮಹೇಶ್ವರನು ಸುಳ್ಳು ಹೇಳುವುದಿಲ್ಲ, ಆಚಾರವನ್ನು ಬಿಡುವುದಿಲ್ಲ. ಇತರರನ್ನು ಹಿಂಸಿಸುವುದಿಲ್ಲ. ಪರಧನ, ಪರಸ್ತ್ರೀ, ಪರನಿಂದೆಗಳನ್ನು ಸಹಿಸದ ಭಕ್ತನಾಗಿರಬೇಕು. ಛಲ ಬೇಕು ಶರಣಂಗೆ ಪರಧನವನೊಲ್ಲೆನೆಂಬ ಮೌಲ್ಯಗಳನ್ನು ಅಪ್ಪಿಕೊಳ್ಳಬೇಕು. ಶುದ್ಧ ಮನಸ್ಸುಳ್ಳ ಮಹೇಶ್ವರಸ್ಥಲದಲ್ಲಿ ಮನ ಮತ್ತು ಇಂದ್ರಿಯ ಬೇರೆಡೆಗೆ ಹೋಗದಂತೆ ಗಟ್ಟಿಯಾಗಿ ಹಿಡಿದಿಡುವ ಪ್ರಯತ್ನ ಈ ಸ್ಥಲದಲ್ಲಿದೆ. ಲಿಂಗದಲ್ಲಿ ಪ್ರೇಮ, ಜಂಗಮದಲ್ಲಿ ದಾಸೋಹ, ಗುರು ಪೂಜೆಯಲ್ಲಿ ಪರಮ ನಿಷ್ಠೆಗಳನ್ನು ಹೊಂದಿದ ಭಕ್ತನಾಗಿರಬೇಕು.…
ಗಂಡಗಂಡರ ಎದೆಯ ಮೆಟ್ಟಿ ನಡೆವರುಂಟೆ?ಗಂಡಗಂಡರ ಚಲ್ಲಣವ ಮಾಡಿ ಉಟ್ಟವರುಂಟೆ?ಗಂಡಗಂಡರ ಚರ್ಮವ ಹೊದ್ದವರುಂಟೆ?ಗಂಡಗಂಡರ ತೊಟ್ಟವರುಂಟೆ?ಗಂಡಗಂಡರ ತುರುಬಿದವರುಂಟೆ?ಗಂಡಗಂಡರ ಭಸ್ಮವಮಾಡಿ ಹೂಸಿದವರುಂಟೆ?ಗಂಡಗಂಡರಿಗೆ ಗಂಡನ ಕಣ್ಣು ಕಾಲಲ್ಲದೆ.ಗಂಡಗಂಡರಿಗೆ ಗಂಡನ ಶಿರ ಕರದಲ್ಲದೆ.ಗಂಡುವೇಷವೆಂಬುದು ನಿಮ್ಮ ಶಕ್ತಿರೂಪು.ಗಂಡರಿಗೆ ಗಂಡನು ನಡೆಯಿತ್ತೆ ಬಟ್ಟೆಎಂಬುದು ನಿಮಗೆ ಸಂದಿತ್ತು. ಶಂಭುಜಕ್ಕೇಶ್ವರ ಶರಣ ಜಗದೊಳಗೊಬ್ಬನೆ ಗಂಡನು.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-442/ವಚನ ಸಂಖ್ಯೆ-1214)ಈ ವಚನದಲ್ಲಿ ಬರುವ ಪಾರಿಭಾಷಿಕ ಪದಗಳ ಅರ್ಥ:ಗಂಡ: ಪತಿ, ಲಿಂಗ, ಗುರು.ಚಲ್ಲಣ: ಪಾಯಜಾಮು, ಸಡಿಲ ಉಡುಪು.ತುರುಬಿದವರು: ಲಂಪಟ, ಹೆಣ್ಣಿನ ಮೋಹದ ಧ್ಯಾನದಲ್ಲಿರುವವ.ಬಟ್ಟೆ: ದಾರಿ, ಮಾರ್ಗ. ಶಿವಶರಣೆಯರಲ್ಲಿ ಸತ್ಯಕ್ಕನವರು ಏಕದೇವೋಪಾಸನೆಗೆ ಹೆಸರಾದವರು. ಇವರ ವಚನಗಳಲ್ಲಿಯೂ ಕೂಡ ಏಕದೇವೋಪಾಸನೆ ತತ್ವ ಪ್ರಮುಖವಾಗಿ…
ಆರೂ ಇಲ್ಲದ ಅರಣ್ಯದೊಳಗೆ ಮನೆಯ ಕಟ್ಟಿದರೆ,ಕಾಡುಗಿಚ್ಚು ಎದ್ದುಬಂದು ಹತ್ತಿತ್ತಲ್ಲಾ!ಆ ಉರಿಯೊಳಗೆ ಮನೆ ಬೇವಲ್ಲಿ,ಮನೆಯೊಡೆಯನೆತ್ತ ಹೋದನೊ?ಆ ಉರಿಯೊಳಗೆ ಬೆಂದ ಮನೆ,ಚೇಗೆಯಾಗುದದ ಕಂಡು,ಮನೆಯೊಡೆಯನಳಲುತ್ತ ಬಳಲುತ್ತೈದಾನೆ.ಗುಹೇಶ್ವರಾ, ನಿಮ್ಮ ಒಲವಿಲ್ಲದ ಠಾವ ಕಂಡು,ಮನದಲ್ಲಿ ಹೇಸಿ ತೊಲಗಿದೆನಯ್ಯಾ.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-30/ವಚನ ಸಂಖ್ಯೆ-76)ಈ ವಚನದಲ್ಲಿ ಬರುವ ಪಾರಿಭಾಷಿಕ ಪದಗಳ ಅರ್ಥ:ಚೇಗೆ: ಹಾನಿ, ಭಂಗ, ಕೇಡು.ಠಾವ: ಸ್ಥಾನ, ಸ್ಥಳ. Transliteration:Aaroo illada aranyadolage Maneya kattidare,Kaadugichchu eddubandu hattittalla!Aa uriyolage mane bevalli,Maneyodeyanetta hodano?Aa uriyolage benda mane,Chegeyaduda kandu,Maneyodeyanalalutta balaluttaidaanai.Guheshwara, nimma olavillada thava kandu,Manadalli hesi tolagidenayya. Translation:When building a…
ಕಿನ್ನರಿ ಬ್ರಹ್ಮಯ್ಯನವರು 12 ನೇ ಶತಮಾನದ ಶರಣ ಸಮೂಹದಲ್ಲಿ ಗುರುತಿಸಿಕೊಂಡಂಥ ಶರಣರು. ಇವರ ಹುಟ್ಟೂರು ಈಗಿನ ತೆಲಂಗಾಣದ ಪೂಡೂರು ಅನ್ನುವಂಥ ಗ್ರಾಮ. ಇವರ ತಾಯಿ ಕಲಿದೇವಿ. ಇವರು ಅಕ್ಕಸಾಲಿಗ ವೃತ್ತಿಯನ್ನು ಕೈಗೊಂಡಿರುತ್ತಾರೆ. ಅದರ ಜೊತೆ ಜೊತೆಗೆ ದಾಸೋಹವನ್ನು ಕೂಡ ಮಾಡುತ್ತಿರುತ್ತಾರೆ. ಒಮ್ಮೆ ತೂಕದಲ್ಲಿ ಚಿನ್ನವನ್ನು ಕಡಿಮೆ ತೂಗಿ ಮೋಸ ಮಾಡಿದ್ದಾರೆ ಅನ್ನುವ ಆಪಾದನೆಗೊಳಗಾದರು. ಆಗ ಇದು ಆ ಶಿವನದೇ ಇಚ್ಛೆ ಆಗಿರಬೇಕು ಎಂದು ಅಕ್ಕಸಾಲಿಗ ಕಾಯಕವನ್ನು ಬಿಟ್ಟು ಕಿನ್ನರಿ ಬಾರಿಸುವ ಕಾಯಕವನ್ನು ಕೈಗೊಳ್ಳುವರು. ಬಸವಣ್ಣನವರ ಹಿರಿಮೆಯ ಬಗೆಗೆ ಸಾಕಷ್ಟು ಕೇಳಿ ಅವರನ್ನು ಕಾಣಲು ಕಲ್ಯಾಣಕ್ಕೆ ಬಂದು ತ್ರಿಪುರಾಂತಕೇಶ್ವರ…
12 ನೇ ಶತಮಾನ ಒಂದು ಅದ್ಭುತ ಕಾಲ ಘಟ್ಟ. ಶರಣರ ನಡೆ - ನುಡಿ - ವಚನ ಪ್ರತಿಯೊಂದು ಆದರ್ಶ. ದೊರೆತಿರುವ ಆಧಾರಗಳು ಕೆಲವಾದರೆ ಕಾಲ ಗರ್ಭದಲ್ಲಿ ಅಡಗಿರುವ ಸತ್ಯಾಂಶಗಳೆಷ್ಟೋ ಇವೆ. ಯಾವುದೇ ಶರಣರು ತಮ್ಮ ಜೀವನವನ್ನು ಕುರಿತು ಹೇಳಿಕೊಂಡಿಲ್ಲ ಚರಿತ್ರೆಗಿಂತ ಚಾರಿತ್ರ್ಯ ದೊಡ್ಡದು, ವ್ಯಕ್ತಿಗಿಂತ ಸಮಾಜದ ಹಿತ ದೊಡ್ಡದು. ಶರಣರು ಸರ್ವರ ಏಳಿಗಾಗಿ ಸರ್ವೋದಯದ ತತ್ವವನ್ನು ಅಳವಡಿಸಿಕೊಂಡವರು. ಬಸವಾದಿ ಶರಣರು “ಇರುವ ಕೆಲಸವ ಮಾಡು ಕಿರಿದೆನದೆ, ದೊರೆತುದುದು. ಪ್ರಸಾದವೆಂದುಣ್ಣು” ಎಂಬ ನುಡಿಯಂತೆ ಕೈಲಾಸಕ್ಕಿಂತ ಕಾಯಕವನ್ನು ದೊಡ್ಡದನ್ನಾಗಿ ಮಾಡಿಕೊಂಡಿದ್ದರು. ಅವರ ಕಾಯಕದಿಂದಲೇ ಶರಣರನ್ನು ಗುರುತಿಸುತ್ತೇವೆ. ಅನೇಕ ಶರಣರ…
ವಚನ ಸಂಸ್ಕತಿಯನ್ನು ಗ್ರಹಿಸುವ ಹಿನ್ನೆಲೆಯಲ್ಲಿ ಧರ್ಮದ ಒಳ ಸೂಕ್ಷ್ಮಗಳು ಮತ್ತು ಭಕ್ತಿ ಸಿದ್ದಾಂತಗಳು ನಮಗೆ ಮುಖಾಮುಖಿಯಾಗುತ್ತವೆ. ನಿಜವಾದ ಅರ್ಥದಲ್ಲಿ ಧರ್ಮವೆಂಬುದು ಆದರ್ಶಗಳ ಮೊತ್ತ. ಮಾನವ ಜನಾಂಗದ ಆದರ್ಶಗಳು ಧರ್ಮ ತತ್ವಗಳ ನೆಲೆಯಲ್ಲಿ ಮಾತನಾಡುತ್ತವೆ. ಉದಾರತೆ, ಸಮತಾ ಭಾವ, ಮಾನವೀಯತೆ ಸಕಲರನ್ನು ಒಂದೇ ಎಂದು ಭಾವಿಸುವ ಗುಣ ಶರಣ ಧರ್ಮಕ್ಕೆ ಇರುವ ವಿಶೇಷತೆ. ಧರ್ಮ ಸಾಧನೆಯ ಪ್ರಮುಖ ಉದ್ದೇಶ ಹೊಂದಿದ ಶರಣರು ಲಿಂಗಾಚಾರಕ್ಕೆ ಲಿಂಗಾಂಗ ಸಾಮರಸ್ಯವೆಂದು ಕರೆದರು. ಇಷ್ಟಲಿಂಗವೇ ಆಂತರಿಕ ಪರಮ ಸಾಧನೆ ಎಂದರು. ಧಾರ್ಮಿಕ ಸಾಧನೆಯ ಅರಂಭದಿಂದ ಕೊನೆಯ ಹಂತದವರೆಗೂ ಇಷ್ಟಲಿಂಗ ಅವಿಬಾಜ್ಯ ಅಂಗವಾಯಿತು. ಹೀಗಾಗಿ ಇಷ್ಟಲಿಂಗ…
You cannot copy content of this page