ಪಂಚಗಣಾಧೀಶರು | ಡಾ. ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು.

ಬಸವೋತ್ತರ ಕಾಲದಲ್ಲಿ ಪಂಚಗಣಾಧೀಶರು ಕೆರೆಕುಂಟೆ ಗೋಕಟ್ಟೆಗಳನ್ನು ಕಟ್ಟಿಸುವ ಮೂಲಕ ರೈತಾಪಿಗಳಿಗೆ, ಗೋವಳಿಗರಿಗೆ, ಶ್ರಮಜೀವಿಗಳಿಗೆ ಅನ್ನಾಹಾರ ಮತ್ತು ಅಧ್ಯಾತ್ಮ ಗುರುಬೋಧೆ ನೀಡಿದವರು. ಕೂಲಹಳ್ಳಿ ಮದ್ದಾನೇಶ. ಅರಸೀಕೆರೆಯ ಕೋಲಶಾಂತೇಶ. ಹರಪನಹಳ್ಳಿ ಕೆಂಪೇಶ(ಕಣಗಲಿ ಕೆಂಪೇಶ). ಕೊಟ್ಟೂರು ಗುರುಬಸವ (ಕೊಟ್ಟೂರೇಶ, ಕೊಟ್ರೇಶ). ನಾಯಕನಹಟ್ಟಿ ತಿಪ್ಪೇಸ್ವಾಮಿ (ಹಟ್ಟಿ ತಿಪ್ಪಯ್ಯ, ತಿಪ್ಪೇಶ). ಎಂಬ ಈ ಪಂಚಗಣಾಧೀಶರು ಹದಿನಾಲ್ಕು ಹಾಗೂ ಹದಿನೈದನೇ ಶತಮಾನದಲ್ಲಿ ಜನಪದರ ಆದರ್ಶ ಸಾಂಸ್ಕೃತಿಕ ನಾಯಕರಾಗಿ ಆಗಿಹೋಗಿದ್ದು, ಬಸವಾದಿ ಪ್ರಮಥರ ಸಾಂಸ್ಕೃತಿಕ ಆಶಯಗಳಿಗಾಗಿ ದುಡಿದು ಅಮರ ದೈವಗಳಾಗಿ ಜೀವಸಮಾಧಿಯಾಗಿದ್ದಾರೆ. ಹಲವಾರು ಜಾನಪದ ಕಾವ್ಯಗಳ ಹುಟ್ಟುವಳಿಗೂ ಇವರು ಮೆರೆದ ಪವಾಡ ಸಾಹಸಗಳು ವಸ್ತುವನ್ನು ಒದಗಿಸಿವೆ. ಕೂಲಹಳ್ಳಿ…

0 Comments

ಬಯಲು ಬಯಲನೆ ಬಿತ್ತಿದ ಶರಣರು | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ವಚನ ಧರ್ಮದ ಭಕ್ತಿ ಪರಂಪರೆಯಲ್ಲಿ ಬಯಲು ಎಂಬ ಶಬ್ದ ಶರಣರ ವಚನಗಳಲ್ಲಿ ಭಾವನಾತ್ಮಕ ವಿನ್ಯಾಸದ ಮೂಲಕ ಮುಖಾಮುಖಿಯಾಗುತ್ತದೆ. ಶರಣರಲ್ಲಿ ಬಯಲು ಅಗೋಚರ ಇಂದ್ರಿಯಾನಂದಕ್ಕೆ ಮುದ ನೀಡುವ ಶೂನ್ಯವದು. ನಿರಾಳ ಅಗೋಚರ ಶಕ್ತಿಯ ವಿಶಿಷ್ಟ ವಿಶ್ವವದು. ಬೀಜದಲ್ಲಿ ಬೀಜ ಅಡಗಿರುವಂತೆ ಬೆಚ್ಚನೆಯ ಭಾವಾನುಭೂತಿ. ನಿರಾಕಾರದ ಕತ್ತಲೆಯ ಜಗತ್ತು. ವಚನಕಾರರ ಬಯಲು ಎಂದರೆ ಸತ್ಯದ ಪಾವಿತ್ರ್ಯತೆಯನ್ನು ಮುಂದು ಮಾಡುವ ವಿಶೇಷ ರೂಪಕದ ಅವಲೋಕನಕ್ಕೆ ಒಳಪಡಿಸುವ ಮನಸ್ಥಿಯಾಗಿದೆ. ಬಯಲು ಎನ್ನುವ ಸಂವೇದನೆಯನ್ನು ವಚನ ಸಾಹಿತ್ಯದಲ್ಲಿ ಮಾತ್ರ ಕಾಣಲು ಸಾದ್ಯ. ಗ್ರಹಿಕೆಗೆ ಸಿಗದ ಶಬ್ದಗಳಲ್ಲಿ ಬಂಧಿಸಲು ಸಾಧ್ಯವಾಗದ ವಿಸ್ಮಯ ಆಧ್ಯಾತ್ಮಿಕ ಲೋಕ. ಶೂನ್ಯ…

0 Comments

ಮಹಾಪ್ರಸಾದಿ ಶರಣ ಬಿಬ್ಬಿಬಾಚಯ್ಯನವರು | ಶ್ರೀ. ಲೋಕೇಶ್ ಎನ್. ಮಾನ್ವಿ, ರಾಯಚೂರು ಜಿಲ್ಲೆ.

ರಾಯಚೂರು ಜಿಲ್ಲೆ ಬಿಸಿಲನಾಡು ಎಂದೇ ಹೆಸರುವಾಸಿ‌. ಅದರಷ್ಟೇ ಸಾಹಿತ್ಯದಿಂದ ನೆತ್ತಿಯನ್ನು ತಂಪಾಗಿಸಬಲ್ಲ ಶರಣರು, ದಾಸರು, ಸಂತರು, ಮಹಾಂತರ, ಸಾಹಿತಿಗಳ, ನಾಡು ರಾಯಚೂರು. ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಯಾದರೂ, ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಜಿಲ್ಲೆ ಇದಾಗಿದೆ. ಹನ್ನೆರಡನೇ ಶತಮಾನದ ಬಸವಾದಿ ಶರಣರ ಸಾಲಿನಲ್ಲಿ ಕಾಣಸಿಗುವ ಪ್ರಮುಖ ಶರಣರಾದ ಬಿಬ್ಬಿಬಾಚಯ್ಯನವರು ಕೂಡ ರಾಯಚೂರು ಜಿಲ್ಲೆಯ ಶರಣರೇ ಆಗಿದ್ದಾರೆ. ಶರಣ ಬಿಬ್ಬಿಬಾಚಯ್ಯನವರು ಮೂಲತಃ ರಾಯಚೂರು ಜಿಲ್ಲೆಯ ಗಬ್ಬೂರಿನವರಾಗಿದ್ದು, ಪೂರ್ವಾಶ್ರಮದಲ್ಲಿ ಬ್ರಾಹ್ಮಣರಾದರೂ ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಕಲ್ಯಾಣಕ್ಕೆ ತೆರಳಿ ಇಷ್ಟಲಿಂಗ ದೀಕ್ಷೆ ಪಡೆದು ಶರಣರಾದವರು, ಅನುಭವ ಮಂಟಪದಲ್ಲಿ ಸಕ್ರಿಯವಾಗಿ…

0 Comments

ನಾಥರು ಹಾಗೂ ಶರಣರು | ಡಾ. ಬಸವರಾಜ ಸಬರದ, ಬೆಂಗಳೂರು.

ಅಧ್ಯಾಯ – 01: ನಾಥರು ಹಾಗೂ ಶರಣರು ಭಾರತದಲ್ಲಿ ಅನೇಕ ಧಾರ್ಮಿಕ ಪಂಥಗಳು ಆಗಿ ಹೋಗಿವೆ. ಧಾರ್ಮಿಕ ಕ್ಷೇತ್ರದಲ್ಲಿ ಅನೇಕ ಬೆಳವಣಿಗೆಗಳಾಗಿವೆ. ಧರ್ಮ ಮತ್ತು ಚಳುವಳಿಗಳು ಒಂದು ಕಡೆ ಕೂಡುವುದಿಲ್ಲವೆಂಬ ನಂಬಿಕೆಯಿದೆ. ಮತ-ಧರ್ಮಗಳ ಉದ್ದೇಶವೇ ಬೇರೆ, ಚಳುವಳಿಗಳ ಉದ್ದೇಶವೇ ಬೇರೆಯೆಂದು ಹೇಳಿಕೊಂಡು ಬರಲಾಗಿದೆ. ಆದರೆ ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದ ಶರಣರು ಧರ್ಮವನ್ನು ಒಂದು ಚಳುವಳಿಯ ಹಾಗೆ ಬೆಳೆಸಿದರು. ಆಗ ಶರಣಧರ್ಮವು ಶರಣ ಚಳುವಳಿಯಾಗಿ ರೂಪಗೊಂಡಿತು. ಧಾರ್ಮಿಕ ಪರಂಪರೆಯಲ್ಲಿ ಹೀಗೆ ಧರ್ಮವೊಂದು ಚಳುವಳಿಯ ರೂಪ ಪಡೆದದ್ದು 12 ನೇಯ ಶತಮಾನದಲ್ಲಿ, ಅದೂ ಕರ್ನಾಟಕದಲ್ಲಿ ಕನ್ನಡದ ವಚನಗಳ ಮೂಲಕವೆಂಬ ಸಂಗತಿಯೇ…

0 Comments

ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ: ಸಂಕಷ್ಟದ ಬದುಕು ಹಾಗೂ ಅವರ ಸಾಧನೆಗಳು | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ರಾವ್‌ ಬಹಾದ್ದೂರ ಡಾ. ಫ. ಗು. ಹಳಕಟ್ಟಿಯವರ ಪೂರ್ವಜರು ಮೂಲತಃ ಸವದತ್ತಿ ತಾಲೂಕಿನ ಹಳಕಟ್ಟಿ ಗ್ರಾಮದವರು. ಧಾರವಾಡಕ್ಕೆ ವಲಸೆ ಬಂದ ನೇಕಾರ ಕುಟುಂಬ ಅವರದಾಗಿತ್ತು. ಅವರ ಪೂರ್ಣ ಹೆಸರು ಫಕೀರಪ್ಪ. ಡಾ. ಫ. ಗು. ಹಳಕಟ್ಟಿಯವರ ತಂದೆ ಸಾಹಿಗಳು ಮತ್ತು ಶಿಕ್ಷಕರಾಗಿದ್ದ ಶ್ರೀ ಗುರುಬಸಪ್ಪ ಹಳಕಟ್ಟಿ ಮತ್ತು ತಾಯಿ ಶ್ರೀಮತಿ ದಾನಾದೇವಿ. 02.07.1880 ರಂದು ಧಾರವಾಡದಲ್ಲಿ ಜನಿಸಿದ ಅವರು ತಮ್ಮ ಮೂರನೇಯ ವಯಸ್ಸಿನಲ್ಲಿದ್ದಾಗ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಧಾರವಾಡದಲ್ಲಿ ತಮ್ಮ ಪ್ರಾಥಮಿಕ ಹಾಗೂ 1896 ರಲ್ಲಿ ಮೆಟ್ರಿಕ್ ಪರೀಕ್ಷೆ ಪಾಸಾಗುತ್ತಾರೆ. ನಂತರ ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ತೆರಳಿ 1901…

0 Comments

ವಚನಗಳಲ್ಲಿ ವೀರಶೈವ ಮತ್ತು ಲಿಂಗಾಯತ (ಲಿಂಗವಂತ) ಪದಬಳಕೆ: ಒಂದು ಪರಾಮರ್ಶೆ | ಡಾ. ವೀರಣ್ಣ ರಾಜೂರ, ಧಾರವಾಡ.

ವಚನ ಸಾಹಿತ್ಯ ನನ್ನ ವಿಶೇಷ ಆಸಕ್ತಿಯ ಅಧ್ಯಯನ ಕ್ಷೇತ್ರ. ಸುಮಾರು 45 ವರ್ಷಗಳಿಂದ ಈ ಕ್ಷೇತ್ರದಲ್ಲಿ ನಿರಂತರ ಸಂಶೋಧನೆ, ಬರವಣಿಗೆ, ಗ್ರಂಥ ಪ್ರಕಟಣೆ ಕಾರ್ಯ ಮಾಡುತ್ತ ಬಂದಿದ್ದೇನೆ. ಇದುವರಗೆ ನಾನು 125 ಗ್ರಂಥಗಳನ್ನು ಪ್ರಕಟಿಸಿದ್ದು ಅವುಗಳಲ್ಲಿ 80 ಕ್ಕೂ ಹೆಚ್ಚು ಕೃತಿಗಳು ವಚನ ಸಾಹಿತ್ಯಕ್ಕೆ ಸಂಬಂಧಿಸಿವೆ. ಕರ್ನಾಟಕ ಸರ್ಕಾರ ಡಾ. ಎಂ. ಎಂ. ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಿಸಿದ ಸಮಗ್ರ ವಚನ ಸಾಹಿತ್ಯದ 15 ಸಂಪುಟಗಳಲ್ಲಿ ನಾನು 5 ಸಂಪುಟಗಳನ್ನು ಸಂಪಾದಿಸಿದ್ದೇನೆ. ಹೀಗಾಗಿ ವಚನ ಸಾಹಿತ್ಯದ ಹಸ್ತಪ್ರತಿಗಳ ನಿರಂತರ ಒಡನಾಟದಿಂದ ಅವುಗಳ ಸ್ವರೂಪ, ಪರಂಪರೆ, ಪರಿಷ್ಕರಣೆ,…

1 Comment

ತಾಡೋಲೆಗಳಲ್ಲಿ ವಚನಗಳ ಸಂಗ್ರಹ | ಡಾ. ಜಿ ವಿ ಮಂಜುನಾಥ, ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ.

ದೈವದೊಡನೆ ಸಂಸ್ಕೃತ ಭಾಷೆಯಲ್ಲೇ ಸಂವಾದ ಸಾಧ್ಯ ಎನ್ನುವ ಕಾಲ ಘಟ್ಟದಲ್ಲಿ ದೈವದೊಡನೆ ಕನ್ನಡ ಭಾಷೆಯ ಮೂಲಕವೂ ಸಂವಾದ ಮಾಡಬಹುದು, ಅವನೊಂದಿಗೆ ಜನಸಾಮಾನ್ಯರ ಮಾತಿನಲ್ಲೇ ಸಂಭಾಷಣೆ ಮಾಡಬಹುದು ಎಂದು ಜಗತ್ತಿಗೆ ತೋರಿಸಿದವರು 12 ನೇ ಶತಮಾನದ ಶರಣರು.  ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯು ಮಾನವರನ್ನು ವರ್ಗ ವರ್ಗವಾಗಿ ಹಂಚಿತ್ತು. ಕೆಲವರು ಶುದ್ಧ, ಕೆಲವರು ಅಶುದ್ಧ ಎಂದು ಹೇಳಿದ್ದ ವ್ಯವಸ್ಥೆಗೆ ಶರಣರು ಧಿಕ್ಕಾರ ಹೇಳಿದರು. ಸಾಮಾಜಿಕ ಮೌಲ್ಯಗಳನ್ನೇ ಧಾರ್ಮಿಕ ಮೌಲ್ಯಗಳನ್ನಾಗಿ ರೂಪಾಂತರಿಸಿ ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರು, ಅಂದರೆ ಇಹಲೋಕದಲ್ಲಿ ನೀತಿಯುತವಾಗಿ, ದಯೆಯಿಂದ, ಕಾಯಕದಿಂದ, ಬಾಳಿ ಬದುಕಿದರೆ ಸ್ವರ್ಗ ಸ್ಥಿತಿ ಇಲ್ಲಿಯೇ…

0 Comments

ಪ್ರವಚನ ಪಿತಾಮಹ ಪರಮ ಪೂಜ್ಯ ಶ್ರೀ. ಲಿಂಗಾನಂದ ಸ್ವಾಮೀಜಿ | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ಬಸವ ಬಳ್ಳಿ ಹಬ್ಬಿಸಿ, ಪ್ರವಚನ ಪಿತಾಮಹರಾದ ಮಣಿಗವಳ್ಳಿಯ ಮಾಣಿಕ್ಯ ಆನೆಯೂ ಆ ದಾರಿಯಲ್ಲಿ ಹೋುತ್ತೆಂದಡೆ,ಆಡೂ ಆ ದಾರಿಯಲ್ಲಿ ಹೋುತ್ತೆನ್ನಬಹುದೆ?ಸಂಗನ ಶರಣರಿಗೆ ಆನು ಸರಿಯೆಂದು ಗಳಹಲಿಬಹುದೆ?ಜಂಗಮಕ್ಕೆ ಮಾಡುವ ಭಕ್ತರಿಗೆ ಆನು ಸರಿಯೆಹೇಳಾ, ಕೂಡಲಸಂಗಮದೇವಾ?(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-87/ವಚನ ಸಂಖ್ಯೆ-329) ಲಿಂಗಾಯತ ಧರ್ಮ ಮತ್ತು ಬಸವ ತತ್ವ ಬೆಳೆಸಲು ಆನೆಯಾಗಿ ಶರಣರ ಚಳುವಳಿಯ ಮಾರ್ಗ ಹಿಡಿದು ಸಾದನೆಯ ಶಿಖರಕ್ಕೇರಿದ ಪೂಜ್ಯ ಲಿಂಗಾನಂದ ಸ್ವಾಮೀಜಿಗಳು ತಮ್ಮ ಪ್ರಖರ ಪ್ರವಚನದ ಮೂಲಕ ಶರಣರ ಬದುಕನ್ನು ಜೀವಂತವಾಗಿ ಸಾಕ್ಷಿಕರಿಸಿದರು. ವಚನ ಸಾಹಿತ್ಯಕ್ಕೆ ಮರುಜನ್ಮ ನೀಡುವಲ್ಲಿ ಹಾಗೂ ಲಿಂಗಾಯತ ಧರ್ಮಕ್ಕೆ ಹೊಸ ಪಥ ಸೃಷ್ಠಿಸುವಲ್ಲಿ…

0 Comments

ಶಿವಶರಣ ಸೊನ್ನಲಾಪುರದ ಸಿದ್ದರಾಮ ಶಿವಯೋಗಿಗಳು | ಶ್ರೀಮತಿ. ಅಮರವಾಣಿ ಐದನಾಳ, ಲಿಂಗಸೂಗೂರು.

“ವೈರಾಗ್ಯಕ್ಕೆ ಅಲ್ಲಮ, ಭಕ್ತಿಯೋಗಕ್ಕೆ ಬಸವಣ್ಣ, ಅನುಭಾವಕ್ಕೆ ಅಕ್ಕಮಹಾದೇವಿ, ಕಾಯಕಕ್ಕೆ ಸಿದ್ದರಾಮ” ಜಗತ್ತು ಕಂಡ ಶ್ರೇಷ್ಠ ಕರ್ಮಯೋಗಿಗಳಲ್ಲಿ ಯೋಗತಪಸ್ವಿ ಶಿವಯೋಗಿ ಸಿದ್ದರಾಮೇಶ್ವರರ ಆದರ್ಶಮಯ ಜೀವನ ಚರಿತ್ರೆಯ ಕುರಿತು ಲೇಖನ. ಹನ್ನೆರಡನೇಯ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಕಲ್ಯಾಣದ ಕ್ರಾಂತಿ ಕರ್ನಾಟಕದ ಇತಿಹಾಸದಲ್ಲಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲಿಯೂ ಮಹತ್ವಪೂರ್ಣವಾದುದು. ಅದು ಯಾವುದೇ ಒಂದು ವರ್ಗದ ಹಿತ ಕಾಪಾಡುವ ಚಳುವಳಿಯಾಗದೆ, ಸಮಾಜದಲ್ಲಿನ ಕೆಳ ವರ್ಗದವರಿಂದ ಹಿಡಿದು ಎಲ್ಲಾ ವರ್ಗಗಳ ಹಿತವನ್ನು ಕಾಪಾಡಲು ಸಮಾನತೆಯ ತಳಹದಿಯ ಮೇಲೆ ನಡೆಸಿದ ಮುಕ್ತ ಮನಸ್ಸುಗಳ ಒಂದು ವಿಶಿಷ್ಟ ಅಂದೋಲನವಾಗಿತ್ತು. ಬಸವಾದಿ ಶರಣರು ಜನಭಾಷೆಯಲ್ಲಿ ತಮ್ಮ ಕಾಯಕದ…

0 Comments

ಕರ್ಮಯೋಗಿಯಿಂದ ಶಿವಯೋಗಿಯಾದ ಶರಣ ಸಿದ್ಧರಾಮೇಶ್ವರರು | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಎನ್ನನಾಗಳೆ ಬಂದಿವಿಡಿದೆ ಗಡ ನೀನು.ನಿಮ್ಮ ಹಿಡಿವಡೆ ಹಿಡಿವರು, ತನುವಿರೆ ತನು ಬೇರಾದವರು.ನಿಮ್ಮ ಹಿಡಿವಡೆ ಹಿಡಿವರು, ಮನವಿರೆ ಮನ ಬೇರಾದವರು.ನಿಮ್ಮ ಹಿಡಿವಡೆ ಹಿಡಿವರು, ಕೈಯಿರೆ ಕೈಬೇರಾದವರು.ಈಸುಳ್ಳವರು ಮೊದಲಾಗಿ ನಿಮ್ಮ ಹಿಡಿಯಲಾರರು.ಕಪಿಲಸಿದ್ಧಮಲ್ಲಿಕಾರ್ಜುನಾನಿಮ್ಮ ಹಿಡಿದು ತಡೆಯಲಾನೇತರವನಲ್ಲ.ಕರುಣದಿಂದ ಬಾರಾ, ಎನ್ನ ದೇವರ ದೇವಾ.(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-388/ವಚನ ಸಂಖ್ಯೆ-1246) ಶರಣ ಸಂಕುಲದಲ್ಲಿ ಶಿವಯೋಗಿ ಸಿದ್ಧರಾಮರದು ತುಂಬಾ ಮಹತ್ವದ ಪಾತ್ರವಾಗಿದೆ. ವಿಶಿಷ್ಟ ಆಲೋಚನೆಯುಳ್ಳ ಸಿದ್ಧರಾಮೇಶ್ವರರು ಅದ್ಭುತ ಕನಸುಗಾರರು. “ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು, ಅನುಗೊಂಬನಿತು ಕಾಯಕ ನಡೆಯಬೇಕು” ಎಂಬುದು ಇವರ ಧ್ಯೇಯವಾಕ್ಯವಾಗಿತ್ತು. ಅಂಗಕ್ಕೆ ಲಿಂಗೋಪದೇಶ ಮನಕ್ಕೆ ಮಂತ್ರೋಪದೇಶವಾದ…

0 Comments