ಪಂಚಗಣಾಧೀಶರು | ಡಾ. ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು.
ಬಸವೋತ್ತರ ಕಾಲದಲ್ಲಿ ಪಂಚಗಣಾಧೀಶರು ಕೆರೆಕುಂಟೆ ಗೋಕಟ್ಟೆಗಳನ್ನು ಕಟ್ಟಿಸುವ ಮೂಲಕ ರೈತಾಪಿಗಳಿಗೆ, ಗೋವಳಿಗರಿಗೆ, ಶ್ರಮಜೀವಿಗಳಿಗೆ ಅನ್ನಾಹಾರ ಮತ್ತು ಅಧ್ಯಾತ್ಮ ಗುರುಬೋಧೆ ನೀಡಿದವರು. ಕೂಲಹಳ್ಳಿ ಮದ್ದಾನೇಶ. ಅರಸೀಕೆರೆಯ ಕೋಲಶಾಂತೇಶ. ಹರಪನಹಳ್ಳಿ ಕೆಂಪೇಶ(ಕಣಗಲಿ ಕೆಂಪೇಶ). ಕೊಟ್ಟೂರು ಗುರುಬಸವ (ಕೊಟ್ಟೂರೇಶ, ಕೊಟ್ರೇಶ). ನಾಯಕನಹಟ್ಟಿ ತಿಪ್ಪೇಸ್ವಾಮಿ (ಹಟ್ಟಿ ತಿಪ್ಪಯ್ಯ, ತಿಪ್ಪೇಶ). ಎಂಬ ಈ ಪಂಚಗಣಾಧೀಶರು ಹದಿನಾಲ್ಕು ಹಾಗೂ ಹದಿನೈದನೇ ಶತಮಾನದಲ್ಲಿ ಜನಪದರ ಆದರ್ಶ ಸಾಂಸ್ಕೃತಿಕ ನಾಯಕರಾಗಿ ಆಗಿಹೋಗಿದ್ದು, ಬಸವಾದಿ ಪ್ರಮಥರ ಸಾಂಸ್ಕೃತಿಕ ಆಶಯಗಳಿಗಾಗಿ ದುಡಿದು ಅಮರ ದೈವಗಳಾಗಿ ಜೀವಸಮಾಧಿಯಾಗಿದ್ದಾರೆ. ಹಲವಾರು ಜಾನಪದ ಕಾವ್ಯಗಳ ಹುಟ್ಟುವಳಿಗೂ ಇವರು ಮೆರೆದ ಪವಾಡ ಸಾಹಸಗಳು ವಸ್ತುವನ್ನು ಒದಗಿಸಿವೆ. ಕೂಲಹಳ್ಳಿ…






Total views : 57460