ಕಾಯಕ ನಿಷ್ಠೆಯಿಂದ ಅಂತರಂಗದ ಚೈತನ್ಯವನ್ನರಳಿಸಿದ ಶರಣ ಹೂಗಾರ ಮಾದಯ್ಯ ಮತ್ತು ಶರಣೆ ಮಾದೇವಿಯವರು | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.
ವಚನಾಂಕಿತ : ವಚನಗಳು ಲಭ್ಯವಾಗಿಲ್ಲ.ಜನ್ಮಸ್ಥಳ : ತಿಳಿದು ಬಂದಿಲ್ಲ.ಕಾಯಕ : ಹೂಗಾರ (ಶರಣರ ಮನೆಗಳಿಗೆ ಹೂ-ಪತ್ರೆಗಳನ್ನು ನೀಡುವುದು).ಐಕ್ಯಸ್ಥಳ : ಬಸವ ಕಲ್ಯಾಣ, ಬೀದರ ಜಿಲ್ಲೆ. ಶರಣರ ನೆನೆದಾರ | ಸರಗೀಯ ಇಟ್ಟಾಂಗ ||ಅರಳು ಮಲ್ಲಿಗೆ | ಮುಡಿದ್ಹಾಂಗ ||ಕಲ್ಯಾಣ ಶರಣರ | ನೆನೆಯೋ ನನ ಮನವೇ || ನಮ್ಮ ಜನಪದರು ಎಷ್ಟು ಸೊಗಸಾಗಿ ಶರಣರನ್ನು ನೆನಪಿಸಿಕೊಂಡು ಹಾಡಿದ್ದಾರೆ. ಮುಗ್ಧ ಜನಪದರಿಗೆ ಶರಣರನ್ನು ಕುರಿತು ಹಾಡುವುದೆಂದರೆ ಎಲ್ಲಿಲ್ಲದ ಪ್ರೀತಿ. ಅನುಭಾವದ ಹಿನ್ನೆಲೆಯಲ್ಲಿ ಮುಗ್ಧ ಶರಣರ ಕುರಿತು ರಚಿಸಿದ ಹಾಡು ಯಾವುದೇ ವಿಚಾರದಲ್ಲಿ ಶಿವನ ಪ್ರಕಾಶದಂತೆ…