ನಿಜ ಶರಣ ಅಂಬಿಗರ ಚೌಡಯ್ಯನವರು / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಕಲ್ಲದೇವರ ಪೂಜೆಯ ಮಾಡಿ, ಕಲಿಯುಗ[ದ]ಕತ್ತೆಗಳಾಗಿ ಹುಟ್ಟಿದರು.ಮಣ್ಣದೇವರ ಪೂಜಿಸಿ ಮಾನಹೀನರಾದರು.ಮರನ ದೇವರೆಂದು ಪೂಜಿಸಿ ಮಣ್ಣ ಕೂಡಿದರು.[ಇಂತಪ್ಪ] ದೇವರ ಪೂಜಿಸಿ ಸ್ವರ್ಗಕ್ಕೇರದೆ ಹೋದರು!ಜಗದ್ಭರಿತವಾದ ಪರಶಿವನೊಳಗೆ ಕಿಂಕರನಾದಶಿವಭಕ್ತನೆ ಶ್ರೇಷ್ಠನೆಂದಾತ ನಮ್ಮ ಅಂಬಿಗರ ಚೌಡಯ್ಯ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-40/ವಚನ ಸಂಖ್ಯೆ-98) ಅಂಬಿಗರ ಚೌಡಯ್ಯ 12 ನೇ ಶತಮಾನದ ಬಸವಣ್ಣನವರ ಅನುಯಾಯಿ ಸಾವಿರಾರು ವರ್ಷಗಳಿಂದ ಧರ್ಮ–ದೇವರುಗಳ ಬಗ್ಗೆ ಸಮಾಜದಲ್ಲಿ ಬೇರೊರಿಂದ್ದ ಮೂಢ ನಂಬಿಕೆಗಳನ್ನೆಲ್ಲ ಬಸವಣ್ಣನವರೊಂದಿಗೆ ಅಂಬಿಗರ ಚೌಡಯ್ಯನವರು ಹೊಡೆದೊಡಿಸಲು ಪ್ರಯತ್ನ ಮಾಡುತ್ತ ವಿಚಾರ ಪರವಾದ ಮತ್ತು ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ಮಾಡಿಸಲು ಶ್ರಮಪಟ್ಟರು. ಧರ್ಮ–ದೇವರು ಕೇವಲ ಶ್ರೀಮಂತರ ಸೊತ್ತಾಗಿದ್ದ ಅಂದಿನ ಸಂದರ್ಭದಲ್ಲಿ ಪೂಜೆ–ಮೋಕ್ಷ…

0 Comments

ಶರಣ ವೀರ ಗೊಲ್ಲಾಳೇಶ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಪ್ರಪಂಚದ ಇತಿಹಾಸವನ್ನು ಅವಲೋಕಿಸಿದಾಗ 12 ನೇ ಶತಮನಾದಲ್ಲಿ ವಿಶ್ವಮಾನವ ಸಂದೇಶವನ್ನು ಸಾರಿದ ಹೆಮ್ಮಯ ಕನ್ನಡ ನಾಡಿದು. ಆ ಕಾಲಘಟ್ಟವನ್ನು ಅವಿಸ್ಮರಣೀಯವನ್ನಾಗಿ ಮಾಡಿದವರು ಬಸವಾದಿ ಶರಣರು. ಕೆಲವೇ ವರ್ಷಗಳಲ್ಲಿ ನೂರಾರು ಶಿವಶರಣರು ಜೀವನದ ಎಲ್ಲಾ ರಂಗಗಳ ಕುರಿತು ಅರ್ಥಪೂರ್ಣ ಚಿಂತನೆ ನಡೆಸಿದ ಕಾಲಘಟ್ಟವದು. ಎಲ್ಲರ ಪ್ರಮುಖ ಉದ್ದೇಶ ಮಾನವ ಕಲ್ಯಾಣವಾಗಿತ್ತು. ಬಸವಣ್ಣನವರ ನೇತೃತ್ವದಲ್ಲಿ ನಡೆದ ಚಳುವಳಿ ಕಾಯಕ ಜೀವಿಗಳ ಚಳುವಳಿ ಆಗಿತ್ತು. ಕಾಯಕ ವರ್ಗದ ಎಲ್ಲ ಜನರು ಚಳುವಳಿಯಲ್ಲಿ ಪಾಲ್ಗೊಂಡರು. ಅಂಬಿಗರ ಚೌಡಯ್ಯ, ಜೇಡರ ದಾಸಿಮಯ್ಯ, ಆಯ್ದಕ್ಕಿ ಮಾರಯ್ಯ, ಒಕ್ಕಲಿಗ ಮುದ್ದಣ್ಣ, ಕೊಟ್ಟಣದ ಸೋಮವ್ವ, ತುರುಗಾಹಿ ರಾಮಣ್ಣ, ನುಲಿಯ…

0 Comments

ಪರಮಪೂಜ್ಯ ಶ್ರೀ ಮ. ನಿ. ಪ್ರ ಡಾ. ಮಹಾಂತ ಶಿವಯೋಗಿಗಳ 7 ನೇ ಪುಣ್ಯ ಸ್ಮರಣೋತ್ಸವದ ಭಕ್ತಿಯ ನಮನಗಳು | ಶ್ರೀಮತಿ. ಅಮರವಾಣಿ ಐದನಾಳ, ಲಿಂಗಸುಗೂರು.

ಓಂ ಶ್ರೀ ಗುರುಬಸವ ಲಿಂಗಾಯ ನಮಃ ಬಸವಜ್ಯೋತಿ, ಮಹಾಂತ ಜೋಳಿಗೆಯ ಶಿವ ಶಿಲ್ಪಿ, ಶಿವಾನುಭವ ಚರವರ್ಯ ಎಂದೇ ಖ್ಯಾತರಾದ ಪೂಜ್ಯ ಶ್ರೀ ಶ್ರೀ ಶ್ರೀ ಮಹಾಂತಶಿವಯೋಗಿಗಳು ಈ ನಾಡು ಕಂಡ ಮಹಾನ್ ಚೇತನರು. ಮಾನವೀಯತೆಯ ಮಾತೃ ಹೃದಯಿಗಳು. ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನರ ಅಜ್ಞಾನ, ಮೂಡನಂಬಿಕೆಗಳನ್ನು ತೊಲಗಿಸಲು ಹಗಲಿರುಳು ಶ್ರಮಿಸಿದರು. ಮಹಾಂತ ಜೋಳಿಗೆಯನ್ನು ಹುಟ್ಟುಹಾಕಿ ಜನರಲ್ಲಿರತಕ್ಕಂತ ದುಶ್ಚಟ & ದುರ್ವ್ಯಸನಗಳನ್ನು ದೂರ ಮಾಡಿ ಸಾವಿರಾರು ಹೃದಯಗಳನ್ನು ಪರಿವರ್ತನೆ ಮಾಡಿ ಬದುಕಿಗೆ ಬೆಳಕು ತಂದರು. ಬಸವಣ್ಣ ಇವರ ಅಂಗವಾದ. ಮಡಿವಾಳ ಮಾಚಿದೇವರು ಇವರ ಮನಸ್ಸಾದರು.…

0 Comments

ವಚನಕಾರರ ಪರಿಕಲ್ಪನೆಯ ಶಿವಯೋಗ | ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಶಿವಮೊಗ್ಗ.

ಇಷ್ಟಲಿಂಗದ ಪರಿಕಲ್ಪನೆ: ಅಂಗದ ಮೇಲಣ ಲಿಂಗವ ಹಿಂಗಿ ಸ್ಥಾವರಲಿಂಗಕ್ಕೆರಗುವಭಂಗಿತರ ಮುಖವ ನೋಡಲಾಗದು. ಅದೆಂತೆಂದಡೆ;ತನ್ನ ಗಂಡನ ಬಿಟ್ಟು ಅನ್ಯ ಗಂಡರಿಗೆರಗುವಹಾದರಗಿತ್ತಿಯಂತೆ ಅವಂದಿರ ಭಕ್ತಿ.ಅಂತಪ್ಪ ಪಂಚಮಹಾಪಾತಕರಮುಖದತ್ತ ತೋರದಿರಾ ಗುಹೇಶ್ವರಾ(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-209/ವಚನ ಸಂಖ್ಯೆ-703) ಅಂಗದ ಮೇಲೆ ಧರಿಸಿದ ಲಿಂಗವನ್ನು ಹೊರತುಪಡಿಸಿ ಬೇರೆಡೆ ದೇವರನ್ನು ಹುಡುಕುವುದು, ಪೂಜಿಸುವುದು ಸಲ್ಲದು ಎಂದು ಈ ವಚನ ಹೇಳುತ್ತದೆ. ಇಂತಹ ನಡೆಗಳನ್ನು ಅತ್ಯಂತ ಆಕ್ರೋಶದಿಂದ ವಚನಕಾರರು ಖಂಡಿಸಿದ್ದಾರೆ. ಈ ವಚನಗಳನ್ನು ಗಮನಿಸಿದಾಗ ವಚನಕಾರರು ದೇವರ ವಿಚಾರದಲ್ಲಿ ಒಂದು ನಿರ್ದಿಷ್ಟತೆಯನ್ನು ಹೇರುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಅಭಿಪ್ರಾಯ ಒಪ್ಪುವಂತಹದ್ದಲ್ಲ, ಏಕೆಂದರೆ ವಚನಕಾರರು…

0 Comments

ಕಾಯಕ ನಿರತೆ ಕದಿರೆ ರೇಮವ್ವೆ | ಡಾ. ಸುಜಾತ ಅಕ್ಕಿ, ಮೈಸೂರು.

ಕನ್ನಡ ನಾಡಿನಲ್ಲಿ ಹನ್ನೆರಡನೆಯ ಶತಮಾನದಲ್ಲಿ ವಚನ ಚಳುವಳಿ ಸಮಾನತೆಯ ನೆಲೆಯಲ್ಲಿ ಅಕ್ಷರ ಕ್ರಾಂತಿ ಎಂಬ ಇಷ್ಟಲಿಂಗ ಸಾಹಿತ್ಯ ವಿಶಿಷ್ಟವಾಗಿ ಬೆಳೆಯಿತು. ಅಕ್ಷರ ಕಲಿಕೆಯು ಪ್ರತಿಯೊಬ್ಬರ ಹಕ್ಕು ಎಂದು ಸಾಬೀತು ಪಡಿಸಿದವರು ಶಿವಶರಣರು. ಬಸವಾದಿ ಪ್ರಮಥರು ನಡೆಯಲ್ಲಿ ನುಡಿಯಲ್ಲಿ ಒಂದಾದವರು. ದುಡಿತ ವರ್ಗದವರಿಗೆ ಸಮಾಜದಲ್ಲಿ ಆತ್ಮಸ್ಥೈರ್ಯವನ್ನು ತುಂಬಿದವರು ಬಸವಣ್ಣನವರು. ದಯೆ ಇರಬೇಕು ಸಕಲ ಪ್ರಾಣಿಗಳಲ್ಲಿ ಎಂದು ಮಾನವೀಯ ಮೌಲ್ಯಗಳನ್ನು ಸಾರಿ ಸಾಕ್ಷೀಕರಿಸಿದವರು. ಲಿಂಗ ಬೇಧ, ವರ್ಗಬೇಧ ತಾರತಮ್ಯ, ಸಾಂಸ್ಥಿಕವಲ್ಲದ, ಪೌರೋಹಿತ್ಯವಿಲ್ಲದ ಸರ್ವ ಸಮಾನತೆಯ ಬಸವಣ್ಣನವರ ನಿಲುವು ವಿಶ್ವಕ್ಕೆ ಮಾದರಿಯಾಗಿದೆ. ಮಹಿಳೆಯರೆಲ್ಲಾ ಅಕ್ಷರ ಕಲಿತು ವಚನಗಳನ್ನು ಬರೆದು ತಮ್ಮ ಅಭಿವ್ಯಕ್ತಿ…

0 Comments

ಚಂದಿಮರಸ ಮತ್ತು ಅವನ ಕುರಿತಾದ ಶಾಸನಗಳು | ಡಾ. ಸದಾನಂದ ಪಾಟೀಲ ಧಾರವಾಡ.

ಕರ್ನಾಟಕದ ಲಿಂಗವಂತ ಸಂಪ್ರದಾಯದ ನಾಲ್ವರು ಪ್ರಭಾವಶಾಲಿ ಅದ್ಭುತ ವ್ಯಕ್ತಿಗಳು ಕೊಂಡಗುಳಿ ಕೇಶಿರಾಜ, ಕೆಂಭಾವಿ ಭೋಗಣ್ಣ, ಬಸವಣ್ಣ ಮತ್ತು ಹರಿಹರ. ಇವರನ್ನು ಸಮಾನ ಮನಸ್ಕರೆಂದು ಗುರುತಿಸಿದರೆ ಇತಿಹಾಸ ಪುನರಾವರ್ತಿಸುತ್ತದೆ ಎಂಬ ಮಾತು ನಿಜವಾಗುತ್ತದೆ. 11 ನೇ ಶತಮಾನದ ಕೇಶಿರಾಜ, 6 ನೇ ವಿಕ್ರಮಾದಿತ್ಯನ ಆಸ್ಥಾನದಲ್ಲಿ ದಂಡನಾಯಕನೂ ಕವಿಯೂ ಆಗಿದ್ದರೆ ಈ ಅವಧಿಯಲ್ಲಿ ಬರುವ ಕೆಂಭಾವಿ ಭೋಗಣ್ಣ ಹಂಡೆ ಚಂದಿಮರಸನ ಊರಲ್ಲಿ ಸಾಮಾನ್ಯ ಭಕ್ತನೂ ವಚನಕಾರನೂ ಆಗಿದ್ದ. ಇನ್ನು 12 ನೇ ಶತಮಾನದದ ಬಸವಣ್ಣ ಬಿಜ್ಜಳ ಅರಸನಲ್ಲಿ ದಂಡನಾಯಕನೂ ಭಂಡಾರಿಯೂ ವಚನಕಾರನೂ ಆಗಿದ್ದ. 13 ನೇ ಶತಮಾನದ ಹರಿಹರ ನರಸಿಂಹ…

0 Comments

ಬದುಕಿದೆನು ಕಾಣಾ! | ನಾಡೋಜ ಡಾ. ಗೊ. ರು. ಚನ್ನಬಸಪ್ಪ, ಬೆಂಗಳೂರು.

ಆದಿಯುಗದಲ್ಲೊಬ್ಬಳು ಮಾಯಾಂಗನೆ,ಹಲವು ಬಣ್ಣದ ವಸ್ತ್ರವನುಟ್ಟುಕೊಂಡು,ಹೆಡಿಗೆ ತುಂಬ ದೇವರ ಹೊತ್ತುಕೊಂಡು,ಓ ದೇವರ ಕೊಳ್ಳಿರಯ್ಯಾ, ಓ ದೇವರ ಕೊಳ್ಳಿರಯ್ಯಾ ಎಂದಳು.ಎಂದಡೆ ಆ ದೇವರನಾರೂ ಕೊಂಬವರಿಲ್ಲ.ನಾನು ಒಂದರಿವೆಯ ಕೊಟ್ಟು, ಆ ದೇವರ ಕೊಂಡು,ಎನ್ನ ಹೆತ್ತ ತಂದೆ ಬಸವಣ್ಣನ ಪ್ರಸಾದದಿಂದಬದುಕಿದೆನು ಕಾಣಾ, ಕಲಿದೇವರದೇವಾ.(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-206/ವಚನ ಸಂಖ್ಯೆ-498) ಹನ್ನೆರಡನೆಯ ಶತಮಾನದ ಮಡಿವಾಳ ಮಾಚಿತಂದೆವರು ಈ ನುಡಿ ಗೌರವದ ಕಾರಣ ಪುರುಷ ಬಸವಣ್ಣನವರ ಜಯಂತಿಯನ್ನು ಎಲ್ಲ ಕಡೆ ಆಚರಿಸುತ್ತಿದ್ದೇವೆ. ಈ ನೆಪದಲ್ಲಾದರೂ ಆ ಜೀವನ ಜ್ಯೋತಿಯ ಸ್ಮರಣೆಯನ್ನು ಜೀವಂತವಾಗಿ ಇಟ್ಟಿದ್ದೇವೆಂಬುದೇ ಒಂದು ಸಮಾಧಾನ. ಹನ್ನೆರಡನೆಯ ಶತಮಾನದಲ್ಲಿ ಸೃಷ್ಟಿಯಾದ ವಚನೋದ್ಯಾನದ ವಿಚಾರ ಫಲವೃಕ್ಷಗಳಲ್ಲಿ…

0 Comments

ಅನುಭವ ಮಂಟಪಕೆ ಅನುಭಾವಿ ಬಸವಣ್ಣ | ಡಾ. ಸುಜಾತಾ ಅಕ್ಕಿ, ಮೈಸೂರು.

ಜಿಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯಲ್ಲಿ ಬೆವರ ಹನಿಯ ದುಡಿತದ ಜನರಿಗೆ ಶ್ರಮದ ಮಹತ್ವ ಮತ್ತು ಘನತೆಯನ್ನು ಎತ್ತಿ ಹಿಡಿದವರು ಅಣ್ಣ ಬಸವಣ್ಣನವರು. ಶಿವಶರಣರೊಂದಿಗೆ ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಲಿಂಗ ತಾರತಮ್ಯವಿಲ್ಲದ, ವರ್ಗ ಬೇಧವಿಲ್ಲದ, ಜಾತಿರಹಿತ, ಪ್ರಾದೇಶಿಕತೆ ಅಸಮಾನತೆವಿಲ್ಲದ, ಭಾಷಾ ಬೇಧವಿಲ್ಲದೆ ಸರ್ವ ಸಮಾನತೆಯ ನೆಲೆಯಲ್ಲಿ ಅಕ್ಷರ ಕಲಿಸಿ ಆತ್ಮಸ್ಥೈರ್ಯ ತುಂಬಿದವರು. ನೊಂದ ಮನಸ್ಸುಗಳಿಗೆ ಸಾಂತ್ವನ ನೀಡಿ ಗೌರವಿಸಿದರು. ಶ್ರಮಿಕರಿಗೆ ಮನ ಮುಟ್ಟುವಂತೆ ಮಾತನಾಡಿ ಅವರ ಮನೆಯಲ್ಲಿ ಅಂಬಲಿಯನ್ನು ಕುಡಿದು ಮೈದಡವಿದ ಮಹಾನ್ ವ್ಯಕ್ತಿ ವಿಶ್ವಗುರು ಬಸವಣ್ಣನವರು. ಜನಪದರೇ ವಚನಕಾರರು, ಬಹುತೇಕ ವಚನಕಾರರೇ ಜನಪದರು. ಸೃಜನಶೀಲ ಜನಪದ ಮನಸ್ಸುಗಳು ವಚನಕಾರರ…

0 Comments

ಅಕ್ಕ ಮಹಾದೇವಿಯ ವ್ಯಕ್ತಿತ್ವ: ತಾತ್ವಿಕ ನಿಲುವುಗಳು | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದಎನ್ನ ತನು ಶುದ್ಧವಾಯಿತ್ತು.ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದಎನ್ನ ಮನ ಶುದ್ಧವಾಯಿತ್ತು.ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದಎನ್ನ ಪ್ರಾಣ ಶುದ್ಧವಾಯಿತ್ತು.ಅಯ್ಯಾ, ನಿಮ್ಮ ಅನುಭಾವಿಗಳುಎನ್ನ ಒರೆದೊರೆದು ಆಗುಮಾಡಿದ ಕಾರಣಚೆನ್ನಮಲ್ಲಿಕಾರ್ಜುನಯ್ಯಾ,ನಿಮಗಾನು ತೊಡಿಗೆಯಾದೆನು.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-10/ವಚನ ಸಂಖ್ಯೆ-27) ತತ್ವನಿಷ್ಠೆ, ಜ್ಞಾನ, ವೈರಾಗ್ಯಗಳಿಂದ ಹಂಗಿನ ಅರಮನೆಯ ತೊರೆದು ಅರಿವಿನ ಮನೆಯತ್ತ ಪಯಣ ಬೆಳಸಿದ ಮಹಾ ಶಿವಯೋಗಿಣಿ, ತತ್ವ ಶಿಖಾಮಣಿ ವೈರಾಗ್ಯ ನಿಧಿ ಅಕ್ಕ ಮಹಾದೇವಿಯವರು ಈ ಭವಕ್ಕೆ ಬಂದ ಮಹಾ ಬೆಳಕು. ಸ್ತ್ರೀ ಕುಲರತ್ನ, ಸ್ತ್ರೀ ಕುಲದ ಸ್ವಾಭಿಮಾನದ ಪ್ರತೀಕವಾದ ಅಕ್ಕ ಮಹಾದೇವಿಯವರ ವ್ಯಕ್ತಿತ್ವವೇ ಅನುಪಮವಾದದು. ತನುವಿನೊಳೊಗಿದ್ದು ತನುವ…

0 Comments

ಬಸವಣ್ಣ ವೈಚಾರಿಕ ಚಿಂತಕ, ಪುರಾಣ ಪುರುಷನಲ್ಲ | ಪ್ರೊ. ಬಸವರಾಜ ಕಡ್ಡಿ, ಜಮಖಂಡಿ.

ಬಸವಣ್ಣನವರು ಪುರಾಣ ಪುರುಷನಲ್ಲ, ಪವಾಡ ಪುರುಷನಲ್ಲ, ಉದ್ಭವ ಮೂರ್ತಿಯಲ್ಲ. ಅವರು ಮೌಲ್ಯಗಳ ಮೊತ್ತ, ತತ್ತ್ವಗಳ ತೇಜ, ಆದರ್ಶಗಳ ಆಗರ, ಅರಿವಿನ ಓಗರ, ಆಚಾರದ ಅರಸ, ಅನುಭಾವದ ಶಿಖರವಾಗಿದ್ದಾರೆ. ಬಸವಣ್ಣನವರು ದಕ್ಷ ಆಡಳಿತಗಾರ, ಅರ್ಥಶಾಸ್ತ್ರಜ್ಞ, ರಾಜನೀತಿಜ್ಞ, ನೈತಿಕತಜ್ಞ, ಸಂಘಟನಕಾರ, ಸಮಾನತೆಯ ಹರಿಕಾರ, ಸಮನ್ವಯತೆಯ ಸಾಧಕ, ಭಕ್ತಿ ಭಾಂಡಾರಿ, ಕಾಯಕಯೋಗಿ, ಮಹಾದಾಸೋಹಿ, ಅನುಭವ ಮಂಟಪವೆಂಬ ಧಾರ್ಮಿಕ ಸಂಸತ್‌ಶಿಲ್ಪಿ, ತಾತ್ವಿಕ ತಳಹದಿಯ ಮೇಲೆ ಸಾತ್ವಿಕ ಸಮಾಜ ಕಟ್ಟಿದ ಸಮಾಜ ಶಿಲ್ಪಿ, ದೈವತ್ವದೆಡೆಗಿನ ಶಬ್ದಸೋಪಾನ ಕಟ್ಟಿದ ವಚನಶಿಲ್ಪಿ, ಸತ್ಯಶೋಧಕ, ಶ್ರೇಷ್ಠ ತತ್ತ್ವಜ್ಞಾನಿ, ಮಹಾದಾರ್ಶನಿಕ, ಸಕಾರಾತ್ಮಕ ವಿಚಾರವಾದಿ, ವೈಜ್ಞಾನಿಕ ಮನೋಭಾವಿ ಮತ್ತು ವೈಚಾರಿಕ ಚಿಂತಕರಾಗಿದ್ದಾರೆ.…

0 Comments