ಪರಮದಾಸೋಹಿ ಲಿಂಗಾಂಗಯೋಗಿ ನೀಲಾಂಬಿಕೆ ತಾಯಿಯವರು | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಎನಗೆ ಲಿಂಗವು ನೀವೆ ಬಸವಯ್ಯ,ಎನಗೆ ಸಂಗವೂ ನೀವೆ ಬಸವಯ್ಯ,ಎನಗೆ ಪ್ರಾಣವು ನೀವೆ ಬಸವಯ್ಯ,ಎನಗೆ ಪ್ರಸಾದವು ನೀವೆ ಬಸವಯ್ಯ,ಎನಗೆ ಪ್ರಭೆ ಮೂರ್ತಿಯೂ ನೀವೆ ಬಸವಯ್ಯ,ಎನಗೆ ಸಂಗಯ್ಯನು ನೀವೆ ಬಸಯ್ಯ(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-334/ವಚನ ಸಂಖ್ಯೆ-876) ಬಸವಣ್ಣನವರ ಜೀವನದ ಒಂದು ಪ್ರಮುಖ ಭಾಗ ಮತ್ತು ಅಂತರಂಗದ ಸಖಿ ನೀಲಮ್ಮ ತಾಯಿಯವರು. ವಿದ್ಯೆ, ವಿನಯ ಮತ್ತು ಸಂಸ್ಕೃತಿಗಳ ಸಂಗಮವಾದ ನೀಲಮ್ಮನವರು ಬಸವಣ್ಣನವರ ಭಕ್ತಿ, ಆತ್ಮಶಕ್ತಿ ಮತ್ತು ವ್ಯಕ್ತಿತ್ವಕ್ಕೆ ಮಾರುಹೋಗಿ ಅವರಿಗೆ ತಮ್ಮನ್ನ ತಾವು ಸಂಪೂರ್ಣವಾಗಿ ಅರ್ಪಿಸಿಕೊಂಡವರು. ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದರೂ ಸಹ ಸರಳ ಜೀವನವನ್ನು ತಮ್ಮದಾಗಿಸಿಕೊಂಡ ನೀಲಮ್ಮ ತಾಯಿಯವರು…

1 Comment

ರಗಳೆ ಕವಿ ಹರಿಹರನ “ಬಸವರಾಜದೇವರ ರಗಳೆ: ಒಂದು ಸಾಂಸ್ಕೃತಿಕ ಮುಖಾಮುಖಿ” | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಮತ್ತೆ ಕೇಳಲೆ ಕುಮಾರವ್ಯಾಸ ಬಸವನಿಪ್ಪತ್ತೈದು ಸ್ಥಲದ ರಗಳೆಯ ಮಾಡಿ ನಲಿವುತ್ತುದಾತ್ತಭಕ್ತಿಯೊಳಾ ವಿರೂಪಾಕ್ಷ ನೆಡೆಗೊಯ್ಯಲಿನಿದು ಮಿಗಿಲಾದುದೆಂದುಹೊತ್ತಗೆಯ ತೆಗೆದುಕೊಂಡುರೆ ನುಂಗಿದಂ ಚೆನ್ನೆಯಿತ್ತ ಪಾಲ್ಗುಡಿದಂತೆ ಸರ್ವರುಂ ಪೊಗಳಿದರುಚಿತ್ತಜಮದಾರಣ್ಯದಾವ ಹರಿಹರದೇವ ಕವಿಚಕ್ರವರ್ತಿಯೆಂದು(ಹರಿಹರ ಕವಿಯ ಬಸವರಾಜದೇವರ ರಗಳೆ/ಟಿ. ಎಸ್.‌ ವೆಂಕಣ್ಣಯ್ಯ/ಪೀಠಿಕೆ/ಪುಟ ಸಂಖ್ಯೆ. xiii) 12 ನೇ ಶತಮಾನದ ಬಸವಾದಿ ಶರಣರ ಪಕ್ಷಿನೋಟ ಕಣ್ಣೆದುರಿಗೆ ಬಂದಾಗಲೆಲ್ಲಾ ಕನ್ನಡದ ಕವಿ ಹರಿಹರ ಮತ್ತು ತೆಲುಗು ಭಾಷೆಯ ಕವಿ ಪಾಲ್ಕುರಿಗೆ ಸೋಮನಾಥ ಹಾಗೂ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಕೋಲ್ಮಿಂಚಿನಂತೆ ಬೆಳಗುತ್ತಾರೆ. ಶರಣರ ಇತಿಹಾಸ ಮತ್ತು ಲಿಂಗಾಯತ ಧರ್ಮತತ್ವಗಳ ಅನ್ವೇಷಣೆಯಲ್ಲಿ ಪೂರಕವಾಗುವಂತೆ ತೆಲುಗಿನಲ್ಲಿ ಬರೆದ ಮೂರು ಉತ್ಕೃಷ್ಠ ಗ್ರಂಥಗಳೆಂದರೆ ಹರಿಹರನ ರಗಳೆಗಳು,…

0 Comments

ವಚನ ಪಯಣದ ಬೆಳಗು | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ನಮ್ಮ ಬದುಕಿನ ತಲ್ಲಣಗಳನ್ನು  ಸಂಘರ್ಷಗಳನ್ನು ತರ್ಕಿಸುವಾಗ  ಅನೇಕ ತಾತ್ವಿಕ ಧಾರೆಗಳು ಮುಖಮುಖಿಯಾಗುತ್ತವೆ, ಶರಣರ ಹಣತೆ ಬೆಳಕು ಜ್ಯೋತಿ ಒಂದು ವ್ಯವಸ್ಥಿತವಾದ  ವೈಚಾರಿಕ  ಆಕರವದು. ಭೌತಿಕ ಮತ್ತು ಅಧ್ಯಾತ್ಮದಲ್ಲಿ  ಇದಕ್ಕೆ ನಾನಾ ಅರ್ಥಗಳಿವೆ. ನಮ್ಮ ಸಂಸ್ಕೃತಿಯನ್ನು ಎತ್ತರಿಸುವ, ವಿಶಾಲವಾಗಿಸುವ ಪರಿಕ್ರಮವು ಇದರಲ್ಲಿ ಅಡಗಿದೆ. ದೀಪವನ್ನು ಹಚ್ಚುವುದು ಕೇವಲ ಆಚರಣೆಯಲ್ಲ. ನಮ್ಮ ಅಂತರಂಗದ ಜ್ಯೋತಿಯನ್ನು ಹೊರಗೆ ಬೆಳಗಿಸುವ ಒಂದು ಅವಕಾಶವದು. ಹಣತೆ ಎಂಬ ಪದವೇ ಶರಣರ ಬಯಲಿನಲ್ಲಿ  ಮನುಷ್ಯರು ಕಂಡುಕೊಂಡ ಸಂಸ್ಕೃತಿಯಾಗಿರಬಹುದು. ಪಂಚಭೂತಗಳಿಂದಾದ ಮನುಷ್ಯನ ಈ ದೇಹವನ್ನು ಹಣತೆಗೆ ಹೋಲಿಸಿ  ಅದರಂತೆ ಪರೋಪಕಾರಿಯಾಗಿ ಬೆಳಗಬೇಕು. ವಚನಕಾರರು ಪ್ರಣತಿ ಜ್ಯೋತಿ ತೈಲವನ್ನು ವಿಶೇಷವಾಗಿ ಕಂಡಿದ್ದಾರೆ. ಅರಿವಿನ…

0 Comments

ಮಹಾನವಮಿ|ವಿಜಯದಶಮಿ: ಸತ್ಯ ಶರಣರ ಕಗ್ಗೊಲೆಯಾದ ದಿನ | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಸತ್ಯ ಶರಣರ ಕಗ್ಗೊಲೆಯಾದ ದಿನ. ವೈದಿಕರ ವಂಚನೆಗೆ ಸತ್ಯ ಸತ್ತ ದಿನ. ಶರಣರಿಗೆ ಮರಣವು ಮಹಾನವಮಿಯಾಯಿತು! ವೈದಿಕರಿಗೆ ವಿಜಯೋತ್ಸವವಾಯಿತು! ಲಿಂಗಾಯತ ಧರ್ಮದವರಾದ ನಾವು ವಿಜಯೋತ್ಸವ ಆಚರಿಸುವುದು ಸತ್ಸಂಪ್ರದಾಯವೋ ಅಥವಾ ಸತ್ತ ಸಂಪ್ರದಾಯದವೋ ಸ್ವಲ್ಪ ಯೋಚಿಸಿ. ಭಾರತ ಅಷ್ಟೇ ಅಲ್ಲಾ ಇಡೀ ಪ್ರಪಂಚದ ಇತಿಹಾಸದಲ್ಲಿ 12 ನೆ ಶತಮಾನ ಅತ್ಯಂತ ಮಹತ್ವಪೂರ್ಣವಾದುದು. ಅಜ್ಞಾನ, ಜಾತೀಯತೆ, ಮತಾಂಧತೆ, ಶೋಷಣೆ, ಮೌಡ್ಯಗಳಿಂದ ಮುಳುಗಿಹೋಗಿದ್ದ ಸಮಾಜವನ್ನು ಮೇಲೆತ್ತಲು ಬಸವಣ್ಣನವರು ರಾಜಿ ಇಲ್ಲದ ಬದ್ಧತೆ, ಪ್ರಶ್ನಾತೀತವಾದ ಜನಪರ ಕಾಳಜಿಯ ಮೂಲಕ ಮಾಡಿದ ಪ್ರಯತ್ನ-ಪ್ರಯೋಗಗಳು ಪ್ರಪಂಚದ ಎಲ್ಲ ಆಡಳಿತಗಾರರ ಆದರ್ಶ ಎನ್ನುವುದನ್ನು ನಾವು ಗಮನಿಸಬೇಕು. ಕನ್ನಡ…

0 Comments

ಕಾಯಕ ನಿಷ್ಠೆಯಿಂದ ಅಂತರಂಗದ ಚೈತನ್ಯವನ್ನರಳಿಸಿದ ಶರಣ ಹೂಗಾರ ಮಾದಯ್ಯ ಮತ್ತು ಶರಣೆ ಮಾದೇವಿಯವರು | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ವಚನಾಂಕಿತ : ವಚನಗಳು ಲಭ್ಯವಾಗಿಲ್ಲ.ಜನ್ಮಸ್ಥಳ    : ತಿಳಿದು ಬಂದಿಲ್ಲ.ಕಾಯಕ    : ಹೂಗಾರ (ಶರಣರ ಮನೆಗಳಿಗೆ ಹೂ-ಪತ್ರೆಗಳನ್ನು ನೀಡುವುದು).ಐಕ್ಯಸ್ಥಳ    : ಬಸವ ಕಲ್ಯಾಣ, ಬೀದರ ಜಿಲ್ಲೆ. ಶರಣರ ನೆನೆದಾರ | ಸರಗೀಯ ಇಟ್ಟಾಂಗ ||ಅರಳು ಮಲ್ಲಿಗೆ | ಮುಡಿದ್ಹಾಂಗ ||ಕಲ್ಯಾಣ ಶರಣರ | ನೆನೆಯೋ ನನ ಮನವೇ || ನಮ್ಮ ಜನಪದರು ಎಷ್ಟು ಸೊಗಸಾಗಿ ಶರಣರನ್ನು ನೆನಪಿಸಿಕೊಂಡು ಹಾಡಿದ್ದಾರೆ. ಮುಗ್ಧ ಜನಪದರಿಗೆ ಶರಣರನ್ನು ಕುರಿತು ಹಾಡುವುದೆಂದರೆ ಎಲ್ಲಿಲ್ಲದ ಪ್ರೀತಿ. ಅನುಭಾವದ ಹಿನ್ನೆಲೆಯಲ್ಲಿ ಮುಗ್ಧ ಶರಣರ ಕುರಿತು ರಚಿಸಿದ ಹಾಡು ಯಾವುದೇ ವಿಚಾರದಲ್ಲಿ ಶಿವನ ಪ್ರಕಾಶದಂತೆ…

1 Comment

ವೀರಗಂಟಿ ಮಡಿವಾಳ ಮಾಚಯ್ಯನವರು | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

12 ನೆಯ ಶತಮಾನದಲ್ಲಿ ಶರಣರು ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮಬಾಳು ಒದಗಿಸಲು ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು. ಅಂತಹ ಶರಣರ ಅಗ್ರಗಣ್ಯರಲ್ಲಿ ಮಡಿವಾಳ ಮಾಚಯ್ಯನವರು ಒಬ್ಬರು. ಶರಣರ ಸಮುದಾಯದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಬೆಳಗಿದವರು. ಮಡಿವಾಳ ಮಾಚಯ್ಯನವರದು ಬಹುಮುಖ ವ್ಯಕ್ತಿತ್ವ. ವೀರಶ್ರೀ, ಜ್ಞಾನಪ್ರಭೆ, ಸತ್ಯ, ನಿಷ್ಠೆ, ನ್ಯಾಯನಿಷ್ಟೂರತೆ, ನಿರಹಂಕಾರ,  ನಿರ್ವಂಚಕತ್ವ ಮುಂತಾದ ಸತ್ವಗಳ ಸಂಕಲನವೇ ಮಡಿವಾಳ ಮಾಚಯ್ಯನವರು. ಸಾಮಾನ್ಯವಾಗಿ ಎಲ್ಲ ಶರಣರು ಮಡಿವಾಳ ಮಾಚಯ್ಯನವರನ್ನು ಮಾಚಿತಂದೆ ಎಂದೇ ಕರೆದಿದ್ದಾರೆ. ಶರಣರಲ್ಲಿ ಪ್ರಮುಖರೆನಿಸಿದ ಮಾಚಿತಂದೆಯವರು  ಬಸವಣ್ಣನವರ ಎಲ್ಲ ಕಾಯಕದಲ್ಲಿಯೂ ಸಹಕಾರ ನೀಡಿದರು. ದಾಸೋಹ, ಕಾಯಕ, ವಚನ ನಿರ್ಮಾಣ, ಸಾಮಾಜಿಕ ಪರಿವರ್ತನೆ…

0 Comments

ಬಸವ ಪುರಾಣ, ಹನ್ನೆರಡು ಜ್ಯೋತಿರ್ಲಿಂಗ ಮತ್ತು ಬಸವತತ್ವ | ಯೋಗಮಯಿ ಸತ್ಯಮೇಧಾವಿ, ಬೆಳಗಾವಿ.

ಅರಿವರತು ಮರಹು ನಷ್ಟವಾದರೆ ಭಕ್ತಆಚಾರವರತು ಅನಾಚಾರ ನಷ್ಟವಾದರೆ ಜಂಗಮಅರ್ಪಿತವರತು ಅನರ್ಪಿತ ನಷ್ಟವಾದರೆ ಪ್ರಸಾದಿಪ್ರಸಾದವರತು ಪದಾರ್ಥ ನಷ್ಟವಾದರೆ ಪರಿಣಾಮಿಪರಿಣಾಮವರತು ಪರಮಸುಖಿಯಾದರೆಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯ. ಈ ವಚನವನ್ನು ಸಹಸ್ರ ಬಾರಿ ಬರೆದರೂ ನನಗೆ ಬೇಸರವಿಲ್ಲ, ಕಾರಣ ಅದು ಹುದುಗಿರಿಸಿಕೊಂಡ ಅಪಾರವಾದ ಸಿರಿ ಅಂಥದ್ದು. ಇಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿರುವ ಬಸವ ಪುರಾಣದಲ್ಲಿ ಭಾಗಿಯಾಗಿದ್ದೆ. ಬಸವಣ್ಣ ಮತ್ತು ಪುರಾಣ ಇವೆರಡಕ್ಕೂ ಯಾವ ಸಂಬಂಧ? ಭೀಮ ಕವಿ ಬಿಂಬಿಸಿದ ಪವಾಡಗಳ ಸರಮಾಲೆ ಅದೆಷ್ಟು ವರ್ತಮಾನಕ್ಕೆ ಪ್ರಸ್ತುತ? ಮುಂತಾಗಿ ನನ್ನ ಮನಸ್ಸು ಚಿಂತಿಸತೊಡಗಿತ್ತು. ಹಾಗೆಯೇ ನಾವು…

1 Comment

ಗುಪ್ತಶರಣ ಅಜಗಣ್ಣ ಮತ್ತು ಬೌದ್ಧಿಕ ಪ್ರಖರತೆಯ ಮುಕ್ತಾಯಕ್ಕ: ಅಣ್ಣ-ತಂಗಿಯರ ಸುಜ್ಞಾನದ ಅನುಪಮ ವಚನ ಪಯಣ | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಎನ್ನ ಭಾವಕ್ಕೆ ಗುರುವಾದನಯ್ಯಾ ಬಸವಣ್ಣನು.ಎನ್ನ ನೋಟಕ್ಕೆ ಲಿಂಗವಾದನಯ್ಯಾ ಚೆನ್ನಬಸವಣ್ಣನು.ಎನ್ನ ಜ್ಞಾನಕ್ಕೆ ಜಂಗಮವಾದನಯ್ಯಾ ಪ್ರಭುದೇವರು.ಎನ್ನ ಪರಿಣಾಮಕ್ಕೆ ಪ್ರಸಾದವಾದನಯ್ಯಾ ಮರುಳಶಂಕರದೇವರು.ಎನ್ನ ಹೃದಯಕ್ಕೆ ಮಂತ್ರವಾದನಯ್ಯಾ ಮಡಿವಾಳಯ್ಯನು.ಇಂತೀ ಐವರ ಕಾರುಣ್ಯಪ್ರಸಾದವ ಕೊಂಡುಬದುಕಿದೆನಯ್ಯಾ ಅಜಗಣ್ಣತಂದೆ.(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-396 / ವಚನ ಸಂಖ್ಯೆ-1104) ಶ್ರೇಣೀಕೃತ ವರ್ಗಭೇದ ಮತ್ತು ಲಿಂಗ ಅಸಮಾನತೆ ತಾಂಡವವಾಡುತ್ತಿದ್ದ 12 ನೇ ಶತಮಾನದ ಕಾಲಘಟ್ಟದಲ್ಲಿ ವಚನ ಸಾಹಿತ್ಯವನ್ನು ಉತ್ತುಂಗಕ್ಕೇರಿಸಿದವರಲ್ಲಿ ಬಸವಾದಿ ಶರಣರು ಪ್ರಮುಖರು. “ಶಬ್ದೋ ಕೋ ಊಂಚಾಯಿ ದೋ … ಆವಾಜ ಕೋ ನಹಿ” ಎನ್ನುವಂತೆ ಇಡೀ ಪ್ರಪಂಚಕ್ಕೆ ತಮ್ಮ ಅಕ್ಷರಗಳ ಅನುಪಮ ಜೋಡಣೆಯೊಂದಿಗೆ ತಮ್ಮ ನಡೆ-ನುಡಿ…

0 Comments

ಕಾಯಕಯೋಗಿ ಶರಣ ನುಲಿಯ ಚಂದಯ್ಯನವರು | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ವಚನಾಂಕಿತ: ಚಂದೇಶ್ವರಲಿಂಗ.ಜನ್ಮಸ್ಥಳ: ಶಿವಣಗಿ, ಸಿಂಧಗಿ ತಾಲೂಕ, ವಿಜಯಪುರ ಜಿಲ್ಲೆ.ಕಾಯಕ: ಹಗ್ಗ ಮಾಡಿ ಮಾರುವುದು.ಐಕ್ಯಸ್ಥಳ: ನುಲೇನೂರು (ಪದ್ಮಾವತಿ), ಹೊಳಲ್ಕೆರೆ ತಾಲೂಕ, ಚಿತ್ರದುರ್ಗ ಜಿಲ್ಲೆ. ಆವಾವ ಕಾಯಕದಲ್ಲಿ ಬಂದಡೂ ಭಾವಶುದ್ಧವಾಗಿಗುರುಲಿಂಗ-ಜಂಗಮಕ್ಕೆ ಮಾಡುವುದೇ ಶಿವಪೂಜೆ,ಮಾಡುವ ಮಾಟವಿಲ್ಲದೆ ಮಾತಿಂಗೆ ಮಾತಾಡುವುದುಅದೇತರ ಪೂಜೆ?ಅದು ಚಂದೇಶ್ವರಲಿಂಗಕ್ಕೆ ಒಪ್ಪವಲ್ಲ,ಮಾಡಿವಾಳಯ್ಯಾ.(ಸಮಗ್ರ ವಚನ ಸಂಪುಟ: ಏಳು-2021 / ಪುಟ ಸಂಖ್ಯೆ-450 / ವಚನ ಸಂಖ್ಯೆ-1225) ಇಡೀ ಭಾರತವೇ “One India One Constitution” “ಒಂದೇ ದೇಶ ಒಂದೇ ಸಂವಿಧಾನ” ಎನ್ನುವ ಮಂತ್ರವನ್ನು ಪಠಿಸುತ್ತಿದೆ. ಈ ನಿಟ್ಟಿನಲ್ಲಿ ಇಂದಿನ ಭಾರತದ ಸಂಕ್ರಮಣ ಕಾಲಘಟ್ಟದಲ್ಲಿ 12 ನೇ ಶತಮಾನದ ಬಸವಾದಿ ಶರಣರನ್ನು ಇಂದು…

3 Comments

ಎಡೆಯೂರು ಸಿದ್ಧಲಿಂಗೇಶ್ವರರ ಬಸವ (ತತ್ವ) ನಿಷ್ಠೆ | ಶ್ರೀ. ಪ್ರಕಾಶ ಗಿರಿಮಲ್ಲನವರ, ಬೆಳಗಾವಿ.

12 ನೇ ಶತಮಾನದಲ್ಲಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ ಧರ್ಮಗುರು ಬಸವಣ್ಣನವರ ಬಗ್ಗೆ ಎಡೆಯೂರು ಸಿದ್ಧಲಿಂಗೇಶ್ವರಿಗೆ ಅಪಾರ ಭಕ್ತಿ ಗೌರವ. ತಮ್ಮ ಅನೇಕ ವಚನಗಳಲ್ಲಿ ಅತ್ಯಂತ ವಿನಮ್ರರಾಗಿ ತಮ್ಮ ಬಸವನಿಷ್ಠೆಯನ್ನು ಅಭಿವ್ಯಕ್ತಿಸಿದ್ದಾರೆ. ಈ ಪರಂಪರೆಯನ್ನು ಇನ್ನೂ ಅರ್ಥವತ್ತಾಗಿ ಮುಂದುವರಿಸಿದವರು ಶ್ರೀ ಸಿದ್ಧಲಿಂಗೇಶ್ವರರು. ಸಿದ್ಧಲಿಂಗೇಶ್ವರರ ಶಿಷ್ಯ-ಪ್ರಶಿಷ್ಯ ಪರಂಪರೆಯಲ್ಲಿ ಚನ್ನಂಜೆದೇವ ಎನ್ನುವ ಸಂಕಲನಕಾರ "ಬಸವಸ್ತೋತ್ರದ ವಚನಗಳು" ಎಂಬ ವಿಶಿಷ್ಟ ವಚನ ಸಂಕಲನವನ್ನೇ ರೂಪಿಸಿರುವುದು ಗಮನಾರ್ಹ. ಶ್ರೀ ಸಿದ್ಧಲಿಂಗೇಶ್ವರರಿಗೆ ಲಿಂಗಾಯತ ಧರ್ಮದ ಸಮಗ್ರ ಇತಿಹಾಸ ತಿಳಿದಿತ್ತು. ಹೀಗಾಗಿ ಈ ಧರ್ಮದ ಸ್ಥಾಪಕರು ಯಾರು? ಯಾರಿಂದ ತಾವು ಪ್ರಭಾವಿತರಾದೆವು? ಯಾರ ಸ್ಮರಣೆಯಿಂದ ನಮ್ಮ ಬದುಕು…

0 Comments