ಶರಣ ಶಂಕರ ದಾಸಿಮಯ್ಯನವರು | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.
12 ನೇ ಶತಮಾನದಲ್ಲಿ ಬಾಳಿ ಬದುಕಿದ ಒಬ್ಬೊಬ್ಬ ಶರಣರ ಚರಿತ್ರೆ ಅಮೋಘವಾದುದಾಗಿದೆ. ಕಾಯಕಯೋಗಿಗಳಾದ ಅವರು ಕಾಯಕದಿಂದಲೇ ಜೀವನ್ಮುಕ್ತಿಹೊಂದಿದವರು. ಕಾಯಕಯೋಗದಿಂದ ಶಿವಯೋಗ ಸಾಧಿಸಿದ ಮಹಾತ್ಮರವರು. “ಕಾಯಕ” ಮತ್ತು “ಲಿಂಗಪೂಜೆ” ಇವರ ಬಾಹ್ಯ ಮತ್ತು ಅಂತರಂಗದ ಪರಂಜ್ಯೋತಿಗಳಾಗಿದ್ದವು. ಕಾಯಕದಿಂದ ದೊರೆತ “ಅನುಭಾವ” ಲಿಂಗಪೂಜೆಯಿಂದ ದೊರೆತ “ಅನುಭಾವ” ದಿಂದ ಶರಣರು ಅನಿರ್ವಚನೀಯವಾದ ಪರಮಾನಂದ ಅನುಭವಿಸಿದವರು. ಅಂತಹ ಶಿವಶರಣರಲ್ಲಿ “ಶರಣ ಶಂಕರ ದಾಸಿಮಯ್ಯ” ನವರು ಒಬ್ಬರು. ನದಿಗಳೆಲ್ಲವೂ ಹರಿದು ಸಮುದ್ರವನ್ನು ಸೇರುವಂತೆ ಎಲ್ಲ ಶರಣರು ಬಸವಣ್ಣನೆಂಬ ಸಾಗರವನ್ನೇ ಕೂಡಿದರು. ಬಸವಣ್ಣನೆಂಬ ಚುಂಬಕ ಶಕ್ತಿ ಉತ್ತರ-ದಕ್ಷಿಣ ಧ್ರವಗಳನ್ನೆಲ್ಲ ತನ್ನತ್ತ ಸೆಳೆದುಕೊಂಡಿದ್ದು 12 ನೇ ಶತಮಾನದ…





Total views : 67055