ಶರಣೆ ಶಿರೋಮಣಿ ಅಕ್ಕ ನಾಗಮ್ಮನವರು | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಮನದೊಡೆಯ ಮಹಾದೇವ ಮನವ ನೋಡಿಹೆನೆಂದುಮನುಜರ ಕೈಯಿಂದ ಒಂದೊಂದ ನುಡಿಸುವನು.ಇದಕ್ಕೆ ಕಳವಳಿಸದಿರು ಮನವೆ, ಕಾತರಿಸದಿರು ತನುವೆ,ನಿಜವ ಮರೆಯದಿರು ಕಂಡಾ, ನಿಶ್ಚಿಂತನಾಗಿರು ಮನವೆ.ಬಸವಣ್ಣಪ್ರಿಯ ಚೆನ್ನಸಂಗಯ್ಯನು ಬೆಟ್ಟದನಿತಪರಾಧವನುಒಂದು ಬೊಟ್ಟಿನಲ್ಲಿ ತೊಡೆವನು.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-311/ವಚನ ಸಂಖ್ಯೆ-798) ಮನಸಿದ್ದರೆ ಮಾರ್ಗ ಎಂಬ ಗಾದೆ ಮಾತಿದೆ, ಮನಸ್ಸಿಗೆ ಮಹಾದೇವನೇ ಒಡೆಯ ಅಂತ ಅಕ್ಕನಾಗಮನವರು ಮನಸ್ಸಿನ ಆಗಾಧ ಶಕ್ತಿಯ ಬಗ್ಗೆ ಈ ವಚನದಲ್ಲಿ ಹೇಳಿದ್ದಾರೆ. ಈ ವಚನ ಅವರ ಘನ ವ್ಯಕ್ತಿತ್ವವನ್ನ ಮತ್ತು ಉಚ್ಛ ವಿಚಾರವನ್ನು ತೋರಿಸುವ ಕನ್ನಡಿಯಂತೆ ಇದೆ. ಅಕ್ಕ ನಾಗಮ್ಮನವರದು 12 ನೇ ಶತಮಾನದಲ್ಲಿನ ಶಿವಶರಣೆಯರಲ್ಲಿ ಅಗ್ರಗಣ್ಯ ಹೆಸರು. ಬಸವಾದಿ ಶರಣರ…

0 Comments

ಬಸವಾದಿ ಶಿವ-ಶರಣರ ದೃಷ್ಟಿಯಲ್ಲಿ ಆಚಾರ-ವಿಚಾರ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಕಲ್ಯಾಣವೆಂಬ ಪ್ರಣತೆಯಲ್ಲಿಭಕ್ತಿರಸವೆಂಬ ತೈಲವನೆರೆದು,ಆಚಾರವೆಂಬ ಬತ್ತಿಗೆಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲುತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ!ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾಅಸಂಖ್ಯಾತ ಭಕ್ತಗಣಂಗಳು.ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ?ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ?ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯಸಂಗನಬಸವಣ್ಣನ ಮಹಿಮೆಯ ನೋಡಾಸಿದ್ಧರಾಮಯ್ಯಾ.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-396/ವಚನ ಸಂಖ್ಯೆ-1059) ಜಗತ್ತಿನ ಶ್ರೇಷ್ಠ ಅನುಭಾವಿಗಳಲ್ಲಿ ಜ್ಞಾನ ವೈರಾಗ್ಯ ಮೂರ್ತಿಗಳಾದ ಅಲ್ಲಮ ಪ್ರಭುದೇವರು ಒಬ್ಬರು. ಪ್ರಭುಗಳ ಶ್ರೇಷ್ಠ ವಚನಗಳಲ್ಲಿ ಒಂದಾದ ಮೇಲಿನ ವಚನ ಆಚಾರ-ವಿಚಾರಗಳಿಗೆ ಕನ್ನಡಿ ಹಿಡಿದಂತಿದೆ. ಮಾನವರ ದೇಹವೆಂಬುದು ಪ್ರಣತೆ ಇದ್ದಂತೆ. ಪ್ರಣತೆ ಒಂದು ಜಡ ವಸ್ತು. ಹಾಗೆಯೇ ಮಾನವ ದೇಹ ಜಡವಾದುದು. ಹಾಗಾದರೆ ಜಡ ದೇಹಕ್ಕೆ ಚೈತನ್ಯ ಬೇಕು.…

0 Comments

ಅಷ್ಟಾವರಣದಲ್ಲಿ ಗುರು-ಲಿಂಗ-ಜಂಗಮ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಲಿಂಗಾಯತರು ಅಂದರೆ ಯಾರು? ಅಷ್ಟಾವರಣಗಳಾದ ಗುರು, ಲಿಂಗ ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪ್ರಸಾದ ಪಾದೋದಕಗಳನ್ನ ಅಳವಡಿಸಿಕೊಂಡು, ಪಂಚಾಚಾರಗಳಾದ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭೃತ್ಯಾಚಾರಗಳನ್ನ ಆಚರಿಸುತ್ತ, ಷಟ್ಸ್ಥಲಗಳ ಭಕ್ತ, ಮಹೇಶ, ಪ್ರಾಣಲಿಂಗಿ, ಪ್ರಸಾದಿ, ಶರಣ ಮತ್ತು ಐಕ್ಯ ಮೂಲಕ ಸಾಧನೆಗೈದು ಬಯಲಾಗುವವರೇ ಲಿಂಗಾಯತರು. ಅಷ್ಟಾವರಣಗಳು ಅಂಗವಾದರೆ, ಪಂಚಾಚಾರಗಳು ಪ್ರಾಣ ಮತ್ತು ಷಟ್ಸ್ಥಲಗಳು ನಮ್ಮ ಆತ್ಮ ಅನಿಸಿಕೊಳ್ಳುತ್ತವೆ. ಈ ಅಷ್ಟಾವರಣಗಳು ನಮ್ಮನ್ನು, ನಮ್ಮ ಮನಸ್ಸನ್ನು ಕೆಟ್ಟ ವಾತಾವರಣಗಳಿಂದ, ಮಾನಸಿಕ ಕ್ಲೇಷಗಳಿಂದ ರಕ್ಷಿಸೊ ರಕ್ಷಾ ಕವಚ ಇದ್ದ ಹಾಗೆ. ಈ ಅಷ್ಟಾವರಣಗಳು ಮಾನವನ ಲೌಕಿಕ ಮತ್ತು ಆಧ್ಯಾತ್ಮಿಕ…

0 Comments

ನಿಜ ಶರಣ ಹಡಪದ ಅಪ್ಪಣ್ಣನವರು / ಶ್ರೀಮತಿ. ಅನುಪಮ ಪಾಟೀಲ, ಹುಬ್ಬಳ್ಳಿ.

ಇಂತಹ ಮಹಾನ ಶರಣ “ನಿಜಸುಖಿ ಅಪ್ಪಣ್ಣನವರ ಜಯಂತಿ” ನಿಮಿತ್ಯ ಲೇಖನ. 12 ನೆಯ ಶತಮಾನ ಮೌಢ್ಯತೆಯನ್ನು ಬದಿಗೆ ಸರಿಸಿದಂತಹ ವೈಚಾರಿಕತೆಯ ಯುಗ. ಸಮಾನತೆ ಮತ್ತು ಸೌಹಾರ್ದತೆಯನ್ನು ಕಂಡಂತಹ ಯುಗ, ಬಸವ ಯುಗ. ಈ ಬಸವಯುಗದ ಪ್ರಮುಖ ಶರಣರ ಹಡಪದ ಅಪ್ಪಣ್ಣನವರು. ಹಡಪದ ಅಪ್ಪಣ್ಣನವರ ಜನ್ಮ ಸ್ಥಳ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿಹಾಳ ಗ್ರಾಮ. ಇದು ಬಸವಣ್ಣವರ ಜನ್ಮ ಸ್ಥಳ ಇಂಗಳೇಶ್ವರದಿಂದ ಕೇವಲ 6 ಕಿ.ಮೀ ದೂರದವಿದೆ. ಬಸವಣ್ಣನವರ ಬಗ್ಗೆ ತಿಳಿದ ಅಪ್ಪಣ್ಣನವರು ಪತ್ನಿ ಸಮೇತ ಸಂಗಮಕ್ಕೆ ಬಂದು ನೆಲೆಸುತ್ತಾರೆ. ನಂತರ ಅವರ ಸಂಗಡ ಕಲ್ಯಾಣಕ್ಕೂ…

0 Comments

ಗುರು ಪೂರ್ಣಿಮೆಗೊಂದು ಗುರು ಕರುಣೆಯ ಪ್ರಸಾದ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಜಗತ್ತಿನಲ್ಲಿ ಗುರುವಿನ ಸ್ಥಾನ ಅತ್ಯಂತ ಮಹತ್ವಪೂರ್ಣವಾದದ್ದು. ಅಂಧಕಾರವನ್ನು ಕಳೆದು ಜ್ಞಾನದ ಬೆಳಕನ್ನು ನೀಡಿ ಪೊರೆಯುವ ಸದ್ಗುರುವಿನ ಮಹಿಮೆ ಅಪಾರವಾದದ್ದು. ಗುರು ಎಂಬ ಶಬ್ದವೇ ಈ ಮಾತನ್ನು ಪುಷ್ಟೀಕರಿಸುತ್ತದೆ. “ಗು” ಎಂದರೆ ಕತ್ತಲು, “ರು” ಎಂದರೆ ಹೋಗಲಾಡಿಸು ಎಂಬುದಾಗಿದ್ದು “ಗುರು ಎಂದರೆ ಅಜ್ಞಾನದ ಕತ್ತಲನ್ನು ಕಳೆದು ಸುಜ್ಞಾನವೆಂಬ ಬೆಳಕನ್ನು” ನೀಡುವವನು. ಮಾನವ ಸಮುದಾಯದ ಅಭಿವೃದ್ಧಿಗೆ ಧರ್ಮ ಮತ್ತು ಧರ್ಮಾಚರಣೆಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ. “ಅರಿವು” ಮತ್ತು “ಆಚಾರ” ಯಾವುದೇ ಧರ್ಮದ ಎರಡು ಕಣ್ಣುಗಳು. ಮಾನವರಲ್ಲಿ “ಮರಹು” ಎಂಬುದು ಹೆಚ್ಚು. ಇದನ್ನೇ ನಮ್ಮ ಶರಣರು “ಮಾಯೆ” ಎಂದು ಕರೆದಿದ್ದಾರೆ.…

1 Comment

ಮಣ್ಣೆತ್ತಿನ ಅಮವಾಸ್ಯೆಯ ಹಿನ್ನಲೆ | ಡಾ.ಶರಣು ಪಾಟೀಲ,ವಿಜಯಪುರ.

ನನಗೆ ಎಲ್ಲ ಹಬ್ಬ ಹರಿದಿನಗಳ ಮಾಹಿತಿಯನ್ನು ನೀಡುತ್ತಿದ್ದ ಹಿರಿಯ ಗೆಳೆಯ ನನ್ನ ಹೆಣ್ಣಜ್ಜ. ಅಪ್ಪನ ತಂದೆಗೆ ಗಂಡಜ್ಜ ಅಂತಾ ಮತ್ತು ತಾಯಿಯ ತಂದೆಗೆ ಹೆಣ್ಣಜ್ಜ ಅಂತಾ ಉತ್ತರ ಕರ್ನಾಟಕದಲ್ಲಿ ಕರೆಯುವ ಪದ್ಧತಿ ಇದೆ. ಗಂಡಜ್ಜ ತುಂಬಾ ಸೌಮ್ಯ ಸ್ವಭಾವದ ಕಾಯಕ ಜೀವಿ. ಆದರೆ ಹೆಣ್ಣಜ್ಜ ಮಾತ್ರ ತುಂಬಾ ಸ್ನೇಹಜೀವಿ. ಹೀಗಾಗಿ ಚಿಕ್ಕವರಿದ್ದಾಗ ಶಾಲೆಗೆ ಸೂಟಿ ಕೊಟ್ಟ ತಕ್ಷಣ ತಾಯಿಯ ತವರು ಮನೆಗೆ ಓಡಿ ಹೋಗುತ್ತಿದ್ದೆ. ಅಜ್ಜನ ಮಡಿಲಲ್ಲಿ ಮಲಗುವುದು. ಅವನ ಜೊತೆ ತೋಟ ಸುತ್ತಾಡೋದು. ಅದೇ ತೋಟದಲ್ಲಿ ಮೂರು ಕಲ್ಲು ಹಾಕಿ ಅಲ್ಲಿಯೇ ಬಿದ್ದಿರುವ ಕಟ್ಟಿಗೆಯ ಚೂರಿನಿಂದ…

0 Comments

ವ್ಯೋಮಕಾಯ ಅಲ್ಲಮ ಪ್ರಭುದೇವರ ವಚನಗಳಲ್ಲಿ ಬಸವ ದರ್ಶನ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಕಲ್ಯಾಣವೆಂಬ ಪ್ರಣತೆಯಲ್ಲಿಭಕ್ತಿರಸವೆಂಬ ತೈಲವನೆರೆದು,ಆಚಾರವೆಂಬ ಬತ್ತಿಗೆಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲುತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ!ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾಅಸಂಖ್ಯಾತ ಭಕ್ತಗಣಂಗಳು.ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ?ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ?ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯಸಂಗನಬಸವಣ್ಣನ ಮಹಿಮೆಯ ನೋಡಾಸಿದ್ಧರಾಮಯ್ಯಾ.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-396/ವಚನ ಸಂಖ್ಯೆ-1059) ಲೋಕ ಸಂಚಾರ ಮಾಡುತ್ತ ಶಿವಯೋಗಿ ಸಿದ್ಧರಾಮರೊಡಗೂಡಿ ಕಲ್ಯಾಣಕ್ಕೆ ಪುರ ಪ್ರವೇಶ ಮಾಡಿ ಮಹಾಮನೆಯತ್ತ ಬಂದಾಗ, ನೂರಾರು ಶಿವ ಶರಣ-ಶರಣೆಯರು ಹಣೆಯಲ್ಲಿ ಭಸ್ಮ, ಕೊರಳಲ್ಲಿ ಇಷ್ಟಲಿಂಗ, ರುದ್ರಾಕ್ಷಿ ಮಾಲೆ, ಶುಭ್ರ ವಸ್ತ್ರ ಧರಿಸಿ ಮಹಾಮನೆಯತ್ತ ಸಾಗುತ್ತಿದ್ದರು. ಈ ದೃಶ್ಯಗಳನ್ನು ನೋಡಿದ ಅಲ್ಲಮರು ಮೇಲಿನಂತೆ ಉದ್ಗರಿಸುತ್ತಾ ಕಲ್ಯಾಣದ ಚಿತ್ರಣವನ್ನು ನೀಡುತ್ತಾರೆ. ಮಹಾಮನೆಯ…

1 Comment

ಅಪ್ಪನ ಹೆಸರಿನ ಮಗ ಬಸವರಾಜ | ಡಾ. ಬಸವರಾಜ ಸಾದರ, ಬೆಂಗಳೂರು.

ಇಂದು ಅಪ್ಪಂದಿರ ದಿನವಂತೆ!!! ಇಂಥ ಯಾವ ದಿನಗಳ ತಳಬುಡಗಳೂ ಗೊತ್ತಿರದ ನನ್ನ ಅಪ್ಪನಂಥ ನಿರಕ್ಷರಿ. ತನ್ನ ಕುಟುಂಬದ ಸದಸ್ಯರ ತುತ್ತಿನ‌ ಚೀಲ ತುಂಬಿಸಲು ಹೆಣಗಾಡುತ್ತಿದ್ದ ದಿನಗಳು ನೆನಪಾಗಿ ಹೃದಯ ಕಲಕುತ್ತದೆ. ಶಿಕ್ಷಣದ ಖರ್ಚಿಗೆ ಕೊಡಲು ಹಣವಿಲ್ಲದೆ ತನ್ನ‌ ಮಗ ಕಲಿಯಲು ಅದು ಹೇಗೆ ಹಣ ಹೊಂದಿಸುತ್ತಿರಬಹುದು? ಎಂಬ ಕಲ್ಪನೆಯೂ ಇಲ್ಲದಿರುವಾಗ ಅದೊಂದು ದಿನ‌ ಧಾರವಾಡಕ್ಕೆ ಬಂದಾಗ ನಾನು‌ ಸಪ್ತಾಪುರದ ಕೆಲವು ಓಣಿಗಳಲ್ಲಿ ಮನೆ ಮನೆಗೆ ತಿರುತಿ ರುಗಿ ನಾನು ಪೇಪರ್ ಹಾಕುತ್ತಿದ್ದುದನ್ನು ನೋಡಿ “ಬಾ” ಎಂದು ಹೃದಯ ಬಿರಿವಂತೆ ಅತ್ತಿದ್ದು ನೆನಪಾದರೆ ಕರುಳು ಚುರ್ ಎನ್ನುತ್ತದೆ. ಇಷ್ಟಾದರೂ…

0 Comments

ನಿಜ ಶರಣ ಅಂಬಿಗರ ಚೌಡಯ್ಯನವರು / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಕಲ್ಲದೇವರ ಪೂಜೆಯ ಮಾಡಿ, ಕಲಿಯುಗ[ದ]ಕತ್ತೆಗಳಾಗಿ ಹುಟ್ಟಿದರು.ಮಣ್ಣದೇವರ ಪೂಜಿಸಿ ಮಾನಹೀನರಾದರು.ಮರನ ದೇವರೆಂದು ಪೂಜಿಸಿ ಮಣ್ಣ ಕೂಡಿದರು.[ಇಂತಪ್ಪ] ದೇವರ ಪೂಜಿಸಿ ಸ್ವರ್ಗಕ್ಕೇರದೆ ಹೋದರು!ಜಗದ್ಭರಿತವಾದ ಪರಶಿವನೊಳಗೆ ಕಿಂಕರನಾದಶಿವಭಕ್ತನೆ ಶ್ರೇಷ್ಠನೆಂದಾತ ನಮ್ಮ ಅಂಬಿಗರ ಚೌಡಯ್ಯ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-40/ವಚನ ಸಂಖ್ಯೆ-98) ಅಂಬಿಗರ ಚೌಡಯ್ಯ 12 ನೇ ಶತಮಾನದ ಬಸವಣ್ಣನವರ ಅನುಯಾಯಿ ಸಾವಿರಾರು ವರ್ಷಗಳಿಂದ ಧರ್ಮ–ದೇವರುಗಳ ಬಗ್ಗೆ ಸಮಾಜದಲ್ಲಿ ಬೇರೊರಿಂದ್ದ ಮೂಢ ನಂಬಿಕೆಗಳನ್ನೆಲ್ಲ ಬಸವಣ್ಣನವರೊಂದಿಗೆ ಅಂಬಿಗರ ಚೌಡಯ್ಯನವರು ಹೊಡೆದೊಡಿಸಲು ಪ್ರಯತ್ನ ಮಾಡುತ್ತ ವಿಚಾರ ಪರವಾದ ಮತ್ತು ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ಮಾಡಿಸಲು ಶ್ರಮಪಟ್ಟರು. ಧರ್ಮ–ದೇವರು ಕೇವಲ ಶ್ರೀಮಂತರ ಸೊತ್ತಾಗಿದ್ದ ಅಂದಿನ ಸಂದರ್ಭದಲ್ಲಿ ಪೂಜೆ–ಮೋಕ್ಷ…

1 Comment

ಶರಣ ವೀರ ಗೊಲ್ಲಾಳೇಶ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಪ್ರಪಂಚದ ಇತಿಹಾಸವನ್ನು ಅವಲೋಕಿಸಿದಾಗ 12 ನೇ ಶತಮನಾದಲ್ಲಿ ವಿಶ್ವಮಾನವ ಸಂದೇಶವನ್ನು ಸಾರಿದ ಹೆಮ್ಮಯ ಕನ್ನಡ ನಾಡಿದು. ಆ ಕಾಲಘಟ್ಟವನ್ನು ಅವಿಸ್ಮರಣೀಯವನ್ನಾಗಿ ಮಾಡಿದವರು ಬಸವಾದಿ ಶರಣರು. ಕೆಲವೇ ವರ್ಷಗಳಲ್ಲಿ ನೂರಾರು ಶಿವಶರಣರು ಜೀವನದ ಎಲ್ಲಾ ರಂಗಗಳ ಕುರಿತು ಅರ್ಥಪೂರ್ಣ ಚಿಂತನೆ ನಡೆಸಿದ ಕಾಲಘಟ್ಟವದು. ಎಲ್ಲರ ಪ್ರಮುಖ ಉದ್ದೇಶ ಮಾನವ ಕಲ್ಯಾಣವಾಗಿತ್ತು. ಬಸವಣ್ಣನವರ ನೇತೃತ್ವದಲ್ಲಿ ನಡೆದ ಚಳುವಳಿ ಕಾಯಕ ಜೀವಿಗಳ ಚಳುವಳಿ ಆಗಿತ್ತು. ಕಾಯಕ ವರ್ಗದ ಎಲ್ಲ ಜನರು ಚಳುವಳಿಯಲ್ಲಿ ಪಾಲ್ಗೊಂಡರು. ಅಂಬಿಗರ ಚೌಡಯ್ಯ, ಜೇಡರ ದಾಸಿಮಯ್ಯ, ಆಯ್ದಕ್ಕಿ ಮಾರಯ್ಯ, ಒಕ್ಕಲಿಗ ಮುದ್ದಣ್ಣ, ಕೊಟ್ಟಣದ ಸೋಮವ್ವ, ತುರುಗಾಹಿ ರಾಮಣ್ಣ, ನುಲಿಯ…

0 Comments