“ವಚನಗಳಲ್ಲಿ ಪ್ರಸಾದ ತತ್ವ” / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ

12 ನೇ ಶತಮಾನವು ಮನುಕುಲದ ಇತಿಹಾಸದಲ್ಲಿ ವಿಶೇಷವಾದಂತಹ ಕಾಲ, ಅದು ಪಾರಮಾರ್ಥವನ್ನು ಸಕಲ ಮಾನವರಿಗೆ ಉಣಬಡಿಸಿದಂತಹ ಶತಮಾನ. ಮಾನವ ಕುಲಕ್ಕೆ ಬದುಕನ್ನು ಕಲಿಸಿದ ಶತಮಾನ ಭವ-ಭವದಲ್ಲಿ ಬೇಯುತ್ತಿದ್ದ ಮಾನವರು ಶರಣಾಗುವ ಮಾರ್ಗ ಕಲಿಸಿದಂತಹ, ಬೆಳಕಿಗೆ ಬಂದಂತಹ ಶತಮಾನ ದೇವನ ಹಂಬಲವುಳ್ಳವರಿಗೆ ಗುರು ಕಾರುಣ್ಯವು ಲಭಿಸಿದಂತಹ ಕಾಲ. ಅದು ಬಸವಣ್ಣನವರು ಅವತರಿಸಿದ ಕಾಲ ಕನಿಷ್ಠವೆನಿಸಿದ ವ್ಯಕ್ತಿಗಳನ್ನು ಆಧ್ಯಾತ್ಮಿಕದ ತುಟ್ಟ ತುದಿಗೆ ಕರೆದೊಯ್ಯವುವ ಅಸ್ಸಿಮ ಶಕ್ತಿ ಬಸವಣ್ಣನವರ ಬೋಧನೆಯಲ್ಲಿ ತುಂಬಿತ್ತು. ಪ್ರತಿಯೊಬ್ಬರ ನಡೆ-ನುಡಿ, ಆಚಾರ-ವಿಚಾರ ಮನೋಭಾವ ಗುಣಗಳು, ಬದುಕುವ ರೀತಿ ಇತ್ಯಾದಿಗಳೆಲ್ಲವನ್ನು ತಿದ್ದಿ ತೀಡಿ, ಅವರನ್ನು ಆದ್ಯಾತ್ಮಿಕದ ನೆಲೆಯಲ್ಲಿ ಮೇಲಕ್ಕೇರಿರಿಸಿ,…

0 Comments

“ಶರಣ ಸಿದ್ದರಾಮೇಶ್ವರರ ವಚನಗಳಲ್ಲಿ ಲಿಂಗ ದರ್ಪಣ”/ ಡಾ. ಸರ್ವಮಂಗಳ ಸಕ್ರಿ

ವ್ಯಕ್ತಿ ಮತ್ತು ಮಾನವ ಸಂಬಂಧಗಳ ಸಮಾಜದಲ್ಲಿ ಆಧ್ಯಾತ್ಮಕ್ಕೆ ವಿಶೇಷವಾದ ಸ್ಥಾನವಿದೆ. ಶರಣರ ಸಾಮಾಜಿಕ ಕಾಳಜಿ ಸ್ವತಂತ್ರ ವಚನಗಳು ನಮಗೆ ಮುಖಾಮುಖಿಯಾಗುತ್ತವೆ. ಇಂದ್ರಿಯ ಅಗೋಚರ ಭೌತಿಕ ಪ್ರಪಂಚವನ್ನು ಮೀರಿದ ಜ್ಞಾನದ ಹರವು ಹಾಗು ಆಧ್ಯಾತ್ಮದ ತಿಳುವಳಿಕೆ ಧರ್ಮವಾಗಿದೆ. ವಚನ ಧರ್ಮ ಭಾಷೆಯ ಹಿಂದೆ ಧಾರ್ಮಿಕ ನಂಬಿಕೆ ತಾತ್ವಿಕ ಆ‍ಚರಣೆಗಳು ಶರಣ ಸಂಸ್ಕ್ರತಿಯ ಸಂಗಮವೆಂದು ಸ್ಪಷ್ಟ ಪಡಿಸಬಹುದು. ಯಾವುದೇ ಧರ್ಮ ಶೂನ್ಯದಿಂದ ಹುಟ್ಟಿರುವುದಿಲ್ಲ. ಚರಿತ್ರೆಯ ನಿರ್ಧಿಷ್ಟ ಒತ್ತಡಗಳಿಂದ ಹುಟ್ಟಿರುತ್ತದೆ. 12 ನೇ ಶತಮಾನದ ಲಿಂಗಾಯತ ಧರ್ಮ ಇದಕ್ಕೆ ಹೊರತಲ್ಲ. ಅನೇಕ ಧಾರ್ಮಿಕ ಪಂಥಗಳ ದಶ೯ನಗಳನ್ನು ಒಡಲಲ್ಲಿಟ್ಟುಕೊಂಡು ಅಷ್ಟಾವರಣ ತತ್ವಗಳನ್ನು ಜೋಪಾನ…

0 Comments

“ಸಿದ್ದರಾಮೇಶ್ವರರ ವಚನಗಳಲ್ಲಿ ಸ್ತ್ರೀ ಸಂವೇದನೆಯ ಅಂಶಗಳು”/ ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಸೊನ್ನಲಿಗೆಯ ಸಿದ್ಧರಾಮೇಶ್ವರರು ಕಾಯಕಜೀವಿ. ಸಾಮಾಜಿಕ ಜವಾಬ್ದಾರಿಗಳನ್ನು ಜತನದಿಂದ ಕೈಗೊಂಡ ಕರ್ಮಯೋಗಿ. ಲೋಕ ಕಲ್ಯಾಣಾರ್ಥವಾಗಿ ತಮ್ಮ ಬದುಕನ್ನು ಸವೆಸಿದ ಸಿದ್ಧ ಶಿವಯೋಗಿ. ಸಿದ್ಧರಾಮೇಶ್ವರರು ತಮ್ಮ ಇಡಿ ಬದುಕಿನುದ್ದಕ್ಕೂ ಕಾಯಕವನ್ನೇ ಉಸಿರಾಗಿರಿಸಿಕೊಂಡಿದ್ದರು. ಬದ್ಧತೆಗೆ ತುಡಿದ ಸಿದ್ಧರಾಮೇಶ್ವರರು ಶರಣ ತತ್ವಗಳನ್ನು ರೂಢಿಸಿಕೊಂಡವರು. ಮಾನವೀಯತೆಯ ಮೌಲ್ಯಗಳಿಂದ ವ್ಯಷ್ಟಿಯಿಂದ ಸಮಷ್ಟಿಯನ್ನು ಬೆಸೆದವರು. ತಮ್ಮ ವಚನಗಳ ಮೂಲಕ ಶ್ರೇಷ್ಠ ಮಾನವೀಯ ಸಂವೇದನೆಗಳನ್ನು ಹಂಚಿದವರು ಮತ್ತು ಚಿಂತಿಸಿದವರು. ಇವರದು ಅಪರೂಪದಲ್ಲೇ ಅಪರೂಪದ ವ್ಯಕ್ತಿತ್ವ. ಸಕಲ ಚರಾ-ಚರ ಚೇತನವನ್ನು ಪ್ರೀತಿಸಿದ ಇವರಲ್ಲಿ ತಾಯ್ತನವಿದೆ. ಹೆಂಗರುಳಿದೆ. ಈ ಕಾರಣದಿಂದಲೇ ಸಿದ್ಧರಾಮೇಶ್ವರರು ಪಶು, ಪಕ್ಷಿ ಮುಂತಾದ ಜೀವ ಚೇತನಗಳಿಗಾಗಿ ಕೆರೆ-ಕಟ್ಟೆ ಬಾವಿಗಳನ್ನು,…

0 Comments

“ಪೈರಿಗೆ ನೀರು ಬೇಕೆಂಬಲ್ಲಿ”/ ಚನ್ನಪ್ಪ ಅಂಗಡಿ,ಧಾರವಾಡ

ವೃಷ್ಟಿಮೂಲ ಕೃಷಿಃ ಸರ್ವಾ ವೃಷ್ಟಿಮೂಲಂ ಚ ಜೀವನಮ್ |ತಸ್ಮಾದಾದೌ ಪ್ರಯತ್ನೇನ ವೃಷ್ಟಿಜ್ಞಾನಂ ಸಮಾಚರೇತ್ ||(ಕೃಷಿ ಪರಾಶರ - ಪರಾಶರ ಮುನಿ: 10 ನೇ ಶ್ಲೋಕ) ಮೂಲತಃ ಕೃಷಿಯು ಮಳೆಯನ್ನು ಅವಲಂಬಿಸಿದೆ. ಹಾಗೆ ನೋಡಿದರೆ ಸಮಗ್ರ ಜೀವನವೇ ಮಳೆಯನ್ನು ಅವಲಂಬಿಸಿದೆ. ಆದ್ದರಿಂದ ಮೊಟ್ಟಮೊದಲನೆಯದಾಗಿ ಮಳೆಯ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಅವಶ್ಯವೆಂದು ಪ್ರಾಚೀನ ಋಷಿ ಪರಾಶರ ಹೇಳಿದ್ದಾನೆ. ಕೃಷಿ ಮಳೆಯನ್ನು ಅವಲಂಬಿಸುವುದೆಂದರೆ ನೀರನ್ನು ಅವಲಂಬಿಸುವುದೆಂದೇ ಅರ್ಥ. ‘ಮಣ್ಣು-ನೀರು-ಸಸ್ಯ-ಆಹಾರ’ ಇಷ್ಟು ಹೇಳಿಬಿಟ್ಟರೆ ಅದು ಪ್ರಕೃತಿಯಾಗುತ್ತದೆ. ‘ಕೃಷಿ’ ಎಂದು ಬಿಟ್ಟರೆ ಅದು ಮಾನವ ನಿರ್ಮಿತವಾಗುತ್ತದೆ. ಮನುಷ್ಯನ ಪ್ರವೇಶಿಕೆ ಎಂದರೆ ನಿಸರ್ಗದ ನಿಯತಿಯನ್ನು…

0 Comments

ವಚನ ಸಾಹಿತ್ಯದಲ್ಲಿ ಕಾಯಕ ತತ್ವ / ಡಾ. ಮಲ್ಲಿಕಾರ್ಜುನ ಕೆ.

ವಚನ ಸಾಹಿತ್ಯದ ಕಾಲವು ಕನ್ನಡ ಸಾಹಿತ್ಯದ ಪರ್ವಕಾಲ, ಸುವರ್ಣಯುಗ ಕಾಲವೆಂದು ಕರೆಯಬಹುದು. ಹಾಗಾಗಿ ೧೨ನೇ ಶತಮಾನಕ್ಕೆ ವಿಶಿಷ್ಟ ಸ್ಥಾನವಿದೆ. ವೇದಗಳ ಕಾಲದಿಂದಲೂ ಸಾಹಿತ್ಯ ಪಂಡಿತರ, ವಿದ್ವಾಂಸರ ಸ್ವತ್ತಾಗಿ, ಸಂಸ್ಕೃತ ಭೂಯಿಷ್ಠವಾಗಿದ್ದು, ಶ್ರೀಸಾಮಾನ್ಯರಿಗೆ ಇವರ ರಚನೆಗಳು ಅರ್ಥವಾಗುತ್ತಿರಲಿಲ್ಲ. ಶತ ಶತಮಾನಗಳಿಂದಲೂ ಸಮಾಜದಲ್ಲಿ ಹೆಣ್ಣಿನ ಬಗೆಗಿದ್ದ ಪೂರ್ವಾಗ್ರಹವನ್ನು ಸರಿಪಡಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಬಸವಯುಗದ ಶರಣೆಯರ ಅಮೋಘ ಕೊಡುಗೆಯನ್ನು ಬಹುಶಃ ಯಾವ ಶತಮಾನವೂ ಕಂಡಿರಲಿಲ್ಲ. ಈ ಕಾಲ ಘಟ್ಟದಲ್ಲಿ ಜಾತಿ-ಮತ, ಹೆಣ್ಣು-ಗಂಡು ಎಂಬ ಭೇದವಿಲ್ಲದೆ ‘ಅನುಭವ ಮಂಟಪ'ದಲ್ಲಿ ಸೇರಿ ವಾದ-ಸಂವಾದ, ಚರ್ಚೆಗಳಲ್ಲಿ ಪಾಲ್ಗೊಂಡಿರುವುದನ್ನು ಕಾಣುತ್ತೇವೆ. ವಚನಕಾರ್ತಿಯಲ್ಲಿ ಅಕ್ಕಮಹಾದೇವಿ ಮತ್ತು ಮುಕ್ತಾಯಕ್ಕರಂತೆ…

1 Comment

ಇತಿಹಾಸದ ಮಹಿಳೆ ಪುರಾಣವಾದ ಶಿವಶರಣೆ “ದಾನಮ್ಮನವರು”/ಡಾ. ಪುಷ್ಪಾ ಶಲವಡಿಮಠ.

ಭಾರತೀಯ ಮೂಲ ಸಂಸ್ಕೃತಿ ಮಾತೃ ಪ್ರಧಾನವಾದದ್ದು. ಕೃಷಿ ಪ್ರಾಧಾನ್ಯತೆಯನ್ನು ಕಾಯ್ದುಕೊಂಡು ಬಂದ ಮಹಿಳೆ ಪ್ರಕೃತಿಯ ಸಹಜತೆಗೆ ಪರ್ಯಾವಾಗಿದ್ದಳು. ಕಾಲದ ಗರ್ಭದಲ್ಲಿ ಮಾತೃ ಪ್ರಾಧಾನ್ಯತೆ ದೂರ ಸರಿದು, ಪುರಾಣದ ಪಳೆಯುಳಿಕೆಯಾಗಿ ಉಳಿದುಕೊಂಡಿದೆ. ಪುರಾಣ ವ್ಯಕ್ತಿಗಳಾಗಿ ಪ್ರಸಿದ್ಧಿ ಪಡೆದಿರುವ ರಾಮಾಯಣದ ಸೀತೆ ಮಣ್ಣನಿಂದ ಜನಿಸಿ ಮಣ್ಣಾದವಳು. ಎಂಥವರನ್ನೂ ಬೆತ್ತಲಗೊಳಿಸಿದ ರೇಣುಕ ಗುಡ್ಡದ ಎಲ್ಲಮ್ಮಳಾಗಿ ಎಲ್ಲೆ ಮೀರಿ ಅಮ್ಮನಾದಳು. ಇದೇ ರೀತಿ ಕರ್ನಾಟಕದಲ್ಲಿ ಮತ್ತು ಕರ್ನಾಟಕದ ಹೊರಗಡೆ ಶಕ್ತಿ ದೇವತೆ ಎಂದು ಪ್ರಸಿದ್ಧಳಾದ ಗುಡ್ಡಾಪುರದ ದಾನಮ್ಮದೇವಿ ಅಸಂಖ್ಯಾತ ಭಕ್ತ ಸಮೂಹದಿಂದ ಪೂಜೆಗೊಂಡು ಪುರಾಣದ ಕಥೆಯಾಗಿ ಉಳಿದುಕೊಂಡಿದ್ದಾಳೆ, ಆದರೆ, ದಾನಮ್ಮ ಒಬ್ಬ ಐತಿಹಾಸಿಕ…

2 Comments

“ಪರಮ ಪೂಜ್ಯ ಶ್ರೀತಿಂತಿಣಿ ಮೌನೇಶ್ವರರ ವಚನಗಳಲ್ಲಿ ಶರಣ ತತ್ವ”

ಪರಮ ಕಲ್ಯಾಣಿ ನಿನ್ನ ಅರುವಿನ ಒಡಲೊಳಗೆಪರಬ್ರಹ್ಮಮೂರ್ತಿ ಜನಿಸಿದ, ಅವರಿಬ್ಬರಶರೀರ ಬೇರೆ ಸವಿಯೊಂದೆ, ಬಸವಣ್ಣ.(ತಿಂತಿಣಿ ಮೌನೇಶ್ವರರ ವಚನಗಳು-ಡಾ. ವೀರೇಶ ಬಡಿಗೇರ/2016/ಪುಟ. 161/ವ.ಸಂ. 374) ನನಗೆ ಬಸವ ತತ್ವ ಮತ್ತು ವಚನ ಸಾಹಿತ್ಯದ ಶಿವನ ಪ್ರಕಾಶವನ್ನು ತೋರಿಸಿದ್ದ ಶ್ರೀ ಗದಗ ತೋಂಟದಾರ್ಯ ಮಠದ ಲಿಂ. ಡಾ. ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮತ್ತು ನನ್ನ ಎಲ್ಲ ವಿದೇಶ ಪ್ರವಾಸಗಳಿಗೂ ಬೆನ್ನು ತಟ್ಟಿ ಆಶೀರ್ವದಿಸಿದ್ದ ಸಿದ್ಧಗಂಗೆಯ ಸಿದ್ಧಪುರುಷ ಲಿಂ. ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪಾದಕಮಲಗಳನ್ನು ಮನ ಮಂದಿರದಲ್ಲಿ ಪ್ರತಿಷ್ಠಾಪಿಸುತ್ತಾ … … ವಚನ ಸಾಹಿತ್ಯ, ಸೃಜನಶೀಲ ಸಾಹಿತ್ಯ, ದಾಸ…

0 Comments

“ಸಮಷ್ಠೀ ಮಾನವ ಕುಲತಿಲಕ ಬಸವಣ್ಣ” / ಡಾ. ಕಮಲಾಬಾಯಿ ಎಸ್‌ ಕೆ, ಬೆಳಗಾವಿ.

ದೇವಲೋಕದವರಿಗೂ ಬಸವಣ್ಣನೆ ದೇವರುಮರ್ತ್ಯಲೋಕದವರಿಗೂ ಬಸವಣ್ಣನೆ ದೇವರುನಾಗಲೋಕದವರಿಗೂ ಬಸವಣ್ನನೆ ದೇವರು,ಮೇರುಗಿರಿ ಮಂದರಗಿರಿಮೊದಲಾದವೆಲ್ಲಕ್ಕೂ ಬಸವಣ್ಣನೆ ದೇವರು,ಚೆನ್ನಮಲ್ಲಿಕಾರ್ಜುನಯ್ಯಾ, ನಿಮಗೂ ಎನಗೂನಿಮ್ಮ ಶರಣರಿಗೂ ಬಸವಣ್ಣನೆ ದೇವರು. ಎಂಬ ಅಕ್ಕನ ವಚನವು ಬಸವಣ್ಣನವರ ಘನ ಮಹಿಮೆಯನ್ನು ಸಾರುತ್ತದೆ. ʼವಚನಗಳುʼ ಶಿವಶರಣರು ಪ್ರಯೋಗಿಸಿದ ಆತ್ಮಸಾಕ್ಷಿಯ ನುಡಿಗಡಣಗಳು. ೧೨ನೇ ಶತಮಾನದ ಶರಣರು ನಡಿದಂತೆ ನುಡಿದರು; ನುಡಿದಂತೆ ನಡೆದ ಇವರ ಬದುಕಿನ ರೀತಿ ಅನನ್ಯ. ಅಂತೆಯೇ ೯೦೦ ವರ್ಷಗಳಾದರೂ ಅವರ ಪ್ರತಿಜ್ಞೆ- ಆತ್ಮ ಸಾಕ್ಷಿಯ ನುಡಿಗಡಣಗಳು ನಮ್ಮ ನಾಡಿನ ಕೀರ್ತಿ ಕಲಶಗಳಾಗಿ ಲೋಕಮಾನ್ಯಗೊಂಡಿವೆ. ಇದೆಲ್ಲದಕ್ಕೂ ಮುಖ್ಯ ರೂವಾರಿ ನಮ್ಮ ಸಾಂಸ್ಕೃತಿಕ ನಾಯಕ, ಮಹಾನ್‌ ಮಾನವತಾವಾದಿ, ವಿಶ್ವಗುರು, ಜಗಜ್ಯೋತಿ, ಅಣ್ಣ…

0 Comments

“ಬಸವಣ್ಣನವರ ವಚನಗಳಲ್ಲಿ ವ್ಯಕ್ತಿತ್ವ ವಿಕಾಸ”/ಡಾ. ಅಶೋಕ ನರೋಡೆ

ವಚನ ಸಾಹಿತ್ಯವು ಕನ್ನಡ ನಾಡಿನ ಪ್ರಪ್ರಥಮ ಪ್ರಜಾಸಾಹಿತ್ಯ. 12 ನೇ ಶತಮಾನದಲ್ಲಿ ಜರುಗಿದ ಸಮಾಜೋ-ಧಾರ್ಮಿಕ ಆಂದೋಲನವು ಯುಗದ ಧ್ವನಿ ಆಯಿತು. ಸಮಾಜದ ಸರ್ವಸ್ಥರಗಳಲ್ಲಿ ಬದಲಾವಣೆಗೆ ಕಾರಣವಾಯಿತು. ಹೊಸ ಸಮಾಜವನ್ನು ಕಟ್ಟಬಯಸಿದ ಶಿವಶರಣರು, ತಮ್ಮ ಸಾದನೆಗಾಗಿ ವಚನಗಳನ್ನು ಮಾಧ್ಯಮವಾಗಿ ಬಳಸಿಕೊಂಡರು. ವಚನ ರಚನೆ ಅವರ ಪ್ರಾಥಮಿಕ ಉದ್ದೇಶವಾಗಿರದೆ ಸಮಾಜ ಸುಧಾರಣೆ ಅವರ ಪ್ರಾಶಸ್ತ್ಯವಾಗಿತ್ತು. ವಚನವೆಂಬುದು ಚಳುವಳಿ ಸಾಹಿತ್ಯ ಪ್ರಕಾರವಾಗಿದೆ. ಆತ್ಮ ಕಲ್ಯಾಣದೊಂದಿಗೆ ಸಮಾಜ ಕಲ್ಯಾಣವನ್ನು ಕಾರ್ಯಗೊಳಿಸಲು ಹೋರಾಡಿದ ಹುತಾತ್ಮರ ಸಾಹಸಗಾಥೆಯಾಗಿದೆ. ರಾಜಶಾಹಿ, ಪರೋಹಿತಶಾಹಿ, ಪುರುಷಶಾಹಿಗಳ ವಿರುದ್ಧ ಹೋರಾಡಿ ಸರ್ವ ಸಮಾನತೆ ಪ್ರತಿಪಾದಿಸುವ ಸಾಹಿತ್ಯ. ಸಮಾಜದ ಎಲ್ಲ ಸ್ಥರದ ಚಳುವಳಿಯಲ್ಲಿ…

0 Comments

“ಅಕ್ಷಯದ ಅಮರಜೀವಿ ಅನುಭಾವಿ ಬಸವಣ್ಣನವರು”/     ಡಾ.ದಾಕ್ಷಾಯಣಿ ಅಶೋಕ ಮಂಡಿ, ಮಹಾಲಿಂಗಪುರ.

ಸುಮಾರು 900 ವರ್ಷಗಳ ಹಿಂದೆ ಕರ್ನಾಟಕದಲ್ಲಿ ನಡೆದ ಶಿವಶರಣರ ಆಂದೋಲನವು ಕೇವಲ ಧಾರ್ಮಿಕ ಆಯಾಮಕಷ್ಟೇ ಸೀಮಿತವಾಗದೇ ಅಂದಿನ ಅನೇಕ ಪ್ರಚಲಿತ ಗಂಭೀರ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಿತು ಎನ್ನುವುದು ಗಮನಾರ್ಹ ಸಂಗತಿ. ಅಂದು ವಚನಕಾರರು ವರ್ಣ-ವರ್ಗ-ಲಿಂಗ ಬೇಧಗಳನ್ನು ಹೋಗಲಾಡಿಸಿ ದೀನ ದಲಿತರ ಬದುಕಿಗೆ ಆಶಾಕಿರಣವಾದರು. ನವ ಸಮಾಜವೊಂದನ್ನು ನಿರ್ಮಿಸಿದರು. ಆತ್ಮವಿಶ್ವಾಸ ಮೂಡಿಸುವ ದಿಸೆಯಲ್ಲಿ ಜನಮಾನಸದ ಸಂಗಾತಿಗಳಾಗಿ ಮಾರ್ಗದರ್ಶಕರಾದರು. ಅವರು ರಚಿಸಿದ ವಚನವಾಙ್ಮಯ ಕನ್ನಡ ಪರಂಪರೆಯ ಅಪೂರ್ವ ಸಾಹಿತಿಕ ಸಾಂಸ್ಕೃತಿಕ ಆಧ್ಯಾತ್ಮಿಕ ಸಂಪತ್ತು.12 ನೇ ಶತಮಾನದ ಸಾಹಿತ್ಯದಲ್ಲಿ ಒಂದು ಸುವರ್ಣ ಅಧ್ಯಾಯ. ಸಾಮಾಜಿಕ ಬದಲಾವಣೆಗೆ ಕಾರಣರಾದ ಮಹಾಚೇತನನ ನಮ್ಮಕ್ರಾಂತಿ ಪುರುಷ…

0 Comments