ಆದಯ್ಯನವರ ವಚನಗಳಲ್ಲಿ ಭೃತ್ಯಾಚಾರ/ಶ್ರೀಮತಿ. ಸವಿತಾ ಮಾಟೂರ,ಇಳಕಲ್ಲ.
ರಾಷ್ಟಕವಿ ಜಿ.ಎಸ್. ಶಿವರುದ್ರಪ್ಪನವರ “ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೆ ಇರುವಾ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ” ಎಂಬ ಕವಿ ವಾಣಿಯಂತೆ ಕಲ್ಲು ಮಣ್ಣುಗಳ ಗುಡಿಯಲ್ಲಿಯೆ ಇನ್ನು ದೇವರನ್ನು ಹುಡುಕಿತ್ತಿದ್ದೆವೆ. “ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿ ಇದೆ ನಾಲಗೆಗೆ” ಶರಣರು ಸಾರಿದ ಅಂತರಂಗ ಶುದ್ಧಿಯಾದರೆ ನಿಜವಾದ ಅಮೃತದ ಸವಿಯನ್ನು ಸವಿಯಬಹುದು. ಶರಣರು ಜಗದೊಳಗೆ ಅನುಶೃತಗೊಂಡ ಅಘಟಿತ ಚರಿತರು. ವಚನದ ಅಮೃತದ ಸಾರವನ್ನು ನಮಗೆಲ್ಲ ಧಾರೆ ಎರೆದವರು. ಆ ವಚನಾಮೃತದ ಸಾಗರದಲ್ಲಿ ಮುಳುಗಿ ಮಿಂದಾಗಲೆ ನಮಗೆ ಅದರ ಆಳ ಅಗಲದ ಅನುಭವವಾಗುವದು.…