ವ್ರತಾಚಾರ ನಿಷ್ಠೆಯ ಅಕ್ಕಮ್ಮ / ಡಾ. ರಘುಶಂಖ ಭಾತಂಬ್ರಾ,ಬೀದರ
ಅಸಿ ಮಸಿ ಕೃಷಿ ವಾಣಿಜ್ಯ ಮುಂತಾದ ಕಾಯಕವ ಮಾಡಿ, ಭಕ್ತರ ಪಡುಗ, ಪಾದತ್ರಾಣ, ಪಹರಿ, ಬಾಗಿಲು, ಬೊಕ್ಕಸ, ಬಿಯಗ ಮುಂತಾದ ಕಾಯಕವಂ ಮಾಡಿಕೊಂಡು ವ್ರತಕ್ಕೆ ಊಣೆಯವಿಲ್ಲದೆ ಮಾಡುವ ಕೃತ್ಯಕ್ಕೆ ಕಡೆಯಾಗದೆ- ಈ ಭಕ್ತನ ಅಂಗಳ ಅವಿಮುಕ್ತ ಕ್ಷೇತ್ರ, ಆತನ ಮನೆಯೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಾಶ್ರಯ (ಶಿವಶರಣೆಯರ ವಚನಸಂಪುಟ-೫, ವಚನ-೩೬೫ ಪುಟ-೧೧೫) ಅಕ್ಕಮ್ಮನ ವಚನದಂತೆ ಅಸಿ ಮಸಿಗಿಂತ ಕೃಷಿಕ್ಷೇತ್ರವು ಮಾನವನ ಸರ್ವಾಂಗೀಣ ಪ್ರಗತಿಗೆ ಅವಿಭಾಜ್ಯ ಅಂಗವಾಗಿರುವAತೆ, ನೂರಾರು ವೃತ್ತಿಗಳಿಗೆ, ಅಸಂಖ್ಯಾತ ಕ್ರಿಮಿ-ಕೀಟ, ಪ್ರಾಣಿ-ಪಕ್ಷಿಗಳಾದಿ ಜೀವಸಂಕುಲಕ್ಕೆ ಪೂರಕವಾಗಿದೆ, ಪೋಷಕವಾಗಿದೆ. ಕೃಷಿಕಾರ್ಯವನ್ನು ಅವಲಂಬಿಸಿ ಬದುಕುತ್ತಿರುವ, ಜೀವನಾಶ್ಯಕ ವಸ್ತುಗಳ ಉತ್ಪಾದಕ ಚಟುವಟಿಕೆಯಲ್ಲಿ…