ಸಿದ್ಧರಾಮೇಶ್ವರರ ವಚನಗಳಲ್ಲಿ ಸದಾಚಾರ/ಶಿವಶರಣಪ್ಪ ಮದ್ದೂರ್,ಬೆಂಗಳೂರು

ಬಸವ ಪೂರ್ವದಲ್ಲಿ ಕೇವಲ ಜ್ಞಾನಕ್ಕೆ ಬಹಳ ಪ್ರಾಮುಖ್ಯತೆಯನ್ನು ಕೊಡಲಾಗಿತ್ತು. ಜ್ಞಾನ ಮತ್ತು ಕ್ರಿಯೆ ಎರಡಕ್ಕೂ ಸಮಾನ ಪ್ರಾಮುಖ್ಯತೆ ಬಂದದ್ದು ಬಸವಣ್ಣವರಿಂದ. ಏನಯ್ಯಾ ವಿಪ್ರರು ನುಡಿದಂತೆ ನಡೆಯರು ತಮಗೊಂದು ಬಟ್ಟೆ ಶಾಸ್ತ್ರಕ್ಕೊಂದು ಬಟ್ಟೆ, ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವ ನೆಂತೊಲಿವನನಯ್ಯ ಎಂದು ನುಡಿ(ಜ್ಞಾನ) ಮತ್ತು ನಡೆ (ಕ್ರಿಯೆ) ಎರಡಕ್ಕೂ ಸಮತ್ವವನ್ನು ತಂದು ಕೊಟ್ಟರು. ಜ್ಞಾನವು ಸತ್ಯದ ಅರಿವಾದರೆ ಕ್ರಿಯೆಯು ಸದಾಚಾರ (ಸತ್ಯದ-ಆಚಾರ) ವಾಯಿತು. ಜ್ಞಾನವೇ ಕ್ರಿಯೆ, ಕ್ರಿಯೆಯೇ ಜ್ಞಾನ ಎನ್ನುವಷ್ಟರ ಮಟ್ಟಿಗೆ ಸಮನ್ವಯವಾಯಿತು. ಅಲ್ಲಮರೊಂದಿಗೆ ಕಲ್ಯಾಣಕ್ಕೆ ಬಂದ ಸೊನ್ನಲಿಗೆ ಸಿದ್ಧರಾಮರು, ಅರಿವು ಮತ್ತು ಆಚಾರದ ಸಮನ್ವಯತೆಯ ಮಹತ್ವವನ್ನು ಕಂಡು ಸದಾಚಾರಿಗಳಾದರು.…

0 Comments

ಕಡಕೋಳ ಮಡಿವಾಳಪ್ಪ ಮತ್ತು ಇತರೆ ಸಾಹಿತ್ಯ ಪಥಗಳು / ಶ್ರೀ. ಮಲ್ಲಿಕಾರ್ಜುನ ಕಡಕೋಳ, ದಾವಣಗೆರೆ.

ಮಾಡಿ ಉಣ್ಣೋ ಬೇಕಾದಷ್ಟು/ಬೇಡಿ ಉಣ್ಣೋ ನೀಡಿದಷ್ಟುಮಾಡಿದವಗ ಮಡಿಗಡಬ/ಮಾಡದವಗ ಬರೀಲಡಬ// ಇವು ಕಡಕೋಳ ಮಡಿವಾಳಪ್ಪನವರ ತತ್ವಪದವೊಂದರ ಆಯ್ದ ಸಾಲುಗಳು. ಈ   ಇಡೀ ತತ್ವಪದ ಬಸವಣ್ಣನ ಕಾಯಕ ಮತ್ತು ದಾಸೋಹ ಸಂಕಲ್ಪ ಪ್ರಜ್ಞೆಗಳನ್ನು ಏಕಕಾಲಕ್ಕೆ ಸಂವೇದಿಸುತ್ತದೆ. ಅದರೊಂದಿಗೆ ಉಲ್ಲೇಖಿಸಲೇ ಬೇಕಿರುವ ಮತ್ತೊಂದು ಎಚ್ಚರವೆಂದರೆ ದುಡಿಯುವ ಮತ್ತು ದುಡಿದುದಕ್ಕೆ ಹಕ್ಕಿನಿಂದ ಪಡೆದುಣ್ಣುವ ಕಾರ್ಲ್ ಮಾರ್ಕ್ಸ್ ಶ್ರಮಸಂಸ್ಕೃತಿಯ ವಿಚಾರ ಧಾರೆಗಳನ್ನು, ಕಾರ್ಲ್ ಮಾರ್ಕ್ಸ್ ಕಾಲದ ಪೂರ್ವದಲ್ಲೇ ಈ ತತ್ವಪದ ಹೇಳುತ್ತದೆ.  ಎಲ್ಲೋ ಹುಡುಕಿದೆ ಇಲ್ಲದ ದೇವರ,ಕಲ್ಲು ಮಣ್ಣುಗಳ ಗುಡಿಯೊಳಗೆ. ಇದು ನಮ್ಮ ಕಾಲದ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ ಅವರ ಕವಿತೆ.…

0 Comments

ಅನುಭಾವದ ಆಡುಂಬೋಲ ಗೂಗಲ್ಲು / ಡಾ. ಶಶಿಕಾಂತ ಕಾಡ್ಲೂರ, ಲಿಂಗಸೂಗೂರ.

ಈ ಜಗತ್ತು ಪ್ರಾಕೃತಿಕವಾಗಿ ಅಂದರೆ ಭೌಗೋಳಿಕವಾಗಿ ಮತ್ತು ಬುದ್ಧಿವಂತ ಪ್ರಾಣಿ ಎನಿಸಿದ ಮನುಷ್ಯನ ವಿಶೇಷ ಅರಿವಿನ ಕಾರಣವಾಗಿ ಬಹಳಷ್ಟು ಕುತೂಹಲಕಾರಿಯಾದ ಮತ್ತು ವಿಶೇಷವಾದ ಸಂಗತಿಗಳನ್ನು ತನ್ನಲ್ಲಿ ಅಳವಡಿಸಿಕೊಂಡಿದೆ. ಹಾಗಾಗಿ ಇದು ನಮ್ಮಂಥವರನ್ನು ನಿರಂತರವಾಗಿ, ನಾನಾ ಕಾರಣವಾಗಿ ತನ್ನೆಡೆಗೆ ಸೆಳೆಯುತ್ತ ಹೊಸಹೊಸ ಸಂಗತಿಗಳನ್ನು ಬಿಚ್ಚಿಕೊಳ್ಳುತ್ತಾ ಲೋಕದ ಬದುಕಿಗೆ ವಿಶೇಷತೆಯನ್ನು, ಹೊಸತನವನ್ನು ಹಾಗೂ ಚೈತನ್ಯವನ್ನು ತುಂಬುತ್ತಲೇ ಇರುತ್ತದೆ. ಹೀಗಾಗಿ ನಾವು ನಿಂತುಕೊಂಡ ಮತ್ತು ನಮ್ಮ ಸುತ್ತಲಿನ ನೆಲವನ್ನು ಆಗಾಗ ಬಗೆ ಬಗೆಯ ದೃಷ್ಟಿಯಿಂದ ಗಮನಿಸುತ್ತಲೇ ಇರಬೇಕೆನಿಸುತ್ತದೆ. ಈ ಕಾರಣಕ್ಕಾಗಿಯೇ ನನಗೆ ನಮ್ಮ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವಿಶೇಷ ನೆಲೆಯಾದ…

0 Comments

ಸರ್ವವೂ ಗುಹೇಶ್ವರನ ಮಾಯೆ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

12 ನೆ ಶತಮಾನವು ವಚನ ಸಾಹಿತ್ಯ ರಚನೆಯಲ್ಲಿ ಒಂದು ಪ್ರಗತಿ ಪರವಾದ‌ ಕಾಲಘಟ್ಟ. ಸಾಮಾಜಿಕ ಸುಧಾರಣೆಯ ಸಂದರ್ಭದಲ್ಲಿ ರಚನೆಯಾದ ಶರಣ ಸಾಹಿತ್ಯ ಸ್ತ್ರೀ ಸಂವೇದನೆಯ ನೆಲೆಯಲ್ಲಿ ಪ್ರಕಟವಾದವು. ಅಂದು ಎಲ್ಲಾ ವರ್ಗದ ಸ್ತ್ರೀಯರು ಸಾಹಿತ್ಯ ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದು ಪ್ರಮುಖವಾದ ಘಟ್ಟ. ಸ್ತ್ರೀ ಪುರುಷ ಎಂಬ ಭೇದವನನ್ನು ಅಳಸಿ ಹಾಕಲು ಪ್ರಯತ್ನಿಸಲಾಯುತು. ಸ್ತ್ರೀಯರಿಗೆ ಆತ್ಮ ವಿಶ್ವಾಸ ಸಮಾನತೆಯನ್ನು ಅಭಿವ್ಯಕ್ತಿಯ ಅವಕಾಶವನ್ನು ಒದಗಿಸಿದ್ದು ಇದೇ ಕಾಲದಲ್ಲಿ. "ಒಳಗೆ ಸುಳಿಯುವ ಆತ್ಮ ಹೆಣ್ಣು ಅಲ್ಲ ಗಂಡು ಅಲ್ಲ" ಎಂಬ ಸ್ಪಷ್ಟತೆ ಹೆಣ್ಣನ್ನು ಕಂಡ ಬಗೆಯನ್ನು ಜೇಡರ ದಾಸಿಮಯ್ಯನವರು ಭಾವನಾತ್ಮವಾಗಿ…

0 Comments

ಆದಯ್ಯನವರ ವಚನಗಳಲ್ಲಿ ಭೃತ್ಯಾಚಾರ/ಶ್ರೀಮತಿ. ಸವಿತಾ ಮಾಟೂರ,ಇಳಕಲ್ಲ.

ರಾಷ್ಟಕವಿ ಜಿ.ಎಸ್. ಶಿವರುದ್ರಪ್ಪನವರ “ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೆ ಇರುವಾ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ” ಎಂಬ ಕವಿ ವಾಣಿಯಂತೆ ಕಲ್ಲು ಮಣ್ಣುಗಳ ಗುಡಿಯಲ್ಲಿಯೆ ಇನ್ನು ದೇವರನ್ನು ಹುಡುಕಿತ್ತಿದ್ದೆವೆ. “ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿ ಇದೆ ನಾಲಗೆಗೆ” ಶರಣರು ಸಾರಿದ ಅಂತರಂಗ ಶುದ್ಧಿಯಾದರೆ ನಿಜವಾದ ಅಮೃತದ ಸವಿಯನ್ನು ಸವಿಯಬಹುದು.  ಶರಣರು ಜಗದೊಳಗೆ ಅನುಶೃತಗೊಂಡ ಅಘಟಿತ ಚರಿತರು. ವಚನದ ಅಮೃತದ ಸಾರವನ್ನು ನಮಗೆಲ್ಲ ಧಾರೆ ಎರೆದವರು. ಆ ವಚನಾಮೃತದ ಸಾಗರದಲ್ಲಿ ಮುಳುಗಿ ಮಿಂದಾಗಲೆ ನಮಗೆ ಅದರ ಆಳ ಅಗಲದ ಅನುಭವವಾಗುವದು.…

0 Comments

ಬಸವಣ್ಣನವರ ವಚನಗಳಲ್ಲಿ “ಗಣಾಚಾರ”/ಶ್ರೀಮತಿ ಸುನಿತಾ ಮೂರಶಿಳ್ಳಿ

ವಿಶ್ವದ ಎಲ್ಲ ಧಾರ್ಮಿಕ ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಿಕ ಅಂಶಗಳು ಆಯಾ ಕಾಲದ ಕಟ್ಟಳೆಗೆ, ಆಚರಣೆಗೆ, ವ್ಯವಸ್ಥೆಗೆ ಸೀಮಿತವಾಗಿರುತ್ತವೆ. ಆ ಕಟ್ಟೆಳೆಗಳಿಂದ ವ್ಯವಸ್ಥೆಯಲ್ಲಿರುವ ದೋಷಗಳಿಂದ ಸಿಡಿದೇಳುವುದೂ ಕೂಡಾ ಕಾಲ ಕಾಲಕ್ಕೂ ನಡೆದು ಬಂದಿರುವ ಐತಿಹಾಸಿಕ ಸತ್ಯ. ಹಾಗೆಯೇ 12 ನೇಯ ಶತಮಾನದ ಶರಣರ ಗಣಾಚಾರ ಕೂಡಾ ಇಂತಹ ಒಂದು ಪ್ರತಿಕ್ರಿಯೆ ಎನ್ನಬಹುದು. ಪಂಚ ಆಚಾರಗಳಲ್ಲಿ ಮೊದಲನೆಯ ಮೂರು ಲಿಂಗಾಚಾರ, ಸದಾಚಾರ ಮತ್ತು ಶಿವಾಚಾರಗಳು ವ್ಯಕ್ತಿ ಪರಿವರ್ತನೆಗೆ  ಸಂಬಂಧಿಸಿದ್ದು ಅವುಗಳ ವಿಕಾಸವು ಸಮಷ್ಟಿಯೊಂದಿಗೆ ಬೆಸೆದದ್ದು ಆಗಿದೆ. ನಂತರ ಬರುವ ಗಣಾಚಾರ ಮತ್ತು ಭೃತ್ಯಾಚಾರಗಳು ಪ್ರತಿಫಲನ ರೂಪವಾಗಿ ಬಂದ ಶರಣರ  ಪ್ರಕ್ರಿಯೆಗಳಾಗಿವೆ.…

0 Comments

ವಿಚಾರಪತ್ನಿಯರಾದ ಶಿವಶರಣೆಯರು / ಡಾ. ರಾಜೇಶ್ವರಿ ಶೀಲವಂತ, ಬೀಳಗಿ.

ಪಾರಂಪರಿಕ ಸಮಾಜ ವ್ಯವಸ್ಥೆಯು ಆಚರಣೆ, ಸಂಪ್ರದಾಯ, ಪದ್ಧತಿಗಳ ಹೆಸರಿನಲ್ಲಿ ಶತ ಶತಮಾನಗಳಿಂದ ಪುರುಷ ಪ್ರಧಾನ ಸಮಾಜದಿಂದ ಮಹಿಳೆ ಶೋಷಣೆಗೆ ಒಳಗಾಗುತ್ತಲೆ ಬಂದಿದ್ದಳು. ಮಹಿಳೆಯರನ್ನು ಆ ಶೋಷಣೆಗಳಿಂದ ಮುಕ್ತಗೊಳಿಸಿ, ಅವರನ್ನು ಗೌರವಿಸಿ, ಅವಳಿಗೆ ಸಮಾಜದಲ್ಲಿ ಪುರುಷರಿಗೆ ಸಮಾನವಾದ ಸ್ಥಾನಮಾನ ಕಲ್ಪಿಸಿ, ಅವರ ವಿಚಾರಗಳಿಗೆ ಮನ್ನಣೆಯನ್ನಿತ್ತು, ಅವರನ್ನು ಮನುಷ್ಯರಂತೆ ಕಂಡದ್ದು ಶರಣ ಪರಂಪರೆ. ಶರಣರು ಮಹಿಳೆಯರಿಗೆ ಸಮಾಜದ ಹಲವಾರು ಕ್ಷೇತ್ರಗಳಲ್ಲಿ ದುಡಿಯುವ ಅವಕಾಶವನ್ನು ನೀಡಿ ಅವರು ಸ್ವಾವಲಂಬಿ ಜೀವನವನ್ನು ನಡೆಸಲು ಅನುವು ಮಾಡಿಕೊಟ್ಟರು. ಜಗತ್ತಿನಲ್ಲಿ ಪ್ರಪ್ರಥಮವಾಗಿ ಮಹಿಳೆಯರಿಗೆ ಆಯ್ಕೆ ಸ್ವಾತಂತ್ರ್ಯ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸಿದರು. ಶರಣರಿಂದ ಅಭಿವ್ಯಕ್ತಿ ಸ್ವಾತಂತ್ರ್ಯ…

0 Comments

ಪ್ರಾಣಲಿಂಗ ಸ್ಥಲ – ಪ್ರಾಣಲಿಂಗಕ್ಕೆ ಕಾಯವೆ ಸಜ್ಜೆ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಷಟ್ ಸ್ಥಲಗಳಲ್ಲಿ ನಾಲ್ಕನೆಯ ಸ್ಥಲವಾದ ಪ್ರಾಣಲಿಂಗಸ್ಥಲ ಶರಣ ಧರ್ಮವನ್ನು ಬಿಂಬಿಸುವ ವಿಶಿಷ್ಟ ಸ್ಥಲವಾಗಿದೆ. ಪ್ರಾಚೀನ ಅದ್ವೈತ ಧರ್ಮದಲ್ಲಿ ಶಂಕರಾಚಾರ್ಯರು ಹೇಳುವ “ಅಹಂ ಬ್ರಹ್ಮಾಸ್ಮಿ” ತತ್ವಕ್ಕೆ ಈ ಸ್ಥಲವನ್ನು ಹೋಲಿಸಬಹುದು. ಶರಣರು ಹೇಳುವ ಪ್ರಾಣಲಿಂಗಿ ಸ್ಥಲವು ಪ್ರಾಣವನ್ನು ಲಿಂಗವನ್ನಾಗಿಸಿ ಕೊಳ್ಳುವ ಪ್ರಕ್ರಿಯೆ ಎಂಬುದು ಗಮನಾರ್ಹ. ಅಲ್ಲಮಪ್ರಭು ಹೇಳುವಂತೆ ಲಿಂಗ ಸಾಧಕರೆಲ್ಲಾ ಭೂ ಬಾಧಕರಾದರು. ಅಂದರೆ ಅಂಗವು ಲಿಂಗವಾಗಿ ದೂರವುಳಿದರೆ ಸಮಾಜಕ್ಕೆ ಪ್ರಯೋಜನವೇನು? ಅದು ಮುಂದುವರಿದು ಸಮಾಜದ ಜಂಗಮದಲ್ಲಿ ಒಂದಾಗಬೇಕು ಏಕವಾಗಬೇಕು. ಅರವಿಂದ ಘೋಷರು ಅಂಗವನ್ನು ಲಿಂಗವಾಗಿಸಿ ಕೊಂಡಿದ್ದರು. ಗಾಂಧೀಜಿಯವರು ಮುಂದುವರಿದು ಸಮಾಜಮುಖಿಯಾಗಿ ವಿಶಾಲವಾಗಿಸಿದರು. ಬಸವಣ್ಣನವರು ಹೇಳಿದಂತೆ ಅರವಿಂದ ಘೋಷರಾಗುವುದಲ್ಲ.…

0 Comments

ಅಂತರಗದ ಆತ್ಮಗುಣಕ್ಕುಂಟೆ ಅಂಗವೈಕಲ್ಯ? / ಡಾ. ಬಸವರಾಜ ಸಾದರ, ಬೆಂಗಳೂರು.

ನಾಡಿನ ಶ್ರೇಷ್ಠ ಸಂಶೋಧಕ ಡಾ. ಎಂ. ಎಂ. ಕಲಬುರ್ಗಿ ಅವರು ಒಂದು ವಿಚಾರ ಸಂಕಿರಣದಲ್ಲಿ, “ವಚನಕಾರರ ಚಿಂತನೆಗಳ ಸಾರ್ವಕಾಲಿಕ ಪ್ರಸ್ತುತತೆ” ಎಂಬ ವಿಷಯ ಕುರಿತು ಮಾತನಾಡಿ, ತಮ್ಮ ಮಾತುಗಳ ಕೊನೆಯಲ್ಲಿ ‘ವರ್ತಮಾನದ ಜಗತ್ತಿನ ನಮ್ಮ ಎಲ್ಲ ಸಮಸ್ಯೆಗಳಿಗೂ ವಚನ ಸಾಹಿತ್ಯದಲ್ಲಿ ಪರಿಹಾರವಿದೆ’ ಎಂದು ಹೇಳಿ ಇನ್ನೇನು ವಿರಮಿಸಲು ಹೊರಟಿದ್ದರು. ಅಷ್ಟರಲ್ಲೇ ಸಭಿಕರಲ್ಲಿ ಒಬ್ಬರು ಎದ್ದು ನಿಂತು, ‘ಸರ್ ಒಂದು ಪ್ರಶ್ನೆ ಕೇಳಬುಹುದೆ?’ ಎಂದಾಗ, ‘ಹಾಂ, ಕೇಳಿ, ಕೇಳಿ’ ಎಂದಿದ್ದರು ಅವರು. ಸರ್, ನೀವು ಹೇಳಿದಂತೆ, ವಚನ ಸಾಹಿತ್ಯದಲ್ಲಿ ಜಗತ್ತಿನ ಏನೆಲ್ಲ ಸಮಸ್ಯೆಗಳಿಗೆ ಪರಿಹಾರವಿರಬಹುದು. ಆದರೆ ನಮ್ಮಂಥ ಅಂಗವಿಕಲರ…

4 Comments

ಅಷ್ಟಾವರಣಗಳಲ್ಲಿ ಪ್ರಸಾದ‌ / ಶ್ರೀಮತಿ. ಅನುಪಮ ಪಾಟೀಲ, ಹುಬ್ಬಳ್ಳಿ.

ಅಷ್ಟಾವರಣಗಳು ಅಂಗವಾದರೆ, ಪಂಚಾಚಾರಗಳು ಪ್ರಾಣ, ಷಟ್ ಸ್ಥಲಗಳು ಆತ್ಮ. ಇವು ಮೂರೂ ಶರಣ ಧರ್ಮದ ಬೆನ್ನೆಲಬುಗಳು. ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಗಳನ್ನು ಅಂತರಂಗದ ಅರಿವಿನ ಪ್ರಜ್ಞೆಗಳು ಎಂದು ಭಾವಿಸಲಾಗಿದೆ. ಅಷ್ಟಾವರಣಗಳು ಮಾಯೆಯ ಬಾಹ್ಯ ಗೊಂದಲಗಳು ಮತ್ತು ಪ್ರಭಾವಗಳಿಂದ ಭಕ್ತನನ್ನು ರಕ್ಷಿಸುವ ಗುರಾಣಿಗಳು ಅಥವಾ ಹೊದಿಕೆಗಳಾಗಿ ಕಾರ್ಯ ನಿರ್ವಹಿಸುವ 8 ಸದ್ಗುಣಗಳು. ಗುರು, ಲಿಂಗ, ಜಂಗಮ, ಭಸ್ಮ, ರುದ್ರಾಕ್ಷ, ಮಂತ್ರ, ಪ್ರಸಾದ, ಪಾದೊದಕ ಇವು ಅಷ್ಟಾವರಣಗಳು. ಮೊದಲ ಮೂರು ಪೂಜ್ಯವಾದವುಗಳು, ನಂತರದ ಮೂರು ಪೂಜಾ ಸಾಧನಗಳು, ಕೊನೆಯ ಎರಡು ಪೂಜಾ ಪರಿಣಾಮಗಳು. ಬಸವಣ್ಣನವರಿಗಿಂತಲೂ ಹಿಂದೆಯೂ ನಮ್ಮ ನಾಡಿನಲ್ಲಿ ಗುರು ಲಿಂಗ…

0 Comments