“ಅಕ್ಕನಾಗಮ್ಮನ ದೃಷ್ಟಿಯಲ್ಲಿ ಬಸವಣ್ಣ”/ಡಾ.ರಾಜೇಶ್ವರಿ ವೀ.ಶೀಲವಂತ
ಇಡೀ ಮನುಕುಲಕ್ಕೆ ಮಾನವೀಯತೆಯ ಮೌಲ್ಯಗಳ ಪಾಠವನ್ನು ನೀಡಿದ ಅಮೂಲ್ಯ ರತ್ನಗಳೇ ವಚನಗಳು. ಇಂತಹ ವಚನ ಸಾಹಿತ್ಯ ನಮಗೆಲ್ಲರಿಗೂ ಇಂದು ಲಭ್ಯವಾಗಿದೆ ಎಂದರೆ ಅದಕ್ಕೆ ಮೂಲ ಕಾರಣಿಭೂತರು ಅಕ್ಕನಾಗಮ್ಮ. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ನಡೆದ ಏಳೆಹೂಟಿ ಪ್ರಸಂಗದಿಂದ ಮನನೊಂದ ಮೃದುಹೃದಯಿ ಬಸವಣ್ಣ ಕಲ್ಯಾಣ ತೊರೆದು ಕೂಡಲಸಂಗಮಕ್ಕೆ ತೆರಳಿ ಅಲ್ಲಿಯೇ ಐಕ್ಯನಾಗುತ್ತಾನೆ. ಕಲ್ಯಾಣದಲ್ಲಿ ಬಿಜ್ಜಳನ ಸೈನ್ಯ ಶರಣರ ಹತ್ಯೆ ಮತ್ತು ವಚನಕಟ್ಟುಗಳ ಸುಡಲು ತೊಡಗುತ್ತದೆ. ಆಗ ಮಗನಂತೆ ಬೆಳಸಿದ ತಮ್ಮನನ್ನು ಕಳೆದುಕೊಂಡ ನೋವಿನಲ್ಲಿದ್ದರು ಕಲ್ಯಾಣದ ಮಹಾಮನೆಗೆ ತಾಯಿಯಂತಿದ್ದ ಅಕ್ಕನಾಗಮ್ಮ ಶರಣರ ಮತ್ತು ಶರಣರ ಮತ್ತು ವಚನಗಳ ರಕ್ಷಣೆಯ ಜವಾಬ್ದಾರಿ ಹೊರಡುತ್ತಾಳೆ.ಮಗ…





Total views : 55993