ಅಂತರಗದ ಆತ್ಮಗುಣಕ್ಕುಂಟೆ ಅಂಗವೈಕಲ್ಯ? / ಡಾ. ಬಸವರಾಜ ಸಾದರ, ಬೆಂಗಳೂರು.

ನಾಡಿನ ಶ್ರೇಷ್ಠ ಸಂಶೋಧಕ ಡಾ. ಎಂ. ಎಂ. ಕಲಬುರ್ಗಿ ಅವರು ಒಂದು ವಿಚಾರ ಸಂಕಿರಣದಲ್ಲಿ, “ವಚನಕಾರರ ಚಿಂತನೆಗಳ ಸಾರ್ವಕಾಲಿಕ ಪ್ರಸ್ತುತತೆ” ಎಂಬ ವಿಷಯ ಕುರಿತು ಮಾತನಾಡಿ, ತಮ್ಮ ಮಾತುಗಳ ಕೊನೆಯಲ್ಲಿ ‘ವರ್ತಮಾನದ ಜಗತ್ತಿನ ನಮ್ಮ ಎಲ್ಲ ಸಮಸ್ಯೆಗಳಿಗೂ ವಚನ ಸಾಹಿತ್ಯದಲ್ಲಿ ಪರಿಹಾರವಿದೆ’ ಎಂದು ಹೇಳಿ ಇನ್ನೇನು ವಿರಮಿಸಲು ಹೊರಟಿದ್ದರು. ಅಷ್ಟರಲ್ಲೇ ಸಭಿಕರಲ್ಲಿ ಒಬ್ಬರು ಎದ್ದು ನಿಂತು, ‘ಸರ್ ಒಂದು ಪ್ರಶ್ನೆ ಕೇಳಬುಹುದೆ?’ ಎಂದಾಗ, ‘ಹಾಂ, ಕೇಳಿ, ಕೇಳಿ’ ಎಂದಿದ್ದರು ಅವರು. ಸರ್, ನೀವು ಹೇಳಿದಂತೆ, ವಚನ ಸಾಹಿತ್ಯದಲ್ಲಿ ಜಗತ್ತಿನ ಏನೆಲ್ಲ ಸಮಸ್ಯೆಗಳಿಗೆ ಪರಿಹಾರವಿರಬಹುದು. ಆದರೆ ನಮ್ಮಂಥ ಅಂಗವಿಕಲರ…

4 Comments

ಅಷ್ಟಾವರಣಗಳಲ್ಲಿ ಪ್ರಸಾದ‌ / ಶ್ರೀಮತಿ. ಅನುಪಮ ಪಾಟೀಲ, ಹುಬ್ಬಳ್ಳಿ.

ಅಷ್ಟಾವರಣಗಳು ಅಂಗವಾದರೆ, ಪಂಚಾಚಾರಗಳು ಪ್ರಾಣ, ಷಟ್ ಸ್ಥಲಗಳು ಆತ್ಮ. ಇವು ಮೂರೂ ಶರಣ ಧರ್ಮದ ಬೆನ್ನೆಲಬುಗಳು. ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಗಳನ್ನು ಅಂತರಂಗದ ಅರಿವಿನ ಪ್ರಜ್ಞೆಗಳು ಎಂದು ಭಾವಿಸಲಾಗಿದೆ. ಅಷ್ಟಾವರಣಗಳು ಮಾಯೆಯ ಬಾಹ್ಯ ಗೊಂದಲಗಳು ಮತ್ತು ಪ್ರಭಾವಗಳಿಂದ ಭಕ್ತನನ್ನು ರಕ್ಷಿಸುವ ಗುರಾಣಿಗಳು ಅಥವಾ ಹೊದಿಕೆಗಳಾಗಿ ಕಾರ್ಯ ನಿರ್ವಹಿಸುವ 8 ಸದ್ಗುಣಗಳು. ಗುರು, ಲಿಂಗ, ಜಂಗಮ, ಭಸ್ಮ, ರುದ್ರಾಕ್ಷ, ಮಂತ್ರ, ಪ್ರಸಾದ, ಪಾದೊದಕ ಇವು ಅಷ್ಟಾವರಣಗಳು. ಮೊದಲ ಮೂರು ಪೂಜ್ಯವಾದವುಗಳು, ನಂತರದ ಮೂರು ಪೂಜಾ ಸಾಧನಗಳು, ಕೊನೆಯ ಎರಡು ಪೂಜಾ ಪರಿಣಾಮಗಳು. ಬಸವಣ್ಣನವರಿಗಿಂತಲೂ ಹಿಂದೆಯೂ ನಮ್ಮ ನಾಡಿನಲ್ಲಿ ಗುರು ಲಿಂಗ…

0 Comments