ಶ್ರಾವಣ ವಚನ ಚಿಂತನ-10: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಕಂಗಳೇಕೆ ʼನೋಡಬೇಡಾʼ ಎಂದರೆ ಮಾಣವು?ಶ್ರೋತ್ರಂಗಳೇಕೆ ʼಆಲಿಸಬೇಡಾʼ ಎಂದರೆ ಮಾಣವು?ಜಿಹ್ವೆ ಏಕೆ ʼರುಚಿಸಬೇಡಾʼ ಎಂದರೆ ಮಾಣದು?ನಾಸಿಕವೇಕೆ ʼವಾಸಿಸಬೇಡಾʼ ಎಂದರೆ ಮಾಣದು?ತ್ವಕ್ಕು ಏಕೆ ʼಸೋಂಕಬೇಡಾʼ ಎಂದರೆ ಮಾಣದು?ಈ ಭೇದವನರಿದು ನುಡಿಯಲು ಸಮಧಾತುವಾಯಿತ್ತು!ಗುಹೇಶ್ವರಲಿಂಗಕ್ಕೆ ಒಲಿದ ಕಾರಣ,ಅಭಿಮಾನ ಲಜ್ಜೆ ಬೇಸತ್ತು ಹೋಯಿತ್ತು.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-146 / ವಚನ ಸಂಖ್ಯೆ-98) ಬಾಳಿನ ಆಸಕ್ತಿಗಳು ಹಲವಾರು. ಅವು ಮಾನವನ ಹುಟ್ಟಿನಿಂದ ಎಲ್ಲ‌ ಕಾಲಕ್ಕೂ ಇರುವಂಥವೇ. ತನ್ನ ಆಸಕ್ತಿ ಮೂಲವಾಗಿಯೇ ಜಗತ್ತಿನಲ್ಲಿ‌ ಮನುಷ್ಯ ಎಲ್ಲವನ್ನೂ ಸೃಜಿಸುತ್ತ ಬಂದಿದ್ದಾನೆ. ಕಣ್ಣು ಕನಸಿದ್ದು, ಮನ ಊಹಿಸಿದ್ದು, ಕೈಯ ಸಾಹಸದ ಮೂಲಕ ಒಂದು ವಸ್ತು ರೂಪ…

0 Comments

ಶ್ರಾವಣ ವಚನ ಚಿಂತನ-09: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಕಾಯಕ್ಕೆ ಮಜ್ಜನ, ಪ್ರಾಣಕ್ಕೆ ಓಗರ, ಇದ ಮಾಡಲೆ ಬೇಕು.ಸುಳಿವು ಸುಳುಹುನ್ನಕ್ಕ ಇದ ಮಾಡಲೆ ಬೇಕು.ಗುಹೇಶ್ವರನೆಂಬ [ಲಿಂಗಕ್ಕೆ]ಆತ್ಮವುಳ್ಳನ್ನಕ್ಕ ಭಕ್ತಿಯ ಮಾಡಲೇಬೇಕು.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-145 / ವಚನ ಸಂಖ್ಯೆ-82) ಕಾಯ ಇರುವವರೆಗೆ ಕಾಯಗುಣವ ಬಿಡಲಾಗದು‌. ಕಾಯಕ್ಕೆ ಏನೇನು ಬೇಕೊ ಅದೆಲ್ಲವನ್ನು ಕೊಡುತ್ತಲೇ ಹೋಗಬೇಕಾಗುತ್ತದೆ. ಕಾಯವೆಂಬುದು ಹಾಗೆಯೆ ಇರದು. ಗಾಳಿಯನ್ನು ತಿಂದು ಬದುಕಲಾಗದು. ಎಂಥ ಮಹಾತ್ಮನ ಶರೀರವಾದರೂ ಅದರದೇ ಆದ ನಿಯಮಗಳನ್ನು ಹೊಂದಿರುತ್ತದೆ. ಇಷ್ಟು ದಿನ ಆಹಾರವಿಲ್ಲದೆ ಬದುಕಿದರು, ಅಷ್ಟು ದಿನ ನಿರಾಹಾರಿಗಳಾಗಿ ಬದುಕಿದರು ಎಂಬಂಥ ಉದಾಹರಣೆಗಳನ್ನು ನಾವು ನೋಡಬಹುದು‌. ಇವನ್ನು ತಳ್ಳಿಹಾಕಲಾಗದು. ಜಗತ್ತಿನಲ್ಲಿ ಎಲ್ಲ…

0 Comments

ವಚನ ಸಾಹಿತ್ಯದಲ್ಲಿ ಲಾಭ ಅಥವಾ ಪ್ರತಿಫಲದ ಪರಿಕಲ್ಪನೆ / ಡಾ. ಗಣಪತಿ ಬಿ ಸಿನ್ನೂರ, ಕಲಬುರಗಿ.

ನಾವು ಆಧುನಿಕ ಅರ್ಥಶಾಸ್ತ್ರ ಹಾಗು ವ್ಯವಹಾರ ಅಧ್ಯಯನ ಮಾಡುವಾಗ ಲಾಭ ಅಥವಾ ಪ್ರತಿಫಲದ ಪರಿಕಲ್ಪನೆಯನ್ನು ಆಧುನಿಕ ಪಾಶ್ಚಿಮಾತ್ಯ ಅರ್ಥಶಾಸ್ತ್ರಜ್ಞರು ರೂಪಿಸಿದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಮಾತ್ರ ಅಧ್ಯಯನ ಮಾಡುತ್ತೇವೆ. ಬಹುತೇಕ ಆರ್ಥಿಕ ಚಿಂತಕರು ಮತ್ತು ಬರಹಗಾರರು ಆಧುನಿಕ ಪಾಶ್ಚಿಮಾತ್ಯ ಅರ್ಥಶಾಸ್ತ್ರಜ್ಞರ ಪರಿಕಲ್ಪನೆಯನ್ನು ಮಾತ್ರ ವಿವರಿಸುತ್ತಾರೆ. ಹಾಗಾದರೆ ಲಾಭ ಅಥವಾ ಪ್ರತಿಫಲದ ಪರಿಕಲ್ಪನೆ ಅವರಿಗಿಂತ ಮುಂಚೆ ಇರಲಿಲ್ಲವೇ? ಇದ್ದರೆ ಅದನ್ನು ನೀಡಿದವರು ಯಾರು? ಅದರ ಸ್ವರೂಪ ಎಂಥದ್ದು? ಹೀಗೆ ಅನೇಕ ಪ್ರಶ್ನಗಳು ಹುಟ್ಟಿಕೊಳ್ಳುತ್ತವೆ. ನಾನೊಂದು ದಿನ ಅಲ್ಲಮ ಪ್ರಭುಗಳ “ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿರ್ದಡೆ, ಆ ಬೆವಸಾಯದ ಘೋರವೇತಕ್ಕಯ್ಯಾ?”…

0 Comments

ಶ್ರಾವಣ ವಚನ ಚಿಂತನ-08: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಜಲದೊಳಗಿರ್ದು ಕಿಚ್ಚು ಜಲವ ಸುಡದೆ,ಜಲವು ತಾನಾಗಿಯೇ ಇದ್ದಿತ್ತು ನೋಡಾ,ನೆಲೆಯನರಿದು ನೋಡಿಹೆನೆಂದಡೆ, ಅದು ಜಲವು ತಾನಲ್ಲ.ಕುಲದೊಳಗಿರ್ದು ಕುಲವ ಬೆರೆಸದೆ, ನೆಲೆಗೆಟ್ಟುನಿಂದುದನಾರು ಬಲ್ಲರೋ?ಹೊರಗೊಳಗೆ ತಾನಾಗಿರ್ದು-ಮತ್ತೆ ತಲೆದೋರದಿಪ್ಪುದು,ಗುಹೇಶ್ವರಾ ನಿಮ್ಮ‌ ನಿಲವು ನೋಡಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-138 / ವಚನ ಸಂಖ್ಯೆ-3) ದೇವನ ಇರವನ್ನು ಕುರಿತು ಶರಣರು ಮಾಡಿದ ಚಿಂತನೆ ಅದ್ಭುತವಾದುದು. ಅವನು ಎಲ್ಲೆಡೆಯೂ ಇದ್ದರೂ ಅವನ ಇರುವಿಕೆ ನಮ್ಮ ಸಾಮಾನ್ಯತೆಯ ಅರಿವಿಗೆ ಬರಲಾರದು. ವಿಶೇಷವಾದ ದೃಷ್ಟಿಕೋನ ಇದ್ದರೆ ಮಾತ್ರ ಅವನ ಅರಿವು ನಮಗೆ ಆಗಲು ಸಾಧ್ಯ. ಇದು ಒಂದು ರೀತಿಯಲ್ಲಿ ಹಾಲಿನಲ್ಲಿ ತುಪ್ಪ ಇರುವಂತೆ, ನೀರಿನಲ್ಲಿ ಬೆಂಕಿ…

0 Comments

ಜನಪದ ಸಾಹಿತ್ಯದಲ್ಲಿ ಹರಳಯ್ಯ ಶರಣಯ್ಯ / ಡಾ. ನೀಲಾಂಬಿಕಾ ಪೊಲೀಸಪಾಟೀಲ, ಕಲಬುರಗಿ.

“ಶರಣಾರ್ಥಿಯೆಂಬ ಶ್ರವವ ಕಲಿತಡೆ ಆಳುತನಕೆ ದೆಸೆಯಪ್ಪ ನೋಡ” ಎಂದಿರುವರು. ದೇವರಿಗೆ ಮಾತ್ರ ಶರಣಾಗುವುದಲ್ಲ ದೇವರ ಸ್ವರೂಪಿಗಳಾದ ಶರಣರು ಒಬ್ಬರನ್ನೊಬ್ಬರು ಕಂಡಾಗ ಗೌರವ ಪ್ರೇಮದಿಂದ ಶರಣು ಶರಣಾರ್ಥಿ ಪದಗಳನ್ನು ಬಳಸಿದ್ದಾರೆ. ಶಿವ ಶಿವ ಎನ್ನುತ್ತಾ ಹರ ಹರ ಎನ್ನುತ್ತಾಶಿವನ್ಹಂತ ಬಸವಗ ನೆನೆಯುತ್ತ ಸತಿಪತಿತೆಗೆದಾರ ಚರ್ಮ ತೊಡೆಯದುಬಾಳೆಯ ಹಣ್ಣಿನಾ ಸಿಪ್ಪೆಯು ತೆಗೆದ್ಹಾಂಗಚರಮವು ಬಿಚ್ಚಿ ತೆಗೆದಾರ ಕಣ್ಣಾಗಹನಿಹರ ನೀರು ಬಂದಿಲ್ಲಕಣ್ಣೀರು ಹರಿದಿಲ್ಲ ಮಾರಿಯು ಕಿವಚಿಲ್ಲಸಂತಸದಿಂದ ಶಿವಶಿವ ಎನ್ನುತ್ತಾಶಿವರೂಪಿಗೆ ಪಾದುಕೆ ಹೊಲಿತಾರ ಬಾಳೆಯ ಹಣ್ಣಿನ ಹಾಗೆ ಹರಹರ ಶಿವಶಿವ ಎನ್ನುತ್ತಾ ಸತಿ-ಪತಿ ತಮ್ಮ ತೊಡೆಯ ಚರ್ಮ ಬಿಚ್ಚುತ್ತಾರೆ. ಮುಖದ ಮೇಲೆ ನೋವಿಲ್ಲ, ಕಣ್ಣಿನಲ್ಲಿ…

0 Comments

ಆಯ್ದಕ್ಕಿ ಲಕ್ಕಮ್ಮ / ಡಾ. ನೀಲಾಂಬಿಕಾ ಪೊಲೀಸಪಾಟೀಲ, ಕಲಬುರಗಿ.

ಆಯ್ದಕ್ಕಿ ಲಕ್ಕಮ್ಮ ಕಾಯಕದ ಗಣಿಯಮ್ಮಗಂಡಗ ಬುದ್ಧಿ ಕಲಿಸ್ಯಾಳ ಲಕ್ಕಮ್ಮತಂದಕ್ಕಿ ಹಿಂದಕ್ಕ ಕಳುವ್ಯಾಳ ಕಾಯಕ ಎಂದ ಕೂಡಲೇ ನೆನಪಾಗುವ ಹೆಸರು ಆಯ್ದಕ್ಕಿ ಲಕ್ಕಮ್ಮನವರದು. ಸತಿ-ಪತಿ ಇಬ್ಬರೂ ಬಸವಣ್ಣನವರ ಕಾಯಕ ತತ್ವಕ್ಕೆ ವ್ಯಾಖ್ಯಾನರಾಗಿದ್ದಾರೆ. ಕಾಯಕ ಹೇಗೆ ಮಾಡಬೇನ್ನುವುದನ್ನು ತೋರಿಸಿ ಕೊಟ್ಟು ಅದರಿಂದ ಅರಿವು, ಧೈರ್ಯ, ಸಮಾನತೆ, ಲಿಂಗಾಂಗ ಸಾಮರಸ್ಯ ಮುಂತಾದ ಮಹಾನ್ ಗುಣಗಳನ್ನು ಅಳವಡಿಸಿಕೊಂಡು ಅದರಿಂದ ಬಡತನವನ್ನು ಗೆದ್ದು, ಶಾಂತಿ-ಸಮಾಧಾನದಿಂದ ಬಾಳಬಹುದು ಎಂಬುದನ್ನು ತೋರಿಸಿಕೊಟ್ಟ ದಂಪತಿಗಳು ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ ಶರಣರು. ಜನಪದರೂ ಕೂಡ ಇವರ ಕಾಯಕದ ಮಹಿಮೆಯನ್ನು ಅದ್ಭುತವಾಗಿ ಚಿತ್ರಿಸುತ್ತಾರೆ. ಮಾರಯ್ಯನ ಮಡದಿಯು ನಾರಿತಾ ಲಕ್ಕಮ್ಮನಾರಿಯಾ ಬಳಗಕ್ಕೆ…

0 Comments

ಶ್ರಾವಣ ವಚನ ಚಿಂತನ-07: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಕಾಣದುದನರಸುವದಲ್ಲೆ ಕಂಡುದದನರಸುವರೇ ಹೇಳಾ!ಘನಕ್ಕೆ ಘನವಾದ ವಸ್ತು;ತಾನೆ ಗುರುವಾದ, ತಾನೆ ಲಿಂಗವಾದ, ತಾನೆ ಜಂಗಮವಾದ,ತಾನೆ ಪ್ರಸಾದವಾದ, ತಾನೆ ಮಂತ್ರವಾದ, ತಾನೇ ಯಂತ್ರವಾದ,ತಾನೆ ಸಕಲವಿದ್ಯಾರೂಪನಾದಇಂತಿವೆಲ್ಲವನೊಳಕೊಂಡು ಎನ್ನ ಕರಸ್ಥಲಕ್ಕೆ ಬಂದಇನ್ನು ನಿರ್ವಿಕಾರ ಗುಹೇಶ್ವರ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-142 / ವಚನ ಸಂಖ್ಯೆ-55) ಅಂಗ ಮತ್ತು ಲಿಂಗ ಎರಡೂ ಶರಣ ಸಾಹಿತ್ಯದಲ್ಲಿ ಆಧಾರಭೂತ ಅಂಶಗಳು. ಲಿಂಗವ ಕಾಣಲು ಅಂಗಬೇಕು. ಅಂಗವು ಉದಧರಿಸಲು ಲಿಂಗವೂ ಬೇಕು. ಹಾಗೆ ನೋಡಿದರೆ ಅಂಗವೂ ಲಿಂಗಮಯ ಶರೀರವೇ ತಾನಾಗಬೇಕು ಎನ್ಬುವದು ಒಂದು ಆದರ್ಶವಾದರೆ ಅದು ಒಡಮೂಡಿದ್ದೇ ಲಿಂಗದ ಮೂಲಕ ಎಂಬುದೊಂದು ಪ್ರಮೇಯ ಇದ್ದೇ ಇದೆ.…

0 Comments

ಶ್ರಾವಣ ಮಾಸದ ಚಿಂತನೆ-01 / ಅವಿರಳಜ್ಞಾನಿ ಚನ್ನಬಸವಣ್ಣನವರ ಜೀವನ ಮತ್ತು ಸಂದೇಶ / ಪ್ರಕಾಶ ಗಿರಿಮಲ್ಲನವರ, ಬೆಳಗಾವಿ.

(ಶ್ರಾವಣಮಾಸದ ನಿಮಿತ್ತ ನಾಡಿನಾದ್ಯಂತ ಪುರಾಣ ಪ್ರವಚನ ಕಾರ್ಯಕ್ರಮಗಳು ನಿತ್ಯ ನಿರಂತರ ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಚನ್ನಬಸವಣ್ಣನವರ ಜೀವನ ಮತ್ತು ಸಂದೇಶ ಕುರಿತು ಶ್ರಾವಣ ಮಾಸದ ಪರ್ಯಂತ ಕೆಲವು ಚಿಂತನೆಗಳನ್ನು ಪ್ರಕಟಿಸಬೇಕೆಂಬ ಆಶಯ ನನ್ನದು. ಓದಿ ಅಭಿಪ್ರಾಯ, ಸಲಹೆ, ಸೂಚನೆ, ಮಾರ್ಗದರ್ಶನ ಮಾಡಬೇಕೆಂದು ವಿನಂತಿಸುವೆ) ಮರ್ತ್ಯಲೋಕದ ಭಕ್ತರ ಮನವಬೆಳಗಲೆಂದು ಇಳಿತಂದನಯ್ಯಾ ಶಿವನು.ಕತ್ತಲೆಯ ಪಾಳೆಯವ ರವಿ ಹೊಕ್ಕಂತಾಯಿತ್ತಯ್ಯಾ.ಚಿತ್ತದ ಪ್ರಕೃತಿಯ ಹಿಂಗಿಸಿ,ಮುಕ್ತಿಪಥವ ತೋರಿದನೆಲ್ಲ ಅಸಂಖ್ಯಾತ ಗಣಂಗಳಿಗೆ,ತನುವೆಲ್ಲ ಸ್ವಯಲಿಂಗ, ಮನವೆಲ್ಲ ಚರಲಿಂಗ.ಭಾವವೆಲ್ಲ ಮಹಾಘನದ ಬೆಳಗು.ಚೆನ್ನಮಲ್ಲಿಕಾರ್ಜುನಯ್ಯಾ,ನಿಮ್ಮ ಶರಣ ಸಮ್ಯಕ್ ಜ್ಞಾನಿ ಚೆನ್ನಬಸವಣ್ಣನಶ್ರೀಪಾದಕ್ಕೆ ಶರಣೆಂದುಎನ್ನ ಭವಂ ನಾಸ್ತಿಯಾಯಿತ್ತಯ್ಯಾ ಪ್ರಭುವೆ.(ಸಮಗ್ರ ವಚನ ಸಂಪುಟ: 5-2021 / ಪುಟ…

0 Comments

ಶ್ರಾವಣ ವಚನ ಚಿಂತನ-06: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಕಳ್ಳಗಂಜಿ ಕಾಡಹೊಕ್ಕಡೆ ಹುಲಿ ತಿಂಬುದ ಮಾಬುದೇ?ಹುಲಿಗಂಜಿ ಹುತ್ತವ ಹೊಕ್ಕಡೆ ಸರ್ಪ ತಿಂಬುದ ಮಾಬುದೆ?ಕಾಲಗಂಜಿ ಭಕ್ತನಾದಡೆ ಕರ್ಮ ತಿಂಬುದ ಮಾಬುದೇ?ಇಂತೀ‌ ಮೃತ್ಯುವಿನ ಬಾಯ ತುತ್ತಾದ,ವೇಷಡಂಬಕರ ನಾನೇನೆಂಬೆ ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-144 / ವಚನ ಸಂಖ್ಯೆ-73) ಭಕ್ತಿಯ ಕುರಿತು ಶರಣರು ಮಾಡಿದ ಚಿಂತನೆ ವೈಜ್ಞಾನಿಕ ಮತ್ತು ಆಧಾರಪೂರ್ವಕವಾಗಿದೆ. ಭಕ್ತಿಯನ್ನು ಹೇಗೆ ಮಾಡಬೇಕು? ಇದು ಶರಣರು ತಮ್ಮನ್ನು ತಾವು ಕೇಳಿಕೊಂಡ ಪ್ರಶ್ನೆ. ಅವರಿಗಿಂತ ಪೂರ್ವ ಕಾಲದಿಂದಲೂ ಮತ್ತು ಅವರ ಕಾಲಘಟ್ಟದಲ್ಲೂ ಸಹಿತ ಧಾರ್ಮಿಕ ವ್ಯವಸ್ಥೆ ಭಕ್ತಿಗೆ ಆಡಂಬರದ ವೇಷವನ್ನು ತೊಡಿಸಿ ದೇವರ ಹೆಸರಿನಲ್ಲಿ ಢಂಬಾಚಾರ ಮಾಡುವವರು…

0 Comments

ಶ್ರಾವಣ ವಚನ ಚಿಂತನ-05: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಜಲದೊಳಗಿರ್ದ ಕಿಚ್ಚು ಜಲವ ಸುಡದೆಜಲವು ತಾನಾಗಿಯೆ ಇದ್ದಿತ್ತು ನೋಡಾನೆಲೆಯನರಿದು ನೋಡಿಹೆನೆಂದಡೆ,ಅದು ಜಲವು ತಾನಲ್ಲ.ಕುಲದೊಳಗಿರ್ದು ಕುಲವ ಬೆರೆಸದೆ ,ನೆಲೆಗಟ್ಟುನಿಂದುದನಾರು ಬಲ್ಲರೋ?ಹೊರಗೊಳಗೆವತಾನಾಗಿರ್ದು - ಮತ್ತೆ ತಲೆದೋರದಿಪ್ಪುದುಗುಹಾಎಶ್ವರಾ ನಿಮ್ಮ‌ಜಿಲುವು ನೋಡಾ(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-144 / ವಚನ ಸಂಖ್ಯೆ-71) ಈ ವಚನ ಲಿಂಗದ ಇರುವಿಕೆಯ ಸ್ವರೂಪವನ್ನು‌ ಕುರಿತು ಅಲ್ಲಮರು ಚರ್ಚಿಸಿದ ಒಂದು ವಚನ. ದೈವದ ಇರುವಿಕೆಯನ್ನು‌ ಕುರಿತು ವ್ಯೋಮಕಾಯ ಅಲ್ಲಮ ಪ್ರಭುಗಳು‌ ಮಾಡಿದ ಚಿಂತನೆ ಅಗಮ್ಯವಾದುದು. ಒಟ್ಟಾರೆ ಶರಣರ ಚಿಂತನೆಗೆ ಅಡಿಪಾಯವಾದುದು. ನಮ್ಮ ಹೊರಗಿನ ಕಣ್ಣಿಗೆ ಪರಮನ ಇರವು‌ ಕಾಣಿಸಲಾರದು. ಅದು ಜಲದೊಳಗನ ಪಾವಕನಂತೆ. ಅಗ್ನಿಯೊಳಗಣ ಸುಡುವಿಕೆಯಂತೆ.…

0 Comments