ಅಲ್ಲಮ ಪ್ರಭುಗಳ ವಚನ “ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ” ವಿಶ್ಲೇಷಣೆ / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.
ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿಯೋಗದ ಹೊಲಬ ನೀನೆತ್ತ ಬಲ್ಲೆ?ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡುಮದ ಮತ್ಸರ ಬೇಡ ಹೊದುಕುಳಿಗೊಳಬೇಡಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ ನಿಲ್ಲೊ(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-156 / ವಚನ ಸಂಖ್ಯೆ-229)ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.ಅಗ್ನಿ: ಹೃದಯದಲ್ಲಿ ಹುದುಗಿದ ಜ್ಞಾನ, ಸ್ವಾನುಭವ ಪ್ರಭೆ, ತನು ಗುಣ ಸಂಬಂಧಿ, ಅಹಂಕಾರದಿಂದ ಕೂಡಿದ ದೇಹ, ಅರಿಷಡ್ವರ್ಗಗಳ ಸಂಕೇತ.ಉದಕ : ನೀರು, ಸಂಸಾರ ವಿಷಯ-ವ್ಯಾಮೋಹಗಳ ಸಂಕೇತ, ಮನಸ್ಸು, ಮನದ ನಿಲುವು, ಪರಮಾನಂದ ಜಲ, ಪ್ರಶಾಂತ ಭಾವ.ವಾಯು: ಪ್ರಾಣಶಕ್ತಿಯ ಸಂಕೇತ.ಆಕಾಶ:…





Total views : 62575