ಬಸವಾದಿ ಶರಣರ ಆಧ್ಯಾತ್ಮ ಸಾಧನೆ ಮತ್ತು ಸಿದ್ಧಿ / ಡಾ. ಪಂಚಾಕ್ಷರಿ ಹಳೆಬೀಡು, ಬೆಂಗಳೂರು.

ಜಗತ್ತಿನಲ್ಲಿ ಹಲವಾರು ಧರ್ಮಗಳು ಅಸ್ತಿತ್ವದಲ್ಲಿವೆ. ಪ್ರತಿಯೊಂದು ಧರ್ಮದ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು ಭಿನ್ನವಾಗಿವೆ. ನಮ್ಮ ಸುತ್ತಲಿನ ಎಲ್ಲಾ ಧರ್ಮಗಳೂ ಕೂಡ ದೇವರು ಮತ್ತು ಜೀವಾತ್ಮನ ಕುರಿತಾಗಿ ಭಿನ್ನ ನಿಲುವುಗಳನ್ನು ಹೊಂದಿರುವುದನ್ನು ನಾವು ಕಾಣುತ್ತೇವೆ. ಕೆಲವು ಧರ್ಮಗಳು ದೇವರ ಅಸ್ತಿತ್ವವನ್ನು ಸ್ಥಿರೀಕರಿಸಿದರೆ ಮತ್ತೆ ಕೆಲವು ಧರ್ಮಗಳು ದೇವರ ಅಸ್ಥಿತ್ವವನ್ನು ನಿರಾಕರಿಸುತ್ತವೆ.ಅವುಗಳಿಗೆ ಕ್ರಮವಾಗಿ ಸೇಶ್ವರವಾದಿ ಮತ್ತು ನಿರೀಶ್ವರವಾದಿ ಧರ್ಮಗಳೆಂದು ಹೇಳುವರು. ಕೆಲವು ಧರ್ಮಗಳು ಪುನರ್ಜನ್ಮ ಸಿದ್ಧಾಂತವನ್ನು ಒಪ್ಪಿದರೆ ಮತ್ತೆ ಕೆಲವು ಧರ್ಮಗಳು ಅದನ್ನು ನಿರಾಕರಿಸುತ್ತವೆ, ಕೆಲವು ಧರ್ಮಗಳು ಸ್ವರ್ಗ-ನರಕಗಳನ್ನು ಅಲ್ಲಗಳೆದರೆ ಮತ್ತೆ ಕೆಲವು ಅದನ್ನು ಒಪ್ಪುತ್ತವೆ. ಈ ಹಿನ್ನೆಲೆಯಲ್ಲಿ…

0 Comments

ಡಾ. ಕಲ್ಯಾಣಮ್ಮ ಲಂಗೋಟಿ ಮತ್ತು ಪ್ರೋ. ಸಿದ್ಣಣ್ಣ ಲಂಗೋಟಿ ಶರಣ ದಂಪತಿಗಳು – “ಸಿದ್ಧ ಕಲ್ಯಾಣ ಪರಿಶುದ್ಧ ಕಲ್ಯಾಣ”.

ತುಂಬಿದ ಸಭೆಯಲ್ಲಿ ರಾಜ ತನ್ನ ಎಲ್ಲ ಮಂತ್ರಿಗಳನ್ನುದ್ದೇಶಿಸಿ, ನಮ್ಮ ರಾಜ್ಯದ ಸರ್ವಾಂಗೀಣ ಏಳಿಗೆಗೆ ಕಾರಣರಾದವನ್ನು ಗುರುತಿಸಿರಿ. ಅವರನ್ನು ನಾನು ಸನ್ಮಾನಿಸಬೇಕು ಎಂದು ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸುತ್ತಾನೆ. ಒಬ್ಬ ಮಂತ್ರಿ ನಮ್ಮ ರಾಜ್ಯದಲ್ಲಿರುವ ಇಂಜನೀಯರುಗಳಿಗೆ ಇದರ ಶ್ರೇಯಸ್ಸು ತಲುಪಬೇಕು. ಏಕೆಂದರೆ ಈ ಕೋಟೆ, ಅರಮನೆ, ರಸ್ತೆಗಳು, ಆಣೆಕಟ್ಟುಗಳು ಮತ್ತು ನೀರಾವರಿ ಯೋಜನೆಗಳನ್ನು ಮಾಡಿ ರಾಜ್ಯವನ್ನು ಸಮೃದ್ಧಗೊಳಿಸಿದ್ದಾರೆ. ಅಂಥ ಇಂಜನೀಯರುಗಳಲ್ಲಿ ಶ್ರೇಷ್ಠರಾದವರನ್ನು ಈಗಲೇ ಗುರುತಿಸಿ ಕರೆತನ್ನಿ ಎಂದು ರಾಜ ಆಜ್ಞೆ ಮಾಡುತ್ತಾನೆ. ಆದರೆ ಇನ್ನೊಬ್ಬ ಮಂತ್ರಿ ವೈದ್ಯರು ಈ ರಾಜ್ಯವನ್ನು ಸ್ವಸ್ಥವಾಗಿಡುವಲ್ಲಿ ಶ್ರಮ ವಹಿಸಿದ್ದಾರೆ ಎಂದಾಗ ಒಬ್ಬ ಶ್ರೇಷ್ಠ…

0 Comments

ವಚನ ಸಾಹಿತ್ಯದಲ್ಲಿ ಸಂಘರ್ಷ ನಿರ್ವಹಣೆಯ ಜ್ಞಾನಶಿಸ್ತು / ಡಾ. ಶೀಲಾದೇವಿ ಮಳಿಮಠ.

Research Article Main Topic: ವಚನ ಸಾಹಿತ್ಯದಲ್ಲಿ ಸಂಘರ್ಷ ನಿರ್ವಹಣೆಯ ಜ್ಞಾನಶಿಸ್ತು Specialization Topic: ವಿಶೇಷ ವಿಷಯ: “ಕಾಳವ್ವೆ ವಚನಗಳು – ಸಾಹಿತ್ಯ ಸಂವೇದನೆ ಮತ್ತು ಸಾಮಾಜಿಕ ವೇದನೆ – ಸಂಘರ್ಷ ನಿರ್ವಹಣೆಯ ಜ್ಞಾನಶಿಸ್ತು. ಅರ್ಥಪ್ರಾಣಭಿಮಾನದ ಮೇಲೆ ಬಂದಡೂ ಬರಲಿ,ವೃತಹೀನನ ನೆರೆಯಲಾಗದು.ನೋಡಲು ನುಡಿಸಲು ಎಂತೂ ಆಗದು.ಹರಹರಾ, ಪಾಪವಶದಿಂದ ನೋಡಿದಡೆ,ರುದ್ರಜಪ ಮಾಹೇಶ್ವರಾರಾಧನೆಯ ಮಾಳ್ಪುದು.ಇಂತಲ್ಲದವರ ಉರಿಲಿಂಗಪೆದ್ದಿಗಳರಸ‌ ನಕ್ಕು ಕಳೆವನವ್ವಾ(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-868 / ವಚನ ಸಂಖ್ಯೆ-729) ವೃತ ಹೋದಾಗಳೆ ಇಷ್ಟಲಿಂಗದ ಕಳೆ ನಷ್ಟವವ್ವಾ,ಅವರು ಲಿಂಗವಿದ್ದೂ ಭವಿಗಳು.ಅದು ಹೇಗೆಂದಡೆ ಪ್ರಾಣವಿಲ್ಲದ ದೇಹದಂತೆ.ಉರಿಲಿಂಗಪೆದ್ದಿಗಳರಸ ಬಲ್ಲನೊಲ್ಲನವ್ವಾ.(ಸಮಗ್ರ ವಚನ ಸಂಪುಟ:…

0 Comments

ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲಾ / ಡಾ. ಎಮ್.‌ ಎ. ಜ್ಯೋತಿ ಶಂಕರ, ಮೈಸೂರು.

ಕನ್ನಡ ಸಾಹಿತ್ಯ ಲೋಕದಲ್ಲಿ 12 ನೇಯ ಶತಮಾನ, ಆ ಸಂದರ್ಭದಲ್ಲಿ ಬಂದಂತಹ ವಚನ ಸಾಹಿತ್ಯ, ಇತಿಹಾಸದಲ್ಲಿ ಒಂದು ಅಪೂರ್ವವಾದ ದಾಖಲೆಯನ್ನು ನಿರ್ಮಿಸಿತು. ಅದು ಸಾಹಿತ್ಯದ ರೀತಿಯನ್ನು, ಭಾಷೆಯನ್ನು, ಛಂದಸ್ಸನ್ನು ಮಾತ್ರ ಗಮನಿಸಲಿಲ್ಲ, ಬದಲಿಗೆ ಸಮಾಜವನ್ನೇ ಹೊಸ ದಿಕ್ಕಿನೆಡೆಗೆ ನೋಡುವಂತೆ ಮಾಡಿತು. ಆ ಹೊಸ ದಿಕ್ಕು ತನ್ನ ದಿಕ್ಸೂಚಿಯನ್ನು ರಚಿಸಿದ್ದು, ಸತ್ಯದ ಶುದ್ಧ ಬದುಕಿಗಾಗಿ ಎನ್ನುವಂತಹದು ಅಚ್ಚರಿಯನ್ನು ಮೂಡಿಸಿದರೂ, ಅದು ಇಂದಿನ ಜೀವನಕ್ಕೂ ಸರಿ ಹೊಂದಬಲ್ಲ ತಾತ್ವಿಕ ಮಾತೃಕೆಯನ್ನು ರಚಿಸಿದೆ ಎನ್ನುವುದು ಸದಾ ಸಂಸ್ಮರಣೀಯವಾದ ಸಂಗತಿಯಾಗಿದೆ. ಅನೇಕ ಶರಣರು ಬಸವಣ್ಣನವರ ನೇತೃತ್ವದಲ್ಲಿ, ನವ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸಿದರು.…

0 Comments

ಬಸವಣ್ಣನವರ ವಚನಗಳಲ್ಲಿ ಸಾಂಸ್ಕೃತಿಕ ನೆಲೆಗಳು /   ಡಾ. ಲಕ್ಷ್ಮೀಕಾಂತ ಪಂಚಾಳ

ಕನ್ನಡ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ನೀಡಿದ ಮಹತ್ವದ ಕೊಡುಗೆ ವಚನ ಸಾಹಿತ್ಯ. ಅಟ್ಟದೆತ್ತರದಂತಿದ್ದ ಸಾಹಿತ್ಯವನ್ನು ಜನಸಾಮಾನ್ಯರ ಮಟ್ಟಕ್ಕಿಳಿಸಿದ ಕೀರ್ತಿ ವಚನಕಾರರದ್ದಾಗಿದೆ. ಜಾತ್ಯತೀತ, ವರ್ಗಾತೀತ, ಲಿಂಗಾತೀತ, ರೂಪಾತೀತ, ಛಂದೋತೀತವಾಗಿ ವಚನಕಾರರು ತಾವು ಕಂಡುಂಡ ಅನುಭವವನ್ನು ಗದ್ಯವು ಅಲ್ಲದ, ಪದ್ಯವು ಅಲ್ಲದ, ಆದರೆ ಹೃದ್ಯವೇದ್ಯವಾಗುವ ವಿಶಿಷ್ಟ ರೀತಿಯ ವಚನದ ರಚನೆ ಮಾಡಿದರು. ಸಾರ್ವಕಾಲಿಕ ಮಾನವೀಯ ಮೌಲ್ಯಗಳಾದ ಸತ್ಯ, ಅಹಿಂಸೆ, ದಯೆ, ಕರುಣೆ, ಅನುಕಂಪ, ಸಮಾನತೆ, ಸಹಕಾರ, ಜಾತ್ಯತೀತ, ಕಾಯಕ, ದಾಸೋಹ ಮೊದಲಾದವು ಹನ್ನೆರಡನೆ ಶತಮಾನದಿಂದ ಇಂದಿನವರೆಗೂ ನವನೀತದಂತೆ ಹೊಳಪು ಪಡೆದು ಸಮಕಾಲೀನತೆ ಪಡೆದುಕೊಂಡಿವೆ. ಇಂತಹ ವಚನ ಸಾಹಿತ್ಯದ ಮೇರು ಪ್ರಮಥ…

0 Comments

ಡಾ. ಶೀಲಾದೇವಿ ಮಳಿಮಠ-ಜ್ಞಾನದಿಂದ ಅನುಪಮ ಸುಜ್ಞಾನದೆಡೆಗೆ ಕೊಂಡೊಯ್ಯುವ ಚಿಂತಾಮಣಿ

ಅಖಂಡ ಮಂಡಲಾಕಾರಂ | ವ್ಯಾಪ್ತಂ ಯೇನ ಚರಾಚರಂ ||ತತ್ಪದಂ ದರ್ಶಿತಂ ಯೇನ | ತಸ್ಮೈ ಶ್ರೀ ಗುರವೇ ನಮಃ ‖ ಅಜ್ಞಾನ ತಿಮಿರಾಂಧಸ್ಯ | ಜ್ಞಾನಾಂಜನ ಶಲಾಕಯಾ ||ಚಕ್ಷುಃ ಉನ್ಮೀಲಿತಂ ಯೇನ | ತಸ್ಮೈ ಶ್ರೀಗುರವೇ ನಮಃ ‖ ಗುರು ಬ್ರಹ್ಮಾ ಗುರುರ್ವಿಷ್ಣುಃ | ಗುರು ದೇವೋ ಮಹೇಶ್ವರಃ ||ಗುರು ಸಾಕ್ಷಾತ್ ಪರಬ್ರಹ್ಮ | ತಸ್ಮೈ ಶ್ರೀಗುರವೇ ನಮಃ ‖ Primary objective of education is to make children fearless  - Swami Vivekananda “ಶಿಕ್ಷಣದ ಮೂಲಭೂತ ಉದ್ದೇಶ ಅಂದರೆ ವಿದ್ಯಾರ್ಥಿಗಳನ್ನು ಧೈರ್ಯವಂತರನ್ನಾಗಿ ಮಾಡುವುದು”.…

0 Comments

ಡಾ. ಸರ್ವಮಂಗಳಾ ಸಕ್ರಿ, ರಾಯಚೂರು

16 ನೇ ವರ್ಷಕ್ಕೆ ಮದುವೆಯಾಗಿ, ಇಬ್ಬರು ಮಕ್ಕಳ ತಾಯಿಯಾದ ನಂತರ ಪುನಃ ಓದುವ ಹಂಬಲದೊಂದಿಗೆ, ಎಲ್ಲರ ವಿರೋಧದ ನಡುವೆಯೂ PUC ಮಾಡಿ, ನಂತರ B.A. ಮತ್ತು M.A. ಮಾಡಿ, ತದನಂತರ ಸಂಶೋಧನೆ ಮಾಡಿ Ph D ಪದವಿಯನ್ನೂ ಸಹ ಪಡೆದು, ಕಾಲೇಜಿನಲ್ಲಿ ಉಪನ್ಯಾಸಕಿಯಾದ ಸಂಘರ್ಷಪೂರ್ಣ ಕಥೆ ಕೇಳಿದರೆ ಯಾವುದೋ ಅನಂತನಾಗ ಮತ್ತು ಲಕ್ಷ್ಮಿ ಅಭಿನಯಿಸಿದ ಕೌಟುಂಬಿಕ ಚಲನಚಿತ್ರದಂತೆ ಭಾಸವಾಗುತ್ತದಲ್ಲವೇ. ಇಲ್ಲ, ಇದು ನಿಜ ಜೀವನದ ಸಾಹಸಪೂರ್ಣ ಕಥೆಯ ನೈಜ ನಿರೂಪಣೆ. ಇಂದಿನ ಕಥೆಯ ನಾಯಕಿ ಹಾಗೂ ಇಂದಿನ ವಿಶೇಷ ಅತಿಥಿ ಸಾಹಸೀ ಸೃಜನಶೀಲ ಸಂಶೋಧನಾತ್ಮಕ ಬರಹಗಾರರಾದ ರಾಯಚೂರಿನ…

1 Comment

ಲಿಂಗಭೇದ ಅಳಿಸಿ ಸಮಾನತೆ ಸಾರಿದ ಶರಣರು/ಡಾ. ರಾಜೇಶ್ವರಿ. ವೀ. ಶೀಲವಂತ.

ಜಗತ್ತಿನಲ್ಲಿ ಸ್ತ್ರೀ ಸ್ವಾತಂತ್ರ್ಯವನ್ನು ಮೊಟ್ಟಮೊದಲು ಪ್ರತಿಪಾದಿಸಿದ ಧರ್ಮ ಶರಣಧರ್ಮ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಹಿಳೆಗೆ ಆರ್ಥಿಕ, ಧಾರ್ಮಿಕ, ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ನೀಡಿ ಅವರನ್ನು ಮೊದಲು ಗೌರವಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಸ್ತ್ರೀಯು ಸಮಾಜದಲ್ಲಿ ಪುರುಷನಿಗೆ ಸಮಾನವೆಂದು ತಿಳಿದುಕೊಂಡು ಸ್ತ್ರೀ ಸಮಾನತೆಯನ್ನು ತಮ್ಮ ಚಳುವಳಿಯ ಮುಖ್ಯ ಉದ್ದೇಶಗಳಲ್ಲಿ ಒಂದನ್ನಾಗಿಸಿಕೊಂಡು ಆಕೆಗೆ ಸಮಾನ ಸ್ಥಾನಮಾನ, ಸವಲತ್ತುಗಳನ್ನು ಕಲ್ಪಿಸಿಕೊಟ್ಟವರು ಶರಣರು. ಜೊತೆಗೆ ಆಕೆ ಅತ್ಯಂತ ಸೊಗಸಾಗಿ, ಗಂಭೀರವಾಗಿ ವಚನಗಳನ್ನು ರಚನೆ ಮಾಡುವ ಮಟ್ಟಿಗೆ ಬೆಳೆಯಿಸಿ ವಚನಕಾರ್ತಿಯರ ಸಮೂಹವನ್ನು ಸೃಷ್ಟಿಸಿದವರು ಶರಣರು. ತಮಗೆ ಸರಿಸಮನಾದ ಸ್ಥಾನವನ್ನು ಕಲ್ಪಿಸಿ ಆಲೋಚಿಸುವಲ್ಲಿ,ಅನುಭವಗಳನ್ನು ಅಭಿವ್ಯಕ್ತಿಸುವಲ್ಲಿ ಅನುಭವದೆತ್ತರಕ್ಕೆ ಎರುವದನ್ನು…

0 Comments

ಬಸವಯುಗದ ವಚನಗಳಲ್ಲಿ ಸ್ತ್ರೀ ಸ್ವಾತಂತ್ರ್ಯ ಮತ್ತು ಸಂವೇದನಾ ಶೀಲತೆ, ಒಂದು ಚಿಂತನೆ/ ಶ್ರೀ.ವಿಜಯಕುಮಾರ ಕಮ್ಮಾರ

ಹನ್ನೆರಡನೇ ಶತಮಾನದಲ್ಲಿ ಬಸವಣ್ಣವರ ಕ್ರಾಂತಿಯು ಶ್ರೇಣೀಕೃತ ಸಮಾಜದಲ್ಲಿನ ದೀನ ದಲಿತರನ್ನು ಮೇಲೆತ್ತುವುದರ ಜೊತೆಗೆ ಕಡೆಗಣಿಸಲ್ಪಟ್ಟ ಮಹಿಳೆಯರನ್ನು ಉದ್ಧರಿಸುವುದಾಗಿತ್ತು. ಅಕ್ಷರಲೋಕಕ್ಕೆ ಅಪರಿಚಿತರಾದಂತ ಮಹಿಳೆಯರಿಗೆ ಆತ್ಮ ಗೌರವ ಕೊಟ್ಟು ಅಷ್ಟೇ ಅಲ್ಲ ಅವರನ್ನು ವಚನಕಾರ್ತಿಯರನ್ನಾಗಿ ಮಾಡಿದ್ದು ಹನ್ನೆರಡನೇ ಶತಮಾನದ ಕಲ್ಯಾಣ ಕ್ರಾಂತಿಯ ಬಹುದೊಡ್ಡ ಸಾಧನೆ. ವಚನ ಸಾಹಿತ್ಯದಲ್ಲಿ ಒಟ್ಟು 67/68 ಶರಣೆಯರ ಉಲ್ಲೇಖ ಬರುತ್ತದೆ. ಹೆಸರುಗಳು ಒಂದಕ್ಕೊಂದು ಸೇರಿರಬಹುದು. ಮಹಾದೇವಿ ಅಂತಾನೇ ಸುಮಾರು 8/9 ಶರಣೆಯರ ಹೆಸರುಗಳಿವೆ. ಗುಡ್ಡವ್ವೆ ಅಂತಾನೇ 3 ಹೆಸರುಗಳಿವೆ. ಒಟ್ಟಾರೆ ವಚನ ಸಾಹಿತ್ಯದಲ್ಲಿ If we delete the cross reference names, ನಮಗ ಸುಮಾರು…

0 Comments

POLITICAL PHILOSOPHY IN VACHANA LITERATURE AND ITS IMPACT ON “POLITICS & EGALITARIANISM”

(Photo Courtesy: Internet) INTRODUCTION: Democracy, as a subject material in Political Science and Vachana Literature shows us very significant doctrines. Besides leading towards the path of egalitarian society, the principles written in Vachana Literature are far better than the modern day’s Political Theories and Values, which covers all gambit of Micro & Macro Socio-Economic Approaches, Religious as well as Political Science on…

0 Comments