ಅಲ್ಲಮಪ್ರಭುದೇವರ ವಚನ ವಿಶ್ಲೇಷಣೆ / ಶ್ರೀ ಅಳಗುಂಡಿ ಅಂದಾನಯ್ಯ, ಬೆಳಗಾವಿ.
ಕೆಂಡದ ಗಿರಿಯ ಮೇಲೊಂದು,ಅರಗಿನ ಕಂಬವಿದ್ದಿತ್ತು ನೋಡಯ್ಯಾ.ಅರಗಿನ ಕಂಬದ ಮೇಲೆ ಹಂಸೆಯಿದ್ದಿತ್ತು.ಕಂಭ ಬೆಂದಿತ್ತು ಹಂಸೆ ಹಾರಿತ್ತು ಕೆಂಡ ಎತ್ತಲಡಗಿತ್ತು ಗುಹೇಶ್ವರಾ.(ಸಮಗ್ರ ವಚನ ಸಂಪುಟ-2 / 2021 / ಪುಟ. 186 / ವಚನ ಸಂಖ್ಯೆ. 605) ಅಲ್ಲಮಪ್ರಭುಗಳ ಬೆಡಗಿನ ನುಡಿಗಳ ಈ ವಚನವನ್ನು ಮೊದಲಿಗೆ ಸಹಜವಾಗಿ ಓದಿದಾಗ, ಅಲ್ಲಿ ಬಳಸಿರುವ ರೂಪಕದ ಭಾಷೆಯಲ್ಲಿರುವಂಥಾ ಆ ದೃಷ್ಟಾಂತದ ಪದಗಳು; ಸರ್ವೇ ಸಾಮಾನ್ಯವಾದ ಮತ್ತು ಸಿದ್ಧಮಾದರಿಯ ಹಾಗೂ ಜನಜನಿತವಾದ ಅರ್ಥವನ್ನು ನೀಡುತ್ತವೆ. ಅದುದರಿಂದ ಪ್ರತಿ ಸಾಲುಗಳು ನೀಡುವ ಚಿತ್ರಣವನ್ನು ಸುಲಭವಾಗಿ ಗ್ರಹಿಸಿಕೊಂಡು ರೂಪವಾದಂಥ ಒಂದು ಅರ್ಥವನ್ನಿಲ್ಲಿ ಸಹಜವಾಗಿ ಹೇಳಿ ಬಿಡಬಹುದೆಂದು ಖರೆ…




Total views : 69462