ಗುರು ಪೂರ್ಣಿಮೆಗೊಂದು ಗುರು ಕರುಣೆಯ ಪ್ರಸಾದ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.
ಜಗತ್ತಿನಲ್ಲಿ ಗುರುವಿನ ಸ್ಥಾನ ಅತ್ಯಂತ ಮಹತ್ವಪೂರ್ಣವಾದದ್ದು. ಅಂಧಕಾರವನ್ನು ಕಳೆದು ಜ್ಞಾನದ ಬೆಳಕನ್ನು ನೀಡಿ ಪೊರೆಯುವ ಸದ್ಗುರುವಿನ ಮಹಿಮೆ ಅಪಾರವಾದದ್ದು. ಗುರು ಎಂಬ ಶಬ್ದವೇ ಈ ಮಾತನ್ನು ಪುಷ್ಟೀಕರಿಸುತ್ತದೆ. “ಗು” ಎಂದರೆ ಕತ್ತಲು, “ರು” ಎಂದರೆ ಹೋಗಲಾಡಿಸು ಎಂಬುದಾಗಿದ್ದು “ಗುರು ಎಂದರೆ ಅಜ್ಞಾನದ ಕತ್ತಲನ್ನು ಕಳೆದು ಸುಜ್ಞಾನವೆಂಬ ಬೆಳಕನ್ನು” ನೀಡುವವನು. ಮಾನವ ಸಮುದಾಯದ ಅಭಿವೃದ್ಧಿಗೆ ಧರ್ಮ ಮತ್ತು ಧರ್ಮಾಚರಣೆಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ. “ಅರಿವು” ಮತ್ತು “ಆಚಾರ” ಯಾವುದೇ ಧರ್ಮದ ಎರಡು ಕಣ್ಣುಗಳು. ಮಾನವರಲ್ಲಿ “ಮರಹು” ಎಂಬುದು ಹೆಚ್ಚು. ಇದನ್ನೇ ನಮ್ಮ ಶರಣರು “ಮಾಯೆ” ಎಂದು ಕರೆದಿದ್ದಾರೆ.…