ಕಾಯಕ ನಿರತೆ ಕದಿರೆ ರೇಮವ್ವೆ | ಡಾ. ಸುಜಾತ ಅಕ್ಕಿ, ಮೈಸೂರು.
ಕನ್ನಡ ನಾಡಿನಲ್ಲಿ ಹನ್ನೆರಡನೆಯ ಶತಮಾನದಲ್ಲಿ ವಚನ ಚಳುವಳಿ ಸಮಾನತೆಯ ನೆಲೆಯಲ್ಲಿ ಅಕ್ಷರ ಕ್ರಾಂತಿ ಎಂಬ ಇಷ್ಟಲಿಂಗ ಸಾಹಿತ್ಯ ವಿಶಿಷ್ಟವಾಗಿ ಬೆಳೆಯಿತು. ಅಕ್ಷರ ಕಲಿಕೆಯು ಪ್ರತಿಯೊಬ್ಬರ ಹಕ್ಕು ಎಂದು ಸಾಬೀತು ಪಡಿಸಿದವರು ಶಿವಶರಣರು. ಬಸವಾದಿ ಪ್ರಮಥರು ನಡೆಯಲ್ಲಿ ನುಡಿಯಲ್ಲಿ ಒಂದಾದವರು. ದುಡಿತ ವರ್ಗದವರಿಗೆ ಸಮಾಜದಲ್ಲಿ ಆತ್ಮಸ್ಥೈರ್ಯವನ್ನು ತುಂಬಿದವರು ಬಸವಣ್ಣನವರು. ದಯೆ ಇರಬೇಕು ಸಕಲ ಪ್ರಾಣಿಗಳಲ್ಲಿ ಎಂದು ಮಾನವೀಯ ಮೌಲ್ಯಗಳನ್ನು ಸಾರಿ ಸಾಕ್ಷೀಕರಿಸಿದವರು. ಲಿಂಗ ಬೇಧ, ವರ್ಗಬೇಧ ತಾರತಮ್ಯ, ಸಾಂಸ್ಥಿಕವಲ್ಲದ, ಪೌರೋಹಿತ್ಯವಿಲ್ಲದ ಸರ್ವ ಸಮಾನತೆಯ ಬಸವಣ್ಣನವರ ನಿಲುವು ವಿಶ್ವಕ್ಕೆ ಮಾದರಿಯಾಗಿದೆ. ಮಹಿಳೆಯರೆಲ್ಲಾ ಅಕ್ಷರ ಕಲಿತು ವಚನಗಳನ್ನು ಬರೆದು ತಮ್ಮ ಅಭಿವ್ಯಕ್ತಿ…