ಕಾಯಕಯೋಗಿ ಶಿವಶರಣ ಮೇದಾರ ಕೇತಯ್ಯನವರು | ಶ್ರೀಮತಿ. ಅನುಪಮ ಪಾಟೀಲ, ಹುಬ್ಬಳ್ಳಿ.

ಸಾವಿರಾರು ವರ್ಷಗಳಿಂದ ಬೇರೂರಿದ ವರ್ಣಾಶ್ರಮ, ಅಂಧಶೃಧ್ಧೆ, ಶೋಷಣೆ ಮುಂತಾದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿ ಸಾಮಾಜಿಕ ಕ್ರಾಂತಿಯನ್ನು ಮಾಡಿದವರು ಯುಗಪ್ರವರ್ತಕ ಬಸವಣ್ಣನವರು. ಈ ಕ್ರಾಂತಿಯಲ್ಲಿ ಬಸವಣ್ಣನವರ ಜೊತೆಗೆ ಕೈ ಜೋಡಿಸಿದವರು ಅನೇಕ ಶತಮಾನಗಳಿಂದ ಸಮಾಜದ ಅಲಕ್ಷ್ಯಕ್ಕೆ ಒಳಗಾದ ಕೆಳ ವರ್ಗದವರು, ದೀನದಲಿತರು. ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ನುಲಿಯ ಚಂದಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ ಮುಂತಾದವರು. ಅಂತಹ ಅಗ್ರಗಣ್ಯ ಶರಣರಲ್ಲಿ ಮೇದರ ಕೇತಯ್ಯನವರೂ ಕೂಡ ಒಬ್ಬರು. ಬಸವಣ್ಣನವರಿಂದ ಪ್ರಭಾವಿತರಾಗಿ ಅವರನ್ನು ಗುರುವಾಗಿ ಸ್ವೀಕರಿಸಿ ತನು-ಮನ-ಧನಗಳನ್ನು ಗುರು-ಲಿಂಗ-ಜಂಗಮರಲ್ಲಿ ಅರ್ಪಿಸಿ ನಿಜಸುಖವನ್ನ ಕಂಡವರು ಶರಣ ಮೇದಾರ ಕೇತಯ್ಯನವರು. ಶುದ್ಧ…

0 Comments

ಕಾಯಕ ನಿಷ್ಠೆಯ ಅನುಪಮ ಶರಣ ಮೇದಾರ ಕೇತಯ್ಯನವರು | ಡಾ. ದಯಾನಂದ ನೂಲಿ, ಚಿಕ್ಕೋಡಿ.

ಕಾಯಕನಿಷ್ಠೆಯ ಶರಣ ಮೇದಾರ ಕೇತಯ್ಯನವರ ಸ್ಮರಣೋತ್ಸವ ನಿಮಿತ್ತ ಲೇಖನ. ಮೇದಾರ ಕೇತಯ್ಯನವರು ಮಲೆನಾಡಿನ ಬೇಲೂರು ಎಂಬ ಊರಿನವರು. ಅವರ ಧರ್ಮಪತ್ನಿ ಸಾತವ್ವೆ. ಅವರು ಬಿದರಿನ ಕಾಯಕವನ್ನು ಕೈಗೊಂಡಿದ್ದರು. ಪ್ರತಿನಿತ್ಯವೂ ಬೆಟ್ಟಕ್ಕೆ ಹೋಗಿ ಬಿದಿರುಗಳನ್ನು ಕಡಿದುಕೊಂಡು ಬಂದು ಅವುಗಳಿಂದ ಬುಟ್ಟಿ, ಮೊರ ಮೊದಲಾದವನ್ನು ಹೆಣೆದು ಅವುಗಳನ್ನು ಮಾರಿ ಬಂದ ಹಣದಿಂದ ಜೀವನ ಸಾಗಿಸುವುದರ ಜೊತೆಗೆ ಜಂಗಮ ದಾಸೋಹ ಸೇವೆಯನ್ನು ಮಾಡುತ್ತಿದ್ದರು. ಶಿವಾನುಭವ ಮಂಟಪದಲ್ಲಿ ನಡೆಯುತ್ತಿದ್ದ ಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದರು. ಎನ್ನ ಚಿತ್ತಕ್ಕೆ ಆಚಾರಲಿಂಗವಾದಾತ, ಬಸವಣ್ಣ.ಎನ್ನ ಬುದ್ಧಿಗೆ ಗುರುಲಿಂಗವಾದಾತ, ಬಸವಣ್ಣ.ಎನ್ನ ಅಹಂಕಾರಕ್ಕೆ ಶಿವಲಿಂಗವಾದಾತ, ಬಸವಣ್ಣ.ಎನ್ನ ಮನಕ್ಕೆ ಜಂಗಮಲಿಂಗವಾದಾತ, ಬಸವಣ್ಣ.ಎನ್ನ ಜೀವಕ್ಕೆ ಪ್ರಸಾದಲಿಂಗವಾದಾತ,…

0 Comments

ಜಂಗಮ ಜಾತಿವಾಚಕವಲ್ಲ: ಅದರ ಕಂದಾಚಾರವೇ ಧರ್ಮ ದ್ರೋಹ | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ಜಂಗಮ ಎಂಬ ಪದವು ಸಂಸ್ಕೃತ ಮೂಲದ್ದಾಗಿದೆ. ಕನ್ನಡದಲ್ಲಿ ಸಂಚಾರಿ, ಚಲನಶೀಲ ಎನ್ನಲಾಗುತ್ತಿದೆ. ಶಿವ ಅಥವಾ ಚಲನಶೀಲ ಶಕ್ತಿಯೇ ಜಂಗಮ. ಜಂಗಮರು ಎಂದರೆ ಶಿವ ಭಕ್ತರಾಗಿ ಲಿಂಗಾಯತ ತತ್ವ ಆಚರಿಸುತ್ತಾರೆ. ಅವರು ತಾವು ಧರಿಸುವ ಇಷ್ಟಲಿಂಗದಲ್ಲೇ ಶಿವನ ಸಾಕ್ಷಾತ್ಕಾರ ಹೊಂದುತ್ತಾರೆ. ಜಂಗಮನು ಸಜೀವ ಶಿವನ ಪ್ರತೀಕ. “ಜಂಗ್” ಎಂದರೆ ಗೆಜ್ಜೆಯ ಸದ್ದು. ಹಾಗೂ “ಗಮ” ಎಂದರೆ ಸಂಚಾರ, ಚಲನೆ ಎಂದರ್ಥ. ಜಂಗಮ, ಇದು ಸ್ಥಿರವಲ್ಲದ, ಅಲೆದಾಡುವ, ಇಷ್ಟಲಿಂಗದಲ್ಲೇ ಶಿವನನ್ನು ದರ್ಶಿಸುವಂತೆ ಸಂಚರಿಸಿ ಉಪದೇಶಿಸುವ ಕಾಯಕ. ಶಿವನ ಒಲುಮೆಗಾಗಿ ಮಠ, ಮಂದಿರಗಳಿಗೆ ಮೊರೆ ಹೋದರೆ ದೇವರು ಕಾಣಲಾರ. ಅವೆಲ್ಲವೂ ಸ್ಥಾವರ.…

0 Comments

ಕಡಕೋಳ ಮಡಿವಾಳಪ್ಪನವರ ಕಿರು ಪರಿಚಯ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.

ಅಫ್‌ಜಲಪುರ ತಾಲೂಕಿನ ಚಿಕ್ಕಹಳ್ಳಿ ಬಿದನೂರಿನಲ್ಲಿ ಮಡಿವಾಳಪ್ಪನವರು ಹುಟ್ಟಿದರು. ತಾಯಿ ಗಂಗಮ್ಮ. ಇವರು ತಂದೆಯ ಹೆಸರನ್ನು ಬಚ್ಚಿಟ್ಟರು. ಮಡಿವಾಳಪ್ಪನವರಿಗೆ ಇದು ಒಂದು ದೊಡ್ಡ ಪ್ರಶ್ನೆ ಆಯ್ತು. ಇದೆ ಮುಂದೆ ಅವರಿಗೆ ಸತ್ವ ಪರೀಕ್ಷೆ ಆಗಿ ಪರಿಣಮಿಸಿತು.  ಮಡಿವಾಳಪ್ಪನವರು ಬಾಲಕರಾಗಿದ್ದಾಗ ಆಟ ಆಡುವಾಗ ಒಬ್ಬ ಹೆಣ್ಣು ಮಗಳಿಗೆ ಚೆಂಡು ಬಡಿದಿದ್ದಕ್ಕೆ “ಹಾಟ್ಯಾ ಇನ್ನ ತಂದಿ ಇದ್ರ ಎಷ್ಟು ಮೆರೀತಿದ್ದಿಯೋ ಏನೋ” ಅಂತ ಧ್ವನಿ ಎತ್ತರಿಸಿ ಒದರಾಡಿದಳು. ಆಕಸ್ಮಿಕವಾಗಿ ಮಡಿವಾಳಪ್ಪನವರ ಮೇಲೆ ಆದ ಈ ಆಘಾತದಿಂದ  ಅವರು ಘಾಸಿಗೊಂಡರೂ ಅವರಲ್ಲಿನ ಚೈತನ್ಯ ಜಾಗೃತವಾಯಿತು. ಆಗ ಕರುಣಿಯಾಗಿ ಮಾರ್ಗ ತೋರಿದವರು ಬಿದನೂರು ಮಠದ…

0 Comments

ಮಾದಾರ ಚನ್ನಯ್ಯನವರ ಜಯಂತಿ | ಶ್ರೀಮತಿ. ಅಮರವಾಣಿ ಐದನಾಳ, ಲಿಂಗಸುಗೂರು.

ಮಾದಾರ ಚನ್ನಯ್ಯನವರ ಜಯಂತಿ ಅಂಗವಾಗಿ ಅವರನ ಸಾತ್ವಿಕ ಬದುಕು, ನಡೆ ನುಡಿ ಸಿದ್ಧಾಂತ ಕುರಿತು ಲೇಖನ. ಇದ್ದು ಇರದಂತೆ, ಹೊದ್ದೂ ಹೊದೆಯದಂತೆ, ಸದ್ದು ಗದ್ದಲವಿಲ್ಲದೆ, ನಿರಾಳವಾಗಿ, ನಿತ್ಯ ತೃಪ್ತನಾಗಿ ಬದುಕಿದ್ದ ಚನ್ನಯ್ಯನವರು ಹುಟ್ಟಿ ಬೆಳೆದದ್ದು ತಮಿಳುನಾಡಿನ ಕಂಚಿಪುರದಲ್ಲಿ. “ನಡೆ ನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ” “ಆಚಾರವೇಕುಲ, ಅನಾಚಾರವೇ ಹೊಲೆಯಂದು ಅರಿತು ಶ್ರಮ ಗೌರವ ಅಳವಡಿಸಿಕೊಂಡ ಭಕ್ತ ಶ್ರೇಷ್ಠ, ಕಾಯಕನಿಷ್ಠೆಯ ಮೇರು ಶಿಖರವನ್ನು ಅಲಂಕರಿಸಿದ ಶರಣ ಚನ್ನಯ್ಯನವರು 12 ನೇ ಶತಮಾನದ ಬಸವ ಸಂಕುಲದ ಆದರ್ಶ ಪುರುಷ. ಮಾದಾರ ಚನ್ನಯ್ಯನವರು ತಮಿಳುನಾಡಿನ ಕಂಚಿ ಪಟ್ಟಣದಲ್ಲಿ ಚೋಳ ರಾಜನ…

0 Comments

ಬಸವಣ್ಣನವರ ಸ್ವಗತ | ಶ್ರೀ. ಮಹಾಂತೇಶ ನವಲಕಲ್‌, ಕಲಬುರಗಿ.

ಕಲ್ಯಾಣದಲ್ಲಿ ರಾಜಪ್ರಭುತ್ವ ನಮ್ಮನ್ನು ಉಚ್ಚಾಟನೆಗೊಳಿಸಿತ್ತು. ಬಿಜ್ಜಳ ಮಹಾರಾಜರು ಆರು ತಿಂಗಳ ಕಾಲ ನಾನು ಇಲ್ಲಿ ಇರಬಾರದು ಎಂದು ಆಜ್ಞಾಪಿಸಿದ್ದರು. ಆದರೆ ಅವರ ಮಗ ಸೋವಿದೇವ ನನಗೆ ಜೀವಿತಾವಧಿಯಲ್ಲಿ ಕಲ್ಯಾಣಕೆ ಬರಬಾರದು ಎನ್ನುವ ಸುಗ್ರೀವಾಜ್ಞೆ ಹೊರಡಿಸಿದ್ದ. ನಾನು ಅಪ್ಪಣ್ಣಗಳು, ಮಸಣಯ್ಯನವರು ಗುರುಬಸವ ಮಹಾಂತರಂತಹ ಅನೇಕ ತೊಂಬತೈದು ಶರಣರು ಆರಂಭದಲ್ಲಿ ನಮ್ಮ ಕಲ್ಯಾಣ ನಿರ್ಗಮನದ ಪ್ರಯಾಣದಲ್ಲಿ ಭಾಗವಹಿಸಿದ್ದರೂ ಕೂಡ  ಅವರನ್ನು ಶರಣಧರ್ಮಗಳ ಉಪದೇಶಕ್ಕಾಗಿ ಆಯಾ ಆಯಾ ಊರುಗಳಲಿ ಬಿಟ್ಟು ನಾನು ಮತ್ತು ಅಪ್ಪಣ್ಣಗಳು ನಡೆಯುತ್ತ ನಡೆಯುತ್ತ   ಬಾಗೇವಾಡಿಗೆ ಬಂದು ನಿಂತಿದ್ದೆವು. ಇಲ್ಲಿಂದ ಸಂಗಮ ಇನ್ನೂ ಐವತ್ತು ಹರಿದಾರಿಗಳ ದೂರವಿತ್ತು. ಆಗ…

0 Comments

ಪರಮದಾಸೋಹಿ ಲಿಂಗಾಂಗಯೋಗಿ ನೀಲಾಂಬಿಕೆ ತಾಯಿಯವರು | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಎನಗೆ ಲಿಂಗವು ನೀವೆ ಬಸವಯ್ಯ,ಎನಗೆ ಸಂಗವೂ ನೀವೆ ಬಸವಯ್ಯ,ಎನಗೆ ಪ್ರಾಣವು ನೀವೆ ಬಸವಯ್ಯ,ಎನಗೆ ಪ್ರಸಾದವು ನೀವೆ ಬಸವಯ್ಯ,ಎನಗೆ ಪ್ರಭೆ ಮೂರ್ತಿಯೂ ನೀವೆ ಬಸವಯ್ಯ,ಎನಗೆ ಸಂಗಯ್ಯನು ನೀವೆ ಬಸಯ್ಯ(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-334/ವಚನ ಸಂಖ್ಯೆ-876) ಬಸವಣ್ಣನವರ ಜೀವನದ ಒಂದು ಪ್ರಮುಖ ಭಾಗ ಮತ್ತು ಅಂತರಂಗದ ಸಖಿ ನೀಲಮ್ಮ ತಾಯಿಯವರು. ವಿದ್ಯೆ, ವಿನಯ ಮತ್ತು ಸಂಸ್ಕೃತಿಗಳ ಸಂಗಮವಾದ ನೀಲಮ್ಮನವರು ಬಸವಣ್ಣನವರ ಭಕ್ತಿ, ಆತ್ಮಶಕ್ತಿ ಮತ್ತು ವ್ಯಕ್ತಿತ್ವಕ್ಕೆ ಮಾರುಹೋಗಿ ಅವರಿಗೆ ತಮ್ಮನ್ನ ತಾವು ಸಂಪೂರ್ಣವಾಗಿ ಅರ್ಪಿಸಿಕೊಂಡವರು. ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದರೂ ಸಹ ಸರಳ ಜೀವನವನ್ನು ತಮ್ಮದಾಗಿಸಿಕೊಂಡ ನೀಲಮ್ಮ ತಾಯಿಯವರು…

1 Comment

ರಗಳೆ ಕವಿ ಹರಿಹರನ “ಬಸವರಾಜದೇವರ ರಗಳೆ: ಒಂದು ಸಾಂಸ್ಕೃತಿಕ ಮುಖಾಮುಖಿ” | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಮತ್ತೆ ಕೇಳಲೆ ಕುಮಾರವ್ಯಾಸ ಬಸವನಿಪ್ಪತ್ತೈದು ಸ್ಥಲದ ರಗಳೆಯ ಮಾಡಿ ನಲಿವುತ್ತುದಾತ್ತಭಕ್ತಿಯೊಳಾ ವಿರೂಪಾಕ್ಷ ನೆಡೆಗೊಯ್ಯಲಿನಿದು ಮಿಗಿಲಾದುದೆಂದುಹೊತ್ತಗೆಯ ತೆಗೆದುಕೊಂಡುರೆ ನುಂಗಿದಂ ಚೆನ್ನೆಯಿತ್ತ ಪಾಲ್ಗುಡಿದಂತೆ ಸರ್ವರುಂ ಪೊಗಳಿದರುಚಿತ್ತಜಮದಾರಣ್ಯದಾವ ಹರಿಹರದೇವ ಕವಿಚಕ್ರವರ್ತಿಯೆಂದು(ಹರಿಹರ ಕವಿಯ ಬಸವರಾಜದೇವರ ರಗಳೆ/ಟಿ. ಎಸ್.‌ ವೆಂಕಣ್ಣಯ್ಯ/ಪೀಠಿಕೆ/ಪುಟ ಸಂಖ್ಯೆ. xiii) 12 ನೇ ಶತಮಾನದ ಬಸವಾದಿ ಶರಣರ ಪಕ್ಷಿನೋಟ ಕಣ್ಣೆದುರಿಗೆ ಬಂದಾಗಲೆಲ್ಲಾ ಕನ್ನಡದ ಕವಿ ಹರಿಹರ ಮತ್ತು ತೆಲುಗು ಭಾಷೆಯ ಕವಿ ಪಾಲ್ಕುರಿಗೆ ಸೋಮನಾಥ ಹಾಗೂ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಕೋಲ್ಮಿಂಚಿನಂತೆ ಬೆಳಗುತ್ತಾರೆ. ಶರಣರ ಇತಿಹಾಸ ಮತ್ತು ಲಿಂಗಾಯತ ಧರ್ಮತತ್ವಗಳ ಅನ್ವೇಷಣೆಯಲ್ಲಿ ಪೂರಕವಾಗುವಂತೆ ತೆಲುಗಿನಲ್ಲಿ ಬರೆದ ಮೂರು ಉತ್ಕೃಷ್ಠ ಗ್ರಂಥಗಳೆಂದರೆ ಹರಿಹರನ ರಗಳೆಗಳು,…

0 Comments

ವಚನ ಪಯಣದ ಬೆಳಗು | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ನಮ್ಮ ಬದುಕಿನ ತಲ್ಲಣಗಳನ್ನು  ಸಂಘರ್ಷಗಳನ್ನು ತರ್ಕಿಸುವಾಗ  ಅನೇಕ ತಾತ್ವಿಕ ಧಾರೆಗಳು ಮುಖಮುಖಿಯಾಗುತ್ತವೆ, ಶರಣರ ಹಣತೆ ಬೆಳಕು ಜ್ಯೋತಿ ಒಂದು ವ್ಯವಸ್ಥಿತವಾದ  ವೈಚಾರಿಕ  ಆಕರವದು. ಭೌತಿಕ ಮತ್ತು ಅಧ್ಯಾತ್ಮದಲ್ಲಿ  ಇದಕ್ಕೆ ನಾನಾ ಅರ್ಥಗಳಿವೆ. ನಮ್ಮ ಸಂಸ್ಕೃತಿಯನ್ನು ಎತ್ತರಿಸುವ, ವಿಶಾಲವಾಗಿಸುವ ಪರಿಕ್ರಮವು ಇದರಲ್ಲಿ ಅಡಗಿದೆ. ದೀಪವನ್ನು ಹಚ್ಚುವುದು ಕೇವಲ ಆಚರಣೆಯಲ್ಲ. ನಮ್ಮ ಅಂತರಂಗದ ಜ್ಯೋತಿಯನ್ನು ಹೊರಗೆ ಬೆಳಗಿಸುವ ಒಂದು ಅವಕಾಶವದು. ಹಣತೆ ಎಂಬ ಪದವೇ ಶರಣರ ಬಯಲಿನಲ್ಲಿ  ಮನುಷ್ಯರು ಕಂಡುಕೊಂಡ ಸಂಸ್ಕೃತಿಯಾಗಿರಬಹುದು. ಪಂಚಭೂತಗಳಿಂದಾದ ಮನುಷ್ಯನ ಈ ದೇಹವನ್ನು ಹಣತೆಗೆ ಹೋಲಿಸಿ  ಅದರಂತೆ ಪರೋಪಕಾರಿಯಾಗಿ ಬೆಳಗಬೇಕು. ವಚನಕಾರರು ಪ್ರಣತಿ ಜ್ಯೋತಿ ತೈಲವನ್ನು ವಿಶೇಷವಾಗಿ ಕಂಡಿದ್ದಾರೆ. ಅರಿವಿನ…

0 Comments

ಮಹಾನವಮಿ|ವಿಜಯದಶಮಿ: ಸತ್ಯ ಶರಣರ ಕಗ್ಗೊಲೆಯಾದ ದಿನ | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಸತ್ಯ ಶರಣರ ಕಗ್ಗೊಲೆಯಾದ ದಿನ. ವೈದಿಕರ ವಂಚನೆಗೆ ಸತ್ಯ ಸತ್ತ ದಿನ. ಶರಣರಿಗೆ ಮರಣವು ಮಹಾನವಮಿಯಾಯಿತು! ವೈದಿಕರಿಗೆ ವಿಜಯೋತ್ಸವವಾಯಿತು! ಲಿಂಗಾಯತ ಧರ್ಮದವರಾದ ನಾವು ವಿಜಯೋತ್ಸವ ಆಚರಿಸುವುದು ಸತ್ಸಂಪ್ರದಾಯವೋ ಅಥವಾ ಸತ್ತ ಸಂಪ್ರದಾಯದವೋ ಸ್ವಲ್ಪ ಯೋಚಿಸಿ. ಭಾರತ ಅಷ್ಟೇ ಅಲ್ಲಾ ಇಡೀ ಪ್ರಪಂಚದ ಇತಿಹಾಸದಲ್ಲಿ 12 ನೆ ಶತಮಾನ ಅತ್ಯಂತ ಮಹತ್ವಪೂರ್ಣವಾದುದು. ಅಜ್ಞಾನ, ಜಾತೀಯತೆ, ಮತಾಂಧತೆ, ಶೋಷಣೆ, ಮೌಡ್ಯಗಳಿಂದ ಮುಳುಗಿಹೋಗಿದ್ದ ಸಮಾಜವನ್ನು ಮೇಲೆತ್ತಲು ಬಸವಣ್ಣನವರು ರಾಜಿ ಇಲ್ಲದ ಬದ್ಧತೆ, ಪ್ರಶ್ನಾತೀತವಾದ ಜನಪರ ಕಾಳಜಿಯ ಮೂಲಕ ಮಾಡಿದ ಪ್ರಯತ್ನ-ಪ್ರಯೋಗಗಳು ಪ್ರಪಂಚದ ಎಲ್ಲ ಆಡಳಿತಗಾರರ ಆದರ್ಶ ಎನ್ನುವುದನ್ನು ನಾವು ಗಮನಿಸಬೇಕು. ಕನ್ನಡ…

0 Comments