ವಿಶ್ವದ ಬೆರಗು ಅಲ್ಲಮ / ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.

ಹನ್ನೆರಡನೇ ಶತಮಾನದ ಶರಣ ಕ್ರಾಂತಿಗೆ ಅಧಿಕೃತ ಸ್ವರೂಪದ ಮುದ್ರೆಯನೊತ್ತಿದವರು ಅಲ್ಲಮರು.  ಆ ಕ್ರಾಂತಿಯ ರೂವಾರಿ ಬಸವಣ್ಣನವರಾದರೆ ಅದರ ಜೀವಾಳ ಅಲ್ಲಮರು.  ವಿಶ್ವದ ಬೆಳಕು ಬಸವಣ್ಣನವರಾದರೆ ವಿಶ್ವದ ಬೆರಗು ಅಲ್ಲಮ.  ಜ್ಞಾನದ ಮೇರು ಶಿಖರ ವ್ಯೋಮಕಾಯ ಅಲ್ಲಮರ ಮಹತಿ ನಿಸ್ಸೀಮವಾದರೂ ಅರಿಕೆಗೆ ಸಿಕ್ಕಿದ್ದು ತೃಣ ಮಾತ್ರ.  ಇವರ ವ್ಯಕ್ತಿಗತ ಬದುಕು ಕಾವ್ಯ ಪುರಾಣಗಳಲ್ಲಿ ಒಂದೊಂದು ರೀತಿಯಾಗಿ ಚಿತ್ರಿತವಾಗಿದೆ.    ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಚಿಕ್ಕ ಗ್ರಾಮ ಬಳ್ಳಿಗಾವಿ.  ಅವರು ಬಾಲ್ಯದಿಂದಲೇ ಮದ್ದಳೆ ಪ್ರವೀಣರಾಗಿದ್ದರು ಎಂಬುದು ವಿದಿತ. ಆದರೆ ಅವರು ಕಾಮಲತೆಯೆಂಬ ರಾಜಕುವರಿಯನ್ನು ಪ್ರೀತಿಸಿ ಮದುವೆ ಆಗಿದ್ದರು.…

0 Comments

ಶರಣರ ಸಮನ್ವಯ ಸಂಸ್ಕೃತಿ / ಡಾ. ಬಸವರಾಜ ಕಡ್ಡಿ, ಜಮಖಂಡಿ.

ಸಮನ್ವಯತೆ ಎಂದರೆ ಒಂದಾಗಿಸಿಕೊಳ್ಳುವಿಕೆ. ಬದುಕು-ಬರಹ ಒಂದೆಯಾಗಿದ್ದರೆ ಬರಹಕ್ಕೆ ಬೆಲೆ ಬರುತ್ತದೆ. ಬದುಕಿದಂತೆ ಬರೆದ ಬರಹ ಬಹುಕಾಲ ಬದುಕುತ್ತದೆ. ಅದಕ್ಕಾಗಿ ಶರಣರು ತಾವು ಬದುಕಿದಂತೆ ಬರೆದ ವಚನಗಳು ಇನ್ನೂ ನಮ್ಮ ಮಧ್ಯೆದಲ್ಲಿವೆ. ಯಾವಾಗಲೂ ಇರುತ್ತವೆ. ವೈಜ್ಞಾನಿಕ, ವೈಚಾರಿಕ ಆಧಾರವಿಲ್ಲದ ಪವಾಡ, ಪುರಾಣಗಳಂತಹ ಸಾಹಿತ್ಯ ಪರೀಕ್ಷೆಗೊಳಪಡುತ್ತ ಹಂತ ಹಂತವಾಗಿ ಅಳಿಯುತ್ತದೆ. ಶರಣರದು ಜ್ಞಾನ-ಕ್ರಿಯೆ, ನಡೆ-ನುಡಿ, ಲೌಕಿಕ-ಪಾರಮಾರ್ಥ, ಅಂತರಂಗಕೃಷಿ-ಬಹಿರಂಗಕೃಷಿ, ಆತ್ಮಕಲ್ಯಾಣ-ಸಮಾಜಕಲ್ಯಾಣಗಳನ್ನು ಒಂದಾಗಿಸಿಕೊಂಡ ಸಮನ್ವಯಸಂಸ್ಕೃತಿಯಾಗಿದೆ. ಜ್ಞಾನ-ಕ್ರಿಯೆಗಳ ಸಮನ್ವಯತೆ: ಶರಣರು ಕೇವಲ ಅರಿವು (ಜ್ಞಾನ) ಬೆಳೆಸಿಕೊಂಡವರಲ್ಲ. ಅರಿವು, ಆಚಾರ ಎರಡನ್ನೂ ಸಮೀಕರಿಸಿಕೊಂಡವರು. ಆಚಾರದ ಮೂಲಕ ಅರಿವಿಗೆ ಮನ್ನಣೆ ನೀಡಿದವರು. ಜ್ಞಾನವೆಂದರೆ ತಿಳಿಯುವುದು. ಕ್ರಿಯೆಯೆಂದರೆ ತಿಳಿದಂತೆ…

0 Comments

ಸನ್ನಡತೆಯ ಭೃತ್ಯಾಚಾರ ಗುಹೇಶ್ವರನಿಗೆ ಅರ್ಪಿತ / ಡಾ.ಸರ್ವಮಂಗಳ ಸಕ್ರಿ, ರಾಯಚೂರು.

ಅಲ್ಲಮ‌ಪ್ರಭುಗಳು ವಚನ ಸಾಹಿತ್ಯದ ಸಾರ್ವಕಾಲಿಕ ಎಚ್ಚರದ ಪ್ರತೀಕ. ಅಲ್ಲಮರಿಗೆ ಇರಬಹುದಾದ ಮೂಲ ಮಾತೃಕೆ ಯಾವುದೆಂದರೆ ತಾತ್ವಿಕ ಚರ್ಚೆಗೆ ಆಸ್ಪದ ನೀಡುವಂತಾದ್ದು. ಕನ್ನಡದ ಆದ್ಯಾತ್ಮಿಕತೆಯನ್ನು ರೂಪಿಸುವಲ್ಲಿ ವಚನ ಸಾಹಿತ್ಯ ಪರಂಪರೆಯ ಕೊಡುಗೆ ನಿಸ್ಸಂಶಯವಾಗಿ ಘನವಾದದ್ದು. ಕನ್ನಡ ಮನಸ್ಸನ್ನು ಎಚ್ಚರಿಸುವ ಎತ್ತರವನ್ನು ವಚನಗಳು ಸೂಚಿಸುತ್ತವೆ. ಅಲ್ಲಮಪ್ರಭುವಿನ ದರ್ಶನವು ಕನ್ನಡವನ್ನು ವಿಶ್ವದ ಯಾವುದೇ ಭಾಷೆಯ ಜೊತೆಗಿಡಲು ಸಾದ್ಯವಾಗುವಂತೆ ಮಾಡಿವೆ. ವಚನಗಳಾಗಲಿ, ಜನಪದ ಕಾವ್ಯಗಳಾಗಲಿ, ತತ್ವಪದಗಳಾಗಲಿ ಕಾವ್ಯವೆಂದು ಪರಿಗಣಿತವಾಗಲಿಲ್ಲ. ಕನ್ನಡ ಮೀಮಾಂಸೆಯು ಇದಕ್ಕೆ ಹೊರತಲ್ಲ. ಶರಣರ ಕಾಲ ಸಂಕೀರ್ಣವಾದ ರಾಜಕೀಯ, ಸಾಮಾಜಿಕ ಮತ್ತು ಸಂಘರ್ಷಗಳ ಸಮಯ. ಬೌದ್ಧ, ನಾಥ, ಜೈನ ತಾತ್ವಿಕತೆಗಳ ಎದುರು…

1 Comment

ಶರಣರ ದೃಷ್ಟಿಯಲ್ಲಿ ನೇಮ-ಶೀಲ | .ಬಸವರಾಜ ಕಡ್ಡಿ, ಜಮಖಂಡಿ.

ನೇಮವೆಂದರೆ ಕಟ್ಟಾಚರಣೆ. ಕೆಲವರು ದೇವರಿಗೆ ವಿಶೇಷ ಪದಾರ್ಥಗಳನ್ನು ಅರ್ಪಿಸುವ ನೇಮ ಹಿಡಿದರೆ ಮತ್ತೆ ಕೆಲವರು ದೇವರ ಹೆಸರಿನಲ್ಲಿ ಕೆಲವು ಪದಾರ್ಥಗಳ ಬಿಡುವ ನೇಮ ಹಿಡಿದಿರುತ್ತಾರೆ. ಶೀಲವೆಂದರೆ ಮಡಿವಂತಿಕೆ. ಶರಣರು ಅರ್ಥವಿಲ್ಲದ ನೇಮ-ಶೀಲಗಳನ್ನು ನಿರಾಕರಿಸಿ ನಿಜವಾದ ನೇಮ-ಶೀಲಗಳನ್ನು ವಚನಗಳ ಮೂಲಕ ತಿಳಿಸಿದ್ದಾರೆ. ಅನೇಕರು ಅರ್ಥವಿಲ್ಲದ ವ್ರತ, ನೇಮ, ಶೀಲಗಳಲ್ಲಿ ಸಿಲುಕಿ ಅವುಗಳ ಆಚರಣೆಯಲ್ಲಿ ವ್ಯರ್ಥ ಪ್ರಯಾಸ ಪಡುತ್ತಿದ್ದಾರೆ. ಅಂಥವರ ಕುರಿತು ಸತ್ಯಕ್ಕನವರ ವಚನ: ಅರ್ಚನೆ ಪೂಜನೆ ನೇಮವಲ್ಲ;ಮಂತ್ರ ತಂತ್ರ ನೇಮವಲ್ಲ;ಧೂಪ ದೀಪಾರತಿ ನೇಮವಲ್ಲ;ಪರಧನ ಪರಸ್ತ್ರೀ ಪರದೈವಗಳಿಗೆರಗದಿಪ್ಪುದೆ ನೇಮ.ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣಾ ನಿತ್ಯನೇಮ.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-438/ವಚನ ಸಂಖ್ಯೆ-1205)…

0 Comments

ಕಲ್ಯಾಣವೆಂಬ ಪ್ರಣತಿ; ಬಿಂಬ-ಪ್ರತಿಬಿಂಬ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು,ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು,ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ!ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು.ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ?ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ?ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಕಂಡುಬದುಕಿದೆನು ಕಾಣಾ ಸಿದ್ಧರಾಮಯ್ಯಾ.… … ವ್ಯೋಮಕಾಯ ಅಲ್ಲಮ ಪ್ರಭುಗಳು. ಕಲ್ಯಾಣವನ್ನು ಅವಿಮುಕ್ತ ಕ್ಷೇತ್ರವನ್ನಾಗಿಸಿದ ಬಸವಣ್ಣನವರನ್ನು ಜ್ಞಾನ ವೈರಾಗ್ಯನಿಧಿ ಅಲ್ಲಮ ಪ್ರಭುಗಳು ಗುಹೇಶ್ವರ ಲಿಂಗದಲ್ಲಿ ದರ್ಶಿಸುತ್ತಾರೆ. ಶಿವಯೋಗಿ ಸಿದ್ಧರಾಮೇಶ್ವರರನ್ನು ಉದ್ದೇಶಿಸಿ ಹೇಳಿದ ಮಾತು "ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಕಂಡು ಬದುಕಿದೆನು ಕಾಣಾ ಸಿದ್ಧರಾಮಯ್ಯಾ” ಎನ್ನುವುದು ಇಡೀ ವಚನ ಚಳುವಳಿಯ ನೇತಾರರಾದ ಬಸವಣ್ಣನವರನ್ನು ಕೇಂದ್ರೀಕರಿಸಿಕೊಳ್ಳುತ್ತಾ…

0 Comments

ಶಿವಯೋಗ / ಶ್ರೀಮತಿ. ಸವಿತಾ ಮಾಟೂರ, ಇಳಕಲ್ಲ.

ವಚನ ಸಾಹಿತ್ಯ ಶರಣರು ಸಾರಿದ ಮೌಲ್ಯಯುತ, ಘನತೆವೆತ್ತ ಸತ್ಯ ಸಂದೇಶ. ಭಕ್ತಿ ಮಾರ್ಗದಿಂದ ಮುಕ್ತಿ ಮಾರ್ಗದ ಕಡೆಗೆ ನಮ್ಮನ್ನು ಕೊಂಡೊಯ್ಯುವ ಯುಕ್ತ ರೂಪ. ಜಗದೊಂದಿಗೆ ಅನುಶೃತಗೊಂಡ ಜಗದ್ವಂದ್ಯ ಮಾರ್ಗ. “ಲಿಂಗ ಮಧ್ಯೆ ಜಗತ್ ಸರ್ವಂ” ಎಂಬಂತೆ ಲಿಂಗದಲ್ಲಿಯೆ ಸರ್ವವನ್ನು ಕಂಡವರು, ಲಿಂಗವೆ ಸಂಗಯ್ಯನನ್ನು ಸೇರುವ ಮಾರ್ಗವೆಂದು ಅರಿತವರು ನಮ್ಮ ಶರಣರು. ಲಿಂಗನಿಷ್ಟೆಯಿಂದಲೆ ಜಗಕೆ ಮಾದರಿಯಾದವರು. ಅರುಹಿನ ಕುರುಹು “ಲಿಂಗ”. ಲಿಂಗಸಾಮರಸ್ಯದಿ ಪರಶಿವನ್ನು ಕೂಡುವ ಪರಿಯೆ ತ್ರಾಟಕ ಯೋಗ. ಅದುವೆ ಶಿವಯೋಗ. “ಯೋಗ” ಎಂಬ ಪದವು “ಯುಜ್” ಎಂಬ ಧಾತುವಿನಿಂದ ವ್ಯುತ್ಪತ್ತಿಯಾಗಿದೆ. ಅದಕ್ಕೆ ಕೂಟ (ಕೂಡುವದು, ಬೇರೆಯುವದು) ಎಂಬ…

0 Comments

ಶರಣರು ಕಂಡ ಶಿವರಾತ್ರಿ / ಅಮಂಗಳದಿಂದ ಮಂಗಳದ ಕಡೆಗೆ ಸಾಗುವುದೇ ಶಿವರಾತ್ರಿ

ನಾ ದೇವನಲ್ಲದೆ ನೀ ದೇವನೆ?ನೀ ದೇವನಾದಡೆ ಎನ್ನನೇಕೆ ಸಲಹೆ?ಆರೈದು ಒಂದು ಕುಡಿತೆ ಉದಕವನೆರೆವೆ,ಹಸಿವಾದಾಗ ಓಗರವನ್ನಿಕ್ಕುವೆ,ನಾ ದೇವ ಕಾಣಾ ಗುಹೇಶ್ವರಾ!(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-173/ವಚನ ಸಂಖ್ಯೆ-558) ಒಂದು ದೇವರ ಮೂರ್ತಿಯ ಎದುರಿಗೆ ನಿಂತು ಆ ದೇವರ ವಿಗ್ರಹಕ್ಕೆ ಸವಾಲು ಹಾಕಿರುವ ಅಲ್ಲಮಪ್ರಭುದೇವರ ವಚನ ಸಂಪೂರ್ಣವಾಗಿ ಪರಮ ಪೂಜ್ಯ ಶ್ರೀ. ಶ್ರೀ. ಶಿವಕುಮಾರ ಮಹಾಸ್ವಾಮಿಗಳಿಗೆ ಅನ್ವಯವಾಗುತ್ತದೆ. ಏಕೆಂದರೆ ಅವರು ಪ್ರತಿವರ್ಷ ಮಠದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ ಮತ್ತು ದಾಸೋಹ ನೀಡಿ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿ ಮಠಕ್ಕೆ ಬಂದ ಭಕ್ತರಿಗೆ ಆಶೀರ್ವಾದ ನೀಡುವುದರ ಜೊತೆಗೆ ಪ್ರಸಾದ…

0 Comments

ವಚನ ಸಾಹಿತ್ಯದಲ್ಲಿ ಮಹಿಳೆ ಮತ್ತು ಕುಟುಂಬ/ ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಪುರುಷನ ಮುಂದೆ ಮಾಯೆಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು.ಸ್ತ್ರೀಯ ಮುಂದೆ ಮಾಯೆಪುರುಷನೆಂಬ ಅಭಿಮಾನವಾಗಿ ಕಾಡುವುದು.ಲೋಕವೆಂಬ ಮಾಯೆಗೆ ಶರಣಚಾರಿತ್ರ್ಯಮರುಳಾಗಿ ತೋರುವುದು.ಚನ್ನಮಲ್ಲಿಕಾರ್ಜುನನೊಲಿದ ಶರಣಂಗೆಮಾಯೆಯಿಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-98/ವಚನ ಸಂಖ್ಯೆ-278) ಮರ್ತ್ಯದ ಕತ್ತಲೆಯನ್ನು ಕಳೆದು ಅಜ್ಞಾನದಿಂದ ಸುಜ್ಞಾನದೆಡೆಗೆ, ಅಸತ್ಯದಿಂದ ಸತ್ಯದೆಡೆಗೆ, ಮೃತದಿಂದ ಅಮೃತದೆಡೆಗೆ ನಡೆಸಿದ ನಾಡು ಕಂಡ ಚೇತನ ಶಕ್ತಿಗಳು ಬಸವಾದಿ ಶಿವಶರಣರು. ಮನುಷ್ಯತ್ವದ ನಿಜ ನೆಲೆಯನ್ನು ಅರುಹಿ, ಮಾನವತ್ವದ ಮಹಾಬೆಳಗಿನೊಳಗೆ ಸಕಲ ಚೇತನರನ್ನೂ ದೇವನನ್ನಾಗಿ ಕಂಡ ದಿವ್ಯಾತ್ಮರು, ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಭಕ್ತಿ ಚಳುವಳಿಯ ಮೂಲಕ ಸಮಾಜದಲ್ಲಿ ಸಮ ಸಮಾಜ ಕಟ್ಟಲು ಮುಂದಾದ ಹರಿಕಾರರು ಬಸವಾದಿ ಶಿವಶರಣರು…

1 Comment

ವೀರಗಂಟಿ ಶರಣ ಮಡಿವಾಳ ಮಾಚಿದೇವರು / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಒಬ್ಬ ರಾಜ ಮಡಿವಾಳ ಮಾಚಿದೇವರಿಗೆ ನಮಸ್ಕರಿಸುವ ದೃಶ್ಯವಿರುವ ಚಿತ್ರವನ್ನು ಸಾಮಾನ್ಯವಾಗಿ ಮಡಿವಾಳ ಬಾಂಧವರ ಮನೆಗಳಲ್ಲಿ ಮತ್ತು ವ್ಯವಹಾರ ಮಾಡುವ ಸ್ಥಳಗಳಲ್ಲಿ ಕಾಣಬಹುದು. ಶರಣರ ಬಟ್ಟೆಗಳನ್ನು ಬಿಟ್ಟರೆ ಮತ್ತೆ ಯಾರ ಬಟ್ಟೆಗಳನ್ನೂ ಮಡಿ ಮಾಡುವುದಿಲ್ಲ ಎಂಬುದು ಮಡಿವಾಳ ಮಾಚಿದೇವರ ಅಲಿಖಿತ ನಿಯಮ. ಹೀಗೆ ಒಂದು ಸಂದರ್ಭದಲ್ಲಿ ರಾಜ ಬಿಜ್ಜಳನಿಗೂ ಮತ್ತು ಮಡಿವಾಳ ಮಾಚಿದೇವರ ನಡುವೆ ಸಂಘರ್ಷವಾಗುತ್ತದೆ. ಬಿಜ್ಜಳನ ಸೈನಿಕರನ್ನೆಲ್ಲ ಸೆದೆಬಡಿದ ಮಡಿವಾಳ ಮಾಚಿದೇವರ ಶೌರ್ಯತನ ಮತ್ತು ಅವರ ದಿಟ್ಟ ನಿರ್ಧಾರ ತಿಳಿದು ರಾಜ ಕ್ಷಮೆ ಯಾಚಿಸುತ್ತಾನೆ. ಇಂಥ ದಿಟ್ಟ ಶರಣರು ನಮ್ಮ ಮಡಿವಾಳ ಮಾಚಿದೇವರು. ಅತ್ಯಂತ ಶ್ರೇಷ್ಠ ಕಾಯಕ…

0 Comments

ಹಾಲುಮತ ಕುಲಗುರು ಶ್ರೀ ರೇವಣಸಿದ್ದೇಶ್ವರರನ್ನು ಹೈಜಾಕ್‌ ಮಾಡಿರುವ ವೀರಶೈವರು: ಸತ್ಯದ ಅನಾವರಣ / ಡಾ. ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು.

ಇದು ಹಾಲುಮತ ಕುಲಗುರು, ಶಾಂತ ಸಿಂಹಾಸನಾರೂಢ ಶ್ರೀ ರೇವಣಸಿದ್ದೇಶ್ವರ ಮಹಾಸಂಸ್ಥಾನ ಮಠ, ಸರವೂರು ಶಾಖಾ, ಅಣತಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ, ಇದಕ್ಕೆ ಸಂಬಂಧಿಸಿದ ತಾಮ್ರಪಟ್ಟಿಕೆ. ಚರಿತ್ರೆಯಲ್ಲಿ ಸುಳ್ಳನ್ನು ಕೂಡಾ ರಾಜಠಸ್ಸೆಯೊಂದಿಗೆ ನಿಜವೆಂದೇ ನಂಬಿಸುವ ಯಡವಟ್ಟುಗಳು ಕೂಡಾ ನಡೆದಿವೆ ಎಂಬುದಕ್ಕೆ ಈ ತಾಮ್ರಬಿಲ್ಲೆಯೇ ಸಾಕ್ಷಿಯಾಗಿದೆ. ಕುರುಬರ ಕುಲಗುರು ಶ್ರೀ. ರೇವಣಸಿಸಿದ್ಧೇಶ್ವರರನ್ನು ಹೈಜಾಕ್ ಮಾಡಿಕೊಂಡು ಶ್ರೀ ರೇಣುಕಾಚಾರ್ಯ ಎಂದು ಅಯೋನಿಜ ಕಾಲ್ಪನಿಕ ವ್ಯಕ್ತಿಯನ್ನು ಸೃಷ್ಟಿಸಿ ಪುರಾಣವನ್ನೇ ಹೊಸೆಯಲಾಗಿದೆ. ದಕ್ಷಿಣ ಕರ್ನಾಟಕದ ಕುರುಬರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಗಳನ್ನು ವೀರಶೈವರ ಪಂಚಾಚಾರ್ಯರಿಗೆ ಪರಭಾರೆ ಮಾಡಿದ ಧರ್ಮಪೀಠದ ಸತ್ಯವನ್ನು ಈ ತಾಮ್ರಬಿಲ್ಲೆಯು…

0 Comments