ಷಟ್ ಸ್ಥಲಗಳು / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

12 ನೇ ಶತಮಾನದ ಶರಣರ ಷಟ್ ಸ್ಥಲಗಳು ಆಧ್ಯಾತ್ಮಿಕ ಬದುಕಿನ ಧಾರ್ಮಿಕ ತತ್ವಗಳನ್ನು ಪ್ರೇರೇಪಿಸುತ್ತದೆ. ಶರಣ ಧರ್ಮದ ಸಾಧನೆ, ನಡೆ ನುಡಿಗಳು ಹಾಗೂ ಭಕ್ತಿ ಜ್ಞಾನ ಸಾಮರಸ್ಯವನ್ನು ಬಿಂಬಿಸುವ ತತ್ವಗಳೇ ಷಟ್ ಸ್ಥಲಗಳಾಗಿವೆ. ಶರಣರು ತಮ್ಮ ಧರ್ಮದ ತಾತ್ವಿಕ ಸ್ವಾತಂತ್ರ್ಯದ ಸ್ಥಲಗಳ ವಿವೇಚನೆಯಲ್ಲಿ ಲಿಂಗಾಯತ ಧರ್ಮದ ವಿವೇಚನೆಯನ್ನು ಕಟ್ಟಿಕೊಟ್ಟಿದ್ದಾರೆ. ಭಕ್ತನಾದರೆ ತನು ಮನದ ಮೇಲಣ ಆಸೆ ಅಳಿದಿರಬೇಕು. ಮಾಹೇಶ್ವರನಾದರೆ ಪರಧನ ಪರಸತಿ ಆಸೆ ಅಳಿದಿರಬೇಕು. ಪ್ರಸಾದಿಯಾದರೆ ಪ್ರಸಾದವ ಕೊಂಡ ಕಾಯ ಅಳಿಯದೇ ಉಳಿದಿರಬೇಕು. ಪ್ರಾಣಲಿಂಗಯಾದರೆ ಸುಖ-ದುಃಖಾದಿಗಳನ್ನು ಮರೆತು ಪ್ರಾಣ ಲಿಂಗಸ್ಥಲದಲ್ಲಿ ಸುಸ್ಥಿರನಾಗಿರಬೇಕು. ಶರಣನಾದರೆ ಸತಿಪತಿ ಭಾವವಳಿದಿರ ಬೇಕು.…

0 Comments

ಮಾಗಿದ ಮಗುತನದ ಮಾನವತಾ ಮೂರ್ತಿ “ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಗಳು” / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

(ಪೂಜ್ಯರ ಪುಣ್ಯ ಸ್ಮರಣೋತ್ಸವ ನಿಮಿತ್ತ ವಿಶೇಷ ಲೇಖನ) ಸತ್ತು ಹುಟ್ಟಿ ಕೆಟ್ಟವರೆಲ್ಲರು,ದೇವಲೋಕಕ್ಕೆ ಹೋದರೆಂಬಬಾಲಭಾಷೆಯ ಕೇಳಲಾಗದು.ಸಾಯದ ಮುನ್ನ ಸ್ವಯವನರಿದಡೆದೇವನೊಲಿವ ನಮ್ಮ ಗುಹೇಶ್ವರನು.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-189/ವಚನ ಸಂಖ್ಯೆ-606) “ಬೆಳಕು” ತುಳುಕಾಡುವುದು ಎಂದರೆ ಇದೆ ಇರಬಹುದು ಎಂದು ನನಗೆ ಪೂಜ್ಯ ಸಿದ್ದೇಶ್ವರ ಶ್ರೀಗಳ ಮಾತುಗಳನ್ನು ಕೇಳಿದಾಗಲೆಲ್ಲ ಅನಿಸುವುದು. “ತನ್ಮಯತೆ” ಎಂಬುದಕ್ಕೆ ಅರ್ಥವನ್ನು ನಾನು ಪದಕೋಶದಲ್ಲಿ ಹುಡುಕಲಿಲ್ಲ. ಶ್ರೀಗಳ ಮೃದುವಾದ ಪದಗಳಲ್ಲಿ ಕಂಡೆ ಅವರ ನುಡಿ ಕೇಳಿದಾಗಲೆಲ್ಲಾ ಕಳೆದು ಹೋಗುವುದು ಭಾವ ಪರವಶತೆಗೆ ಒಳಗಾಗುವ ಸ್ಥಿತಿಗೆ ತಲುಪಿದಾಗಲೆಲ್ಲಾ “ತನ್ನಯತೆ” ಎಂಬುದು ಇದೇ ಎಂಬುದನ್ನು ಅನುಭವಿಸಿದೆ. ಇದು ಕೇವಲ ನನ್ನ ಒಬ್ಬಳ…

0 Comments

ಜೀವನ ಮೌಲ್ಯಗಳು – ಶರಣರ ಕೊಡುಗೆ / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಶರಣರು ಅವರ ಹಿರಿಮ ಗರಿಮೆಗಳನ್ನು ಅವರ ಹಾಗೆಯೇ ಇರುವವರೇ ಬಲ್ಲರು. ಅವರು ನಿಜವನರಿದದ ನಿಶ್ಚಿಂತರು. ಮರಣವನ್ನೇ ಗೆಲಿದ ಮಹಂತರು. ಘನವ ಕಂಡ ಮಹಿಮರು. ಬಯಲು ಬಿತ್ತಿ ಬಯಲು ಬೆಳೆದು ಬಯಲನುಂಡು ಬಯಲಾದ ಬಯಲಯೋಗಿಗಳು. ಶರಣರ ಮಾತುಗಳೂ ಹಾಗೆಯ, ಮಧುರ, ಜೇನು ಬೆರೆಸಿದ ಹಾಲಿನಂತೆ ಸವಿ, ಕೆಲವೊಮ್ಮೆ ಕಠಿಣ, ಕೆಲವೂಮ್ಮೆ ಕಹಿ. ಅದರಕ್ಕೆ ಕಹಿಯಾದರು ಉದರಕ್ಕೆ ಸಿಹಿ. ಅವು ಮನದ ಕತ್ತಲೆಉನ್ನು ಕಳೆಯುವ ಜ್ಯೋತಿಗಳು. ಅವುಗಳಲ್ಲಿ ಹದವಾದ ಹಾಗೂ ಹಸನಾದ ಬದುಕಿಗೆ ಬೇಕಾಗುವ ಅವಶ್ಯಕವಾದವುಗಳೆಲ್ಲ ಇವೆ. ಹೊರಗೆ ಕಾವ್ಯದ ಸೊಬಗು, ಒಳಗೆ ಅನುಭವದ ಜೇನು - ಅನುಭಾವದ ಅಮೃತ.…

0 Comments

ಶರಣರು ಕಂಡ ಬಸವಣ್ಣ: ಬಸವಣ್ಣನವರ ವ್ಯಕ್ತಿತ್ವದ ಅನಾವರಣ / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ವಚನ ಸಾಹಿತ್ಯ ಮತ್ತು ಶರಣ ಸಿದ್ಧಾಂತ ಹಾಗೂ ಸಂಸ್ಕೃತಿಯ ಪುಸ್ತಕಗಳನ್ನು ಓದುವ ಹವ್ಯಾಸ ಬಹುಶಃ ಮಕ್ಕಳ ಸಾಹಿತ್ಯ ಮತ್ತು ವಚನ ಸಾಹಿತ್ಯದಲ್ಲಿ ತಮ್ಮ ಜೀವನವನ್ನು ಸವೆಸಿದ ನಮ್ಮ ತಂದೆ ಲಿಂ. ಶ್ರೀ ಈಶ್ವರ ಕಮ್ಮಾರ ಅವರಿಂದ ನನಗೆ ಬಂದ ಬಳುವಳಿ ಅನಿಸುತ್ತೆ. ಈ ಲೇಖನವನ್ನು ಬರೆಯುವುದಕ್ಕೆ ಅವರು ನನಗಿತ್ತ ಪ್ರೇರಣೆಯೇ ಕಾರಣ. ಕಳೆದ ಸುಮಾರು ಎರಡೂವರೆ ಮೂರು ದಶಕಗಳಿಂದ ಶರಣರ ಕುರಿತು ಮಾಹಿತಿ ಸಂಗ್ರಹಿಸಲು ನಮಗೆ ಸಿಕ್ಕ ಮೌಲ್ಯಯುತವಾದ ಆಕರಗಳು ಅಂದರೆ ಡಾ. ಫ. ಗು. ಹಳಕಟ್ಟಿಯವರ 770 ಅಮರ ಗಣಂಗಳ ಸಂಗ್ರಹ, ಶೂನ್ಯ ಸಂಪಾದನೆಗಳು, ಬಸವ…

0 Comments

ಪರಮ ಪೂಜ್ಯ ನಿರುಪಾಧೀಶ ಸ್ವಾಮೀಜಿಯವರ ವಚನಗಳು: ವಿಭೂತಿ – 2 / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಅಕ್ಷರಗಳು ಮೂರ್ತರೂಪವೆತ್ತಿದಂತೆ ನಿಂತ ಮಹಾಂತರು, ಸಂತರು, ಶರಣರು ಪೂಜ್ಯ ನಿರುಪಾಧೀಶ ಸ್ವಾಮಿಗಳು. ಪೂಜ್ಯರ ಅನುಪಮವಾದ ವಿಮಲಜ್ಞಾನ, ಅನುಭವ, ಅನುಭಾವದಿಂದ ಇದುವರೆಗೂ ಹದಿನೇಳು ಕೃತಿಗಳು ಸಾರಸ್ವತ ಲೋಕದ ಹೊಂಗಿರಣಗಳಂತೆ ಕಂಗೊಳಿಸಿವೆ. ಚತುರ್ಭಾಷಾ ಪ್ರವೀಣರಾದ ನಿರುಪಾಧೀಶ್ವರರು ಕನ್ನಡ ಭಾಷೆಯಲ್ಲಿಯೂ ಸಾಕಷ್ಟು ಕೃಷಿ ಮಾಡಿದವರು. ಕನ್ನಡದಲ್ಲಿ ಏಳು ವಚನ ಗ್ರಂಥಗಳನ್ನು, ನಾಲ್ಕು ಪುರಾಣಗಳನ್ನು, ಒಂದು ಶತಕ ಕೃತಿಯನ್ನು, ಒಂದು ಮುಕ್ತಕ ಕೃತಿಯನ್ನು ರಚಿಸಿದವರು. ಪೂಜ್ಯರು ಕನ್ನಡ ಸಾಹಿತ್ಯ ರೂಪಗಳಲ್ಲಿ ಷಟ್ಪದಿ, ತ್ರಿಪದಿ, ಚೌಪದಿ ರೂಪಗಳನ್ನು ಕರಗತ ಮಾಡಿಕೊಂಡಿದ್ದಾರೆ. ಇವರು ಬರೆದ ಪುರಾಣಗಳೆಲ್ಲ ಭಾಮಿನಿ ಷಟ್ಪದಿಯಲ್ಲಿವೆ. ಉಳಿದವುಗಳು ಆಧುನಿಕ ವಚನಗಳು ತ್ರಿಪದಿ, ಚೌಪದಿ…

0 Comments

ಕುಂಬಳಕಾಯಿ ಕಳ್ಳರಿದ್ದರೆ, ಹೆಗಲು ಮುಟ್ಟಿ ನೋಡಿಕೊಳ್ಳಲೂಬಹುದು/ಲೇಖಕರು:ಡಾ.ಬಸವರಾಜ ಸಾದರ, ಬೆಂಗಳೂರು.

ವಚನಗಳು ಏಕಕಾಲಕ್ಕೆ ವ್ಯಕ್ತಿ ಮತ್ತು ವ್ಯವಸ್ಥೆ ಎರಡರ ಒಳಗಿರುವ ಕೊಳೆಗಳನ್ನು ಎತ್ತಿ ತೋರಿಸಿ, ಆ ಕೊಳೆಗಳನ್ನು ಸ್ವಚ್ಛಗೊಳಿಸಿಕೊಳ್ಳುವ ಅನನ್ಯ ಮಾರ್ಗ ಸೂಚಿಸುವುದು ಒಂದು ವಿನೂತನ ಅಭಿವ್ಯಕ್ತಿ ಕ್ರಮ. ಒಂದೇ ನೋಟದಲ್ಲಿ ಎರಡು ದೃಶ್ಯಗಳನ್ನು ಕಾಣಿಸುವ ಈ ಕ್ರಮದಲ್ಲಿ ಎದ್ದು ಕಾಣುವುದು ಶರಣರ ಪ್ರತಿಭೆ ಮತ್ತು ಅವರ ಪ್ರಗತಿಪರ ಸಮಾಜಮುಖಿ ಚಿಂತನೆ. ಈ ಪರಿಪೇಕ್ಷದಲ್ಲಿ ಗಮನಿಸುವಾಗ ಬಹಳಷ್ಟು ವಚನಗಳು ಒಳಗೆ ಮತ್ತು ಹೊರಗೆ ಧ್ವನಿಸುವ ಎರಡೂ ಅರ್ಥಗಳಲ್ಲಿ ಒಂದು ಅನನ್ಯವಾದ ಆಂತರಿಕ ಸಂಬಂಧವಿರುವುದು ಸೂಕ್ಷ್ಮ ನೋಟಕ್ಕೆ ತಿಳಿಯುತ್ತದೆ. ಯಾರು ಯಾವ ಕಣ್ಣಿನಿಂದ ನೋಡುತ್ತಾರೋ, ಆ ಬಗೆಯಲ್ಲಿ ಅವು ತಮ್ಮ…

1 Comment

 ಶರಣೆ ಗಂಗಾಂಬಿಕೆ ವ್ಯಕ್ತಿತ್ವದ ಶೋಧ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

12 ನೇ ಶತಮಾನ ವಚನ ಸಾಹಿತ್ಯ ರಚನೆಯಲ್ಲಿ ಒಂದು ಪ್ರಗತಿಪರವಾದ ಕಾಲಘಟ್ಟ. ಸಾಮಾಜಿಕ ಸುಧಾರಣೆಯ ಸಂದರ್ಭದಲ್ಲಿ ರಚನೆಯಾದ ಶರಣ ಸಾಹಿತ್ಯ ಸ್ತ್ರೀ ಸಂವೇದನೆಯ ನೆಲೆಯಲ್ಲಿ ಪ್ರಕಟವಾದವು. ಅಂದು ಎಲ್ಲಾ ವರ್ಗದ ಸ್ತ್ರೀಯರು ಸಾಹಿತ್ಯ ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದು ಮುನ್ನಡೆಯ ಪ್ರಚಲಿತ ಹಂತವದು. ಸ್ತ್ರೀಯರಿಗೆ ಆತ್ಮವಿಶ್ವಾಸ, ಸಮಾನತೆಯ ಅವಕಾಶವನ್ನು ಕೊಟ್ಟದ್ದು ಇದೇ ಕಾಲದಲ್ಲಾಗಿತ್ತು. ಸ್ತ್ರೀ ವಚನಕಾರರಲ್ಲಿ ವೈರಾಗ್ಯನಿಧಿ ಅಕ್ಕ ಮಹಾದೇವಿಯವರು ಮೊದಲು ನೆನಪಾದರೂ ಕೂಡ ಗಂಗಾಂಬಿಕೆ, ನೀಲಾಂಬಿಕೆ, ಮುಕ್ತಾಯಕ್ಕ, ಅಕ್ಕನಾಗಮ್ಮ, ಮೋಳಿಗೆ ಮಹಾದೇವಿ, ಕದಿರೆ ರೆಮ್ಮವ್ವೆ, ಕಾಳವ್ವೆ, ಗುಡ್ಡವ್ವೆ. ಮಸಣಮ್ಮ, ಸೂಳೆ ಸಂಕವ್ವೆ, ರಾಯಮ್ಮ ಹೀಗೆ ಹಲವಾರು…

0 Comments

ಪ್ರಕೃತಿ ಸಾಂಗತ್ಯದಲ್ಲಿ ಅಕ್ಕ / ಶ್ರೀಮತಿ. ಶಾರದಾ ಕೌದಿ, ಧಾರವಾಡ.

ವನವೆಲ್ಲ ಕಲ್ಪತರು, ಗಿಡವೆಲ್ಲ ಮರುಜಿವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ,ಜಲವೆಲ್ಲ ನಿರ್ಜರಾಮೃತ ಮೃಗವೆಲ್ಲ ಪುರುಷ ಮೃಗ,ಎಡಹುವ ಹರಳೆಲ್ಲ ಚಿಂತಾಮಣಿ.ಚೆನ್ನಮಲ್ಲಿಕಾರ್ಜುನಯ್ಯನ ನೆಚ್ಚಿನ ಗಿರಿಯ ಸುತ್ತಿ,ನೋಡುತ್ತ ಬಂದುಕದಳಿಯ ಬನವ ಕಂಡೆ ನಾನು.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-126/ವಚನ ಸಂಖ್ಯೆ-360) ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆನ್ನಮಲ್ಲಿಕಾರ್ಜುನನ್ನು ಅರಸುತ್ತಾ ಕಲ್ಯಾಣದಿಂದ ಶ್ರೀಶೈಲಕ್ಕೆ ಹೊರಟ ಅಕ್ಕ ಮಹಾದೇವಿ ಗಿರಿಯನ್ನು ಸುತ್ತುತ್ತಾ ಹೊರಟಾಗ ಅಲ್ಲಿಯ ಪ್ರಕೃತಿ ಸೌಂದರ್ಯ ಕಂಡು ವಿಸ್ಮಯಳಾಗುತ್ತಾಳೆ. ಅಕ್ಕನ ಆತ್ಮಸಂಗಾತ ಚೆನ್ನಮಲ್ಲಿಕಾರ್ಜುನಯ್ಯನಿರುವ ಗಿರಿಯ ಒಂದೊಂದು ಗಿಡ ಮರ ಬಳ್ಳಿ ಎಲ್ಲವು ಅವಳಿಗೆ ಅಮೂಲ್ಯ. ಅವಳ ಪಾಲಿಗೆ ಅವು ಬೇಡಿದ್ದನ್ನು ನೀಡುವ ಕಲ್ಪತರು. ನಡೆದು…

2 Comments

ಜಾನಪದ ಲೋಕದಲ್ಲಿ ಬಸವನೆಂಬ ದೇವರು / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಜನಪದರ ಶರಣ ಧರ್ಮದ ಹರಹು ವಿಶಾಲವಾದದ್ದು. ಅದನ್ನು ನಿರ್ದಿಷ್ಟ ಅರ್ಥದಲ್ಲಿ ಕಟ್ಟಿ ಹಾಕಲಾಗುವುದಿಲ್ಲ. ಹೀಗಾಗಿ ಮೌಖಿಕ ಜನಪದ ಸಾಹಿತ್ಯ ಮುಗ್ಧಶರಣರ ಸತ್ಯದ ಅನೇಕ ಮುಖಗಳನ್ನು ಅನಾವರಣಗೊಳಿಸುತ್ತದೆ. ಅನಕ್ಷರಸ್ಥರ ಆಡುಮಾತಿನ ಸರಳತೆ ಖಚಿತತೆಯನ್ನು ಶರಣಧರ್ಮದ ಪವಿತ್ರತೆಯನ್ನು ಸ್ಪಷ್ಟಪಡಿಸುತ್ತದೆ. ತಾವು ಕಂಡ ಜೀವನದ ಚಿಕ್ಕ ಚಿಕ್ಕ ಘಟನೆಯ ಅನುಭವಗಳನ್ನು ಜೀವದುಂಬಿ ದಾಖಲಿಸುವ ಅವರ ಜ್ಞಾನದ ತೀಕ್ಷ್ಣಣತೆಯೂ ಅನವರತ. ತಮ್ಮ ಎದೆಯಾಳದಲ್ಲಿ ನೈತಿಕ ಪ್ರೀತಿ ಬಿಂಬಿಸುತ್ತಾ ತಾಯಿ ಭಾವ ವ್ಯಕ್ತಪಡಿಸುವುದೂ ಒಂದು ರೋಮಾಂಚನ. ಪ್ರಕೃತಿಯ ಸತ್ಯವನ್ನೇ ದೇವರೆಂದು ತಿಳಿದ ಜನಪದರು ನಿಸರ್ಗದ ಮೂಲಕವೇ ಸಂಭಾಷಣೆಗೆ ತೊಡಗುತ್ತಾರೆ. ಏಕೆಂದರೆ ಅವರ ಒಡಲೊಳಗೆ ಶರಣಧರ್ಮದ…

2 Comments

ವಿಶ್ವಶಾಂತಿಗೆ ಶರಣರು ನೀಡಿದ ಶಾಂತಿ ಸೌಹಾರ್ದತೆಯ ಸಂದೇಶಗಳು / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಕರಿ ಘನ; ಅಂಕುಶ ಕಿರಿದೆನ್ನಬಹುದೆ? ಬಾರದಯ್ಯಾಗಿರಿ ಘನ; ವಜ್ರ ಕಿರಿದೆನ್ನಬಹುದೆ? ಬಾರದಯ್ಯಾತಮಂಧ ಘನ; ಜ್ಯೋತಿ ಕಿರಿದೆನ್ನಬಹುದೆ? ಬಾರದಯ್ಯಾಮರಹು ಘನ; ನಿಮ್ಮ ನೆನೆವ ಮನ ಕಿರಿದೆನ್ನಬಹುದೆ? ಬಾರದಯ್ಯಾಕೂಡಲಸಂಗಮದೇವಾ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-7/ವಚನ ಸಂಖ್ಯೆ-6) ಎಲ್ಲರಿಗೂ ವಿಶ್ವಗುರು ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು ಹಾಗೂ ಎಲ್ಲರಿಗೂ ಶರಣು ಶರಣಾರ್ಥಿಗಳು. ಸೌಹಾರ್ದತೆಯ ಬೀಜ ಬಿತ್ತಿ ಧರೆಯ ಮೇಲೆ ಸುಂದರವಾದ ಸಮ ಸಮಾಜವನ್ನು ಕಟ್ಟಬಯಸಿದ ಬಸವಾದಿ ಶಿವಶರಣರು ನಿತ್ಯ ಸ್ಮರಣಿಯರಾಗಿದ್ದಾರೆ. ಲೋಕದಂತೆ ಬಾರರು, ಲೋಕದಂತೆ ಇರರು,ಲೋಕದಂತೆ ಹೋಹರು, ನೋಡಯ್ಯಾ.ಪುಣ್ಯದಂತೆ ಬಪ್ಪರು, ಜ್ಞಾನದಂತೆ ಇಪ್ಪರು,ಮುಕ್ತಿಯಂತೆ ಹೋಹರು, ನೋಡಯ್ಯಾ.ಉರಿಲಿಂಗದೇವಾ, ನಿಮ್ಮ ಶರಣರುಉಪಮಾತೀತರಾಗಿ ಉಪಮಿಸಬಾರದು.(ಸಮಗ್ರ ವಚನ…

0 Comments