ಪರಮ ಪೂಜ್ಯ ನಿರುಪಾಧೀಶ ಸ್ವಾಮೀಜಿಯವರ ವಚನಗಳು: ವಿಭೂತಿ – 2 / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಅಕ್ಷರಗಳು ಮೂರ್ತರೂಪವೆತ್ತಿದಂತೆ ನಿಂತ ಮಹಾಂತರು, ಸಂತರು, ಶರಣರು ಪೂಜ್ಯ ನಿರುಪಾಧೀಶ ಸ್ವಾಮಿಗಳು. ಪೂಜ್ಯರ ಅನುಪಮವಾದ ವಿಮಲಜ್ಞಾನ, ಅನುಭವ, ಅನುಭಾವದಿಂದ ಇದುವರೆಗೂ ಹದಿನೇಳು ಕೃತಿಗಳು ಸಾರಸ್ವತ ಲೋಕದ ಹೊಂಗಿರಣಗಳಂತೆ ಕಂಗೊಳಿಸಿವೆ. ಚತುರ್ಭಾಷಾ ಪ್ರವೀಣರಾದ ನಿರುಪಾಧೀಶ್ವರರು ಕನ್ನಡ ಭಾಷೆಯಲ್ಲಿಯೂ ಸಾಕಷ್ಟು ಕೃಷಿ ಮಾಡಿದವರು. ಕನ್ನಡದಲ್ಲಿ ಏಳು ವಚನ ಗ್ರಂಥಗಳನ್ನು, ನಾಲ್ಕು ಪುರಾಣಗಳನ್ನು, ಒಂದು ಶತಕ ಕೃತಿಯನ್ನು, ಒಂದು ಮುಕ್ತಕ ಕೃತಿಯನ್ನು ರಚಿಸಿದವರು. ಪೂಜ್ಯರು ಕನ್ನಡ ಸಾಹಿತ್ಯ ರೂಪಗಳಲ್ಲಿ ಷಟ್ಪದಿ, ತ್ರಿಪದಿ, ಚೌಪದಿ ರೂಪಗಳನ್ನು ಕರಗತ ಮಾಡಿಕೊಂಡಿದ್ದಾರೆ. ಇವರು ಬರೆದ ಪುರಾಣಗಳೆಲ್ಲ ಭಾಮಿನಿ ಷಟ್ಪದಿಯಲ್ಲಿವೆ. ಉಳಿದವುಗಳು ಆಧುನಿಕ ವಚನಗಳು ತ್ರಿಪದಿ, ಚೌಪದಿ…

0 Comments

ಕುಂಬಳಕಾಯಿ ಕಳ್ಳರಿದ್ದರೆ, ಹೆಗಲು ಮುಟ್ಟಿ ನೋಡಿಕೊಳ್ಳಲೂಬಹುದು/ಲೇಖಕರು:ಡಾ.ಬಸವರಾಜ ಸಾದರ, ಬೆಂಗಳೂರು.

ವಚನಗಳು ಏಕಕಾಲಕ್ಕೆ ವ್ಯಕ್ತಿ ಮತ್ತು ವ್ಯವಸ್ಥೆ ಎರಡರ ಒಳಗಿರುವ ಕೊಳೆಗಳನ್ನು ಎತ್ತಿ ತೋರಿಸಿ, ಆ ಕೊಳೆಗಳನ್ನು ಸ್ವಚ್ಛಗೊಳಿಸಿಕೊಳ್ಳುವ ಅನನ್ಯ ಮಾರ್ಗ ಸೂಚಿಸುವುದು ಒಂದು ವಿನೂತನ ಅಭಿವ್ಯಕ್ತಿ ಕ್ರಮ. ಒಂದೇ ನೋಟದಲ್ಲಿ ಎರಡು ದೃಶ್ಯಗಳನ್ನು ಕಾಣಿಸುವ ಈ ಕ್ರಮದಲ್ಲಿ ಎದ್ದು ಕಾಣುವುದು ಶರಣರ ಪ್ರತಿಭೆ ಮತ್ತು ಅವರ ಪ್ರಗತಿಪರ ಸಮಾಜಮುಖಿ ಚಿಂತನೆ. ಈ ಪರಿಪೇಕ್ಷದಲ್ಲಿ ಗಮನಿಸುವಾಗ ಬಹಳಷ್ಟು ವಚನಗಳು ಒಳಗೆ ಮತ್ತು ಹೊರಗೆ ಧ್ವನಿಸುವ ಎರಡೂ ಅರ್ಥಗಳಲ್ಲಿ ಒಂದು ಅನನ್ಯವಾದ ಆಂತರಿಕ ಸಂಬಂಧವಿರುವುದು ಸೂಕ್ಷ್ಮ ನೋಟಕ್ಕೆ ತಿಳಿಯುತ್ತದೆ. ಯಾರು ಯಾವ ಕಣ್ಣಿನಿಂದ ನೋಡುತ್ತಾರೋ, ಆ ಬಗೆಯಲ್ಲಿ ಅವು ತಮ್ಮ…

1 Comment

 ಶರಣೆ ಗಂಗಾಂಬಿಕೆ ವ್ಯಕ್ತಿತ್ವದ ಶೋಧ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

12 ನೇ ಶತಮಾನ ವಚನ ಸಾಹಿತ್ಯ ರಚನೆಯಲ್ಲಿ ಒಂದು ಪ್ರಗತಿಪರವಾದ ಕಾಲಘಟ್ಟ. ಸಾಮಾಜಿಕ ಸುಧಾರಣೆಯ ಸಂದರ್ಭದಲ್ಲಿ ರಚನೆಯಾದ ಶರಣ ಸಾಹಿತ್ಯ ಸ್ತ್ರೀ ಸಂವೇದನೆಯ ನೆಲೆಯಲ್ಲಿ ಪ್ರಕಟವಾದವು. ಅಂದು ಎಲ್ಲಾ ವರ್ಗದ ಸ್ತ್ರೀಯರು ಸಾಹಿತ್ಯ ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದು ಮುನ್ನಡೆಯ ಪ್ರಚಲಿತ ಹಂತವದು. ಸ್ತ್ರೀಯರಿಗೆ ಆತ್ಮವಿಶ್ವಾಸ, ಸಮಾನತೆಯ ಅವಕಾಶವನ್ನು ಕೊಟ್ಟದ್ದು ಇದೇ ಕಾಲದಲ್ಲಾಗಿತ್ತು. ಸ್ತ್ರೀ ವಚನಕಾರರಲ್ಲಿ ವೈರಾಗ್ಯನಿಧಿ ಅಕ್ಕ ಮಹಾದೇವಿಯವರು ಮೊದಲು ನೆನಪಾದರೂ ಕೂಡ ಗಂಗಾಂಬಿಕೆ, ನೀಲಾಂಬಿಕೆ, ಮುಕ್ತಾಯಕ್ಕ, ಅಕ್ಕನಾಗಮ್ಮ, ಮೋಳಿಗೆ ಮಹಾದೇವಿ, ಕದಿರೆ ರೆಮ್ಮವ್ವೆ, ಕಾಳವ್ವೆ, ಗುಡ್ಡವ್ವೆ. ಮಸಣಮ್ಮ, ಸೂಳೆ ಸಂಕವ್ವೆ, ರಾಯಮ್ಮ ಹೀಗೆ ಹಲವಾರು…

0 Comments

ಪ್ರಕೃತಿ ಸಾಂಗತ್ಯದಲ್ಲಿ ಅಕ್ಕ / ಶ್ರೀಮತಿ. ಶಾರದಾ ಕೌದಿ, ಧಾರವಾಡ.

ವನವೆಲ್ಲ ಕಲ್ಪತರು, ಗಿಡವೆಲ್ಲ ಮರುಜಿವಣಿ,ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ,ಜಲವೆಲ್ಲ ನಿರ್ಜರಾಮೃತ ಮೃಗವೆಲ್ಲ ಪುರುಷ ಮೃಗ,ಎಡಹುವ ಹರಳೆಲ್ಲ ಚಿಂತಾಮಣಿ.ಚೆನ್ನಮಲ್ಲಿಕಾರ್ಜುನಯ್ಯನ ನೆಚ್ಚಿನ ಗಿರಿಯ ಸುತ್ತಿ,ನೋಡುತ್ತ ಬಂದುಕದಳಿಯ ಬನವ ಕಂಡೆ ನಾನು.(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-126/ವಚನ ಸಂಖ್ಯೆ-360) ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆನ್ನಮಲ್ಲಿಕಾರ್ಜುನನ್ನು ಅರಸುತ್ತಾ ಕಲ್ಯಾಣದಿಂದ ಶ್ರೀಶೈಲಕ್ಕೆ ಹೊರಟ ಅಕ್ಕ ಮಹಾದೇವಿ ಗಿರಿಯನ್ನು ಸುತ್ತುತ್ತಾ ಹೊರಟಾಗ ಅಲ್ಲಿಯ ಪ್ರಕೃತಿ ಸೌಂದರ್ಯ ಕಂಡು ವಿಸ್ಮಯಳಾಗುತ್ತಾಳೆ. ಅಕ್ಕನ ಆತ್ಮಸಂಗಾತ ಚೆನ್ನಮಲ್ಲಿಕಾರ್ಜುನಯ್ಯನಿರುವ ಗಿರಿಯ ಒಂದೊಂದು ಗಿಡ ಮರ ಬಳ್ಳಿ ಎಲ್ಲವು ಅವಳಿಗೆ ಅಮೂಲ್ಯ. ಅವಳ ಪಾಲಿಗೆ ಅವು ಬೇಡಿದ್ದನ್ನು ನೀಡುವ ಕಲ್ಪತರು. ನಡೆದು…

2 Comments

ಜಾನಪದ ಲೋಕದಲ್ಲಿ ಬಸವನೆಂಬ ದೇವರು / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ಜನಪದರ ಶರಣ ಧರ್ಮದ ಹರಹು ವಿಶಾಲವಾದದ್ದು. ಅದನ್ನು ನಿರ್ದಿಷ್ಟ ಅರ್ಥದಲ್ಲಿ ಕಟ್ಟಿ ಹಾಕಲಾಗುವುದಿಲ್ಲ. ಹೀಗಾಗಿ ಮೌಖಿಕ ಜನಪದ ಸಾಹಿತ್ಯ ಮುಗ್ಧಶರಣರ ಸತ್ಯದ ಅನೇಕ ಮುಖಗಳನ್ನು ಅನಾವರಣಗೊಳಿಸುತ್ತದೆ. ಅನಕ್ಷರಸ್ಥರ ಆಡುಮಾತಿನ ಸರಳತೆ ಖಚಿತತೆಯನ್ನು ಶರಣಧರ್ಮದ ಪವಿತ್ರತೆಯನ್ನು ಸ್ಪಷ್ಟಪಡಿಸುತ್ತದೆ. ತಾವು ಕಂಡ ಜೀವನದ ಚಿಕ್ಕ ಚಿಕ್ಕ ಘಟನೆಯ ಅನುಭವಗಳನ್ನು ಜೀವದುಂಬಿ ದಾಖಲಿಸುವ ಅವರ ಜ್ಞಾನದ ತೀಕ್ಷ್ಣಣತೆಯೂ ಅನವರತ. ತಮ್ಮ ಎದೆಯಾಳದಲ್ಲಿ ನೈತಿಕ ಪ್ರೀತಿ ಬಿಂಬಿಸುತ್ತಾ ತಾಯಿ ಭಾವ ವ್ಯಕ್ತಪಡಿಸುವುದೂ ಒಂದು ರೋಮಾಂಚನ. ಪ್ರಕೃತಿಯ ಸತ್ಯವನ್ನೇ ದೇವರೆಂದು ತಿಳಿದ ಜನಪದರು ನಿಸರ್ಗದ ಮೂಲಕವೇ ಸಂಭಾಷಣೆಗೆ ತೊಡಗುತ್ತಾರೆ. ಏಕೆಂದರೆ ಅವರ ಒಡಲೊಳಗೆ ಶರಣಧರ್ಮದ…

3 Comments

ವಿಶ್ವಶಾಂತಿಗೆ ಶರಣರು ನೀಡಿದ ಶಾಂತಿ ಸೌಹಾರ್ದತೆಯ ಸಂದೇಶಗಳು / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಕರಿ ಘನ; ಅಂಕುಶ ಕಿರಿದೆನ್ನಬಹುದೆ? ಬಾರದಯ್ಯಾಗಿರಿ ಘನ; ವಜ್ರ ಕಿರಿದೆನ್ನಬಹುದೆ? ಬಾರದಯ್ಯಾತಮಂಧ ಘನ; ಜ್ಯೋತಿ ಕಿರಿದೆನ್ನಬಹುದೆ? ಬಾರದಯ್ಯಾಮರಹು ಘನ; ನಿಮ್ಮ ನೆನೆವ ಮನ ಕಿರಿದೆನ್ನಬಹುದೆ? ಬಾರದಯ್ಯಾಕೂಡಲಸಂಗಮದೇವಾ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-7/ವಚನ ಸಂಖ್ಯೆ-6) ಎಲ್ಲರಿಗೂ ವಿಶ್ವಗುರು ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು ಹಾಗೂ ಎಲ್ಲರಿಗೂ ಶರಣು ಶರಣಾರ್ಥಿಗಳು. ಸೌಹಾರ್ದತೆಯ ಬೀಜ ಬಿತ್ತಿ ಧರೆಯ ಮೇಲೆ ಸುಂದರವಾದ ಸಮ ಸಮಾಜವನ್ನು ಕಟ್ಟಬಯಸಿದ ಬಸವಾದಿ ಶಿವಶರಣರು ನಿತ್ಯ ಸ್ಮರಣಿಯರಾಗಿದ್ದಾರೆ. ಲೋಕದಂತೆ ಬಾರರು, ಲೋಕದಂತೆ ಇರರು,ಲೋಕದಂತೆ ಹೋಹರು, ನೋಡಯ್ಯಾ.ಪುಣ್ಯದಂತೆ ಬಪ್ಪರು, ಜ್ಞಾನದಂತೆ ಇಪ್ಪರು,ಮುಕ್ತಿಯಂತೆ ಹೋಹರು, ನೋಡಯ್ಯಾ.ಉರಿಲಿಂಗದೇವಾ, ನಿಮ್ಮ ಶರಣರುಉಪಮಾತೀತರಾಗಿ ಉಪಮಿಸಬಾರದು.(ಸಮಗ್ರ ವಚನ…

0 Comments

ಬಸವಣ್ಣನವರ ದೃಷ್ಟಿಯಲ್ಲಿ ದೇವರು / ಶ್ರೀಮತಿ. ಹಮೀದಾ ಬೇಗಂ ದೇಸಾಯಿ, ಸಂಕೇಶ್ವರ.

ಬಸವಣ್ಣನವರು ವಿಶ್ವದ ಮಹಾನ್‌ ಚಿಂತಕರ ಗುಣ ವಿಶೇಷಗಳನ್ನೆಲ್ಲ ತಮ್ಮ ವ್ಯಕ್ತಿತ್ವದಲ್ಲಿ ಸಮಷ್ಟಿಗೊಳಿಸಿಕೊಂಡ ಮಹಾನ್ ಚೇತನ. ಆರ್ಥರ್ ಮೈಲ್ಸ್ ಹೇಳುವಂತೆ: ಅವರು 'ಭಾರತದ ಪ್ರಪ್ರಥಮ ಸ್ವತಂತ್ರ ವಿಚಾರವಾದಿ'. ಬುದ್ಧನ ದಯೆ, ಮಹಾವೀರನ ಅಹಿಂಸೆ, ಕ್ರಿಸ್ತನ ಮಾನವ ಪ್ರೇಮ, ಗಾಂಧೀಜಿಯವರ ಸಾಮಾಜಿಕ ಚಿಂತನೆ, ಮಾರ್ಕ್ಸ್ ನ ಆರ್ಥಿಕ ನೀತಿ - ಈ ಎಲ್ಲವನ್ನೂ ಏಕೀಭವಿಸಿಕೊಂಡ ವಿಶೇಷತೆ ಬಸವಣ್ಣನವರದು. ಅವರ ಎರಡು ಆಶಯಗಳು ಸ್ವಾತಂತ್ರ್ಯ ಮತ್ತು ಸಮಾನತೆ ಅವರನ್ನು ಸಮಾಜ ಸುಧಾರಕ ಅನ್ನುವದಕ್ಕಿಂತ 'ಸಮಾಜ ಪರಿವರ್ತಕರು ' ಅನ್ನುವುದು ಸೂಕ್ತ. ಶರಣರ ತತ್ವಜ್ಞಾನ ಅವಿನಾಶವಾದ ಚೈತನ್ಯ ಮತ್ತು ನಾಶವಾಗದಂತಹ ವಸ್ತುವಿನ ಕುರಿತು…

0 Comments

ಚಿನ್ಮಯಜ್ಞಾನಿ ಚನ್ನಬಸವಣ್ಣನವರು./ಡಾ. ವಿಜಯಕುಮಾರ ಕಮ್ಮಾರ.

ಕಂಗಳ ನೋಟ ಹೃದಯದ ಜ್ಞಾನ,ಮನದೊಳಗೆ ಮಾತನಾಡುತಿರ್ದೆನಯ್ಯಾ!ಜೇನ ಮಳೆಗಳು ಕರೆದವು,ಅಮೃತದ ಬಿಂದುಗಳು ಸುರಿದವು.ಕೂಡಲಚೆನ್ನಸಂಗನೆಂಬರಸಸಾಗರದೊಳಗೋಲಾಡುತಿರ್ದೆನಯ್ಯಾ.(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-507/ವಚನ ಸಂಖ್ಯೆ-1111) 12 ನೇಯ ಶತಮಾನದಲ್ಲಿ ಅದ್ಭುತವಾದ ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ ಕ್ರಾಂತಿಯೊಂದು ನಡೆಯಿತು. ಈ ಕ್ರಾಂತಿಯನ್ನು ಹುಟ್ಟುಹಾಕಿದವರು ಬಸವಣ್ಣನವರು. ಬಸವಣ್ಣನವರು ನಡೆ-ನುಡಿ ಸಿದ್ಧಾಂತಕ್ಕೆ ಶಕ್ತಿಯಾದರೆ, ಅಲ್ಲಮಪ್ರಭುದೇವರು ಜ್ಞಾನ ವೈರಾಗ್ಯಕ್ಕೆ ಶಕ್ತಿಯಾದರು. ಬಸವಣ್ಣನವರ ಸೋದರಳಿಯ ಚನ್ನಬಸವಣ್ಣನವರು ಅರಿವಿನ ಜ್ಞಾನಕ್ಕೆ ಭಾಷ್ಯವಾಗಿ ಜೀವಿಸಿದರು. ಬಸವಣ್ಣ, ಚನ್ನಬಸವಣ್ಣ, ಅಲ್ಲಮ ಪ್ರಭುಗಳು ಶರಣ ಸಂಸ್ಕೃತಿಯ ಮೂರು ಮುಖ್ಯ ಅಂಗಗಳಾಗಿ ಕೈಂಕರ್ಯಗೊಳ್ಳುತ್ತಾರೆ. ಬಸವಣ್ಣನವರು ಸಾಮಾಜಿಕ ಪರಿವರ್ತನೆಗೆ ಒತ್ತುಕೊಟ್ಟರೆ, ಅಲ್ಲಮರು ಆಧ್ಯಾತ್ಮಿಕ ಚಿಂತನೆಗೆ ಒತ್ತುಕೊಟ್ಟರು. ಚನ್ನಬಸವಣ್ಣನವರು ಲಿಂಗಾಯತ…

0 Comments

ಪ್ರಾಣಲಿಂಗಿ ಸ್ಥಲ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಅಂತರಂಗದೊಳಗಿರ್ದ ನಿರವಯಲಿಂಗವನುಸಾವಯವ ಲಿಂಗವ ಮಾಡಿ,ಶ್ರೀಗುರುಸ್ವಾಮಿ ಕರಸ್ಥಲಕ್ಕೆ ತಂದುಕೊಟ್ಟನಾಗಿ,ಆ ಇಷ್ಟಲಿಂಗವೆ ಅಂತರಂಗವನಾವರಿಸಿಅಂತರಂಗದ ಕರಣಂಗಳೆ ಕಿರಣಂಗಳಾಗಿಬೆಳಗುವ ಚಿದಂಶವೆ ಪ್ರಾಣಲಿಂಗವು,ಆ ಮೂಲಚೈತನ್ಯವೆ ಭಾವಲಿಂಗವು.ಇದನರಿದು, ನೋಡುವ ನೋಟ ಭಾವಪರಿಪೂರ್ಣವಾಗಿತಾನು ತಾನಾದಲ್ಲದೆ, ಇದಿರಿಟ್ಟು ತೋರುವುದಿಲ್ಲವಾಗಿಅಖಂಡ ಪರಿಪೂರ್ಣವಪ್ಪ ನಿಜವು ತಾನೆ,ಕೂಡಲಸಂಗಮದೇವ.(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-280 / ವಚನ ಸಂಖ್ಯೆ-971) ಅಂತರಂಗದೊಳಗೆ ನೆಲೆಗೊಂಡ ನಿರಾಕಾರವಾದ ಲಿಂಗವನ್ನು ಸಾಕಾರ ರೂಪದ ಲಿಂಗವ ಮಾಡಿ ಶ್ರೀಗುರುಸ್ವಾಮಿ ಕರಸ್ಥಲದಲ್ಲಿ ಇಷ್ಟಲಿಂಗ ರೂಪದಲ್ಲಿ ತಂದು ಕೊಟ್ಟನು. ಸಾಧಕ ಅಥವಾ ಶರಣ ಗುರುಮುಖವಾಗಿ ಬಂದ ಆ ಇಷ್ಟಲಿಂಗವನ್ನು ಪೂಜಿಸುತ್ತಾ ಪೂಜಿಸುತ್ತಾ ಮತ್ತೆ ಆ ಲಿಂಗವನ್ನು ತನ್ನ ಅಂತರಂಗದೊಳಗೆ ನೆಲೆಗೊಳಿಸುತ್ತಾನೆ. ಹೀಗೆ…

0 Comments

ಪ್ರಾಮಾಣಿಕ ಸತ್ಯ ಸಾಧಕಿ ಶರಣೆ ಸತ್ಯಕ್ಯನವರು / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ವಚನ ಸಾಹಿತ್ಯದಲ್ಲಿ ಬಸವಯುಗದ ವಚನಕಾರ್ತಿಯರಂತೆ ಕೊಡುಗೆಯಿತ್ತವರನ್ನು ಬಹುಶಃ ಯಾವ ಶತಮಾನವೂ ಕಂಡಿರಲಿಕ್ಕಿಲ್ಲ. ಈ ಕಾಲಘಟ್ಟದಲ್ಲಿ ಹಲವಾರು ಶರಣೆಯರು ತಮ್ಮ ಮುಕ್ತ ಮನಸ್ಸಿನಿಂದ, ಸ್ವತಂತ್ರ ಆಲೋಚನೆಗಳಿಂದ ಎಲ್ಲರೂ ಬೆರಗಾಗುವಂತೆ ವಚನಗಳನ್ನು ರಚನೆ ಮಾಡಿದ್ದಾರೆ. ವಚನಯುಗವು ಮಹಿಳೆಯರ ಆಂತರ್ಯದಲ್ಲಿ ನವ ಜಾಗ್ರತ, ನವ ಸಾಕ್ಷರತೆಯ ಅರಿವನ್ನ ಮೂಡಿಸಿ ಸುಮಾರು 39 ಕ್ಕೂ ಹೆಚ್ಚು ಜನ ಶರಣೆಯರಿಗೆ ವಚನ ರಚನೆ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿತು. ಬಸವಣ್ಣನವರ ಈ ಕ್ರಾಂತಿಯು ಶ್ರೇಣಿಕೃತ ಸಮಾಜದಲ್ಲಿನ ದೀನ-ದಲಿತರನ್ನು ಮೇಲೆತ್ತುವದರ ಜೊತೆಗೆನ ಕಡೆಗಣಸಲ್ಪಟ್ಟಿದ್ದ ಮಹಿಳೆಯರನ್ನು ಉದ್ಧಾರ ಮಾಡಿ ಸಮಾಜದ ಮುಖ್ಯ ವಾಹಿನಿಗೆ ಕರೆ ತರುವದಾಗಿತ್ತು. ಮಹಿಳೆಯರು ಮನೆ…

0 Comments