“ಪರಮ ಪೂಜ್ಯ ಶ್ರೀತಿಂತಿಣಿ ಮೌನೇಶ್ವರರ ವಚನಗಳಲ್ಲಿ ಶರಣ ತತ್ವ”

ಪರಮ ಕಲ್ಯಾಣಿ ನಿನ್ನ ಅರುವಿನ ಒಡಲೊಳಗೆಪರಬ್ರಹ್ಮಮೂರ್ತಿ ಜನಿಸಿದ, ಅವರಿಬ್ಬರಶರೀರ ಬೇರೆ ಸವಿಯೊಂದೆ, ಬಸವಣ್ಣ.(ತಿಂತಿಣಿ ಮೌನೇಶ್ವರರ ವಚನಗಳು-ಡಾ. ವೀರೇಶ ಬಡಿಗೇರ/2016/ಪುಟ. 161/ವ.ಸಂ. 374) ನನಗೆ ಬಸವ ತತ್ವ ಮತ್ತು ವಚನ ಸಾಹಿತ್ಯದ ಶಿವನ ಪ್ರಕಾಶವನ್ನು ತೋರಿಸಿದ್ದ ಶ್ರೀ ಗದಗ ತೋಂಟದಾರ್ಯ ಮಠದ ಲಿಂ. ಡಾ. ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮತ್ತು ನನ್ನ ಎಲ್ಲ ವಿದೇಶ ಪ್ರವಾಸಗಳಿಗೂ ಬೆನ್ನು ತಟ್ಟಿ ಆಶೀರ್ವದಿಸಿದ್ದ ಸಿದ್ಧಗಂಗೆಯ ಸಿದ್ಧಪುರುಷ ಲಿಂ. ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪಾದಕಮಲಗಳನ್ನು ಮನ ಮಂದಿರದಲ್ಲಿ ಪ್ರತಿಷ್ಠಾಪಿಸುತ್ತಾ … … ವಚನ ಸಾಹಿತ್ಯ, ಸೃಜನಶೀಲ ಸಾಹಿತ್ಯ, ದಾಸ…

0 Comments

“ಸಮಷ್ಠೀ ಮಾನವ ಕುಲತಿಲಕ ಬಸವಣ್ಣ” / ಡಾ. ಕಮಲಾಬಾಯಿ ಎಸ್‌ ಕೆ, ಬೆಳಗಾವಿ.

ದೇವಲೋಕದವರಿಗೂ ಬಸವಣ್ಣನೆ ದೇವರುಮರ್ತ್ಯಲೋಕದವರಿಗೂ ಬಸವಣ್ಣನೆ ದೇವರುನಾಗಲೋಕದವರಿಗೂ ಬಸವಣ್ನನೆ ದೇವರು,ಮೇರುಗಿರಿ ಮಂದರಗಿರಿಮೊದಲಾದವೆಲ್ಲಕ್ಕೂ ಬಸವಣ್ಣನೆ ದೇವರು,ಚೆನ್ನಮಲ್ಲಿಕಾರ್ಜುನಯ್ಯಾ, ನಿಮಗೂ ಎನಗೂನಿಮ್ಮ ಶರಣರಿಗೂ ಬಸವಣ್ಣನೆ ದೇವರು. ಎಂಬ ಅಕ್ಕನ ವಚನವು ಬಸವಣ್ಣನವರ ಘನ ಮಹಿಮೆಯನ್ನು ಸಾರುತ್ತದೆ. ʼವಚನಗಳುʼ ಶಿವಶರಣರು ಪ್ರಯೋಗಿಸಿದ ಆತ್ಮಸಾಕ್ಷಿಯ ನುಡಿಗಡಣಗಳು. ೧೨ನೇ ಶತಮಾನದ ಶರಣರು ನಡಿದಂತೆ ನುಡಿದರು; ನುಡಿದಂತೆ ನಡೆದ ಇವರ ಬದುಕಿನ ರೀತಿ ಅನನ್ಯ. ಅಂತೆಯೇ ೯೦೦ ವರ್ಷಗಳಾದರೂ ಅವರ ಪ್ರತಿಜ್ಞೆ- ಆತ್ಮ ಸಾಕ್ಷಿಯ ನುಡಿಗಡಣಗಳು ನಮ್ಮ ನಾಡಿನ ಕೀರ್ತಿ ಕಲಶಗಳಾಗಿ ಲೋಕಮಾನ್ಯಗೊಂಡಿವೆ. ಇದೆಲ್ಲದಕ್ಕೂ ಮುಖ್ಯ ರೂವಾರಿ ನಮ್ಮ ಸಾಂಸ್ಕೃತಿಕ ನಾಯಕ, ಮಹಾನ್‌ ಮಾನವತಾವಾದಿ, ವಿಶ್ವಗುರು, ಜಗಜ್ಯೋತಿ, ಅಣ್ಣ…

0 Comments

“ಬಸವಣ್ಣನವರ ವಚನಗಳಲ್ಲಿ ವ್ಯಕ್ತಿತ್ವ ವಿಕಾಸ”/ಡಾ. ಅಶೋಕ ನರೋಡೆ

ವಚನ ಸಾಹಿತ್ಯವು ಕನ್ನಡ ನಾಡಿನ ಪ್ರಪ್ರಥಮ ಪ್ರಜಾಸಾಹಿತ್ಯ. 12 ನೇ ಶತಮಾನದಲ್ಲಿ ಜರುಗಿದ ಸಮಾಜೋ-ಧಾರ್ಮಿಕ ಆಂದೋಲನವು ಯುಗದ ಧ್ವನಿ ಆಯಿತು. ಸಮಾಜದ ಸರ್ವಸ್ಥರಗಳಲ್ಲಿ ಬದಲಾವಣೆಗೆ ಕಾರಣವಾಯಿತು. ಹೊಸ ಸಮಾಜವನ್ನು ಕಟ್ಟಬಯಸಿದ ಶಿವಶರಣರು, ತಮ್ಮ ಸಾದನೆಗಾಗಿ ವಚನಗಳನ್ನು ಮಾಧ್ಯಮವಾಗಿ ಬಳಸಿಕೊಂಡರು. ವಚನ ರಚನೆ ಅವರ ಪ್ರಾಥಮಿಕ ಉದ್ದೇಶವಾಗಿರದೆ ಸಮಾಜ ಸುಧಾರಣೆ ಅವರ ಪ್ರಾಶಸ್ತ್ಯವಾಗಿತ್ತು. ವಚನವೆಂಬುದು ಚಳುವಳಿ ಸಾಹಿತ್ಯ ಪ್ರಕಾರವಾಗಿದೆ. ಆತ್ಮ ಕಲ್ಯಾಣದೊಂದಿಗೆ ಸಮಾಜ ಕಲ್ಯಾಣವನ್ನು ಕಾರ್ಯಗೊಳಿಸಲು ಹೋರಾಡಿದ ಹುತಾತ್ಮರ ಸಾಹಸಗಾಥೆಯಾಗಿದೆ. ರಾಜಶಾಹಿ, ಪರೋಹಿತಶಾಹಿ, ಪುರುಷಶಾಹಿಗಳ ವಿರುದ್ಧ ಹೋರಾಡಿ ಸರ್ವ ಸಮಾನತೆ ಪ್ರತಿಪಾದಿಸುವ ಸಾಹಿತ್ಯ. ಸಮಾಜದ ಎಲ್ಲ ಸ್ಥರದ ಚಳುವಳಿಯಲ್ಲಿ…

0 Comments

“ಅಕ್ಷಯದ ಅಮರಜೀವಿ ಅನುಭಾವಿ ಬಸವಣ್ಣನವರು”/     ಡಾ.ದಾಕ್ಷಾಯಣಿ ಅಶೋಕ ಮಂಡಿ, ಮಹಾಲಿಂಗಪುರ.

ಸುಮಾರು 900 ವರ್ಷಗಳ ಹಿಂದೆ ಕರ್ನಾಟಕದಲ್ಲಿ ನಡೆದ ಶಿವಶರಣರ ಆಂದೋಲನವು ಕೇವಲ ಧಾರ್ಮಿಕ ಆಯಾಮಕಷ್ಟೇ ಸೀಮಿತವಾಗದೇ ಅಂದಿನ ಅನೇಕ ಪ್ರಚಲಿತ ಗಂಭೀರ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಿತು ಎನ್ನುವುದು ಗಮನಾರ್ಹ ಸಂಗತಿ. ಅಂದು ವಚನಕಾರರು ವರ್ಣ-ವರ್ಗ-ಲಿಂಗ ಬೇಧಗಳನ್ನು ಹೋಗಲಾಡಿಸಿ ದೀನ ದಲಿತರ ಬದುಕಿಗೆ ಆಶಾಕಿರಣವಾದರು. ನವ ಸಮಾಜವೊಂದನ್ನು ನಿರ್ಮಿಸಿದರು. ಆತ್ಮವಿಶ್ವಾಸ ಮೂಡಿಸುವ ದಿಸೆಯಲ್ಲಿ ಜನಮಾನಸದ ಸಂಗಾತಿಗಳಾಗಿ ಮಾರ್ಗದರ್ಶಕರಾದರು. ಅವರು ರಚಿಸಿದ ವಚನವಾಙ್ಮಯ ಕನ್ನಡ ಪರಂಪರೆಯ ಅಪೂರ್ವ ಸಾಹಿತಿಕ ಸಾಂಸ್ಕೃತಿಕ ಆಧ್ಯಾತ್ಮಿಕ ಸಂಪತ್ತು.12 ನೇ ಶತಮಾನದ ಸಾಹಿತ್ಯದಲ್ಲಿ ಒಂದು ಸುವರ್ಣ ಅಧ್ಯಾಯ. ಸಾಮಾಜಿಕ ಬದಲಾವಣೆಗೆ ಕಾರಣರಾದ ಮಹಾಚೇತನನ ನಮ್ಮಕ್ರಾಂತಿ ಪುರುಷ…

0 Comments

“ವೈರಾಗ್ಯವೆಂಬುದು ಹುಸಿ ಸಿದ್ಧಾಂತ”/ ಡಾ. ಬಸವರಾಜ ಸಾದರ, ಬೆಂಗಳೂರು.

"ವೈರಾಗ್ಯ" ವೆಂಬ, ಪೂರ್ತಿ ಸಾಧಿಸಲಾಗದ ಹುಸಿ ಸಿದ್ಧಾಂತವೊಂದು ಜಗತ್ತಿನಲ್ಲಿ ಬಹಳ ಹಿಂದಿನಿಂದಲೂ ಪ್ರಚಲಿತವಿದೆ. ತಮ್ಮ ನಾಮಧ್ಯೇಯಗಳೊಂದಿಗೆ ‘ವೀರ ವಿರಾಗಿ’ ಮತ್ತು ‘ವೈರಾಗ್ಯಮೂರ್ತಿ’ ಎಂಬ ವಿಶೇಷಣ ಹಚ್ಚಿಕೊಂಡವರೂ ಬೇಕಾದಷ್ಟು ಜನರಿದ್ದಾರೆ. ಆದರೆ, ಎಲ್ಲವನ್ನೂ ಸಂಪೂರ್ಣ ತ್ಯಾಗ ಮಾಡಿ, ತನಗೆ ಯಾವುದೂ, ಏನೂ ಬೇಡ ಎಂದು ಜೀವವಿರೋಧಿಗಳಾಗಿ ಬದುಕುವವರು ಬಹುಶಃ ಯಾರೂ ಇಲ್ಲ. ಹೀಗೆ ಹೇಳಿದರೆ ಕೆಲವರಿಗೆ ಅಚ್ಚರಿ, ನೋವು ಎರಡೂ ಆಗಬಹುದು, ಸಿಟ್ಟೂ ಬರಬಹುದು. ಅಷ್ಟೇ ಅಲ್ಲ, ಅಂಥ ಕೆಲವು ವಿರಾಗಿನಾಮಿಗಳ ಬಾಲಂಗೋಚಿಗಳು ಅವರ ಪರ ನಿಂತು ಉಗ್ರಗಾಮಿಗಳಂತೆ ಹೋರಾಡಲೂಬಹುದು. ಕೊನೆಯಪಕ್ಷ ದೇಶ, ಧರ್ಮ, ಜಾತಿ, ಮತ, ತನ್ನ…

2 Comments

ವಿಶ್ವ ನಾಯಕ ಬಸವಣ್ಣ ಜಾಗತಿಕ ದೃಷ್ಟಿಕೋನ – ಒಂದು ಅಧ್ಯಯನ

ಕಲ್ಯಾಣದಲ್ಲಿ ಕ್ರಾಂತಿಯಾಗಿ ಸುಮಾರು 900 ವರ್ಷಗಳು ಕಳೆದಿವೆ. ವಿಶ್ವಮಟ್ಟದಲ್ಲಿ ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಬಗ್ಗೆ ಇಂದಿಗೂ ತುಲನಾತ್ಮಕ ಅಧ್ಯಯನ ನಡೀತಾ ಇದೆ. ಅಂದರೆ ಬಸವಣ್ಣನವರ ನಾಯಕತ್ವ ಎಂಥ ಮಹತ್ವದ್ದಾಗಿತ್ತು, ಎಂಥ ಶ್ರೇಷ್ಠ ಮಟ್ಟದ್ದಾಗಿತ್ತು ಎನ್ನುವುದನ್ನು ತಿಳಿದುಕೊಳ್ಳುವುದು ಈ ಲೇಖನದ ಮೂಲ ಆಶಯ ಮತ್ತು ಅಧ್ಯಯನ.ಇದರಲ್ಲಿ ಎರಡು ರೀತಿಯ ವಿಚಾರ ಮಾಡೋಣ. ಒಂದು ಜಾಗತಿಕ ಮಟ್ಟದಲ್ಲಿ ತುಲನಾತ್ಮಕ ಚಿಂತನೆ ಅಂದರೆ ಪಕ್ಷಿನೋಟದಿಂದ ನೋಡುವುದು. ಇನ್ನೊಂದು ಹತ್ತಿರದಿಂದ ನೋಡಿದವರ ಮತ್ತು ಅವರು ಕಂಡಿರುವ ಸೂಕ್ಷ್ಮ ಒಳನೋಟದಿಂದ ಅಧ್ಯಯನ ನಡೆಸುವುದು. Microscopic Analysis ಅಂತೀವಲ್ಲ ಹಾಗೆ. ಬಸವಣ್ಣನವರೊಂದಿಗೆ ಇರುವ ಒಡನಾಟ ಮತ್ತು…

0 Comments

“ಅಕ್ಕನಾಗಮ್ಮನ ದೃಷ್ಟಿಯಲ್ಲಿ ಬಸವಣ್ಣ”/ಡಾ.ರಾಜೇಶ್ವರಿ ವೀ.ಶೀಲವಂತ

ಇಡೀ ಮನುಕುಲಕ್ಕೆ ಮಾನವೀಯತೆಯ ಮೌಲ್ಯಗಳ ಪಾಠವನ್ನು ನೀಡಿದ ಅಮೂಲ್ಯ ರತ್ನಗಳೇ ವಚನಗಳು. ಇಂತಹ ವಚನ ಸಾಹಿತ್ಯ ನಮಗೆಲ್ಲರಿಗೂ ಇಂದು ಲಭ್ಯವಾಗಿದೆ ಎಂದರೆ ಅದಕ್ಕೆ ಮೂಲ ಕಾರಣಿಭೂತರು ಅಕ್ಕನಾಗಮ್ಮ. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ನಡೆದ ಏಳೆಹೂಟಿ ಪ್ರಸಂಗದಿಂದ ಮನನೊಂದ ಮೃದುಹೃದಯಿ ಬಸವಣ್ಣ ಕಲ್ಯಾಣ ತೊರೆದು ಕೂಡಲಸಂಗಮಕ್ಕೆ ತೆರಳಿ ಅಲ್ಲಿಯೇ ಐಕ್ಯನಾಗುತ್ತಾನೆ. ಕಲ್ಯಾಣದಲ್ಲಿ ಬಿಜ್ಜಳನ ಸೈನ್ಯ ಶರಣರ ಹತ್ಯೆ ಮತ್ತು ವಚನಕಟ್ಟುಗಳ ಸುಡಲು ತೊಡಗುತ್ತದೆ. ಆಗ ಮಗನಂತೆ ಬೆಳಸಿದ ತಮ್ಮನನ್ನು ಕಳೆದುಕೊಂಡ ನೋವಿನಲ್ಲಿದ್ದರು ಕಲ್ಯಾಣದ ಮಹಾಮನೆಗೆ ತಾಯಿಯಂತಿದ್ದ ಅಕ್ಕನಾಗಮ್ಮ ಶರಣರ ಮತ್ತು ಶರಣರ ಮತ್ತು ವಚನಗಳ ರಕ್ಷಣೆಯ ಜವಾಬ್ದಾರಿ ಹೊರಡುತ್ತಾಳೆ.ಮಗ…

0 Comments

ವಚನ ಸಾಹಿತ್ಯದಲ್ಲಿ ದಯಾಪರತೆ ಚಿಂತನೆಗಳು / ಡಾ. ಪೂರ್ಣಿಮಾ ಎಸ್, ಬೆಂಗಳೂರು.

ಸಮಾಜದ ಏಳಿಗೆಗಾಗಿ ಪ್ರತಿಯೊಂದು ಜೀವ-ಜೀವಿಯ ಕಲ್ಯಾಣಕ್ಕಾಗಿ ಕಾಲಾನುಕ್ರಮದಲ್ಲಿ ಹಲವಾರು ಧರ್ಮಗಳು ಉದಯವಾದವು. ಹಾಗೆ ಉದಯವಾದ ಜಗತ್ತಿನ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಬಸವಾದಿ ಶರಣ ಧರ್ಮವೂ ಒಂದು. ದಯವಿಲ್ಲದ ಧರ್ಮವದೇವುದಯ್ಯಾ?ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ,ದಯವೇ ಧರ್ಮದ ಮೂಲವಯ್ಯ,ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ.(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-67 / ವಚನ ಸಂಖ್ಯೆ-247) ಎಂಬ ಬಸವಣನವರ ದಿವ್ಯ ಸಂದೇಶವನ್ನು ಹಾಗೂ ಜಗತ್ತಿನಲ್ಲಿರುವ ಯಾವುದೇ ಸೂಕ್ಷ್ಮಾತಿ ಸೂಕ್ಷ್ಮ ಜೀವಕ್ಕೂ ಕೂಡ ಹಿಂಸೆಯಾಗಬಾರದೆಂಬ ಉದ್ದೇಶದಿಂದ ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ಬಸವಣ್ಣನವರ ಧ್ಯೇಯೋದ್ದೇಶದ ಹಾದಿಯಲ್ಲಿ ಎಲ್ಲ ಶಿವಶರಣರು ಸಹ ದಯೆ ಕರುಣೆ ವಾತ್ಯಲ್ಯಗಳನ್ನು ಅಳವಡಿಸಿಕೊಂಡು ಅನುಸರಿಸಿರುವುದನ್ನು…

0 Comments

🌷ಅಕ್ಕಮಹಾದೇವಿ ಜಯಂತಿ🌷/ಪ್ರೊ. ಜಿ ಎ. ತಿಗಡಿ.,ಧಾರವಾಡ

ಇಂದು ವೈರಾಗನಿಧಿ, ವೀರ ವಿರಾಗಿನಿ, ಶರಣ ಸಂಕುಲದ ಧ್ರುವತಾರೆ, ಮಹಾನ್ ಶರಣೆ ಅಕ್ಕಮಹಾದೇವಿಯ ಜಯಂತಿ. ಆ ಮಹಾತಾಯಿಯ ಜೀವನ ಗಾಥೆಯನ್ನು ಒತ್ತಟ್ಟಿಗೆ ಇರಿಸಿ, ತನ್ನ ಜೀವನಾನುಭವದಿಂದ ಪಡೆದ ಉನ್ನತ ಮೌಲ್ಯಗಳನ್ನು ವಚನಗಳ ಮೂಲಕ ಹಾಡಿಕೊಂಡಿದ್ದಾರೆ. ಅವುಗಳಲ್ಲಿ ಒಂದೆರಡನ್ನಾದರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡುಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ. ಒಂದೆರಡು ಅಕ್ಕನ ವಚನಗಳನ್ನು ನೋಡೋಣ. ಅರ್ಥಸನ್ಯಾಸಿಯಾದಡೇನಯ್ಯಾ,ಆವಂಗದಿಂದ ಬಂದಡೂ ಕೊಳದಿರಬೇಕು.ರುಚಿಸನ್ಯಾಸಿಯಾದಡೇನಯ್ಯಾ,ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು.ಸ್ತ್ರೀ ಸನ್ಯಾಸಿಯಾದಡೇನಯ್ಯಾ,ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಟ್ಟಿಲ್ಲದಿರಬೇಕು.ದಿಗಂಬರಿಯಾದಡೇನಯ್ಯಾ,ಮನ ಬತ್ತಲೆ ಇರಬೇಕು.ಇಂತೀ ಚತುರ್ವಿಧದಹೊಲಬರಿಯದೆ ವೃಥಾ ಕೆಟ್ಟರುಕಾಣಾ ಚೆನ್ನಮಲ್ಲಿಕಾರ್ಜನ.ಸಂಪತ್ತನ್ನು ನಿರಾಕರಿಸಿ ಧನ ಕನಕಗಳ ವಿಷಯದಲ್ಲಿ ಸನ್ಯಾಸಿಯಾದರೆ ಸಾಲದು. ತನಗೆ ಯಾವುದೇ ರೂಪದಿಂದ ಬಂದರೂ ಧನವನ್ನು…

2 Comments

ವಚನ ಸಾಹಿತ್ಯದಲ್ಲಿ ಗುರು/ಡಾ. ಸರ್ವಮಂಗಳ ಸಕ್ರಿ,ರಾಯಚೂರು.

ವಚನ ಸಾಹಿತ್ಯ ಶರಣರ ಬದುಕಿನ ಮೌಲಿಕತೆಯನ್ನು ಬಿಂಬಿಸುವ ಆಂತರಿಕ ಅರಿವಿನ ಧರ್ಮವಾಗಿದೆ. ಪ್ರಗತಿಪರ ಚಿಂತನೆಯ ತತ್ವ ಸಿದ್ಧಾಂತಗಳನ್ನು ವೈಚಾರಿಕ ನೆಲೆಗಟ್ಟಿನ ಮೇಲೆ ಪರಿಶುದ್ಧಗೊಳಿಸುವ ಪರಿಯದು. ಯಾವುದೇ ಧರ್ಮವಾದರೂ ನೀತಿ ಸತ್ಯದ ನಿಷ್ಠೆಯಾಗಿರಬೇಕು. ಪ್ರಕೃತಿಯ ಶಕ್ತಿಯಲ್ಲಿ ಲೀನವಾಗಬೇಕು. ಇದು ಮಾನವ ಧರ್ಮ. ಇದಕ್ಕಿಂತ ದೊಡ್ಡ ಧರ್ಮ ಬೇರೆ ಯಾವುದು ಇಲ್ಲ. ಇದನ್ನು ಹಿಂದುಗಳು ಮುಕ್ತಿ ಎಂದರು. ಜೈನರು ನಿರ್ವಾಣವೆಂದರು. ಬೌದ್ಧರರು ವಿಮಕ್ತಿಗಾಗಿ ಅನ್ವೇಷಣೆ ಎಂದರು. ಸಿಖರು ಧ್ಯಾನದ ಮೂಲಕ ದೇವರಲ್ಲಿ ಒಂದಾಗುವುದೆಂದರು. ಎಲ್ಲಾ ಧರ್ಮದಲ್ಲಿ ಧರ್ಮದ ಮಹತ್ವವನ್ನು ಸಾರಿದ ಮಹಾನ್ ಗುರುಗಳಿದ್ದಾರೆ. ಎಲ್ಲಾ ಧರ್ಮಕ್ಕೂ ಅದರದ್ದೇ ಆದ ತಾತ್ವಿಕ…

0 Comments