ವಚನ ಪರಂಪರೆ | ಶ್ರೀಮತಿ. ಸುಶೀಲಾ ಸದಾಶಿವಯ್ಯ, ತುಮಕೂರು.

ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ಎಂಬ ಪ್ರಕಾರ ಹೆಚ್ಚು ರಚನೆಯಾಗಿ ಅಧಿಕೃತವಾಗಿ ಬೆಳಕಿಗೆ ಬಂದಿದ್ದು 12 ನೇ ಶತಮಾನದ ಶರಣ ಯುಗದಲ್ಲಿ. ಅದಕ್ಕೂ ಮೊದಲು ವಚನಗಳು ರಚನೆಯಾಗಿತ್ತು. ಜೇಡರ ದಾಸಿಮಯ್ಯ ಮೊದಲ ವಚನಕಾರರಾಗಿ ಕಂಡು ಬರುತ್ತಾರೆ. ಶರಣ ಯುಗದಲ್ಲಿ ರಚನೆಯಾದ ವಚನಗಳು ಸ್ವತಂತ್ರ ಭಾಷಾ ರಚನೆಯಿಂದ ಸರಳ, ಅಚ್ಚಗನ್ನಡ ಸೊಗಡಿನಿಂದ ಎಲ್ಲರ ಗಮನ ಸೆಳೆಯುವಂತೆ ಆಯಿತು. ಈ ಯುಗದಲ್ಲಿ ಒಂದು ಇಡೀ ಸಮೂಹವೇ ವಚನಗಳ ರಚನೆಯಲ್ಲಿ ಜಾತಿ, ವರ್ಗ, ವರ್ಣ, ಹೆಣ್ಣು, ಗಂಡು ಎಂಬ ಯಾವ ತಾರತಮ್ಯಕ್ಕೆ ಒಳಗಾಗದೆ ಸಾಮಾಜಿಕ ಕ್ರಾಂತಿಗೆ ವಚನವನ್ನು ಮಾಧ್ಯಮವಾಗಿಸಿಕೊಂಡು ಅಸಂಖ್ಯಾತ ವಚನಗಳನ್ನು…

0 Comments

ಜೇಡರ ದಾಸಿಮಯ್ಯ ಶರಣರ ವಚನ ನಿರ್ವಚನ | ಶ್ರೀಮತಿ. ವಿಜಯಲಕ್ಷ್ಮಿ ಎಂ. ಪಾಟೀಲ, ಕಲಬುರಗಿ.

ವಚನ:ತಾಯ ಗರ್ಭದ ಶಿಶು ತಾಯ ಕುರುಹನರಿಯದು.ಆ ತಾಯಿ ಶಿಶುವಿನ ಕುರುಹನೆಂದೂ ಅರಿಯಳು.ಮಾಯಾಮೋಹದಲ್ಲಿಪ್ಪ ಭಕ್ತರು ದೇವರನರಿಯರು.ಆ ದೇವರು ಆ ಭಕ್ತರನೆಂದೂ ಅರಿಯನು ಕಾಣಾ!ರಾಮನಾಥ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-282/ವಚನ ಸಂಖ್ಯೆ-801) ಆದ್ಯ ವಚನಕಾರರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವಚನಕಾರರು ಜೇಡರ ದಾಸಿಮಯ್ಯ ಶರಣರು. ಬಸವಣ್ಣನವರ ಹಿರಿಯ ಸಮಕಾಲೀನರಾದ ಈ ಶರಣರು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮುದನೂರು (ಬಿ) ಗ್ರಾಮದಲ್ಲಿ ಜನಿಸಿದವರು. ತಂದೆ ಕಾಮಯ್ಯ ಹಾಗೂ ತಾಯಿ ಶಂಕರಿ ಮತ್ತು ಮಡದಿ ವಚನಕಾರ್ತಿ ಶರಣೆ ದುಗ್ಗಳೆ. ಕುಲ ಕಾಯಕ ನೇಕಾರಿಕೆಯೇ ಈ ಶರಣರ ಕಾಯಕವಾಗಿತ್ತು. “ರಾಮನಾಥ” ಎನ್ನುವ ಅಂಕಿತನಾಮದಲ್ಲಿ ಇವರ…

0 Comments

ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ: ಸಂಕಷ್ಟದ ಬದುಕು ಹಾಗೂ ಅವರ ಸಾಧನೆಗಳು | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ರಾವ್‌ ಬಹಾದ್ದೂರ ಡಾ. ಫ. ಗು. ಹಳಕಟ್ಟಿಯವರ ಪೂರ್ವಜರು ಮೂಲತಃ ಸವದತ್ತಿ ತಾಲೂಕಿನ ಹಳಕಟ್ಟಿ ಗ್ರಾಮದವರು. ಧಾರವಾಡಕ್ಕೆ ವಲಸೆ ಬಂದ ನೇಕಾರ ಕುಟುಂಬ ಅವರದಾಗಿತ್ತು. ಅವರ ಪೂರ್ಣ ಹೆಸರು ಫಕೀರಪ್ಪ. ಡಾ. ಫ. ಗು. ಹಳಕಟ್ಟಿಯವರ ತಂದೆ ಸಾಹಿಗಳು ಮತ್ತು ಶಿಕ್ಷಕರಾಗಿದ್ದ ಶ್ರೀ ಗುರುಬಸಪ್ಪ ಹಳಕಟ್ಟಿ ಮತ್ತು ತಾಯಿ ಶ್ರೀಮತಿ ದಾನಾದೇವಿ. 02.07.1880 ರಂದು ಧಾರವಾಡದಲ್ಲಿ ಜನಿಸಿದ ಅವರು ತಮ್ಮ ಮೂರನೇಯ ವಯಸ್ಸಿನಲ್ಲಿದ್ದಾಗ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಧಾರವಾಡದಲ್ಲಿ ತಮ್ಮ ಪ್ರಾಥಮಿಕ ಹಾಗೂ 1896 ರಲ್ಲಿ ಮೆಟ್ರಿಕ್ ಪರೀಕ್ಷೆ ಪಾಸಾಗುತ್ತಾರೆ. ನಂತರ ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ತೆರಳಿ 1901…

0 Comments

“ಇಷ್ಟಲಿಂಗ ವೈಜ್ಞಾನಿಕ ಪರಿಕಲ್ಪನೆ” ಕಾರ್ಯಗಾರ | “ಬಯಲ ಬಿತ್ತಿಯಲ್ಲಿ ಶರಣರ ತತ್ವ ಶೋಧ” ಪುಸ್ತಕ ಲೋಕಾರ್ಪಣೆ | ವರದಿ: ಶ್ರೀ ಬಸವರಾಜ ಕುರುಗೋಡ, ರಾಯಚೂರು

ಮಹಾಶಿವರಾತ್ರಿ ಪ್ರಯುಕ್ತ ನಗರದ ಬಸವ ಕೇಂದ್ರದಲ್ಲಿ 13.02.2026 ರಂದು ಸಾಯಂಕಾಲ ಚಿಕ್ಕೋಡಿಯ ವೈದ್ಯ ಶರಣ ಸಾಹಿತ್ಯ ಆರಾಧಕ ಡಾ. ದಯಾನಂದ ನೂಲಿ ಅವರ ನೇತೃತ್ವದಲ್ಲಿ ಇಷ್ಟಲಿಂಗ ವೈಜ್ಞಾನಿಕ ಪರಿಕಲ್ಪನೆ ಕುರಿತು ಕಾರ್ಯಗಾರ ಜರುಗಿತು. ಮೊದಲಿಗೆ ಜಾಗತಿಕ ಲಿಂಗಾಯತ ಮಹಾಸಭೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ, ಸಾಹಿತಿ ಡಾ. ಸರ್ವಮಂಗಳ ಸಕ್ರಿ ಅವರು ಬರೆದ "ಬಯಲ ಬಿತ್ತಿಯಲ್ಲಿ ಶರಣರ ತತ್ವ ಶೋಧ" ಪುಸ್ತಕವನ್ನು, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣ ಶ್ರೀ. ಪಿ. ರುದ್ರಪ್ಪ ಕುರಕುಂದಿ ಸೇರಿ ಲೋಕಾರ್ಪಣೆ ಮಾಡಿದರು. ಜೊತೆಗೆ ಡಾ. ದಯಾನಂದ ನೂಲಿ ಅವರ  ಎರಡನೇ ಮುದ್ರಣದ…

0 Comments

ವಚನಗಳಲ್ಲಿ ವೀರಶೈವ ಮತ್ತು ಲಿಂಗಾಯತ (ಲಿಂಗವಂತ) ಪದಬಳಕೆ: ಒಂದು ಪರಾಮರ್ಶೆ | ಡಾ. ವೀರಣ್ಣ ರಾಜೂರ, ಧಾರವಾಡ.

ವಚನ ಸಾಹಿತ್ಯ ನನ್ನ ವಿಶೇಷ ಆಸಕ್ತಿಯ ಅಧ್ಯಯನ ಕ್ಷೇತ್ರ. ಸುಮಾರು 45 ವರ್ಷಗಳಿಂದ ಈ ಕ್ಷೇತ್ರದಲ್ಲಿ ನಿರಂತರ ಸಂಶೋಧನೆ, ಬರವಣಿಗೆ, ಗ್ರಂಥ ಪ್ರಕಟಣೆ ಕಾರ್ಯ ಮಾಡುತ್ತ ಬಂದಿದ್ದೇನೆ. ಇದುವರಗೆ ನಾನು 125 ಗ್ರಂಥಗಳನ್ನು ಪ್ರಕಟಿಸಿದ್ದು ಅವುಗಳಲ್ಲಿ 80 ಕ್ಕೂ ಹೆಚ್ಚು ಕೃತಿಗಳು ವಚನ ಸಾಹಿತ್ಯಕ್ಕೆ ಸಂಬಂಧಿಸಿವೆ. ಕರ್ನಾಟಕ ಸರ್ಕಾರ ಡಾ. ಎಂ. ಎಂ. ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಿಸಿದ ಸಮಗ್ರ ವಚನ ಸಾಹಿತ್ಯದ 15 ಸಂಪುಟಗಳಲ್ಲಿ ನಾನು 5 ಸಂಪುಟಗಳನ್ನು ಸಂಪಾದಿಸಿದ್ದೇನೆ. ಹೀಗಾಗಿ ವಚನ ಸಾಹಿತ್ಯದ ಹಸ್ತಪ್ರತಿಗಳ ನಿರಂತರ ಒಡನಾಟದಿಂದ ಅವುಗಳ ಸ್ವರೂಪ, ಪರಂಪರೆ, ಪರಿಷ್ಕರಣೆ,…

1 Comment

ಶರಣ ಘಟ್ಟಿವಾಳಯ್ಯನವರ ವಚನ ನಿರ್ವಚನ | ಶ್ರೀಮತಿ. ಶಶಿಕಲಾ. ಬಿ. ಕೆ. ಬೆಂಗಳೂರು.

ನೀರೊಳಗೆ ಕಿಚ್ಚಿರ್ದು ನೆಳಲ ಸುಟ್ಟಿತ್ತು!ನೆಳಲ ಸುಟ್ಟ ಬೂದಿಯನಿಟ್ಟು ಕೊಂಡಡೆ ಭೂಮಿ ಸತ್ತಿತ್ತು!ಆಕಾಶ ಹೊತ್ತಿತ್ತು! ದೇವನ ದೇವತ್ವ ಕೆಟ್ಟಿತ್ತು!ದೇವಿಯ ಒಕತನ ಮುರಿಯಿತ್ತು!ಕೇಳಬಾರದ ಠಾವಿನಲ್ಲಿ ಕಾಣಬಾರದ ಲಿಂಗ ಮೂರ್ತಿಗೊಂಡಿರೆನೋಡಬಾರದ ಪೂಜೆಯಾಯಿತ್ತು!ಚಿಕ್ಕಯ್ಯಪ್ರಿಯ ಸಿದ್ಧಲಿಂಗಾಪ್ರಭುದೇವ[ರ] ನಿಲವ ಕಂಡು ಇಲ್ಲ ಇಲ್ಲವೆನುತಿರ್ದೆನು.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-188/ವಚನ ಸಂಖ್ಯೆ-490) ಘಟ್ಟಿವಾಳಯ್ಯ ಶರಣರು ಅನುಭವ ಮಂಟಪದ ಅನುಭಾವಿಗಳು. ಧೀರೋದಾತ್ತ ನಡೆ ನುಡಿಯ ಗಟ್ಟಿಗ ಶರಣರಿವರು. ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆಯವರೆಂಬುದು ಸಂಶೋಧಕರ ಅಭಿಪ್ರಾಯ. ಅಲ್ಲಿರುವ ಮಧುಕೇಶ್ವರ ದೇವಾಲಯದಲ್ಲಿ ಮದ್ದಳೆ  ಬಾರಿಸುವ ಕಾಯಕ ಕೈಗೊಂಡವರು. ಸಂಸಾರಿಗಳಾಗಿದ್ದ ಈ ಶರಣರು ಸಂತೋಷದಿಂದಲೆ ಸಂಸಾರ ಮಾಡಿದವರಾಗಿದ್ದವರು. ಆದರೆ ಮುಂದೆ ಮಡದಿ ಮಾಡಿದ…

0 Comments

ಮುಲ್ಕಿ ಪರೀಕ್ಷೆ ಪಾಸಾಗದ ಹಾಲಯ್ಯ ಚಿತ್ರದುರ್ಗದ ಬೃಹನ್ಮಠ ಕೈ ತಪ್ಪಿದ್ದಕ್ಕೆ ವೀರಶೈವ ಮಹಾಸಭಾ ಸ್ಥಾಪನೆ | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ಬಸವಣ್ಣನೆ ತಾಯಿ, ಬಸವಣ್ಣನೆ ತಂದೆ,ಬಸವಣ್ಣನೆ ಪರಮ ಬಂಧುವೆನಗೆ,ವಸುಧೀಶ ಕಪಿಲಸಿದ್ದಮಲ್ಲಿಕಾರ್ಜುನಾನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯಾ.(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-244/ವಚನ ಸಂಖ್ಯೆ-798) ಸೊನ್ನಲಗಿಯ ಸಿದ್ದರಾಮೇಶ್ವರರ ಈ ವಚನದ ತಾತ್ಪರ್ಯದಂತೆ ಅಂದಿನ ಧಾರವಾಡ ಜಿಲ್ಲೆಯ ರಾಣೆಬೆಣ್ಣೂರು ತಾಲ್ಲೂಕಿನ ಜೋಯಿಸರ ಹರಳಹಳ್ಳಿಯಲ್ಲಿ ಬಸವಯ್ಯ ಮತ್ತು ನೀಲಮ್ಮ ಎಂಬ ದಂಪತಿಗಳಿದ್ದರು. ಅಪ್ಪಟ ಬಸವ ಭಕ್ತರು. ಬಸವಾದಿ ಪ್ರಮಥರ ಅನುಯಾಯಿಗಳು. ಶರಣ ಪರಂಪರೆ ಅವರ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು. ಅವರದು ಮೂಲತಃ ಕಡುಬಡತನದ ಕುಟುಂಬವಾದರೂ ಶರಣಧರ್ಮ ಆಚರಿಸುವಲ್ಲಿ ಬಡತನ ಇರಲಿಲ್ಲ. ಗ್ರಾಮದ ಮುಗ್ಧರಿಗೆ ಹಾಗೂ ಶಾಲಾ ಮಕ್ಕಳಿಗೆ ವಚನ ಪಾಠ ಕಲಿಸುವ ಕಾಯಕದಲ್ಲಿ ತೊಡಗಿದ್ದರು.…

0 Comments

ತಾಡೋಲೆಗಳಲ್ಲಿ ವಚನಗಳ ಸಂಗ್ರಹ | ಡಾ. ಜಿ ವಿ ಮಂಜುನಾಥ, ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ.

ದೈವದೊಡನೆ ಸಂಸ್ಕೃತ ಭಾಷೆಯಲ್ಲೇ ಸಂವಾದ ಸಾಧ್ಯ ಎನ್ನುವ ಕಾಲ ಘಟ್ಟದಲ್ಲಿ ದೈವದೊಡನೆ ಕನ್ನಡ ಭಾಷೆಯ ಮೂಲಕವೂ ಸಂವಾದ ಮಾಡಬಹುದು, ಅವನೊಂದಿಗೆ ಜನಸಾಮಾನ್ಯರ ಮಾತಿನಲ್ಲೇ ಸಂಭಾಷಣೆ ಮಾಡಬಹುದು ಎಂದು ಜಗತ್ತಿಗೆ ತೋರಿಸಿದವರು 12 ನೇ ಶತಮಾನದ ಶರಣರು.  ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯು ಮಾನವರನ್ನು ವರ್ಗ ವರ್ಗವಾಗಿ ಹಂಚಿತ್ತು. ಕೆಲವರು ಶುದ್ಧ, ಕೆಲವರು ಅಶುದ್ಧ ಎಂದು ಹೇಳಿದ್ದ ವ್ಯವಸ್ಥೆಗೆ ಶರಣರು ಧಿಕ್ಕಾರ ಹೇಳಿದರು. ಸಾಮಾಜಿಕ ಮೌಲ್ಯಗಳನ್ನೇ ಧಾರ್ಮಿಕ ಮೌಲ್ಯಗಳನ್ನಾಗಿ ರೂಪಾಂತರಿಸಿ ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರು, ಅಂದರೆ ಇಹಲೋಕದಲ್ಲಿ ನೀತಿಯುತವಾಗಿ, ದಯೆಯಿಂದ, ಕಾಯಕದಿಂದ, ಬಾಳಿ ಬದುಕಿದರೆ ಸ್ವರ್ಗ ಸ್ಥಿತಿ ಇಲ್ಲಿಯೇ…

0 Comments

ಗೋಲ್ಲಾಳೇಶ್ವರ ಶರಣರ ವಚನ ನಿರ್ವಚನ | ಶ್ರೀಮತಿ ರೇಣುಕಾ ಮೈಸಲಿಗೆ, ಕಲಬುರಗಿ.

ಕಲ್ಲು ಲಿಂಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು.ಮರ ದೇವರಲ್ಲ, ಉರಿಯಲ್ಲಿ ಬೆಂದಿತ್ತು.ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು.ಇಂತಿವನೆಲ್ಲವನರಿವ ಚಿತ್ತ ದೇವರಲ್ಲ.ಕರಣಂಗಳ ಮೊತ್ತದೊಳಗಾಗಿ ಸತ್ವಗೆಟ್ಟಿತ್ತು.ಇಂತಿವ ಕಳೆದುಳಿದ ವಸ್ತುವಿಪ್ಪೆಡೆ ಯಾವುದೆಂದಡೆ:ಕಂಡವರೊಳಗೆ ಕೈಕೊಂಡಾಡದೆ,ಕೊಂಡ ವ್ರತದಲ್ಲಿ ಮತ್ತೊಂದನೊಡಗೂಡಿ ಬೆರೆಯದೆ,ವಿಶ್ವಾಸ ಗ್ರಹಿಸಿ ನಿಂದಲ್ಲಿ ಆ ನಿಜಲಿಂಗವಲ್ಲದೆ,ಮತ್ತೊಂದು ಪೆರತನರಿಯದೆ ನಿಂದಾತನೆ ಸರ್ವಾಂಗಲಿಂಗಿ,ವೀರಬೀರೇಶ್ವರಲಿಂಗದೊಳಗಾದ ಶರಣ.(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-35/ವಚನ ಸಂಖ್ಯೆ-88) ಅನುಭವ ಮಂಟಪದ ಮೇರು ಅನುಭಾವಿ ಶರಣರು ಗೋಲ್ಲಾಳೇಶ್ವರರು. ಇವರ ಜನ್ಮ ಸ್ಥಳ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗೋಲಗೇರಿ ಎಂಬ ಗ್ರಾಮ. ತಂದೆ ಬಲ್ಲುಗ ತಾಯಿ ದುಗ್ಗಳೆ. ಇವರ ಕಾಯಕ ಕುರಿ ಕಾಯುವದು. "ವೀರ ಬೀರೇಶ್ವರ"…

0 Comments

ಮುಚ್ಚಿದ ಸ್ಥಾವರ; ತೆರೆದ ಜಂಗಮ | ಶ್ರೀ. ಎನ್. ಸಿ. ಶಿವಪ್ರಕಾಶ, ಮಸ್ಕತ್, ಒಮಾನ್.

ಆರಾಧನೆಯ ಮಾಡಿದಡೆ ಅಮೃತದ ಬೆಳಸು,ವಿರೋದ್ಥಿಸಿದಡೆ ವಿಷದ ಬೆಳಸು,ಇದು ಕಾರಣ, ಜಂಗಮಕ್ಕೆ ಅಂಜಲೇಬೇಕು.ಸ್ಥಾವರ ಜಂಗಮ ಒಂದೆಂದರಿದಡೆಕೂಡಲಸಂಗಮದೇವ ಶರಣಸನ್ನಿಹಿತ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-110/ವಚನ ಸಂಖ್ಯೆ-422) ನಾವು ನಾಲ್ಕೈದು ಜನ ಲಿಂಗವಂತರು ಪರವೂರಿನ ಪುರಾತನ ಶಿವಮಂದಿರದ ಶಿವಲಿಂಗದರ್ಶನಕೆಂದು ತೆರಳಿದ್ದೆವು. ದೇಗುಲ ಹೊಕ್ಕಾಗ ಗರ್ಭಗುಡಿ ಮುಚ್ಚಿತ್ತು. ಶಿವಲಿಂಗದರ್ಶನದ ಸಮಯ ಮೀರಿತ್ತು. ಮಸುಕಾದ ಮುಸುಕು ಹೊದಿಕೆ ಗರ್ಭಗುಡಿಯ ಗಾಜಿನ ಜೋಡಿ ಬಾಗಿಲುಗಳ ಮುಚ್ಚಿ ಶಿವಲಿಂಗವನು ಮರೆಸಿತ್ತು. ತಪ್ಪು ನಮ್ಮ ಗುಂಪಿನದೇ ಇತ್ತು. ಪರಶಿವನನು ಕಾಣಬೇಕೆಂದರೆ ಸಮಯದ ನಿಯಮವನು  ಅನುಸರಿಸಬೇಕಲ್ಲವೇ? ಹೊತ್ತು ಗೊತ್ತಿಲ್ಲದೆ ಬರುವ ಭಕ್ತರು ಭಕ್ತಿಯ ಮಾಡಲೆಳೆಸಿದರೆ  ಸ್ವೀಕರಿಸುವುದಕೆ ಗುಡಿಯ ಶಿವಲಿಂಗವೇನು ಕೊರಳಿಗೆ ಕಟ್ಟಿದ…

0 Comments