ಶರಣ ಕೀಲಾರದ ಭೀಮಣ್ಣನವರ ವಚನ-ನಿರ್ವಚನ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ವಚನ:ನಾನಾ ವರ್ಣದ ಗೋವುಗಳೆಲ್ಲವೂ ಕೂಡಿಒಂದೇ ಹೊಲದಲ್ಲಿ ಮೇದು,ಆರು ಕೆರೆಯ ನೀರ ಕುಡಿದು,ಒಂದೇ ದಾರಿಯಲ್ಲಿ ಬಂದು,ಮೂರು ಕೊಟ್ಟಿಗೆಯ ಗೊತ್ತಿಂಗೊಳಗಾದುವು.ಬಿಟ್ಟು ಕರೆಯಲಾಗಿ ಗೋವಿಂಗೆ ಹಲವು,ಹಾಲಿಗೆ ಏಕವರ್ಣ.ಹಾಲ ತಂದು ಭಾಜನದಲ್ಲಿ ನೀಡಿ ಕಾಸುವಲ್ಲಿಚಟ್ಟಿ ಹತ್ತದೆ, ಹಸುಕು ನಾರದೆ,ಕೌರು ಏಳದೆ, ನೀರ ರಸ ತಪ್ಪಿ ಮಧುರ ರಸ ತುಂಬಿಕಾಸಿ ಉಣಬಲ್ಲಡೆ ಆತನೆ ಭೋಗಿ.ಆತ ನಿರತಿಶಯಾನುಭಾವ ಶುದ್ಧಾತ್ಮನು,ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗ ತಾನೆ.(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-37/ವಚನ ಸಂಖ್ಯೆ-75)ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ:ಕೊಟ್ಟಿಗೆ: ದನಕರುಗಳನ್ನು ಕಟ್ಟುವ ಸ್ಥಳ.ಭಾಜನ: ಪಾತ್ರೆ.ಚಟ್ಟಿ: ಮಣ್ಣಿನ ಪಾತ್ರೆ, ಮಡಿಕೆ.ಕೌರು: ಸುಟ್ಟ ವಾಸನೆ, ಹೊಗೆ, ನಾತ.ನಿರತಿಶಯ: ಹೆಚ್ಚಳವಿಲ್ಲದೆ, ಅಸಾಧಾರಣವಲ್ಲದ. ಇದು ಶರಣ ಕೀಲಾರದ…

0 Comments

ನೇಗಿಲಯೋಗಿ ಶರಣ ಒಕ್ಕಲಿಗ ಮುದ್ದಣ್ಣನವರ ವಚನ – ನಿರ್ವಚನ | ಶ್ರೀಮತಿ ಜಗದೇವಿ ದಾಂಡ್ರಾ, ಕಲಬುರಗಿ

ವಚನ:ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು.ಕ್ರೀಗೆ ಅರಿವು ಬೇಕೆಂಬಲ್ಲಿ ಉಭಯವನರಿದು ಘಟಿಸಬೇಕು.ಏರಿ ಹಿಡಿವನ್ನಕ್ಕ ನೀರ ಹಿಡಿದಡೆ ಸುಖವಲ್ಲದೆ ಮೀರಿದರುಂಟೆ?ಕ್ರೀಯ ಬಿಡಲಿಲ್ಲ, ಅರಿವು ಮರೆಯಲಿಲ್ಲ.ಬೆಳೆಯ ಕೊಯಿದ ಮತ್ತೆ, ಹೊಲಕ್ಕೆ ಕಾವಲುಂಟೆ?ಫಲವ ಹೊತ್ತ ಪೈರಿನಂತೆ, ಪೈರಿನೊಳಕೊಂಡ ಫಲದಂತೆ,ಅರಿವು ಆಚರಣೆಯೆಲ್ಲ ನಿಂದು, ಆಚರಣೆ ಅರಿವಿನಲ್ಲಿ ಲೇಪನಾದ ಮತ್ತೆಕಾಮಭೀಮ ಜೀವಧನದೊಡೆಯನೆಂಬುದ ಭಾವಿಸಲಿಲ್ಲ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-767/ವಚನ ಸಂಖ್ಯೆ-1734)ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:ಕ್ರೀ: ಕ್ರಿಯೆ, ಕಾರ್ಯ, ಕೆಲಸ.ಘಟಿಸು: ಕೂಡು, ಒಂದಾಗು, ಮಿಳಿತವಾಗು ಒಕ್ಕಲಿಗ ಮುದ್ದಣ್ಣ ಶರಣರು ಅಂದಿನ ಕಲ್ಯಾಣದ ಅನುಭವ ಮಂಟಪದ ಅನುಭಾವಿಗಳು. ಮೂಲತಃ ಇವರು ವಿಜಯಪುರ ಜಿಲ್ಲೆಯ ಜೋಳದಹಾಳ…

0 Comments

ಗುರು ಅನಿಮಿಷ ಯೋಗಿ | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ಅನಿಮಿಷ ಎಂದರೆ ಕಣ್ಣು ಮಿಟುಕಿಸದವನು ಅಥವಾ ಅರೆನಿಮಿಷವೂ ಕಣ್ಣು ಮುಚ್ಚದವನು (ದೇವರು/ದೇವತೆ) ಎಂದರ್ಥ. ಇದು “ಅ” (ಇಲ್ಲ) ಮತ್ತು “ನಿಮಿಷ” (ಕಣ್ಣು ಮಿಟುಕಿಸುವುದು) ಎಂಬ ಪದಗಳಿಂದ ಬಂದಿದೆ. ಪ್ರಮುಖ ಅರ್ಥಗಳು ಮತ್ತು ಸಂದರ್ಭಗಳು: ದೇವತೆಗಳು: ಕಣ್ಣು ಮಿಟುಕಿಸದ ಕಾರಣ ದೇವತೆಗಳನ್ನು ಅನಿಮಿಷರೆಂದು ಕರೆಯಲಾಗುತ್ತದೆ. ಅರ್ಥ: ಅರೆನಿಮಿಷವೂ ಕಣ್ಣು ಮಿಟುಕಿಸದ, ದೃಷ್ಟಿ ಸ್ಥಿರವಾಗಿರುವ ಸ್ಥಿತಿ. ಅನಿಮಿಷ ಯೋಗಿ: ಅಲ್ಲಮಪ್ರಭುದೇವರಿಗೆ ದೀಕ್ಷೆ ನೀಡಿದ ಗುರುಗಳನ್ನು “ಅನಿಮಿಷ ಯೋಗಿ” ಎಂದು ತಿಳಿದು ಬರುತ್ತದೆ. ಈ ಪದವನ್ನು ಸಾಮಾನ್ಯವಾಗಿ ಜಾಗರೂಕತೆ, ದೈವಿಕತೆ ಅಥವಾ ದೀರ್ಘಕಾಲದ ತೀವ್ರವಾದ ದೃಷ್ಟಿಯನ್ನು ಸೂಚಿಸಲು ಬಳಸಲಾಗುತ್ತದೆ. ಸಿಂಗಿರಾಜನ "ಬಸವರಾಜ…

0 Comments

ಶರಣ ಅಮುಗಿದೇವಯ್ಯನವರ ವಚನದ ನಿರ್ವಚನ | ಶ್ರೀ. ಎನ್. ಸಿ. ಶಿವಪ್ರಕಾಶ್, ಮಸ್ಕತ್, ಒಮಾನ್.

ವಚನ:ಜ್ಞಾನದಲರಿದಡೇನಯ್ಯ, ಕ್ರೀಯನಾಚರಿಸದನ್ನಕ್ಕ?ನೆನೆದ ಮಾತ್ರದಲ್ಲಿ ಅಹುದೆ, ಕಾರ್ಯದಲಲ್ಲದೆ?ಕುರುಡ ಕಾಣ ಪಥವ, ಹೆಳವ ನಡೆಯಲರಿಯ.ಒಂದಿಲ್ಲದಿರ್ದಡೊಂದಾಗದು.ಜ್ಞಾನವಿಲ್ಲದಿರ್ದ ಕ್ರೀ ಜಡನು,ಕ್ರೀಯಿಲ್ಲದ ಜ್ಞಾನ ವಾಗ್ಜಾಲ ಭ್ರಾಂತು.ಇದು ಕಾರಣ, ಸಿದ್ಧಸೋಮನಾಥಲಿಂಗವಕೂಡುವ ಶರಣಂಗೆ ಎರಡೂ ಬೇಕು.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-130/ವಚನ ಸಂಖ್ಯೆ-331) ಶರಣ ಅಮುಗಿದೇವಯ್ಯನವರು ಮೂಲತಃ ಪಂಡರಾಪುರ ಸಮೀಪದ ಪುಳಜೆ ಗ್ರಾಮದವರಾಗಿದ್ದು ಅಲ್ಲಿ ನೇಯ್ಗೆ ಕಾಯಕ ಮಾಡಿಕೊಂಡವರಾಗಿದ್ದರು. ಇವರ ಮಡದಿ ಶರಣೆ ಅಮುಗೆ ರಾಯಮ್ಮನವರು ಇಷ್ಟಲಿಂಗಪೂಜಾ ನಿಷ್ಠೆಯುಳ್ಳವರಾಗಿದ್ದ ಅಮುಗಿ ದೇವಯ್ಯನವರಿಗೆ ಸೋಲಾಪೂರದ ಸಿದ್ಧರಾಮ ಶಿವಯೋಗಿಗಳು ಭತ್ತ ಕುಟ್ಟಲು ಹೇಳಿದಾಗ “ನಾವು ಭವಿಗಳ ಸೇವೆ ಮಾಡುವುದಿಲ್ಲ” ಎಂದು ಹೇಳಿ ಮಡದಿ ಅಮುಗಿ ರಾಯಮ್ಮನವರೊಂದಿಗೆ ಕಲ್ಯಾಣಕ್ಕೆ ಬಂದು ಅನುಭವಮಂಟಪದ…

0 Comments

ವಚನಗಳಲ್ಲಿ ವೈಚಾರಿಕ ಪ್ರಜ್ಞೆ | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಭಕ್ತಿ ಸುಭಾಷೆಯ ನುಡಿಯ ನುಡಿವೆ,ನುಡಿದಂತೆ ನಡೆವೆ,ನಡೆಯೊಳಗೆ ನುಡಿಯ ಪೂರೈಸುವೆ,ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ.ಒಂದು ಜವೆ ಕೊರತೆಯಾದಡೆಎನ್ನನದ್ದಿ ನೀನೆದ್ದು ಹೋಗು,ಕೂಡಲಸಂಗಮದೇವಾ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-115/ವಚನ ಸಂಖ್ಯೆ-441) ವಚನಗಳಲ್ಲಿ ವೈಚಾರಿಕ ಪ್ರಜ್ಞೆ ಎನ್ನುವ ಶೀರ್ಷಿಕೆಯಲ್ಲಿ 2 ಶಬ್ದಗಳಿವೆ ಒಂದು "ವಚನ" ಮತ್ತೊಂದು "ವೈಚಾರಿಕತೆ". ಇವೆರಡೂ ಶಬ್ದಗಳ ಅರ್ಥವನ್ನು ನೋಡಿಕೊಂಡು ಮುಂದೆ ಹೋಗೋಣ. ವಚನಗಳ ಅರ್ಥ ಮತ್ತು ಸ್ವರೂಪ:ಒಂದು ಭಾಷೆ, ಅದಕ್ಕೆ ಒಂದು ಲಿಪಿ, ಸಾಕ್ಷರತೆಯಿಂದ ಸಾಹಿತ್ಯ ರಚನೆ, ಸಾಹಿತ್ಯದೊಂದಿಗೆ ಅಕ್ಷರೀಕರಣ ಇವು ಸಮಾಜವನ್ನು ಅಥವಾ ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಸಮಷ್ಠಿಯನ್ನೂ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಪ್ರಭಾವಶಾಲಿಯಾಗಿ ಒಂದುಗೂಡಿಸುವ…

0 Comments

ವಚನಕಾರರ ದೃಷ್ಟಿಯಲ್ಲಿ ಆತ್ಮ ಸೌಂದರ್ಯ | ಡಾ. ಎಂ. ಮಕ್ತುಂಬಿ, ಭಾಲ್ಕಿ.

ಅಧ್ಯಾತ್ಮ ಸಾಧಕರಾಗಿದ್ದ ವಚನಕಾರರಿಗೆ ಆತ್ಮಸಾಕ್ಷಾತ್ಕಾರವು ಉಳಿದ ಸಾಧನೆಗಳಂತೆ ಮಹತ್ವದ್ದಾಗಿತ್ತು. ಅವರು ಪುರವನ್ನು ಗೆದ್ದಂತೆ; ಪರವನ್ನು ಗೆದ್ದವರು. ಮನೆಯನ್ನು ಗೆದ್ದಂತೆ ಮಾರೂ ಗೆದ್ದವರು; ಆತ್ಮ ಸಾಕ್ಷಾತ್ಕಾರ ಮಾಡಿಕೊಂಡವರಿಗೆ ಎಲ್ಲವೂ ಶಿವಮಯವಾಗಿಯೇ ಕಾಣುತ್ತದೆ; ಸಮಾನವಾಗಯೇ ಕಾಣುತ್ತದೆ. ಈ ದರ್ಶನದ ಹಿನ್ನೆಲೆಯಲ್ಲಿಯೇ ವಚನಕಾರರು ಎಲ್ಲ ತಾರತಮ್ಯಗಳನ್ನು ಮೀರಿ ನಿಂತರು‌. ತಾವು ಬದುಕಿದ್ದ ಯುಗಮಾನವನ್ನು ಎಲ್ಲ ಭೇದಗಳಿಂದ ಬಿಡುಗಡೆ ಮಾಡುವ ಚಳಿವಳಿಯೊಂದನ್ನು ರೂಪಿಸಿದರು‌. ಅದು ಆತ್ಮಸಾಕ್ಷಾತ್ಕಾರದ ಸಾಧನೆಯಾಗಿದ್ದಂತೆ; ಸಮಾಜದಲ್ಲಿದ್ದ ಪರಮಾತ್ಮನ ಶ್ರೇಯ ಸಾಧನೆಯ ಚಳುವಳಿಯೂ ಆಗಿದ್ದಿತು. ಅವರು ಆತ್ಮದ ಆಧಾರದ ಮೇಲೆ ಸಮಾನತೆಯನ್ನು ಸ್ಥಾಪಿಸಲು ಬಯಸಿದರು. ಎಲ್ಲ ಮನುಷ್ಯರಲ್ಲಿಯೂ ಆತ್ಮವಿದೆ. ಅದು ಒಂದೇ…

0 Comments

ಪಂಚಗಣಾಧೀಶರು | ಡಾ. ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು.

ಬಸವೋತ್ತರ ಕಾಲದಲ್ಲಿ ಪಂಚಗಣಾಧೀಶರು ಕೆರೆಕುಂಟೆ ಗೋಕಟ್ಟೆಗಳನ್ನು ಕಟ್ಟಿಸುವ ಮೂಲಕ ರೈತಾಪಿಗಳಿಗೆ, ಗೋವಳಿಗರಿಗೆ, ಶ್ರಮಜೀವಿಗಳಿಗೆ ಅನ್ನಾಹಾರ ಮತ್ತು ಅಧ್ಯಾತ್ಮ ಗುರುಬೋಧೆ ನೀಡಿದವರು. ಕೂಲಹಳ್ಳಿ ಮದ್ದಾನೇಶ. ಅರಸೀಕೆರೆಯ ಕೋಲಶಾಂತೇಶ. ಹರಪನಹಳ್ಳಿ ಕೆಂಪೇಶ(ಕಣಗಲಿ ಕೆಂಪೇಶ). ಕೊಟ್ಟೂರು ಗುರುಬಸವ (ಕೊಟ್ಟೂರೇಶ, ಕೊಟ್ರೇಶ). ನಾಯಕನಹಟ್ಟಿ ತಿಪ್ಪೇಸ್ವಾಮಿ (ಹಟ್ಟಿ ತಿಪ್ಪಯ್ಯ, ತಿಪ್ಪೇಶ). ಎಂಬ ಈ ಪಂಚಗಣಾಧೀಶರು ಹದಿನಾಲ್ಕು ಹಾಗೂ ಹದಿನೈದನೇ ಶತಮಾನದಲ್ಲಿ ಜನಪದರ ಆದರ್ಶ ಸಾಂಸ್ಕೃತಿಕ ನಾಯಕರಾಗಿ ಆಗಿಹೋಗಿದ್ದು, ಬಸವಾದಿ ಪ್ರಮಥರ ಸಾಂಸ್ಕೃತಿಕ ಆಶಯಗಳಿಗಾಗಿ ದುಡಿದು ಅಮರ ದೈವಗಳಾಗಿ ಜೀವಸಮಾಧಿಯಾಗಿದ್ದಾರೆ. ಹಲವಾರು ಜಾನಪದ ಕಾವ್ಯಗಳ ಹುಟ್ಟುವಳಿಗೂ ಇವರು ಮೆರೆದ ಪವಾಡ ಸಾಹಸಗಳು ವಸ್ತುವನ್ನು ಒದಗಿಸಿವೆ. ಕೂಲಹಳ್ಳಿ…

0 Comments

ಬಯಲು ಬಯಲನೆ ಬಿತ್ತಿದ ಶರಣರು | ಡಾ. ಸರ್ವಮಂಗಳ ಸಕ್ರಿ, ರಾಯಚೂರು.

ವಚನ ಧರ್ಮದ ಭಕ್ತಿ ಪರಂಪರೆಯಲ್ಲಿ ಬಯಲು ಎಂಬ ಶಬ್ದ ಶರಣರ ವಚನಗಳಲ್ಲಿ ಭಾವನಾತ್ಮಕ ವಿನ್ಯಾಸದ ಮೂಲಕ ಮುಖಾಮುಖಿಯಾಗುತ್ತದೆ. ಶರಣರಲ್ಲಿ ಬಯಲು ಅಗೋಚರ ಇಂದ್ರಿಯಾನಂದಕ್ಕೆ ಮುದ ನೀಡುವ ಶೂನ್ಯವದು. ನಿರಾಳ ಅಗೋಚರ ಶಕ್ತಿಯ ವಿಶಿಷ್ಟ ವಿಶ್ವವದು. ಬೀಜದಲ್ಲಿ ಬೀಜ ಅಡಗಿರುವಂತೆ ಬೆಚ್ಚನೆಯ ಭಾವಾನುಭೂತಿ. ನಿರಾಕಾರದ ಕತ್ತಲೆಯ ಜಗತ್ತು. ವಚನಕಾರರ ಬಯಲು ಎಂದರೆ ಸತ್ಯದ ಪಾವಿತ್ರ್ಯತೆಯನ್ನು ಮುಂದು ಮಾಡುವ ವಿಶೇಷ ರೂಪಕದ ಅವಲೋಕನಕ್ಕೆ ಒಳಪಡಿಸುವ ಮನಸ್ಥಿಯಾಗಿದೆ. ಬಯಲು ಎನ್ನುವ ಸಂವೇದನೆಯನ್ನು ವಚನ ಸಾಹಿತ್ಯದಲ್ಲಿ ಮಾತ್ರ ಕಾಣಲು ಸಾದ್ಯ. ಗ್ರಹಿಕೆಗೆ ಸಿಗದ ಶಬ್ದಗಳಲ್ಲಿ ಬಂಧಿಸಲು ಸಾಧ್ಯವಾಗದ ವಿಸ್ಮಯ ಆಧ್ಯಾತ್ಮಿಕ ಲೋಕ. ಶೂನ್ಯ…

0 Comments

ಮಹಾಪ್ರಸಾದಿ ಶರಣ ಬಿಬ್ಬಿಬಾಚಯ್ಯನವರು | ಶ್ರೀ. ಲೋಕೇಶ್ ಎನ್. ಮಾನ್ವಿ, ರಾಯಚೂರು ಜಿಲ್ಲೆ.

ರಾಯಚೂರು ಜಿಲ್ಲೆ ಬಿಸಿಲನಾಡು ಎಂದೇ ಹೆಸರುವಾಸಿ‌. ಅದರಷ್ಟೇ ಸಾಹಿತ್ಯದಿಂದ ನೆತ್ತಿಯನ್ನು ತಂಪಾಗಿಸಬಲ್ಲ ಶರಣರು, ದಾಸರು, ಸಂತರು, ಮಹಾಂತರ, ಸಾಹಿತಿಗಳ, ನಾಡು ರಾಯಚೂರು. ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಯಾದರೂ, ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಜಿಲ್ಲೆ ಇದಾಗಿದೆ. ಹನ್ನೆರಡನೇ ಶತಮಾನದ ಬಸವಾದಿ ಶರಣರ ಸಾಲಿನಲ್ಲಿ ಕಾಣಸಿಗುವ ಪ್ರಮುಖ ಶರಣರಾದ ಬಿಬ್ಬಿಬಾಚಯ್ಯನವರು ಕೂಡ ರಾಯಚೂರು ಜಿಲ್ಲೆಯ ಶರಣರೇ ಆಗಿದ್ದಾರೆ. ಶರಣ ಬಿಬ್ಬಿಬಾಚಯ್ಯನವರು ಮೂಲತಃ ರಾಯಚೂರು ಜಿಲ್ಲೆಯ ಗಬ್ಬೂರಿನವರಾಗಿದ್ದು, ಪೂರ್ವಾಶ್ರಮದಲ್ಲಿ ಬ್ರಾಹ್ಮಣರಾದರೂ ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಕಲ್ಯಾಣಕ್ಕೆ ತೆರಳಿ ಇಷ್ಟಲಿಂಗ ದೀಕ್ಷೆ ಪಡೆದು ಶರಣರಾದವರು, ಅನುಭವ ಮಂಟಪದಲ್ಲಿ ಸಕ್ರಿಯವಾಗಿ…

0 Comments