ಆದಯ್ಯ ಶರಣರ ವಚನ – ನಿರ್ವಚನ ವಚನ | ಶ್ರೀಮತಿ ಸುರೇಖಾ ಶೀರಪಾಟೀಲ, ಕಲಬುರಗಿ.
ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ,ಪ್ರಾಣದಲ್ಲಿ ನಿರ್ಭಯ, ಚಿತ್ತದಲಿ ನಿರಪೇಕ್ಷೆ.ವಿಷಯಗಳಲ್ಲಿ ಉದಾಸೀನ, ಭಾವದಲ್ಲಿ ದಿಗಂಬರ,ಜ್ಞಾನದಲ್ಲಿ ಪರಮಾನಂದವೆಡೆಗೊಂಡ ಬಳಿಕಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು ಬೇರಿಲ್ಲ ಕಾಣಿರೋ.(ಸಮಗ್ರ ವಚನ ಸಂಪುಟ-ಆರು/2021/ಪುಟ. ಸಂ-346/ವಚನ. ಸಂ. 954) ಶರಣ ಆದಯ್ಯನವರು 12 ನೇ ಶತಮಾನದ ಅನುಭವ ಮಂಟಪದ ಅನುಭಾವಿಗಳಲ್ಲಿ ಒಬ್ಬರಾಗಿದ್ದಾರೆ. ಇವರು ತಮ್ಮ ವಚನಗಳಲ್ಲಿ ಬಸವಣ್ಣ, ಮಡಿವಾಳ, ಅಲ್ಲಮಪ್ರಭುದೇವರು, ಮಡಿವಾಳ ಮಾಚಿದೇವರು ಮುಂತಾದ ಶರಣರನ್ನು ಸ್ಮರಿಸಿರುವದರಿಂದ ಇವರು ಬಸವಣ್ಣನವರ ಸಮಕಾಲೀನರು ಎನ್ನಬಹುದು. ಶರಣ ಆದಯ್ಯನವರು ಮೂಲತ ಸೌರಾಷ್ಟ್ರ ಅಂದರೆ ಗುಜರಾತಿನವರು. ತಂದೆ ಪಾರದತ್ತ, ತಾಯಿ ಪುಣ್ಯವತಿ. ಇವರ ಕಾಯಕ ಚಿನ್ನ ಮುತ್ತಿನ (ಹರದಿಕೆ) ವ್ಯಾಪಾರ. ಈ…






Total views : 62571