ವಚನ ಭಂಡಾರಿ ಶಾಂತರಸ ಶರಣರ ವಚನ ವಿಶ್ಲೇಷಣೆ | ಶ್ರೀಮತಿ, ಶಾಲಿನಿ ರುದ್ರಮುನಿ, ಹುಬ್ಬಳ್ಳಿ.
ಮಲವ ತೊಳೆಯಬಹುದಲ್ಲದೆ,ಅಮಲವ ತೊಳೆಯಬಹುದೇ ಅಯ್ಯಾ?ಮಾತನಾಡಬಹುದಲ್ಲದೆ, ಅಜಾತನನರಿಯಬಹುದೇ ಅಯ್ಯಾ?ಮಾಟವ ಮಾಡಬಹುದಲ್ಲದೆ,ಮರ್ಮದ ಕೂಟವ ಕೂಡಬಹುದೇ ಅಯ್ಯಾ?ರಣದ ಪಂಥವ ಹೇಳಬಹುದಲ್ಲದೆ,ಕಾದಬಹುದೇ ಅಯ್ಯಾ?ಮಾತುಗಳ ಕೂಡಿ ಓತು ಹೇಳುವವರೆಲ್ಲರು,ಉಮಾಕಾಂತನ ಬಲ್ಲರೆ?ಈ ಮಾತಿನ ಮಾಲೆಗೆ ಅಂಜಿ,ಅಲೇಖನಾದ ಶೂನ್ಯ ಕಲ್ಲಿನೊಳಗೆ ಅದೆ ಹೇಳಾ.(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-27/ವಚನ ಸಂಖ್ಯೆ-71) ವಚನ ಭಂಡಾರಿ ಶಾಂತರಸರು 12 ನೇ ಶತಮಾನದ ವಚನ ಚಳವಳಿಯ ಪ್ರಮುಖ ಶಿವಶರಣರು ಹಾಗೂ ಬಸವಣ್ಣನವರ ಸಮಕಾಲೀನರು. ಅನುಭವ ಮಂಟಪದಲ್ಲಿ ನಡೆದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಚರ್ಚೆಗಳನ್ನು ತಾಡೋಲೆಗಳಲ್ಲಿ ದಾಖಲಿಸಿ, ವಚನಗಳನ್ನು ಸಂಗ್ರಹಿಸಿ ಸಂರಕ್ಷಿಸಿದ ಕಾರಣ ಅವರಿಗೆ "ವಚನ ಭಂಡಾರಿ" ಎಂಬ ಗೌರವಾನ್ವಿತ ಬಿರುದು ಲಭಿಸಿದೆ.…




Total views : 67056